Homeಕರ್ನಾಟಕಅಂಕೋಲೆಗೆ ನುಗ್ಗಲಿದೆ ಯುದ್ಧ ವಿಮಾನ: ಅದರ ಹೆಸರು ಮಾತ್ರ ನಾಗರಿಕ ಏರ್‌ಪೋರ್ಟ್..

ಅಂಕೋಲೆಗೆ ನುಗ್ಗಲಿದೆ ಯುದ್ಧ ವಿಮಾನ: ಅದರ ಹೆಸರು ಮಾತ್ರ ನಾಗರಿಕ ಏರ್‌ಪೋರ್ಟ್..

- Advertisement -
- Advertisement -

“ಜೀವವನ್ನಾದರೂ ಬಿಟ್ಟೇವು, ತುತ್ತು ನೀಡುತ್ತಿರುವ ಭೂಮಿ ಬಿಡಲಾರೆವು” ಎನ್ನುತ್ತಿದ್ದಾರೆ ಅಂಕೋಲಾ ತಾಲ್ಲೂಕಿನ ಅಲಗೇರಿ ಮತ್ತದರ ಆಚೀಚೆಯ ಹಳ್ಳಿಗರು ಒಕ್ಕೊರಳಲ್ಲಿ!! ಎಷ್ಟೆಂತ ತ್ಯಾಗ ಮಾಡೋದು? ಈ ಮಂದಿ ನೌಕಾನೆಲೆ, ರೈಲ್ವೇ, ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ನಮ್ಮ ಬದುಕಿಗಾಧಾರವಾದ ಭೂಮಿಯನ್ನು ಕಳೆದುಕೊಂಡಿದ್ದಾರೆ. ಈಗ ಮತ್ತೆ ವಿಮಾನ ನಿಲ್ದಾಣಕ್ಕಾಗಿ ಜಮೀನು ಕೊಡಿ, ಮನೆ-ಮಠ ಬಿಡಿಯೆಂದರೆ ಹೇಗೆ? ಬದುಕುವುದಾದರೂ ಹೇಗೆ? ಸದ್ರಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಅಲಗೇರಿ ಅಂಕೋಲೆಯ ಭೂಪಟದಿಂದ ಅಳಿಸಿ ಹೋಗುತ್ತದೆ!

ಸಹಜವಾಗೇ ಅಲಗೇರಿಯ ಆತಂಕಿತ ಜನರೀಗ ಕೆರಳಿ ಕೆಂಡವಾಗಿದ್ದಾರೆ. ಆಡಳಿತಗಾರರು ಗುಪ್ತವಾಗಿ ಸರ್ವೆ ನಡೆಸುತ್ತಿರುವುದು ಹಳ್ಳಿಗರನ್ನು ದಿಕ್ಕೆಡಿಸಿಬಿಟ್ಟಿದೆ. ಹಾಗೊಮ್ಮೆ ಆಳುವವರು ಹಠದಿಂದ ನಮ್ಮ ಭೂಮಿ ಕಸಿದುಕೊಳ್ಳುತ್ತಾರೆಂದರೆ, ವಿಮಾನ ನಿಲ್ದಾಣ ನಮ್ಮೂರಿನ ಸಮಾಧಿ ಮೇಲೆ ಆಗಲಿ ಎಂದಬ್ಬರಿಸುತ್ತಿದ್ದಾರೆ. ದಿವಂಗತ ರೈತ-ಕಾರ್ಮಿಕ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ನೆಚ್ಚಿ ದಾಖಲಾಗಿರುವ ವಿಶಿಷ್ಟ ಗ್ರಾಮ ಇದು. ವಿಪರ್ಯಾಸ ನೋಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನರೀಗ ಅತಂತ್ರರಾಗುವಂತಾಗಿದೆ! ಸಂತ್ರಸ್ತರಾಗುವ ಸಂಕಟದಲ್ಲಿರುವ ಅಲಗೇರಿ ಭಾಗದವರು ಹೋರಾಟ-ಪ್ರತಿಭಟನೆಗೆ ಅಣಿಯಾಗಿದ್ದಾರೆ.

ಅಂಕೋಲ-ಕಾರವಾರ ನಡುವೆ ಏಷ್ಯಾದಲ್ಲೇ ಅತ್ಯಂತ ದೊಡ್ಡ ನೌಕಾನೆಲೆ ತಲೆಯೆತ್ತಿದೆ. ಅಂದರೆ ಅಲಗೇರಿ ಅಂಚಿನಲ್ಲಿ ನಿಂತಿದೆ. ಈ ಕದಂಬ ನೌಕಾನೆಲೆಗೆ ಯುದ್ಧ ವಿಮಾನ ನಿಲ್ದಾಣ ಜರೂರ್ ಬೇಕಾಗಿದೆ. ಯುದ್ಧ ವಿಮಾನ ನಿಲ್ದಾಣ ಎಂದರೆ ಜನ ತಿರುಗಿ ಬೀಳಬಹುದೆಂಬ ಲೆಕ್ಕಾಚಾರ ಹಾಕಿರುವ ಪ್ರಭುತ್ವ ಪಂಡಿತ ಶಿಖಾಮಣಿಗಳು ಈ ವಿಮಾನ ನಿಲ್ದಾಣ ಟೂ ಇನ್ ಒನ್ ಎನ್ನುತ್ತಿದ್ದಾರೆ. ಈ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ನಾಗರಿಕ ಯಾನ ಏರ್‌ಪೋರ್ಟ್‌ಗೂ ಅವಕಾಶವಿದೆ ಅಂತಿದ್ದಾರೆ. ಅಲಗೇರಿ, ಭಾವಿಕೇರಿ, ಬೆಲೇಕೇರಿ ಏರಿಯಾದ ಬರೋಬ್ಬರಿ 202 ಎಕರೆ ಭೂಸ್ವಾಧೀನಕ್ಕೆ ರಕ್ಷಣಾ ಇಲಾಖೆ ಸ್ಕೆಚ್ ಹಾಕಿದೆ. ಅದಕ್ಕಾಗಿ ಅಲಗೇರಿಯ 160 ಎಕರೆ, ಭಾವಿಕೇರಿಯ 12 ಎಕರೆ ಮತ್ತು ಬೇಲೇಕೇರಿಯ 30 ಎಕರೆ ಭೂ ಪ್ರದೇಶದಲ್ಲಿ ಸರ್ವೆ ಕೂಡ ಮಾಡಿಮುಗಿಸಿಲಾಗಿದೆ.

1983ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೌಕಾನೆಲೆಗೆ ಅಡಿಗಲ್ಲು ಇಡುವಾಗಿ “ನಿರಾಶ್ರಿತರಾಗುವ ಮಂದಿಯ ಕಣ್ಣಲ್ಲಿ ಒಂದೇ ಒಂದು ಹನಿ ನೀರು ಬರದಂತೆ ನೋಡಿಕೊಳ್ಳುತ್ತೇವೆ” ಎಂದಿದ್ದರು. ಆದರೆ ನೌಕಾನೆಲೆ ಕಾಮಗಾರಿ ಶುರುವಾಗುತ್ತಿದ್ದಂತೆಯೇ ಕಾರವಾರ-ಅಂಕೋಲೆಯಲ್ಲಿ ಸಂತ್ರಸ್ತರ ಕಂಬನಿಯ ಕೋಡಿಯೇ ಮೂರು ದಶಕಗಳ ಕಾಲ ಹರಿದಿದೆ!! ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡ ರಕ್ಷಣಾ ಇಲಾಖೆ ನಿಗದಿ ಪಡಿಸಿದ ಪರಿಹಾರ ಮೊತ್ತ ಎಷ್ಟು ಗೊತ್ತೇ? ಪ್ರತಿ ಗುಂಟೆಗೆ ಕೇವಲ 150ರೂ!!!

ಅಮಾಯಕ ನಿರಾಶ್ರಿತರನ್ನು ಬೆಳೆ ತೆಗೆಯಲಾಗದ, ಕುಲಕಸುಬು ಕಟ್ಟಿಕೊಳ್ಳಲಾಗದ ಬರಡು ಪುನರ್ವಸತಿ ಕೇಂದ್ರಕ್ಕೊಯ್ದು ಬಿಡಲಾಗಿತ್ತು. ಅಕ್ಷರಶಃ ನೀರಿಂದ ತೆಗೆದು ದಂಡೆಗೊಗೆದ ಮೀನಿನಂತಾಗಿದ್ದ ಈ ನಿರಾಶ್ರಿತರ ನೆರವಿಗೆ ಯಾವ ಅಧಿಕಾರಸ್ಥ ಪುಢಾರಿಯೂ ಬರಲಿಲ್ಲ. ಮನೆಗೊಂದು ಉದ್ಯೋಗ, ಸೂಕ್ತ ಪರಿಹಾರ, ನಿರಾಶ್ರಿತರ ಕೋಟಾ ಘೋಷಣೆ ಮಾಡಿದ್ದ ನಾಲಾಯಕ್ ಜನಪ್ರತಿನಿಧಿಗಳು, ಹೊಣೆಗೇಡಿ ಅಧಿಕಾರಗಳು ನಾಪತ್ತೆಯಾಗಿದ್ದರು. ದೇಶ ಕಟ್ಟಲಿಕ್ಕೇ ಹುಟ್ಟಿದ್ದೇನೆಂಬಂತೆ ಪೊಕ್ಕು ವೀರಾವೇಷದ ಮಾತಾಡುವ ಸಂಸದ ಅನಂತ್ಮಾಣಿಗಂತೂ ಈ ನೆಲೆ ಕಳಕೊಂಡವರ ಗೋಳು ಕೊನೆವರೆಗೂ ಕೇಳಿಸಲಿಲ್ಲ.

ಹೆಚ್ಚುವರಿ ಪರಿಹಾರಕ್ಕಾಗಿ ಸಂತ್ರಸ್ತರು 35 ವರ್ಷ ಕಾನೂನು ಹೋರಾಟ ನಡೆಸಿ ಗೆದ್ದಿದ್ದಾರೆ. ಈಗ ಪರಿಹಾರ ಪಡೆಯುತ್ತಿದಾರೆ. ಈ ಕ್ರೆಡಿಟ್ ತಮ್ಮದೆಂದು ಸಂಸದ ಮಾಣಿ, ಮಾಜಿ ಮಂತ್ರಿ ದೇಶಪಾಂಡೆ ಹಲಬುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದೇ ಸಮುದಾಯವನ್ನು ವಿಮಾನ ನಿಲ್ದಾಣದ ಗುಮ್ಮ ಕಾಡತೊಡಗಿದೆ. ವಿಮಾನ ನಿಲ್ದಾಣಕ್ಕೆ 500 ಎಕರೆ ಭೂಮಿ ಬೇಕು. ಒಂದು ಗುಂಟೆ ಜಾಗದಲ್ಲಿ ಎರಡು-ಮೂರು ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಬದುಕುತ್ತಿವೆ. ಫಲವತ್ತಿದ ಕೃಷಿ ಭೂಮಿ, ತೆಂಗಿನ ಮರಗಳ ತೋಟವಿದೆ. ಕೂಲಿ ನಾಲಿ ಮಾಡಿ, ಮೀನುಗಾರಿಕೆ ನಡೆಸಿ, ಸಣ್ಣ-ಪುಟ್ಟ ಉದ್ಯಮ ನಡೆಸಿ ತಲತಲಾಂತರದಿಂದ ಜನ ಜೀವಿಸುತ್ತಿದ್ದಾರೆ. ಇದನ್ನೆಲ್ಲಾ ವಿಮಾನ ನಿಲ್ದಾಣ ಆಪೋಷನ ಪಡೆಯಲಿದೆ.

ಈ ವಿಮಾನ ನಿಲ್ದಾಣದ ಬಗ್ಗೆ ಯಾವ ವರದಿ, ಯೋಜನೆ ನಕ್ಷೆ ಸ್ವಾಧೀನವಾಗುವ ಭೂಮಿ ಬಗ್ಗೆ ಯಾವ ವಿವರವನ್ನೂ ಆಳುವವರು ಮತ್ತವರ ಅಧಿಕಾರ ಗ್ಯಾಂಗು ಬಹಿರಂಗ ಪಡಿಸುತ್ತಿಲ್ಲ. ಜಿಲ್ಲಾಡಳಿತ ಅಧ್ಯಯನ ವರದಿಯನ್ನು ಜನರ ಮುಂದಿಡುತ್ತಿಲ್ಲ. ಎಲ್ಲವೂ ಗುಪ್ತ ಗುಪ್ತ ಏಕೆ? ಕೃಷಿಯನ್ನೇ ನಂಬಿ ಬದುಕಿರುವ ಜನರ ಬೀದಿಪಾಲು ಮಾಡುವ ಈ ಪ್ರಳಯಾಂತಕ ಯೋಜನೆ ಬಂದರೆ 500 ಎಕರೆ ಪ್ರದೇಶದಲ್ಲಿ ಕಾಂಕ್ರಿಟ್ ಮೈದಾನ ಆಗುತ್ತದೆ. ಮಳೆಗಾಲದಲ್ಲಿ ನೀರಿಂಗಲು ಅವಕಾಶವೇ ಇರದು. ಈಗ ಬೀಳುವ ಮಳೆಗೆ ಕೇಣಿ ಹಳ್ಳ, ಬಾಳೆಗುಳಿ ಹೊಳೆಗೆ ಪ್ರವಾಹ ಬಂದು ಸುತ್ತಲಿನ ಊರು-ಕೇರಿ ಮುಳುಗುತ್ತದೆ. ವಿಮಾನ ನಿಲ್ದಾಣವಾದರೆ ಅಂಕೋಲೆಯಲ್ಲಿ ಜಲಪ್ರಳಯ ಗ್ಯಾರಂಟಿ.

ಹಲವು ಹಾನಿಗೆ ಕಾರಣವಾಗುವ ಈ ಸದ್ರಿ ವಿಮಾನ ನಿಲ್ದಾಣ ಬೇಡವೆಂದು ಜನ ಪ್ರತಿಭಟನೆಗೆ ಇಳಿದಿದ್ದಾರೆ. ಶಾಂತವಾಗಿರುವ ಅಂಕೋಲೆಯಲ್ಲಿ ಕ್ರಾಂತಿ ಆಗುವ ಮೊದಲೆ ಜಿಲ್ಲಾಡಳಿತ, ಸ್ಥಳೀಯ ಶಾಸಕಿ ರೂಪಾಲಿಯಮ್ಮ ಎಚ್ಚೆತ್ತುಕೊಳ್ಳುವರಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...