- Advertisement -
- Advertisement -
ಉಪಚುನಾವಣೆ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿಯೇ ಬಿಜೆಪಿ ಪ್ರಚಾರ ಸಭೆ ನಡೆಸಿದ್ದು ಮಕ್ಕಳ ಪಾಠ ಕಲಿಕೆಗೆ ತೊಂದರೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋ ನೋಡಿ:
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಬೀರೇಶ್ವರ ವಿದ್ಯಾವರ್ಧಕ ಪ್ರಾಥಮಿಕ ಶಾಲೆ ಎದುರಿನಲ್ಲೇ ಬಿಜೆಪಿ ಪ್ರಚಾರ ಭಾಷಣ ಮಾಡಲಾಗುತ್ತಿದೆ. ಡಿಸಿಎಂ ಲಕ್ಷ್ಮಣ ಸವದಿ, ಅಥಣಿ ಬಿಜೆಪಿ ಅಭ್ಯರ್ಥಿಯಾದ ಅನರ್ಹ ಶಾಸಕ ಮಹೇಶ ಕುಟಮಳ್ಳಿ ಸಹ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಇದು ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ? ಶಾಲಾ ಆವರಣ ಬಿಟ್ಟು ಬೇರೆ ಕಡೆ ಪ್ರಚಾರ ಸಭೆ ನಡೆಸಲು ಜಾಗ ಸಿಗಲಿಲ್ಲವೇ ಎಂದು ಬಹಳಷ್ಟು ಜನ ಪ್ರಶ್ನೆ ಮಾಡಿದ್ದಾರೆ.
ಶಾಲಾ ಕೊಠಡಿ ಎದುರೇ ನಿಲ್ಲಿಸಿದ ಪ್ರಚಾರದ ಧ್ವನಿವರ್ಧಕದಿಂದ ಮಕ್ಕಳ ಪಾಠ ಕಲಿಕೆಗೆ ತೊಂದರೆಯಾಗುತ್ತಿದ್ದ ವಿಡಿಯೋ ಸದ್ಯ ವೈರಲ್ ಆಗಿದೆ.