Homeಅಂಕಣಗಳುಥೂತ್ತೇರಿ | ಯಾಹೂರೇಣುಕಾಚಾರಿಗೆ ಹೊನ್ನಾಳಿ ಹೊಡೆತ ಗೊತ್ತಿಲ್ಲವಂತಲ್ಲಾ.....ಯಾಹೂ

ರೇಣುಕಾಚಾರಿಗೆ ಹೊನ್ನಾಳಿ ಹೊಡೆತ ಗೊತ್ತಿಲ್ಲವಂತಲ್ಲಾ…..ಯಾಹೂ

- Advertisement -
- Advertisement -

ನೋಡಿದ ಕೂಡಲೇ ಆರೆಸ್ಸೆಸ್‍ನ ಸಕ್ರಿಯ ಕಾರ್ಯಕರ್ತನಂತೆ ಕಾಣುವ ಆದಿತ್ಯರಾವ್ ಮೀಡಿಯಾ ಜನಿವಾರಿಗಳ ನಿಜಬಣ್ಣ ಬಯಲು ಮಾಡಿದ ಯುಗಪುರುಷನಂತೆ ಗೋಚರಿಸುತ್ತಿದ್ದಾನಲ್ಲಾ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬು ಮಡಗಿ ಆತ ಮಾಯವಾದ ನಂತರ ಬೆಳಗ್ಗೆ ಚಡ್ಡಿ ಪತ್ರಿಕೆಗಳನ್ನ ತೆಗೆದು ನೋಡಿದರೆ, ದೇಶವೇ ಬೆಚ್ಚಿಬೀಳುವಂತಹ ಸುದ್ದಿ ಮಾಡಿದ್ದರಲ್ಲಾ. ಅದರಲ್ಲೂ ನಿದ್ರೆಯಲ್ಲೂ ಬುದೂರನೆದ್ದು ನೀರು ಕುಡಿದು ಬೆವರು ಒರೆಸಿಕೊಳ್ಳುತ್ತ ಬುಲೆಟ್‍ನಿಂದ ಬಚಾವಾದವನಂತೆ ತೊದಲುವ ವಿಜಯಸಂಕೇಶ್ವರ ಎಂಬ ಹಳೆ ಲಾರಿ ಇಂಜಿನ್ ತನ್ನ ವಿಶದವಾಣಿ ಎಂಬ ಪತ್ರಿಕೆಯಲ್ಲಿ ಗಣರಾಜ್ಯೋತ್ಸವದ ಟೈಮಿಗೆ ದುಷ್ಕೃತ್ಯವೆಸಗಿ ದೇಶವನ್ನೇ ಗಂಡಾಂತರಕ್ಕೆ ದೂಡುವ ಕೃತ್ಯವಿದು ಎಂದು ತನ್ನ ಮನಸ್ಸಿನಾಳದಲ್ಲಿದ್ದ ಮುಸ್ಲಿಂ ದ್ವೇಷವನ್ನ ಕಾರಿಕೊಂಡಿದ್ದನಲ್ಲಾ. ಆದರೇನು ಮರುದಿನವೇ ಸಿಕ್ಕ ಆದಿತ್ಯರಾವ್ ಬಗ್ಗೆ ಕನಿಕರ ಉಕ್ಕಿ ಹರಿದ ಪರಿಣಾಮ ಈತ ಮಾನಸಿಕ ಅಸ್ವಸ್ಥನಾದ. ಈ ಮನೋರೋಗಿ ಅಂತಿಂಥವನಲ್ಲ ಡಿಗ್ರಿ ಪಡೆದವನು. ಬಾಂಬು ತಯಾರಿಸುವ ತಂತ್ರಜ್ಞಾನ ಹೊಂದಿದ್ದವನು. ಆನ್‍ಲೈನ್ ಮುಖಾಂತರ ಬಾಂಬು ಸಾಮಗ್ರಿ ಖರೀದಿಸಿದವನು. ಆದರೂ ಬುದ್ಧಿಮಾಂದ್ಯನೆಂದು ಬಿಂಬಿತನಾಗಿರುವ ಈತನೇನಾದರೂ ಸಿಕ್ಕಿ ಬೀಳದಿದ್ದರೆ, ವಿಜಯ ಸಂಕೇಶ್ವರ ಸಾಬರ ಭಯೋತ್ಪಾದನೆ ಬಗ್ಗೆ ವಿಶೇಷ ಪುರವಣಿಯನ್ನೇ ತರುತ್ತಿದ್ದನಂತಲ್ಲಾ. ತನ್ನ ತಮ್ಮನ ಪರ ವಕಾಲತ್ತು ವಹಿಸಿದವನಂತೆ ಇನ್ನೂ ಒದರುತ್ತಲೇ ಇದ್ದಾನೆ. ಈ ನಡುವೆ ಸಂಕೇಶ್ವರನಿಗೆ ಪದ್ಮಶ್ರೀ ಬೇರೆ ಬಂದಿದೆ. ಪತ್ರಿಕೆಯನ್ನೂ ಚಡ್ಡಿಗಳ ಕರಪತ್ರ ಮಾಡಿರೋದು ಮತ್ತು ಅತಿಹೆಚ್ಚು ಲಾರಿಗಳನ್ನು ಮಡಗಿರೋದೆ ಪ್ರಶಸ್ತಿಗೆ ಆತನನ್ನು ಆಯ್ಕೆ ಮಾಡಿರೋದಕ್ಕೆ ಮಾನದಂಡವಂತಲ್ಲ. ಅಂದಹಾಗೆ, ಪ್ರಶಸ್ತಿ ಪಟ್ಟಿಯಲ್ಲಿ ಕೊನೇ ಘಳಿಗೆಯಲ್ಲಿ ಸಂಕೇಶ್ವರ ಹೆಸರು ಮಿಸ್ ಆಗುವ ಸಂಭವ ಇತ್ತಂತೆ, ಹಾಗಾಗಿ ಎರಡು ದಿನ ಮೋದಿ ಸರ್ಕಾರದ ವಿರುದ್ಧ ಮುಖಪುಟ ಸುದ್ದಿ ಪ್ರಕಟಿಸಿ, ಬ್ಲ್ಯಾಕ್‍ಮೇಲ್ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾನೆ ಅಂತ ಜನ ಮಾತಾಡುತ್ತಿದ್ದಾರಲ್ಲಾ, ಥೂತ್ತೇರಿ….

ಹಾದಿಬೀದಿಯಲ್ಲಿ ಸಿಗುವ ಸಾಬರೆಲ್ಲಾ ವಿಧ್ವಂಸಕರೆಂದು ಸದಾ ಚಿಂತಿಸುತ್ತ ನನ್ನ ಲಾರಿಗಳ ಕತೆಯೇನೆಂದು ಯೋಚಿಸುವ ಸಂಕೇಶ್ವರನಿಗೆ ತಿಳಿಯದ ಇನ್ನೊಂದೆರಡು ವಿಷಯಗಳೇನೆಂದರೆ ಬಾಬಾ ಬುಡನ್‍ಗಿರಿ ವಿಷಯವನ್ನ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹಬ್ಬಿಸುವ ಹವಣಿಕೆಯಿಂದ ಚಿಕ್ಕಮಗಳೂರು ದೇವಸ್ಥಾನದ ಮೇಲಕ್ಕೆ ಮೆಟ್ಟು ತಂದು ಕಟ್ಟಿದ್ದವರು ಪರಮಭಕ್ತರಾದ ಭಜರಂಗಿಗಳು! ಹಾಗೇ ಮಾನ್ವಿಯಲ್ಲಿ ಮಧ್ಯರಾತ್ರಿ ವೇಳೆ ಬಸ್ಟ್ಯಾಂಡಿಗೆ ಬಂದು ಪಾಕಿಸ್ತಾನದ ಧ್ವಜ ಹಾರಿಸಿಹೋದವರು ಸನಾತನ ಸಂಘದವರು. ಈತ ಮುಂದೆ ಗೌರಿ ಕೊಲೆಯಲ್ಲಿ ಆರೋಪಿಯಾದ. ಹಾಗೆಯೇ ಹೊನ್ನಾಳಿ ತಾಲ್ಲೂಕಿನಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿಹೋದವನು ಶಾಸಕ ರೇಣುಕಾಚಾರಿ ಎಂಬುದು ಈಚೆಗೆ ಬಹಿರಂಗಗೊಂಡಿದೆಯಲ್ಲಾ. ಹೇಗೆಂದರೆ ನನಗೆ ಮುಸ್ಲಿಮರು ಓಟು ಮಾಡಿಲ್ಲ, ಜೊತೆಗೆ ಸದಾ ಮಸೀದಿಯಲ್ಲಿ ಬಾಂಬು ತಯಾರಿಸುತ್ತ ಚೂರಿ ಮಸೆಯುತ್ತ ಪಾಕಿಸ್ತಾನದ ಪರವಿರುವ ಹೊನ್ನಾಳಿ ಸಾಬರಿಗೆ ನಾನು ಯಾವ ಸರಕಾರಿ ಸವಲತ್ತನ್ನು ಕೊಡುವುದಿಲ್ಲವೆಂದು ಹೇಳಿರುವ ವಿಲಾಸಿಜೀವನದ ರೇಣುಕಾಚಾರಿಯ ಮನಸ್ಸಿನಾಳದಲ್ಲಿ ಸಾಬರ ಗಲ್ಲಿಯ ಚರಂಡಿ ನೀರೇ ಹರಿಯುತ್ತಿರುವುದರಿಂದ ಅವನಿನ್ನೇನು ಹೇಳಲು ಸಾಧ್ಯ ಎಂಬುದು ಹೊನ್ನಾಳಿ ಕುರುಬರ ಅಭಿಪ್ರಾಯವಾಗಿದೆಯಂತಲ್ಲಾ, ಥೂತ್ತೇರಿ.

ಭೂಗತಲೋಕದ ದೊರೆಯಾಗಿ ಮೆರೆದಿದ್ದ ಮುತ್ತಪ್ಪ ರೈ ಐದಾರು ಗುಂಡುಗಳಿಂದ ಬಚಾವಾಗಿ ಉಳಿದಿದ್ದರಂತೆ. ಆದರೇನು ಕ್ಯಾನ್ಸರ್ ಗುಂಡಿನಿಂದ ತಪ್ಪಿಸಿಕೊಳ್ಳಲಾಗಿಲ್ಲ. ಕಡೆಗೂ ಬಂದ ಸಾವನ್ನು ಸಂಭ್ರಮಿಸುತ್ತಿರುವ ಆತನನ್ನು ಮಾಧ್ಯಮದ ಮಂದಮತಿಗಳು ಇನ್ನಿಲ್ಲದ ಉಪಮೆಗಳೊಂದಿಗೆ ಹೊಗಳಿ ಹೊಗಳಿ ಸುಸ್ತಾಗುತ್ತಿವೆ. ಮುತ್ತಪ್ಪ ರೈ ದಕ್ಷಿಣ ಕನ್ನಡದ ಬುದ್ಧಿವಂತಿಕೆಯನ್ನ ಭೂಗತಲೋಕಕ್ಕೆ ಪರಿಚಯಿಸಿ ಮಚ್ಚು, ಲಾಂಗು, ಚಾಕುವಿನ ಬದಲು ಜೀವಹತ್ಯೆಗೆ ಪಿಸ್ತೂಲು ಬಳಸಿದ ವ್ಯಕ್ತಿ. ಆತನನ್ನ ಪೊಲೀಸರು ಕೂಡ ಪಿಸ್ತೂಲಿನಿಂದಲೇ ಮುಗಿಸಲು ಯತ್ನಿಸಿದಾಗ, ಲಂಕೇಶರ ಬಳಿಯಿದ್ದ ಕೂಗುಮಾರಿಯೊಬ್ಬಳು ಪೊಲೀಸರನ್ನೇ ವಿಲನ್‍ಗಳನ್ನಾಗಿ ಮಾಡಿ ಮುತ್ತಪ್ಪರೈಯನ್ನ ಹೀರೋ ಮಾಡಿ ಬರೆಸಿದ್ದಳು. ಅಲ್ಲದೆ ಆಗಿನ ಪೊಲೀಸ್ ಅಧಿಕಾರಿ ಕೆಂಪಯ್ಯನನ್ನೇ ಟಾರ್ಗೆಟ್ ಮಾಡಿದ ಕೂಗುಮಾರಿ ಕಡೆಗೂ ಮುತ್ತಪ್ಪರೈ ಬಚಾವಾಗುವಂತೆ ಮಾಡಿದ್ದಳು. ಆದರೆ ಲಂಕೇಶರು ಆಕೆಯ ನಡವಳಿಕೆ ಬಗ್ಗೆ ಗುಮಾನಿಪಟ್ಟು ಕೆಲಸದಿಂದ ತೆಗೆದಿದ್ದರು. ಪೊಲೀಸರಿಂದ ಬಚಾವಾಗಲು ದೇಶವನ್ನೇ ಬಿಟ್ಟಿದ್ದ ಮುತ್ತಪ್ಪ ರೈ ಕನ್ನಡಿಗರ ಸಂಘಟನೆ ನೆವದಲ್ಲಿ ಸೈನ್ಯ ಕಟ್ಟಿ ಮೆರವಣಿಗೆ ಮಾಡಿಸುತ್ತಿದ್ದರು. ಈಗ ಅನಾಥರಾಗುವವರೆಂದರೆ ಆತನಿಂದ ಹಣ ಪಡೆದು ಕಾರ್ಯಕ್ರಮ ಮಾಡುತ್ತಿದ್ದ ಅಬ್ಬೇಪಾರಿಗಳಂತಲ್ಲಾ, ಥೂತ್ತೇರಿ.

ಮೈಸೂರಿನಲ್ಲಿ ಯುವತಿಯೊಬ್ಬಳು ಫ್ರೀ ಕಾಶ್ಮೀರ ಎಂಬ ಫಲಕ ಪ್ರದರ್ಶಿಸಿದ್ದಕ್ಕೆ ನಮ್ಮ ಪೊಲೀಸರು ದೇಶದ್ರೋಹದ ಕೇಸುಮಾಡಿ ಕೋರ್ಟಿಗೆ ಎಳೆದಿರುವುದರಿಂದ, ದೇಶಭಕ್ತ ವಕೀಲರೆಲ್ಲಾ ಸೇರಿ ಆಕೆಯ ಪರ ಯಾರೂ ವಕಾಲತ್ತು ವಹಿಸಬಾರದೆಂಬ ತೀರ್ಮಾನ ತೆಗೆದುಕೊಂಡಿದ್ದಾರಲ್ಲಾ. ಈ ಬಗ್ಗೆ ವಕೀಲರ ನಡೆಯನ್ನ ಸಿದ್ದರಾಮಯ್ಯ ಟೀಕಿಸಿದಾಗ ನೀವೆ ಬಂದು ವಾದಿಸಿ ಎಂದು ರಾಘವೇಂದ್ರ ಎಂಬ ವಕೀಲ ಸವಾಲು ಹಾಕಿದ್ದಾನಲ್ಲಾ. ಈ ವಕೀಲರು ತಾವೇ ಕೋರ್ಟೆಂದು ಭಾವಿಸಿರುವಂತಿದೆ. ವಕೀಲರ ಸಂಘದ ತೀರ್ಮಾನದಂತೆ ಕೋರ್ಟು ನಡೆಯುವುದಿಲ್ಲ. ಆರೋಪಿ ಮೇಲಿನ ಆರೋಪ ತೀರ್ಮಾನವಾಗುವುದು ನ್ಯಾಯಾಲಯದಲ್ಲೇ ಹೊರತು ವಕೀಲರ ಗುಂಪಿನಲ್ಲಲ್ಲ ಎಂಬುದನ್ನು ವಕೀಲರು ಮನಗಾಣಬೇಕು. ಇದೆಲ್ಲಾ ಸರ್ವಾಧಿಕಾರಿಗಳ ಆಡಳಿತದ ಸಂದರ್ಭದಲ್ಲಿ ಹುಟ್ಟುವ ಘೋಷಣೆಗಳು. ವಕೀಲರು ಸಂವಿಧಾನಾತ್ಮಕವಾಗಿ ದತ್ತವಾಗಿರುವ ಹಕ್ಕುಗಳ ಬಗ್ಗೆ ಗಾಢವಾಗಿ ಯೋಚಿಸಿದರೆ ಹೀಗಾಗುವುದಿಲ್ಲವಂತಲ್ಲಾ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Un Constitutional opinions in Mysore Bar decession is wrong. Speeking truth is not a crime. Where as the loyers protect the Constitution. All world is observing the desession of Mysore Bar Associations attitude.This kind of actions are not good for society.

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...