Homeಮುಖಪುಟಇಸ್ರೇಲ್-ಹಮಾಸ್ ಸಂಘರ್ಷ: ಬಿಳಿ ರಂಜಕದ ಬಳಕೆಯ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

ಇಸ್ರೇಲ್-ಹಮಾಸ್ ಸಂಘರ್ಷ: ಬಿಳಿ ರಂಜಕದ ಬಳಕೆಯ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

- Advertisement -
- Advertisement -

ಕಳೆದ ಅಕ್ಟೋಬರ್‌ನಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಗುಂಪಿನ ಮೇಲೆ ನಡೆಸಿದ ದಾಳಿಯಲ್ಲಿ ಇಸ್ರೇಲ್‌ ಸೇನೆ ನಿಷೇಧಿತ ಬಿಳಿ ರಂಜಕವನ್ನು ಬಳಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಕನಿಷ್ಠ ಒಂಬತ್ತು ನಾಗರಿಕರು ಗಾಯಗೊಂಡಿದ್ದರು.

ಯುದ್ಧದ ವೇಳೆ ಬಿಳಿ ರಂಜಕ ಬಳಕೆಯ ಕುರಿತು ಯುಎಸ್‌ನ ಜೊ ಬೈಡೆನ್‌ ಆಡಳಿತ ಕಳವಳ ವ್ಯಕ್ತಪಡಿಸಿದೆ. ಆದರೆ, ಲೆಬನಾನ್‌ನಲ್ಲಿ ಬಿಳಿ ರಂಜಕದ ಕಾನೂನುಬಾಹಿರ ಬಳಕೆಯ ಆರೋಪವನ್ನು ಇಸ್ರೇಲ್ ತಿರಸ್ಕರಿಸಿದೆ.

ಹಾಗಾದರೆ, ಏನಿದು ಬಿಳಿ ರಂಜಕ, ಇದರ ಬಳಕೆಯ ಪರಿಣಾಮಗಳೇನು?, ಅಂತಾರಾಷ್ಟ್ರೀಯ ಮಾನವೀಯ ಕಾನೂನು ಬಿಳಿ ರಂಜಕದ ಬಳಕೆಯ ಕುರಿತು ಏನು ಹೇಳುತ್ತದೆ? ಇದರ ಬಳಕೆಯನ್ನು ಯುದ್ಧ ಅಪರಾಧವೆಂದು ಪರಿಗಣಿಸಬಹುದೇ? ಎಂದು ತಿಳಿಯೋಣ. 

ಏನಿದು ಬಿಳಿ ರಂಜಕ?

ಬಿಳಿ ರಂಜಕವು ರಾಸಾಯನಿಕ ಅಂಶಗಳಿಂದ ಕೂಡಿದ್ದು, ಇದು ಗಾಳಿಯ ಸಂಪರ್ಕಕ್ಕೆ ಬಂದರೆ ಉರಿಯುತ್ತದೆ. ಇದು ಸುಮಾರು 1,500 ಡಿಗ್ರಿ ಫ್ಯಾರನ್‌ಹೀಟ್ (815 ಸೆಲ್ಸಿಯಸ್) ನಲ್ಲಿ ಸುಡುತ್ತದೆ. ಇದು ಮನುಷ್ಯರ ಸಂಪರ್ಕಕ್ಕೆ ಬಂದರೆ ಗಂಭೀರವಾದ ಗಾಯ ಮತ್ತು ಸಾವಿಗೆ ಕಾರಣವಾಗುತ್ತದೆ.

ಬಿಳಿ ರಂಜಕವನ್ನು ಫೆನಿಯನ್ (ಐರಿಶ್ ರಾಷ್ಟ್ರೀಯತಾವಾದಿ) ಅಗ್ನಿಶಾಮಕವಾದಿಗಳು 19 ನೇ ಶತಮಾನದಲ್ಲಿ “ಫೆನಿಯನ್ ಫೈರ್” ಎಂದು ಕರೆಯಲ್ಪಡುವ ಸೂತ್ರೀಕರಣದಲ್ಲಿ ಬಳಸಿದರು. ರಂಜಕವು ಕಾರ್ಬನ್ ಡೈಸಲ್ಫೈಡ್‌ನ ದ್ರಾವಣದಲ್ಲಿರುತ್ತದೆ. ಕಾರ್ಬನ್ ಡೈಸಲ್ಫೈಡ್ ಆವಿಯಾದಾಗ ರಂಜಕವು ಜ್ವಾಲೆಯಾಗಿ ಸಿಡಿಯುತ್ತದೆ.

ಬಿಳಿ ರಂಜಕ ಮತ್ತು ನೇಪಾಮ್‌ನಂತಹ ಬೆಂಕಿ ಉಗುಳುವ ರಾಸಾಯನಿಕಗಳು ಮಾನವ ದೇಹದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಪ್ರಸಕ್ತ ಸಶಸ್ತ್ರ ಸಂಘರ್ಷಗಳಲ್ಲಿ ಅವುಗಳನ್ನು ಬಳಸುವ ಅತ್ಯಂತ ಕ್ರೂರ ಆಯುಧಗಳ ಬಳಕೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಪರಿಗಣಿಸಿದೆ.

ಮಾನವ ಹಕ್ಕುಗಳ ಸಂಶೋಧಕರೊಬ್ಬರು “ದಹನಕಾರಿ ಆಯುಧಗಳು ಜನರನ್ನು ಬೆಂಕಿಯಿಂದ ಸುಡುವ ಆಯುಧಗಳಾಗಿವೆ” ಎಂದಿದ್ದು, ಬಿಳಿ ರಂಜಕದಂತಹ ವಸ್ತುಗಳ ಬಳಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಯಾವಾಗ ಬಿಳಿ ರಂಜಕ ಬಳಸಬಹುದು?

ಯುದ್ದದ ಸಂದರ್ಭಗಳಲ್ಲಿ ನೆಲದ ಮೇಲೆ ಸೈನ್ಯದ ಚಲನೆಯನ್ನು ಮರೆಮಾಚಲು, ಯುದ್ಧಭೂಮಿಯನ್ನು ಬೆಳಗಿಸಲು ಅಥವಾ ಸಂಕೇತ ಸಾಧನವಾಗಿ, ಹೊಗೆ ಪರದೆಯಾಗಿ ಬಿಳಿ ರಂಜಕವನ್ನು ಬಳಸಬಹುದು. ಶತ್ರುಗಳನ್ನು ದಿಕ್ಕು ತಪ್ಪಿಸಲು ಮಾತ್ರ ಇದನ್ನು ಬಳಸಬಹುದು.

ಬೆಂಕಿ ಉಗುಳುವ ಆಯುಧಗಳಾದ ಮಾರ್ಟರ್ ಬಾಂಬ್‌, ರಾಕೆಟ್‌ ಮತ್ತು ಫಿರಂಗಿ ಮದ್ದುಗುಂಡುಗಳಲ್ಲಿ ಆಕ್ರಮಣಕಾರಿಯಾಗಿ ಕೂಡ ಇದನ್ನು ಬಳಸಬಹುದು. ಬಿಳಿ ರಂಜಕವನ್ನು ಒಂದನೇ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಶತ್ರು ಸೈನಿಕರು ಮತ್ತು ನಾಗರಿಕರನ್ನು ಸಮಾನವಾಗಿ ಗುರಿಯಾಗಿಸಿಕೊಂಡು ಅನೇಕರು ಬಳಸಿದ್ದರು.

ವಿಯೆಟ್ನಾಂ ಯುದ್ಧದಲ್ಲಿ, ಇರಾಕ್‌ನಲ್ಲಿ 2004 ರಲ್ಲಿ ಫಲ್ಲುಜಾಹ್ ಯುದ್ಧದ ಸಮಯದಲ್ಲಿ, ಸಿರಿಯಾ ಮತ್ತು ಇರಾಕ್ ಎರಡೂ ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ನೇಪಾಮ್ ಜೊತೆಗೆ ಬಿಳಿ ರಂಜಕವನ್ನು ಯುಎಸ್ ಬಳಸಿತ್ತು. ಉಕ್ರೇನ್ ಮತ್ತು ಸಿರಿಯಾ ಎರಡರಲ್ಲೂ ನಾಗರಿಕರು ಮತ್ತು ಹೋರಾಟಗಾರರ ವಿರುದ್ಧ ವಿವೇಚನೆಯಿಲ್ಲದೆ ಬಿಳಿ ರಂಜಕವನ್ನು ಬಳಸುತ್ತಿರುವ ಆರೋಪವನ್ನು ರಷ್ಯಾ ಹೊಂದಿದೆ.

2008-09 ರಲ್ಲಿ ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಬಿಳಿ ರಂಜಕವನ್ನು ಬಳಸಿದ್ದನ್ನು ಮಾನವ ಹಕ್ಕುಗಳ ಒಕ್ಕೂಟ ವಿರೋಧಿಸಿತ್ತು. ಇದು ಸಂಭಾವ್ಯ ಯುದ್ಧ ಅಪರಾಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿತ್ತು.

ಇದರಿಂದ ಎಚ್ಚೆತ್ತಗೊಂಡ ಇಸ್ರೇಲಿ ರಕ್ಷಣಾ ಪಡೆಗಳು 2013 ರಲ್ಲಿ ಯುದ್ಧಭೂಮಿಯಲ್ಲಿ ಬಿಳಿ ರಂಜಕವನ್ನು ಬಳಸುವುದನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿತ್ತು. ಬದಲಿಗೆ ಅನಿಲ ಆಧಾರಿತ ಹೊಗೆ ಚಿಪ್ಪುಗಳನ್ನು ಬಳುಸುವುದಾಗಿ ಹೇಳಿತ್ತು.

ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

ಬೆಂಕಿಯಿಡುವ ಆಯುಧಗಳು 1980ರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಒಪ್ಪಂದದ ಅಡಿಯಲ್ಲಿ ಬರುತ್ತವೆ. ಈ ಒಪ್ಪಂದವು ನಿರ್ದಿಷ್ಟವಾಗಿ ಅಪಾಯಕಾರಿ ಎಂದು ಪರಿಗಣಿಸಲಾದ ಕೆಲವು ಶಸ್ತ್ರಾಸ್ತ್ರಗಳ ಬಳಕೆಯನ್ನು ಸೀಮಿತಗೊಳಿಸುವ ಮೂಲಕ ನಾಗರಿಕರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಅಂತಾರಾಷ್ಟ್ರೀಯ ಕಾನೂನು ಮತ್ತು ಸಶಸ್ತ್ರ ಸಂಘರ್ಷದ ಕಾನೂನಿನಡಿಯಲ್ಲಿ ಬಿಳಿ ರಂಜಕವನ್ನು ರಕ್ಷಣಾತ್ಮಕವಾಗಿ ಹೊಗೆ ಪರದೆಯಂತೆ ಅಥವಾ ಯುದ್ಧಭೂಮಿಯ ಪ್ರಕಾಶವಾಗಿ ಬಳಸುವುದು ಅಪರಾಧವಲ್ಲ.

ನಾಗರಿಕರ ವಿರುದ್ಧ ನೇರವಾಗಿ ಬೆಂಕಿಯಿಡುವ ಆಯುಧಗಳ ಉದ್ದೇಶಿತ ಬಳಕೆ ಕಾನೂನುಬಾಹಿರವಾಗಿದೆ. ಇದನ್ನು ಯುದ್ಧ ಅಪರಾಧವೆಂದು ಪರಿಗಣಿಸಬಹುದು. ನಾಗರಿಕ ಪ್ರದೇಶದಲ್ಲಿರುವ ಮಿಲಿಟರಿಯನ್ನು ಗುರಿಯಾಗಿಸಿ ಬೆಂಕಿಯಿಡುವ ಆಯುಧಗಳ (ವಿಮಾನದಿಂದ ಬೀಳಿಸಿದ ಬಿಳಿ ರಂಜಕ) ಬಳಕೆಯನ್ನು ಸಹ ನಿಷೇಧಿಸಲಾಗಿದೆ.

ಹಾಗಾಗಿ, ಬಿಳಿ ರಂಜಕದ ಬಳಕೆ ಮಾಡದೆ, ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಹಮಾಸ್ ಮತ್ತು ಹಿಜ್ಬುಲ್ಲಾವನ್ನು ಇಸ್ರೇಲ್ ಗುರಿಯಾಗಿಸಬಹುದು.

ಇಸ್ರೇಲ್ ಮೇಲಿನ ಗಂಭೀರ ಅರೋಪವೇನು?

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್, ಅಕ್ಟೋಬರ್‌ನಲ್ಲಿ ಲೆಬನಾನಿನ ಪಟ್ಟಣವಾದ ಧೀರಾ ಮೇಲೆ ಇಸ್ರೇಲ್ ಬಿಳಿ ರಂಜಕವನ್ನು ಪ್ರಯೋಗಿಸಿದೆ ಎಂದು ಸೂಚಿಸುವ ಪುರಾವೆಗಳನ್ನು ಸಂಗ್ರಹಿಸಿದೆ. ಧೀರಾ ಪಟ್ಟಣದ ನಾಗರಿಕರ ಮೇಲೆ ಇಸ್ರೇಲ್ ಕಾನೂನು ಬಾಹಿರವಾಗಿ ಬಿಳಿರಂಜಕ ಬಳಸಿದೆ ಎಂದು ವಾಷಿಂಗ್ಟನ್ ಪೋಸ್ಟ್‌ಗೆ ಆಮ್ನೆಸ್ಟಿ ತಿಳಿಸಿದೆ.

ಆಮ್ನೆಸ್ಟಿ ಆರೋಪದಂತೆ ಇಸ್ರೇಲ್ ಲೆಬನಾನ್ ಪಟ್ಟಣದ ಮೇಲೆ ಬಿಳಿ ರಂಜಕ ಬಳಸಿದೆಯಾ? ಬಳಿಸಿದ್ದರೆ ಅಂತಾರಾಷ್ಟ್ರೀಯ ಕಾನೂನನ್ನು ಅನುಸಿರಿಸಿದೆಯಾ? ಎಂಬುವುದು ನಿಖರವಾಗಿ ತಿಳಿಯಲು ಸೂಕ್ತ ತನಿಖೆಯ ಅಗತ್ಯವಿದೆ.

ಇಸ್ರೇಲ್ ಒಂದು ವೇಳೆ ನಾಗರಿಕರ ಮೇಲೆ ಬಿಳಿ ರಂಜಕ ಪ್ರಯೋಗಿಸಿದ್ದರೆ, ಅದು 1949 ರ ಜಿನೀವಾ ಒಪ್ಪಂದ ಅಡಿಯಲ್ಲಿ ಯುದ್ದಪರಾಧವಾಗಿದೆ. ಈ ಕುರಿತು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತನಿಖೆ ನಡೆಸಬೇಕಿದೆ. ಆದರೆ, ಇದು ಅಸಾಧ್ಯದ ಮಾತಾಗಿದೆ. ಏಕೆಂದರೆ. ಇಸ್ರೇಲ್ ಅಂತಾರಾಷ್ಟ್ರೀಯ ಕ್ರಿಮಿನಿನಲ್ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ. ಹಮಾಸ್ ಮತ್ತು ಹಿಜ್ಬುಲ್ಲಾ ರಾಜ್ಯೇತರ ಸಂಘಟನೆಗಳಾಗಿವೆ.

ಇದನ್ನೂ ಓದಿ: ಗಾಝಾದಲ್ಲಿ ಕದನ ವಿರಾಮ: ವಿಶ್ವಸಂಸ್ಥೆ ನಿರ್ಣಯ ಬೆಂಬಲಿಸಿದ ಭಾರತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...