Homeಕರ್ನಾಟಕಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ - ಭಗತರಾಜ ನಿಜಾಮಕಾರಿ

ಎದಿ ಬ್ಯಾನಿಯ ಹಾಡಿ ತೋರಿದ ಚೆನ್ನಣ್ಣ ವಾಲೀಕಾರರ ಸ್ಮರಣೆ – ಭಗತರಾಜ ನಿಜಾಮಕಾರಿ

- Advertisement -
- Advertisement -

ಮರದ ಮೇಲಿನ ಗಾಳಿಗೆ ಹಕ್ಕಿಯೊಂದು ರೆಕ್ಕೆ ಬಿಚ್ಚಿ `ಕರಿತೆಲೆ ಮಾನವನ ಜೀಪದ’ ಹಾಡು ಹಾಡುತ್ತಿತ್ತು. `ಬಂಡೆದ್ದ ದಲಿತರ ಬೀದಿಹಾಡುಗಳು’, `ಪ್ಯಾಂಥರ್ಸ್ ಪದ್ಯಗಳು’, `ಧಿಕ್ಕಾರದ ಹಾಡುಗಳು’, `ಡಪ್ಪಿನಾಟ’ಗಳೊಂದಿಗೆ ಆ ಭೀಮಕಾಯ `ಬೆಳ್ಯ’ ಕುಣಿಯುತ್ತಲಿದ್ದ. ದಣಿವರಿವು ಅವನಿಗೆ ಗೊತ್ತಿಲ್ಲ. ಊಟಕ್ಕೆ ಕರೆದರೆ ಶತಮಾನದ ಸೇಡು ತೀರಿಸಿಕೊಳ್ಳುತಿದ್ದ. ರಾಯಚೂರಿನ ಕಡುಬಿಸಿಲಲ್ಲಿ ಬರೆಯಲು ಕುಳಿತರೆ, ಬರಿಮೈ, ಸುರಿವ ಬೆವರು, ಬಣ್ಣಬಣ್ಣದ ಹೂವುಗಳ ಲುಂಗಿ, ಬೆರಳಲ್ಲಿ ಪೆನ್ನು, ಸರಸರನೆ ಬಿಳಿಹಾಳೆಯ ತುಂಬ ಹಾವಿನಂತೆ ಹರಿದಾಡುತ್ತಿತ್ತು. ಹೆಪ್ಪುಗಟ್ಟಿದ ಸಮುದ್ರ, ಬೋಧಿವೃಕ್ಷದ ಹೂವು ಅರಳುತ್ತಿದ್ದವು.

ಇಂತಪ್ಪ ನಮ್ಮ ಚೆನ್ನಣ್ಣ ವಾಲೀಕಾರರು ಮೂಲತಃ ಜಾನಪದ ಲೋಕದ ಮನುಷ್ಯ. ಜಾನಪದದಲ್ಲಿಯೇ ಸಂಶೋಧನೆ ಮಾಡುತ್ತಿದ್ದರೆ ಅವರಿಗೆ ದೊಡ್ಡ ಪ್ರಶಸ್ತಿ ತಪ್ಪದೇ ಬರುತ್ತಿತ್ತು. ಆದರೆ ಅವರಿಗೆ ಪ್ರಶಸ್ತಿ, ಬಿರುದು-ಬಾವಲಿಗಳಿಗಿಂತ ತನ್ನ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರನಾಗುವುದು ಮುಖ್ಯವಾಗಿತ್ತು. “ಯಾವ ಅP್ಷÀರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ” ಎಂದು ಕೈಯಲ್ಲಿ ಡಪ್ಪು ಹಿಡಿದು, ಸಾರ್ವಜನಿಕ ವೇದಿಕೆಗಳ ಮೇಲೆ ಧ್ವನಿ ಎತ್ತಿ ಹಾಡುತ್ತಿದ್ದ ಚೆನ್ನಣ್ಣ, ಹೈದ್ರಾಬಾದ ಕರ್ನಾಟಕ ಪ್ರದೇಶದ ದಲಿತರ ದನಿಯಾಗಿ ಹಗಲಿರುಳು ಶೋಷಿತರ ಬಗ್ಗೆ ಚಿಂತಿಸುತ್ತಿದ್ದರು. ಅವರ ಬಗ್ಗೆ ಹಲವಾರು ಕವನ, ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸಕಥನ ಬರೆದುದಲ್ಲದೆ ಅವರೊಂದಿಗೆ ಪ್ರಾಮಾಣಿಕವಾಗಿ ಬದುಕಿದರು. ದೇಶದಲ್ಲಿರುವ ಅಸಹಿಷ್ಣುತೆ, ಜಾತೀಯತೆ, ಶೋಷಕರ ಬಲ, ಅವನತಿಗೆ ಜಾರುತ್ತಿರುವ ಮನುಕುಲದ ಮೌಲ್ಯಗಳನ್ನು ತಮ್ಮ ಸಾಹಿತ್ಯ ಬೋಧನೆಗಳಲ್ಲಿ ತರುತ್ತಿದ್ದರು.

ಧರ್ಮಸ್ಥಳದಲ್ಲಿ ಜರುಗುತ್ತಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (1979) ದಲಿತರಿಗಾಗಿ ಒಂದು ಗೋಷ್ಠಿ ಏರ್ಪಡಿಸಲು ವಿನಂತಿಸಿಕೊಂಡರೆ, ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು `ಸಾಹಿತ್ಯದಲ್ಲಿ ದಲಿತ-ಬಲಿತ-ಕಲಿತ ಎನ್ನುವುದಿಲ್ಲ’ ಎಂದು ಹೀಯಾಳಿಸಿದರು. ಆಗ ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ ಮತ್ತು ವಾಲೀಕಾರ ಧಿಕ್ಕಾರದ ಕೂಗು ಪತ್ರಿಕೆಯಲ್ಲಿ ಬಂದಿತು. ಸಾರಸ್ವತ ಲೋಕದಲ್ಲಿ ಅಲ್ಲೋಲ ಕಲ್ಲೋಲ ಎದ್ದಿತು. ಅದುವೇ ಬಂಡಾಯ ಸಾಹಿತ್ಯ ಚಳವಳಿಯ ಹುಟ್ಟಿಗೆ ಪ್ರೇರಣೆಯಾಯಿತು. ಈ ಚಳವಳಿಯ ಹುಟ್ಟಿಗೆ ಕಾರಣರಾದ ರಾಯಚೂರಿನ ಮೂವರು ಸಾಹಿತಿಗಳಲ್ಲಿ ಮೊದಲಿಬ್ಬರು ಬಾರದ ಲೋಕಕ್ಕೆ ಹೋಗಿಯಾಗಿದೆ.

ಈಗ ಮೂರನೆಯವರಾದ ಚೆನ್ನಣ್ಣ 24-11-2019 ರಂದು ರಾತ್ರಿ ಅವರನ್ನು ಕೂಡಿಕೊಂಡರು. ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಂಕರವಾಡಿ ಗ್ರಾಮದ ತಳವಾರ ಜನಾಂಗದ ಸಾಬಮ್ಮ-ಧೂಳಪ್ಪನ ಮಗನಾಗಿ (1943) ಚೆನ್ನಣ್ಣ ಜನಿಸಿದರು. ರಾಯಚೂರಿನ ಹಮದರ್ದ್ ಶಾಲೆಗೆ ಕನ್ನಡ ಮಾಸ್ತರರಾಗಿ ಬಂದು ಸೇರಿದರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದು, ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಳಿಕ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿ ನಿವೃತ್ತರಾದರು. ಅವರು ತಮ್ಮ ಸೃಜನಶೀಲ ಬರವಣಿಗೆ ಮತ್ತು ಪ್ರಗತಿಪರ ಚಿಂತನೆಗಳಿಂದಾಗಿ ನಾಡಿನ ಎಲ್ಲ ಭಾಗದ ಲೇಖಕರಿಗೂ ಸಾಹಿತ್ಯಾಭಿಮಾನಿಗಳಿಗೂ ಚಿರಪರಿಚಿತರು. ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ ಮತ್ತು ಬಂಡಾಯ ಚಿಂತನೆಗೆ ಅಡಿಪಾಯ ಹಾಕಿದವರು. ಈ ಭಾಗದ ಜನಪದ ಸಾಹಿತ್ಯಕ್ಕೆ ಜೀವ ತುಂಬಲು, ಹಗಲಿರುಳು ಎನ್ನದೆ ತಿರುಗಾಡಿ ಗ್ರಾಮದೇವತೆಗಳ ಬಗ್ಗೆ ಅಧ್ಯಯನ ಮಾಡಿ ಪಿಹೆಚ್.ಡಿ., ಪಡೆದವರು. ದೇವದಾಸಿಯವರ, ಆದಿವಾಸಿಗಳ, ಜೋಗತಿಯವರ ಜೀವನವನ್ನು ಅಭ್ಯಸಿಸಿ, ಕೆಳಜನರ ನೋವು ಕುಂಡುಂಡ, ಹಿಂದುಳಿದ ವರ್ಗಗಳ ದಲಿತ ಸಾಹಿತಿಯೆಂದು ಗುರುತಿಸಿಕೊಂಡವರು. ಎಂ.ಎಲ್.ಸಿ.ಯಾಗಿಯೊ, ವಿಶ್ವವಿದ್ಯಾಲಯವೊಂದರ ಉಪ-ಕುಲಪತಿಯಾಗಿ ನೇಮಕವಾಗುವ ಅವಕಾಶ ಅವರಿಗಿತ್ತು. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವ ಅವಕಾಶವಿತ್ತು. ಇದರಿಂದ ವಂಚಿತರಾದರು. ಯಾವುದನ್ನೂ ಬಯಸದೆ ಇದ್ದಂತೆ ಇರಲಿ ಬಂದಂತೆ ಬರಲಿ ಎಂದು ಬದುಕಿದರು.

ಚೆನ್ನಣ್ಣ `ಮರದ ಮೇಲಿನ ಗಾಳಿ’ ಕವನ ಸಂಕಲನದಿಂದ ಸಾಹಿತ್ಯ ರಚನೆ ಪ್ರಾರಂಭಿಸಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಕಾವ್ಯ ಸಣ್ಣಕಥೆ, ವಚನ, ಕಾದಂಬರಿ, ನಾಟಕ, ಡಪ್ಪಿನ ಹಾಡು, ಮೊಹರಂ ಪದಗಳು, ಪ್ರವಾಸ ಕಥನಗಳು, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ 66 ಕೃತಿಗಳನ್ನು ಪ್ರಕಟಿಸಿದರು. ಇವರ `ಕರಿತಲಿ ಮಾನವನ ಜೀಪದ’ (ಕಾವ್ಯ) `ಬೆಳ್ಯ’ (ಕಾದಂಬರಿ) ಅಪರೂಪದ ಕೃತಿಗಳು. ಸಾವಿರ ಪುಟಗಳ `ವೋಮಾ-ವೋಮ’ವು, ಎಲ್ಲೂ ಅರ್ಧವಿರಾಮ ಪೂರ್ಣವಿರಾಮವಿಲ್ಲದೆ, ಯಾವುದೇ ಅಧ್ಯಾಯಗಳಿಲ್ಲದೆ ಸಾಗುವ ಮಹಾಕಾವ್ಯ. ಚೆನ್ನಣ್ಣ ಇತ್ತೀಚೆಗೆ ಬುದ್ಧನ ತತ್ವಗಳಿಗೆ ಮಾರುಹೋಗಿದ್ದರು. ಧರ್ಮ ಎಂದರೆ ಮನುಷ್ಯ. ಮನುಷ್ಯನೆಂದರೆ ಸಹಿಷ್ಣುತೆಯ ತೋಟ ಎನ್ನುತ್ತಿದ್ದರು. ಜೀವನದ ಕೊನೆಯ ದಿನಗಳಲ್ಲಿ ಬುದ್ಧನ ಕುರಿತು ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದರು.

ಚೆನ್ನಣ್ಣ ಈ ಭಾಗದ ಸೃಜನಶೀಲ ದೈತ್ಯ ಲೇಖಕರು. ಆದರೆ ಅವರ ಸಾಹಿತ್ಯವನ್ನು ಓದುವ ವ್ಯವಧಾನ ಕಳೆದುಕೊಂಡಿರುವ ಪ್ರಸಿದ್ಧ ಲೇಖಕರು ಅವರ ಬಗ್ಗೆ ಉದಾಸೀನ ತಾಳಿದರು. ಕೆಲವು ಮಹನೀಯರು ಅವರ `ಮ್ಯೋಮಾ-ಮ್ಯೋಮ’ವನ್ನು ತಲೆದಿಂಬಿಗೆ ಹೋಲಿಸಿದರು. ಚೆನ್ನಣ್ಣ ಓದಲು ಕಳುಹಿಸಿದ ಕೃತಿಯನ್ನು ಕೆಲವರು ತಾವು ಓದದೆ ತಮ್ಮ ವಿದ್ಯಾರ್ಥಿನಿಯರಿಗೆ ಕೊಟ್ಟು ಹೀಯಾಳಿಸುತ್ತಿದ್ದರು. ಹೈದ್ರಾಬಾದ್-ಕರ್ನಾಟಕ ಪ್ರದೇಶದ ಪ್ರಸಿದ್ಧ ಲೇಖಕರು ಚೆನ್ನಣ್ಣನವರ ಕೃತಿಯ ಬಗ್ಗೆ ಮಾತಾಡದೆ ಅವರ ವ್ಯಕ್ತಿಗತ ಸಂಗತಿಗಳನ್ನೇ ಹೇಳುತ್ತಿದ್ದರು. ಆದರೂ ಚನ್ನಣ್ಣ ನಗುನಗುತ್ತಲೆ ಕೊನೆಯ ಉಸಿರು ಇರುವ ಶುದ್ಧಮನಸ್ಸಿನ ಬದ್ಧ ಲೇಖಕರಾಗಿ ಉಳಿದರು.

ಥಟ್ ಅಂತ ನೋಡಿದ ಕ್ಷಣ
ಬಯಲಾಟದ ಭೀಮನು
ದೊಡ್ಡಾಟದ ಬಕಾಸುರನು
ನಾಟಕದ ಖಳನಾಯಕನು
ಸ್ವಲ್ಪ ಸಮೀಪ ಹೋದರೆ-
ಗೆಳೆಯರೆ ಮಾವಂದಿರರು
ಮಕ್ಕಳಿಗೆ ಚಂದಮಾಮಾ ಇವನು

ಇನ್ನೂ ಹತ್ತಿರ ಹೋಗಿ ಇಣುಕಿದರೆ-
ಜನಪದ ಲೋಕವೇ ತೆರೆದುಕೊಳ್ಳುತ್ತದೆ
ಕಲ್ಲು ದೇವ-ದೇವತೆಯರಿಗೆ ಮಾತು ಬರುತ್ತದೆ
ಕಳಸ ಹೊತ್ತ ಗುಡಿಗಳು ಏಳುತ್ತವೆ
ನಮ್ಮ-ನಿಮ್ಮ ನಡುವೆ ಇರುವ ಇವನು
ಜೀವಂತ-ಜೀವಸೆಲೆ ಹುಡುಕುತ್ತಿರುವ ಜಲಗಾರನು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

20 ಬಂಡಾಯ ಸಂಸದರ ಅನರ್ಹತೆಗೆ ಒತ್ತಾಯ: ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ

ತಮ್ಮ ಪಕ್ಷದಿಂದ ಪ್ರತ್ಯೇಕಗೊಂಡಿರುವ 20 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ತೃಣಮೂಲ ಕಾಂಗ್ರೆಸ್...

ದೆಹಲಿ, ಬಿಹಾರದಲ್ಲಿ ನೀಟ್ ಪ್ರತಿಭಟನಾಕಾರರ ಮೇಲೆ ಪೆಲೆಟ್, ಅಶ್ರುವಾಯು, ವಿದ್ಯುತ್ ಶಾಕ್ ಲಾಠಿ ಪ್ರಹಾರ ನಡೆದಿರುವುದು ಸತ್ಯ: ಅಮ್ನೆಸ್ಟಿ ವರದಿಯಲ್ಲಿ ಕಳವಳಕಾರಿ ವಿಷಯಗಳು ಬಹಿರಂಗ

ದೆಹಲಿ ಮತ್ತು ಬಿಹಾರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ನೇತೃತ್ವದಲ್ಲಿ ನಡೆದ ನೀಟ್ (NEET) ಪರೀಕ್ಷಾ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ಭಾರತೀಯ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕಾನೂನುಬಾಹಿರ ಮತ್ತು ಅತಿಯಾದ ಬಲಪ್ರಯೋಗ ಮಾಡಿದ್ದಾರೆ...

ರಾಜ್ಯ ಚುನಾವಣಾ ಆಯೋಗದಿಂದ ಎಸ್‌ಐಆರ್ ಕರಡು ಪಟ್ಟಿ ಪ್ರಕಟ; ದಾವಣಗೆರೆಯಲ್ಲಿ ಅತಿ ಕಡಿಮೆ- ಬೆಂಗಳೂರು ನಗರದಲ್ಲಿ 9.46 ಲಕ್ಷ ಜನರಿಗೆ ನೋಟಿಸ್‌!

ರಾಜ್ಯ ಚುನಾವಣಾ ಆಯೋಗವು ಇಂದು ಎಸ್‌ಐಆರ್ ಕರಡು ಪಟ್ಟಿ ಪ್ರಕಟಿಸಿದ್ದು, 'ಲಾಜಿಕಲ್ ಡಿಸ್ಕ್ರಿಪೆನ್ಸಿ' ಹೆಸರಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ, ಅಂದರೆ 7,088 ಜನರಿಗೆ ನೋಟಿಸ್‌ ನೀಡಲು ಸಿದ್ಧತೆ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ...

ಮಹಾರಾಷ್ಟ್ರದ ಅಮರಾವತಿಯಲ್ಲಿ ದಾರುಣ ದುರಂತ: ಸರ್ಕಾರಿ ಆಸ್ಪತ್ರೆಯ ವೆಂಟಿಲೇಟರ್ ಸ್ಫೋಟಗೊಂಡು ಮೂವರು ನವಜಾತ ಶಿಶುಗಳ ಸಾವು

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಸರ್ಕಾರಿ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ವೆಂಟಿಲೇಟರ್‌ನಲ್ಲಿ ಉಂಟಾದ ಸ್ಫೋಟದಿಂದಾಗಿ ಬೆಂಕಿ ಮತ್ತು ದಟ್ಟ...

‘ಮೋದಿ ಅವರ ‘ದಿಮಾಗಿ ನಕ್ಸಲ್’ ಹೇಳಿಕೆಯು ಮುಂಬರುವ ಯುವ ಭಿನ್ನಾಭಿಪ್ರಾಯದ ಅಲೆಯನ್ನು ‘ರಾಷ್ಟ್ರವಿರೋಧಿ’ ಎಂದು ಬಿಂಬಿಸುವ ಪ್ರಯತ್ನವಾಗಿದೆ’: ಆನಂದ್ ತೇಲ್ತುಂಬ್ಡೆ

ಜೆನ್ ಝೀ ಅಲೆಯ ಹೊಸ ರೀತಿಯ ಪ್ರತಿಭಟನೆಗೆ ಬೆಚ್ಚಿಬಿದ್ದಿರುವ ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಯ ಮುಖವಾಡವನ್ನು 'ದಿ ವೈರ್' ಲೇಖನದಲ್ಲಿ ಪ್ರಸಿದ್ಧ ಚಿಂತಕ ಡಾ. ಆನಂದ್ ತೇಲ್ತುಂಬ್ಡೆ ಬಿಚ್ಚಿಟ್ಟಿದ್ದಾರೆ. ಆಡಳಿತದ ವಿಫಲ...

SIR : ಮೂರು ದೇಶಗಳಿಗೆ ಭಾರತದ ರಾಯಭಾರಿಯಾಗಿದ್ದ ನವದೀಪ್ ಸೂರಿಗೆ ಪೌರತ್ವ ಸಾಬೀತುಪಡಿಸುವ ಸವಾಲು!

ಪಂಜಾಬ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪೌರತ್ವ ಸಾಬೀತುಪಡಿಸುವ ವಿಧಾನದ ಕುರಿತು ಮಾಜಿ ರಾಜತಾಂತ್ರಿಕ ನವದೀಪ್ ಸೂರಿ ಅವರು ಭಾನುವಾರ (ಆ.23) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ....

ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣ : 22 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಹೋದರ

ಸೊಹ್ರಾಬುದ್ದೀನ್ ಶೇಖ್ ಮತ್ತು ಅವರ ಪತ್ನಿ ಕೌಸರ್ ಬಿ ಹಾಗೂ ಆಪ್ತ ತುಳಸಿರಾಮ್ ಪ್ರಜಾಪತಿ ಅವರ 2005ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ 21 ಪೊಲೀಸರು ಸೇರಿದಂತೆ ಒಟ್ಟು...

ಉತ್ತರ ಪ್ರದೇಶ| ಚಲಿಸುವ ರೈಲಿನಲ್ಲಿ ಮದರಸಾ ವಿದ್ಯಾರ್ಥಿ ಮೇಲೆ ಹಲ್ಲೆ; ಬಲವಂತವಾಗಿ ಮದ್ಯ ಕುಡಿಸಿದ ದುಷ್ಕರ್ಮಿಗಳು

ಪಶ್ಚಿಮ ಉತ್ತರ ಪ್ರದೇಶದಲ್ಲಿ ಶನಿವಾರ ರಾತ್ರಿ ಚಲಿಸುತ್ತಿದ್ದ ರೈಲಿನಲ್ಲಿ ಮದರಸಾ ವಿದ್ಯಾರ್ಥಿಯೊಬ್ಬನ ಮೇಲೆ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಹಲ್ಲೆ ನಡೆಸಿ, ಆತನ ಧಾರ್ಮಿಕ ಗುರುತನ್ನು ನಿಂದಿಸಿ, ಬಲವಂತವಾಗಿ ಮದ್ಯ ಕುಡಿಸಿರುವ ಘಟನೆ...

ಶೈಕ್ಷಣಿಕ ಬೇಡಿಕೆಗಳಿಗಾಗಿ ವಾರ್ಧಾ ಎಂಜಿಎಎಚ್‌ವಿಯಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಸತ್ಯಾಗ್ರಹ: 47ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, 6 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್

ವಾರ್ಧಾ (ಮಹಾರಾಷ್ಟ್ರ): ಮಹಾರಾಷ್ಟ್ರದ ವಾರ್ಧಾದಲ್ಲಿರುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದಲ್ಲಿ (ಎಂಜಿಎಎಚ್‌ವಿ) ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಸತ್ಯಾಗ್ರಹವು...

ಮೀಸಲಾತಿ ವಿರೋಧಿ ಬೇಡಿಕೆಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಕೇಂದ್ರ ಸಚಿವ ಅಠಾವಳೆ ಆಗ್ರಹ

ಮೀಸಲಾತಿಯನ್ನು ವಿರೋಧಿಸುವ ಅಥವಾ ಅದನ್ನು ರದ್ದುಗೊಳಿಸಲು ಆಗ್ರಹಿಸುವವರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಬೇಕೆಂದು ಕೇಂದ್ರ ಸಚಿವ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಅಧ್ಯಕ್ಷ ರಾಮದಾಸ್ ಅಠಾವಳೆ ಭಾನುವಾರ ಆಗ್ರಹಿಸಿದ್ದಾರೆ. ಮೀಸಲಾತಿ ವಿರೋಧಿಸಿ...