Homeಸಾಹಿತ್ಯ-ಸಂಸ್ಕೃತಿಕಥೆಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

ಎಷ್ಟು ಉಂಡರೂ ಉಟ್ಟರೂ, ಇನ್ನೂ ಬೇಕೆಂಬ ದಾಹ

- Advertisement -
- Advertisement -

ಆಡಿದ ಮಾತು ಕಾಲ ಕಳೆದಂತೆ ಮರೆತು ಹೋಗಬಹುದು. ಆದರೆ ಪಾಲ್ಗೊಂಡ ಚಿತ್ರ ಮಾತ್ರ ಕಾಲಾನಂತರದಲ್ಲೂ ಉಳಿದುಬಿಡುತ್ತದೆ’- ಇತ್ತೀಚಿನ ದಿನಗಳಲ್ಲಿ ನನ್ನನ್ನು ಗಾಢವಾಗಿ ಕಲಕಿದ ಮಾತಿದು. ನಾಗಪುರದ ಸಂಘ ಪರಿವಾರದ ಸಮಾವೇಶದಲ್ಲಿ ಪಾಲ್ಗೊಂಡ ತನ್ನ ತಂದೆ, ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಪ್ರಣವ ಮುಖರ್ಜಿಯವರನ್ನು ಎಚ್ಚರಿಸಲು ಅವರ ಮಗಳು ಶರ್ಮಿಷ್ಠಾ ಮುಖರ್ಜಿ ಆಡಿದ ಮಾತುಗಳಿವು. ಮತೀಯವಾದಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಮತ್ತು ಮತೀಯ ಭ್ರಷ್ಟ ವ್ಯಕ್ತಿಗಳು-ಚಿಂತನೆಗಳು ಸೇರಿಕೊಂಡ ಸಾಂಸ್ಕøತಿಕ-ಸಾಹಿತ್ಯಿಕ-ಶೈಕ್ಷಣಿಕ ವೇದಿಕೆಗಳಲ್ಲಿ ಪಾಲ್ಗೊಳ್ಳುವುದು ಎರಡೂ ಅಪಾಯಕಾರಿಯೇ. ಆದರೆ ಈ ಎರಡರ ಮಧ್ಯೆ ಕನಿಷ್ಠ ವ್ಯತ್ಯಾಸವಿದೆ. ಆ ವ್ಯತ್ಯಾಸ ಕೇಳುಗ ವರ್ಗಕ್ಕೆ ಸಂಬಂಧಿಸಿದ್ದು. ಮತೀಯ ಸಂಘಟನೆಗಳ ಕಾರ್ಯಕರ್ತರು ತಮ್ಮನ್ನು ಸಿದ್ಧಾಂತಕ್ಕೆ ಕೊಟ್ಟುಕೊಂಡವರು. ತಾವು ಸರಿ ಎಂದುಕೊಂಡಿದ್ದು ತಪ್ಪಿರಬಹುದು. ಲೋಕವನ್ನು ಕಾಣಬೇಕಾದ ಕ್ರಮ ಬೇರೆಯಿದ್ದೀತು ಎಂಬ ಉದಾರತೆ ಇರದವರು. ಇವರಿಗೆ ಜೀವ ಸಾಮರಸ್ಯದ ಚರಿತ್ರೆಯನ್ನು ನೆನಪಿಸುವುದಾಗಲಿ, ವರ್ತಮಾನದ ಬಗ್ಗೆ ನೆನಪಿಸುವುದಾಗಲಿ ವ್ಯರ್ಥ. ಹೆಚ್ಚೆಂದರೆ, ದಿನದ ಮಾತುಗಳಿಗಿಂತ ಬೇರೆಯಾದ ಮಾತುಗಳನ್ನು ಕೇಳಿಸಿಕೊಂಡ ಮುದ ಒಂದು ಗಳಿಗೆ ದೊರೆತೀತು. ಸಂಘ ಪರಿವಾರದ ಚರಿತ್ರೆಯನ್ನು ಗಮನಿಸಿದರೆ, ಅದು ತನ್ನನ್ನು ಕಟುವಾಗಿ ವಿರೋಧಿಸಿ ಎದುರು ಹಾಕಿಕೊಂಡವರನ್ನೂ ತನ್ನ ಚಹರೆಪಟ್ಟಿಗೆ ಸೇರಿಸಿಕೊಂಡು ಬೆಳೆದಿದೆ. ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಭಗತ್‍ಸಿಂಗ್ ಯಾರನ್ನು ಬೇಕಾದರೂ ನುಂಗಿ ನೊಣೆಯುತ್ತ ಬಂದಿದೆ. ಮಹಾನ್ ವ್ಯಕ್ತಿತ್ವಗಳಿಗೆ ಮರಣೋತ್ತರ ಅವಮಾನ ಮಾಡುತ್ತ ಬಂದಿದೆ. ಹಾಗಿರುವಾಗ, ಅಧಿಕಾರದಾಸೆಗೆ ಬೇರು ಸಡಿಲವಾಗಿಸಿಕೊಂಡರೆ, ತನ್ನ ಧೃತರಾಷ್ಟ್ರ ಆಲಿಂಗನದಿಂದ ಹೊರತುಪಡಿಸೀತೆ?
ಶರ್ಮಿಷ್ಠಾ ಮತ್ತು ಹಾಗೆ ಯೋಚಿಸುವವರ ಧಾಟಿ ದಿಟವಾದದ್ದೆನ್ನಲು ಕೆಲವು ಗಂಟೆಗಳಲ್ಲಿಯೇ ಪುರಾವೆಗಳೊದಗಿದ್ದವು. ಪ್ರಣವ ಮುಖರ್ಜಿ ಸಂಘ ಪರಿವಾರದ ಶೈಲಿಯಲ್ಲಿ ನಮಸ್ಕರಿಸಿ ನಿಂತ ಫೇಕ್ ಫೋಟೊ ಜಾಲತಾಣಗಳಲ್ಲಿ ಹರಿದಾಡಿದವು. ಒಂದಿಡೀ ದಿನ ದೇಶದ ಮಾಧ್ಯಮಗಳು, ಚಿಂತಕರು ಮಾಜಿ ರಾಷ್ಟ್ರಪತಿಗಳ ಭಾಷಣದಲ್ಲಿದ್ದ ದೇಶದ ಸಾಮರಸ್ಯ-ಸಹಬಾಳ್ವೆಯ ಪ್ರತಿಪಾದನೆಯ ಕುರಿತು ಚರ್ಚಿಸಿದರು. ಆದರೆ ಇಂತಹ ಮಾನವೀಯ ನುಡಿಗಳು ಮತೀಯವಾದಿಗಳನ್ನು ಅಲ್ಲಾಡಿಸಿಬಿಡುತ್ತವೆಯೇ? ಮೂಲಭೂತ ಜಡತೆಯ ಮನಸ್ಸು ಮಾನವೀಯತೆಯನ್ನು ಸ್ವೀಕರಿಸುವ ವಿಧಾನದಲ್ಲಿಯೇ ತಪ್ಪುಗಳಿವೆ. ಮತೀಯವಾದಿ ಸಂಘಟನೆಗಳು ಜನಸಮುದಾಯವನ್ನು ಸ್ವೀಕರಿಸುವ ವಿಧಾನದಲ್ಲಿಯೇ ಸ್ಪಷ್ಟ ವಿಭಾಜಕಗಳಿವೆ. ತನ್ನವರು-ಹೊರಗಿನವರು ಎಂಬ ವಿಂಗಡನೆ ಅಮಾನುಷವಾಗಿರುತ್ತದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಮಾತು ಅದೆಷ್ಟೇ ಉದಾತ್ತವಾಗಿರಲಿ, ಅಲ್ಲಿ ‘ಜನ’ ಎಂದರೆ ತನ್ನ ಧರ್ಮ ಜಾತಿ-ಕುಲ ಬಾಂಧವರು ಎಂದು ಮಾತ್ರ ಆಗುತ್ತದೆ. ‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ’ ಎನ್ನುವುದೂ ಹೀಗೇ. ಅದರ ಪರಿಷ್ಕøತ ರೂಪ. ಇವು ನುಡಿಯಲ್ಲಿ ಉದಾತ್ತವಾಗಿದ್ದು, ನಡೆಯಲ್ಲಿ ತನ್ನ ಜಾತಿ-ಧರ್ಮಗಳ ಚೌಕಟ್ಟಿನೊಳಗೇ ವ್ಯವಹರಿಸುತ್ತವೆ. ಇಂತಹ ನುಡಿಸೋಂಕಿಗೆ ಬಲಿಯಾದ ಜನರು, ಪ್ರಣವ ಮುಖರ್ಜಿಯವರ ಮಾತಿನ ಜೇನನ್ನು ಅರಿವಿಗೆ ತಂದುಕೊಳ್ಳಲಾರರು. ಅಲ್ಲಿಗೆ ಪ್ರಣವ ಮುಖರ್ಜಿಯವರ ನುಡಿಜೇನು ತೊಟ್ಟಿಕ್ಕಿ ಮರಳು ಸೇರಿದಂತಾಯಿತು. ಇಂಥದ್ದೊಂದು ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿ ನಡೆದದ್ದಲ್ಲ. ಇದೊಂದು ಪ್ರಜ್ಞಾಪೂರ್ವಕ ಭಾಗೀದಾರಿಕೆ. ಸಂಘಪರಿವಾರದ ಸಿದ್ಧಾಂತಗಳಿಗಿಂತ ಬೇರೆಯಾದ ಪಕ್ಷ ರಾಜಕಾರಣದಲ್ಲಿದ್ದು ರಾಷ್ಟ್ರಪತಿ ಹುದ್ದೆಯವರೆಗೆ ಏರಿದವರು, ಮತ್ತೆ ಈ ವಯಸ್ಸಿನಲ್ಲಿ ಅಧಿಕಾರ ರಾಜಕಾರಣದಲ್ಲುಳಿಯುವ ಮನಸ್ಸು ಮಾಡಿದರು- ಎನ್ನುವ ವಿಶ್ಲೇಷಣೆಯೂ ಇದೆ.
ಇದು ನಿಜವಾಗಿದ್ದರೆ, ಸ್ವತಂತ್ರ ಭಾರತ, ರಾಜಕಾರಣಿಗಳ ಅನೈತಿಕ ಲೂಟಿಯ ಕಥನವಾಗಿ ಪ್ರಸಿದ್ಧಿ ಪಡೆದಂತಾಯಿತು. ಎಷ್ಟು ಉಂಡರೂ ಉಟ್ಟರೂ ತೊಟ್ಟರೂ ಇನ್ನೂ ಬೇಕು ಎಂಬ ಯಮ ಹಸಿವು ಇದು. ಅಪರೂಪದ ಅತ್ಯುನ್ನತ ಪದವಿಗಳನ್ನು ಪಡೆದ ಮೇಲೂ ಅತೃಪ್ತಿ, ಪಕ್ಷಾಂತರ, ಸ್ವ ಪಕ್ಷದ್ವೇಷ… ಮುಂತಾದ ಚಟುವಟಿಕೆಗಳು ನಡೆದೇ ಇವೆ. ಸದ್ಯದ ವಿಧಾನಸಭೆ ಚುನಾವಣೆಯ ಆಚೀಚೆ ಕರ್ನಾಟಕದ ರಾಜಕಾರಣಿಗಳು ನಡೆದುಕೊಂಡ ಬಗೆಯೂ ಅವಕಾಶವಾದದ ಮಾದರಿಯಂತಿತ್ತು. ಇಂತಹ ಭ್ರಷ್ಟ ರಾಜಕಾರಣವನ್ನು ಉಪೇಕ್ಷಿಸಲಾಗುತ್ತಿಲ್ಲ. ಯಾಕೆಂದರೆ ಇದು ವ್ಯವಸ್ಥೆಯನ್ನು ಸತತವಾಗಿ ಭ್ರಷ್ಟಗೊಳಿಸುತ್ತಿರುತ್ತದೆ.
ರಾಜಕಾರಣ ಮತ್ತು ಪ್ರಭುತ್ವ ತನ್ನ ನಾಗರಿಕರಿಗೆ ಅನ್ಯಾಯ ಮಾಡಿದಷ್ಟು ಇನ್ಯಾವುದೂ ಮಾಡಲು ಸಾಧ್ಯವಿಲ್ಲವೇನೋ. ತನ್ನ ರಾಜಕೀಯ ಲಾಭಕ್ಕಾಗಿ ಜನರನ್ನು ಮತ-ಧರ್ಮದ ಹೆಸರಿನಲ್ಲಿ ವಿಭಜಿಸುವ ರಾಜಕಾರಣಿ, ಸಮುದಾಯದ ಬದುಕನ್ನು ಮೂರು ರೀತಿಯಲ್ಲಿ ಈಡಾಡುತ್ತಾನೆ. ಮೊದಲನೆಯದು, ಒಂದು ಧರ್ಮದ, ಜಾತಿಯ ಜನರನ್ನು ಅಡ್ರೆಸ್ ಮಾಡಿ; ನೀವು ವೋಟ್ ಹಾಕಬೇಡಿ ಎಂದೋ ವೋಟ್ ಹಾಕಿ ಎಂದೋ ದಬಾಯಿಸುವುದು. ಸದ್ಯ, ಯತ್ನಾಳ ಎಂಬ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಶಾಸಕರು, ತಮ್ಮ ಕ್ಷೇತ್ರದ ಕಾರ್ಪೊರೇಟರ್‍ಗಳಿಗೆ ‘ನೀವು ಹಿಂದೂಗಳ ಪರವಾಗಿ ಕೆಲಸ ಮಾಡಿ, ಮುಸ್ಲಿಮರ ಪರವಾಗಿ ಅಲ್ಲ’- ಎಂದು ಫರ್ಮಾನು ಕೊಡಲೂ ಹೇಸಲಿಲ್ಲ. ಅವರ ಮಾತು ಅನಂತಕುಮಾರ್ ಹೆಗಡೆಯವರಿಗೆ ಸರಿದೊರೆಯಾಗಿತ್ತು. ಇಂತಹ ಸಂವಿಧಾನ ವಿರೋಧಿಯಾದ ಉಡಾಫೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಯುವಕರು ಶಿಳ್ಳೆ ಹಾಕಿ, ಚಪ್ಪಾಳೆ ಹಾಕಿ, ಬಹು ಜೋಷ್‍ನಿಂದ ಆ ಮಾತುಗಳನ್ನು ಬರಮಾಡಿಕೊಂಡರು. ಅಲ್ಲಿಗೆ ಸಾಮಾಜಿಕ ಬದುಕಿನ ನೆಮ್ಮದಿಗೆ ಪೆಟ್ರೋಲ್ ಸುರಿಯಲಾಯಿತು ಎಂದೇ ಅರ್ಥ. ಪರಿಣಾಮವಾಗಿ ನೈತಿಕ ಭ್ರಷ್ಟತೆಯ ಪ್ರಜಾತಂತ್ರ ವಿರೋಧಿಯಾದ ಅಧಿಕಾರಶಾಹಿ ವರ್ಗವು ನಿರ್ಮಾಣಗೊಳ್ಳುತ್ತದೆ. ಇದರಿಂದ ಮತೀಯವಾದದ ಬೇರು ಭದ್ರಗೊಳ್ಳುತ್ತದೆ. ಕೋಮುಹಿಂಸೆ ವಿಜೃಂಭಿಸಿದಾಗೆಲ್ಲ ಅದರ ಪೋಷಕ ಸ್ಥಾನದಲ್ಲಿ ಅಧಿಕಾರಶಾಹಿಗಳಿರುವುದು ಪ್ರಜಾಪ್ರಭುತ್ವದ ಕರಾಳ ಸತ್ಯ. ಇತ್ತೀಚೆಗೆ ಕರಾವಳಿಯಲ್ಲಿ ಹುಸೇನಬ್ಬ ಎಂಬ ದನದ ವ್ಯಾಪಾರಿಯನ್ನು ಅಕಾರಣ ಮುಗಿಸಿದ ಕ್ರೌರ್ಯ ಪೊಲೀಸ್ ವ್ಯವಸ್ಥೆಗೂ ಇದೆ ಎನ್ನಲಾಗುತ್ತಿರುವ ಸಂಬಂಧ ಗಾಬರಿ ಬೀಳಿಸುವಂಥದ್ದು. ಈ ನೆಲ ಬದುಕಿಗೆ ಯೋಗ್ಯವಾಗುಳಿ ಯುವುದು ಇನ್ನೆಷ್ಟು ಕಾಲ? ಎನಿಸುತ್ತಿದೆ. ಕೋಮುವಾದ-ಮತೀಯವಾದದ ದುಷ್ಟ ವೈರಸ್‍ಗಳು ಅತ್ಯಂತ ಸುಸಂಪನ್ನ ಸ್ವಸಂಪೂರ್ಣ ವ್ಯವಸ್ಥೆಯಲ್ಲಿ ಬೆಳೆಯುತ್ತಿವೆ ಅಥವಾ ಬೆಳೆಸಲಾಗುತ್ತಿದೆ. ಇತ್ತೀಚೆಗೆ ನಾನು ಪರೀಕ್ಷಾ ಕೆಲಸಕ್ಕಾಗಿ ಒಂದು ಅನ್‍ಏಡೆಡ್ ಕಾಲೇಜಿನಲ್ಲಿ ಕೆಲ ದಿನಗಳನ್ನು ಕಳೆಯಬೇಕಾಯಿತು.
ಅಂತಾರಾಷ್ಟ್ರೀಯ ಗುಣಮಟ್ಟ ಎಂದು ಘೋಷಿಸಿಕೊಂಡಿರುವ ವ್ಯವಸ್ಥೆಯನ್ನು ಹೊಂದಿರುವ ಕಾಲೇಜದು. ಹೊರಗಣ್ಣಿಗೆ ತುಂಬಾ ಸಂಪನ್ನವೆನಿಸುತ್ತದೆ. ಒಳಗಿಳಿದರೆ ಅಧಃಪತನದ ಕೊರಕಲುಗಳೇ ಇವೆ. ಕಾಲೇಜಿನ ಮ್ಯಾನೇಜ್‍ಮೆಂಟ, ಕಚೇರಿ ಸಿಬ್ಬಂದಿಗಳು, ಪ್ರಾಧ್ಯಾಪಕರು ಮತ್ತು ಬಹುತೇಕ ವಿದ್ಯಾರ್ಥಿಗಳು ಮೇಲ್ಜಾತಿಯ ಒಂದು ಕಮ್ಯುನಿಟಿಗೆ ಸೇರಿದವರು. ಅಗತ್ಯವಿದ್ದರೆ ಜಾತಿಯಲ್ಲಿ ತಮಗಿಂತ ಉತ್ತಮರೆಂದು ಭಾವಿಸಿದ ಇನ್ನೊಂದು ಜಾತಿಯವರನ್ನು ಸೇರಿಸಿಕೊಳ್ಳಲಾಗಿದೆ ಅಷ್ಟೇ. ಶಿಕ್ಷಣ ವ್ಯವಸ್ಥೆಯ ಸಿಬ್ಬಂದಿಗಳಲ್ಲಿ ಇರಬೇಕಾದ ಪರಸ್ಪರ ಗೌರವಾದರಗಳಿಗಿಂತ, ಒಂದು ಮನೆಯ ಸದಸ್ಯರಂತಹ ಸಲುಗೆ; ಶಿಕ್ಷಕರು-ವಿದ್ಯಾರ್ಥಿಗಳ ಸಂಬಂಧವೂ ಹಾಗೇ. ಸರ್ಕಾರಿ ಸೆಕ್ಟರ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ವಿಶೇಷ ಸೌಲಭ್ಯಗಳನ್ನು ಕೊಡಮಾಡಲಾಗುತ್ತದೆಂಬ ತಕರಾರು. ಶಿಕ್ಷಣದ ಗುಣಮಟ್ಟ ಕುಸಿಯಲು, ದೇಹದಿಂದ ದುಡಿಯಲು ಹುಟ್ಟಿದವರೂ ಕಲಿಯಲು ಬರುತ್ತಿರುವುದು ಕಾರಣ ಎಂಬ ತೀರ್ಮಾನ. ಸತತ ಏಳನೇ ಬಾರಿ ಪರೀಕ್ಷೆಗೆ ಕಟ್ಟಿದ ವಿದ್ಯಾರ್ಥಿಗಳೂ ಇದ್ದರು. ಅವರ ಧಿಮಾಕು, ನಿರ್ಲಕ್ಷ್ಯ ಹೇಳತೀರದ್ದು. ಕ್ರಮೇಣ ತಿಳಿದದ್ದೇನೆಂದರೆ, ಅದು ಒಂದು ರೀತಿಯಲ್ಲಿ ಮರಿ ರಾಜಕೀಯ ಪುಢಾರಿಗಳನ್ನು ತಯಾರು ಮಾಡುವ ಸೆಂಟರ್‍ನಂತಿತ್ತು. ತಮ್ಮ ಶಿಷ್ಯನೊಬ್ಬನಿಗೆ ಈ ಬಾರಿ ಟಿಕೆಟ್ ಸಿಕ್ಕಿದೆ- ಎಂಬ ಸಂಭ್ರಮದಲ್ಲಿದ್ದರು. ಯು.ಜಿ.ಸಿ.ಯ ಯಾವ ನಿಯಮವೂ ಅವರಿಗೆ ಅನ್ವಯವಾಗಬೇಕಿರಲಿಲ್ಲ. ಅವರು ಸರ್ಕಾರದಿಂದ ‘ಅನುದಾನ’ ತೆಗೆದುಕೊಳ್ತಿರಲಿಲ್ಲ. ಒಂದು ವಾರ ಕಳೆಯುವಷ್ಟರಲ್ಲಿ ದಣಿದುಬಿಟ್ಟಿದ್ದೆ. ನಾಗರಿಕ ಸಮಾಜದಲ್ಲಿ ಮೇಲ್ಜಾತಿ ವರ್ಗಗಳು ಪ್ರತ್ಯೇಕ ಅಪಾರ್ಟಮೆಂಟು, ಲೇಔಟು, ಶಾಪಿಂಗ್ ಮಾಲ್‍ಗಳು, ಆಸ್ಪತ್ರೆಗಳ ಸೌಲಭ್ಯಗಳನ್ನು ಮಾತ್ರವಲ್ಲದೆ; ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನೂ ಕಟ್ಟಿಕೊಂಡು, ತಮ್ಮನ್ನು ಇನ್ನಿತರರಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳುತ್ತಿವೆ. ಮತೀಯವಾದದ ಗರಡಿಮನೆ ತುಂಬ ಸುಂದರವಾಗಿ ಕಂಗೊಳಿಸುತ್ತಿದೆ. ಇವುಗಳ ವಾರಸುದಾರರು ರಾಜಕಾರಣಿಗಳು ಅಥವಾ ರಾಜಕಾರಣಿಗಳ ಬಂಧುಗಳು. ಮತೀಯ ದ್ವೇಷದಿಂದ ಸಿಡಿವ ಬಾಂಬರ್‍ಗಳಾಗಿ ಯುವ ಸಮುದಾಯವನ್ನು ತಯಾರು ಮಾಡಿದ ಮೇಲೆ ಸಾಮಾಜಿಕ ಸ್ವಾಸ್ಥ್ಯದ ಮಾತೆಲ್ಲಿ? ಕೋಮುವಾದ ಆರ್ಭಟಿಸುತ್ತಲೇ ಇದೆ- ರಾಜಕಾರಣಿಗಳ ಸಾಕುನಾಯಿಯಂತೆ.

– ವಿನಯಾ ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...

SIR ತಂದಿಟ್ಟ ಸಂಕಷ್ಟ : ದಾಖಲೆ ಹೊಂದಿಸಲು ಅಲೆಮಾರಿಗಳ ಅಲೆದಾಟ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಅನ್‌ಮ್ಯಾಪ್ಡ್ ಮತ್ತು ಅನಾಮಲಿಸ್ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳ ಪರಿಶೀಲನೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 23,45,428 ಅನ್‌ ಮ್ಯಾಪ್ಡ್ (ಪ್ರೊಜೆನಿ ಮ್ಯಾಪಿಂಗ್...