Homeಚಳವಳಿಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಮುಸ್ಲಿಮರ ಬಾಯಿ ಮುಚ್ಚಿಸಿರುವುದು ಹಿಂದೂತ್ವ ಮಾತ್ರವಲ್ಲ; ನಿಷ್ಪ್ರಯೋಜಕ ಉಲೆಮಾ ಕೂಡಾ!

ಭಾರತದ ಮುಸ್ಲಿಂ ಸಮುದಾಯವು ತನ್ನ ಸಾಂವಿಧಾನಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಬಲ್ಲಂತಹ ನಾಯಕತ್ವಕ್ಕಾಗಿ ಬೇಡಿಕೆ ಮುಂದಿಡುವ ಕಾಲ ಸನ್ನಿಹಿತವಾಗಿದೆ.

- Advertisement -
- Advertisement -

ಕೃಪೆ: ದಿ ಪ್ರಿಂಟ್‌ -ಅಸೀಮ್ ಆಲಿ

ಅನುವಾದ: ನಿಖಿಲ್ ಕೋಲ್ಪೆ

ಅಯೋಧ್ಯೆಯ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭಾರತೀಯ ಮುಸ್ಲಿಮರು ಪ್ರತಿಭಟಿಸಿಲ್ಲ. ಅದರ ಅರ್ಥ ಹಲವಾರು ವಿಶ್ಲೇಷಕರು ಹೇಳುವಂತೆ ಪ್ರಬುದ್ಧತೆಯಾಗಲೀ, ಸ್ವೀಕಾರವಾಗಲೀ ಅಲ್ಲ. ಮುಸ್ಲಿಮರ ಮೌನಕ್ಕೆ ಭಯ, ಅಸಹಾಯಕತೆ ಮತ್ತು ಹತಾಶೆಗಳೇ ಹೆಚ್ಚು ಸೂಕ್ತವಾದ ವಿವರಣೆಗಳು.

ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಉತ್ಥಾನವು ಚುನಾವಣೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯವನ್ನು ಅಪ್ರಸ್ತುತವಾಗಿಸಿದೆ ಎಂಬುದಿಂದು ಸಾಮಾನ್ಯವಾಗಿ ಒಪ್ಪಿತ ವಿಷಯ. ಆದರೆ, ಭ್ರಮನಿರಸನದ ಭಾವನೆಯು ಅದಕ್ಕಿಂತಲೂ ಆಳವಾಗಿದೆ. ನಮಗೆ ಪ್ರತಿಭಟಿಸಲು ಯಾವುದೇ ಶಕ್ತಿಯಾಗಲೀ, ಯಾವುದೇ ಸಂಸ್ಥೆಯಾಗಲೀ, ಯಾವುದೇ ಅವಕಾಶವಾಗಲೀ ಉಳಿದಿಲ್ಲ ಎಂದು ನಾನು ನನ್ನ ಸಹಧರ್ಮೀಯರಿಗೆ ವಿನಮ್ರವಾಗಿ ಹೇಳುತ್ತೇನೆ” ಎಂದು ಸಾಮಾಜಿಕ ಕಾರ್ಯಕರ್ತರಾದ ಸಯ್ಯೆದಾ ಹಮೀದ್ ತೀರ್ಪಿನ ಮರುದಿನ ಬರೆದರು.

ಆದರೆ, ಈ ಅಸಹಾಯಕ ಸ್ಥಿತಿಯಲ್ಲಿ ಒಂದು ಮುಖ್ಯವಾದ ಪಾಠವಿದೆ. ಮುಸ್ಲಿಂ ಉಲೆಮಾಗಳು (ಉಲೆಮಾ ಎಂದರೆ, ಮತಪಂಡಿತರು ಮತ್ತು ಧಾರ್ಮಿಕ ನಾಯಕರು ಅಥವಾ ಒಟ್ಟಾಗಿ ಒಂದು ವರ್ಗ-ಅನು.) ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದರಲ್ಲಿ ತಮ್ಮನ್ನು ತಾವು  ನಿಷ್ಪ್ರಯೋಜಕರೆಂದು ಮತ್ತೆಮತ್ತೆ ಸಾಬೀತು ಮಾಡಿದ್ದಾರೆ, ಮಾತ್ರವಲ್ಲದೇ, ಈ ಹಕ್ಕುಗಳ ಸವಕಳಿಯಲ್ಲಿ ಸಹಭಾಗಿಯಾಗಿದ್ದಾರೆ. ಈ ಇಷ್ಟು ದಶಕಗಳಲ್ಲಿ ಧಾರ್ಮಿಕ ವರ್ಗವು ಸಾಮಾನ್ಯ ಮುಸ್ಲಿಮರಿಗಾಗಿ ಏನನ್ನು ಸಾಧಿಸಿದೆ ಎಂದು ಮುಸ್ಲಿಮ್ ಸಮುದಾಯ ತಡವಾಗಿಯಾದರೂ ಪ್ರಶ್ನಿಸಬೇಕು- ಆ ಪ್ರಶ್ನೆ ಕೆಲವು ಹಿಂದೂ ಸಿದ್ಧಾಂತಿಗಳು ಮುಸ್ಲಿಮರ ರಾಜಕೀಯವನ್ನು ಟೀಕಿಸಲು ಕೇಳುವ ಪ್ರಶ್ನೆಯನ್ನೇ ಹೋಲುವ ಅಪಾಯವಿದ್ದರೂ ಪರವಾಗಿಲ್ಲ,

ಮುಸ್ಲಿಂ ಗುರುತಾಗಿ ಶೆರಿಯ

ಸ್ವಾತಂತ್ರ್ಯೋತ್ತರದಲ್ಲಿ ಉಲೆಮಾಗಳು, ಜುಮ್ಮಾ ಮಸೀದಿಯ ಇಮಾಮ್ ಬುಖಾರಿ ಅವರಂತೆ ತಮ್ಮನ್ನು ತಾವು ಮುಸ್ಲಿಂ ಧ್ವನಿ ಎಂಬಂತೆ ಬಿಂಬಿಸಿಕೊಂಡರು. ಇದಕ್ಕೆ, ಮುಸ್ಲಿಂ ಮತಗಳ ವಿಶ್ವಾಸಾರ್ಹ ನಿರ್ಣಾಯಕರ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಪಕ್ಷ ನೆರವಾಯಿತು. ಉಲೆಮಾಗಳು ರಾಜಕೀಯ ಪಕ್ಷಗಳಿಂದ ಉದಾರವಾದ ಆಶ್ರಯ ಪಡೆದರೂ, ಅವರು ಸಮುದಾಯಕ್ಕಾಗಿ ಖಾತರಿಪಡಿಸಿದ ಒಂದೇ ಒಂದು ಗ್ರಾಹ್ಯ ಪ್ರಯೋಜನವನ್ನು ಯೋಚಿಸುವುದೂ ಕಷ್ಟ.

ಮುಸ್ಲಿಂ ಸಮುದಾಯದ ಅಗತ್ಯಗಳು ಯಾವತ್ತಿಗೂ ಉದ್ಯೋಗ, ಶಿಕ್ಷಣ, ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗಳಷ್ಟೇ ಆಗಿದ್ದವು. ಆದರೆ, ಉಲೆಮಾಗಳು ಯಾವತ್ತೂ ‘ಧಾರ್ಮಿಕ ಪ್ರತ್ಯೇಕತೆ’ಯ ರಾಜಕೀಯವನ್ನು ಅನುಸರಿಸಿದರು ಮತ್ತು  ತೋರಿಕೆ ವಿಷಯಗಳು ಹಾಗೂ ಪೊಳ್ಳು ಸಾಂಕೇತಿಕತೆಯಲ್ಲಿಯೇ ತೊಡಗಿಕೊಂಡರು. ಶಾಬಾನೊ ಪ್ರಕರಣದಲ್ಲಿ ಸರಳವಾದ ಜೀವನಾಂಶದ ಪ್ರಶ್ನೆಯನ್ನು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕಿನ ಅಸ್ತಿತ್ವಕ್ಕೇ ಬೆದರಿಕೆ ಎಂಬಂತೆ ಬಿಂಬಿಸಿದರು. ರಾಮ ಜನ್ಮಭೂಮಿ ಅಭಿಯಾನ ಮತ್ತು ಅಸ್ಸಾಂ ಒಪ್ಪಂದಗಳ ನೆರಳಿನಲ್ಲಿ ಮುಸ್ಲಿಮರ ಭಯವನ್ನು ಉಪಯೋಗಿಸಿಕೊಂಡು ಅದನ್ನವರು ಮಾಡಿದರು.

ಅಷ್ಟೇ ಅಲ್ಲದೇ, ಶಾಬಾನೊ ಪ್ರಕರಣವು ಶೆರಿಯಾ ಅಥವಾ ವೈಯಕ್ತಿಕ ಕಾನೂನು ಮಾತ್ರವಲ್ಲ; ಮುಸ್ಲಿಂ ಅಸ್ಮಿತೆ (ಗುರುತು)ಯ ಉಳಿವಿಗೇ ಒಂದು ಪರೀಕ್ಷೆ ಎಂಬ ಮಟ್ಟಕ್ಕೆ ಏರಿಸಿದರು. ಜಮೀಯತ್ ಉಲೆಮಾ-ಇ- ಹಿಂದ್ ಶೆರಿಯಾದ ಅನುಸರಣೆಯು ಮುಸ್ಲಿಂ ಅಸ್ಮಿತೆಯ ಉಳಿವಿಗೆ ನಿರ್ಣಾಯಕ ಎಂಬಂತೆ ಬಿಂಬಿಸಿತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯ ಅಧ್ಯಕ್ಷ ಮೌಲಾನಾ ಅಬ್ದುಲ್ ಹಸನ್ ನದ್ವಿಯವರು, ಶೆರಿಯಾದ ರಕ್ಷಣೆಯು “ಭಾರತದಲ್ಲಿ ಮುಸ್ಲಿಮರ ಅತ್ಯಂತ ಮುಖ್ಯವಾದ ಸಮಸ್ಯೆ” ಎಂದು ಬಣ್ಣಿಸಿದರು. ಈ ಆಟಾಟೋಪಗಳು ಈ ವೈಯಕ್ತಿಕ, ಧಾರ್ಮಿಕ ಕಾನೂನುಗಳು ಅಲ್ಪಸಂಖ್ಯಾತರಿಗೆ ಸಂವಿಧಾನವು ನೀಡಿದ ಖಾತರಿ ಎಂದು ಬಿಂಬಿಸುವುದಕ್ಕೆ ಬದಲಾಗಿ, ಅವು ಸಂವಿಧಾನಕ್ಕೂ ಮಿಗಿಲಾದದ್ದೇನೋ ಎಂಬಂತೆ ಬಿಂಬಿಸಿದವು.

ಧಾರ್ಮಿಕ ವ್ಯವಸ್ಥೆಯು ಮೋದಿ ಸರಕಾರ ತಂದಿರುವ ತ್ರಿವಳಿ ತಲಾಖನ್ನು ಅಪರಾಧೀಕರಣಗೊಳಿಸುವ ಕಾನೂನಿಗೆ ಸಂಬಂಧಿಸಿದಂತೆ ಅದೇ ತಪ್ಪನ್ನು ಪುನರಾವರ್ತಿಸಿತು.

ಮುಸ್ಲಿಂ ಹಕ್ಕು, ಬೇಡಿಕೆಗಳ ಧ್ವನಿ

ಇಂದು ಮುಸ್ಲಿಂ ಸಮುದಾಯವು ಭಾರತದಲ್ಲಿ ಉದ್ಯೋಗ ಮತ್ತು ಶಿಕ್ಷಣದ ವಿಷಯದಲ್ಲಿ ಅತ್ಯಂತ ಹಿಂದುಳಿದಿದೆ. ಅವರು ದಲಿತರಿಗಿಂತಲೂ ಹಿಂದಿದ್ದಾರೆ. ಸಮಯ ಕಳೆದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ. ಭದ್ರತಾ ಸಂಸ್ಥೆಗಳು ಮುಸ್ಲಿಮರ ಕಾನೂನು ಹಕ್ಕುಗಳನ್ನು ಸಾಮಾನ್ಯವೆಂಬಂತೆ ದಮನಿಸುತ್ತಿವೆ. ಇದು ಕೇವಲ ಜಾತ್ಯತೀತ ಭಾರತಕ್ಕೆ ಒಂದು ಕಳಂಕ ಮಾತ್ರವಲ್ಲ, ಭಾರತ ಸರಕಾರಕ್ಕೆ ಈ ಸಂಬಂಧದಲ್ಲಿ ಸಾಕಷ್ಟು ಒತ್ತಡ ಹೇರುವಲ್ಲಿ ಸಮುದಾಯದ ಸ್ವಯಂಘೋಷಿತ ವಕ್ತಾರರೂ, ನಾಯಕರೂ ಆದ ಉಲೆಮಾಗಳ ಸಾರಾಸಗಟು ವೈಫಲ್ಯವನ್ನೂ ಪ್ರತಿಬಿಂಬಿಸುತ್ತದೆ.

ಒಂದು ಹೆಚ್ಚು ಪ್ರಬುದ್ಧ ನಾಯಕತ್ವವು ತನ್ನ ಸಮುದಾಯಕ್ಕೆ ಈ ಲೌಕಿಕ ಅವಕಾಶಗಳು ಮತ್ತು ಕಾನೂನು ಹಕ್ಕುಗಳನ್ನು ಪಡೆಯಲು ನಾಯಕತ್ವ ವಹಿಸಿ ಚಳವಳಿಗಳನ್ನು ನಡೆಸುತ್ತಿತ್ತು. ನಾಗರಿಕ ಹಕ್ಕುಗಳ ಚಳವಳಿಯ ಸಂದರ್ಭದಲ್ಲಿ ಯುಎಸ್ಎಯ ಕರಿಯರ ಚರ್ಚುಗಳು ವಹಿಸಿದ ಕೇಂದ್ರ ಪಾತ್ರ ಇದಕ್ಕೊಂದು ಉದಾಹರಣೆ. ಈ ಚರ್ಚುಗಳು ಇಂದಿಗೂ ಆಫ್ರಿಕನ್ ಅಮೇರಿಕನ್ ಸಮುದಾಯಕ್ಕೆ ಆಧಾರ ಸ್ಥಂಭಗಳಾಗಿವೆ. ಅವು ಚರ್ಚಿಗೆ ಹೋಗುವವರಿಗೆ ಬಡತನ, ಮಾದಕವಸ್ತು ಬಳಕೆ, ಸಾಂಸ್ಥಿಕ ಜನಾಂಗೀಯವಾದ ಇತ್ಯಾದಿಯಾಗಿ ಜ್ವಲಂತ, ಪ್ರಗತಿಪರ ಸಾಮಾಜಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುತ್ತಿವೆ.

ಅದರೆ, ಭಾರತೀಯ ಮುಸ್ಲಿಂ ಸಮುದಾಯದ ಧಾರ್ಮಿಕ-ರಾಜಕೀಯ ಮಧ್ಯವರ್ತಿಗಳು ರಾಜಕೀಯ ವರ್ಗವನ್ನು ಸಂರಕ್ಷಿಸುವ ಹೊರೆಯನ್ನು ಹೊತ್ತಿದ್ದಾರೆ; ಇಲ್ಲವೇ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ದೊಂಬರಾಟದಲ್ಲಿ ನಿರತರಾಗಿದ್ದಾರೆ.

ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳಿಗೆ ನೇರವಾಗಿ ಆತಂಕ ಒಡ್ಡುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆಆರ್‌ಸಿ)ಯನ್ನು ನವೀಕರಿಸಲು ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಜಮೀಯತ್ ಉಲೆಮಾ-ಇ-ಹಿಂದ್‌ನ ಈಗಿನ ಮುಖ್ಯಸ್ಥ ಮಹಮೂದ್ ಮದನಿಯವರ ಬೆಂಬಲವು ಅವರನ್ನು ಬಯಲು ಮಾಡುವಂತಹ ಮಾತ್ರವಲ್ಲ; ನಾಚಿಕೆಗೇಡಿನ ಕ್ರಮವೂ ಆಗಿದೆ. ಆದರೆ, 2012ರ ಚುನಾವಣೆಗೆ ಮೊದಲಿನಿಂದಲೇ ನರೇಂದ್ರ ಮೋದಿಯನ್ನು ಸಕ್ರಿಯವಾಗಿ ಸಮರ್ಥಿಸಿ, ಆತ 2002ರ ಘಟನೆಗಳಿಗೆ ಕ್ಷಮೆ ಯಾಚಿಸಬೇಕಾದುದು ಏನೂ ಇಲ್ಲ ಎಂದು ಹೇಳಿದ ವ್ಯಕ್ತಿಯೊಬ್ಬರಿಂದ ಇದು ನಡೆಯುತ್ತಿರುವುದು ಅಚ್ಚರಿಯ ವಿಷಯವೇನಲ್ಲ. ಅಥವಾ ಪ್ರತೀ ಚುನಾವಣೆಯಲ್ಲಿ  ಯಾವ ಪಕ್ಷ ಹೆಚ್ಚು ಪ್ರಬಲವಾಗಿದೆ, ಆದುದರಿಂದ ಯಾರು ಹೆಚ್ಚಿನ ಕೃಪಾಶ್ರಯ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ, ಪ್ರತೀ ಚುನಾವಣೆಯಲ್ಲಿಯೂ ಒಂದೊಂದು ಪಕ್ಷಕ್ಕೆ ಬೆಂಬಲ ಘೋಷಿಸುತ್ತಾ, ಸದಾ ಅತ್ತಿಂದಿತ್ತ ಓಲಾಡುವ ಜುಮ್ಮಾ ಮಸೀದಿಯ ಶಾಹಿ ಇಮಾಮರೂ ಅಷ್ಟೇ.

ರಾಜಕೀಯ ವಿಷಯಗಳಲ್ಲಿ ಮುಸ್ಲಿಂ ಧಾರ್ಮಿಕ ನಾಯಕತ್ವದ ನಿರುಪಯುಕ್ತತೆಯ ಬಗ್ಗೆ ನಿಮಗೆ ಇನ್ನೂ ಮನವರಿಕೆಯಾಗದಿದ್ದರೆ, ರಾಜಕೀಯ ಅಂಗಳದಿಂದಲೇ ಅವರ ಕಣ್ಮರೆಯನ್ನು ಊಹಿಸಿಕೊಳ್ಳಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...