Homeಕರ್ನಾಟಕಕಾರ್ಪೊರೇಟ್ ಜಗತ್ತಿನ ಸಂಪತ್ತು, ಬಿಗ್ ಬಾಸ್ ಹನುಮಂತು, ಟ್ರ್ಯಾಪ್ ಆದ ಕೆಲವು ಪ್ರಗತಿಪರ ಚಿಂತಕರು...

ಕಾರ್ಪೊರೇಟ್ ಜಗತ್ತಿನ ಸಂಪತ್ತು, ಬಿಗ್ ಬಾಸ್ ಹನುಮಂತು, ಟ್ರ್ಯಾಪ್ ಆದ ಕೆಲವು ಪ್ರಗತಿಪರ ಚಿಂತಕರು…

- Advertisement -
- Advertisement -

ಕಾರ್ಪೊರೇಟ್ ಜಗತ್ತಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಅತ್ಯಂತ ಸಂವೇದನಾಶೀಲತೆ, ಚಲನಶೀಲತೆ, ಪ್ರಬುದ್ಧತೆ ಬೇಕಾಗುತ್ತದೆ. ಅವರುಗಳು ಅತ್ಯಂತ ನಾಜೂಕಾಗಿ ಇಡೀ ವ್ಯವಸ್ಥೆಯನ್ನು ಜನರ ಬೆಂಬಲದೊಂದಿಗೆ ಆಪೋಶನ ತೆಗೆದುಕೊಳ್ಳುತ್ತಾರೆ…

ಬಿಗ್ ಬಾಸ್ ಎಂಬ ಒಂದು ಕಾರ್ಯಕ್ರಮದ ಪರಿಕಲ್ಪನೆ ಮತ್ತು ವಿನ್ಯಾಸವೇ ಹುಚ್ಚುತನದ ಪರಮಾವಧಿ. ಮೌಲ್ಯಗಳ ಅಧ್ಹ:ಪತನ, ಮನರಂಜನೆಯ ಹೆಸರಿನ ಆರ್ಥಿಕ ದರೋಡೆ ಮತ್ತು ಸಾಮಾನ್ಯ ಜನರ ಮುಗ್ಧತೆ ಮತ್ತು ಮೂರ್ಖತನದ ದುರುಪಯೋಗ. ಅಂತಹ ಕಾರ್ಯಕ್ರಮದಲ್ಲಿ ಯಾರೇ ಭಾಗವಹಿಸಿದ್ದರೂ, ಯಾರೇ ಗೆದ್ದರೂ ಅಂತಹ ವ್ಯತ್ಯಾಸವೇನು ಆಗುವುದಿಲ್ಲ…..

ಗ್ರಾಮೀಣ ಭಾಗದ, ಮುಗ್ಧ ಮನಸ್ಸಿನ, ಅತ್ಯಂತ ತಳ ಸಮುದಾಯದ, ಬಡತನದಿಂದ ಬೆಳೆದು ಬಂದ ಕುರಿಗಾಹಿ ಹನುಮಂತು ಗೆದ್ದ ಮಾತ್ರಕ್ಕೆ ಇಡೀ ಕಾರ್ಯಕ್ರಮ ಸಾರ್ಥಕತೆ ಪಡೆಯಿತು. ಆತ ಗೆದ್ದಿದ್ದು ಈ ಸಮಾಜ ಬಹುದೊಡ್ಡ ಪರಿವರ್ತನೆಯ ಹಾದಿಯಲ್ಲಿದೆ. ಬಡವರೂ ಆ ಬೃಹತ್ ಜನಪ್ರಿಯತೆಯ ಮನರಂಜನಾ ಕಾರ್ಯಕ್ರಮವನ್ನು ಗೆಲ್ಲಬಹುದು ಮತ್ತು ನಗರದ ಕೃತಕ ಸ್ವಭಾವದ, ಮುಖವಾಡ ಮನಸ್ಥಿತಿಯ ಜನರನ್ನು ಮೀರಿ ಸಾರ್ವಜನಿಕ ಬೆಂಬಲದ ಆಧಾರದ ಮೇಲೆ ಹನುಮಂತು ಗೆಲುವು ಒಂದು ದೊಡ್ಡ ಸಾಮಾಜಿಕ ಕ್ರಾಂತಿ, ಬಂಡವಾಳ ಶಾಹಿ ವ್ಯವಸ್ಥೆ ಅಥವಾ ಶ್ರೀಮಂತರಿಗೆ ಕೊಟ್ಟ ಹೊಡೆತ ಎಂಬುದಾಗಿ ಕೆಲವು ಪ್ರಗತಿಪರ ಚಿಂತಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವುದನ್ನು ನೋಡಿದೆ……

ಮೇಲ್ನೋಟಕ್ಕೆ ಇದು ಸರಿ ಅನಿಸಬಹುದು. ಕೆಲವು ಅಲ್ಲಿನ ಸೋತ ಸ್ಪರ್ಧಿಗಳ ಅಸೂಯೆ ಮತ್ತು ಅವರ ಅಹಂಕಾರದ ಮಾತುಗಳು ಹಾಗು ಬಡವರ ಬಗೆಗಿನ ತಿರಸ್ಕಾರ ಇದನ್ನು ದೃಢಪಡಿಸುತ್ತದೆ. ಆದರೆ ಹನುಮಂತು ಗೆಲುವು ಈ ಕಾರ್ಪೊರೇಟ್ ಸಂಸ್ಕೃತಿ ಇಂತಹ ಮನಸ್ಸುಗಳಿಗೆ ಹಾಕುವ ಬಿಸ್ಕೆಟ್ ರೀತಿಯ ಅಮಲು ಎಂಬುದನ್ನು ಮರೆಯಬಾರದು. ಏಕೆಂದರೆ ಹೀಗೆ ಒಮ್ಮೊಮ್ಮೆ ಗ್ರಾಮೀಣ ಭಾಗದ, ಶೋಷಿತ ಸಮುದಾಯದ ಮುಗ್ಧ ವ್ಯಕ್ತಿಗಳನ್ನು ಉಪಯೋಗಿಸಿಕೊಂಡು ಕಾರ್ಪೊರೇಟ್ ಸಂಸ್ಕೃತಿ ಮುಂದೆ ಭವಿಷ್ಯದಲ್ಲಿ ತನ್ನ ವಿರಾಟ್ ರೂಪವನ್ನು ಪ್ರದರ್ಶಿಸುತ್ತದೆ…..

ಈ ಬಂಡವಾಳಶಾಹಿ ವ್ಯವಸ್ಥೆಯ ಚಿಂತನೆ ಹೇಗಿರುತ್ತದೆ ಎಂದರೆ ಅದು ಎಂದೂ ನೇರ ಘರ್ಷಣೆಗೆ ಇಳಿಯುವುದಿಲ್ಲ. ಜನರ ಮನಸ್ಥಿತಿಯನ್ನು ನೋಡಿಕೊಂಡು, ಅವರದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಾ, ಅವರ ಮನಸ್ಸುಗಳನ್ನು ನಿಯಂತ್ರಿಸಿ, ಅನಿವಾರ್ಯಗೊಳಿಸಿ, ದೇಹವನ್ನು ನಿರ್ವೀರ್ಯಗೊಳಿಸಿ, ಕೊನೆಗೆ ಭಾವನಾತ್ಮಕವಾಗಿ ತನ್ನ ಗುಲಾಮರನ್ನಾಗಿ ಮಾಡಿಕೊಳ್ಳುವ ವ್ಯವಸ್ಥಿತ ಸಂಚು ಕಾರ್ಪೊರೇಟ್ ಉದ್ಯಮಗಳು ಮಾಡುತ್ತವೆ. ಅದರ ಒಂದು ಭಾಗವೇ ಬಿಗ್ ಬಾಸ್ ಎಂಬ ಕಾರ್ಯಕ್ರಮ ಮತ್ತು ಅದರಲ್ಲಿ ಹನುಮಂತು ಗೆದ್ದಿದ್ದು….

ಅತಿ ಬುದ್ದಿವಂತ ಯುವಕರನ್ನು, ಅತಿಹೆಚ್ಚು ಸಂಬಳ ನೀಡಿ ಉದ್ಯೋಗಿಗಳಾಗಿ ಮಾಡಿಕೊಳ್ಳುವ ಜಗತ್ತಿನ ಈ ಕಾರ್ಪೊರೇಷನ್ ಸಂಸ್ಕೃತಿ ಇಡೀ ವಿಶ್ವದ ಮೇಲೆ ಬಿಗಿಹಿಡಿತ ಸಾಧಿಸುತ್ತಿರುವುದು, ಇದರ ಸಂಕೇತವೇ ಈ ರೀತಿಯ ಕಾರ್ಯಕ್ರಮಗಳು‌. ಇದೊಂದು ಸಾಂಕೇತಿಕತೆ ಮಾತ್ರ. ಇದರ ಒಳಗಡೆ ಇನ್ನೂ ಆಳವಾದ ಸೂಕ್ಷ್ಮತೆ ಅಡಗಿರುತ್ತದೆ…..

ನೀವೇ ಗಮನಿಸಿ, ಬಿಗ್ ಬಾಸ್ ನಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಗಳು ಅಧ್ಯಯನ ನಿರತರಲ್ಲ, ಬಹುದೊಡ್ಡ ಅನುಭವಿಗಳಲ್ಲ, ಸಮಾಜ ಸುಧಾರಕರಲ್ಲ, ಚಿಂತಕರಲ್ಲ, ದಾರ್ಶನಿಕರಲ್ಲ, ಉದ್ಯಮಿಗಳಲ್ಲ, ಯಾವುದೇ ವೃತ್ತಿಯ ಶ್ರೇಷ್ಠ ಸಾಧಕರು ಅಲ್ಲ, ಚಿಂತನಶೀಲರೂ ಅಲ್ಲ. ಬಹುತೇಕ ಕಿರುತರೆ, ಚಲನಚಿತ್ರ ರಂಗ ಅಥವಾ ಸಾಮಾಜಿಕ ಜಾಲತಾಣದ ಕ್ರೇಜಿ ಬಾಯ್ಸ್ ಅಂಡ್ ಗರ್ಲ್ಸ್ ಗಳೇ ಆಗಿರುತ್ತಾರೆ. ಅವರಿಗೆ ಈ ಸಮಾಜದ ಆಗುಹೋಗುಗಳ ಯಾವ ಸೂಕ್ಷ್ಮತೆಯ ಅರಿವೂ ಇರುವುದಿಲ್ಲ, ಜವಾಬ್ದಾರಿಯೂ ಇರುವುದಿಲ್ಲ. ಕೇವಲ ತಾವು ಬದುಕಿನಲ್ಲಿ ಯಶಸ್ವಿಯಾಗಬೇಕು, ಅದಕ್ಕಾಗಿ ಕೆಲವು ಮನರಂಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮನಸ್ಥಿತಿ ಮಾತ್ರ ಇರುತ್ತದೆ……

ಇದು ಕುರಿಗಾಹಿ ಹನುಮಂತು ಅವರಿಗೂ ಸಹ ಅನ್ವಯಿಸುತ್ತದೆ. ಏಕೆಂದರೆ ಆತ ಒಬ್ಬ ಮುಗ್ಧ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಮುಗ್ಧತೆಯಷ್ಟೇ ಮೂರ್ಖತನ ಮತ್ತು ಸ್ವಾರ್ಥವೂ ಅಡಗಿರುತ್ತದೆ‌. ಅದು ವೈಯಕ್ತಿಕ ಮಟ್ಟದಲ್ಲಿದೆ ನಿಜ, ಆದರೆ ಈ ರೀತಿಯ ಕಾರ್ಯಕ್ರಮದಲ್ಲಿ ಅತ್ಯಂತ ಸಣ್ಣತನ, ದ್ವೇಷ, ಅಸೂಯೆ, ಹಿಂಸೆ, ಕ್ರೌರ್ಯ, ಮೌಢ್ಯ, ಅಜ್ಞಾನ ಎಲ್ಲವನ್ನೂ ಕೆರಳಿಸಿ, ಜನರಿಗೆ ಮನರಂಜಿಸಿ, ಅದರಲ್ಲಿ ಹನುಮಂತು ಗೆದ್ದರೂ ಒಂದೇ, ಇತರರು ಗೆದ್ದರೂ ಒಂದೇ. ಇದೆಲ್ಲವೂ ಕಾರ್ಪೊರೇಟ್ ಲಾಭಿಗಳ ವಂಚಕ ಪ್ರಪಂಚದ ವಿವಿಧ ಮುಖಗಳು ಮಾತ್ರ….

ಇವತ್ತು ಹನುಮಂತುವನ್ನು ಗೆಲ್ಲಿಸಿ, ನಾಳೆ ಹುಚ್ಚ ವೆಂಕಟ್ ಅನ್ನು ಗೆಲ್ಲಿಸಿ, ಮತ್ತೊಮ್ಮೆ ಪ್ರಥಮನನ್ನು ಗೆಲ್ಲಿಸಿ, ಇನ್ನೊಮ್ಮೆ ಇನ್ಯಾರನ್ನೋ ಗೆಲ್ಲಿಸಿ ಹೀಗೆ ಆಟ ಮುಂದುವರೆಯುತ್ತಲೇ ಇರುತ್ತದೆ. ಇಡೀ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾರತೀಯ ಮೌಲ್ಯಗಳಾಗಲಿ, ಮಾನವೀಯ ಮೌಲ್ಯಗಳಾಗಲಿ, ಸಾಮಾಜಿಕ ಮೌಲ್ಯಗಳಾಗಲಿ, ವ್ಯಕ್ತಿಗತ ಮೌಲ್ಯಗಳಾಗಲಿ, ಭವಿಷ್ಯದ ಕನಸುಗಳಾಗಲಿ ಎಲ್ಲಿವೆ ಹುಡುಕಿ ನೋಡಿ. ಸಮಾಜದ ಮೇಲೆ ಈ ಕಾರ್ಯಕ್ರಮ ಬೀರುತ್ತಿರುವ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಪಟ್ಟಿ ಮಾಡಿ ನೋಡಿ…..

ಅಷ್ಟೇ ಅಲ್ಲ, ನಿರೂಪಣೆ ಮಾಡುವ ಖ್ಯಾತ ಚಿತ್ರನಟ ಸಹ ಇಡೀ ಕಾರ್ಯಕ್ರಮವನ್ನು ತನ್ನ ಅಹಂಮಿಕೆಯಲ್ಲಿ, ತಾನೊಬ್ಬ ಅತಿಮಾನುಷ ವ್ಯಕ್ತಿಯಂತೆ, ರಿಂಗ್ ಮಾಸ್ಟರ್ ನಂತೆ, ಒಳಗಿರುವ ವ್ಯಕ್ತಿಗಳನ್ನು ಪ್ರಾಣಿಗಳಂತೆ ಹಿಂಸಿಸಿ, ಚಿತ್ರಿಸಿ, ಬುದ್ಧಿ ಹೇಳಿ ಕಲಿಸಿ, ತಾನು ಮಾತ್ರ ದೇವದೂತನಂತೆ, ತನ್ನ ಕುಟುಂಬ ಅತ್ಯಂತ ಶ್ರೇಷ್ಠ ಎಂಬಂತೆ ಬಿಂಬಿಸಿಕೊಂಡು ನಿರೂಪಿಸುತ್ತಾರೆ. ಅದಕ್ಕೆ ವಿವಿಧ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ವಿಚಿತ್ರ ರೀತಿಯಲ್ಲಿ ಸಮರ್ಥನೆ ಅಥವಾ ವಿರೋಧ ವ್ಯಕ್ತಪಡಿಸುತ್ತವೆ…..

ಜೊತೆಗೆ ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ಹೊರಗೆ ಬಂದ ನಂತರ ಮಹಾನ್ ಸಾಧಕರಂತೆ ಸಮಾಜದ ಕೆಲವರು ಮತ್ತು ಮಾಧ್ಯಮಗಳು ಅವರನ್ನು ಸ್ವಾಗತಿಸುತ್ತಾರೆ, ಪ್ರಶ್ನೆಗಳನ್ನು ಕೇಳುತ್ತಾರೆ. ಒಬ್ಬ ಜಾಡಮಾಲಿ, ಒಬ್ಬ ಕೂಲಿ, ಒಬ್ಬ ರೈತ, ಒಬ್ಬ ಉಪಾಧ್ಯಾಯ, ಒಬ್ಬ ವೈದ್ಯ, ಒಬ್ಬ ಸಾಹಿತಿ, ಒಬ್ಬ ಕಥೆಗಾರ, ಒಬ್ಬ ಪತ್ರಕರ್ತ ಹೀಗೆ ಸಾಮಾನ್ಯ ವ್ಯಕ್ತಿಗಳಿಗಿಂತ ಯಾವುದೇ ರೀತಿಯ ವಿಶೇಷ ವೈಶಿಷ್ಟ್ಯ ವ್ಯಕ್ತಿತ್ವ ಹೊಂದಿಲ್ಲದ ಈ ಸ್ಪರ್ಧಿಗಳನ್ನು ಕೇವಲ ಇಡೀ ರಾಜ್ಯಾದ್ಯಂತ ಜನಪ್ರಿಯರಾಗುತ್ತಾರೆ, ಆ ಕಾರ್ಯಕ್ರಮವನ್ನು ಹೆಚ್ಚು ಜನ ನೋಡುತ್ತಾರೆ ಎನ್ನುವ ಒಂದೇ ಆಧಾರದ ಮೇಲೆ ಅವರನ್ನು ಸಮಾಜ ಬಹಳ ಎತ್ತರಕ್ಕೆ ನೋಡುವುದು ವಿಚಿತ್ರವೆನಿಸುತ್ತದೆ…..

ಅವರುಗಳು ಕೂಡ ಅತ್ಯಂತ ಬಾಲಿಶವಾಗಿ, ಸಣ್ಣ ವಿಷಯಗಳಿಗೂ ಕೆಟ್ಟ ರೀತಿಯ ಪ್ರತಿಕ್ರಿಯೆ ಕೊಡುವುದನ್ನೇ ಚರ್ಚೆಯ ವಿಷಯವಾಗಿಸುವುದು, ಈ ಸಮಾಜದ ದುರಂತ. ಪ್ರಗತಿಪರರೆನಿಸಿಕೊಂಡ ಕೆಲವರು ಸಹ ಈ ಕಾರ್ಯಕ್ರಮದಲ್ಲಿ ಹನುಮಂತು ಗೆದ್ದಿದ್ದು ಒಂದು ದೊಡ್ಡ ಸಾಧನೆ ಎಂಬಂತೆ ಚಿತ್ರಿಸುತ್ತಿರುವುದು ಆಶ್ಚರ್ಯವಾಗುತ್ತದೆ. ಹನುಮಂತು ಸಹ ಒಂದು ದಿನಕ್ಕೂ ಇಲ್ಲಿನ ಭ್ರಷ್ಟಾಚಾರ, ಇಲ್ಲಿನ ಜಾತಿ ವ್ಯವಸ್ಥೆ, ಇಲ್ಲಿನ ಅನ್ಯಾಯ ಅಕ್ರಮಗಳ ಬಗ್ಗೆ ಧ್ವನಿ ಎತ್ತಿಲ್ಲ. ಬಹುಶಃ ಆತನಿಗೆ ಅದರ ಅರಿವೂ ಇಲ್ಲ. ಕೇವಲ ಒಂದು ಮುಗ್ಧತೆ ಮಾತ್ರ ಅವರನ್ನು ಈ ಹಂತಕ್ಕೆ ತೆಗೆದುಕೊಂಡು ಬಂದಿದೆ. ಅದಕ್ಕೆ ಸಂತೋಷಪಡೋಣ…..

ಅನೇಕ ಕೃತಕ ಮುಖವಾಡಗಳ ಮಧ್ಯೆ ಹನುಮಂತ ಗೆದ್ದಿದ್ದು ಉತ್ತಮವೇ ಇರಬಹುದು. ಆದರೆ ಆ ಇಡೀ ಕಾರ್ಯಕ್ರಮದ ವಿನ್ಯಾಸ ಒಂದು ರೀತಿ ಇಡೀ ಸಮಾಜಕ್ಕೆ ಬಿಸ್ಕೆಟ್ ಎಸೆದಂತೆ. ಕಾರ್ಪೊರೇಷನ್ ಸಂಸ್ಕೃತಿ ಒಬ್ಬ ನಟ ಮತ್ತು ಒಂದು ವಾಹಿನಿಯ ಮೂಲಕ ಇಡೀ ಸಮಾಜವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮತ್ತು ತನ್ನ ಆರ್ಥಿಕ ಅಭಿವೃದ್ಧಿಯನ್ನು ಹೊಂದುವ ಪರೋಕ್ಷ ಉದ್ದೇಶ ಹೊಂದಿರುತ್ತದೆ ಎಂಬುದನ್ನು ಮರೆಯಬಾರದು….

ಈಗಿನ ಸಾಮಾಜಿಕ ವ್ಯವಸ್ಥೆ ಬದುಕನ್ನು ಸಂಕೀರ್ಣಗೊಳಿಸಿ ಬಹುತೇಕ ಜನ ಮನರಂಜನೆಗಾಗಿ ತಹತಹಿಸುವಂತೆ ಮಾಡುತ್ತಿದೆ. ತಾವು ಮಾಡಬೇಕಾದ, ಯೋಚಿಸಬೇಕಾದ ಅನೇಕ ಒಳ್ಳೆಯ ಕೆಲಸಗಳನ್ನು ಮರೆಮಾಚಿಸಿ ಬಸ್ಸು, ರೈಲು, ಪಾರ್ಕು, ವಿಶ್ರಾಂತಿಗೃಹ, ಶಾಲಾ ಕಾಲೇಜು ಎಲ್ಲೆಂದರಲ್ಲಿ ಜೋಕುಗಳು, ರೀಲ್ಸ್ಗಳು, ಮುಂತಾದ ಮನರಂಜನೆಯನ್ನೇ ಹೆಚ್ಚು ಮಾಡಿ ಜನರನ್ನು ಒಂದು ರೀತಿ ಮಾನಸಿಕ ರೋಗಿಗಳನ್ನಾಗಿ ಮಾಡುತ್ತಿದೆ. ಈ ಬಗ್ಗೆ ಜಾಗೃತರಾಗಿ, ಎಚ್ಚರಗೊಳ್ಳಿ. ಇಲ್ಲದಿದ್ದರೆ ಈಗಾಗಲೇ ಕಾರ್ಪೊರೇಟ್ ಸಂಸ್ಕೃತಿ ನಮ್ಮನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದೆ. ನಮ್ಮ ಆಂತರಿಕ ಮತ್ತು ಬಾಹ್ಯ ಶಕ್ತಿಯನ್ನೇ ಕುಗ್ಗಿಸುತ್ತಿದೆ.
ಈ ಬಗ್ಗೆ ಎಚ್ಚರಿಕೆಗೊಳ್ಳದಿದ್ದರೆ ಇಡೀ ಭಾರತೀಯತೆಯೇ ಕುಸಿಯುವ ದಿನಗಳು ದೂರವಿಲ್ಲ, ಎಚ್ಚರ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,  ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ ಅಗತ್ಯ.

ಮೊಬೈಲ್ ವ್ಯಸನ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...