Homeಅಂಕಣಗಳುಗಡಿ ವಿವಾದ, ನೆಹರು ವಿರೋಧ ಮತ್ತು ಲೋಹಿಯಾ

ಗಡಿ ವಿವಾದ, ನೆಹರು ವಿರೋಧ ಮತ್ತು ಲೋಹಿಯಾ

- Advertisement -
- Advertisement -

ಜಾತಿ ವ್ಯವಸ್ಥೆಯ ವಿರುದ್ಧ ಮತ್ತು ಹಿಂದುಳಿದ ಜಾತಿ ಜನಾಂಗಗಳ ಬೆಳವಣಿಗೆಯ ಬಗೆಗೆ ಭಾರತದ ರಾಜಕೀಯದಲ್ಲಿ ಹೋರಾಡಿದ ಪ್ರಮುಖರಲ್ಲಿ ಲೋಹಿಯಾ ಸಹ ಒಬ್ಬರು. ಜಾತಿ ಪದ್ಧತಿಯ ವಿವಿಧ ಆಯಾಮಗಳನ್ನೂ, ಅದು ಸೃಷ್ಟಿಸಿದ ವಿವಿಧ ಅಸಮಾನತೆ, ವಿಕಾರತೆ, ವಿಕೃತಗಳನ್ನೂ ಲೋಹಿಯಾರವರ ಬರವಣಿಗೆಯಲ್ಲಿ ಕಾಣಬಹುದು. ಲೋಹಿಯಾ ಸ್ವಲ್ಪ ಜನಜಂಗುಳಿ ಪ್ರಚೋದಕ () ಭಾಷೆಯನ್ನು ಉಪಯೋಗಿಸುತ್ತಾರೆ. ಅದನ್ನು ನಗಣ್ಯವಾಗಿ ಪರಿಗಣಿಸಿ, ಮುಖ್ಯ ಸತ್ವವನ್ನು ಮಾತ್ರ ನಾವು ಪರಿಗಣಿಸಬೇಕು. ಜಾತಿ ಪದ್ಧತಿಯ ನಾಶಕ್ಕಾಗಿ ಲೋಹಿಯಾ ಸಹಭೋಜನ, ಅಂತರ್ಜಾತಿಯ ವಿವಾಹ, ಸರಕಾರಿ ನೇಮಕಾತಿಗಳಿಗೆ ಅಂತರ್ಜಾತಿ ವಿವಾಹ ಕಾನೂನುಗಳ ರಚನೆ, ಜಾತಿಸೂಚಕ ಅಡ್ಡ ಹೆಸರುಗಳ ರದ್ದತಿ, ಹಿಂದುಳಿದ ಜಾತಿಗಳಿಗೆ ಆದ್ಯತಾ ಅವಕಾಶ, ಭೂಮಿಯ ವಿತರಣೆ, ಮಹಿಳಾ ಸಮಸ್ಯೆಗಳ ಪರಿಹಾರ,. ಜಾತಿ ಆಚರಣೆಯ ವಿರುದ್ಧ ಧಾರ್ಮಿಕ ರಂಗದ ಹೋರಾಟ ಮುಂತಾದವುಗಳನ್ನು ಪ್ರತಿಪಾದಿಸುತ್ತಾರೆ. ಎಲ್ಲವೂ ಸರಿಯಾದುದೇ.
ಆದರೆ ಜಾತಿ ಹೋರಾಟಗಳ ಐತಿಹಾಸಿಕ ಸತ್ವ ಏನೆಂದು ತಿಳಿಯುವುದರಲ್ಲಿ ಲೋಹಿಯಾ ವಿಫಲಗೊಂಡಂತೆ ಕಾಣುತ್ತದೆ. ಐತಿಹಾಸಿಕವಾಗಿ ಹಿಂದುಳಿದ ಜಾತಿಗಳ ಹೋರಾಟಗಳು ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ನಡೆಯುವ ತಮ್ಮ ಬಂಡವಾಳಶಾಹಿಪೂರ್ವ ಸ್ಥಿತಿಗತಿಗಳನ್ನು ಕೊನೆಗಾಣಿಸಿ ಪ್ರಜಾಸತ್ತಾತ್ಮಕ ಜೀವನಕ್ಕೆ ಅರಳುವ, ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ತಮ್ಮ ಹಿಂದುಳಿದಿರುವಿಕೆಯನ್ನು ಕೊನೆಗಾಣಿಸಿ ಮುಂದೆ ಬರುವ ಪ್ರಜಾಸತ್ತಾತ್ಮಕ ಹೋರಾಟಗಳೆಂದು ಅರ್ಥೈಸಿಕೊಳ್ಳದೆ, ಈ ಜಾತಿ ಹೋರಾಟಗಳೇ ಸಮಾಜವಾದಿ ಹೋರಾಟಗಳೆಂದು ತಿಳಿಯುತ್ತಾರೆ. ಆದ್ದರಿಂದ ತಮ್ಮ ಕಾಲ್ಪನಿಕ ಸಮಾಜವಾದಿ ಆದರ್ಶಗಳಿಗೆ ಹೊಂದಿಕೆಯಾಗಲಾರದ ಪ್ರವೃತ್ತಿಗಳು ಅವರನ್ನು ದಂಗುಬಡಿಸುತ್ತವೆ, ಹಾಗೂ ಈ ಪ್ರವೃತ್ತಿಗಳನ್ನು ವಿಷಕಾರಿ ಎಂದೂ, ತಿಳಿವಳಿಕೆಗೆ ಮೀರಿದ್ದೆಂದೂ ಹೇಳುತ್ತಾರೆ. ಈ ಜಾತಿ ಹೋರಾಟಗಳೇ ಸಮಾಜವಾದಿ ಶಕ್ತಿ ಎಂದು ತಿಳಿದ ಲೋಹಿಯಾ ತಮ್ಮ ಕಾರ್ಯಕ್ರಮವೆಲ್ಲಾ ಸೋಲು ಅನುಭವಿಸುವುದನ್ನು ಕಾಣುತ್ತಾರೆ. ಜಾತಿ ಹೋರಾಟಗಳನ್ನು ಐತಿಹಾಸಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳದ ಲೋಹಿಯಾ ಜಾತಿ ಕನ್ನಡಕದಲ್ಲಿಯೇ ಎಲ್ಲಾ ವಾಸ್ತವತೆಯನ್ನು ನೋಡಲು, ವಿವರಿಸಲು, ಅರ್ಥೈಸಲು ಪ್ರಯತ್ನಿಸುತ್ತಾರೆ. ಈ ದೃಷ್ಟಿಯೇ ಅಪರಿಮಿತವಾದ ಅನ್ವರ್ಥಗಳಿಗೂ, ಅಸಭ್ಯ ವಿಚಾರಗಳಿಗೂ ದಾರಿಯಾಗಿದೆ.
1954 ರಿಂದ 1962 ಹಾಗೂ ನಂತರದಲ್ಲೂ ಭಾರತ-ಚೈನಾ ಗಡಿವಿವಾದವು ಬಹಳ ಚರ್ಚೆಗೊಳಗಾದ ವಿಷಯ. ಆದರೆ ಚರ್ಚೆ ಆದದ್ದು ಸಂಪೂರ್ಣ ಅಜ್ಞಾನದಲ್ಲಿ. ಅಜ್ಞಾನ ಮತ್ತು ಭಾವುಕತೆ ಸೇರಿದಲ್ಲಿ ವೈಚಾರಿಕತೆ ಇಲ್ಲದ ಅರಾಜಕತೆ ಹುಟ್ಟುವುದು ಸಹಜ. ಗಡಿ ಸಮಸ್ಯೆ ಏನು ಎನ್ನುವುದರ ಬಗೆಗಾಗಲಿ, ಗಡಿ ಹಾಗೂ ಗಡಿಸಮಸ್ಯೆಯ ವಿಕಾಸದ ಇತಿಹಾಸದ ಬಗೆಗಾಗಲಿ ನೆಹರೂ ಬಿಟ್ಟರೆ ಬೇರಾವ ರಾಜಕಾರಣಿಗಳಿಗೂ ತಿಳಿದಿರಲಿಲ್ಲ. ಕಾಂಗ್ರೆಸ್ ವಿರೋಧದಲ್ಲಿ ವಿರೋಧ ಪಕ್ಷದ ರಾಜಕಾರಣಿಗಳು ಕೆಟ್ಟ ಹುಂಬರ ರೀತಿಯಲ್ಲಿ ವರ್ತಿಸಿದರು. ಲೋಹಿಯಾ ಇವರಿಂತ ಭಿನ್ನರಾಗಿರಲಿಲ್ಲ.
ಲೋಹಿಯಾ ಬರೆದರು: `ಟಿಬೆಟ್‍ನಲ್ಲಿರುವ ಮನ್ಸಾರ್ ಗ್ರಾಮದ ನನ್ನ ಶೋಧನೆ. ಪಾರ್ಲಿಮೆಂಟಿನಲ್ಲಿ ದಾಖಲೆಗಳ ಬಗೆಗೆ ಅನೇಕ ಅತ್ಯಂತ ಹುಂಬತನದ ಸಮರ್ಥನೆಗೆ ಕಾರಣವಾಯಿತು.’ `ಭಾರತ ಸರಕಾರ ಮೊದಲು ಮನ್ಸಾರ್ ಗ್ರಾಮದ ಮೇಲಿನ ಸಾರ್ವಭೌಮತ್ವವನ್ನು ಬಿಟ್ಟುಬಿಟ್ಟಿತು.’ ಗ್ರಾಮದ ಹೆಸರು ಮನ್ಸಾರ್ ಅಲ್ಲ ಮಿನ್ಸಾರ್. ಲೋಹಿಯಾ ಮಿನ್ಸಾರ್ ಗ್ರಾಮದ ಶೋಧಕರಲ್ಲ. ಭಾರತ ಸರಕಾರ ಮೊದಲು ಮನ್ಸಾರ್ ಗ್ರಾಮದ ಮೇಲಿನ ಸಾರ್ವಭೌಮತ್ವವನ್ನು ಬಿಟ್ಟುಬಿಟ್ಟಿತು ಎನ್ನುವುದೂ ಸಹ ಪಕ್ಕಾ ಸುಳ್ಳು. ಇದು ಬರೀ ಬೊಗಳೆ. ಲೋಹಿಯಾರವರಿಗಿಂತ ಮೊದಲೇ ನೆಹರೂರವರಿಗೆ ಮಿನ್ಸಾರ್ ಗ್ರಾಮದ ಬಗ್ಗೆ ಹೆಚ್ಚು ತಿಳಿದಿತ್ತು. ಬಹಳ ಹಿಂದೆ ಅದು ಟಿಬೆಟಿನಲ್ಲಿರುವ ಪರಾವೃತ (ಇಟಿಛಿಟಚಿve) ಪ್ರದೇಶ. ನೆಹರೂ ತಮ್ಮ ಅಧಿಕಾರಿಗಳೊಂದಿಗೆ ಚರ್ಚೆಸಿ ಚೀನಾದೊಂದಿಗಿನ ಮಾತುಕತೆಯಲ್ಲಿ ಮಿನ್ಸಾರ್‍ನ್ನು ಕೇಳಬೇಕು ಎಂದು ನಿರ್ದೇಶನ ನೀಡಿದ್ದರು. ಮಾತುಕತೆ ಫಲಪ್ರದವಾಗುವುದಾಗಿ ಕಂಡರೆ ನಾವು ನಮ್ಮ ಕೇಳಿಕೆಯನ್ನು ಬಿಡಬಹುದು, ಏಕೆಂದರೆ ಆಧುನಿಕ ಕಾಲದಲ್ಲಿ ಯಾವ ದೇಶವೂ ತನ್ನ ಭೂಭಾಗದೊಳಗೆ ಇನ್ನೊಂದು ದೇಶದ ಪರಾವೃತ ಪ್ರದೇಶಕ್ಕೆ ಅವಕಾಶ ಕೊಡುವುದಿಲ್ಲ. ನೆಹರೂ ಮಿನ್ಸಾರ್‍ನ್ನು ಕೇಳಿದ್ದಾರೆ. ಭಾರತ ಚೀನಾ ಅಧಿಕಾರಿಗಳ ಮಾತುಕತೆಯಲ್ಲಿ ಅನೇಕ ರುಜುವಾತುಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆ ವರದಿಯನ್ನು ಪ್ರಕಟಿಸಿ ಸಂಸದರಿಗೆ ಸಿಗುವ ಹಾಗೆ ಮಾಡಿದ್ದಾರೆ. ನೆಹರೂ ಸರಕಾರದ ಹತ್ತಿರ ದಾಖಲೆಗಳಿವೆ, ಲೋಹಿಯಾ ಹತ್ತಿರ ಏನೂ ದಾಖಲೆಗಳಿಲ್ಲ. ನೆಹರೂ ಮೇಲೆ ಏನಾದರೂ ಒಂದಷ್ಟು ಸುಳ್ಳು ಆರೋಪಗಳನ್ನು ಹೊರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಲೋಹಿಯಾರವರ ಪ್ರಯತ್ನ.
`ಮುಖ್ಯ ಅಂಶ ದಾಖಲೆಗಳ ಬಗೆಗಲ್ಲ. ಮೆಕ್‍ಮಹೋನ್ ರೇಖೆಯ 60-70 ಮೈಲು ಉತ್ತರಕ್ಕಿರುವ ಮನ್ಸಾರ್ ಗ್ರಾಮ ಏಕೆ ಭಾರತಕ್ಕೆ ಸೇರಿದ್ದೆಂದು’. ಇಲ್ಲಿ ಲೋಹಿಯಾರವರ ಮೂರ್ಖ ತಿಳಿವಳಿಕೆ ಬಹಳ ಸ್ಪಷ್ಟವಾಗಿದೆ. ಮೆಕ್‍ಮಹೋನ್ ರೇಖೆ ಎನ್ನುವುದು ಭೂತಾನ ದೇಶದ ಪೂರ್ವಗಡಿಯಿಂದ ಪ್ರಾರಂಭವಾಗಿ ಪೂರ್ವದ ಕಡೆ ಹೋಗುವಂತಹದು. ನೇಫಾ (ಈಗಿನ ಅರುಣಾಚಲ ಪ್ರದೇಶ)ದ ಉತ್ತರದ ಗಡಿರೇಖೆಗೆ ಸಂಬಂಧಪಟ್ಟಿದ್ದು. ಮಿನ್ಸಾರ್ ಉತ್ತರ ಪ್ರದೇಶದ (ಈಗಿನ ಉತ್ತರಾಖಂಡ ರಾಜ್ಯದ) ಗರ್ಹವಾಲ್ ಮತ್ತು ಕುಮಾವೂನ್ ಗಡಿಗೆ ಉತ್ತರದಲ್ಲಿ ಇರುವ ಗ್ರಾಮ. ಈ ಗಡಿ ರೇಖೆಗೂ, ಮೆಕ್‍ಮಹೋನ್ ರೇಖೆಗೂ ಏನೂ ಸಂಬಂಧವಿಲ್ಲ. ಮೆಕ್‍ಮಹೋನ್ ರೇಖೆಯ ಪಶ್ಚಿಮ ತುದಿಯಿಂದ ಸುಮಾರು ಸಾವಿರ ಮೈಲುಗಳ ದೂರ. ಮಧ್ಯದಲ್ಲಿ ಭೂತಾನ, ಸಿಕ್ಕಿಂ, ನೇಪಾಳದ ಗಡಿಗಳೆಲ್ಲ ಬರುತ್ತವೆ. ಇಂತಹ ಅಜ್ಞಾನ ಅಥವಾ ಮೂರ್ಖ ತಿಳಿವಳಿಕೆಯಿಂದ ಎಂಥ ಜ್ಞಾನವನ್ನು ಬೇರೆಯವರಿಗೆ ನೀಡಬಹುದು ಲೋಹಿಯಾ?
`ಮನ್ಸಾರ್ ಗ್ರಾಮದ ಬಗೆಗೆ ನನ್ನ ನಿಲುವಿಗೆ ಭಾರತ ಸರಕಾರದ ಒಪ್ಪಿಗೆಯು, ಚೈನಾ ಭಾರತದ ಒಂದು ಲಕ್ಷ ಚದುರ ಮೈಲಿ ಪ್ರದೇಶವನ್ನು ದುರಾಕ್ರಮಣ ಮಾಡಿದೆ ಎಂದು ಸ್ಪಷ್ಟಪಡಿಸುತ್ತದೆ. ಮೂರು ಅಥವಾ ನಾಲ್ಕು ವರ್ಷಗಳ ಹಿಂದೆ ಲಡಾಖ್‍ನಲ್ಲಿ 15 ಸಾವಿರ ಚದುರ ಮೈಲಿ, 11 ವರ್ಷಗಳ ಹಿಂದೆ ಕೈಲಾಸ ಮಾನಸ ಸರೋವರ ಪ್ರದೇಶದಲ್ಲಿ 80 ಸಾವಿರ ಚದುರಮೈಲಿಗೂ ಮಿಕ್ಕಿ. ಕೈಲಾಸ ಮಾನಸ ಸರೋವರ ಪ್ರದೇಶ ಒಮ್ಮೆ ಭಾರತಕ್ಕೆ ಸೇರಿದ್ದು, ಭಾರತೀಯ ಆಳ್ವಿಕೆದಾರ ಒಬ್ಬ ಟಿಬೆಟ್ಟಿನ ಸನ್ಯಾಸಿಗೆ ದಾನಮಾಡಿದ್ದರು ಹಾಗೂ ದಾನ ಖಂಡಿತಾ ವರ್ಗಾಯಿಸುವಂತದ್ದಲ್ಲ ಅಥವಾ ಚೈನಾಕ್ಕೆ ಸಂಬಂಧಿಸಿದಂತೆ ವರ್ಗಾಯಿಸುವಂತಾದ್ದಲ್ಲ’. ಎಂಬುದು ಲೋಹಿಯಾರ ವಾದ. ಇದು ಲೋಹಿಯಾರವರ ಇನ್ನೊಂದು ಕಳಪೆ ತಿಳಿವಳಿಕೆಯ ವಿಚಾರ. ಮಿನ್ಸಾರ್ ಬರೇ ಒಂದು ಗ್ರಾಮ. ಅದರ ವಿಸ್ತೀರ್ಣ ಕೆಲವು ಚದುರ ಮೈಲಿಗಳು. ಲೋಹಿಯಾ ತಿಸೆ(ಕೈಲಾಸ) ಪರ್ವತ, ಮಾನಸ ಸರೋವರದ ಪ್ರದೇಶಗಳನ್ನೆಲ್ಲಾ ಸೇರಿಸಿ 11 ವರ್ಷಗಳ ಹಿಂದೆ ಭಾರತದ 80 ಲಕ್ಷ ಚದುರ ಮೈಲಿ ಪ್ರದೇಶವನ್ನು ಚೈನಾ ಆಕ್ರಮಿಸಿಕೊಂಡಿದೆ ಎಂಬ ಆಧಾರರಹಿತ ಊಹೆ ಮಾಡುತ್ತಾರೆ. ಯಾವ ಭಾರತದ ರಾಜ, ಯಾವ ಟಿಬೆಟಿಯನ್ ಸನ್ಯಾಸಿಗೆ ದಾನ ಮಾಡಿದ? ಎಂಬ ಕುರಿತು ದಾಖಲೆಗಳೇ ಇಲ್ಲದೆ ಲೋಹಿಯಾ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.
ಲೋಹಿಯಾ ಮಿಥ್ಯಾಶಾಸ್ತ್ರದ ಆಧಾರದ ಮೇಲೂ ತಮ್ಮ ಕೇಳಿಕೆಯನ್ನು ಸಮರ್ಥಿಸುತ್ತಾರೆ `ಯಾವ ಜನರೂ ತಮ್ಮ ಮುಖ್ಯ ದೇವರಾದ ಶಂಕರ, ಪಾರ್ವತಿಯರನ್ನು ವಿದೇಶದ ಭೂಭಾಗದಲ್ಲಿ ಇರಿಸಲು ಸಾಧ್ಯವಿಲ್ಲ.’ `ಯಾವ ಜನರೂ ಸಹ ತಮ್ಮ ಕೈಲಾಸವಾಸಿಯಾಗಿರುವ ಪ್ರಾಥಮಿಕ ದೇವರಾದ ಶಿವಪಾರ್ವತಿಯರನ್ನು ವಿದೇಶಿ ಭೂಮಿಯಲ್ಲಿ ಅವರ ಬಗ್ಗೆ ಕಥೆ ಕಟ್ಟಲು ಸಾಧ್ಯವಿಲ್ಲ.’ ತಿಸೆ ಪರ್ವತ ಅಥವಾ ಕೈಲಾಸ ಪರ್ವತದಲ್ಲಿ ಯಾವ ಕಾಲದಲ್ಲೂ ಶಂಕರ ಅಥವಾ ಶಿವಪಾರ್ವತಿಯವರ ದೇವಸ್ಥಾನವಾಗಲಿ, ಮೂರ್ತಿಗಳಾಗಲಿ ಇರಲಿಲ್ಲ. ಅಲ್ಲಿ ನಿಜವಾಗಿ ಇದ್ದದ್ದು ಟಿಬೆಟಿಯನ್ ದೇವತೆಗಳು. ಶಿವ, ಶಂಕರ, ಪಾರ್ವತಿ ಕೈಲಾಸದಲ್ಲಿದ್ದರೆಂದು ಹೇಳಿದ್ದು ಹಿಂದೂ ಪುರಾಣಗಳಲ್ಲಿ () ಮಾತ್ರ. ಪುರಾಣಗಳು ಮತ್ತು ದಂತಕಥೆಗಳು ಗಡಿಸಮಸ್ಯೆಗಳಿಗೆ ಸಾಕ್ಷಿಗಳಾಗಲು ಸಾಧ್ಯವಿಲ್ಲ. ಇತಿಹಾಸದ ದಾಖಲೆಗಳು ಮಾತ್ರ ರುಜುವಾತುಗಳಾಗುತ್ತವೆ. ಮಿನ್ಸಾರ ಗ್ರಾಮದ ವಿಚಾರದಲ್ಲಿ ಲೋಹಿಯಾ ಇತಿಹಾಸದ ಇರ್ರೆಡೆಂಟಿಸ್ಟ್ (). ಶಿವ ಪಾರ್ವತಿಯರ ಮೊರೆಯಿಡುವುದರ ಮೂಲಕ ಲೋಹಿಯಾ ಪುರಾಣಶಾಸ್ತ್ರದ ಇರ್ರೆಡೆಂಟಿಸ್ಟ್ (Iಆಗುತ್ತಾರೆ. ಅತ್ಯಂತ ಕೆಟ್ಟ ಹಿಂದೂ ಪುನರುತ್ಥಾನವಾದಿಗಳಾದ ರಾಮರಾಜ್ಯ ಪರಿಷತ್ತು, ಹಿಂದೂ ಮಹಾಸಭಾ, ಜನಸಂಘ ಪಕ್ಷಗಳೂ ಹೇಳದಿದ್ದನ್ನು ಕೇಳದಿದ್ದನ್ನು ಲೋಹಿಯಾ ಹೇಳುವುದು ಕೇಳುವುದು ಅತ್ಯಂತ ಖೇದಕರ ವಿಷಯ.
ನೇಫಾ (ಓಇಈಂ): ಇದಕ್ಕೆ ಲೋಹಿಯಾ ಊರ್ವಶಿಯಂ ಎಂದು ಹೆಸರಿಟ್ಟುಕೊಳ್ಳುತ್ತಾರೆ. `ಊರ್ವಶಿಯಂ ಆದಿವಾಸಿಗಳು-ಮಿಸ್ಮೀಸ್, ದಫ್ಲಾಸ್, ಅಹೋಂಮ್ಸ್-.’ ಅಹೋಮ್ಸ್ ನೇಫಾದ ಆದಿವಾಸಿಗಳಲ್ಲ. 13ನೇ ಶತಮಾನದಿಂದ 19ನೇ ಶತಮಾನದ ಆದಿಭಾಗದವರೆಗೂ ಅಸ್ಸಾಂನ್ನು ಆಳಿದ ರಾಜಮನೆತನದ ಕುಲದವರು. ಲೋಹಿಯಾ ಅವರನ್ನು ಆದಿವಾಸಿಗಳೆಂದು ತಪ್ಪಾಗಿ ಭಾವಿಸುತ್ತಾರೆ. ಅಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳ ಕುರಿತು ಯಾವ ಅಂದಾಜೂ ಇಲ್ಲದೆ ಲೋಹಿಯಾ ಕೇವಲ ಊಹೆಗಳನ್ನೇ ಸತ್ಯಗಳೆಂದು ಭಾವಿಸಿ ತಮ್ಮ ವಾದ ಮಂಡಿಸುತ್ತಾರೆ. `ಊರ್ವಶಿಯಂನ ಅತಿಸುಂದರ ಸ್ಥಳ ನಿರ್ವಿವಾದವಾಗಿ ಲಾಂಗ್ಜು ಕಣಿವೆ ಹಾಗೂ ಮಾಚುಕ ಮತ್ತು ಟ್ಯೂಟಿಂಗ್ ಕಣಿವೆಗಳು, ನಾನು ತಪ್ಪು ತಿಳಿದಿರದಿದ್ದಲ್ಲಿ ಎಲ್ಲವೂ ದಿಬಾಂಗ್‍ಕಣಿವೆಯ ಮುಂದುವರಿಕೆ.’ ಎನ್ನುತ್ತಾರೆ ಲೋಹಿಯಾ. ಯಾವುದನ್ನು ಲೋಹಿಯಾ ಲಾಂಗ್ಜುವನ್ನು ಸುಂದರ ಕಣಿವೆ ಎನ್ನುತ್ತಾರೋ ಅದು ಕಣಿವೆಯ ಹೆಸರಲ್ಲ, ಅದು ಒಂದು ಉಪಗ್ರಾಮ . ಅದು ದಿಬಾಂಗ್ ಕಣಿವೆಗೆ ಸಂಬಂಧವಿಲ್ಲ, ಸಾರಿ  ಅಥವಾ ಸುಭಾನ್‍ಸಿರಿ ಕಣಿವೆಯಲ್ಲಿ ಇರುವುದು. ಮೇಚುಕ ಟ್ಯ್ಯೂಟಿಂಗ್‍ಗಳೂ ಕಣಿವೆಯ ಹೆಸರಲ್ಲ, ಅವು ಗ್ರಾಮಗಳು. ಅವು ದಿಬಾಂಗ್ ಕಣಿವೆಯಲ್ಲಿಲ್ಲ, ಬದಲು ದಿಹಾಂಗ್ ಕಣಿವೆಯಲ್ಲಿವೆ. ಪ್ರಧಾನಮಂತ್ರಿ ಸಂಸತ್ತಿನಲ್ಲಿ ತಿಳಿಸಿದಂತೆ ಲಾಂಗ್ಜು ಎರಡು ಅಥವಾ ಮೂರು ಚದುರ ಮೈಲಿಯ ನಿರ್ವಸಿತ ಪ್ರದೇಶವೆಂದು ಹೇಳಿದರು ಎಂದು ಸುಳ್ಳು ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಒಟ್ಟನಲ್ಲಿ ಆ ನೆಹರೂಗೆ ಒಂದಷ್ಟು ಬೈಯಬೇಕು, ದೂಷಣೆ, ಆರೋಪಗಳನ್ನು ಮಾಡಬೇಕು. ಅದಕ್ಕೆ ಏನಾದರೊಂದಿಷ್ಟು ಸುಳ್ಳುಗಳನ್ನು ಕಲ್ಪಿಸಿಕೊಂಡು ದೂರುವುದು. ನೆಹರೂ ಎಂದೂ ಲಾಂಗ್ಜು ನಿರ್ವಸಿತ ಪ್ರದೇಶ ಅಂತ ಹೇಳಿಲ್ಲ, ವಾಸಿತ ಪ್ರದೇಶ ಅಂತಾನೇ ಪದೇ ಪದೇ ಭಾಷಣದಲ್ಲಿ ಹೇಳಿದ್ದಾರೆ.
(ಮುಂದುವರಿಯುವುದು)

 

ಯಡೂರು ಮಹಾಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...