Homeಮುಖಪುಟದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

ದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

- Advertisement -
- Advertisement -

“Time never dies, circle is not round”
ಸಿನೆಮಾ ರಚಿಸುವಲ್ಲಿ ಜಕ್ಸ್ಟಾಪೊಜಿಷನ್ (juxtaposition) ಎನ್ನುವ ಪದಕ್ಕೆ ತುಂಬಾ ಮಹತ್ವವಿದೆ. ಒಂದು ದೃಶ್ಯದ ನಂತರ ಇನ್ನೊಂದು ದೃಶ್ಯ, ಒಂದು ಶಾಟ್ ನಂತರ ಇನ್ನೊಂದು ದೃಶ್ಯ; ಈ ದೃಶ್ಯಗಳ ಸರಣಿಗಳೇ ಒಂದು ಕಥೆಯನ್ನು ಹೇಳುತ್ತವೆ. ಮೊದಲು ಬರುವ ದೃಶ್ಯ/ಶಾಟ್ ಮುಂದೆ ಬರುವ ದೃಶ್ಯ/ಶಾಟ್‍ಗೆ ಯಾವ ರೀತಿಯ ಸಂಬಂಧ ಹೊಂದಿರಬೇಕು? ಮುಂದಿನ ಶಾಟ್ ಕಥೆಯನ್ನು ಮುಂದುವರೆಸಲೇಬೇಕೆ? ನೇರಾನೇರ ಸಂಬಂಧ ಹೊಂದಿರಲೇಬೇಕೆ? ಇಲ್ಲಿ ನಾನು ಐಸೆನ್‍ಸ್ಟೇನ್ ಅವರ ಮೊಂಟಾಜ್ ಥಿಯರಿಯ ಬಗ್ಗೆ ಹೇಳುತ್ತಿಲ್ಲ. (ಮೋಂಟಾಜ್ ಥಿಯರಿಯ ಬಗ್ಗೆ ಇನ್ನೊಂದು ಕಡೆ ಬರೆದಿದ್ದೇನೆ.) ಕಥೆಯೊಂದು ಹಿಂದಿನಿಂದ ಮುಂದಕ್ಕೆ ಹೋಗಲೇಬೇಕೆ?

ನಮ್ಮ ಜೀವನದ ಕಥೆಯನ್ನು ನೆನಪಿಸಿಕೊಳ್ಳುವ. ಮೊದಲು ಯಾವ ಚಿತ್ರಗಳು ಕಣ್ಣುಮುಂದೆ ಮೂಡುತ್ತವೆ? ತುಂಬಾ ಮಹತ್ವದ ಸಂಗತಿಗಳೇ? ಮಹತ್ವವಲ್ಲದ ಸಂಗತಿಗಳೇ? ನಮ್ಮ ಜೀವನದಲ್ಲಿ ಏನೂ ಪರಿಣಾಮ ಬೀರದ ಒಂದು ಯಾವುದೋ ಚಿತ್ರವು ಮೂಡಿಬರುವುದೇ? ಯಾವ ಶಬ್ದಗಳು ನೆನಪಿನಲ್ಲಿಳಿದಿವೆ? ಯಾವ ಪದಗಳು? ಯಾವೆಲ್ಲ ವಾಸನೆಗಳು? ಎಲ್ಲದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವಿದೆಯೇ? ಸಂಬಂಧ ಕಾಣಿಸಿಕೊಳ್ಳದಿದ್ದರೂ ಯಾವುದೋ ಒಂದು ಸಂಬಂಧ ಇರಲೇಬೇಕಲ್ಲವೇ? ಯಾವುದೀ ಸಂಬಂಧ? ಯಾವುದೀ ಕಥೆ?

ಇನ್ನು ನಮ್ಮ ಸಮಾಜದ ಕಥೆಯನ್ನು ಅದೇ ರೀತಿ ಪರಿಶೀಲಿಸುವ. ಹೇಗೆ ರೂಪುಗೊಂಡಿತು ಈ ಸಮಾಜ, ಈ ದೇಶ? ಯುದ್ಧದಿಂದಲೋ, ಶಾಂತಿಯಿಂದಲೋ? ಬಲಿದಾನದಿಂದಲೋ? ಸ್ವಾರ್ಥದಿಂದಲೋ? ಇಂದು ಆಗುವ ಘಟನೆಗೂ ಮೊನ್ನೆ ಆದ ಘಟನೆಗೂ ನೂರಾರು ವರ್ಷ ಹಿಂದೆ ಎಲ್ಲೋ ಆದ ಘಟನೆಗೂ ಯಾವುದೇ ಸಂಬಂಧವಿದೆಯೇ? ಆ ಘಟನೆ ಇಂದು ಆದ ಘಟನೆಗೆ ಕಾರಣವಾಗಿದೆಯೇ? ಏನೆಲ್ಲ ಮಾಡಿದರೂ ಇತಿಹಾಸ ಮರುಕಳಿಸುತ್ತೆ ಎನ್ನುತ್ತಾರೆ, ಅದು ನಿಜವೇ? ಸಮಾಜದ ಆಗುಹೋಗುಗಳಲ್ಲಿ ಒಬ್ಬ ವ್ಯಕ್ತಿ ಎಂತಹ ಪಾತ್ರ ವಹಿಸುತ್ತಾನೆ? ಅವಳು ಅಥವಾ ಅವಳು ಪರಿಣಾಮಕಾರಿಯಾದ ಪಾತ್ರ ವಹಿಸಬಲ್ಲಳೇ? ಒಂದು ಪಾತ್ರ ವಹಿಸಬಲ್ಲಳು ಎನ್ನುವ ನಂಬಿಕೆ ಹುಸಿಯಾದರೆ?

ಇನ್ನು ದ್ವೇಷ ಮತ್ತು ಅದರೊಂದಿಗೆ ಬರುವ ಕಲಹ, ಯುದ್ಧಗಳಿಗೆ ಅರ್ಥವಿದೆಯೇ? ಇತಿಹಾಸದಿಂದ ನಾವು ಏನನ್ನೂ ಕಲಿಯುವುದೇ ಇಲ್ಲವೇ?
1994 ರಲ್ಲಿ ಬಿಡುಗಡೆಯಾದ ಚಿತ್ರ ಬಿಫೋರ್ ದ ರೇನ್ ಎನ್ನುವ ಚಿತ್ರ ಈ ಎಲ್ಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಇಂತಹ ಅನೇಕ ಪ್ರಶ್ನೆಗಳು ಮೂಡುವುದಂತೂ ನಿಜ.

ಈ ಚಿತ್ರವನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ; ಪದಗಳು (words), ಚಿತ್ರಗಳು (pictures) ಮತ್ತು ಚಹರೆಗಳು (faces). ಕೆಲವು ಮಕ್ಕಳು ಆಟವಾಡುತ್ತ ಒಂದು ಆಮೆಯನ್ನು ಒಂದು ಕಡೆ ಇರಿಸಿ, ಅದರ ಸುತ್ತಲೂ ಕಟ್ಟಿಗೆಗಳನ್ನಿಟ್ಟು, ಆ ಕಟ್ಟಿಗೆಗಳಿಗೆ ಬೆಂಕಿ ಹಚ್ಚುತ್ತಾರೆ. ಆಗ ಒಬ್ಬ ಬಾಲಕ ತನ್ನಲ್ಲಿದ್ದು ಜೀವಂತ ಗುಂಡುಗಳನ್ನು ಆ ಬೆಂಕಿಯಲ್ಲಿ ಹಾಕುತ್ತಾನೆ. ಆಮೆ ಸುಟ್ಟುಕರಕಲಾಗುತ್ತದೆ. ಈ ಮಕ್ಕಳ ಆಟದೊಂದಿಗೆ ಎರಡು ವರ್ಷಗಳಿಂದ ಮೌನವ್ರತ ಪಾಲಿಸುತ್ತಿರುವ ಒಬ್ಬ ಯುವ ಪಾದ್ರಿಯ ಕಥೆ ತೋರಿಸಲಾಗುತ್ತದೆ. ಒಬ್ಬ ಹದಿವಯಸ್ಸಿನ ಬಾಲಕಿ ಈ ಪಾದ್ರಿಯ ಕೊಠಡಿಯನ್ನು ಸೇರಿಕೊಳ್ಳುತ್ತಾಳೆ. ಅವಳನ್ನು ಹುಡುಕುತ್ತ ಗನ್‍ಗಳನ್ನು ಹಿಡಿದುಕೊಂಡು ಕೆಲವರು ಬರುವರು. ಅವಳು ಯಾರು, ಅವಳನ್ನು ಇವರೇಕೆ ಹುಡುಕುತ್ತಿದ್ದಾರೆ ಎನ್ನುವುದು ನಂತರ ತಿಳಿಯುತ್ತೆ.

ಎರಡನೇ ಭಾಗದಲ್ಲಿ ಅಲೆಕ್ಸಾಂಡರ್ ಕಿರ್ಕೊವ್ ಎನ್ನುವ ಯುದ್ಧಗಳನ್ನು ಕವರ್ ಮಾಡುವ ಛಾಯಾಚಿತ್ರಗ್ರಾಹಕ ಮತ್ತು ಅವನ ಗೆಳತಿ ಆ್ಯನ್‍ನ ಕಥೆಗೆ ಬರುತ್ತೇವೆ. ಆ್ಯನ್ ತನ್ನ ಗಂಡನನ್ನು ಬಿಟ್ಟು ಅಲೆಕ್ಸಾಂಡರ್ ಜೊತೆಗೆ ಹೋಗಬೇಕೆನ್ನುವ ಬಯಕೆ, ಗೊಂದಲದಲ್ಲಿದ್ದಾಳೆ. ಅಲೆಕ್ಸಾಂಡರ್ ಯಾವುದೋ ದ್ವಂದ್ವದಲ್ಲಿದ್ದಾನೆ. ತನ್ನ ತವರು ದೇಶ, ಮತ್ತು ಇತರ ಕಡೆ ನಡೆಯುತ್ತಿರುವ ಯುದ್ಧ, ತನ್ನ ಕಾರಣದಿಂದಾದ ಸಾವಿನಿಂದ ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿದ್ದಾನೆ. ಈ ಕಥೆಯೂ ಕೊನೆಗೊಳ್ಳುವುದು ಒಂದು ದುರಂತದಿಂದಲೇ.

ಮೂರನೇ ಭಾಗದಲ್ಲಿ ಅಲೆಕ್ಸಾಂಡರ್‍ನೊಂದಿಗೆ ಮತ್ತೇ ಮೆಸಿಡೋನಿಯಾ ದೇಶದ ಅಂತಃಕಲಹಕ್ಕೆ ಮರಳುತ್ತೇವೆ. ಅಲೆಕ್ಸಾಂಡರ್ ತನ್ನ ಹುಟ್ಟೂರಿಗೆ ಯಾವ ಕಾರಣಕ್ಕೆ ಬಂದನು ಎನ್ನುವುದು ತಿಳಿಯುವುದಿಲ್ಲ. ಅಲ್ಲಿ ತನ್ನ ಸಂಬಂಧಿಕರು, ತನ್ನ ಸಂಬಂಧಿಕರೊಂದಿಗೆ ದ್ವೇಷ ಸಾಧಿಸುತ್ತಿರುವ ಇನ್ನೊಂದು ಧರ್ಮದವರು ಇರುವ ಇನ್ನೊಂದೂರಿನಲ್ಲಿ ತನ್ನ ಗೆಳತಿ ಮತ್ತು ಅವರ ಕುಟುಂಬದವರನ್ನು ಭೇಟಿ ಆಗಬೇಕಿದೆ. ಅಂತರ್ ಯುದ್ಧದಿಂದ ಬಳಲುತ್ತಿರುವ ಈ ಪ್ರದೇಶದಲ್ಲಿ ಪ್ರೀತಿ, ಕರಳು ಸಂಬಂಧಕ್ಕಿಂತ ದ್ವೇಷವೇ ಮೇಲುಗೈ ಸಾಧಿಸಿದೆ. ಅಲ್ಲಿ ಇವನು ಸಾಧಿಸುವುದಾದರೂ ಏನು? ಸಾಧಿಸುವುದಕ್ಕಾಗಿ ಬಂದಿದ್ದಾನೆಯೇ? ಮರಳಿ ಮೌನವ್ರತ ಆಚರಿಸುತ್ತಿದ್ದ ಪಾದ್ರಿಗೆ ಆ ಬಾಲಕಿ ಭೇಟಿಯಾಗುವುದಕ್ಕೂ ಮುಂಚಿನ ಕಥೆಯನ್ನು ಹೇಳಲಾಗುತ್ತದೆ. ಆಗ ಸರ್ಕಲ್ ಈಸ್ ನಾಟ್ ರೌಂಡ್ ಎನ್ನುವ ವಾಕ್ಯಕ್ಕೆ ಅರ್ಥಬರುತ್ತೆ.

ದ್ವೇಷಕ್ಕಾಗಿ ತಮ್ಮ ಪ್ರೀತಪಾತ್ರರನ್ನೇ ಕೊಲ್ಲುವ ಪ್ರವೃತ್ತಿಗೆ ಕಾರಣಗಳನ್ನು ಈ ಚಿತ್ರ ಹುಡುಕುವುದಿಲ್ಲ. ಹದಗೆಟ್ಟಿರುವ ಪರಿಸ್ಥಿತಿಯ ಭಾಗಶಃ ಚಿತ್ರಣವನ್ನು ಮಾತ್ರ ನೀಡಲಾಗುತ್ತದೆ. ಇಂತಹ ಒಂದು ಪರಿಸ್ಥಿತಿಯಲ್ಲೂ ಪ್ರೀತಿ ಹುಟ್ಟಬಲ್ಲದೇ, ಇರುವ ಪ್ರೀತಿ ಮುಂದುವರೆಯುವುದೇ? ಆಳವಾದ ಪ್ರೀತಿ, ಉತ್ಕಟವಾದ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಇರಬಹುದು, ಆದರೆ ಪ್ರೀತಿಸುವವರನ್ನೇ ಹತ್ತಿಕ್ಕಿದರೆ ಪ್ರೀತಿಯನ್ನೂ ಕೊಂದಂತೆಯೇ?

ಎಷ್ಟಾದರೂ ಇದೊಂದು ಸಿನೆಮಾ, ಒಂದು ಚಿತ್ರಕ್ಕೆ ಇರಬೇಕಾದ ಸ್ಟ್ರಕ್ಚರ್‍ ಅನ್ನು ಪಾಲಿಸದೇ, ಸ್ವಾತಂತ್ರವನ್ನು ಬಳಸಿ ಯುದ್ಧ ಮತ್ತು ಪ್ರೀತಿಯ ಕಥೆಯನ್ನು ಹೆಣೆದಿರುವ ಈ ಚಿತ್ರ ಒಂದು ಅದ್ಭುತ ಕಲಾಕೃತಿ. ಈ ಚಿತ್ರದ ಹಿನ್ನೆಲೆ ಸಂಗೀತ (ಅತ್ಯಂತ ಮಿತವಾಗಿ ಬಳಸಿದ), ಕೇಳಿಬರುವ ನೈಜ ಶಬ್ದಗಳು ಚಿತ್ರದ ಆಳವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದು ಮೆಸೆಡೋನಿಯಾದ ನಿರ್ದೇಶಕ ಮ್ಯೂಚೊ ಮಾಂಚೆಸ್ಕಿಯ (Milcho Manchevski) ಮೊದಲ ಚಿತ್ರ. ತನ್ನ ಮೊದಲ ಚಿತ್ರದಲ್ಲೇ ಕಥನಗಾರಿಕೆಯಲ್ಲಿ ಆಟವಾಡಿ ಯಶಸ್ವಿಯಾಗಿದ್ದಾರೆ. ಕಥೆಗಾರಿಕೆಯಲ್ಲಿ ಈ ಚಿತ್ರವನ್ನು ಅನೇಕರು ಅಮೆರಿಕ ಕ್ವೆಂಟಿನ್ ಟ್ಯಾರಂಟಿನೋ ಅವರ ಪಲ್ಪ್ ಫಿಕ್ಷನ್ ಜೊತೆಗೆ ಹೋಲಿಸಿದ್ದಾರೆ. ಆದರೆ ಈ ಇಬ್ಬರೂ ದಿಗ್ಗಜರೂ ಪರಸ್ಪರ ಪ್ರಭಾವಿತರಾಗಿಲ್ಲ ಎನ್ನುವುದು ಸ್ಪಷ್ಟ. ಹಾಲಿವುಡ್‍ನ ಟ್ಯಾರಂಟಿನೊ ಕಥೆಗಾರಿಕೆಯಲ್ಲಿ ಆಟವಾಡುವುದಕ್ಕಾಗಿಯೇ ಆಟವಾಡಿದ್ದಾರೆ ಎನ್ನುವುದಾದರೆ, ಬಿಫೋರ್ ದ ರೇನ್ ಚಿತ್ರದಲ್ಲಿ ಮ್ಯಾಂಚೆಸ್ಕಿ, ಕಥೆಯ ಆಳವನ್ನು, ಆಯಾ ಪಾತ್ರಗಳ ಪಯಣದ ಆಳವನ್ನೂ, ದೇಶಕಾಲದ ಪಯಣ, ಯುದ್ಧ ದ್ವೇಷದ ಪರಿಣಾಮಗಳನ್ನು ಗಟ್ಟಿಯಾಗಿ ಅನುಭವಿಸಲು ತಮ್ಮ ಕಥನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ, ಏನೆಲ್ಲ ಆದರೂ ಎಲ್ಲರೂ ಇಂದೋ ನಾಳೆಯೋ ಬರಲಿರುವ ಮಳೆಯನ್ನೇ ಎದುರುನೋಡುತ್ತಿದ್ದಾರೆ. ಹಿಂಸೆ, ಪ್ರೀತಿ, ಹುಟ್ಟು, ಸಾವುಗಳೆಲ್ಲವೂ ಮಳೆಯಲ್ಲಿ ತೊಯ್ದುಹೋಗುವುದರ ಮೂಲಕ ಚಿತ್ರ ಕೊನೆಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...

ಪ್ರತಿಭಟನಾನಿರತ ಮಹಿಳೆಯ ಕೆನ್ನೆಗೆ ಹೊಡೆದ ದೆಹಲಿ ಪೊಲೀಸ್ ಅಧಿಕಾರಿ ಸಂದೀಪ್ ಲಂಬಾ: ವಿಡಿಯೋ ವೈರಲ್ ನಂತರ ವ್ಯಾಪಕ ಟೀಕೆ

ದೆಹಲಿ: ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೂರ ದಮನ ಕಾರ್ಯಾಚರಣೆಯ ಭೀಕರ ಮುಖವಾಡವೊಂದು ಮತ್ತೆ ಜಗಜ್ಜಾಹೀರಾಗಿದೆ. ಸೋಮವಾರ ಸಂಸತ್ತಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ನೆಪದಲ್ಲಿ,...

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...