Homeಮುಖಪುಟಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು.

- Advertisement -
- Advertisement -

| ಹುಲಿಕುಂಟೆ ಮೂರ್ತಿ |

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು.

ದು.ಸರಸ್ವತಿ ಅಕ್ಕನ ‘ಜೀವಸಂಪಿಗೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನೂ ಪದ್ಯ ಓದಬೇಕಿತ್ತು. ಪದ್ಯ ಓದುವ ಮೊದಲು ‘ನಾನು ಕವಿಯಲ್ಲ’ ಅಂದು ‘ಎಬಿಸಿಡಿ ಎಂದರೆ..’ ಪದ್ಯ ಓದಿದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಯ್ಯನವರು ‘ಕವಿಯಲ್ಲ ಅಂತನೇ ಒಳ್ಳೇ ಪದ್ಯ ಓದ್ದಲ್ಲೋ’ ಎಂದು ನಕ್ಕಿದ್ದರು. ಅದಾದಮೇಲೆ ಅವರು ಅಧ್ಯಕ್ಷತೆ ವಹಿಸಿದ್ದ, ಕವಿತೆ ಓದಿದ ಅನೇಕ ಕವಿಗೋಷ್ಟಿಗಳಲ್ಲಿ ನಾನೂ ಪದ್ಯ ಓದಿದೆ. ಓದಿದ ನಂತರ ‘ಗುಡ್ ಕಣೋ’ ಅಂದು ಅಷ್ಟಗಲ ನಕ್ಕು ಬೆನ್ನು ತಟ್ಟುತ್ತಿದ್ದರು. ಅವರು ವೇದಿಕೆಯಲ್ಲಿದ್ದ ಕಾರ್ಯಕ್ರಮಗಳಲ್ಲಿ ನಾನು ಮಾತನಾಡಿದ ಮೇಲೆ ಹತ್ತಿರ ಕರೆದು ‘ಗುಡ್’ ಹೇಳದೆ ಇರುತ್ತಿರಲಿಲ್ಲ. ಕನ್ನಡದ ದಲಿತ ಸಾಹಿತಿಗಳೆಲ್ಲರಿಗಿಂತ ಅವರೊಂದಿಗೆ ಹೆಚ್ಚು ವೇದಿಕೆ ಹಂಚಿಕೊಂಡ ಖುಷಿ ನನ್ನದು.

ಕೆ.ಬಿ.ಸಿದ್ದಯ್ಯ ಎಂದರೆ ಥಟ್ಟನೆ ನೆನಪಿಗೆ ಬರುವುದು ‘ಅಲ್ಲಮ’. ಅಲ್ಲಮ ಪ್ರಭು ಕುರಿತು ಅವರು ಮಾತನಾಡಲು ಶುರು ಮಾಡಿದರೆ ನಾವೆಲ್ಲಾ ಬಹಳ ಹಿಂದುಳಿದಿದ್ದೇವೆ ಅನ್ನಿಸುತ್ತಿತ್ತು. ಶರಣ ಚಳವಳಿ ಮತ್ತು ಅಲ್ಲಮನನ್ನು ಅವರು ಅರ್ಥೈಸುತ್ತಿದ್ದ ಕ್ರಮವೇ ವಿಶಿಷ್ಟವಾಗಿತ್ತು. ಅಲ್ಲಮನ ಕುರಿತು ಆಲೋಚಿಸುತ್ತಿದ್ದ ಕೆಲವೇ ವಿದ್ವಾಂಸರಲ್ಲಿ ಕೆ.ಬಿ.ಎಸ್ ವಿಭಿನ್ನವಾಗಿದ್ದರು. ಅವರು ಯಾವ ವಿಷಯವನ್ನಾದರೂ ಮಾತನಾಡುವಾಗ ನೀಳ ಉಸಿರೆಳೆದುಕೊಂಡು ಕಣ್ಮುಚ್ಚಿ ಧ್ಯಾನಿಸಿ ತೂಕ ಹಾಕಿದಂತೆ ಮಾತಾಡುತ್ತಿದ್ದರು. ಅವರ ಮಾತುಗಳನ್ನು ಅವರೇ ಮೆಚ್ಚಿಕೊಳ್ಳುವ ಹಾಗೆ.. ಬೆಳ್ಳಗಿನ ಬಟ್ಟೆ, ಬೆಳ್ಳಗಿನ ಗಡ್ಡ ಮತ್ತು ಬೆಳ್ಳಗಿನ ನಗು ಸಿದ್ದಯ್ಯನವರ ಗುರುತುಗಳು. ಆ ಗುರುತುಗಳೇ ನಮ್ಮಂಥವರನ್ನು ಅವರೆಡೆಗೆ ಸೆಳೆಯುತ್ತಿದ್ದವು.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಟ್ಟಿದ ಎಚ್ಚರದ ಹಾದಿಯಲ್ಲಿ ಸ್ವಾಭಿಮಾನದ ಅಕ್ಷರಗಳ ಕೆಂಡ ಹಾದವರಲ್ಲಿ ಕೆ.ಬಿ.ಸಿದ್ದಯ್ಯ ಒಬ್ಬರು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ, ಎಚ್.ಗೋವಿಂದಯ್ಯ ಮುಂತಾದವರೊಟ್ಟಿಗೆ ದಲಿತ ಹೋರಾಟಕ್ಕೆ ಅಗತ್ಯವಿದ್ದ ಸಾಹಿತ್ಯವನ್ನು ಒದಗಿಸುವ ಕೆಲಸವನ್ನು ಮಾಡಿದರು. ಅವರ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ..’ ಹಾಡು ದಲಿತರ ಬದುಕಿನ ನೋವನ್ನು ಚಿತ್ರಿಸಿತ್ತು. ಕೋಲಾರ ಶೇಷಗಿರಿಯಪ್ಪನ ಕೊಲೆ ಪ್ರಕರಣ, ಬೆಂಡಿಗೇರಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಇಡೀ ರಾಜ್ಯದ ಮೂಲೆಮೂಲೆಯಲ್ಲಿ ಹೋರಾಟ ಕಟ್ಟಿದ ದಸಂಸ ಹಿಂದೆ ಸಿದ್ದಯ್ಯನವರೂ ಇದ್ದರು. ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಜೊತೆಗೆ ಈ ಮಹನೀಯರು ಸೃಷ್ಟಿಸಿದ ಸಾಹಿತ್ಯ ನಾಡಿನ ದಲಿತೇತರರ ಎದೆಗಳಲ್ಲೂ ಜಾತಿವಿನಾಶದ ಕಿಡಿಯನ್ನು ಹೊತ್ತಿಸಿದ್ದು ಸುಳ್ಳಲ್ಲ.

ಇಂಥಾ ಹಾದಿಯಲ್ಲಿ ನಡೆದುಬಂದ ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು. ಅದಾಗಲೇ ಸದ್ದು ಮಾಡುತ್ತಿದ್ದ ಮಂಟೇಸ್ವಾಮಿ, ಮಾದಪ್ಪ, ಮೈಲಾರಲಿಂಗ ಮೊದಲಾದ ಜನಪದ ಮಹಾಕಾವ್ಯಗಳ ಮರು ಓದಿನ ಜೊತೆಗೆ ಸಿದ್ದಯ್ಯನವರ ಸಂಶೋಧನಾತ್ಮಕ ಜನಪದ ಸಂಕಥನಗಳು ಸೇರಿಕೊಂಡವು. ಇದರಿಂದಾಗಿ ದಲಿತ ಬದುಕುಗಳ ಸಾಂಸ್ಕೃತಿಕ ಅಧ್ಯಯನಕ್ಕೆ ಹೊಸ ದಿಕ್ಕು ಗೋಚರಿಸಿತು. ಈ ಮೂಲಕ ಸಿದ್ದಯ್ಯನವರ ಅಭಿಮಾನಿ ಬಳಗವೂ ಹುಟ್ಟಿಕೊಂಡಿತು. ಆ ನಂತರದಲ್ಲಿ ಕರ್ನಾಟಕದ ಸಾಹಿತ್ಯ, ಹೋರಾಟ ಮತ್ತು ರಾಜಕಾರಣದಲ್ಲಿ ಸಿದ್ದಯ್ಯನವರು ಸೇರಿಹೋದರು.

ದಲಿತ ಸಂಘರ್ಷ ಸಮಿತಿಯ ಬಣಗಳು ಹೆಚ್ಚಿದಂತೆ ದಲಿತ ಪ್ರಜ್ಞೆಯ ಮೆದುಳಿನಂತೆ ಕೆಲಸ ಮಾಡುತ್ತಿದ್ದ ದಲಿತ ಹಿರಿಯರೂ ಅಲ್ಲಲ್ಲಿ ಚದುರಿಹೋದರು. ಸಿದ್ದಯ್ಯನವರೂ ದಲಿತರೊಳಗಿನ ಮಾದಿಗ ಸಮುದಾಯಕ್ಕೆ ಸೇರಿದವರಾದ್ದರಿಂದ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ ಪ್ರಾರಂಭಿಸಿದ ‘ಒಳ ಮೀಸಲಾತಿ’ ಹೋರಾಟದ ಭಾಗವಾಗಬೇಕಾಯಿತು. ಅಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ‘ದಲಿತ’ ಅನ್ನುವ ಶಬ್ಧವನ್ನೇ ‘ದಾರಿ ತಪ್ಪಿಸುವ ಶಬ್ದ’ ಎಂದರು. ಅವರ ಮಾತು ನಿಜವೂ ಆಗಿತ್ತು. ದಲಿತ ಸಾಹಿತಿಗಳ ಸಾಲಿನಲ್ಲಿ ಗುರುತಿಸಿಕೊಳ್ಳುವುದರಿಂದ ಅದಲಿತ ಬಂಧುಗಳಿಗೆ ಬೇಸರವಾಗುತ್ತದೆಂದು ವಾದಿಸಿದರು. ಅವರ ಈ ವಾದಕ್ಕೂ ಇತರ ದಲಿತ ಸಾಹಿತಿಗಳೊಂದಿಗಿನ ಅವರ ಮುನಿಸಿಗೂ ಸಂಬಂಧ ಕಲ್ಪಿಸಲಾಯಿತು. ಅದು ನಿಜವೇನೋ ಎಂಬಂತೆ ತಮ್ಮೊಂದಿಗೆ ಸಂಘಟನೆ ಕಟ್ಟಿ, ಬರೆದು, ದಲಿತ ಪ್ರಜ್ಞೆಯನ್ನು ಹಿಗ್ಗಿಸಿದ ಹಿರಿಯರ ಕುರಿತು ಅಸಹನೆ ವ್ಯಕ್ತಪಡಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯ ವಿರೋಧಿ ಮನುಧರ್ಮ ಶಾಸ್ತ್ರದ ಪ್ರತಿಪಾದಕ ಪೇಜಾವರ ಶ್ರೀ ಸಿದ್ದಯ್ಯನವರ ಮನೆಗೆ ಬಂದುಹೋದರು.

ಇದೆಲ್ಲದರ ಜೊತೆಗೆ ಸಿದ್ದಯ್ಯನವರು ತುಮಕೂರಿನಲ್ಲಿ ನೆಲೆಯೂರಿದ್ದು ಒಂದು ರೀತಿಯ ಸೀಮಿತ ವಾತಾವರಣವನ್ನು ಸೃಷ್ಟಿಸಿತು. ಅವರು ತುಮಕೂರನ್ನೇ ನಂಬಿ ಕೂತುಬಿಟ್ಟರು ಅಥವಾ ತುಮಕೂರು ಅವರನ್ನು ಕಟ್ಟಿಹಾಕಿಬಿಟ್ಟಿತು. ಅಲ್ಲಿನ ಕಾಲೇಜೊಂದರಲ್ಲಿ ಅವರು ಉಪನ್ಯಾಸಕ ವೃತ್ತಿ ಮಾಡುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ರಾಜಕೀಯ ನಾಯಕ ಸಿದ್ಧರಾಮಯ್ಯನವರ ಸ್ನೇಹ, ದಲಿತ ಲೋಕದ ಸಾಹಿತ್ಯಕ ಘನತೆ, ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಖಂಡಕಾವ್ಯ… ಇದ್ಯಾವುದೂ ಸಿದ್ದಯ್ಯನವರನ್ನು ಅವರು ಏರಬೇಕಿದ್ದ ಎತ್ತರಕ್ಕೆ ಬೆಳೆಸಲಿಲ್ಲ; ಬೇರೆ ಯಾರಿಗಾದರೂ ಇಂಥಾ ಒಂದೇ ಒಂದು ಸಾಧ್ಯತೆ ಇದ್ದರೂ ಪ್ರಾಧಿಕಾರಗಳ ಅಧ್ಯಕ್ಷಗಿರಿ, ಎಂಎಲ್‍ಸಿ ಪಟ್ಟ ಸಿಕ್ಕಿಬಿಡುತ್ತಿತ್ತು. ಸಿದ್ದಯ್ಯನವರು ಅಂಥಾ ಆಸೆಯನ್ನೇನೋ ಇಟ್ಟುಕೊಂಡಿದ್ದರೂ ಅದಕ್ಕೆ ಬೇಕಾದ ಶ್ರಮ ಹಾಕಲಿಲ್ಲ; ಬದಲಿಗೆ ನಿಷ್ಠುರವಾಗಿ ಮಾತನಾಡುವುದನ್ನು ಹೆಚ್ಚು ಮಾಡಿದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ಅವರಿಂದ ದೂರವೇ ಉಳಿದರು.

ಇತ್ತ ಕರ್ನಾಟಕದಲ್ಲಿ ದಲಿತ ಯುವಜನತೆಯಲ್ಲಿ ಎಡ – ಬಲದ ಅಂತರ, ಪರಸ್ಪರ ಅಸಹನೆ ಹೆಚ್ಚುತ್ತಿದ್ದಂತೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚತೊಡಗಿದವು. ಅಲ್ಲಲ್ಲಿ ಬಿಡಿ ಬಿಡಿ ಪ್ರತಿಭಟನೆಗಳು ನಡೆದರೂ ಎಪ್ಪತ್ತರ ದಶಕದ ಕಾವು ಕಾಣಲೇ ಇಲ್ಲ. ಇದನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ಹಿರಿಯರು ಸಿದ್ದಯ್ಯನವರೂ ಸೇರಿದಂತೆ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾದರು. ದಲಿತ ರಾಜಕಾರಣಿ ಜಿ.ಪರಮೇಶ್ವರ್ ಮೇಲಿನ ಸಿದ್ದಯ್ಯನವರ ಸಿಟ್ಟಿಗೆ ಕೆಲವರು ಎಡ -ಬಲದ ಬೋರ್ಡು ನೇತುಹಾಕಿದರೂ ದಲಿತ ಸಾಹಿತ್ಯ ಮತ್ತು ಚಳವಳಿಯ ವಲಯ ಅದನ್ನೇನೂ ಗಂಭೀರವಾಗಿ ಪರಿಗಣಿಸಲಿಲ್ಲ; ಯಾಕೆಂದರೆ ಪರಮೇಶ್ವರ್ ವಿಷಯದಲ್ಲಿ ಸಿದ್ದಯ್ಯನವರ ಸಿಟ್ಟು ಸಕಾರಣವಾಗಿತ್ತು. ಆನಂತರ ಅದು ‘ಕಾಂಗ್ರೆಸ್ಸನ್ನು ಗೆಲ್ಲಿಸುತ್ತೇವೆ; ಪರಮೇಶ್ವರರನ್ನು ಸೋಲಿಸುತ್ತೇವೆ’ ಎಂಬ ಘೋಷವಾಕ್ಯವಾಗುವ ಅತಿಗೆ ಹೋಯಿತು. ಇದು ಮಾದಿಗ ಸಮುದಾಯದವರೇ ಆದ ಆಂಜಿನೇಯ ಅವರ ಸೋಲಿಗೂ ಕಾರಣವಾಯಿತು. ಸದಾಶಿವ ಆಯೋಗದ ವರದಿಯನ್ನು ಜನತೆಯ ಮುಂದೆ ಇಡಿ; ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಮಾದಿಗ ಬಂಧುಗಳು ನಡೆಸಿದ ಹೋರಾಟಕ್ಕೆ ಸಿದ್ದಯ್ಯ ಮತ್ತು ಸಿದ್ದರಾಮಯ್ಯನವರ ಸ್ನೇಹ ಹೆಗಲು ನೀಡಲಿಲ್ಲ. ಇದಕ್ಕೆ ಆ ಹೋರಾಟದ ಮುಂಚೂಣಿಯಲ್ಲಿದ್ದ ಕೆಲವರು ಬಿಜೆಪಿ ಸಖ್ಯದಲ್ಲಿದ್ದಾರೆ ಅನ್ನುವ ಸಿದ್ದಯ್ಯನವರ ಕೋಪ ಕಾರಣವಿರಬಹುದು. ಸ್ವಾತಂತ್ರ್ಯ ಉದ್ಯಾನದ ಹತ್ತಿರ ನಡೆಯುತ್ತಿದ್ದ ಮಾದಿಗರ ಹೋರಾಟಕ್ಕೆ ಪ್ರತಿದಿನ ಹಾಜರಾಗುತ್ತಿದ್ದ ಸಿದ್ದಯ್ಯನವರನ್ನು ಹೊರಗೇ ಓಡಾಡಿಕೊಂಡು ಹೋಗುವಂತೆ ಮಾಡಿದ್ದು ಆ ಹೋರಾಟಗಾರರ ದೊಡ್ಡ ನಷ್ಟ. ಒಂದು ದಿನ ಪ್ರತಿಭಟನೆಯ ಪೆಂಡಾಲಿನ ಹೊರಗೆ ಬಿಸಿಲಲ್ಲಿ ನಿಂತಿದ್ದ ಸಿದ್ದಯ್ಯನವರು ಆ ಹೋರಾಟ ಕುರಿತು ರೂಪಕದ ಭಾಷೆಯಲ್ಲಿ ಮಾತನಾಡಿದ್ದು ನನಗಿನ್ನೂ ನೆನಪಿದೆ. ಆವತ್ತು ‘ಯಾಕಣ್ಣಾ ಬಿಸಿಲಲ್ಲಿ ನಿಂತಿದಿರಾ’ ಎಂದು ಕೇಳಿದ ನನ್ನ ಕೆನ್ನೆ ಹಿಂಡಿ ನಕ್ಕಿದ್ದರು. ಅದಾದ ನಂತರ ತುಮಕೂರಿನ ಮಾದಿಗ ಬಂಧುಗಳು ನಡೆಸಿದ ಅದೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕಂಡು ಅವರಿಗೆ ಸಮುದಾಯದ ಮೇಲಿದ್ದ ಕಾಳಜಿ ದೊಡ್ಡದು ಎಂದು ನಾವು ಗೆಳೆಯರು ಮಾತಾಡಿಕೊಂಡಿದ್ದೆವು.

ಸಿದ್ದಯ್ಯನವರು ಎಲ್ಲರಂತೆ ಮಿತಿಗಳಿದ್ದ ಮನುಷ್ಯ. ಸಾಹಿತ್ಯ ಮತ್ತು ಚಳವಳಿ ಎರಡರಲ್ಲಿ ‘ಸಾಹಿತಿ’ ಎಂದು ಗುರ್ತಿಸಿಕೊಳ್ಳಲು ಅವರು ಆಸೆ ಪಡುತ್ತಿದ್ದ ಹಾಗೆ, ಕನ್ನಡ ಸಾಹಿತ್ಯ ಸಮಾಜ ಅವರನ್ನು ಒಬ್ಬ ‘ಸಾಹಿತಿ’ಯಾಗಿಯೇ ನೋಡಲು ಆಸೆ ಪಡುತ್ತಿತ್ತು. ಇದಕ್ಕೆ ಕಾರಣ ಅವರಿಗಿದ್ದ ಓದಿನ ವಿಸ್ತಾರ ಮತ್ತು ಕಾವ್ಯದ ಮೇಲಿದ್ದ ಆಕರ್ಷಣೆ. ಇದರಿಂದಾಗಿ ಕೇವಲ ಬೀದಿಗಳಲ್ಲಿ ಧಿಕ್ಕಾರ ಕೂಗಿಕೊಂಡು ಬದುಕು ಮುಗಿಸುತ್ತಿದ್ದ ನೂರಾರು ದಲಿತ ಯುವಕ ಯುವತಿಯರನ್ನು ಚಳವಳಿ, ಸಾಹಿತ್ಯ ಮತ್ತು ಅಕಾಡೆಮಿಕ್ ನೆಲೆಗಳಲ್ಲಿ ನಡೆಯುವಂತೆ ನೋಡಿಕೊಂಡರು. ಇದರ ಪರಿಣಾಮವಾಗಿ ಅವರನ್ನು ಪ್ರೀತಿಸುವ ದಲಿತ ಹುಡುಗ ಹುಡುಗಿಯರು ಹೋರಾಟ, ಸಾಹಿತ್ಯ ಎರಡರಲ್ಲೂ ಸಮರ್ಥವಾಗಿ ಹೆಜ್ಜೆ ಇಡುವಂತಾಗಿದೆ.

ಈಗ ಸಿದ್ದಯ್ಯನವರು ಕನ್ನಡ ಸಾಹಿತ್ಯಕ್ಕೆ ಹೇಗೋ ಹಾಗೆ ದಲಿತ ಚಳವಳಿಯ ಹಾದಿಯೂ ಆಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 30 ಸಾವು, 160 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ನ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ವೇಳೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ...

ನಾಳೆ ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಆತ್ಮಕಥೆ ಬಿಡುಗಡೆ

ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್‌ ಅವರ 'ನಮ್ಮಹಟ್ಟಿ' ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್‌ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು....

‘ತಿರುಪತಿ ಲಡ್ಡುಗಳಲ್ಲಿ ರಾಸಾಯನಿಕಗಳಿಂದ ಮಾಡಿದ ತುಪ್ಪ ಬಳಸಲಾಗುತ್ತಿತ್ತು’: ವೈಎಸ್ಆರ್ಸಿಪಿ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಆರೋಪ

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ. ಕರ್ನೂಲು...

ಜಲಂಧರ್‌ನ ಗುರುದ್ವಾರದ ಹೊರಗೆ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಹಾಡಹಗಲೇ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.  ಈ ಘಟನೆ ಬೆಳಿಗ್ಗೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು...

ದೆಹಲಿ: ಜಲ ಮಂಡಳಿ ತೋಡಿದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶಿಸಿದ ಸರ್ಕಾರ 

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ) ನಿರ್ಮಾಣ ಕಾರ್ಯಕ್ಕಾಗಿ ಅಗೆದ ಹೊಂಡಕ್ಕೆ ಬೈಕ್ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ದೆಹಲಿ...

2025ರ ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಜನ ಸುರಾಜ್ ಪಕ್ಷದಿಂದ ಅರ್ಜಿ: ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್ 

2025 ರ ಬಿಹಾರ ವಿಧಾನಸಭಾ ಚುನಾವಣೆಯ ನಡವಳಿಕೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ರಾಜಕೀಯ...

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...

1.50 ಕೋಟಿ ರೂ. ಐಟಿ ದಂಡ ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದಾಯ...

ಮೇಘಾಲಯ ಗಣಿ ಸ್ಫೋಟ: ಸಾವನ್ನಪ್ಪಿದ ಮೂವರು ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಗುವಾಹಟಿ: ಮೇಘಾಲಯದ ಪಕ್ಕದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಸಾವನ್ನಪ್ಪಿದ ಅಸ್ಸಾಂ ರಾಜ್ಯದ ಮೂವರು ಕಾರ್ಮಿಕರ ಕುಟುಂಬಗಳಿಗೆ  ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ, ಸಂತ್ರಸ್ತರು...