“ಗುಜರಾತ್ನ ಮುಖ್ಯಮಂತ್ರಿ ವಿಜಯ್ ರೂಪಾಣಿ ಮನುಸ್ಮೃತಿಯನ್ನು ಅನುಸರಿಸುತ್ತಿದ್ದರೆಯೆ ಹೊರತು ಸಂವಿಧಾನವನ್ನಲ್ಲ” ಎಂಬುದಾಗಿ ಹೇಳಿಕೆ ನೀಡಿದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯವರನ್ನು ಗುಜರಾತ್ ವಿಧಾನಸಭಾ ಸ್ಪೀಕರ್ ಮೂರು ದಿನಗಳ ಕಾಲ ಇಂದು ಅಮಾನತುಗೊಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಜಿಗ್ನೇಶ್ ಮೇವಾನಿಯವರು, ಸಂವಿಧಾನವನ್ನು ಬೆಂಬಲಿಸುವಾಗ ಅಮಾನತುಗೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.
Gujarat Vidhansabha's speaker suspended me today for three-days for calling the @vijayrupanibjp government a follower of 'Manusmriti', and not the Constitution.
I am proud to be suspended while supporting the Constitution.
— Jignesh Mevani (@jigneshmevani80) December 9, 2019
ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸದಿರುವ ಸರ್ಕಾರದ ನಡೆಯನ್ನು ಖಂಡಿಸಿದ ಅವರು ಮನುವಾದಿ ಸರ್ಕಾರವು ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಟೀಕಿಸಿದ್ದಾರೆ.
ಈ ಹಿಂದೆ ವಿಧಾನಸಭೆಯಲ್ಲಿ ಮಾತನಾಡುವಾಗ ಸ್ಪೀಕರ್ ರಾಜೇಂದ್ರ ತ್ರಿವೇದಿ ನನ್ನ ಮೈಕ್ ಮ್ಯೂಟ್ ಮಾಡಿದ್ದರು. ದಲಿತ ಶಾಸಕರನ್ನು ಅಮಾನತುಗೊಳಿಸಿ ಮತ್ತು ವಿಧಾನಸಭೆಯಿಂದ ಹೊರಗೆ ಕಳಿಸಿ ಈಗ ಸಂವಿಧಾನದ ಬಗ್ಗೆ ಮಾತನಾಡಲು ಯೋಜಿಸಿದ್ದಾರೆ. ”ಇದೇ ಗುಜರಾತ್ ಮಾದರಿ’ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.