Homeಅಂಕಣಗಳುಎರಡೂ ಮ್ಯಾನಿಫೆಸ್ಟೊಗಳಿಗೆ ಮನ್ನಣೆ ಸಿಗಲಿ...

ಎರಡೂ ಮ್ಯಾನಿಫೆಸ್ಟೊಗಳಿಗೆ ಮನ್ನಣೆ ಸಿಗಲಿ…

- Advertisement -
- Advertisement -

ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಇವುಗಳ ಸಂಯುಕ್ತ ಸರ್ಕಾರ ಈಗ ಅಸ್ತಿತ್ವಕ್ಕೆ ಬಂದಿದೆ. ಜಾತ್ಯಾತಿತ ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ವಿನಂತಿಸಿಕೊಂಡಿತು. ಈ ಕರಾರಿನ ಪ್ರಕಾರವೇ ಈಗ ಸರ್ಕಾರ ನಡೆಯುತ್ತಿದೆ.
‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಭಾಜಪ ಈ ಸಂಯುಕ್ತ ಸರಕಾರದ ಬಗೆಗೆ ವಿಷ ಕಾರುತ್ತಿದೆ. ಅದು ಭಾಜಪಗೆ ಸಹಜ. ಯಡಿಯುರಪ್ಪನವರು ‘ತೀನ್‍ದಿನ್‍ಕಾ ಸುಲ್ತಾನ್’ ಆಗಿ ಬಹುಮತವಿಲ್ಲದೆ, ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಹೋಗಬೇಕಾದ ದುಸ್ಥಿತಿ ಬಂದಿದ್ದರಿಂದ ಅವರಿಗೆ ಮುಖ ಭಂಗವಾಗಿದೆ. ಅದಕ್ಕಾಗಿ ಯಡಿಯುರಪ್ಪನವರೂ, ಭಾಜಪದ ಇತರ ಶಾಸಕರೂ ಹೊಸ ಸರ್ಕಾರದ ಬಗೆಗೆ ಮನಸೋ ಇಚ್ಛೆ ಮಾತಾನಾಡುತ್ತಿದ್ದಾರೆ. ಅದೂ ಅವರಿಗೆ ಸಹಜ.
ಆದರೆ ಆಡಳಿತ ಪಕ್ಷಗಳ ಶಾಸಕರೇ ಸರ್ಕಾರದ ಕಾಲು ಹಿಡಿದು ಎಳೆಯುವ ಕಾರ್ಯದಲ್ಲಿ ತೊಡಗಿರುವುದು ಅವರ ಬೇಜವಾಬ್ದಾರಿ ಪ್ರವೃತ್ತಿಯನ್ನು ತೋರಿಸುತ್ತದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಮಾದ್ಯಮಗಳು ಕೂಡ ಈ ಸರ್ಕಾರದ ವಿರುದ್ಧದ ಅನವಶ್ಯಕ ಟೀಕೆಗಳಿಗೆ ಹೆಚ್ಚಿನ ಮಹತ್ವ ನೀಡಿ ಪ್ರಚಾರ ಮಾಡುತ್ತಿರುವುದು ಅಪೇಕ್ಷಣೀಯವಲ್ಲ.
‘ಕುಮಾರಸ್ವಾಮಿಯವರು ಸರ್ಕಾರವನ್ನು ರಚಿಸಲಿ, ಅವರಿಗೆ ನಾವು ಬೆಂಬಲ ನೀಡುತ್ತೇವೆ’ ಎಂದು ಕಾಂಗ್ರೆಸ್ ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಎಲ್ಲ ಅಧಿಕಾರ ನೀಡಬೇಕು, ಕಾಂಗ್ರೆಸ್ ನಿಷ್ಕ್ರಿಯವಾಗಬೇಕು ಎಂಬಂತೆ ಅರ್ಥೈಸಬಾರದು. ಮೈತ್ರಿ ಧರ್ಮಕ್ಕೆ ಪಾಲಿಸುತ್ತಾ ಎರಡೂ ಪಕ್ಷಗಳ ಮ್ಯಾನಿಫೆಸ್ಟೋಗಳಿಗೆ ಮನ್ನಣೆ ನೀಡಬೇಕು. ಎರಡೂ ಪಕ್ಷಗಳು ಚುನಾವಣಾ ವೇಳೆಯಲ್ಲಿ ಘೋಷಿಸಿರುವ ಮುಖ್ಯ ಭರವಸೆಗಳನ್ನು ಕಾರ್ಯರೂಪಕ್ಕಿಳಿಸುವ ಮಾರ್ಗಗಳನ್ನು ಹುಡುಕಬೇಕು. ಎರಡೂ ಪಕ್ಷಗಳೂ ಜನರ ಮನ್ನಣೆ ಪಡೆಯಬೇಕು ಎಂಬ ಧ್ಯೇಯ ಇಟ್ಟುಕೊಂಡು ಸರ್ಕಾರ ಮುನ್ನಡೆಯಬೇಕಾಗುತ್ತದೆ.
ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಘೋಷಣೆ ಮಾಡಿದ್ದಾರೆ. ಅದು ಕಷ್ಟ ಸಾಧ್ಯವಾದ ಕೆಲಸ ಎಂಬುದು ಉಭಯ ಪಕ್ಷಗಳಿಗೂ ಗೊತ್ತು. ರೈತರ ಆಗ್ರಹಕ್ಕೆ ತುತ್ತಾಗಲು ಕುಮಾರಸ್ವಾಮಿಗಳು ತಯಾರಿಲ್ಲವಾದ್ದರಿಂದ ಅವರ ಮಾತನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳೂ ಇದಕ್ಕೆ ಒಪ್ಪಿಕೊಂಡಿವೆ. ಅದರಂತೆಯೇ ಕಾಂಗ್ರೆಸ್ ತಾನು ಆರಂಭಿಸಿದ ಜನಪ್ರಿಯ ಕಾರ್ಯಕ್ರಮಗಳನ್ನು ಈ ಸರ್ಕಾರ ಮುಂದುವರೆಸಬೇಕು ಎಂದು ಒತ್ತಾಯ ಹಾಕುತ್ತಿದೆ. ಅದನ್ನು ಕಾರ್ಯಗತಗೊಳಿಸುವುದು ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿCommon Minimum Programme ಏನಿರಬೇಕು ಎಂಬುದನ್ನು ಗೊತ್ತುಮಾಡಿ ಅದರಂತೆ ನಡೆಯುವುದು ಸೂಕ್ತ.
ಕುಮಾರಸ್ವಾಮಿ ತಾವು ಹೇಗೊ ಅಧಿಕಾರಕ್ಕೆ ಬರುವುದಿಲ್ಲವೆಂದು ತಿಳಿದು ರೈತರ ಸಾಲಮನ್ನಾ ವಿಚಾರವನ್ನು ಚುನಾವಣಾ ಪ್ರಚಾರ ಕಾಲದಲ್ಲಿ ಪ್ರಸ್ತಾಪಿಸಿರಬಹುದು. ಅಕಸ್ಮಾತ್ ಅಧಿಕಾರಕ್ಕೆ ಬಂದಿರುವುದರಿಂದ ಅದನ್ನು ಕಾರ್ಯಗತ ಮಾಡಿ ತೋರಿಸಲೇಬೇಕಾದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ಇದನ್ನು ಹೇಗೆ ನಿಭಾಯಿಸುವರೆಂಬುದನ್ನು ಕುತೂಹಲದಿಂದ ಕರ್ನಾಟಕದ ಜನತೆ ಎದುರು ನೋಡುತ್ತಿದೆ.
‘ಎತ್ತು ಏರಿಗೆ ಎಳೆಯಿತು, ಎಮ್ಮೆ ನೀರಿಗಿಳಿಯಿತು’. ಎಂಬ ರೀತಿ ಈ ಸಂಯುಕ್ತ ಸರ್ಕಾರ ಮೂರಾಬಟ್ಟೆ ಯಾಗಬೇಕೆಂದು ವಿರೋಧಪಕ್ಷ ಆಶಿಸುತ್ತದೆ. ವಿರೋಧ ಪಕ್ಷದ ಈ ಆಶಯವನ್ನು ಸುಳ್ಳು ಮಾಡುವುದಾಗಿ ಅಧಿಕಾರಾರೂಢ ಪಕ್ಷಗಳು ಶಪಥ ತೊಡಬೇಕು. ಎಲ್ಲ ಶಾಸಕರಿಗೂ, ಮಂತ್ರಿಗಳಿಗೂ ಒಳ್ಳೆಯ ಆಡಳಿತ ನೀಡಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಬೇಕು, ಭ್ರಷ್ಟಾಚಾರರಹಿತ ಆಡಳಿತವನ್ನು ಜಾರಿಗೆ ತರಬೇಕು ಎಂಬ ಕಾತರ ಇರಬೇಕು. ಯಾವುದೇ ಕಾರಣದಿಂದ ಈ ಉಭಯ ಪಕ್ಷಗಳು ಕಚ್ಚಾಡಿಕೊಂಡು ಬೀದಿಗೆ ಬೀಳಬಾರದು. ನಮ್ಮ ಶಾಸಕರಲ್ಲಿ, ಮಂತ್ರಿಗಳಾಗಿರುವವರಲ್ಲಿ ಅನೇಕರಿಗೆ ತಮ್ಮ ಹೊಣೆಗಾರಿಕೆ ಏನು ಎಂಬುದು ತಿಳಿದಿಲ್ಲ. ರಾಜ್ಯಾಡಳಿತ ಮಕ್ಕಳ ಆಟವಲ್ಲ ಎಂಬ ಅರಿವು ಅವರಲ್ಲಿ ಮೂಡಬೇಕು. ಅಧಿಕಾರ ಹಂಚಿಕೆಯೆಂಬುದು ಪಿತ್ರಾರ್ಜಿತ ಸ್ವತ್ತುಗಳ ಹಂಚಿಕೆಯಂತಲ್ಲ ಎಂಬುದನ್ನು ಉಭಯರೂ ಅರ್ಥಮಾಡಿಕೊಳ್ಳಬೇಕು.
ಕುಮಾರಸ್ವಾಮಿಯವರ ಸರ್ಕಾರ ರೈತರ ಸಾಲಮನ್ನಾದಂತಹ ಕ್ಲಿಷ್ಟವಾದ ಸಮಸ್ಯೆಗಳನ್ನು ತನ್ನ ಆಡಳಿತಾವಧಿಯಲ್ಲಿ ಮತ್ತೆ ಸೃಷ್ಟಿಸಬಾರದು. ರೈತ ಸಂಘಕ್ಕೆ ರೈತರ ಸಾಲಮನ್ನಾ ಧ್ಯಾನ ಬಿಟ್ಟರೆ ಇತರೆ ವಿಚಾರಗಳ ಬಗ್ಗೆ ಅವರು ಲಕ್ಷ್ಯ ಕೊಡುವುದಿಲ್ಲ. ರೈತರ ಸಂಘಟನೆಗಳ ನಾಯಕತ್ವದಲ್ಲಿ ಬಹಳಷ್ಟು ಮಂದಿ ಜಮೀನ್ದಾರರು. ಇವರು ರೈತಸಂಘಕ್ಕೂ ಸದಸ್ಯರು, ಬೇರೆ ಬೇರೆ ರಾಜಕೀಯ ಪಾರ್ಟಿಗಳಿಗೂ ಸದಸ್ಯರು. ರೈತ ಸಂಘಟನೆಗಳಲ್ಲಿ ನುಸುಳಿರುವ ಈ ಪಟ್ಟ ಭದ್ರ ಹಿತಾಸಕ್ತಿಗಳು, ರೈತ ಸಂಘಕ್ಕೆ ಸದಸ್ಯರಾಗುವ ಏಕೈಕ ಉದ್ದೇಶ, ಸಾಲಮನ್ನಾ ಮೊದಲುಗೊಂಡು ರೈತರ ಹೆಸರಿನಲ್ಲಿ ದೊರಕಬಹುದಾದ ಎಲ್ಲ ಸೌಕರ್ಯಗಳನ್ನೂ ತಮ್ಮದಾಗಿಸಿಕೊಳ್ಳುವುದಲ್ಲದೆ ಬೇರೇನೂ ಇಲ್ಲ. ಈ ವ್ಯವಸ್ಥೆಯಲ್ಲಿ ಸರ್ಕಾರದಿಂದ ಬಡ ರೈತರಿಗೆ ಪುಡಿಕಾಸು ಸಿಕ್ಕಿದರೆ ಈ ಛದ್ಮ ವೇಷದ ಸ್ವಾರ್ಥಿ ಜಮೀನ್ದಾರರಿಗೆ ದೊಚಲು ಸಿಗುವುದು ಸಿಂಹಪಾಲು.
ಪ್ರತಿವರ್ಷ ಸ್ವಾರ್ಥಿಗಳ ಕಿಸೆತುಂಬುವ ಈ ಸಾಲಮನ್ನಾ ಪ್ರಹಸನವನ್ನು ಈ ಸರ್ಕಾರ ಕೊನೆಗಾಣಿಸಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನಿರ್ಧರಿಸಬೇಕು. ರೈತರು ಬೆಳೆದ ಬೆಳೆ ನೇರವಾಗಿ ಗ್ರಾಹಕನಿಗೆ ದೊರಕುವಂತೆ ಮಾಡಿ ದಳ್ಳಾಳಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಬೇಕು.
ರೈತ ಸಂಘಕ್ಕೆ ಒಂದು ಸೂಚನೆ. ರೈತ ಸಂಘ ಒಂದು ರಾಜಕೀಯ ಪಕ್ಷವಾಗಿಯೂ ಬೆಳೆಯಬೇಕು. ಹಾಗೆಯೇ ಅದು ಒಂದು ರೈತರ ಹಿತಕಾಯುವ ಹೋರಾಟ ಸಮಿತಿಯಾಗಿಯೂ ಕೆಲಸ ಮಾಡಬೇಕು. ರೈತ ಸಂಘಕ್ಕೆ ಸೇರುವವರು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸದಸ್ಯರಾಗಿರಬಾರದು ಎಂಬ ನಿಯಮವನ್ನು ಜಾರಿಗೆ ತರಬೇಕು. ಹೀಗಾದಾಗ ಒಂದಲ್ಲ ಒಂದು ದಿನ ಕರ್ನಾಟಕದಲ್ಲಿ ರೈತರ ರಾಜ್ಯ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ರಾಜ್ಯದ ರೈತ ಸಂಘ ಗಂಭೀರವಾಗಿ ವಿಚಾರ ಮಾಡಿ ಕೂಡಲೇ ಒಂದು ನಿರ್ಧಾರಕ್ಕೆ ಬರಬೇಕು.

– ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...