Homeನ್ಯಾಯ ಪಥರೈತರಿಗೆ ಬೇಕಿರುವುದು ನೀರು, ಬೆಲೆ - ಸಾಲ, ವಿಮೆ

ರೈತರಿಗೆ ಬೇಕಿರುವುದು ನೀರು, ಬೆಲೆ – ಸಾಲ, ವಿಮೆ

- Advertisement -
- Advertisement -

ಈ ಹೊತ್ತಿನ ಸುದ್ದಿ ಏನೆಂದರೆ ದೆಹಲಿ ಹಾಗೂ ಬೆಂಗಳೂರಿನಲ್ಲಿರುವ ಘನ ಸರಕಾರಗಳು ಪ್ರವಾಹಪೀಡಿತ ರೈತರ ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕೋದಕ್ಕಿಂತ `ಪೀಕು ವಿಮೆ’ (ಅಗ್ರಿಕಲ್ಚರ್ ಇನ್ಷುರನ್ಸ್) ನ ಮೊರೆ ಹೊಗತಾರಂತ.

ಇದು ಹೆಂಗ ಅಂದರ, “ಮೂರು ದಿನದಿಂದ ಕೂಳು ಕಂಡಿಲ್ಲ ಯಪ್ಪಾ, ನಮ್ಮ ಗೋಳು ಕಳಿಯೋ ದೊರಿಯೇ” ಅಂತ ರಾಜಾನ್ನ ಕೇಳಾಕ ಹೋದರ, “ನಿಮ್ಮೂರ ಸಾವುಕಾರನ ಮನಿ ಮಗಳ ಲಗ್ನ ಐತಿ, ಅಲ್ಲಿ ಉಣ್ಣು ಹೋಗರಿ” ಅಂದರಂತ, ಹಂಗ. ನಮ್ಮಿಂದ ಗೆದ್ದ ಹೋದ ಸರಕಾರ ಅನ್ನೋದು ತನ್ನ ಜವಾಬುದಾರಿ ನಿಭಾಯಿಸೋದು ಬಿಟ್ಟು ಬ್ಯಾರೆಯವರ ಮ್ಯಾಲೆ ಹಾಕಿದರ ಮಾಡೋದೇನು? ಏನು ಮಾಡಲಿಕ್ಕೆ ಆಗತೆತಿ? ಏನು ಬರತದ ಅದನ್ನ ನೋಡಿಕೋತ ಹೋಗೋದು, ಅಷ್ಟ.

ಕನ್ನಡಮ್ಮನ ಮೆಚ್ಚಿನ ಮಗನಾಗಿದ್ದ ಡಾ.ಡಿ.ಎಂ. ನಂಜುಂಡಪ್ಪ ಅವರು “ರಾಜ್ಯದ ರೈತನಿಗೆ ಬೇಕಾಗಿದ್ದು ಎರಡೇ- ಒಂದು ನೀರು ಮತ್ತೊಂದು ಬೆಲೆ. ಇಷ್ಟು ಸಿಕ್ಕರೆ ಅವನು ಬೇರೆ ಎಲ್ಲ ನೋಡಿಕೊಳ್ಳುತ್ತಾನೆ”, ಅಂತ ಹೇಳುತ್ತಿದ್ದರು. ಈ ಕಾಲದ ಅಗತ್ಯಗಳಿಗೆ ತಕ್ಕಂಗ ಅದಕ್ಕ ನಾವು `ಸುಲಭ ಸಾಲ’ ಹಾಗೂ `ಬೆಳೆ ವಿಮೆ’ ಅಂತ ಸೇರಿಸಿಗೋಬಹುದು.

ಈ ನಾಲ್ಕನ್ನ ರೈತರಿಗೆ ಕೊಡಲಿಕ್ಕೆ ಯಾವುದಾದರೂ ಬಣ್ಣದ, ಝಂಡಾದ, ಘೋಷಣೆಯ, ಪಕ್ಷದ ಸರಕಾರ ಪ್ರಯತ್ನ ಮಾಡ್ಯಾವೇನು? ಅನ್ನುವ ಪ್ರಶ್ನೆಗೆ ಜೋರು ದನಿಯಿಂದ `ಇಲ್ಲ’ ಅನ್ನೋದ ಉತ್ತರ. ಇವಿಷ್ಟರ ಒಳಗ ರಾಜಕಾರಣಿಗಳ ಹೃದಯಕ್ಕ ಹತ್ತಿರವಾಗಿರೋ ವಿಷಯ ಅಂದರ ನೀರು ಕೊಡುವುದು ಅರ್ಥಾತ್ ನೀರಾವರಿ. ಹಿಂಗಾಗಿ ಅದನ್ನ ಕಡೀಕೆ ನೋಡೋಣ. (ರಾಜಕಾರಣಿಗಳಿಗೆ ಹೃದಯ ಅದ ಏನು ಅಂತ ಕೇಳಬ್ಯಾಡಿರಿ, ಅದು ಬ್ಯಾರೆ ವಿಷಯ).

ಮೊದಲಿಗೆ ಬೆಲೆ. ಇದು ಜಾಗತಿಕ ಸಮಸ್ಯೆ. ದೇಶದಿಂದ ದೇಶಕ್ಕ ಸಾಮಾನು ಹಾಗೂ ಸೇವೆ ತಡೆ ಇಲ್ಲದ ಓಡಾಡಬಹುದು ಅಂತ ಹೇಳಿದ ಮ್ಯಾಲೆ ಇದು ಹೆಚ್ಚಾತು.

ಅದರಾಗೂನು ನಮ್ಮ ದೇಶದಾಗ ಮನಮೋಹನಾಮಿಕ್ಸ್ ಶುರು ಆದಮ್ಯಾಲೆ ಅಂತೂ ಇದು ಇನ್ನೂ ಹೆಚ್ಚಾಗೇದ. ಒಂದು ಕಡೆ ಸಮಸ್ಯೆ ಆದರ ಇನ್ನೊಂದು ಕಡೆನೂ ಹಬ್ಬೋ ಹಂಗ. ಒಂದು ಕಡೆ ಗಾಯ ಆದರ ಅದರ ರಸಾ ಸೋರಿ ಇನ್ನೊಂದು ಕಡೆ ಹುಣ್ಣು ಆಗತದಲ್ಲಾ ಹಂಗ. ಇವೆಲ್ಲಾ ನಮ್ಮ ಬಡ ಬೋರೇಗೌಡನಿಗೆ ತಿಳಿಯಂಗಿಲ್ಲಾ. ಯಾವ ದೇಶದಾಗ ಚುನಾವಣೆಗೆ ಮುಂಚೆ ಹುದ್ದರಿಗಳು ನಮ್ಮ ಚಿನ್ನೆ ಕೈ, ಹೂವು ಅಲ್ಲ. ನಮ್ಮ ಕೈ ಹುಲ್ಲಿನ ಹೊರೆ ಹೊತ್ತ ನಿಮ್ಮಂತಾ ಮಹಿಳೆ, ಕೈ ಅಲ್ಲಾ, ಅಂತ ಪ್ರತಿ ಐದು ವರ್ಷಕ್ಕೊಮ್ಮೆ ಹೇಳಿ ಕೊಡಬೇಕಾಗತದೋ, ಆ ದೇಶದಾಗ “ದಕ್ಷಿಣ ಅಮೇರಿಕಾದಾಗ ಬಹಳ ಸೋಯಾ ಬೆಳದಿದ್ದಕ್ಕ ನಮ್ಮಲ್ಲಿ ರೇಟು ಬಿದ್ದದ” ಅಂತ ಹೇಳಲಿಕ್ಕೆ ಆಗತದೇನು?

ಬ್ಯಾರೆ ಬ್ಯಾರೆ ದೇಶದಾಗ ಇದಕ್ಕ ಬ್ಯಾರೆ ಬ್ಯಾರೆ ಉತ್ತರ ಕಂಡುಕೊಂಡಾರ. ನಮ್ಮಲಿನೂ ಪ್ರಯತ್ನ ನಡದಾವು. ಆದರ ಅವು ಲಾಟರಿ ಇದ್ದಂಗ. ಬಂದರ ಬಂತು, ಹೋದರ ಹೋತು. ಬೀಜ ಬಿತ್ತೋಕ್ಕಿಂತಾ ಮುಂಚೆ ಬೆಳೀ ಬೆಲೆ ತಿಳಕೊಳ್ಳೋ ಹಂಗ ಏನಾದರೂ ಮಾಡಲಿಕ್ಕೆ ಸಾಧ್ಯ ಆದರ ಅದರಂಥಾದು ಮತ್ತೊಂದಿಲ್ಲ. ಇಡೀ ಜಗತ್ತಿಗೇ ಹೊಸ ತಂತ್ರಜ್ಞಾನ ಕೊಡೋ ಐಟೀ ಘಟಗಳು, ಇಪ್ಪತ್ತು- ಮೂವತ್ತು ಉಪಗ್ರಹ ಒಟ್ಟಿಗೇ ಹಾರಿಸುವ ಇಸ್ರೋ, ಹತ್ತು ಸಾವಿರ ಜನ ನೂರು ವರ್ಷದೊಳಗ ಮಾಡೋ ಲೆಕ್ಕಾ ಒಂದು ಕ್ಷಣದಾಗ ಮಾಡೋ ಸುಪರ್ ಕಂಪ್ಯೂಟರ್ ತಯಾರು ಮಾಡಿದ ನಮ್ಮ ವಿಜ್ಞಾನಿಗಳು ಇದನ್ನ ಮಾಡಲಾರರೇನು? ಇಂತಹ ದೊಡ್ಡ ಪ್ರಶ್ನೆಗೆ ಉತ್ತರವನ್ನ ದೊಡ್ಡ ಸ್ಥಾನದಾಗ ಇರೋರು ತಮಗ ತಾವ ಕೇಳಿಕೊಳ್ಳಬೇಕು.

ಇನ್ನು ಸಾಲ. ಯಾವ ದೇಶದಲ್ಲಿ 8.5 ಲಕ್ಷ ಸಹಕಾರಿ ಸಂಸ್ಥೆಗಳು ಮತ್ತ 2,000 ಕ್ಕೂ ಹೆಚ್ಚು ಬ್ಯಾಂಕುಗಳು ಇದ್ದಾವೋ ಆ ದೇಶದಲ್ಲಿ ಸಾಲ ಸುಲಭವಾಗಿರದೇ ಕಷ್ಟವಾಗಿರಬಾರದಿತ್ತು. ಆದರ ಅದು ಹಂಗಿಲ್ಲ. ಯಾಕ? ಎಲ್ಲೆ ತಪ್ಪ ಐತಿ? ಸಹಕಾರಿಗಳ ರಾಜಕೀಕರಣ ಅಥವಾ ರಾಜಕಾರಣಿಗಳ ಸಹಕಾರೀಕರಣದಿಂದಾಗಿ ತಪ್ಪಾಗೇತಿ ಅಂತ ಕೆಲವರು ವಾದಸಾಕ ಹತ್ಯಾರ. ಹೌದೇನು? ಇದರಿಂದ ರೈತರು ದಲ್ಲಾಳಿಗಳ ಕೈಯೊಳಗ ಸಿಗಲಾರದ ಹಂಗ ಮಾಡಿ, ರೈತರಿಗೆ ಬೆಲೆ ಸಿಗಬಹುದು ಅನ್ನೋ ಉದ್ದೇಶದಿಂದ ಶುರು ಮಾಡಿದ ಭಾರತೀಯ ಸರಕು ವಿನಿಮಯ ಕೇಂದ್ರ (ಕಮಾಡಿಟಿಸ್ ಎಕ್ಸಚೇಂಜ್) ಯಾಕ ಬೇಕಾಗಿದ ಕೆಲಸ ಮಾಡವಲ್ಲತು? ಅದು ಭಾರತದ ಸರ್ವ ದಲ್ಲಾಳಿಗಳ ಶಕ್ತಿ ಕೇಂದ್ರ ಆಗಿಬಿಟ್ಟಿದ್ದು ಹೆಂಗ ಅಂತ ಯಾರರ ವಿಚಾರ ಮಾಡಾಕ ಹತ್ಯಾರೇನು?

ಭಾರತದಿಂದ ಹೋದ ತಜ್ಞರು ಇಡೀ ವಿಶ್ವಕ್ಕೆ ಇಂಥಾ ವಿಷಯಗಳ ಬಗ್ಗೆ ಸಲಹೆ ಕೊಡಲಿಕ್ಕೆ ಹತ್ಯಾರ. ಹಂಗಾರ ನಮಗ ಯಾಕ ಕೊಟ್ಟಿಲ್ಲ? ಅವರು ನಮ್ಮ ದೇಶದಾಗ ಯಾಕ ನಿಲ್ಲವಲ್ಲರು? ಇಲ್ಲೇ ನಿಂತವರು ಯಾಕ ನಮಗೇನೂ ಹೇಳವಲ್ಲರು? ಇದರ ಬಗ್ಗೆ ಸಹ ಚರ್ಚೆ ಆಗಬೇಕಾಗೇದ.

ಇನ್ನು ಬೆಳೆ ವಿಮೆ, ಕೃಷಿ ವಿಮೆ ಅಥವಾ ಪೀಕು ವಿಮೆ. ಬೆಳೆ ವಿಮೆ ಅಂತಿದ್ದದ್ದನ್ನ ಕೇಂದ್ರದ ಅಧಿಕಾರಿಗಳು ಕೃಷಿ ವಿಮೆ ಅಂತ ಮಾಡ್ಯಾರ. ಯಾಕೋ ಗೊತ್ತಿಲ್ಲ. ಹಂಗ ಜನತಾ ಜನಾ ಆರ್ ದನಾ ರಿಗೆ ಗೊತ್ತಾಗದಂಥಾವು ಈ ಸರಕಾರದಾಗ ಭಾಳ ಅವ. ಹೋಗಲಿ ಬಿಡರಿ.

ಖರೆ ಅಂದರೆ ಅದು ಪೀಕು ವಿಮೆ. ಅಂದರ ರೈತರ ಹತ್ತರ ರೊಕ್ಕ ಪೀಕಿ ಆಮ್ಯಾಲೆ ಕೇಳಾಕ ಹೋದರ ತೊಗೋರಿ ಈ ಪೀಪೀ, ಊದರಿ ಪುಂಗಿ ಅಂತ ಕೊಡತಾರಲ್ಲಾ ಅದಕ್ಕ.

ರೈತರ ಕಲ್ಯಾಣ ಆಗಬೇಕು ಅಂತ ಮಾಡಿದ ಈ ಸಂಸ್ಥಾ ರೈತರನ್ನು ಬಿಟ್ಟು ವಿಮಾ ಕಂಪನಿಗಳ ಕಲ್ಯಾಣ ಕ್ಕ ನಿಂತು ಬಿಟ್ಟದ್ದು ಯಾಕ?

ಮೊದಲನೇದಾಗಿ ನೂರರಾಗ ಬರೇ ಮೂವತ್ತು ಮಂದಿ ಅಷ್ಟ ವಿಮಾದಾಗ ಬರತಾರ. ಅದೂ ಅವರು ಶೇಕಡಾ ಒಂದು ರೊಕ್ಕ ಕೊಟ್ಟಿದ್ದರ. ಇಲ್ಲಾ ಸಾಲಾ ತೊಗೊಂಡಿದ್ದರ. ಇನ್ನ ಅದರ ಪರಿಹಾರ ಅವರ ನಷ್ಟ ಭರ್ತಿಗೆ ಸಾಕಾಗಂಗಿಲ್ಲ. ಮುಂದಿನ ಪೀಕಿನ ಖರ್ಚು ಕಳಿಲಿಕ್ಕೆ ಅವರಿಗೆ ಸಾಕಾಗತದ ಅಷ್ಟ. ವಿಮಾ ಕಂಪನಿಗಳು ನೂರು ರೂಪಾಯಿ ರೈತರು ಹಾಗೂ ಸರಕಾರದ ಕಡೆ ಇಸಗೊಂಡು 73 ರೂಪಾಯಿ ರೈತರಿಗೆ ಕೊಟ್ಟಾವು. ಅತ್ಯಂತ ಘೋರ ಬರಗಾಲ, ಪ್ರವಾಹದಾಗ ಸಹ ಅವರು ಕೊಡೋ ಮೊತ್ತ ಹೆಚ್ಚಾಗಿಲ್ಲ. ಇನ್ನ ನಮ್ಮ ಸರಕಾರ ಕಣ್ಣೀರಿನ್ಯಾಗ ಕೈ ತೊಳಕೊಂಡು ಗೋವಾಕ್ಕ ದುಡೀಲಿಕ್ಕೆ ಹೊಂಟಿರೋ ನಮ್ಮ ಉತ್ತರ ಕರ್ನಾಟಕದವರಿಗೆ ಅವರ ಬೆಳೆ ನಷ್ಟ ಪರಿಹಾರ ಮಾಡದೇ ಕಂಪನಿಗಳಿಗೆ ಹೇಳಿದರ ಯಾರನ್ನು ಅನ್ನೋಣು, ಯಾರನ್ನ ಬಿಡೋಣು?

ನೀರಾವರಿಯ ಬಗ್ಗೆ ಹೇಳಿದಷ್ಟೂ ಉಳೀತದ. ಅರವತ್ತರ ದಶಕದಾಗ ಇರೋ ಸಂಪನ್ಮೂಲ ಎಲ್ಲಾ ಡ್ಯಾಮುಗಳಿಗೆ ಹಾಕ್ರಿ. ಒಂದು ಸತೆ ನೀರಾವರಿ ಬಂತೂ ಅಂದರ ರೈತರು ಸುಬಧ್ರರಾಗತಾರ, ನಾಡು ಸುಭಿಕ್ಷ ಆಗತದ, ಬಡತನ ಹೋಗಿರತದ, ನಮ್ಮ ಆದಾಯನೂ ಹೆಚ್ಚು ಆಗತದ, ಇದ್ದ ಸಂಪನ್ಮೂಲ ಬ್ಯಾರೆ ಕಡೆ ಹಾಕಬಹುದು, ಅಂತ ನಮ್ಮ ದೇಶದ ಆರ್ಥಿಕ ತಜ್ಞರು ಹಾಗೂ ಪಂಚವಾರ್ಷಿಕ ಯೋಜನೆಗಳ ಕರ್ತಾರರು ನಿರ್ಧಾರ ಮಾಡಿದರಂತ. ಅದಕ್ಕ ಇತರ ಮೂಲಸೌಕರ್ಯಗಳಿಗಿಂತ ನೀರಾವರಿಗೆ ಹೆಚ್ಚಿನ ಬಜೆಟ್ಟಿನ ಬೆಂಬಲ ಸಿಗ್ತು. ಲಗೂ ನಿರ್ಣಯ ತಗೋಳೋ ಅನುಕೂಲ ಇರಲಿ ಅಂತ ಹೇಳಿ ನೀರಾವರಿ ಇಲಾಖೆ ವಿಕೇಂದ್ರೀಕರಣ ಆಗಲಿಲ್ಲ. ಆದರ 50 ವರ್ಷಗಳ ಅಂಧಾದುಂದಿ ಖರ್ಚಿನ ನಂತರ ಏನಾಗೇದ? ನೀರಾವರಿ ಪ್ರದೇಶ ಕೇವಲ 10 ಶೇಕಡಾ ಹೆಚ್ಚಾಗೇದ. ದೊಡ್ಡ ನೀರಾವರಿ ಯೋಜನೆಗಳಿಂದ ಮುಳುಗಡೆ, ಪ್ರವಾಹ ಮುಂತಾದ ಸಮಸ್ಸೆಗಳು ಹೆಚ್ಚಾಗ್ಯಾವು. ಬಡವರ ಬಸಿದ ಸುಂಕದಿಂದ ಕಟ್ಟಿಡ ಡ್ಯಾಮಿನ್ಯಾಗ ಹೂಳು ಹಾಗೂ ಸ್ಥಳೀಯ ರಾಜಕಾರಣಿ ರಾಜ್ಯ- ರಾಷ್ಟ್ರಮಟ್ಟಕ್ಕೆ ಬೆಳೆದ ರಹಸ್ಯದ ಧೂಳು ಮಾತ್ರ ತುಂಬೇದ. ರೈತರು ಅಭದ್ರರಾಗಿ, ನಾಡು ದುರ್ಭಿಕ್ಷ ವಾಗೇ ಉಳಿದದ.

ಸಾವಿರಾರು ಎಕರೆ ಮುಳುಗಿಸಿ ನೂರಾರು ಎಕರೆಗೆ ನೀರು ಹರಿಸುವ ದೊಡ್ಡ ಯೋಜನೆಗಳ ಮೇಲೆ ಕಣ್ಣು ಹರಿಸದೇ ಜಪಾನು ದೇಶದಂಗ ಕಮ್ಮೀ ಖರ್ಚಿನ ಸಣ್ಣಸಣ್ಣ ಯೋಜನೆಗಳನ್ನ, ಸ್ಥಳೀಯ ರೈತರ ಮೆಹರಬಾನಿಕೆಯೊಳಗ ನೀಟಾಗಿ ಮಾಡಿದ್ದರ ಹಳ್ಳೀ ಆರ್ಥಿಕತೆ ಕುಂಡದಾಗ ಹೂಬೆಳೆಸಿದಂಗ ನೀಟಾಗಿ ಇರ್ತಿತ್ತು. ಮರಿ ಪುಢಾರಿಗಳು ತಿಮಿಂಗಿಲುಗಳಾಗುವ ಸಾಧ್ಯತೆ ಕಮ್ಮಿ ಇರ್ತಿತ್ತು. ಆ ಅವಕಾಶ ಕಳಕೊಂಡೇವಿ ಅನ್ನಸಂಗಿಲ್ಲೇನು, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...