Homeಮುಖಪುಟಇಸ್ರೇಲ್-ಹಮಾಸ್ ಸಂಘರ್ಷ: ಬಿಳಿ ರಂಜಕದ ಬಳಕೆಯ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

ಇಸ್ರೇಲ್-ಹಮಾಸ್ ಸಂಘರ್ಷ: ಬಿಳಿ ರಂಜಕದ ಬಳಕೆಯ ಬಗ್ಗೆ ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

- Advertisement -
- Advertisement -

ಕಳೆದ ಅಕ್ಟೋಬರ್‌ನಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಗುಂಪಿನ ಮೇಲೆ ನಡೆಸಿದ ದಾಳಿಯಲ್ಲಿ ಇಸ್ರೇಲ್‌ ಸೇನೆ ನಿಷೇಧಿತ ಬಿಳಿ ರಂಜಕವನ್ನು ಬಳಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಕನಿಷ್ಠ ಒಂಬತ್ತು ನಾಗರಿಕರು ಗಾಯಗೊಂಡಿದ್ದರು.

ಯುದ್ಧದ ವೇಳೆ ಬಿಳಿ ರಂಜಕ ಬಳಕೆಯ ಕುರಿತು ಯುಎಸ್‌ನ ಜೊ ಬೈಡೆನ್‌ ಆಡಳಿತ ಕಳವಳ ವ್ಯಕ್ತಪಡಿಸಿದೆ. ಆದರೆ, ಲೆಬನಾನ್‌ನಲ್ಲಿ ಬಿಳಿ ರಂಜಕದ ಕಾನೂನುಬಾಹಿರ ಬಳಕೆಯ ಆರೋಪವನ್ನು ಇಸ್ರೇಲ್ ತಿರಸ್ಕರಿಸಿದೆ.

ಹಾಗಾದರೆ, ಏನಿದು ಬಿಳಿ ರಂಜಕ, ಇದರ ಬಳಕೆಯ ಪರಿಣಾಮಗಳೇನು?, ಅಂತಾರಾಷ್ಟ್ರೀಯ ಮಾನವೀಯ ಕಾನೂನು ಬಿಳಿ ರಂಜಕದ ಬಳಕೆಯ ಕುರಿತು ಏನು ಹೇಳುತ್ತದೆ? ಇದರ ಬಳಕೆಯನ್ನು ಯುದ್ಧ ಅಪರಾಧವೆಂದು ಪರಿಗಣಿಸಬಹುದೇ? ಎಂದು ತಿಳಿಯೋಣ. 

ಏನಿದು ಬಿಳಿ ರಂಜಕ?

ಬಿಳಿ ರಂಜಕವು ರಾಸಾಯನಿಕ ಅಂಶಗಳಿಂದ ಕೂಡಿದ್ದು, ಇದು ಗಾಳಿಯ ಸಂಪರ್ಕಕ್ಕೆ ಬಂದರೆ ಉರಿಯುತ್ತದೆ. ಇದು ಸುಮಾರು 1,500 ಡಿಗ್ರಿ ಫ್ಯಾರನ್‌ಹೀಟ್ (815 ಸೆಲ್ಸಿಯಸ್) ನಲ್ಲಿ ಸುಡುತ್ತದೆ. ಇದು ಮನುಷ್ಯರ ಸಂಪರ್ಕಕ್ಕೆ ಬಂದರೆ ಗಂಭೀರವಾದ ಗಾಯ ಮತ್ತು ಸಾವಿಗೆ ಕಾರಣವಾಗುತ್ತದೆ.

ಬಿಳಿ ರಂಜಕವನ್ನು ಫೆನಿಯನ್ (ಐರಿಶ್ ರಾಷ್ಟ್ರೀಯತಾವಾದಿ) ಅಗ್ನಿಶಾಮಕವಾದಿಗಳು 19 ನೇ ಶತಮಾನದಲ್ಲಿ “ಫೆನಿಯನ್ ಫೈರ್” ಎಂದು ಕರೆಯಲ್ಪಡುವ ಸೂತ್ರೀಕರಣದಲ್ಲಿ ಬಳಸಿದರು. ರಂಜಕವು ಕಾರ್ಬನ್ ಡೈಸಲ್ಫೈಡ್‌ನ ದ್ರಾವಣದಲ್ಲಿರುತ್ತದೆ. ಕಾರ್ಬನ್ ಡೈಸಲ್ಫೈಡ್ ಆವಿಯಾದಾಗ ರಂಜಕವು ಜ್ವಾಲೆಯಾಗಿ ಸಿಡಿಯುತ್ತದೆ.

ಬಿಳಿ ರಂಜಕ ಮತ್ತು ನೇಪಾಮ್‌ನಂತಹ ಬೆಂಕಿ ಉಗುಳುವ ರಾಸಾಯನಿಕಗಳು ಮಾನವ ದೇಹದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಪ್ರಸಕ್ತ ಸಶಸ್ತ್ರ ಸಂಘರ್ಷಗಳಲ್ಲಿ ಅವುಗಳನ್ನು ಬಳಸುವ ಅತ್ಯಂತ ಕ್ರೂರ ಆಯುಧಗಳ ಬಳಕೆ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಪರಿಗಣಿಸಿದೆ.

ಮಾನವ ಹಕ್ಕುಗಳ ಸಂಶೋಧಕರೊಬ್ಬರು “ದಹನಕಾರಿ ಆಯುಧಗಳು ಜನರನ್ನು ಬೆಂಕಿಯಿಂದ ಸುಡುವ ಆಯುಧಗಳಾಗಿವೆ” ಎಂದಿದ್ದು, ಬಿಳಿ ರಂಜಕದಂತಹ ವಸ್ತುಗಳ ಬಳಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಯಾವಾಗ ಬಿಳಿ ರಂಜಕ ಬಳಸಬಹುದು?

ಯುದ್ದದ ಸಂದರ್ಭಗಳಲ್ಲಿ ನೆಲದ ಮೇಲೆ ಸೈನ್ಯದ ಚಲನೆಯನ್ನು ಮರೆಮಾಚಲು, ಯುದ್ಧಭೂಮಿಯನ್ನು ಬೆಳಗಿಸಲು ಅಥವಾ ಸಂಕೇತ ಸಾಧನವಾಗಿ, ಹೊಗೆ ಪರದೆಯಾಗಿ ಬಿಳಿ ರಂಜಕವನ್ನು ಬಳಸಬಹುದು. ಶತ್ರುಗಳನ್ನು ದಿಕ್ಕು ತಪ್ಪಿಸಲು ಮಾತ್ರ ಇದನ್ನು ಬಳಸಬಹುದು.

ಬೆಂಕಿ ಉಗುಳುವ ಆಯುಧಗಳಾದ ಮಾರ್ಟರ್ ಬಾಂಬ್‌, ರಾಕೆಟ್‌ ಮತ್ತು ಫಿರಂಗಿ ಮದ್ದುಗುಂಡುಗಳಲ್ಲಿ ಆಕ್ರಮಣಕಾರಿಯಾಗಿ ಕೂಡ ಇದನ್ನು ಬಳಸಬಹುದು. ಬಿಳಿ ರಂಜಕವನ್ನು ಒಂದನೇ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಶತ್ರು ಸೈನಿಕರು ಮತ್ತು ನಾಗರಿಕರನ್ನು ಸಮಾನವಾಗಿ ಗುರಿಯಾಗಿಸಿಕೊಂಡು ಅನೇಕರು ಬಳಸಿದ್ದರು.

ವಿಯೆಟ್ನಾಂ ಯುದ್ಧದಲ್ಲಿ, ಇರಾಕ್‌ನಲ್ಲಿ 2004 ರಲ್ಲಿ ಫಲ್ಲುಜಾಹ್ ಯುದ್ಧದ ಸಮಯದಲ್ಲಿ, ಸಿರಿಯಾ ಮತ್ತು ಇರಾಕ್ ಎರಡೂ ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ನೇಪಾಮ್ ಜೊತೆಗೆ ಬಿಳಿ ರಂಜಕವನ್ನು ಯುಎಸ್ ಬಳಸಿತ್ತು. ಉಕ್ರೇನ್ ಮತ್ತು ಸಿರಿಯಾ ಎರಡರಲ್ಲೂ ನಾಗರಿಕರು ಮತ್ತು ಹೋರಾಟಗಾರರ ವಿರುದ್ಧ ವಿವೇಚನೆಯಿಲ್ಲದೆ ಬಿಳಿ ರಂಜಕವನ್ನು ಬಳಸುತ್ತಿರುವ ಆರೋಪವನ್ನು ರಷ್ಯಾ ಹೊಂದಿದೆ.

2008-09 ರಲ್ಲಿ ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಬಿಳಿ ರಂಜಕವನ್ನು ಬಳಸಿದ್ದನ್ನು ಮಾನವ ಹಕ್ಕುಗಳ ಒಕ್ಕೂಟ ವಿರೋಧಿಸಿತ್ತು. ಇದು ಸಂಭಾವ್ಯ ಯುದ್ಧ ಅಪರಾಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿತ್ತು.

ಇದರಿಂದ ಎಚ್ಚೆತ್ತಗೊಂಡ ಇಸ್ರೇಲಿ ರಕ್ಷಣಾ ಪಡೆಗಳು 2013 ರಲ್ಲಿ ಯುದ್ಧಭೂಮಿಯಲ್ಲಿ ಬಿಳಿ ರಂಜಕವನ್ನು ಬಳಸುವುದನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿತ್ತು. ಬದಲಿಗೆ ಅನಿಲ ಆಧಾರಿತ ಹೊಗೆ ಚಿಪ್ಪುಗಳನ್ನು ಬಳುಸುವುದಾಗಿ ಹೇಳಿತ್ತು.

ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತದೆ?

ಬೆಂಕಿಯಿಡುವ ಆಯುಧಗಳು 1980ರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಒಪ್ಪಂದದ ಅಡಿಯಲ್ಲಿ ಬರುತ್ತವೆ. ಈ ಒಪ್ಪಂದವು ನಿರ್ದಿಷ್ಟವಾಗಿ ಅಪಾಯಕಾರಿ ಎಂದು ಪರಿಗಣಿಸಲಾದ ಕೆಲವು ಶಸ್ತ್ರಾಸ್ತ್ರಗಳ ಬಳಕೆಯನ್ನು ಸೀಮಿತಗೊಳಿಸುವ ಮೂಲಕ ನಾಗರಿಕರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಅಂತಾರಾಷ್ಟ್ರೀಯ ಕಾನೂನು ಮತ್ತು ಸಶಸ್ತ್ರ ಸಂಘರ್ಷದ ಕಾನೂನಿನಡಿಯಲ್ಲಿ ಬಿಳಿ ರಂಜಕವನ್ನು ರಕ್ಷಣಾತ್ಮಕವಾಗಿ ಹೊಗೆ ಪರದೆಯಂತೆ ಅಥವಾ ಯುದ್ಧಭೂಮಿಯ ಪ್ರಕಾಶವಾಗಿ ಬಳಸುವುದು ಅಪರಾಧವಲ್ಲ.

ನಾಗರಿಕರ ವಿರುದ್ಧ ನೇರವಾಗಿ ಬೆಂಕಿಯಿಡುವ ಆಯುಧಗಳ ಉದ್ದೇಶಿತ ಬಳಕೆ ಕಾನೂನುಬಾಹಿರವಾಗಿದೆ. ಇದನ್ನು ಯುದ್ಧ ಅಪರಾಧವೆಂದು ಪರಿಗಣಿಸಬಹುದು. ನಾಗರಿಕ ಪ್ರದೇಶದಲ್ಲಿರುವ ಮಿಲಿಟರಿಯನ್ನು ಗುರಿಯಾಗಿಸಿ ಬೆಂಕಿಯಿಡುವ ಆಯುಧಗಳ (ವಿಮಾನದಿಂದ ಬೀಳಿಸಿದ ಬಿಳಿ ರಂಜಕ) ಬಳಕೆಯನ್ನು ಸಹ ನಿಷೇಧಿಸಲಾಗಿದೆ.

ಹಾಗಾಗಿ, ಬಿಳಿ ರಂಜಕದ ಬಳಕೆ ಮಾಡದೆ, ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡು ಹಮಾಸ್ ಮತ್ತು ಹಿಜ್ಬುಲ್ಲಾವನ್ನು ಇಸ್ರೇಲ್ ಗುರಿಯಾಗಿಸಬಹುದು.

ಇಸ್ರೇಲ್ ಮೇಲಿನ ಗಂಭೀರ ಅರೋಪವೇನು?

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್, ಅಕ್ಟೋಬರ್‌ನಲ್ಲಿ ಲೆಬನಾನಿನ ಪಟ್ಟಣವಾದ ಧೀರಾ ಮೇಲೆ ಇಸ್ರೇಲ್ ಬಿಳಿ ರಂಜಕವನ್ನು ಪ್ರಯೋಗಿಸಿದೆ ಎಂದು ಸೂಚಿಸುವ ಪುರಾವೆಗಳನ್ನು ಸಂಗ್ರಹಿಸಿದೆ. ಧೀರಾ ಪಟ್ಟಣದ ನಾಗರಿಕರ ಮೇಲೆ ಇಸ್ರೇಲ್ ಕಾನೂನು ಬಾಹಿರವಾಗಿ ಬಿಳಿರಂಜಕ ಬಳಸಿದೆ ಎಂದು ವಾಷಿಂಗ್ಟನ್ ಪೋಸ್ಟ್‌ಗೆ ಆಮ್ನೆಸ್ಟಿ ತಿಳಿಸಿದೆ.

ಆಮ್ನೆಸ್ಟಿ ಆರೋಪದಂತೆ ಇಸ್ರೇಲ್ ಲೆಬನಾನ್ ಪಟ್ಟಣದ ಮೇಲೆ ಬಿಳಿ ರಂಜಕ ಬಳಸಿದೆಯಾ? ಬಳಿಸಿದ್ದರೆ ಅಂತಾರಾಷ್ಟ್ರೀಯ ಕಾನೂನನ್ನು ಅನುಸಿರಿಸಿದೆಯಾ? ಎಂಬುವುದು ನಿಖರವಾಗಿ ತಿಳಿಯಲು ಸೂಕ್ತ ತನಿಖೆಯ ಅಗತ್ಯವಿದೆ.

ಇಸ್ರೇಲ್ ಒಂದು ವೇಳೆ ನಾಗರಿಕರ ಮೇಲೆ ಬಿಳಿ ರಂಜಕ ಪ್ರಯೋಗಿಸಿದ್ದರೆ, ಅದು 1949 ರ ಜಿನೀವಾ ಒಪ್ಪಂದ ಅಡಿಯಲ್ಲಿ ಯುದ್ದಪರಾಧವಾಗಿದೆ. ಈ ಕುರಿತು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತನಿಖೆ ನಡೆಸಬೇಕಿದೆ. ಆದರೆ, ಇದು ಅಸಾಧ್ಯದ ಮಾತಾಗಿದೆ. ಏಕೆಂದರೆ. ಇಸ್ರೇಲ್ ಅಂತಾರಾಷ್ಟ್ರೀಯ ಕ್ರಿಮಿನಿನಲ್ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ. ಹಮಾಸ್ ಮತ್ತು ಹಿಜ್ಬುಲ್ಲಾ ರಾಜ್ಯೇತರ ಸಂಘಟನೆಗಳಾಗಿವೆ.

ಇದನ್ನೂ ಓದಿ: ಗಾಝಾದಲ್ಲಿ ಕದನ ವಿರಾಮ: ವಿಶ್ವಸಂಸ್ಥೆ ನಿರ್ಣಯ ಬೆಂಬಲಿಸಿದ ಭಾರತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...