Homeಅಂಕಣಗಳುಜೆಎನ್‍ಯು, ಜಾಮಿಯಾ ಮತ್ತು ಬೀದರ್‌ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?

ಜೆಎನ್‍ಯು, ಜಾಮಿಯಾ ಮತ್ತು ಬೀದರ್‌ ಪ್ರಕರಣ: ನಮ್ಮ ಪೊಲಿಸರು ಹಿಂಗ ಯಾಕ ಅದಾರ?

- Advertisement -
- Advertisement -

ಎಲ್ಲಾ ಮುಗದ ಮ್ಯಾಲ ಬರತಾರ. ಬೇಕಾದವರನ್ನ ಸಟಕ್ಕನ ಹಿಡೀತಾರ. ಬ್ಯಾಡಾದವರು ಕಣ್ಣೆದುರಿಗೆ ಇದ್ದರೂ ನೋಡದಂಗ ಇರತಾರ. ಎಲ್ಲಾ ಗೊತ್ತಿದ್ದೂ ತಪ್ಪು ಮಾಡತಾರೋ, ಅಥವಾ ಅವರಿಗೆ ತಿಳಿಯಂಗಿಲ್ಲೋ? ಸ್ವಂತ ಬುದ್ಧಿಯಿಂದ ಮಾಡತಾರೋ ಅಥವಾ ಯಾರದರ ಒತ್ತಡದಾಗ ಮಾಡತಾರೋ?

ಈ ಪ್ರಶ್ನೆಗಳಿಗೆ ಉತ್ತರ ಸರಳ. ಅವರು ದಡ್ಡರೇನಲ್ಲ. ಕಾಲಕ್ಕೆ ತಕ್ಕ ಹಂಗ ಬದಲಾಗೋ ಬುದ್ಧಿವಂತರು. ಆದರ ಅವರಿಗೆ ಸ್ವತಂತ್ರ ಇಲ್ಲ. ಅವರು ಆಳುವವರ ಹಂಗಿಗೆ ಬಿದ್ದವರು. ರಾಜಕೀಯ ಕಾರಣಕ್ಕಾಗಿ ನಿರ್ಧಾರ ಬದಲಿಸೋರು. ಅವರ ಕೆಲಸ ವೃತ್ತಿಪರತೆಗೆ ತಕ್ಕಂಗ ಅಲ್ಲ. ಅವರ ನಿಯತ್ತು ವಸ್ತು ನಿಷ್ಠ ಅಲ್ಲ. ವ್ಯಕ್ತಿ ನಿಷ್ಠ.
ಯಾಕ ಹಿಂಗ?

ಯಾಕಂದರ ಅವರು ರಾಜಕಾರಣಿಗಳ ಮುಲಾಜಿನ್ಯಾಗ ಇರತಾರ. ಅವರ ವರ್ಗಾವಣೆ- ನೇಮಕ- ಬದಲಾವಣೆಗೆ ಅವರು ಅಧಿಕಾರಿಗಳ ಕಡೆ ಹೋಗಂಗಿಲ್ಲ, ಎಮ್ಮೆಲ್ಲೆ ಸಾಹೇಬರ ಕಡೆ ಹೋಗತಾರ. ಅವರು ಹೂಂ ಅಂದರ ಇರತಾರ, ಇಲ್ಲಾ ಅಂದರ ಹೋಗತಾರ. ಅವರಿಗೆ ಬೇಕಾದಲ್ಲೆ, ಬೇಕಾಷ್ಟು ದಿನಾ ಇರತಾರ. ಅವರ ಮನಸು ತಗದರ ಹೋಗತಾರ.

ಹಿಂಗಿರುವಾಗ ಶಾಸಕರು ತಮ್ಮ ಕ್ಷೇತ್ರದ ಅನಭಿಷಕ್ತ ದೊರೆಯಾಗತಾರ. ದ್ವೇಷದ ರಾಜಕಾರಣ ಮಾಡತಾರ. ಬೇಕಾದವರನ್ನ ಒದ್ದ ಒಳಗ ಹಾಕಸತಾರ. ಬ್ಯಾಡಾದವರನ್ನ ಊರಾಗ ಮೆರಸತಾರ. ಒಮ್ಮೆ ಏನಾತಪಾ ಅಂದರ ಒಬ್ಬ ಪ್ರಭಾವಿ ರಾಜಕಾರಣಿಯ ಕ್ಷೇತ್ರದೊಳಗ ಒಂದು ಅತ್ಯಾಚಾರ ಪ್ರಕರಣ ಆತು. ಅದರ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಬ್ಯಾರೆ ಬ್ಯಾರೆ ಕೋಮಿನವರು ಇದ್ದರು. ಆರೋಪಿ ಶಾಸಕರ ಕೋಮಿನವರು ಆಗಿದ್ದರು. ಮುಂದ ಜಗಳ ಆಗತದ ಅಂತ ಹೇಳಿ ಶಾಸಕರು ತಲಿ ಓಡಿಸಿದರು. ಪೊಲೀಸ ಇನ್ಸಪೆಕ್ಟರ್‍ನ ಕರದು ಪ್ರಕರಣ ಬದಲಾವಣೆ ಮಾಡಿಸಿದರು. ಅತ್ಯಾಚಾರವನ್ನ ಗುಂಪು ಅತ್ಯಾಚಾರ ಅಂತ ಬದಲಾಯಿಸಲಾತು. ಸಂತ್ರಸ್ತೆಯ ಜಾತಿಯ ಹುಡುಗನೊಬ್ಬನ ಹೆಸರು ಅದರಾಗ ಸೇರಿಸಲಾಯಿತು. ಸಾರ್ವಜನಿಕ ಶಾಂತಿಗೆ ಭಂಗ ಬರಲಾರದಂಗ ಮಾಡೇವಿ ಅಂತ ಶಾಸಕರು ಹೇಳಿಕೊಂಡು ಅಡ್ಡಾಡಿದರು. ಸತ್ಯ ಏನಂದರ ಹೊಸದಾಗಿ ಹೆಸರು ಸೇರಿಸಿದ ಹುಡುಗ ಆ ಊರು ಬಿಟ್ಟು 20 ವರ್ಷ ಆಗಿತ್ತು. ಆತ ಕೆಲಸ ಹುಡುಕಿಕೊಂಡು ಬಾಂಬೆಗೆ ಹೋಗಿದ್ದ. ಅವನಿಗೆ ಈ ಪ್ರಕರಣದ ಬಗ್ಗೆ ಗೊತ್ತ ಇರಲಿಲ್ಲ.

ಆತ ಪ್ರಕರಣ ನಡದ ದಿವಸ ಊರಾಗ ಇರಲಿಲ್ಲ ಅಂದದ್ದಕ್ಕ, ಮತ್ತು ಇತರ ಕಾರಣಗಳಿಗೆ ಆ ಪ್ರಕರಣ ಬಿದ್ದು ಹೋತು. ನಿಜವಾದ ಆರೋಪಿ ಹೊರಗ ಬಂದ.

ಇಷ್ಟೆಲ್ಲಾ ಯಾಕ ಆತು ಅಂದರ ಆ ಇನ್ಸಪೆಕ್ಟರ್ ಆ ಶಾಸಕರ ಶಿಫಾರಸಿನ ಮೇಲೆ ಆ ಪೊಲೀಸ ಠಾಣೆಗೆ ಬಂದಿದ್ದ. ಆತ ಕಾನೂನಿಗೆ – ವ್ಯವಸ್ಥೆಗೆ- ಹಿರಿಯ ಅಧಿಕಾರಿಗಳ ಸಕಾರಣ ಸಲಹೆಗೆ ತಲೆ ಬಾಗದೇ ತನ್ನನ್ನು ತಂದ ಶಾಸಕರಿಗೆ ತಲೆ ಬಾಗಿದ. ಹಿಂಗ ಮಾಡೋ ಶಿಫಾರಸಿಗೆ ಮಿನಿಟ್ ಸಿಸ್ಟಂ ಅಂತ ಹೆಸರು. ಅದು ಹೋಗದ ಹೊರತು ಆ ಇಲಾಖೆ ಉದ್ಧಾರ ಸಾಧ್ಯ ಇಲ್ಲ ಅಂತ ತಿಳಿದವರ ಅಂಬೋಣ.

ಈ ಶಿಫಾರಸು ಮಾಡಬಾರದು ಅಂತ ಒಂದು ಕಾನೂನು ಅದ. ಅದು ಎಲ್ಲಿಂದ ಬಂತಪಾ ಅಂದರ, ಸುಪ್ರೀಂ ಕೋರ್ಟಿನ ಆದೇಶದಿಂದಾ ಬಂತು.

ಪದ್ಮಶ್ರೀ ಪ್ರಕಾಶ ಸಿಂಗ ಅವರು 1996 ದಾಗ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಾಗಿ ನಿವೃತ್ತರಾದರು. ಅದೇ ವರ್ಷ ಅವರು ಸುಪ್ರೀಂಕೋರ್ಟಿನ್ಯಾಗ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.

ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನಿಂದ 2007ದಾಗ ಒಂದು ತೀರ್ಪು ಬಂತು. ಅದರ ಪ್ರಕಾರ ಪೊಲೀಸ ವ್ಯವಸ್ಥೆಯ ರಾಜಕೀಕರಣ ನಿಲ್ಲಬೇಕು. ಪೊಲೀಸರ ವರ್ಗಾವರ್ಗಿ, ವಿವಿಧ ಸ್ಥಾನಗಳಿಗೆ ನೇಮಕ ಮುಂತಾದವು ಕೇವಲ ಅವರವರ ಸಾಮಥ್ರ್ಯದ ಮ್ಯಾಲ ಇರಬೇಕು. ಅವರ ರಾಜಕೀಯ ನಿಲುವುಗಳಿಗೆ ತಕ್ಕಂಗ ಇರಬಾರದು. ಇದನ್ನ ಸಾಧಿಸಲಿಕ್ಕೆ ವಲಯ ಹಾಗೂ ರಾಜ್ಯ ಮಟ್ಟದಾಗ ಹಿರಿಯ ಅಧಿಕಾರಿಗಳ ಸಮಿತಿ ನೇಮಕ ಮಾಡಬೇಕು, ಮಾನವ ಸಂಪನ್ಮೂಲಕ್ಕ ಸಂಬಂಧಪಟ್ಟಂಗ, ವರ್ಗಾವರ್ಗಿ ಸಂಬಂಧಪಟ್ಟಂಗ ಎಲ್ಲಾ ನಿರ್ಧಾರ ಅವರ ತೊಗೋಬೇಕು ಅಂತ ತೀರ್ಪು ಬಂತು. ಯಾವುದೇ ಅಧಿಕಾರಿನ ಎರಡು ವರ್ಷಕ್ಕಿಂತ ಕಮ್ಮಿ ಸಮಯದಾಗ ವರ್ಗ ಮಾಡಬಾರದು ಅಂತ ಆದೇಶ ಬಂತು.

ಇದನ್ನ ಒಂದು ವರ್ಷದ ತನಕಾ ಕಟ್ಟುನಿಟ್ಟಿನ ಆದೇಶ ಅಂತ ಹೇಳಿ ಪಾಲಸಬೇಕು. ನಂತರ ಇದೇ ಮಾದರಿಯ ಕಾನೂನು ರಾಜ್ಯ ಶಾಸನಸಭೆಯೊಳಗ ಪಾಸು ಮಾಡಬೇಕು ಅಂತ ಆತು. ಅದಕ್ಕ ಕರ್ನಾಟಕದ ಘನ ಸರಕಾರ ಪಟಕ್ಕನ `ಎಸ್ ಸರ್’ ಅಂತ ಹೇಳಿತು. `ಹಂಗ ಮಾಡತೇವಿ’ ಅಂತ ಹೇಳಿ ಬರವಣಿಗೆಯೊಳಗ ಮಾತು ಕೊಟ್ಟಿತು.
ಮೊದಲ ಎರಡು ವರ್ಷ ಅಜಯ ಕುಮಾರ ಸಿಂಗ ಪೊಲೀಸ ಮಹಾ ನಿರ್ದೇಶಕರು ಇದ್ದರು, ಎಸ್‌. ಎಮ್ ಜಾಮದಾರ ಗೃಹ ಇಲಾಖೆ ಕಾರ್ಯದರ್ಶಿ ಇದ್ದರು. ಆವಾಗ ಎಲ್ಲಾ ಸುಪ್ರೀಂಕೊರ್ಟಿನ ಆದೇಶ ಪ್ರಕಾರ ನಡೀತು. ಸಿಂಗ ನಿವೃತ್ತರಾದರು, ಜಾಮದಾರ ಅವರು ವರ್ಗಾವಣೆ ಆದರು. ಆ ನಂತರ ಬಂದ ಹಿರಿಯ ಅಧಿಕಾರಿಗಳಿಗೆ ಅದು ಇಷ್ಟ ಇರಲಿಲ್ಲ. ಅವರು ಮತ್ತ ಮೊದಲಿನ ಹಂಗ ರಾಜಕೀಯ ನಾಯಕರ ಮಾತು ಕೇಳಿ ವರ್ಗಾವಣೆ ಶುರು ಮಾಡಿದರು.

ಈಗ ಮತ್ತ ಹಂಗ ಆಗೇದ. ದೆಹಲಿಯ ಜೆಎನ್‍ಯುದಾಗ, ಜಾಮಿಯಾದಾಗ, ಉತ್ತರ ಪ್ರದೇಶದಾಗ, ಬೀದರಿನ ಶಾಹೀನ ಸಾಲಿ ಪ್ರಕರಣದಾಗ, ಪೊಲೀಸರು ವಸ್ತುನಿಷ್ಠವಾಗಿ ನಡೆದುಕೊಳ್ಳದೇ ವ್ಯಕ್ತಿ ನಿಷ್ಠವಾಗಿ ನಡೆದುಕೊಂಡಿದ್ದಕ್ಕ ಅವರು ತಪ್ಪು ಮಾಡಲಾರದ ಸಜ್ಜನರ ವಿರುದ್ಧವಾಗಿ, ಅಪರಾಧಿಗಳ ಪರವಾಗಿ ನಡಕೊಂಡಾರ.

ಯಾಕಂದರ ನಾವು ಸುಪ್ರೀಂಕೋರ್ಟನ್ನ ನಮಗ ಬೇಕಂದಾಗ ಉಪಯೋಗಿಸತೇವಿ. ನಮಗ ಅನುಕೂಲ ಇದ್ದಾಗ ಪಾಲಸತೇವಿ, ಇಲ್ಲದಾಗ ಬಿಡತೇವಿ ಅದಕ್ಕ ಇಷ್ಟಲ್ಲಾ ರಂಜ್-ತಂಜ್ ಆಗಲಿಕ್ಕೆ ಹತ್ತೇದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...