Homeಮುಖಪುಟಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

- Advertisement -
- Advertisement -

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು ಮತ್ತು ಇಂದು ಕ್ಯೂಬಾ ಎದುರಿಸುತ್ತಿರುವ ಕಠಿಣ ಸವಾಲುಗಳನ್ನು ಸ್ಮರಿಸಲು ಈ ವರ್ಷವನ್ನು ಅಧಿಕೃತವಾಗಿ ‘ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವದ ವರ್ಷ’ ಎಂದು ಘೋಷಿಸಲಾಗಿದೆ.

ಇಡೀ ಕ್ಯೂಬಾದಾದ್ಯಂತ ಫಿಡೆಲ್ ಶತಮಾನೋತ್ಸವವನ್ನು ಅತ್ಯಂತ ಗೌರವದಿಂದ ಆಚರಿಸಲಾಗುತ್ತಿದೆ. ಕಮ್ಯುನಿಸ್ಟ್ ಪಕ್ಷದ ಅಧಿಕೃತ ಪತ್ರಿಕೆಯಾದ ‘ಗ್ರಾನ್ಮಾ’ (Granma), ಫಿಡೆಲ್ ಅವರ ವಿಚಾರಗಳನ್ನು ಗೌರವಿಸಲು ‘ಫಿಡೆಲ್ ಜೊತೆ 100 ವರ್ಷಗಳು (100 Years With Fidel) ಎಂಬ ವಿಶೇಷ ವೆಬ್‌ಸೈಟ್ ಪ್ರಾರಂಭಿಸಿದೆ. ಕೇಂದ್ರ ಸಮಿತಿಯು ಅನುಮೋದಿಸಿದ ಈ ಸ್ಮರಣಾರ್ಥ ಕಾರ್ಯಕ್ರಮಗಳು ಡಿಸೆಂಬರ್ 2026 ರವರೆಗೆ ಮುಂದುವರಿಯಲಿವೆ. ಆಗಸ್ಟ್ 10 ರಿಂದ 13 ರವರೆಗೆ ಹವಾನಾದಲ್ಲಿ ‘ಫಿಡೆಲ್: ಪರಂಪರೆ ಮತ್ತು ಭವಿಷ್ಯ’ ಎಂಬ ಅಂತಾರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿದ್ದು, ಇತಿಹಾಸಕಾರರು ಮತ್ತು ಸಾಮಾಜಿಕ ನಾಯಕರು ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದಲ್ಲಿ ಫಿಡೆಲ್ ಅವರ ಆಲೋಚನೆಗಳ ಪ್ರಸ್ತುತತೆಯ ಬಗ್ಗೆ ಚರ್ಚಿಸಿದ್ದಾರೆ.

ಫಿಡೆಲ್ ಬಿಟ್ಟುಹೋದ ಪರಂಪರೆ ಕೇವಲ ನೆನಪಾಗಿ ಉಳಿದಿಲ್ಲ, ಅದು ಇಂದಿನ ಸಂಕಷ್ಟಗಳಿಗೆ ಉತ್ತರಿಸುವ ಜೀವಂತ ಶಕ್ತಿಯಾಗಿದೆ. ತೀವ್ರ ಸಂಪನ್ಮೂಲ ಕೊರತೆಯ ನಡುವೆಯೂ “ಆಂತರಿಕ ಸುವ್ಯವಸ್ಥೆಗೆ ವಿಶೇಷ ಗಮನ ನೀಡಿ” ಎಂಬ ಫಿಡೆಲ್ ಅವರ ಮಾತನ್ನು ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕ್ಯಾನಲ್ ಸದಾ ಸ್ಮರಿಸುತ್ತಾರೆ. ಕ್ಯೂಬಾವನ್ನು ಮುನ್ನಡೆಸಲು ಅವರ ಸಿದ್ಧಾಂತವೇ ದಾರಿದೀಪವಾಗಿದೆ.

ಕ್ಯೂಬಾ ಎದುರಿಸುತ್ತಿರುವ ಸವಾಲುಗಳು

ಅಮೆರಿಕವು ಕ್ಯೂಬಾ ಮೇಲೆ ಹೇರಿರುವ ಕ್ರೂರ ಆರ್ಥಿಕ ದಿಗ್ಬಂಧನ ಮತ್ತು ದೈನಂದಿನ ಹಣಕಾಸಿನ ಕಿರುಕುಳವನ್ನು ಕ್ಯೂಬಾ ಪ್ರಬಲವಾಗಿ ಎದುರಿಸುತ್ತಿದೆ. ಇತ್ತೀಚಿನ ಅತ್ಯಂತ ಭೀಕರ ಕ್ರಮವೆಂದರೆ ಅಮೆರಿಕ ಹೇರಿದ ಇಂಧನ ದಿಗ್ಬಂಧನ (Oil Embargo). ಜನವರಿ 2026 ರಲ್ಲಿ, ಕ್ಯೂಬಾಗೆ ತೈಲ ರಫ್ತು ಮಾಡುವ ದೇಶಗಳ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿ ಅಮೆರಿಕ ಬೆದರಿಕೆ ಹಾಕಿತ್ತು. ಪರಿಣಾಮವಾಗಿ, ಅಮೆರಿಕದ ನಿರ್ಬಂಧಗಳಿಗೆ ಹೆದರಿ ಹಡಗು ಏಜೆನ್ಸಿಗಳು ಕ್ಯೂಬಾಗೆ ತೈಲ ಸಾಗಿಸಲು ನಿರಾಕರಿಸಿದವು. ತಿಂಗಳುಗಟ್ಟಲೆ ದೇಶಕ್ಕೆ ಒಂದು ಹನಿ ಇಂಧನವೂ ಬರಲಿಲ್ಲ. ಇದರಿಂದಾಗಿ ತೀವ್ರ ಇಂಧನ ಕ್ಷಾಮ ಉಂಟಾಗಿ, ಕಳೆದ 24 ತಿಂಗಳುಗಳಲ್ಲಿ ಕ್ಯೂಬಾ 12 ಬಾರಿ ದೇಶಾದ್ಯಂತ ವಿದ್ಯುತ್ ಕಡಿತ (Blackout) ಅನುಭವಿಸಿದೆ; ಇದರಲ್ಲಿ 7 ಬ್ಲ್ಯಾಕ್‌ಔಟ್‌ಗಳು 2026 ಒಂದರಲ್ಲೇ ಸಂಭವಿಸಿವೆ!

ಜನಸಾಮಾನ್ಯರ ಮೇಲಾದ ಪರಿಣಾಮಗಳು ಭೀಕರವಾಗಿವೆ:

  • ವಿದ್ಯುತ್ ಕೊರತೆಯಿಂದಾಗಿ ಆಸ್ಪತ್ರೆಗಳಲ್ಲಿ 1,20,000ಕ್ಕೂ ಹೆಚ್ಚು ಜನರು ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದಾರೆ (ಇದರಲ್ಲಿ 11,000ಕ್ಕೂ ಹೆಚ್ಚು ಮಕ್ಕಳಿದ್ದಾರೆ).
  • ಆಪರೇಷನ್ ಥಿಯೇಟರ್‌ಗಳಲ್ಲಿ ವಿದ್ಯುತ್ ಇಲ್ಲ. ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕಸಿದುಬಿದ್ದಿದೆ.
  • ಪೆಟ್ರೋಲ್ ಬಂಕ್‌ಗಳು ಖಾಲಿಯಾಗಿದ್ದು, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ.
  • ಒಮ್ಮೆ ಕ್ಯೂಬಾದ ಆರ್ಥಿಕತೆಯ ಬೆನ್ನೆಲುಬಾಗಿದ್ದ ಸಕ್ಕರೆ ಉದ್ಯಮ ಕುಸಿದಿದ್ದು, ಜನ ಸಾಮಾನ್ಯ ಅಗತ್ಯಗಳಿಗೆ ಸಕ್ಕರೆಯನ್ನು ಗಗನಚುಕ್ಕಿ ಬೆಲೆಗೆ ಕೊಳ್ಳುವಂತಾಗಿದೆ.

ಇವೆಲ್ಲವೂ ಅಮೆರಿಕ ನಡೆಸುತ್ತಿರುವ ಆರ್ಥಿಕ ಯುದ್ಧ ಮತ್ತು ಸತತ 67 ವರ್ಷಗಳ ಆರ್ಥಿಕ ದಿಗ್ಬಂಧನದ ನೇರ ಪರಿಣಾಮವಾಗಿದೆ. ಇಂದು ಕ್ಯೂಬಾದ ಶೇ. 80 ರಷ್ಟು ಜನರು ಈ ದಿಗ್ಬಂಧನದ ನೆರಳಿನಲ್ಲೇ ಹುಟ್ಟಿ ಬೆಳೆದಿದ್ದಾರೆ.

ಸಾಮ್ರಾಜ್ಯಶಾಹಿಯ ಕುತಂತ್ರ ಮತ್ತು ಕ್ಯೂಬಾದ ಪ್ರತಿರೋಧ

ಅಮೆರಿಕದ ಕಣ್ಣು ಕೇವಲ ಕ್ಯೂಬಾ ಮೇಲಷ್ಟೇ ಅಲ್ಲ, ಇಡೀ ಲ್ಯಾಟಿನ್ ಅಮೆರಿಕದ ಮೇಲಿದೆ. ಜನವರಿ 2026 ರಲ್ಲಿ ಅಮೆರಿಕವು ‘ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಮೂಲಕ ವೆನೆಜುವೆಲಾ ಮೇಲೆ ಮಿಲಿಟರಿ ದಾಳಿ ನಡೆಸಿ, ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆಯಿತು.

ಆದರೆ, ಅಮೆರಿಕದ ಮುಖ್ಯ ಗುರಿ ಕ್ಯೂಬಾವೇ ಆಗಿದೆ. ಕ್ಯೂಬಾವನ್ನು ತಕ್ಷಣವೇ ತನ್ನ ವಶಕ್ಕೆ ಪಡೆಯುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರೆ, ಕೆರಿಬಿಯನ್ ಸಮುದ್ರದಲ್ಲಿ ಅಮೆರಿಕದ ಯುದ್ಧನೌಕೆ ‘USS Nimitz’ ಕ್ಯೂಬಾಗೆ ಬೆದರಿಕೆ ಒಡ್ಡುತ್ತಿದೆ. ಕ್ಯೂಬಾ ಜನರನ್ನು ಆರ್ಥಿಕವಾಗಿ ಹತಾಶೆಗೊಳಿಸಿ, ಆಂತರಿಕವಾಗಿ ಅವರ ಪ್ರತಿರೋಧವನ್ನು ಮುರಿಯುವುದು ಅಮೆರಿಕದ ದುರುದ್ದೇಶವಾಗಿದೆ.

ಆದರೂ ಕ್ಯೂಬಾ ತಗ್ಗಿಲ್ಲ, ಬಗ್ಗಿಲ್ಲ!

ಅಮೆರಿಕದ ಅಪಪ್ರಚಾರಕ್ಕೆ ಕ್ಯೂಬಾ ಜನತೆ ಮರುಳಾಗಿಲ್ಲ. ಅವರು ತಮ್ಮ ಸೃಜನಶೀಲತೆ ಮತ್ತು ಒಗ್ಗಟ್ಟಿನಿಂದ ಜೀವನ ನಡೆಸುತ್ತಿದ್ದಾರೆ.

  • ಗ್ಯಾಸ್ ಅಭಾವವನ್ನು ಎದುರಿಸಲು ಸೌದೆ ಒಲೆಗಳನ್ನು ಬಳಸುತ್ತಿದ್ದಾರೆ.
  • ನೆರೆಹೊರೆಯವರು ಸೇರಿ ಸಾಮುದಾಯಿಕ ಅಡುಗೆಮನೆಗಳನ್ನು ನಡೆಸುತ್ತಿದ್ದಾರೆ ಮತ್ತು ಸೋಲಾರ್ ಪ್ಯಾನೆಲ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
  • ಆಸ್ಪತ್ರೆಗಳಲ್ಲಿ ಲಿಫ್ಟ್ ಮತ್ತು ವಿದ್ಯುತ್ ಇಲ್ಲದಿದ್ದಾಗ, ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ತಮ್ಮ ಕೈಗಳಲ್ಲೇ ಎತ್ತಿಕೊಂಡು ಮೆಟ್ಟಿಲು ಹತ್ತುತ್ತಿದ್ದಾರೆ.
  • ಅಮೆರಿಕ ವೆಂಟಿಲೇಟರ್‌ಗಳನ್ನು ನೀಡಲು ನಿರಾಕರಿಸಿದಾಗ, ಕ್ಯೂಬಾದ ಯುವ ಎಂಜಿನಿಯರ್‌ಗಳು ತಾವೇ ಹೊಸ ವೆಂಟಿಲೇಟರ್‌ಗಳನ್ನು ರೂಪಿಸಿದ್ದಾರೆ.

ಕ್ಯೂಬಾ ಹೊಸ ಭಾವಿಗಳನ್ನು ತೋಡಿ ತನ್ನ ತೈಲ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದೆ ಹಾಗೂ ಕೇವಲ ಒಂದೇ ವರ್ಷದಲ್ಲಿ 1,000 MW ಸೌರಶಕ್ತಿ ಸ್ಥಾವರಗಳನ್ನು ಸ್ಥಾಪಿಸಿ, ನವೀಕರಿಸಬಹುದಾದ ಇಂಧನ ಬಳಕೆಯನ್ನು ಶೇ. 3 ರಿಂದ ಶೇ. 10 ಕ್ಕೆ ಏರಿಸಿದೆ. ಈ ಕುರಿತು ಮಾತನಾಡಿದ ಅಧ್ಯಕ್ಷ ಡಿಯಾಜ್-ಕ್ಯಾನಲ್, “ಅವರು ಸೂರ್ಯನನ್ನು ತಡೆಯಲು ಸಾಧ್ಯವಿಲ್ಲ, ಗಾಳಿಯನ್ನೂ ತಡೆಯಲು ಸಾಧ್ಯವಿಲ್ಲ” ಎಂದಿದ್ದಾರೆ.

ಆರ್ಥಿಕ ದಿಗ್ಬಂಧನದ ನಡುವೆಯೂ ರಷ್ಯಾ, ಚೀನಾ, ಮೆಕ್ಸಿಕೋ ಮತ್ತು ವಿಯೆಟ್ನಾಂ ದೇಶಗಳಿಂದ ಕ್ಯೂಬಾಗೆ ನೆರವು ಹರಿದುಬಂದಿದೆ. ಕ್ಯೂಬಾದ ದಿಗ್ಗಜ ಗಾಯಕ ಸಿಲ್ವಿಯೋ ರೋಡ್ರಿಗಸ್, “ಅವರು ಆಕ್ರಮಣ ಮಾಡಿದರೆ, ನನ್ನ ಕೈಗೆ ಎಕೆಎಂ (AKM) ಗನ್ ಕೊಡಿ” ಎಂದಿದ್ದರೆ, ಅಧ್ಯಕ್ಷ ಡಿಯಾಜ್-ಕ್ಯಾನಲ್, “ಕ್ರಾಂತಿಗಾಗಿ ನಾವು ಪ್ರಾಣ ನೀಡಲು ಸಿದ್ಧ” ಎಂದಿದ್ದಾರೆ.

ಮುರಿಯಲಾಗದ ಕ್ರಾಂತಿಕಾರಿ ಕ್ಯೂಬಾ

ಫಿಡೆಲ್ ಕ್ಯಾಸ್ಟ್ರೋ ಅವರ ಶತಮಾನೋತ್ಸವದ ಈ ಕ್ಷಣದಲ್ಲಿ ಕ್ಯೂಬಾ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿದೆ. ಅಮೆರಿಕದ ದಿಗ್ಬಂಧನ ಮತ್ತು ಸುಳ್ಳು ಪ್ರಚಾರಗಳು ಹಿಂದೆಂದಿಗಿಂತಲೂ ಕ್ರೂರವಾಗಿವೆ. ಆದರೆ ಕ್ಯೂಬಾ ಜನರಿಗೆ ಸತ್ಯ ಏನೆಂದು ತಿಳಿದಿದೆ. ಅವರು ಪ್ರತಿದಿನ ಅದನ್ನು ಎದುರಿಸುತ್ತಿದ್ದಾರೆ, ಗೆಲ್ಲುತ್ತಿದ್ದಾರೆ.

ಡಿಯಾಝ್-ಕ್ಯಾನಲ್ ಹೇಳಿದಂತೆ: “ನಾವು ಶರಣಾಗುವುದಿಲ್ಲ”. ಸತತ 67 ವರ್ಷಗಳ ಆರ್ಥಿಕ ದಿಗ್ಬಂಧನದ ನಡುವೆಯೂ ಕ್ಯೂಬಾ ತನ್ನ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಜೀವಂತವಾಗಿರಿಸಿದೆ.

ಹವಾನಾದಲ್ಲಿ ಇಂದಿಗೂ ಸೂರ್ಯ ಉದಯಿಸುತ್ತಿದ್ದಾನೆ. ಜನರು ಸಂಘಟಿತರಾಗುತ್ತಿದ್ದಾರೆ. ವೈದ್ಯರು ರೋಗಿಗಳನ್ನು 7ನೇ ಮಹಡಿಗೆ ಹೊತ್ತೊಯ್ಯುತ್ತಿದ್ದಾರೆ. ಎಂಜಿನಿಯರ್‌ಗಳು ಹಾಳಾದ ಯಂತ್ರಗಳನ್ನು ಸರಿಪಡಿಸುತ್ತಿದ್ದಾರೆ. ಅಮೆರಿಕದ ಯಾವ ಕಾರ್ಯನಿರ್ವಾಹಕ ಆದೇಶವೂ, ಡಿಜಿಟಲ್ ಅಪಪ್ರಚಾರವೂ ಅಥವಾ ಆರ್ಥಿಕ ದಿಗ್ಬಂಧನವೂ ಈ ಕ್ರಾಂತಿಕಾರಿ ಮನೋಭಾವವನ್ನು ನಾಶಮಾಡಲು ಸಾಧ್ಯವಿಲ್ಲ.

ಫಿಡೆಲ್ ಶತಮಾನೋತ್ಸವದ ಈ ಸಂದರ್ಭದಲ್ಲಿ ಲೆನಿನ್ ಅವರ ಮಾತುಗಳು ನೆನಪಾಗುತ್ತವೆ, “ನಮ್ಮನ್ನು ಬೆದರಿಸಲು ನೋಡಬೇಡಿ ಮಹಾಶಯರೇ, ನಿಮ್ಮಿಂದ ಅದು ಸಾಧ್ಯವಿಲ್ಲ.ಕ್ಯೂಬಾ ಎದೆಗುಂದದೆ ನಿಂತಿದೆ, ಕ್ಯೂಬಾ ಹೋರಾಡುತ್ತಿದೆ, ಕ್ಯೂಬಾ ಇಡೀ ಜಗತ್ತಿಗೆ ಎಂದೆಂದಿಗೂ ಮಾದರಿಯಾಗಿ ಉಳಿಯಲಿದೆ. ಇದು ಫಿಡೆಲ್ ಕ್ಯಾಸ್ಟ್ರೋ ಬಿಟ್ಟುಹೋದ ಶಾಶ್ವತ ಪರಂಪರೆ.

ಅನುವಾದ
ಮೂಲ: ಲೆಫ್ಟ್‌ ವೀವ್ಸ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...

ಬಿಹಾರ| ಗ್ರಾಮ ತೊರೆಯಿರಿ ಅಥವಾ ‘ಘರ್ ವಾಪ್ಸಿ’ಯಾಗಿ; ಹಿಂದುತ್ವ ಗುಂಪಿನಿಂದ ಕ್ರೈಸ್ತ ಕಟುಂಬಗಳಿಗೆ ಬೆದರಿಕೆ

ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದ 42 ಕ್ರಿಶ್ಚಿಯನ್ ಕುಟುಂಬಗಳಿಗೆ ಹಿಂದುತ್ವ ಗುಂಪಿನ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು 'ಕ್ಲಾರಿಯನ್ ಇಂಡಿಯಾ' ನ್ಯೂಸ್‌ ಪೋರ್ಟ್ಲ್ ವರದಿ ಮಾಡಿದೆ. 'ಘರ್ ವಾಪ್ಸಿ'ಯಾಗಿ ಅಥವಾ ಗ್ರಾಮ...

ಭೂಮಾನಂದ ಹತ್ಯೆ: ಕೊಲೆಗಾರರ ಪರ ನಿಂತ ‘ವಾಲ್ಮೀಕಿ ನಾಯಕ ಸಂಘ’ದ ವಿರುದ್ಧ ಆಕ್ರೋಶ: ಆಗಸ್ಟ್ 15ಕ್ಕೆ ಕಪ್ಪುಪಟ್ಟಿ ಪ್ರದರ್ಶನ, ಬೈಕ್ ರ್ಯಾಲಿಗೆ ಕರೆ

ರಾಯಚೂರು: ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಹುಜನ ಮುಖಂಡ ಭೂಮಾನಂದ ಅವರ ಬರ್ಬರ ಕಗ್ಗೋಲೆಯನ್ನು ಖಂಡಿಸಿ, ಕೊಲೆಗಡುಕರ ಪರವಾಗಿ ನಿಂತಿರುವ ಸಂಘಟನೆಗಳು ಹಾಗೂ ಮೌನ ವಹಿಸಿರುವ ಜನಪ್ರತಿನಿಧಿಗಳ ವಿರುದ್ಧ 'ಬಹುಜನ ಮುಖಂಡ ಭೂಮಾನಂದನ...

SIR ಅವಾಂತರ: ನಟ ಪ್ರಕಾಶ್ ರಾಜ್ ಹೆಸರೇ ವೋಟರ್ ಲಿಸ್ಟ್‌ನಿಂದ ನಾಪತ್ತೆ, ನಾಳೆ ಬೆಂಗಳೂರಲ್ಲಿ ಮಹತ್ವದ ಪತ್ರಿಕಾಗೋಷ್ಠಿ

ರಾಜ್ಯದಲ್ಲಿ ನಡೆಯುತ್ತಿರುವ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅವಾಂತರಗಳು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರೇ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ವರ್ಷಗಳಿಂದ ಮತದಾನ...

ಹಳೆ ಮತದಾರರಲ್ಲಿ ಫಾರ್ಮ್ ನಂ.6 ಕೇಳುವುದೇ ಕಾನೂನು ಬಾಹಿರ; ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧ!

"ASDDO ಪಟ್ಟಿಯಲ್ಲಿ ಹೆಸರು ಬಂದಿದ್ದರೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ, ಫಾರ್ಮ್ ನಂ.6 ಸಲ್ಲಿಸುವ ಮೂಲಕ ದಾಖಲೆಗಳನ್ನು ನೀಡಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು" ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ, ಹಳೆ...

SIR: ಅರ್ಹ ಮತದಾರರನ್ನು ಹೊರಗಿಟ್ಟು 1,848 ಹೊಸ ಮತಗಟ್ಟೆ ಸ್ಥಾಪಿಸಲು ಮುಂದಾದ ಚುನಾವಣಾ ಆಯೋಗ

ಒಂದೆಡೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಡಿಲೀಟ್‌ ಆಗುವ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಹೊಸದಾಗಿ 1,848 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಕೇಂದ್ರ ಚುನಾವಣಾ...

ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣದ ಬೆನ್ನಲ್ಲೇ ವೇದಿಕೆ ‘ಶುದ್ಧೀಕರಣ’: ಕೇಂದ್ರ ಸರ್ಕಾರ ಹಾಗೂ ಬಿಜೆಪಿಗೆ ಪ್ರತಿಪಕ್ಷಗಳ ತೀವ್ರ ತರಾಟೆ 

ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿರುವ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೆಲವೇ ದಿನಗಳಲ್ಲಿ, ಬಲಪಂಥೀಯ...

ನೀಟ್ ಪೇಪರ್ ಲೀಕ್ ಪ್ರಕರಣದ ಚಾರ್ಜ್ ಶೀಟ್ ಲೀಕ್ : ಕೋರ್ಟ್ ಕಳವಳ

ನೀಟ್ ಯುಜಿ- 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆಗಾಗಿ ಸ್ಥಾಪಿಸಲಾದ ವಿಶೇಷ ಫಾಸ್ಟ್ ಟ್ರ್ಯಾಕ್ (ಶೀಘ್ರ ಗತಿ) ನ್ಯಾಯಾಲಯವು, 13 ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿರುವ ದೋಷಾರೋಪ...

ಕರ್ನಾಟಕ ಎಸ್‌ಐಆರ್: ಶಾಶ್ವತ ನಿವಾಸಿ ಪ್ರಮಾಣಪತ್ರಕ್ಕೆ ಬೆಂಗಳೂರು ನಗರದಲ್ಲೇ ಭಾರೀ ಬೇಡಿಕೆ: ಕಂದಾಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಡುವೆಯೇ, ಕಂದಾಯ ಇಲಾಖೆಗೆ ಸಲ್ಲಿಕೆಯಾಗುತ್ತಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಅರ್ಜಿಗಳ ಸಂಖ್ಯೆಯಲ್ಲಿ ಬೆಂಗಳೂರು ನಗರ ಜಿಲ್ಲೆಯು...