34 ವರ್ಷದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಮುಂಬೈ ನಿವಾಸದಲ್ಲಿ ಸಾವನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಬಾಂದ್ರಾದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಟಿವಿ ಧಾರಾವಾಹಿ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ಸುಶಾಂತ್, ಪವಿತ್ರ ರಿಷ್ತಾ, ಕಾರ್ಯಕ್ರಮದ ಮೂಲಕ ಹೆಸರು ಗಳಿಸಿದರು. ಕೈ ಪೊ ಚೆ ಚಿತ್ರದ ಬಾಲಿವುಡ್ಗೆ ಪಾದರ್ಪಣೆ ಮಾಡಿದ ಅವರು ನಂತರ ಎಂಎಸ್ ಧೋನಿ ಬಯೋಪಿಕ್ ಮತ್ತು ಕೇದಾರನಾಥ ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ ಚಿಚೋರೆನಲ್ಲಿ ಕಾಣಿಸಿಕೊಂಡಿದ್ದಾರೆ.
ಅವರ ಸಾವಿಗೆ ಆಘಾತ ವ್ಯಕ್ತಪಡಿಸಿದ ನಿರ್ದೆಶಕ ಅನುರಾಗ್ ಕಶ್ಯಪ್, “ಇದು ನಿಜವಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
“ಪ್ರಾಮಾಣಿಕವಾಗಿ ಈ ಸುದ್ದಿ ನನಗೆ ಆಘಾತ ಮತ್ತು ಮಾತಿಲ್ಲದಂತಾಗಿದೆ … ಚಿಚೋರೆನಲ್ಲಿ ಸುಶಾಂತ್ಸಿಂಗ್ ರಜ್ಪುತ್ ರನ್ನು ನೋಡಿದ್ದೇನೆ. ಆ ಚಿತ್ರವನ್ನು ನಾನ ಎಷ್ಟು ಆನಂದಿಸಿದ್ದ ಎಂದರೆ ನಾನು ಅದರ ಭಾಗವಾಗಬೇಕೆಂದು ಅದರ ನಿರ್ಮಾಪಕ ನನ್ನ ಸ್ನೇಹಿತ ಸಾಜಿದ್ಗೆ ಹೇಳಿದ್ದೆ. ಅಂತಹ ಪ್ರತಿಭಾವಂತ ನಟ … ದೇವರು ಆತನ ಕುಟುಂಬಕ್ಕೆ ಬಲವನ್ನು ನೀಡಲಿ” ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Honestly this news has left me shocked and speechless…I remember watching #SushantSinghRajput in Chhichhore and telling my friend Sajid, its producer how much I’d enjoyed the film and wish I’d been a part of it. Such a talented actor…may God give strength to his family ??
— Akshay Kumar (@akshaykumar) June 14, 2020
ಕಳೆದ ವಾರವಷ್ಟೇ, ಸುಶಾಂತ್ ಅವರ ಮಾಜಿ ವ್ಯವಸ್ಥಾಪಕ ದಿಶಾ ಸಾಲಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಧಾನಿ ನರೇಮದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸುಶಾಂತ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
Sushant Singh Rajput…a bright young actor gone too soon. He excelled on TV and in films. His rise in the world of entertainment inspired many and he leaves behind several memorable performances. Shocked by his passing away. My thoughts are with his family and fans. Om Shanti.
— Narendra Modi (@narendramodi) June 14, 2020
Shocked & saddened to hear about the sudden demise of Sushant Singh Rajput. May God give strength to his family, fans & loved ones ??
— CMO Maharashtra (@CMOMaharashtra) June 14, 2020
ಇದನ್ನೂ ಓದಿ: ಇಂದು ಚೆಗುವಾರ ಜನ್ಮ ದಿನ: ಸಂಗಾತಿ ‘ಚೆ’ ಎಂಬ ವಿಸ್ಮಯಕ್ಕೆ ಸಾವಿಲ್ಲ..