Homeಮುಖಪುಟನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -
- Advertisement -

ಭರತಖಂಡವನ್ನೇ ಅಖಂಡವಾಗಿ ಬೆಚ್ಚಿಬೀಳಿಸಿದ ನಿರ್ಭಯಾ ಪ್ರಕರಣದ ಪಾತಕಿಗಳನ್ನು ಗಲ್ಲಿಗೇರಿಸಲಾಗಿದೆ. ಅಮಾಯಕ ಹುಡುಗಿಯ ಮೇಲೆ ಬರ್ಬರ ಲೈಂಗಿಕ ದಾಳಿ ನಡೆಸಿ ಕೊಂದು ಹಾಕಿದ್ದ ಪಾತಕಿಗಳು ಪ್ರಭಾವಿಗಳಾಗಿರಲಿಲ್ಲ, ಅಧಿಕಾರಸ್ಥರ ವಂಶಜರೂ ಆಗಿರಲಿಲ್ಲ. ಬಹುಷಃ ಈ ಕಾರಣದಿಂದಲೇ ಸದರಿ ರೇಪ್ ಅಂಡ್ ಮರ್ಡರ್ ಕೇಸ್‌ನ ತನಿಖೆಯಲ್ಲಿ ದೊಡ್ಡ ಅಡ್ಡಿ ಎದುರಾಗಿರಲಿಲ್ಲ. ಅಂತಿಮವಾಗಿ ನ್ಯಾಯಾಲಯಗಳೂ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿದವು. ಅದು ಮೊನ್ನೆ ಜಾರಿಯೂ ಆಯಿತು. ಈ ಹೊತ್ತಲ್ಲಿ ನಿರ್ಭಯಳಷ್ಟೇ ಕ್ರೂರವಾಗಿ ಅತ್ಯಾಚಾರ ಹತ್ಯೆಗೀಡಾದ ದಕ್ಷಿಣ ಕನ್ನಡದ ಧರ್ಮಸ್ಥಳದ ’ನಿರ್ಭಯ’ ಗೌಡ ಎಂಬ ಪಾಪದ ವಿದ್ಯಾರ್ಥಿನಿ ಕರಾವಳಿಗರಿಗೆ ನೆನಪಾಗುತ್ತಿದ್ದಾಳೆ!!

’ನಿರ್ಭಯಳನ್ನು ಅತ್ಯಾಚಾರವೆಸಗಿ ಸಾಯಿಸಿರುವ ಸಂಶಯ ದೇವದೂತ ಪ್ರಭಾವಳಿಯ ಪರಿವಾರದ ಮೇಲಿದೆ. ಈ ಕುಟುಂಬದ ಯಜಮಾನ ಸಾಕ್ಷಾತ್ ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ ಸರ್ಕಾರಗಳ ನಡೆಸುವ ಅಷ್ಟೂ ಅಧಿಕಾರಸ್ಥರನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದ ಸರ್ವಶಕ್ತ!! ಹೀಗಾಗಿಯೇ ನ್ಯಾಯದೇವತೆ ಎಂಬ ಪ್ರತೀತಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಪಾತಕ ಪ್ರಕರಣ ನ್ಯಾಯದ ಪರಿಧಿಗೆ ಒಳಪಡುತ್ತಲೇ ಇಲ್ಲವೆಂಬ ಚರ್ಚೆ ಇವತ್ತಿಗೂ ನಡೆಯುತ್ತಿದೆ!!. ಕಾಲೇಜಿನಿಂದ ಮನೆಗೆ ಹೋಗುವಾಗ ಉಜಿರೆ-ಧರ್ಮಸ್ಥಳ ಹೆದ್ದಾರಿಯಲ್ಲಿ ಹಾಡುಹಗಲೇ ಅಪಹರಿಸಲ್ಪಟ್ಟ ಹುಡುಗಿ ಕಣ್ಮರೆಯಾದ ಕ್ಷಣದಿಂದಲೇ ತನಿಖೆಯ ದಿಕ್ಕುತಪ್ಪಿಸುವ ವ್ಯವಸ್ಥಿತ ಸ್ಕೆಚ್ ಒಂದು ಕಾರ್ಯಾಚರಣೆ ನಾಜೂಕಾಗಿ ನಡೆಯುತ್ತಲೇ ಇದೆ. ಈ ಪ್ರಕರಣಕ್ಕೆ ನ್ಯಾಯ ಸಿಗುವ ಸಾಧ್ಯತೆ ದಿನಕಳೆದಂತೆ ಕಮ್ಮಿಯಾಗುತ್ತಲೇ ಇದೆ.

ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ-ಕೊಲೆ ನಡೆದಿದ್ದು 2012ರ ಡಿಸೆಂಬರ್ 16ರಂದು ಅದಕ್ಕೂ ಎರಡು ಕಾಲು ತಿಂಗಳು ಮೊದಲು ಅಂದರೆ 2012 ಅಕ್ಟೋಬರ್ 8ರಂದು ಧರ್ಮಸ್ಥಳದ ನಿರ್ಭಯಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಆಕೆಯ ಮನೆ ಹತ್ತಿರ ಕಾಡಿನಲ್ಲಿ ಎಸೆಯಲಾಗಿತ್ತು. ಆಕೆ ಕಾಣೆಯಾದಾಗ ರಾತ್ರಿಯಿಡೀ ಹುಡುಕಾಡಿದ ಕಾಡಿನಲ್ಲೆ ಬೆಳಿಗ್ಗೆ ಅತ್ಯಾಚಾರಗೊಂಡಿದ್ದ ದೇಹ ಕಂಡುಬಂದಿತ್ತು. ಆಕೆಯ ಮರ್ಮಾಂಗಕ್ಕೆ ಮಣ್ಣು ಹಾಕಿ ವೀರ್ಯ ಪರೀಕ್ಷೆ ವಿಫಲಗೊಳಿಸುವ ಯೋಜನೆ ಮಾಡಲಾಗಿತ್ತು. ಆ ರಾತ್ರಿ ಮಳೆಯಾಗಿತ್ತು, ಆದರೆ ಮೃತ ದೇಹದ ಹತ್ತಿರವೇ ಬಿದ್ದಿದ್ದ ಆಕೆಯ ಪಠ್ಯಪುಸ್ತಕ ಒಂಚೂರು ಒದ್ದೆಯಾಗಿರಲಿಲ್ಲ. ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ನಾಶ ಮಾಡುವ ಶತಪ್ರಯತ್ನ ರೇಪಿಸ್ಟ್ ಗ್ಯಾಂಗ್ ಮಾಡಿತ್ತು.

ಉಜಿರೆ-ಧರ್ಮಸ್ಥಳದಲ್ಲಿ ಪ್ರತಿಭಟನೆಗಳು ಸರಣಿಯಾಗಿ ಭುಗಿಲೆದ್ದು ಇಡೀ ದಕ್ಷಿಣ ಕನ್ನಡಕ್ಕೆ ಹೋರಾಟದ ಕಿಚ್ಚು ವ್ಯಾಪಿಸಿತ್ತು. ಪ್ರತಿಭಟನಾಕಾರರ ಆಕ್ರೋಶ, ಅನುಮಾನ ಧರ್ಮ ವ್ಯಾಪಾರಿಯ ರಕ್ತಸಂಬಂಧಿ ಪುಂಡ ಹುಡುಗರ ಮೇಲೆ ಕೇಂದ್ರೀಕೃತವಾಗಿತ್ತು. ಜನರು ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ ಪೋಲಿಸರು ಪ್ರಕರಣ ಹಳ್ಳ ಹಿಡಿಸಲು ಹವಣಿಸುತ್ತಿದ್ದರು. ಧರ್ಮಸ್ಥಳದ ಮಂಜುನಾಥ, ಧರ್ಮ ದೇವತೆ ಅಣ್ಣಪ್ಪ ಸ್ವಾಮಿ ಅಂಗಳದಲ್ಲಿ ಅಂಡೆಲೆಯುತ್ತಿದ್ದ ಮಾನಸಿಕ ಅಸ್ವಸ್ಥ ಸಂತೋಷ್‌ರಾವ್ ಹುಡುಗಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಕತೆ ಕಟ್ಟಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಯೂ ದೈವ ಸ್ವರೂಪಿ ಎಂದೇ ಧರ್ಮಸ್ಥಳದ ಶ್ರದ್ಧಾಳುಗಳು ನಂಬುವ ವೀರೇಂದ್ರ ಹೆಗ್ಗಡೆ ಪರಿವಾರದ ಉದಯ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಎಂಬ ನವ ತರುಣರು ಸಂತೋಷ್‌ರಾವ್‌ನೇ ಅತ್ಯಾಚಾರಿ ಎಂದು ತೀರ್ಪು ಕೊಟ್ಟು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು! ಇಲ್ಲಿ ಅಡಗಿದೆ ನಿರ್ಭಯಳ ರೇಪ್ ಆಂಡ್ ಮರ್ಡರ್ ಮಿಸ್ಟರಿ!!

ಧರ್ಮಸ್ಥಳ ದೇವರ ದೊರೆಗಳ ಪರಿವಾರದ ಮೇಲಿದ್ದ ಜನತೆಯ ಶಂಕೆ ಬಲವಾಯಿತು. ಧರ್ಮಸ್ಥಳದಲ್ಲಿ ಅಸಂಖ್ಯಾ ಹೆಣ್ಣು ಜೀವಗಳ ಅಸಹಜ ಸಾವು ಸಂಭವಿಸುತ್ತಿರುವ ಪುಕಾರುಗಳು ಎದ್ದವು. ಪೊಲೀಸರೇ ಕೊಟ್ಟ ಮಾಹಿತಿಯಂತೆ ನಿರ್ಭಯಳಿಗಿಂತ ಮೊದಲು ದೇವ ಸನ್ನಿಧಿಯಲ್ಲಿ ನೂರಾರು ಹೆಣ್ಣು ಬಲಿ-ಬಲಾತ್ಕಾರ ನಡೆದಿರುವುದು ಹೊರಗೆ ಬಂದಿತು. ಸಿಬಿಐನಿಂದಲೇ ನಿರ್ಭಯ ಅತ್ಯಾಚಾರದ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಇಟ್ಟರು. ಸ್ಥಳೀಯ ಪೊಲೀಸರು ನೈಜ ಅಪರಾಧಿಗಳನ್ನು ರಕ್ಷಿಸಲು ನಾಟಕ ನಡೆಸುತ್ತಿದ್ದಾರೆಂಬ ಅನಿಸಿಕೆ ಜನರದ್ದಾಗಿತ್ತು. ಕೊನೆಗೆ ಸರ್ಕಾರವು ಸಿಬಿಐಗೆ ಸೌಜನ್ಯ ಪ್ರಕರಣವನ್ನು ಹಸ್ತಾಂತರಿಸಬೇಕಾಗಿ ಬಂತು. ಆದರೆ ಸಿಬಿಐ ಸಹ ಪ್ರಾಮಾಣಿಕ ತನಿಖೆ ನಡೆಸಲೇ ಇಲ್ಲ. ಸ್ಥಳೀಯ ಪೊಲೀಸರ ತನಿಖೆ ಜಾಡಿನಲ್ಲೇ ಸಾಗಿದ ಸಿಬಿಐ ಶೂರರು ಅಪರಾಧಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗುವಂತ “ತನಿಖೆ” ತಂತ್ರ ನಡೆಸಿತು.

2017ರಲ್ಲಿ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಸಿಬಿಐ ವೈಫಲ್ಯವನ್ನು ನ್ಯಾಯಾಧೀಶೆ ಬಿ.ಎಸ್. ರೇಖಾ ಎತ್ತಿ ತೋರಿಸಿದರು. ಸರಿಯಾಗಿ ಯಾಕೆ ತನಿಖೆ ನಡೆಸಿಲ್ಲವೆಂದು ಕಟುವಾಗಿ ಸಿಬಿಐಗೆ ಪ್ರಶ್ನಿಸಿದ್ದರು. ವೈದ್ಯರುಗಳ ಪ್ರಕಾರ ಅರೆಹುಚ್ಚ ಸಂತೋಷ್ ರಾವ್‌ಗೆ ಲೈಂಗಿಕ ಸಾಮರ್ಥ್ಯವೇ ಇಲ್ಲ. ವೈಜ್ಞಾನಿಕ ವಿವರಗಳಂತೆ ಸೌಜನ್ಯಳ ಮೃತದೇಹದಲ್ಲಿ ಸಿಕ್ಕ ಕೂದಲೂ ಸಂತೋಷ್ ರಾವ್‌ನದ್ದಾಗಿರಲಿಲ್ಲ. ವೀರ್ಯ ಸಂಗ್ರಹಿಸದಿರುವುದು ಸೇರಿದಂತೆ ಹಲವು ಲೋಪ-ದೋಷಗಳ ಬಗ್ಗೆ ನ್ಯಾಯಾಧೀಶರು ಸಿಬಿಐ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇವ ಪರಿವಾರದ ಜೈನ್‌ಗಳನ್ನು ಸಿಬಿಐ ನಿಷ್ಠುರ ತನಿಖೆಗೆ ಒಳಪಡಿಸಿರಲೇ ಇಲ್ಲ.

ನಿರ್ಭಯಳ ತಂದೆ ಚಂದಪ್ಪಗೌಡ ತನಗೆ ಉದಯ್ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಮೇಲೆ ಬಲವಾದ ಅನುಮಾನವಿದೆ ಎಂದು ಹೇಳಿದ್ದರು. ಸಿಬಿಐ ನ್ಯಾಯಾಲಯ ಈ ತ್ರಿಮೂರ್ತಿಗಳಿಗೆ ಸಮನ್ಸ್ ಕಳುಹಿಸಿತ್ತು, ಅದಕ್ಕೆ ಅವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದರು. ಈ ನಡುವೆ ನಿರ್ಭಯಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದ ರವಿ ಪೂಜಾರಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡರು. ಕೇಸ್ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಬಡ್ತಿ ಪಡೆದುಕೊಂಡರು. ವಿಚಾರಣೆಗೆ ಬಿದ್ದಿರುವ ತಡೆ ತೆರವಾಗುವ ಲಕ್ಷಣವೊಂದೂ ಕಾಣಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಧರ್ಮವ್ಯಾಪಾರಿಯ ಶಿಷ್ಯರೇ ಆಡಳಿತ ನಡೆಸುತ್ತಿದ್ದಾರೆ. ಈ ಧರ್ಮಾಡಳಿತದಲ್ಲಿ ನಿರ್ಭಯಾಗೆ ಸಿಕ್ಕಂತೆ ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

(ಸಂತ್ರಸ್ತೆಯ ನಿಜವಾದ ಹೆಸರನ್ನು ಧರ್ಮಸ್ಥಳದ ನಿರ್ಭಯ ಎಂದು ಬದಲಿಸಲಾಗಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...