Homeಸಾಮಾಜಿಕಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

ಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

- Advertisement -
- Advertisement -

ಸಾಮಾಜಿಕ ಜಾಲತಾಣವೆಂಬುದು ಸ್ಯಾಡಿಸ್ಟ್‍ಗಳ ಆಡಂಬೋಲದಂತೆ ಆಗಿಹೋಗಿದೆ! ಇದು ಮಾಹಿತಿ ತಂತ್ರಜ್ಞಾನದ ಘೋರ ದುರಂತವೇ ಸರಿ. ಪರರ ಪಡಿಪಾಟಲು, ಆಸಹಾಯಕತೆ, ನೋವು, ನಷ್ಟ ಅಪಹಾಸ್ಯ ಮಾಡಿ ಟ್ರೋಲಿಸುವ ವಿಕೃತ ಸಂತಾನವೇ ಭಾರತದಲ್ಲಿ ಬೆಳೆದುನಿಂತಿದೆ. ಮಹಾ ಮಾನವತಾವಾದಿ ಧೀಮಂತ ಪತ್ರಕರ್ತೆಯೂ ಆಗಿದ್ದ ಗೌರಿಲಂಕೇಶ್‍ರ ಹತ್ಯೆ ಸಂಭ್ರಮಿಸಿದ್ದ ಕುಹಾಕಿಗಳನ್ನು ಈ ದೇಶದ ಪ್ರಧಾನಿ ಮೋದಿ ಮಹಾತ್ಮನೇ ಜಾಲತಾಣದಲ್ಲಿ ಫಾಲೋ ಮಾಡುತ್ತಾರೆ! ಸಿದ್ದು ಸಿಎಂ ಆಗಿದ್ದಾಗ ಮಗನನ್ನು ಕಳಕೊಂಡ ನೋವಿನಲ್ಲಿದ್ದ ಸಂದರ್ಭವನ್ನು ಸಾಮಾಜಿಕ ಜಾಲತಾಣದಲ್ಲಿ ಕುಳಿತು ಖುಷಿಯಿಂದ ಅನುಭವಿಸಿದವರೂ ಇದ್ದಾರೆ. ಇಂಥ ಗಲೀಜು ಸಂಸ್ಕøತಿಯ ಟ್ರೋಲಿಗರ ಕುಚೋದ್ಯದಿಂದ ಈಚೆಗೆ ಕೇರಳದಲ್ಲಿ ತಲ್ಲಣವೇ ಆಗಿಹೋಗಿದೆ. ವಿನಾಕಾರಣ ಬಡ-ಮುಗ್ಧ ಹುಡುಗಿಯೊಬ್ಬಳು ಘಾಸಿಗೊಂಡಿದ್ದಾಳೆ!
ಆಕೆಯ ಹೆಸರು ಹನಾನ್ ಹಮೀದ್. ಕೇರಳದ ತ್ರಿಶೂರ್‍ನ ಇಪ್ಪತ್ತೊಂದರ ಬಾಲಕಿ. ಬದುಕು ಕಟ್ಟಿಕೊಳ್ಳಲು ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಲೇ ಕಾಲೇಜಿಗೂ ಹೋಗುತ್ತಿದ್ದಾಳೆ; ಕಾಲೇಜು ಮುಗಿಸಿ ಮೀನು ಮಾರುಕಟ್ಟೆಯಲ್ಲಿ ಕುಳಿತು ಮೀನೂ ಮಾರುತ್ತಾಳೆ. ಆಕೆ ಅವಸರದಲ್ಲೊಮ್ಮೆ ಕಾಲೇಜಿನ ಯೂನಿಫಾರ್ಮ್ ತೊಟ್ಟುಕೊಂಡೇ ಮೀನು ಮಾರಾಟಕ್ಕೆ ಕುಳಿತಿದ್ದಳು. ಇದು ಅದ್ಯಾವುದೋ ಕೀಳು ಅಭಿರುಚಿಯ ಟ್ರೋಲಿಗನ ಕಣ್ಣಿಗೆ ಬಿದ್ದಿದೆ. ಆ ಎವಡಾಸ ಅದ್ಭುತ ಸಂಶೋಧನೆ ಮಾಡಿದವನಂತೆ ಯೂನಿಫಾರ್ಮ್‍ನಲ್ಲಿ ಮೀನು ಮಾರುತ್ತಿದ್ದ ಪಾಪದ ಹುಡುಗಿಯ ಫೋಟೋ, ವೀಡಿಯೋ ಜಾಲತಾಣಕ್ಕೆ ಏರಿಸಿ ಬೀಗಿದ್ದಾನೆ.
ಆತನಂಥದೇ ಗುಣ-ಧರ್ಮದ ಜಾಲತಾಣಿಗರು ಆ ವೀಡಿಯೋ ಅಪಹಾಸ್ಯದಿಂದ ವೈರಲ್ ಮಾಡಿ ತೀಟೆ ತೀರಿಸಿಕೊಂಡಿದ್ದಾರೆ. ಆಕೆ ಮರ್ಯಾದೆಯಿಂದ ಜೀವನೋಪಾಯಕ್ಕೆ ಮಾಡುತ್ತಿದ್ದ ಕೆಲಸವನ್ನು ಆಡಿಕೊಂಡು ಕೇಕೆ ಹಾಕಿದ್ದಾರೆ. “…… ಕಾಲೇಜು ಓದೋದು ಬಿಟ್ಟು ಇದೆಂಥ ಕೆಲ್ಸಾ…….?!” ಎಂದು ಗೇಲಿ ಮಾಡಿದ್ದಾರೆ. ಅಸಹಾಯಕ ಹುಡುಗಿಯೊಬ್ಬಳ ಕಾರ್ಪಣ್ಯದ ಜೀವನಕ್ರಮವನ್ನು ಅಣಕಿಸುತ್ತ ಟ್ರೋಲ್‍ಮಾಡಿ ಮಜಾ ತೆಗೆದುಕೊಳ್ಳುವ ಸಂಗತಿಯಾ? ಮನುಷ್ಯರೂಪದ ಮೃಗಗಳಿಗಿದು ನಾಲ್ಕಾರು ದಿನ ಟೈಮ್‍ಪಾಸ್ ಹಾಸ್ಯವಾಗಿರಬಹುದು. ಆದರೆ ಈ ಅಪಮಾನ-ಅಪನಿಂದನೆಯಿಂದ ಸುದ್ದಿಯಾದ ಪಾಪದ ಹುಡುಗಿಯ ಹಿಂದೊಂದು ಕರುಣಾಜನಕ ಕತೆಯೇ ಇದೆ! ವಯಸ್ಸಿಗೆ ಮೀರಿದ ಸಾಂಸಾರಿಕ ಹೊಣೆ ನಿಭಾಯಿಸುತ್ತ ಊಟ-ನಿದ್ದೆ ಬಿಟ್ಟು ರಾತ್ರಿಹಗಲೆನ್ನದೆ ಬದುಕಲು ಆಕೆ ಸೆಣಸಾಡುತ್ತಿದ್ದಾಳೆ.
ಹನಾನ್ ತ್ರಿಶೂರ್‍ನ ಶ್ರೀಮಂತ ಕುಟುಂಬದ ಕೂಸು. ತಂದೆ ಹಮೀದ್, ತಾಯಿ ಜುಹ್ರಾಬಿ. ಒಬ್ಬ ತಮ್ಮನಿದ್ದಾನೆ. ಚಿಕ್ಕವಳಿದ್ದಾಗ ಆಕೆ ಖುಷಿಖುಷಿಯಾಗೇ ಇದ್ದಳು. ಆಕೆ ಪ್ರೈಮರಿಗೆ ಹೋಗುವಾಗ ಅಪ್ಪ ಇದ್ದಕ್ಕಿದ್ದಂತೆ ವಿಪರೀತ ಹೆಂಡ ಕುಡಿಯಲು ಶುರು ಹಚ್ಚಿಕೊಂಡಿದ್ದಾನೆ. ಅಷ್ಟೇ ಅಲ್ಲ, ದಿನವೂ ಕುಡಿದುಬಂದು ಅಮ್ಮನಿಗೆ ಬಡಿಯುತ್ತಿದ್ದ. ಮನೆಯೆಂಬುದು ರೌರವ ನರಕದಂತಾಗಿಹೋಯಿತು. ಹನಾನ್ ಹೈಸ್ಕೂಲಿಗೆ ಹೋಗುವ ಹೊತ್ತಿಗೆ ಆಕೆಯ ತಂದೆ-ತಾಯಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ತಂದೆಯೊಂದಿಗಿದ್ದರೆ, ಹನಾನ್ ತಾಯಿ ಜತೆ ಉಳಿದಳು. ತನ್ನ ಮತ್ತು ತಾಯಿಯ ತುತ್ತಿನ ಚೀಲ ತುಂಬಿಸುವ ಜವಾಬ್ದಾರಿ ಹನಾನ್ ಮೇಲೆ ಬಿತ್ತು.
ಆ ನತದೃಷ್ಟ ಹುಡುಗಿ ಧೃತಿಗೆಡಲಿಲ್ಲ ದುಡಿಮೆಯ ದಾರಿ ಹುಡುಕಿದಳು ತಾನು ಶಾಲೆಗೆ ಹೋಗುತ್ತಲೇ ಚಿಕ್ಕ ಮಕ್ಕಳಿಗೆ ಟ್ಯೂಶನ್ ಕೊಡಲಾರಂಭಿಸಿದಳು; ಕರಕುಶಲ ವಸ್ತು, ಕಿವಿಯೋಲೆ ತಯಾರಿಸಿ ಬಂದ ಹಣದಲ್ಲಿ ಜೀವನ ಸಾಗಿಸಹತ್ತಿದಳು. ಕೆಲದಿನದ ಬಳಿಕ ಖಾಸಗಿ ಕಂಪನಿಯೊಂದಕ್ಕೆ ಕಾರ್ಮಿಕಳಾಗಿ ಸೇರಿಕೊಂಡಳು. ಹನಾನ್ ಕಷ್ಟಕ್ಕೆ ಹೆದರಲಿಲ್ಲ. ನೈಟ್‍ಶಿಫ್ಟ್, ಮಾರ್ನಿಂಗ್‍ಶಿಫ್ಟ್ ಅಂತಾ ಹಠದಿಂದ ದುಡಿದಳು. ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಯಂತ್ರಗಳ ವಿಪರೀತ ಶಬ್ದ ಇರುತ್ತಿತ್ತು. ಹೀಗಾಗಿ ಹನಾನ್‍ಗೆ ಶ್ರವಣದೋಷ ಬಾಧಿಸಹತ್ತಿತು. ಹಾಗಾಗಿ ಆ ಕೆಲಸ ಆಕೆ ಅನಿವಾರ್ಯವಾಗಿ ಬಿಡಬೇಕಾಗಿಬಂತು. ಬಿಎಸ್ಸಿ ಓದುತ್ತಿದ್ದ ಹನಾನ್‍ಗೆ ಹೇಗಾದರೂ ಮಾಡಿ ಡಾಕ್ಟರ್ ಆಗಬೇಕೆಂಬ ಹಠ. ಕಂಪನಿ ಕೆಲಸ ಅರಸುತ್ತಲೇ ಇದ್ದಳು.
ಕೆಲವು ದಿನಗಳ ನಂತರ ಬೇರೆ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತು. ಇದು ತಾಯಿ-ಮಗಳ ಬದುಕು ಸಾಗಿಸಲು ಸಾಕಾಗುತ್ತಿರಲಿಲ್ಲ. ಮೀನು ಮಾರಾಟ ಮಾಡಿದರೆ ಒಂದಿಷ್ಟು ಹೆಚ್ಚುವರಿ ಕಾಸು ಸಂಪಾದಿಸಬಹುದೆಂದು ಆಕೆಗೆ ಹೊಳೆಯಿತು. ಕಾಲೇಜು ಕ್ಲಾಸ್ ಮುಗಿಯುತ್ತಿದ್ದಂತೆಯೇ ಮೀನು ಮಾರ್ಕೆಟ್ಟಿಗೆ ಹೋಗಿ ಮೀನು ಮಾರಾಟ ಮಾಡಲು ಆರಂಭಿಸಿದಳು. ಒಮ್ಮೊಮ್ಮೆ ಬೆಳಗಿನ ಜಾವ 3.30ಕ್ಕೆ ಮೀನು ಮಾರುಕಟ್ಟೆಗೆ ಹೋಗಿ ಮೀನು ಖರೀದಿಸಿ ಮಾರಾಟ ಮಾಡುತ್ತಿದ್ದಳು. ನಂತರ ಕಾಲೇಜಿನ ಸಮಯಕ್ಕೆ ಸರಿಯಾಗಿ ಅಲ್ಲಿರುತ್ತಿದ್ದಳು. ಇಂಥದೇ ಒಂದು ದಿನ ಆಕೆ ಮೀನು ಮಾರಲು ಹೋಗಿದ್ದಳು. ಗಡಿಬಿಡಿಯಲ್ಲಿ ಯೂನಿಫಾರ್ಮ್ ತೆಗೆಯಲು ಆಕೆಗೆ ಸಾಧ್ಯವಾಗಿರಲಿಲ್ಲ.
ಆಕೆಯ ಚಿತ್ರ ತೆಗೆದ ಅಧಮ ಮಾನÀವನೊಬ್ಬ ಸಾಮಾಜಿಕ ಮಾಧ್ಯಮಕ್ಕೆ ಟ್ರೋಲ್ ಮಾಡುತ್ತಿದ್ದಂತೆಯೇ ಕೇರಳದಲ್ಲಿ ಅಲ್ಲೋಲಕಲ್ಲೋಲವೇ ಆಯ್ತು. ಈ ಚಿತ್ರ ಶೇರ್ ಮಾಡಿ ಕುಣಿದು ಕುಪ್ಪಳಿಸಿದವರಿಗೆ ಜನ ಉಗಿದರು. ಪರ-ವಿರುದ್ಧ ಅಂತರ್ಜಾಲ ಯುದ್ಧ ನಡೆಯಿತು. ಒಪ್ಪತ್ತು ಗಂಜಿಗಾಗಿ ಹೆಣಗಾಡುತ್ತಿದ್ದ ಹನಾನ್ ದೌರ್ಭಾಗ್ಯವನ್ನು ಜೋಕ್ ಮಾಡಿ ನಕ್ಕ ಟ್ರೋಲಿಗರನ್ನು ಕೇರಳದ ಪಿಣರಾಯಿವಿಜಯನ್ ಸರ್ಕಾರ ಛೀಮಾರಿ ಹಾಕಿತು. ಇಷ್ಟಾದರೂ ನೈತಿಕ ಸ್ಥೈರ್ಯದ ಹನಾನ್ ಅಂಜಲಿಲ್ಲ, ಅಳುಕಲಿಲ್ಲ ತನ್ನ ಪಾಡಿಗೆ ತಾನು ಕಾಲೇಜು, ಮೀನು ಮಾರಾಟ, ಕಂಪನಿ ಚಾಕರಿ, ತಾಯಿಯ ದೇಖರೇಖೆಯ ಜೀವನ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದಳು. ಇದು ಧೂರ್ತರಿಗೆ ನೋಡಲಾಗಲಿಲ್ಲ ಇದು ಹನಾನ್‍ನ ಪ್ರಚಾರದ ತಂತ್ರಗಾರಿ ಎಂದು ಆಲಾಪಿಸಿದರು.
ಇದು ಕೇರಳದಲ್ಲಿ ದೊಡ್ಡ ಸುದ್ದಿ ಸದ್ದು ಮಾಡಿತು. ಸೆಲಿಬ್ರಿಟಿಗಳು ಹನಾನ್ ಪರ ನಿಂತರು. ಸಾಮಾಜಿಕ ಕಾರ್ಯಕರ್ತರು ಸಹಾಯಕ್ಕೆ ಬಂದರು. ಆಕೆಗೆ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ಅರಸಿ ಬಂದಿದೆ. ಮೊನ್ನೆ ಹನಾನ್ ತಿರುವನಂತಪುರಂನ ಓಣಮ್, ಬಕ್ರೀದ್ ಖಾದಿ ಎಕ್ಸ್‍ಪೋನಲ್ಲಿ ‘ನಡಿಗೆ’ ಹಾಕಿದ್ದಾಳೆ. ತನ್ಮೂಲಕ ಕುಹಕದ ಕೊಳಕು ಟ್ರೋಲಿಗರಿಗೆ ಕೇರ್ ಮಾಡುವ ಪೈಕಿ ತಾನಲ್ಲವೆಂದು ತೋರಿಸಿಕೊಂಡಿದ್ದಾಳೆ. ಈ ಇಡೀ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕುಳಿತು ಅಮಾಯಕರ ಬದುಕಲ್ಲಿ ಆಟ ಆಡೋರಿಗೆ ಪಾಠ ಕಲಿಸಬೇಕಾದ ಅನಿವಾರ್ಯತೆಯ ಎಚ್ಚರಿಕೆ ಕೊಟ್ಟಿದೆ!

-ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...