Homeಮುಖಪುಟಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

- Advertisement -
- Advertisement -

ಜನವರಿ 30, ಮಹಾತ್ಮರ ದೇಹಾಂತ್ಯದ ಪುಣ್ಯಸ್ಮರಣೆಯ ದಿನ. ಅಂದು ಭಾರತ ಸಂವಿಧಾನ ಮೊತ್ತ ಮೊದಲ ವಾಕ್ಯ ‘ಭಾರತದ ಜನತೆಯಾದ ನಾವು’, ‘WE THE PEOPLE OF INDIA’ ಎಂಬುದನ್ನೇ ಧ್ಯೇಯವಾಕ್ಯವಾಗಿಟ್ಟುಕೊಂಡು, ಉಡುಪಿ ಜನಸಾಮಾನ್ಯರು ಒಂದು ಸಾರ್ವಜನಿಕ ಮೆರವಣಿಗೆ ಹಾಗೂ ಸಭೆಗಳನ್ನು ಸಂಘಟಿಸುವ ಮೂಲಕ ಹಂತಕನ ಗುಂಡೇಟಿಗೆ ಬಲಿಯಾದ ಮಹಾತ್ಮರು ಮತ್ತು ಭಾರತ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರಿಗೆ ತಮ್ಮ ಗೌರವ ಸಲ್ಲಿಸಬೇಕು ಎಂದು ತೀರ್ಮಾನಿಸಲಾಗಿದೆ.

ಗಾಂಧೀಜಿಯವರಿಗೆ ಗೌರವ ಸಲ್ಲಿಸುವುದು ಹೇಗೆ? ಬಾಬಾಸಾಹೇಬರನ್ನು ಕೃತಜ್ಞತಾಪೂರ್ವಕವಾಗಿ ನೆನೆಯುವುದು ಎಂದರೆ ಏನು? ಬಾಬಾ ಸಾಹೇಬರ ಅವಿರತ ಶ್ರಮದ ಫಲವಾಗಿ ರಚನೆಯಾದ ಭಾರತ ಸಂವಿಧಾನದ ಮೊದಲ ಪುಟದ ಮೇಲೆಯೇ ಚಲನಶೀಲತೆ ಮತ್ತು ಅಹಿಂಸೆಗಳ ಸಂಕೇತವಾದ ಅಶೋಕಚಕ್ರ ನಮ್ಮ ಗಮನ ಸೆಳೆಯುತ್ತದೆ. ಅಶೋಕಚಕ್ರದಡಿ “ಸತ್ಯಮೇವಜಯತೆ” ಎಂಬ ವಾಕ್ಯವಿದೆ. ಗಾಂಧೀಜಿ ಈ ಶಬ್ದವನ್ನು ಬೀಜಮಂತ್ರವಾಗಿ ಇರಿಸಿಕೊಂಡು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ತನ್ನ ಸತ್ಯಾಗ್ರಹ ಹೋರಾಟವನ್ನು ರೂಪಿಸಿದ್ದರು. ಗೆದ್ದವರು ಬರೆದದ್ದು ಮಾತ್ರ ಚರಿತ್ರೆ ಎಂದು ಗೆದ್ದವರು ಹಾಗೂ ಸೋತವರು. ಎಲ್ಲರೂ ನಂಬಿದ ಕಾಲಘಟ್ಟದಲ್ಲಿ ಗಾಂಧೀಜಿ ಇತಿಹಾಸ ಚಕ್ರವನ್ನೇ ಮುನ್ನಡೆಸಿದರು. ಸಾವಿರಾರು ವರ್ಷ ಭವ್ಯ ಸಾಂಸ್ಕೃತಿಕ ಚರಿತ್ರೆ ಹೊಂದಿರುವ ನಮ್ಮೀ ಭಾರತದ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ದೇಶದ ಎಲ್ಲ ಪ್ರಜೆಗಳೂ ಜಾತಿ, ಮತ, ಧರ್ಮಗಳ ಭೇದವನ್ನು ಲೆಕ್ಕಿಸದೆ ಹೆಣ್ಣು, ಗಂಡು ಎಂಬ ಲಿಂಗ ಅಸಮಾನತೆಯನ್ನು ಸಹ ತೊಡೆದು ಹಾಕಿ, ಭಾರತ ಒಂದು ಸ್ವತಂತ್ರ‍ ಸಮಾನ ಪ್ರಜಾಸತ್ತಾತ್ಮಕ ದೇಶ ಎಂದು ಬಾಬಾ ಸಾಹೇಬರು ಕಾರಣಪುರುಷರಾಗಿದ್ದ ಭಾರತದ ಸಂವಿಧಾನ ಪ್ರತಿಪಾದಿಸಿತು, ಇತಿಹಾಸ ಚಕ್ರ ಮತ್ತೆ ಮುನ್ನಡೆಯಿತು.

ಹಾಲೀ ಕೇಂದ್ರ ಸರಕಾರ ಇದೀಗ ಜಾರಿಗೊಳಿಸಲು ಹೊರಟಿರುವ ‘ಪೌರತ್ವ (ತಿದ್ದುಪಡಿ) ಕಾಯ್ದೆ’ ಭಾರತ ಸಂವಿಧಾನದ ಮೂಲಭೂತ ಆಶಯಗಳಿಗೆ ದ್ರೋಹ ಬಗೆದಿದೆ. ಈ ಕಾಯ್ದೆ ಪ್ರಕಾರ ನಮ್ಮ ನೆರೆಯ ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ಪ್ರಜೆಗಳಿಗೆ ಮಾತ್ರ ಭಾರತದ ಪೌರರಾಗುವ ಅವಕಾಶವಿದೆ. ಹಾಗಿದ್ದರೆ, ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಭಾರತದಲ್ಲಿ ನೆಲೆಸಿರುವ ಮ್ಯಾನ್ಮಾರ್‍ನ ರೋಹಿಂಗ್ಯಮುಸ್ಲಿಮರ ಪಾಡೇನು? ಶ್ರೀಲಂಕಾದ ಅಂತರ್ಯುದ್ಧದಿಂದಾಗಿ ನಿರಾಶ್ರಿತರಾದ ತಮಿಳು ಮೂಲದ ಮುಸ್ಲಿಮ್ ಸಮುದಾಯಕ್ಕೆ ಯಾರು ಉತ್ತರದಾಯಿಗಳು?

ಸಾರಾಸಗಟಾಗಿ ಮುಸ್ಲಿಮ್ ಸಮುದಾಯಕ್ಕೆ ಒಂದು ಮನೋಧರ್ಮ ಒಂದು ಸಂಸ್ಕೃತಿ, ಒಂದು ಭಾಷೆಗಳನ್ನು ಆರೋಪಿಸುವ ಈ ಮನಃಸ್ಥಿತಿ, ಜಾಗತಿಕ ಮುಸ್ಲಿಮ್ ಸಮುದಾಯದಲ್ಲಿ ಪ್ರವಾದಿ ಅಲ್ಲಾಹುವಿನಲ್ಲಿ ನಂಬಿಕೆ ಹೊರತಾಗಿ ಬೇರೆ ಯಾವ ಬಗೆಯ ಸಮಾನತೆ ಇದೆ ಎಂಬ ಕುರಿತು ಯೋಚಿಸಬೇಕು. ದೇಶ, ಪ್ರಾಂತ್ಯ, ಭಾಷೆ, ಸಂಸ್ಕತಿ, ಆಚಾರ, ವಿಚಾರ, ಆಹಾರ, ಉಡುಪು ತೊಡಪು ಬದುಕಿನ ಈ ಎಲ್ಲ ಮೂಲಭೂತ ವಿವರಗಳಲ್ಲೂ ದೇಶದಿಂದ ದೇಶಕ್ಕೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಮುಸ್ಲಿಮ್ ಸಮುದಾಯದ ಒಳಗೇನೆ ಇರುವ ಅಪಾರ ವ್ಯತ್ಯಾಸ ಕಣ್ಣಿದ್ದವನಿಗೆ ಕಾಣಿಸುತ್ತದೆ. ನಮ್ಮ ರಾಜ್ಯದ ಮುಸ್ಲಿಮ್ ಧರ್ಮೀಯರಲ್ಲೇ ಎಷ್ಟು ವೈವಿಧ್ಯತೆಯಿದೆ! ಗುಲ್ಬರ್ಗ, ರಾಯಚೂರು, ಬಿಜಾಪುರಗಳಲ್ಲಿನ ಮುಸ್ಲಿಮರು ಮತ್ತು ಉಡುಪಿ ಮಂಗಳೂರುಗಳ ಮುಸ್ಲಿಮರ ನಡುವೆ ಎಷ್ಟು ವ್ಯತ್ಯಾಸಗಳಿವೆ!

ಕೇಂದ್ರ ಸರಕಾರ ತನ್ನ ಪೌರತ್ವ (ತಿದ್ದುಪಡಿ) ಕಾಯ್ದೆಯ ಮುಖಾಂತರ, ಮುಸ್ಲಿಮ್ ಸಮುದಾಯದ ಈ ವೈವಿಧ್ಯಮಯ ಸಂಸ್ಕೃತಿಯನ್ನೂ ಅಲ್ಲಗಳೆಯುತ್ತಿದೆ. ಒಂದು ಸಮುದಾಯದ ಸಂಸ್ಕೃತಿಯನ್ನು ಅಲ್ಲಗಳೆಯುವುದು ಎಂದರೆ ಆ ಸಮುದಾಯಕ್ಕೆ ಸೇರಿದ ಜನರ ಇರಸ್ತಿಕೆಯನ್ನೇ ಕೊನೆಗೊಳಿಸಿದಂತೆ. ಈ ಮಾತಿಗೆ ಒಂದು ಉದಾಹರಣೆ ಕೊಡುವುದಾದರೆ ದೇಶದ ಹಾಲೀ ಪ್ರಧಾನಿ ಗುಜರಾತ್‍ನ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2002 ರಲ್ಲಿ ಸಂಭವಿಸಿದ ಮುಸ್ಲಿಂ ನರಹತ್ಯೆ ಆ ಕುರಿತು ಅವರು ಈವರೆಗೂ ದೇಶದ ಪ್ರಜೆಗಳಲ್ಲಿ ಕ್ಷಮೆ ಕೋರಿಲ್ಲ. ಅವರಿಗೆ ಆ ಕರಾಳಕೃತ್ಯದ ಬಗ್ಗೆ ವ್ಯಥೆಯೂ ಇಲ್ಲ 2002 ಕ್ಕಿಂತ ಮೊದಲು 1992 ರಲ್ಲಿ ಹಾಲೀ ಪ್ರಧಾನಿಯವರು ಮಹಾನ್ ನೇತಾರರಾಗಿರುವ ಬಿ.ಜೆ.ಪಿ ಪಕ್ಕದ ಕಾಲಾಳುಗಳೇ ಉತ್ತರ ಪ್ರದೇಶದ ಫೈಜಾಬಾದ್ ನಗರದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ ಧ್ವಂಸ ಮಾಡಿದರು. ಅದೇದಿನ ಸಂಜೆ ಮುಂಬೈಯಲ್ಲಿ ಪ್ರಾರಂಭವಾದ ಭೀಕರ ಕೋಮುಹಿಂಸಾಚಾರ ತಿಂಗಳುಗಟ್ಟಲೆ ಮುಂದುವರಿದು ಹತ್ತಿರತ್ತಿರ 1000 ಜನ ಮುಸ್ಲಿಮರು ಅದರಲ್ಲಿ ಪ್ರಾಣ ಕಳೆದುಕೊಂಡರು. ಹಾಗಿರುತ್ತ ಬಿ.ಜೆ.ಪಿ ಮತ್ತು ದೇಶದ ಹಾಲೀ ಪ್ರಧಾನಿಯವರಂತಹ ಜನನಾಯಕರಿಂದ ಪೌರತ್ವ ತಿದ್ದುಪಡಿ ಕಾಯ್ದೆಗಿಂತ ಉತ್ತಮವಾದ ಏನನ್ನೂ ತಾನೇ ನಿರೀಕ್ಷಿಸಲು ಸಾಧ್ಯ? ಈ ಜನ ನಾಯಕರಿಗೆ ದೇಶದ ಮುಸ್ಲಿಮರು, ಪ್ರಜೆಗಳು ಹಾಗಿರಲಿ, ಕನಿಷ್ಠ ಮನುಷ್ಯರೂ ಅಲ್ಲ!

ಭಾರತ ಸಂವಿಧಾನದ ಪ್ರಾಥಮಿಕ ಪರಿಚಯವೂ ಇಲ್ಲದ ಈ ಬೇಜವಾಬ್ದಾರಿ ಜನಗಳ ಪಕ್ಷ ಬಿ.ಜೆ.ಪಿ, ಇಂದು ಮುಸ್ಲಿಮ್ ಸಮುದಾಯದ ತರುಣರ ಮೇಲೆ ಲವ್‍ಜೆಹಾದ್‍ನ ಹಸಿಹಸಿ ಸುಳ್ಳು ಆರೋಪ ಹೊರಿಸುತ್ತಿರುವುದು ಆ ಪಕ್ಷದ ಮುಸ್ಲಿಮ್ ದ್ವೇಷ ಮಾತ್ರವಲ್ಲ ಹಿಂದೂ ತರುಣಿಯರ ಬಗ್ಗೆ ಅವರಿಗೆ ಎಂತಹ ಕೀಳು ಅಭಿಪ್ರಾಯವಿದೆ ಎಂಬುದಕ್ಕೆ ಕೂಡ ಉದಾಹರಣೆಯಾಗಿದೆ. ಇದೇ ಬಿ.ಜೆ.ಪಿಯ ದ.ಕ ಜಿಲ್ಲೆಯ ಒಬ್ಬ ಪುಢಾರಿ ಕಲ್ಲಡ್ಕ ಪ್ರಭಾಕರ ಭಟ್ಟ, ಈಗ ಕನಕಪುರದ ಪ್ರಸ್ತಾಪಿತ ಯೇಸುಕ್ರಿಸ್ತನ ಪ್ರತಿಮೆ ಬಗ್ಗೆ ಬಾಯಿಗೆ ಬಂದದ್ದನ್ನೆಲ್ಲ ವದರುತ್ತಿದ್ದಾನೆ. ಆ ಪಕ್ಷ ಬರೇ ಬೇಜವಾಬ್ದಾರಿ ಜನಗಳ ಪಕ್ಷ ಮಾತ್ರವಲ್ಲ, ಮಹಾನೀಚರ ಪರ ಕೂಡ ಎಂಬ ಮಾತಿಗೆ ಈತ ನಡೆದಾಡುವ ಒಂದು ನಿದರ್ಶನವಾಗಿದ್ದಾನೆ. ಈತನಿಗೆ ಗಾಂಧೀಜಿ ಸದಾ ಹೇಳುತ್ತಿದ್ದ. ‘ಈಶ್ವರ ಅಲ್ಲಾ ತೇರೇನಾಮ್ ಸಬ್ ಕೋ ಸನ್ಮತಿ ದೇ ಭಗವಾನ್’ ಎಂಬ ಭಜನೆಯ ಸೊಲ್ಲನ್ನು ಯಾರಾದರೂ ನೆನಪಿಸಬೇಕು, ಆ ಮುಖಾಂತರವಾದ ಈತನಿಗೆ ‘ಸನ್ಮತಿ’ ದೊರೆಯಲಿ ಎಂದು ಪ್ರಾರ್ಥಿಸಬೇಕು. ಹಾಗೆಯೇ ಶಿಕ್ಷಣ ಸಂಸ್ಥೆಯೊಂದರ ಮಾಲಿಕನಾಗಿರುವ ಈ ಮೂರ್ಖನಿಗೆ ಗಾಂಧೀಜಿಯವರಿಗೆ ಬೈಬಲ್‍ನ ‘ಬೆಟ್ಟದ ಮೇಲಣ ಬೋಧನೆ’- SERMON ON THE MOUNT ಕೂಡ ತುಂಬ ಪ್ರಿಯವಾಗಿತ್ತು ಎಂಬುದನ್ನು ತಿಳಿಹೇಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...