Homeಅಂತರಾಷ್ಟ್ರೀಯದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು 'ಟ್ರಂಪ್ ಗೋಲ್ಡ್ ಕಾರ್ಡ್'

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

- Advertisement -
- Advertisement -

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ ‘ಟ್ರಂಪ್ ಗೋಲ್ಡ್ ಕಾರ್ಡ್’ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ.

‘ಟ್ರಂಪ್ ಗೋಲ್ಡ್ ಕಾರ್ಡ್’ ಅನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ EB-5 ವೀಸಾ ಕಾರ್ಯಕ್ರಮಕ್ಕೆ ಬದಲಾಗಿ ಪರಿಚಯಿಸಲಾಗಿದೆ. ಕಳೆದ ವರ್ಷ 14,000 EB-5 ವೀಸಾಗಳನ್ನು ನೀಡಲಾಗಿದೆ ಎಂದು EB-5ನ ವ್ಯಾಪಾರ ಸಂಘವಾದ ಇನ್‌ವೆಸ್ಟ್ ಇನ್‌ ದಿ ಯುಎಸ್‌ಎ ತಿಳಿಸಿದೆ.

ಈ ವರ್ಷದ ಜೂನ್‌ನಲ್ಲಿ ಯುಎಸ್‌ ವಾಣಿಜ್ಯ ಇಲಾಖೆಯು trumpcard.gov ವೆಬ್‌ಸೈಟ್ ಪ್ರಾರಂಭಿಸಿತ್ತು. ಈ ಮೂಲಕ ಅರ್ಜಿದಾರರು ತಮ್ಮ ಹೆಸರು, ಪ್ರದೇಶ ಮತ್ತು ಇಮೇಲ್ ವಿಳಾಸವನ್ನು ಸಲ್ಲಿಸಲು ಅವಕಾಶ ನೀಡಿತ್ತು. ವೆಬ್‌ಸೈಟ್‌ ಅಧಿಕೃತವಾಗಿ ನೋಂದಣಿಗೆ ತೆರೆದಾಗ ತಿಳಿಸುವುದಾಗಿ ಹೇಳಿತ್ತು. ಈ ವಾರ ವೆಬ್‌ಸೈಟ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಈಗ ಕೇವಲ ನೋಂದಣಿ ಮಾಡಿಕೊಳ್ಳುವುದು ಮಾತ್ರವಲ್ಲ, ನೇರವಾಗಿ ಪೂರ್ತಿ ಅರ್ಜಿ ಸಲ್ಲಿಸುವ ಸೌಲಭ್ಯವೂ ತೆರೆಯಲಾಗಿದೆ.

ವೆಬ್‌ಸೈಟ್‌ನಲ್ಲಿ ಗೋಲ್ಡ್ ಕಾರ್ಡ್ ಪೋಟೋ ಚಿನ್ನದ ಬಣ್ಣದಲ್ಲಿದೆ. ಅದರದಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ ಎಂದು ಬರೆಯಲಾಗಿದೆ. ಟ್ರಂಪ್ ಫೋಟೋ, ಸಹಿ, ಸ್ಟಾಚ್ಯೂ ಆಫ್ ಲಿಬರ್ಟಿ, ಅಮೆರಿಕದ ರಾಷ್ಟ್ರ ಧ್ವಜ ಮತ್ತು ಹದ್ದಿನ ಚಿತ್ರವಿದೆ.

ಟ್ರಂಪ್ ಈ ವರ್ಷದ ಫೆಬ್ರವರಿಯಲ್ಲಿ ಈ ಯೋಜನೆಯನ್ನು ಮೊದಲು ಘೋಷಿಸಿದ್ದರು. ನಂತರ ಏಪ್ರಿಲ್‌ನಲ್ಲಿ, ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ತಮ್ಮ ಫೋಟೋ ಇರುವ ಚಿನ್ನದ ಬಣ್ಣದ ಕಾರ್ಡ್‌ನ ಮಾದರಿಯನ್ನು ತೋರಿಸಿದ್ದರು.

ಏನಿದು EB-5 ವೀಸಾ?

ಉದ್ಯೋಗ ಆಧಾರಿತ ವೀಸಾ ವ್ಯವಸ್ಥೆಯ ಭಾಗವಾಗಿರುವ EB-5 ಕಾರ್ಯಕ್ರಮವನ್ನು 1990ರಲ್ಲಿ ಅಮೆರಿಕ ಕಾಂಗ್ರೆಸ್ ರಚಿಸಿತು. ಇದನ್ನು ಯುಎಸ್‌ ಪೌರತ್ವ ಮತ್ತು ವಲಸೆ ಸೇವೆಗಳು (USCIS) ನಿರ್ವಹಿಸುತ್ತದೆ.

ಇದು ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ವಿದೇಶಿಯರಿಗೆ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ನೀಡುತ್ತದೆ. ಹೂಡಿಕೆದಾರರು ಕನಿಷ್ಠ 1.05 ಮಿಲಿಯನ್ ಡಾಲರ್ (ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ 800,000 ಡಾಲರ್) ಹೂಡಿಕೆ ಮಾಡಬೇಕು ಮತ್ತು ಅಮೆರಿಕನ್ನರಿಗೆ ಕನಿಷ್ಠ 10 ಉದ್ಯೋಗಗಳನ್ನು ಸೃಷ್ಟಿಸಬೇಕು.

ಈ ಕಾರ್ಯಕ್ರಮದಡಿಯಲ್ಲಿ, ಹೂಡಿಕೆದಾರರು (ಮತ್ತು ಅವರ ಸಂಗಾತಿಗಳು ಮತ್ತು 21 ವರ್ಷದೊಳಗಿನ ಅವಿವಾಹಿತ ಮಕ್ಕಳು) ಅಮೆರಿಕದಲ್ಲಿ ವಾಣಿಜ್ಯ ಉದ್ಯಮದಲ್ಲಿ ಅಗತ್ಯವಾದ ಹೂಡಿಕೆ ಮಾಡಿದರೆ ಅಥವಾ ಅರ್ಹ ಅಮೆರಿಕನ್ನರಿಗೆ 10 ಶಾಶ್ವತ ಪೂರ್ಣ ಸಮಯದ ಉದ್ಯೋಗ ನೀಡುವುದಾದರೆ ಕಾನೂನುಬದ್ಧ ಶಾಶ್ವತ ನಿವಾಸಕ್ಕೆ (ಗ್ರೀನ್ ಕಾರ್ಡ್ ಹೊಂದಿರುವವರಾಗಲು) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಟ್ರಂಪ್ ಗೋಲ್ಡ್ ಕಾರ್ಡ್ ಎಂದರೇನು?

ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ಕಾರ್ಯಕ್ರಮವು ವಿದೇಶಿಯರಿಗೆ ಅಮೆರಿಕದಲ್ಲಿ ನಿವಾಸ ಮತ್ತು ಕೆಲಸದ ಹಕ್ಕುಗಳನ್ನು ನೀಡುತ್ತದೆ. ಅಲ್ಲದೆ, ಆಡಳಿತದ ತೊಂದರೆಗಳನ್ನು ಎದುರಿಸದೆ ಪೌರತ್ವವನ್ನು ಪಡೆಯುವ ಮಾರ್ಗವನ್ನು ಒದಗಿಸುತ್ತದೆ.

ವೆಬ್‌ಸೈಟ್ ಪ್ರಕಾರ, ಅನುಮೋದಿತ ಅರ್ಜಿದಾರರು EB-1 ಅಥವಾ EB-2 ವೀಸಾ ಹೊಂದಿರುವವರಾಗಿ ಕಾನೂನು ಸ್ಥಾನಮಾನವನ್ನು ಪಡೆಯುತ್ತಾರೆ. ಈ ವಿಭಾಗಗಳು ಆದ್ಯತೆಯ ಉನ್ನತ ಶ್ರೇಣಿಯ ವರ್ಗಗಳಾಗಿದ್ದು, ಅಸಾಧಾರಣ ಸಾಮರ್ಥ್ಯ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುತ್ತವೆ.

ಗೋಲ್ಡ್ ಕಾರ್ಡ್‌ಗೆ ಯಾರು ಅರ್ಹರು?

ಟ್ರಂಪ್ ಗೋಲ್ಡ್ ಕಾರ್ಡ್ ತೆಗೆದುಕೊಳ್ಳಲು 3 ಮುಖ್ಯ ಷರತ್ತುಗಳನ್ನು ಪೂರೈಸಬೇಕು.

  1. ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಅರ್ಹರಾಗಿರಬೇಕು (ಅಂದರೆ ಕ್ರಿಮಿನಲ್ ರೆಕಾರ್ಡ್, ಭಯೋತ್ಪಾದನೆ ಸಂಬಂಧ ಇರಬಾರದು)
  2. ದೇಶದ ಒಳಗೆ ಬಿಡಲು ಅಮೆರಿಕ ಸರ್ಕಾರದ ಒಪ್ಪಿಗೆ ಇರಬೇಕು (ಯಾವುದೇ ದೊಡ್ಡ ತಪ್ಪು ಮಾಡಿರಬಾರದು, ಗಂಭೀರ ರೋಗಗಳಿರಬಾರದು)
  3. ಅರ್ಜಿ ಸಲ್ಲಿಸುವಾಗ ಅರ್ಜಿದಾರರ ದೇಶದವರಿಗೆ ವೀಸಾ ಖಾಲಿ ಇರಬೇಕು

ಕೆಲವು ದೇಶದ (ಉದಾಹರಣೆಗೆ : ಭಾರತ, ಚೀನಾ, ಮೆಕ್ಸಿಕೋ) ಬಹಳ ಜನರು ಈಗಾಗಲೇ ಅರ್ಜಿ ಹಾಕಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು 10 ಲಕ್ಷ ಡಾಲರ್ ಕೊಟ್ಟರೂ ಕೂಡ ಗೋಲ್ಡ್ ಕಾರ್ಡ್ ಪಡೆಯಲು 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಕಾಯಬೇಕಾಗುತ್ತದೆ.

ಟ್ರಂಪ್ ಗೋಲ್ಡ್ ಕಾರ್ಡ್ ಅಡಿ ಬರುವ ವಿವಿಧ ವೀಸಾಗಳು ಯಾವುವು?

1.ಟ್ರಂಪ್ ಗೋಲ್ಡ್ ಕಾರ್ಡ್

ಟ್ರಂಪ್ ಗೋಲ್ಡ್ ಕಾರ್ಡ್ ಬೇಕಾದರೆ ಮೊದಲು ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಗೆ (ಡಿಹೆಚ್ಎಸ್‌) 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಪ್ರಾಸೆಸಿಂಗ್ ಶುಲ್ಕ ಕಟ್ಟಬೇಕು. ಈ ಹಣ ಮರುಪಾವತಿ ಆಗುವುದಿಲ್ಲ. ಏಕೆಂದರೆ, ಇದನ್ನು ಬ್ಯಾಕ್‌ಗ್ರೌಂಡ್ ಚೆಕ್ ಮತ್ತು ಆರಂಭದ ಪರಿಶೀಲನೆಗೆ ಬಳಸುತ್ತಾರೆ. ಈ ಶುಲ್ಕ ಕಟ್ಟಿದ ಕೂಡಲೇ ಅರ್ಜಿ ಅನುಮೋದನೆ ಮತ್ತು ವೀಸಾ ನೀಡುವ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ. ಆದರೆ, ಅರ್ಜಿ ಹಾಕಿದವರು ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ಇತರ ಶುಲ್ಕಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿರಬೇಕು.

ಗೋಲ್ಡ್ ಕಾರ್ಡ್‌ ಪಡೆಯಲು ಅರ್ಜಿ ಹಾಕಿದವರು ಕೊಡುವ 1 ಮಿಲಿಯನ್ ಡಾಲರ್ (8.5 ಕೋಟಿ ರೂ.) ಹಣವನ್ನು ‘ಗಿಫ್ಟ್’ ಅಥವಾ ನೀವು ಅಮೆರಿಕಕ್ಕೆ ದೊಡ್ಡ ಪ್ರಯೋಜನ ಕೊಡುತ್ತೀರಿ ಎಂಬ ಸಾಕ್ಷ್ಯ ಎಂದು ಪರಿಗಣಿಸುವುದಾಗಿ ವೆಬ್‌ಸೈಟ್‌ ಹೇಳುತ್ತದೆ. ಅಂದರೆ, ಅರ್ಜಿದಾರರು ಕೊಡುವ ಹಣ ನಿಜವಾಗಿಯೂ ‘ಹೂಡಿಕೆ’ ಅಲ್ಲ, ಬದಲಿಗೆ ಅದು ಸರ್ಕಾರಕ್ಕೆ ನೇರ ದಾನ ಕೊಟ್ಟಂತೆ.

ಇವಿಷ್ಟೇ ಅಲ್ಲದೆ, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ಗೆ ಹೆಚ್ಚುವರಿ ಶುಲ್ಕವನ್ನೂ ಕಟ್ಟಬೇಕಾಗಬಹುದು (ಉದಾ: ಮೆಡಿಕಲ್ ಚೆಕ್‌ಅಪ್, ಇಂಟರ್ವ್ಯೂ ಫೀಗಳು). ಇದು ಅರ್ಜಿದಾರರ ದೇಶ ಮತ್ತು ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ.

2. ಟ್ರಂಪ್ ಕಾರ್ಪೊರೇಟ್ ಗೋಲ್ಡ್ ಕಾರ್ಡ್

ಈ ಕಾರ್ಪೊರೇಟ್ ಗೋಲ್ಡ್ ಕಾರ್ಡ್ ಕಂಪನಿ (ಸ್ಪಾನ್ಸರ್) ತನ್ನ ಒಬ್ಬ ಅಥವಾ ಹೆಚ್ಚು ಉದ್ಯೋಗಿಗಳಿಗೆ ನೀಡಬಹುದು. ಆದರೆ, ಕಂಪನಿ ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ (ಡಿಹೆಚ್‌ಎಸ್‌)ಗೆ 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಕಟ್ಟಬೇಕು. ಇದು ಮರುಪಾವತಿ ಆಗದು. ಇದನ್ನು ಉದ್ಯೋಗಿಯ ಬ್ಯಾಕ್‌ಗ್ರೌಂಡ್ ಚೆಕ್‌ಗೆ ಬಳಸುತ್ತಾರೆ.

ಕಂಪನಿ 2 ಮಿಲಿಯನ್ ಡಾಲರ್ (ಸುಮಾರು 17 ಕೋಟಿ ರೂ.) ‘ಗಿಫ್ಟ್’ ಹಣವನ್ನು ಕೊಡಬೇಕು. ಇದು ಅಮೆರಿಕ ಸರ್ಕಾರಕ್ಕೆ ನೇರವಾಗಿ ಹೋಗುತ್ತದೆ, ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪಡೆಯಲು ಸಹಾಯ ಮಾಡುತ್ತದೆ.

ಕಂಪನಿ ಒಬ್ಬ ಉದ್ಯೋಗಿಯ ಸ್ಪಾನ್ಸರ್‌ಷಿಪ್ ನಿಲ್ಲಿಸಿ, ಅವರಿಗೆ ಕೊಟ್ಟ 2 ಮಿಲಿಯನ್ ಡಾಲರ್ ಗಿಫ್ಟ್ ಅನ್ನು ಹೊಸ ಉದ್ಯೋಗಿಯನ್ನು ಸ್ಪಾನ್ಸರ್ ಮಾಡಲು ಬಳಸಬಹುದು.

ವಾರ್ಷಿಕವಾಗಿ 2 ಮಿಲಿಯನ್‌ನ 1 ಶೇಕಡ (ಸುಮಾರು 17 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು. ಇದು ಕಾರ್ಡ್ ಚಾಲೂಕರಣೆಯನ್ನು ಕಾಪಾಡಲು. ಉದ್ಯೋಗಿ ಬದಲಾಯಿಸಿದರೆ ಅಥವಾ ಹೊಸ ಬ್ಯಾಕ್‌ಗ್ರೌಂಡ್ ಮಾಡಿದರೆ 2 ಮಿಲಿಯನ್‌ನ ಶೇಕಡ 5ರಷ್ಟು (ಸುಮಾರು 85 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು.

3.ಟ್ರಂಪ್ ಪ್ಲಾಟಿನಂ ಕಾರ್ಡ್‌

ಈ ಕಾರ್ಡ್ ವಿದೇಶಿ ಆದಾಯದ ಮೇಲೆ ತೆರಿಗೆ ವಿಧಿಸದೆ ವ್ಯಕ್ತಿಗಳು ವರ್ಷಕ್ಕೆ 270 ದಿನಗಳವರೆಗೆ ಅಮೆರಿಕದಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ. ಇದು ಪ್ರಯಾಣ ವೀಸಾಗಳ ಅಗತ್ಯವನ್ನು ನಿವಾರಿಸುತ್ತದೆ.

ಈ ಪ್ಲಾಟಿನಂ ಕಾರ್ಯಕ್ರಮಕ್ಕೆ ಸರ್ಕಾರ ಈಗಾಗಲೇ ವೇಟ್‌ಲಿಸ್ಟ್ (ಕಾಯುವ ಪಟ್ಟಿ) ತಯಾರಿಸಿದೆ. ಇದು ಇನ್ನೂ ಆರಂಭವಾಗಿಲ್ಲ, ಹಾಗಾಗಿ ಆಸಕ್ತರನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಈ ಪಟ್ಟಿ ಇದೆ.

ಪ್ಲಾಟಿನಂ ಕಾರ್ಡ್‌ಗೆ 5 ಮಿಲಿಯನ್ ಡಾಲರ್ (ಸುಮಾರು 42 ಕೋಟಿ ರೂ.) ಕೊಡುಗೆ ನೀಡಬೇಕು. ಇದು ಇನ್ನೂ ಈ ಮಟ್ಟದಲ್ಲೇ ಇರುತ್ತದೆ ಎಂಬ ಖಚಿತತೆ ಇಲ್ಲ. ಹಾಗಾಗಿ, ಈಗಲೇ ವೇಟ್‌ಲಿಸ್ಟ್‌ಗೆ ಸೇರಿಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ. ಅಂದರೆ, ಹಣದ ಮೊತ್ತ ಬದಲಾಗಬಹುದು (ಹೆಚ್ಚಾಗಬಹುದು).

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...