Homeಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

ಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

- Advertisement -
- Advertisement -

ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಈಗಾಗಲೇ ಹಲವರು ಮೀಸಲಾತಿ ಪಡೆದು ಉನ್ನತಮಟ್ಟದ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವರು ಘನತೆಯ ಬದುಕಿನ ಕಡೆ ಮುಖ ಮಾಡಿದ್ದಾರೆ. ಮೀಸಲಾತಿಯಿಂದಾಗಿಯೇ ನಾಲ್ಕಾರು ಜನರ ನಡುವೆ ಬೆರೆತು ಜೀವನ ಸಾಗಿಸಲು ಇವರಿಗೆ ಸಾಧ್ಯವಾಗಿದೆ. ತಮಗೆ ಏನೇ ಸೌಲಭ್ಯ ಸಿಕ್ಕಿದರೂ ಅದರ ಹಿಂದೆ ಈ ಮೀಸಲಾತಿ ಇದೆ ಎನ್ನುವುದು ಅವರ ಅಂತರಾಳ ಅರಿಯದ ಸಂಗತಿಯೇನೂ ಅಲ್ಲ. ಆದರೆ ಇವರಲ್ಲೇ ಇತ್ತೀಚೆಗೆ ಒಂದು ವರ್ಗ ಸದ್ದಿಲ್ಲದೆ ಎದ್ದು ಮೀಸಲಾತಿ ವಿರೋಧಿ ನೆಲೆಯಲ್ಲಿ ಕುಳಿತುಕೊಳ್ಳುತ್ತಿದೆ. ಇವರು ತಮ್ಮ ಸವಲತ್ತುಗಳಿಗಾಗಿ ಮೀಸಲಾತಿ ಒದಗಿದ ಮೇಲೆ ಅದನ್ನೇ ಕಾಲಕಸದಂತೆ ಒದೆಯುವುದರ ಕಡೆ ತಮ್ಮ ಚಿತ್ತವನ್ನು ಹರಿಯಬಿಡುತ್ತಿದ್ದಾರೆ. ಇಡೀ ಕುಟುಂಬದಲ್ಲಿ ಮೊದಲ ಬಾರಿಗೆ ಮೀಸಲಾತಿಯ ಫಲಾನುಭವದಿಂದ ಸಾಮಾಜಿಕ ಸ್ಥಾನಮಾನವನ್ನು ಎತ್ತರಕ್ಕೇರಿಸಿಕೊಂಡವರೂ ಸಹ ಇಂದು ಮೀಸಲಾತಿ ವಿರುದ್ಧವಾಗಿ ಮಾತನಾಡುತ್ತಾ ಅದನ್ನು ಇನ್ನಿತರರಿಗೆ ದಕ್ಕದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಇದು ವಿಪರ್ಯಾಸ!

ಇದನ್ನು ವಿಪರ್ಯಾಸ ಎಂದು ಕರೆಯುವ ಬದಲು ವಂಚನೆ ಎಂದು ಕರೆದರೇನೇ ಹೆಚ್ಚು ಸಮಂಜಸ ಎನಿಸುತ್ತದೆ. ಏಕೆಂದರೆ ಈಗಾಗಲೇ ಮೀಸಲಾತಿ ವಿರೋಧಿಗಳ ದೊಡ್ಡ ದಂಡೇ ಅಲ್ಲಲ್ಲಿ ನಿಂತು ವಿರೋಧಿ ದನಿಗೈಯುತ್ತಿದೆ. ಸಾಮಾಜಿಕ ನ್ಯಾಯದ ಪರಿಪಾಲನೆಗಾಗಿ ಬಂದ ಈ ಅವಕಾಶವನ್ನು ‘ಪ್ರತಿಭೆ’ ಎನ್ನುವ ಅಸ್ತ್ರ ಬಳಸಿ ಧೂಳೀಪಟ ಮಾಡಲು ಈ ವರ್ಗ ಮೊದಲಿನಿಂದಲೂ ಸಂಚು ರೂಪಿಸುತ್ತಲೇ ಬರುತ್ತಿದೆ. ‘ಪ್ರತಿಭೆ ಎನ್ನುವುದು ನಮ್ಮ ಸ್ವತ್ತು ಮಾತ್ರ’, ‘ನಮಗಲ್ಲದೆ ಪ್ರತಿಭೆ ಯಾರಿಗಿದೆ…..’ ‘ಈ ಮೀಸಲಾತಿಯಿಂದ ನಮ್ಮ ಸವಲತ್ತುಗಳನ್ನೆಲ್ಲ ಎಸ್ಸಿ, ಎಸ್ಟಿ, ಓಬಿಸಿಗಳು ಕಸಿದುಕೊಳ್ಳುತ್ತಿದ್ದಾರೆ’ ಎಂದು ಹುಯಿಲೆಬ್ಬಿಸುತ್ತಾ ಬಂದವರಿಗೆ ಈ ದೇಶದಲ್ಲಿನ ಜಾತಿವ್ಯವಸ್ಥೆಯಿಂದ ಅಸ್ವಸ್ಥಗೊಂಡ ಸಾಮಾಜಿಕ ನೆಲೆ ಅರ್ಥವಾಗುವುದಾದರೂ ಹೇಗೆ? ಅರ್ಥಮಾಡಿಕೊಳ್ಳಲು ಇವರು ಯಾವ ಅವಮಾನದ ನೋವನ್ನು ಅನುಭವಿಸಿದ್ದಾರೆ? ಅವಮಾನ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ನೋವು ಇಲ್ಲದವರಿಗೆ ಸಹಜವಾಗೇ ಮೀಸಲಾತಿ ತಮ್ಮ ವಿರುದ್ಧವೆಂಬಂತೆ ಗೋಚರವಾಗುತ್ತದೆ.

ಇದರ ಜೊತೆಗೆ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅವರಿಗೆ ಮೀಸಲಾತಿ ಬೇಡವೇ? ಎನ್ನುವ ಅಸ್ತ್ರವನ್ನು ಆಗಾಗ್ಗೆ ಮೀಸಲಾತಿ ವಿರೋಧಿ ವರ್ಗ ಪ್ರಯೋಗಿಸುತ್ತಲೇ ಬರುತ್ತಿತ್ತು. ಇಂತವರಿಗೆ ಸೆಡ್ಡು ಹೊಡೆದು ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಹುಟ್ಟಿದ್ದು. ಜಾತಿಯೇ ಪ್ರಧಾನ ಮಾನದಂಡವಾಗಿರುವ ಈ ದೇಶದಲ್ಲಿ ಜಾತಿ ಜನಸಂಖ್ಯಾವಾರು ಪ್ರಾತಿನಿಧ್ಯದ ಪ್ರಶ್ನೆಯನ್ನು ಈ ಮೀಸಲಾತಿಯ ಪ್ರಕ್ರಿಯೆ ಮುನ್ನಲೆಗೆ ಪದೇಪದೇ ತಂದಿದೆ. ಆ ಮೂಲಕ ಇಲ್ಲಿ ಎಲ್ಲರೂ ಸಮಾನವಾಗಿ ಬದುಕುವಂತಹ ವಾತಾವರಣ ಸೃಷ್ಟಿಗೊಳ್ಳುತ್ತದೆ. ಎಂದು ಗಟ್ಟಿಯಾಗಿ ಕೂಗಿ ಹೇಳಿ ಮೀಸಲಾತಿಯ ಪರವಾಗಿ ಮಾತನಾಡಬೇಕಿದ್ದ ಮೀಸಲಾತಿ ಪಡೆದ ಮನಸ್ಸುಗಳು ಅದರ ವಿರುದ್ಧ ನಿಂತಿರುವುದು ಚಾರಿತ್ರಿಕ ವ್ಯಂಗ್ಯದಂತೆ ಕಾಣುತ್ತದೆ. ಇವರ ಈ ಆತ್ಮದ್ರೋಹದ ಕೆಲಸದಿಂದಾಗಿಯೇ ಇಂದಿನ ಯುವ ಪೀಳಿಗೆ ಮೀಸಲಾತಿಯಿಂದ ಮೇಲೆದ್ದು ಬಂದೆ ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಿದೆ. ಜೊತೆಗೆ ಮೀಸಲಾತಿ ನಮ್ಮ ಹಕ್ಕು ಎಂದು ಹೇಳಿಕೊಳ್ಳುವುದಕ್ಕೂ ಹಿಂದೆಮುಂದೆ ನೋಡುತ್ತಿದೆ.

ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬಂದ ತಕ್ಷಣವೇ ಇವರಿಗೆ ಮೀಸಲಾತಿ ಅನ್ನುವುದು ಅಪಥ್ಯವಾಗಿದೆ. ‘ಪ್ರತಿಭೆ ಇದ್ದವರು ಪಡೆದುಕೊಳ್ಳಲಿ’ ಎನ್ನುವ ಮಾತನ್ನು ಯಾವ ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಇನ್ನೂ ಮುಂದುವರಿದಂತೆ ‘ತಮ್ಮ ಮಕ್ಕಳು ಜನರಲ್ ಕೆಟಗರಿಯಲ್ಲಿ ಸೀಟನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಮೀಸಲಾತಿಯೇತರ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಅರೆತಿಳಿವಳಿಕೆಯನ್ನೂ ಬಿತ್ತುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹೂಂಗುಟ್ಟಲು ಕಲಿತ ‘ಮೀಸಲಾತಿಯಿಂದ ಜಾತಿವ್ಯವಸ್ಥೆ ಹಾಗೇ ಉಳಿಯುತ್ತದೆ’, ‘ಇಲ್ಲಿ ಜಾತಿಯ ದೌರ್ಜನ್ಯ ಎಲ್ಲಿದೆ..’ ‘ಇಲ್ಲಿ ಎಲ್ಲರೂ ಸಮಾನವಾಗಿಯೇ ಬದುಕುತ್ತಿದ್ದೇವೆ…’ ‘ಹಿಂಗಿರುವವರಿಗೆ ಮೀಸಲಾತಿ ಏಕೆ ಬೇಕು’? ಎನ್ನುವ ಆಲೋಚನೆಗಳಿಗೆ ಇವರೂ ಕೂಡ ಪುಷ್ಟಿಯನ್ನು ಒದಗಿಸುತ್ತಿದ್ದಾರೆ. ಮೀಸಲಾತಿಯಿಂದ ತಾವು ಆರ್ಥಿಕವಾಗಿ ಮೇಲೆ ಬಂದವರಾದರೂ ತಮ್ಮ ಮಕ್ಕಳು ಮತ್ತು ಸಮುದಾಯದ ಮಕ್ಕಳನ್ನು ಮೀಸಲಾತಿಯನ್ನು ಕೀಳರಿಮೆ ಎಂದು ಕಾಣುವ ಮನಸ್ಥಿತಿಯಿಂದ ಹೊರತರಲು ಆಗಿಲ್ಲ ಮತ್ತು ಆಗುತ್ತಿಲ್ಲ.

ಶತಮಾನಗಳ ಉದ್ದಕ್ಕೂ ಅಘೋಷಿತ ಮೀಸಲಾತಿಯನ್ನು (ಸವಲತ್ತುಗಳನ್ನು) ಪಡೆದು ನಿರಂತರ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾ ಬಂದವರ ಮಾತುಗಳನ್ನು ಬ್ರಿಟಿಷ್ ಮತ್ತು ಸ್ವತಂತ್ರ ಭಾರತದಲ್ಲಿ ಸಂವಿಧಾನಬದ್ಧವಾಗಿ ಪಡೆದ ಈ ಮೀಸಲಾತಿ ಫಲಾನುಭವಿಗಳು ಚಾಚೂತಪ್ಪದೆ ಕೇಳುತ್ತಿದ್ದಾರೆ. ಆದರೆ ತಮ್ಮದೇ ಸಮುದಾಯದವರ ಆರ್ತನಾದಕ್ಕೆ ಕಿವುಡಾಗಿದ್ದಾರೆ. ಅವರು ಹೇಳುವ ಸಂಸ್ಕೃತಿ, ಪರಂಪರೆ ಇತ್ಯಾದಿಗಳನ್ನು ಉರು ಹೊಡೆದು ಅವುಗಳೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಬೀಗುತ್ತಿದ್ದಾರೆ. ಇಂತವರಿಗೆ ಇಲ್ಲಿ ಇನ್ನೂ ಜಾತಿವ್ಯವಸ್ಥೆ ಜೀವಂತವಾಗಿದೆ ಮತ್ತು ಕ್ರೂರವಾಗಿದೆ, ಇಲ್ಲಿ ಅಸಮಾನತೆ ಎನ್ನುವುದು ನಿರಂತರ ಪ್ರವಾಹವಾಗಿದೆ, ಉದ್ಯೋಗಗಳ ಸೃಷ್ಟಿ ನಡೆಯುತ್ತಿಲ್ಲ, ಎಲ್ಲ ಸರ್ಕಾರಿ ಉದ್ದಿಮೆಗಳಲ್ಲಿ ಬಹುಪಾಲು ಹುದ್ದೆಗಳನ್ನು ಮೇಲ್ಜಾತಿ ಮತ್ತು ಮೇಲ್ವರ್ಗದವರೇ ಪಡೆದುಕೊಂಡಿದ್ದಾರೆ, ಖಾಸಗಿ ಉದ್ದಿಮೆಗಳಲ್ಲಿ ನಮ್ಮಂತವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟಿದೆ ಎಂಬ ಸತ್ಯಸಂಗತಿ ಅರ್ಥವಾಗಬೇಕಿದೆ. ಇಲ್ಲದಿದ್ದರೆ ಇವರು ಸಾಮಾಜಿಕ ನ್ಯಾಯಕ್ಕೆ ಮಗ್ಗಲುಮುಳ್ಳಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ.

‘ಮೇಲ್ಜಾತಿಯ ಬಡಮಕ್ಕಳು ಪ್ರತಿಭೆ ಇದ್ದರೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎನ್ನುವವರು ಕೇವಲ ಜಾತಿಯಿಂದಾಗಿ ಇಂದೂ ಕೂಡ ಮಾನಸಿಕ ಯಾತನೆಯನ್ನು ಬಡತನದೊಂದಿಗೆ ಅನುಭವಿಸಿ ನರಳುವವರ ಪಾಡನ್ನೂ ಅರ್ಥಮಾಡಿಕೊಳ್ಳಬೇಕಿದೆ. ‘ಸರ್ವರೂ ಸಮಾನರು’ ಎಂದಾದ ತಕ್ಷಣವೇ ಈ ಮೀಸಲಾತಿ ಎನ್ನುವ ಪದ ಬುಡಸಮೇತ ಕಳಚಿ ಬೀಳಲಿ. ಅಲ್ಲಿಯವರೆಗೆ ಮಹಿಳೆಯರಿಗೆ, ಜಾತಿಯಿಂದ ನೋವುಂಡರಿಗೆ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ, ಪ್ರಾದೇಶಿಕ ಭಾಷೆಯ ಮಡಿಲನ್ನೇ ಆಶ್ರಯಿಸಿರುವವರಿಗೆ, ವಿಶೇಷಚೇತನರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿಯ ಇನ್ನಷ್ಟು ಶೇಕಡತೆ ವಿಸ್ತರಿಸುವಂತಾಗಲಿ. ಸಮತೆಯ ಆಶಯ ಹೊದ್ದು ನಿಂತಿರುವ ಈ ಮೀಸಲಾತಿ ಖಾಸಗಿ ಕ್ಷೇತ್ರದಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲಿ. ಇದಕ್ಕೆ ಆಳುವ ಸರ್ಕಾರಗಳು ಮುನ್ನುಡಿ ಬರೆಯುವಂತಾಗಲಿ. ಈ ಧ್ಯೇಯವನ್ನು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳಲ್ಲಿ ಮೀಸಲಾತಿ ಪಡೆದು ಅದರ ವಿರುದ್ಧವೇ ಮಾತನಾಡುತ್ತಿರುವವರು ಹೊರುವಂತಾಗಲಿ. ಏಕೆಂದರೆ ಜಾತಿಕಾರಣಕ್ಕೆ ಮೀಸಲಾತಿ ನೀಡುವುದು ಸಲ್ಲದು ಎಂದು ಹುಯಿಲೆಬ್ಬಿಸುತ್ತಿದ್ದ ಮನಸುಗಳಿಗೆ ಇಂದು ಕಿಂಚಿತ್ತು ಹೋರಾಟವಿಲ್ಲದೆ ಕೇವಲ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಸಿಕ್ಕಿದೆ. ಅದೂ ಸಹ ಬರೋಬ್ಬರಿ 10%.
ಡಾ. ಹೆಚ್.ಡಿ. ಉಮಾಶಂಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. 15% sc ಮೀಸಲಾತಿಯೊಳಗೆ ಈಗ ಹಣಕಾಸು ಮಾನದಂಡ ಇಲ್ಲ. ಹೀಗಾಗಿ,ಇದರಲ್ಲಿ ಶೇ.೨-೩ ರಶ್ಟನ್ನು ಈಗಾಗಲೇ ಮೀಸಲಾತಿಪಡೆದು ಮೇಲೆ ಬಂದಿರುವ ಎರಡನೇ ಪೀಳಿಗೆಯವರು,ಆದಾಯತೆರಿಗೆ ಕಟ್ಟುವವರು ಮುಂತಾದವರು ಇದರೊಳಗೆ ಸ್ಪರ್ದಿಸಬೇಕು.
    ಇನ್ನಳಿದ ಶೇ೧೨-೧೩ ರಶ್ಟನ್ನು ಈವರೆಗೂ ಮೀಸಲಾತಿ ಸವಲತ್ತು ಪಡೆಯದ ಮೊದಲ ಪೀಳಿಗೆಯವರಿಗೆ ಮೀಸಲಿಡಬೇಕು.ಇದು st ಗುಂಪಿಗೂ ಆಗಬೇಕು.
    ಒಂದು ಸಲ ಮೀಸಲಾತಿ ಪಡೆದ obc ಗುಂಪಿನ ಎರಡನೇ ಪೀಳಿಗೆಯವರಿಗೆ ಮೀಸಲಾತಿ ಸವಲತ್ತು ಇಲ್ಲದ್ದರಿಂದ ಹಾಗೆ ಮಾತಾಡುತ್ತಾರೆ.
    ಹಲಪಂಗಡಗಳನ್ನು ಒಂದೇ ಮೀಸಲಾತಿ ಗುಂಪಿಗೆ ಸೇರಿಸಿರುವುದರಿಂದ ಉಂಟಾಗಿರುವ ಗೋಜಲನ್ನು ಒಳಮೀಸಲಾತಿ ಕೊಡುವುದರ ಮೂಲಕ ಸರಿಪಡಿಸಬೇಕು.

  2. ಶೇ ೧೦ ರ ಹೊಸ ಸವರ್ಣೀಯ ಬಡವರ ಮೀಸಲಾತಿಯನ್ನು ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ . ನಮ್ಮ ರಾಜ್ಯದಲ್ಲಿ ಓಬಿಸಿ ಮೀಸಲಾತಿಯಲ್ಲಿ ಭೂ ಒಡೆತನದ ಜಾತಿಗಳಾದ ಲಿಂಗಾಯತ , ಒಕ್ಕಲಿಗ , ರೆಡ್ಡಿ , ಬಂಟ , ಕೊಡವ ಜಾತಿಗಳು ನುಸುಳಿವೆ . ಹೊರ ರಾಜ್ಯಗಳಲ್ಲಿ ಇಂತಹದೆ ಭೂ ಒಡೆತನದ ಜಾತಿಗಳೆನಿಸಿದ ಮರಾಠ , ಜಾಟ್ , ಪಟೇಲ್ ಇತ್ಯಾದಿ ಜಾತಿಗಳವರು ಓಬಿಸಿ ಮೀಸಲಾತಿಗಾಗಿ ನಿರಂತರ ಹೋರಾಡುತ್ತಿವೆ . ಇಂತಹ ಜಾತಿಗಳ ಬಡವರಿಗಾಗಿ ಕೇಂದ್ರ ಸರ್ಕಾರ ತಂದದ್ದು ಶೇ ೧೦ ರ ಮೀಸಲಾತಿ .
    ಈ ೧೦ % ಮೀಸಲಾತಿ ಪಟ್ಟಿಗೆ ಕರ್ನಾಟಕದ ಭೂ ಒಡೆತನದ ಜಾತಿಗಳನ್ನು ವರ್ಗಾಯಿಸಬೇಕು . ಕರ್ನಾಟಕದಲ್ಲಿ ಭೂ ಒಡೆತನದ ಜಾತಿಗಳನ್ನು ಓಬಿಸಿ ಪಟ್ಟಿಗೆ ತಂದಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹ . ೧೦ % ಮೀಸಲಾತಿ ಯನ್ನು ಟೀಕಿಸುವವರು ಈ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ವಾದಿರಾಜ್ , ಬೆಂಗಳೂರು .

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...