Homeರಾಜಕೀಯ‘ನನಗೆ ಗುಂಡಿಟ್ಟಿದ್ದಕ್ಕೆ ನಾನು ಆತನನ್ನು ಕ್ಷಮಿಸಬಲ್ಲೆ. ಆದರೆ.......'

‘ನನಗೆ ಗುಂಡಿಟ್ಟಿದ್ದಕ್ಕೆ ನಾನು ಆತನನ್ನು ಕ್ಷಮಿಸಬಲ್ಲೆ. ಆದರೆ…….’

- Advertisement -
- Advertisement -

 

‘ಪರಶುರಾಮ ವಾಘ್ಮರೆ ನನ್ನನ್ನು ಕೊಂದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಅತ್ಯಂತ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಬಯಸುತ್ತೇನೆ. ಕೊಂದದ್ದು ಆತನೋ ಅಲ್ಲವೋ ಎಂಬ ಸಾಕ್ಷಿಯನ್ನು ಕೊಲೆಗೀಡಾದ ವ್ಯಕ್ತಿ ಹೇಳಲಾಗದು. ಹಾಗಾಗಿ ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳಲೂಬಾರದು. ತನಿಖೆ ನಡೆದು ಅದರಲ್ಲಿ ಸತ್ಯ ಹೊರಗೆ ಬರಲಿ. ಆದರೆ, ನಾನು ಕೆಲವು ಮಾತುಗಳನ್ನು ಹೇಳಲೇಬೇಕು. ಇಂದು ಆತನ ತಾಯಿ ರೋದಿಸುತ್ತಿರುತ್ತಾರೆ. ಮಗ ಏನು ಮಾಡಿರಬಹುದು ಎಂಬ ಕುರಿತು ಆಕೆಗೆ ಮಾಹಿತಿಯೂ ಇಲ್ಲದಿರಬಹುದು. ಅಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ತಾಯಿಗೂ ಬರದಿರಲಿ ಎಂದು ನಾವು ಆಶಿಸಿದರೆ ಮಾತ್ರ ಇದು ಸರಿ ಹೋಗುವ ಖಾಯಿಲೆಯಲ್ಲ. ಬದಲಿಗೆ, ಸತ್ಯವನ್ನು ಸೂಕ್ತವಾದ ರೀತಿಯಲ್ಲಿ ವಿಶ್ಲೇಷಿಸಿ, ಕೊಲ್ಲುವ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಂಡು, ಆ ಜಾಗದಲ್ಲಿ ಪ್ರೀತಿಯನ್ನು ಬಿತ್ತಿದರೆ ಮಾತ್ರ ನಾವು ದೇಶವನ್ನು ಸುಭದ್ರವಾಗಿ ಕಟ್ಟಬಲ್ಲೆವು.

ಹಾಗಾಗಿಯೇ ನಾನೊಂದು ಮಾತನ್ನು ಇಲ್ಲಿ ಹೇಳಲೇಬೇಕು. ನನಗೆ ಗುಂಡಿಟ್ಟಿದ್ದಕ್ಕೆ ಆತನನ್ನು ನಾನು ಕ್ಷಮಿಸಬಲ್ಲೆ. ಆದರೆ, 2012ರ ಹೊಸ ವರ್ಷದ ಮುಂಜಾವಿನಲ್ಲಿ ಸಿಂಧಗಿಯಲ್ಲಿ ಈ 

ಪರಶುರಾಮ ವಾಘ್ಮರೆ ಮತ್ತು ಆತನ ಇತರ ಆರು ಸಂಗಡಿಗರು ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಅದನ್ನು ಇನ್ನೊಂದು ಕೋಮಿನ ವಿರುದ್ಧ ಬಳಸಲು ಯತ್ನಿಸಿದರಲ್ಲಾ… ಅದನ್ನು ನಾನು ಕ್ಷಮಿಸಲಾರೆ.’

ಗೌರಿ ಲಂಕೇಶರು ಪತ್ರಿಕೆಯ ಸಂಪಾದಕೀಯವನ್ನು ಬರೆಯಲು ಸಾಧ್ಯವಿದ್ದಿದ್ದರೆ ಈ ರೀತಿ ಬರೆಯುತ್ತಿದ್ದರು ಎನಿಸುತ್ತದೆ.

ನೆನಪಿರಲಿ, ಅಂದು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದದ್ದು ಬಿಜೆಪಿ ಸರ್ಕಾರ. ಹಾಗಾಗಿ ಸುಳ್ಳು ಕೇಸು ಹಾಕಿದರು ಎಂದು ಹೇಳಲಾಗದು. ತನಿಖೆ ನಡೆಸಿದ ಪೊಲೀಸರು ಘಟನೆ ನಡೆದ ಮೂರು ದಿನಗಳಲ್ಲಿ 6ಜನರನ್ನು ಬಂಧಿಸಿದರು ಮತ್ತು ನಂತರ ಇನ್ನೂ ಒಬ್ಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಇವರೆಲ್ಲರೂ ಪಾಕಿಸ್ತಾನದ ಧ್ವಜವನ್ನು ಹಾರಿಸಿದವರು ಮತ್ತು ಇವರು ಶ್ರೀರಾಮಸೇನೆಗೆ ಸೇರಿದವರು ಎಂದು ಹೇಳಿದರು. ಪಾಕಿಸ್ತಾನದ ಧ್ವಜ ಹಾರಿಸಿ, ಅದನ್ನು ಇನ್ನೊಂದು ಕೋಮಿನ ಜನರ ತಲೆಗೆ ಕಟ್ಟಲು ಇವರು ಯೋಜಿಸಿದ್ದರು. ಮರುದಿನವೇ ಸಿಂಧಗಿ ಬಂದ್‍ಗೆ ಕರೆಕೊಟ್ಟು ಪ್ರತಿಭಟನೆಯಲ್ಲಿ ಇವರೂ ಭಾಗಿಯಾಗಿದ್ದರು!

 

ಇದೇ ಅತ್ಯಂತ ಅಪಾಯಕಾರಿಯಾದ ಮತ್ತು ಆಘಾತಕಾರಿಯಾದ ಸಂಗತಿಯಾಗಿದೆ. ಆದರೆ ಇದಕ್ಕಿಂತ ಅಪಾಯಕಾರಿಯಾದ ಇನ್ನೊಂದು ಸಂಗತಿಯೂ ಇದೆ. ಅದೇನೆಂದರೆ, ಈ ಬಂಧನದ ನಂತರ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ ನಡೆಸಿ, ಈ ರೀತಿ ಬಾವುಟ ಹಾರಿಸಿದವರು ಶ್ರೀರಾಮಸೇನೆಯವರಲ್ಲ, ಆರೆಸ್ಸೆಸ್‍ನವರು ಎಂದು ಹೇಳಿದರು. ‘ಇವರು ಆರೆಸ್ಸೆಸ್‍ಗೆ ಸೇರಿದವರು ಎಂಬುದಕ್ಕೆ ನನ್ನಲ್ಲಿ ಪುರಾವೆ ಇದೆ. ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದವರು ಆರೆಸ್ಸೆಸ್ ಹೆಸರು ಬರದಂತೆ ನೋಡಿಕೊಳ್ಳಲು ಶ್ರೀರಾಮಸೇನೆಯ ತಲೆಗೆ ಕಟ್ಟುತ್ತಿದ್ದಾರೆ’ ಎಂಬುದು ಅವರ ಆರೋಪವಾಗಿತ್ತು. ಶ್ರೀರಾಮಸೇನೆಯ ಮುಖಂಡರು ಸದರಿ ಆರೋಪಿಗಳು ಆರೆಸ್ಸೆಸ್‍ನವರು ಎಂದು ತೋರಿಸುವ ಚಿತ್ರಗಳನ್ನೂ ಬಿಡುಗಡೆ ಮಾಡಿದರು!!

ನಿಮಗೆ ಇನ್ನೂ ಒಂದು ಮಾತು ಹೇಳಬೇಕು. ಇದಾದ ನಂತರ ಅಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ, ಇಂದು ಮುಖ್ಯಮಂತ್ರಿಗಳಾಗಿರುವ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಖಚಿತ ಮಾತುಗಳಲ್ಲಿ ಇದನ್ನು ಪುಷ್ಟೀಕರಿಸಿದ್ದರು. ಅದೇ ಸಂದರ್ಭದಲ್ಲಿ ನಿಧನರಾಗಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಬಂಗಾರಪ್ಪನವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದರು. ‘ಈ ಕೃತ್ಯವನ್ನು ಆರೆಸ್ಸೆಸ್‍ನವರು ಮಾಡಿರುವ ಕುರಿತು ನನಗೆ ಮಾಹಿತಿಯಿದೆ. ಕೋಮು ದಳ್ಳುರಿ ಹಚ್ಚಲು ಇಂತಹ ಕೀಳುಮಟ್ಟದ ಕೃತ್ಯಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್‍ನವರು ಇಳಿದಿರುವುದು ಖಂಡನೀಯ’ ಎಂದು ಹೇಳಿದ್ದರು.

ಸ್ನೇಹಿತರೇ,

ಗೌರಿಯವರನ್ನು ಗುಂಡಿಟ್ಟು ಕೊಂದದ್ದು – ಯಾವುದೇ ಮನುಷ್ಯರನ್ನು ಯಾರೇ ಕೊಲ್ಲುವುದು – ಅತ್ಯಂತ ಅಮಾನವೀಯವಾದ ಕೃತ್ಯ. ಅದನ್ನು ಖಂಡಿಸಬೇಕು; ನೆಲದ ಕಾನೂನಿನ ಪ್ರಕಾರ ತನಿಖೆ,ವಿಚಾರಣೆ ನಡೆದು ಶಿಕ್ಷೆಗೂ ಒಳಪಡಿಸಬೇಕು. ಆದರೆ, ತಾವೇ ಒಂದು ಕೃತ್ಯವನ್ನು ಮಾಡಿ, ಆ ಕೃತ್ಯವನ್ನು ಇನ್ನೊಂದು ಸಮುದಾಯದ ಮೇಲೆ ಹಾಕಿ, ಅವರನ್ನು ಬಂಧಿಸಿ ಎಂದು ಪ್ರತಿಭಟನೆ ಮಾಡಿ ದಳ್ಳುರಿ ಹಚ್ಚಲು ನೋಡುವುದಿದೆಯಲ್ಲಾ ಅದು ಕೊಲೆಗಿಂತ ಕಡಿಮೆಯಾದುದಲ್ಲ ಮತ್ತು ಇಂತಹದರ ಮೂಲಕ ಒಂದು ದೇಶವನ್ನೇ ದುರ್ಬಲಗೊಳಿಸುತ್ತಾ ಹೋಗುತ್ತಾರೆ. ಸುಳ್ಳಿನ ಮೇಲೆ ಸುಳ್ಳನ್ನು ಹೇಳಿ ಅದನ್ನೇ ಸತ್ಯವನ್ನಾಗಿಸುತ್ತಾ ಹೋಗುವುದರ ಕುರಿತು ದೇಶಪ್ರೇಮಿಗಳೆಲ್ಲರೂ ಅರಿತುಕೊಳ್ಳುವ ಸಂದರ್ಭ ಬಂದಿದೆ.

ಸ್ವತಃ ಆರೆಸ್ಸೆಸ್‍ನಲ್ಲಿದ್ದ, ಇಂದಿಗೂ ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ದ್ವೇಷದ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ‘ಪಾಕಿಸ್ತಾನದ ಧ್ವಜ ಹಾರಿಸಿದವರು ಆರೆಸ್ಸೆಸ್‍ನವರೇ. ನನ್ನ ಹತ್ತಿರ ಸಾಕ್ಷಿಗಳಿವೆ’ ಎಂದಾಗಲೂ ಬಿಜೆಪಿ ಸರ್ಕಾರವು ಆ ತನಿಖೆಯನ್ನು ನಡೆಸಲಿಲ್ಲವೇಕೆ? ಅಂದು ಇದೇ ಮಾತುಗಳನ್ನು ಆಡಿದ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಇಂದು ಮುಖ್ಯಮಂತ್ರಿಗಳಾಗಿದ್ದಾರೆ. ಇಂದಾದರೂ ಆ ತನಿಖೆ ನಡೆಯಬೇಕು ಎಂದು ನಾವು ಬಯಸುತ್ತೇವೆ.

ಪಾಕಿಸ್ತಾನದ ಧ್ವಜ ಹಾರಿಸಿದ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡವರು ಶ್ರೀರಾಮಸೇನೆಯವರಲ್ಲ, ಆರೆಸ್ಸೆಸ್‍ನವರು ಮತ್ತು ಇದನ್ನು ಬಿಜೆಪಿ ಮುಚ್ಚಿ ಹಾಕುತ್ತಿದೆ ಎಂದು ಬಹಿರಂಗವಾಗಿ, ಆರೆಸ್ಸೆಸ್‍ನ ಸಹವರ್ತಿಯೇ ಹೇಳಿದಾಗ ಬಿಜೆಪಿಯವರು ಮಾತೇ ಆಡಿರಲಿಲ್ಲ. ಇಂದೂ ಅವರು ಸುಮ್ಮನಿರಬಹುದು. ಆದರೆ ಪ್ರಜಾತಂತ್ರದಲ್ಲಿ, ಸತ್ಯದಲ್ಲಿ ನಂಬಿಕೆಯಿರುವ ಯಾರೂ ಸುಮ್ಮನಿರಬಾರದು. ಈ ಪ್ರಶ್ನೆಗಳನ್ನು ಕೇಳುತ್ತಿರಲೇಬೇಕು.

ಕೆಲವು ಘಟನೆಗಳು ನಡೆದಾಗ ಮಾಧ್ಯಮಗಳು ಅದರ ಒಳಹೊಕ್ಕು ನೋಡುವ ಕೆಲಸ ಮಾಡುತ್ತಾರೆ. ತುಂಬಾ ಒಳಹೊಕ್ಕು ನೋಡುವ ಅಗತ್ಯವಿಲ್ಲ. ಮೇಲೆ ಹೇಳಲಾದ ಸಂಗತಿಗಳು ಸೂರ್ಯಸ್ಪಷ್ಟವಾಗಿ ಕೇವಲ 6 ವರ್ಷಗಳ ಕೆಳಗೆ ಈ ರಾಜ್ಯದಲ್ಲೇ ನಡೆದಂಥವಾಗಿವೆ. ಇವು ಸುದ್ದಿಯಾಗದಿದ್ದರೆ, ಮಾಧ್ಯಮಗಳು ಏಕಪಕ್ಷೀಯವಾಗಿವೆ ಎಂದು ಅರ್ಥ. ಗೌರಿಯವರ ಕೊಲೆ ನಡೆದಾಗ ಕೆಲವು ಸಂಘಟನೆಗಳನ್ನೇ ಗುರಿ ಮಾಡಿ ಏಕೆ ಮಾತಾಡಲಾಗುತ್ತಿದೆ ಎಂದು ಕೆಲವರು ಕೇಳಿದ್ದರು. ಮೇಲಿನ ಎಲ್ಲಾ ಪುರಾವೆಗಳು ಆ ಸಂಘಟನೆಗಳತ್ತಲೇ ಬೆರಳು ತೋರಿಸುತ್ತಿವೆ. ಈಗಲಾದರೂ ಅವರೆಲ್ಲರೂ ಆ ಸಂಘಟನೆಗಳನ್ನು ಪ್ರಶ್ನಿಸುವ ಧೈರ್ಯ ಮತ್ತು ನಿಯತ್ತು ತೋರಿಸುತ್ತಾರೆಯೇ?

ಗೌರಿ ಲಂಕೇಶರು ಈ ನಾಡಿನ ಎಲ್ಲ ಬಗೆಯ ಜನಸಾಮಾನ್ಯರ ಸಂಕಷ್ಟಗಳಿಗೆ ಬರಹದಲ್ಲೂ, ಬದುಕಿನಲ್ಲೂ ಮಿಡಿದಂತಹ ದಿಟ್ಟ ಮಹಿಳೆ ಮತ್ತು ಪತ್ರಕರ್ತೆ. ಸತ್ಯವನ್ನು ನಿಷ್ಠುರವಾಗಿ ಬಯಲಿಗೆಳೆಯಬೇಕು ಮತ್ತು ಅದನ್ನು ಎಷ್ಟೇ ಬಲಿಷ್ಠರಾಗಿದ್ದರೂ ಅವರೆದುರು ಅದನ್ನು ಹೇಳಬೇಕು ಎಂಬುದು ಅವರ ಧ್ಯೇಯವಾಗಿತ್ತು. ಮೇಲೆ ಹೇಳಲಾಗಿರುವ ಸಂಘಟನೆಗಳು ಜನಸಾಮಾನ್ಯರ ಯಾವ ದಿನನಿತ್ಯದ ಸಮಸ್ಯೆಗೂ ಸ್ಪಂದಿಸದೇ, ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾಗ ಅದನ್ನೂ ಅವರು ಬಯಲಿಗೆಳೆಯುವ ಕೆಲಸ ಮಾಡಿದ್ದರು. ಇಂತಹವರನ್ನು ಬಿಟ್ಟರೆ ಮತ್ಯಾರೂ ಗೌರಿಯವರ ಶತ್ರುಗಳಾಗಿರಲಿಲ್ಲ. ಹಾಗಿದ್ದರೂ ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸವನ್ನು ಹಲವು ಶಕ್ತಿಗಳು ಪದೇ ಪದೇ ಮಾಡಿದ್ದರು. ಇದೀಗ ಪೊಲೀಸರು ತನಿಖೆಯನ್ನು ಮುಗಿಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಇರಿಸಿದ್ದಾರೆ. ಈಗ ಮಾಡಬೇಕಿರುವ ಕೆಲಸವೇನೆಂದರೆ, ಯಾರು ಈ ವ್ಯಕ್ತಿಗಳ ತಲೆಯಲ್ಲಿ ದ್ವೇಷವನ್ನೂ, ಕೊಲೆ ಮಾಡುವ ಮನಸ್ಥಿತಿಯನ್ನು ತುಂಬಿದರೋ ಅವರತ್ತ ಗಮನ ಹರಿಸಬೇಕು. ಅಂತಹ ಸಂಘಟನೆಗಳ ಮೇಲೂ ಕ್ರಮವಾಗಬೇಕು; ಪ್ರಮುಖ ವ್ಯಕ್ತಿಗಳ ಮೇಲೂ ಕ್ರಮವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಗೂಡಿ ಶ್ರಮಿಸೋಣ.

(ಅಂದು ಕನ್ನಡ ಪತ್ರಿಕೆಗಳು, ಇಂಗ್ಲಿಷ್ ಪತ್ರಿಕೆಗಳು, ವೆಬ್ ಪೋರ್ಟಲ್‍ಗಳು ಮಾತ್ರವಲ್ಲಾ ಬಿಬಿಸಿ ಸಹಾ ಇದನ್ನು ಸುದ್ದಿ ಮಾಡಿದ್ದವು. ಅವುಗಳ ಲಿಂಕ್‍ಗಳನ್ನು ಈ ಕೆಳಗೆ ಕೊಡಲಾಗಿದೆ. ಆಸಕ್ತರು ಓದಿಕೊಳ್ಳಬಹುದು.)

http://www.thehindu.com/news/national/pakistani-flag-hoisting-was-a-hindutva-plot-to-foment-strife-police-say/article2790960.ece

https://www.bbc.com/news/world-asia-india-16424473

http://www.daijiworld.com/news/newsDisplay.aspx?newsID=126614

https://timesofindia.indiatimes.com/city/hubballi/Accused-youths-dont-belong-to-Sene-Mutalik/articleshow/11394349.cms

https://www.indiatoday.in/mail-today/story/sri-ram-sene-activists-pakistani-flag-88639-2012-01-06

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...