Homeಅಂಕಣಗಳುಪುಟಕ್ಕಿಟ್ಟ ಪುಟಗಳುದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು?

- Advertisement -
- Advertisement -

ವ್ಯಕ್ತಿಯು ತನ್ನ ಸುಖಸಂತೋಷಗಳಿಗೆ ಸಂಘವನ್ನು ಸಾಧನವನ್ನಾಗಿ ಬಳಸಿಕೊಳ್ಳುವುದು ಸಾಧಾರಣ ನಿಯಮ. ಆದರೆ ಸಂಘ ಒಮ್ಮೆ ಮೈದಳೆದು ನಿಂತಿತೆಂದರೆ ವ್ಯಕ್ತಿಯ ಸ್ವಾತಂತ್ರ ಮೊಟಕಾಗಿಬಿಡುತ್ತದೆ. ವ್ಯಕ್ತಿಗಾಗಿ ಸಂಘವೋ, ಸಂಘಕ್ಕಾಗಿ ವ್ಯಕ್ತಿಯೋ ಹೇಳುವುದು ಕಷ್ಟವಾಗುತ್ತದೆ. ವ್ಯಕ್ತಿಗಿಂತ ಮಿಗಿಲಾದ, ಬೇರೆಯಾದ, ತನ್ನದೇ ಆದ ಇರವನ್ನು ಪಡೆದುಕೊಳ್ಳಲು ಸಂಘ ಹೆಣಗಾಡುತ್ತದೆ; ಹೀಗೆಂದು ಎಸ್ ಕೆ ರಾಮಚಂದ್ರ ರಾವ್ ತಮ್ಮ ಮೂರ್ತಿಶಿಲ್ಪದ ಪುಸ್ತಕದಲ್ಲಿ ವಿಚಾರ ಮಾಡುತ್ತಾರೆ. ಶಿಲ್ಪಗಳ ನೆಲೆ ಹಿನ್ನೆಲೆಗಳನ್ನು ಗುರುತಿಸುವ ಮತ್ತು ಚರ್ಚೆ ಮಾಡುವ ಕಾರಣದಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿರುವ ಎಲ್ಲಾ ವಿಷಯಗಳನ್ನೂ ಈ ಪುಸ್ತಕ ಅವಲೋಕಿಸುತ್ತದೆ.

ದೇವಾನುದೇವತೆಗಳ ಮೂರ್ತಿಗಳು ಮೂರ್ತೀಭವಿಸಿದ ಹಿನ್ನೆಲೆಗಳನ್ನು ಗಮನಿಸುತ್ತಾ ದೇವರುಗಳ ಹುಟ್ಟು, ಬೆಳವಣಿಗೆ, ಅವುಗಳ ಸಾಂಸ್ಕೃತಿಕ  ರಾಜಕಾರಣ, ಸಂಘರ್ಷ ಮತ್ತು ಈ ಹೊತ್ತಿಗೆ ಅವುಗಳ ಪ್ರತಿಮೆಗಳು ನಿರ್ದಿಷ್ಟ ರೂಪಕ್ಕೆ ಬಂದು ನಿಂತಿರುವುದರ ಅಧ್ಯಯನ ಈ ಕೃತಿಯ ಮುಖ್ಯ ಉದ್ದೇಶ.

ವ್ಯಕ್ತಿ ಮತ್ತು ಸಮಾಜ: ಈ ಎರಡರ ನಡುವಿನ ಸಂಘರ್ಷಕ್ಕೆ ಕಾರಣ ಮಾತ್ರ ವಿಚಿತ್ರ ಮತ್ತು ವಿಸ್ಮಯ. ಆದರೆ ಈ ಸಂಘದ ಕೈ ಬಲಪಡಿಸುವ ಅಗತ್ಯ ವ್ಯಕ್ತಿಗಿದೆ. ಆದರೆ ಇದು ಅವನನ್ನೇ ಬಂಧಿಸುತ್ತದೆ. ನುಂಗುವುದಕ್ಕೂ ಆಗದ, ಉಗಳುವುದಕ್ಕೂ ಆಗದಂತೆ ತಾನೇ ಸಮಾಜದ ಬಲೆಯಲ್ಲಿ ಬಂಧಿತನಾಗುತ್ತಾನೆ. ಈ ಬಲೆಯ ಹರವಿನಲ್ಲಿ ನಮ್ಮ ಎಲ್ಲಾ ವ್ಯವಹಾರಗಳೂ ನಡೆಯಬೇಕು. ಅದಕ್ಕಾಗಿ ಅವನು ಸಂಕೇತಗಳನ್ನು ಸೃಷ್ಟಿಸಬೇಕು. ಸಂಕೇತಗಳನ್ನು ಸೃಷ್ಟಿ ಮಾಡುವ, ಕಲಿಯುವ, ಕಲಿಸುವ ಮತ್ತು ಅದರಲ್ಲಿ ವ್ಯವಹರಿಸುವ ಕೌಶಲ್ಯ ಮಾನವನಿಗೆ ನಿಸರ್ಗದತ್ತವಾಗಿಯೇ ಬಂದಿದೆ. ಅವನ ಬುದ್ಧಿಶಕ್ತಿ ಮತ್ತು ಭಾವನಾ ಪ್ರೌಢಿಮೆಯು ಈ ಕೌಶಲ್ಯಕ್ಕೆ ಮೂಲ ಸಾಮಗ್ರಿಗಳು. ಭಾಷೆ, ಮದುವೆ, ನಾಣ್ಯ, ವಿದ್ಯಾಭ್ಯಾಸ, ನ್ಯಾಯ, ಧರ್ಮ, ಸರಕಾರ, ವಿಜ್ಞಾನ, ಸಾಹಿತ್ಯ ಎಲ್ಲವೂ ಸಂಕೇತದ ಬಲೆಯ ವಿವರಗಳೇ ಎನ್ನುವ ರಾವ್ ಸಂಪ್ರದಾಯಗಳ ಬಗ್ಗೆಯೂ ವಿಶ್ಲೇಷಿಸುತ್ತಾರೆ.

ಹೊಸ ಉಪಾಯ ಹುಡುಕದ ಸೋಮಾರಿಗೆ ಸಂಪ್ರದಾಯಗಳು ಬೇಕಾಗುತ್ತವೆ. ಸಿದ್ಧವಾದ, ಜನರು ಬಳಸಿ ಉಪಯೋಗಕಂಡ ಉಪಾಯಗಳನ್ನು ಮಾತ್ರ ಅನುಸರಿಸುವ ಈ ಮಂದಿಯು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಕೆಲಸ ಮಾಡುತ್ತಾರೆ. ಅವು ಒಂದು ರೀತಿ ಸೋಶಿಯಲ್ ಕಂಟ್ರೋಲ್ ಅಥವಾ ಸಾಮಾಜಿಕ ಅಂಕೆಯಾಗಿಯೂ ಕೆಲಸ ಮಾಡುತ್ತವೆ. ಈ ಸಾಮಾಜಿಕ ಅಂಕೆಯಿಂದ ಪ್ರಾರಂಭಿಸುವ ರಾವ್ ಕುಲದೈವ (ಟೊಟಮ್) ಮತ್ತು ವಿಧಿ ನಿಷೇಧ (ಟಾಬು)ಗಳ ಕಡೆಗೆ ಹೊರಳಿ ಬುಡಕಟ್ಟುಗಳು, ಜನಾಂಗಗಳು ತಮ್ಮ ತಮ್ಮ ಸಂಕೇತಗಳನ್ನು ತಮ್ಮ ಸಂಘದ ಶಕ್ತಿಯನ್ನಾಗಿಸಿಕೊಂಡು ವ್ಯಕ್ತಿಗಳನ್ನು ನಿಗ್ರಹಿಸುವ, ಸಮುದಾಯಗಳನ್ನು ರಕ್ಷಿಸುವ ಕೆಲಸಗಳನ್ನು ಮಾಡುವ ಅಗತ್ಯತೆಯನ್ನು ಗುರುತಿಸುತ್ತಾರೆ.

ಸ್ವಾರಸ್ಯಕರವಾದ ಸಂಪ್ರದಾಯಗಳನ್ನು ಗುರುತಿಸುವ ರಾವ್ ವಿಶ್ವದ ತುಂಬಾ ಅಪರೂಪವಾದ ಬುಡಕಟ್ಟುಗಳ ವಿಧಿಗಳನ್ನು ದಾಖಲಿಸುತ್ತಾರೆ. ಬೋರ್ನಿಯೋ ಮತ್ತು ಮೆಲನೀಶಯದ ಬುಡಕಟ್ಟುಗಳಲ್ಲಿ ಹುಟ್ಟಿದ ಮಗುವಿಗೆ ಹೆಸರಿಡಬೇಕಾದರೆ ಮಗುವಿಗೆ ಯಾವ ಹೆಸರಿಡುತ್ತಾರೋ ಆ ಹೆಸರಿನ ವ್ಯಕ್ತಿಯನ್ನು ಕೊಂದು, ತಲೆ ಕಡಿದು, ಅವನ ಬುರುಡೆಯಲ್ಲಿರುವ ಮಿದುಳನ್ನು ಅಡುಗೆ ಮಾಡಿ ತಂದೆ ತಿಂದ ಮೇಲೆಯೇ ಮಗುವಿಗೆ ಹೆಸರಿಡುತ್ತಿದ್ದುದು. ನಂತರ ಬರಿದಾದ ಬುರುಡೆಯನ್ನು ಪವಿತ್ರವೆಂದು ತಮ್ಮ ಮನೆಯಲ್ಲಿ ಜತನ ಮಾಡುತ್ತಿದ್ದರು.
ಹವಾಯ್ ದ್ವೀಪದ ಸಮರದೇವತೆ, ಆಫ್ರಿಕಾಖಂಡದ ಧಾನ್ಯದೇವತೆ, ಈಜಿಪ್ಟ್ ದೇಶದ ಬೇಸ್ ಎಂಬ ಯಕ್ಷ, ಸಿರಿಯಾದ ಎಲ್ ದೇವತೆಗಳನ್ನೆಲ್ಲಾ ಉಲ್ಲೇಖಿಸುವ ರಾವ್ ಭಾರತದ ಪ್ರಚಲಿತ ದೇವರುಗಳ ಪ್ರತಿಮೆಗಳ ಕಡೆಗೆ ಹೊರಳುತ್ತಾರೆ.

ಬರಿಯ ಶ್ರದ್ಧಾಭಕ್ತಿಯ ಸಾಂಪ್ರದಾಯಿಕ ಭಾವುಕತೆಯಲ್ಲಿ ಬಂಧಿತರಾಗಿರುವವರಿಗೆ ಈ ಪುಸ್ತಕದಲ್ಲಿ ಚರ್ಚಿಸಿರುವ ದೇವತೆಗಳ ಪ್ರತಿಮೆಗಳ ವಿಕಾಸವನ್ನು ಅರಿತರೇ ಎಷ್ಟೋ ಭ್ರಮೆಗಳು ಹರಿಯುವ ಸಾಧ್ಯತೆ ಇದೆ. ಗಣಪತಿಯ ಹುಟ್ಟು ಅವನ ಆದಿ ಪೂಜಿತನೆಂಬ ಕಲ್ಪನೆಯನ್ನು ಒಡೆದು ಹಾಕಿದರೆ, ಶಿವನ ಸ್ವಾರಸ್ಯ ಅರಣ್ಯಕರ ಅವಲೋಕನವನ್ನು ಮಾಡಲಾಗಿದೆ. ಇನ್ನು ವಿಷ್ಣುವಿನ ವಿಶಿಷ್ಟ ಭಾಗವತಪಂಥದ ಹಂತಗಳನ್ನು ವಿವೇಚಿಸಲಾಗಿದೆ. ಗ್ರಾಮದೇವತೆಗಳು ಹೇಗೆ ಹುಟ್ಟಿದರು, ಅವರು ಸರ್ವಶಕ್ತಿಗಳೆಂತು ಆದರು ಎಂಬುದು ಕೂಡಾ ಇವರ ಅಧ್ಯಯನದಿಂದ ತಪ್ಪಿಸಿಕೊಳ್ಳುವುದಿಲ್ಲ. ಸುಬ್ರಹ್ಮಣ್ಯ ಅಥವಾ ಸ್ಕಂದ, ಶಾಸ್ತ ಅಥವಾ ಅಯ್ಯಪ್ಪ, ಮಲ್ಲಾರಿ – ಖಂಡೋಬರAತಹ ಪಾರ್ಶ್ವ ದೇವತೆಗಳು ಸ್ವಯಂಪ್ರಧಾನ ದೇವತೆಗಳಾಗುವ ಬಗೆ, ಕಳಿಯಾಟ್ಟದ ತೆಯ್ಯಕೋಲಗಳು, ತುಳುನಾಡಿನ ದೈವಗಳು, ಕೃಷ್ಣನ ಕಲ್ಪನೆ; ಇವುಗಳ ಚಾರಿತ್ರಿಕ ಅಧ್ಯಯನವೂ ಇಲ್ಲಿದೆ. ವಿವಿಧ ಕಾಲಘಟ್ಟಗಳಲ್ಲಿ ಆದಂತಹ ಸಾಂಸ್ಕೃತಿಕ ಪಲ್ಲಟಗಳಿಗೆ ಅಷ್ಟು ಕಾರಣಗಳನ್ನು ರಾವ್ ಹೇಳದಿದ್ದರೂ, ಪ್ರತಿಮೆಗಳು ತಮ್ಮ ರೂಪಗಳನ್ನು ಬದಲಾಯಿಸಿಕೊಳ್ಳುತ್ತಾ ಬಂದ ಬಗೆಗಳನ್ನು ವಿವರಿಸುತ್ತಾ ಹೋಗುತ್ತಾರೆ. ಇದು ಬಹಳ ಮಹತ್ವದ್ದಾಗಿದೆ.

ಈ ಕಾಲಕ್ಕೆ ಇಂತಹ ವಿಷಯಗಳು ಸಾಮಾನ್ಯ ತಿಳಿವಳಿಕೆಗಳಾಗಿದ್ದು ಯಾವುದೋ ಅಧ್ಯಯನ ಸಂಪನ್ಮೂಲವಾಗುವಂತಹ ಹೊತ್ತಿಗೆಯಲ್ಲಿ ಮಾತ್ರವೇ ಇರಬೇಕಾದ ವಿಷಯಗಳಾಗಬಾರದಿತ್ತು. ಏಕೆಂದರೆ, ಕಾಲಪ್ರವಾಹದಲ್ಲಿ ಹೊಸಹೊಸ ಸವಾಲುಗಳು, ಸಮಸ್ಯೆಗಳು ಮತ್ತು ಸಂಘರ್ಷಗಳನ್ನು ಎದುರಿಸುತ್ತಿರುತ್ತೇವೆ. ಅವುಗಳನ್ನು ಎದುರಿಸುವ ಕೌಶಲ್ಯ ಮತ್ತು ಶಕ್ತಿ ಸಾಂಪ್ರದಾಯಿಕ ಮನಸ್ಥಿತಿಗಳಿಗೆ ಸಾಧ್ಯವಾಗದೇ, ತಾವು ಗೊಂದಲಕ್ಕೀಡಾಗುವುದು ಮಾತ್ರವಲ್ಲದೇ ತಾವು ಸದಸ್ಯರಾಗಿರುವ ಸಾಮಾಜಿಕ ಸಂಘದಲ್ಲಿಯೂ ಕೂಡ ಗೊಂದಲವನ್ನುಂಟುಮಾಡುತ್ತಾರೆ. ಇವು ಬಹಳ ಆತಂಕದ ಸಂಗತಿಗಳು. ವೈಜ್ಞಾನಿಕ ಆವಿಷ್ಕಾರಗಳು ಮತ್ತು ಸಂಶೋಧನೆಗಳು ಮುಂದುವರೆದಂತೆ ಹಳೆಯ ಪರಿಕರಗಳನ್ನು ಹಿಂದಕ್ಕೆ, ವಸ್ತುಸಂಗ್ರಹಾಲಯದ ದಾಖಲೆಗೆ ಸರಿಸಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳನ್ನು ಬಳಸುವಂತೆ ಸಂಶೋಧಕರು ಮತ್ತು ವಿಚಾರವಂತರಿಗೆ ಸಾಧ್ಯವಾಗದಿರುವುದೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಏನಲ್ಲ.

ದೇಶದ ಸಂಸ್ಕೃತಿಯನ್ನು ಧರ್ಮ ಮತ್ತು ಕಲೆಗಳ ದೃಷ್ಟಿಯಿಂದ ಅಧ್ಯಯನ ಮಾಡುವ ಕಾರ್ಯಫಲವು ಜನಸಾಮಾನ್ಯರಿಗೆ ಮುಟ್ಟಿದ್ದರೆ ಸಮಾಜದ ಮನೋಧರ್ಮವು ಎಂದಿಗೋ ಮೌಢ್ಯದಿಂದ ಬಿಡುಗಡೆಯಾಗಿರುತ್ತಿತ್ತು.

ಸಾಂಪ್ರದಾಯಿಕ ಧೋರಣೆಯ ಸೋಮಾರಿಗಳು ಈ ಮೂರ್ತಿಶಿಲ್ಪದ ಕೃತಿಯನ್ನು ಒಮ್ಮೆ ಅಧ್ಯಯನ ಮಾಡಬೇಕು. ಧರ್ಮ, ದರ್ಶನ, ಮನೋವಿಜ್ಞಾನ, ಸಮಾಜಶಾಸ್ತ್ರ ಮಾನವಶಾಸ್ತ್ರ, ಪ್ರಾಕ್ತನ-ಪ್ರಾಚ್ಯ ಸಂಶೋಧನೆಗಳ ವಿವರಗಳೆಲ್ಲವೂ ಇದರಲ್ಲಿದೆ.
ಈ ಪುಸ್ತಕದ ಅಧ್ಯಯನ ವ್ಯಾಪ್ತಿ ದೊಡ್ಡದು. ಇದರಲ್ಲಿ ಅಡಕವಾಗಿರುವ ಸಂಗತಿಗಳು ಮೂಲಭೂತವಾದವು.

ಸಂಶೋಧನೆ, ವಿಮರ್ಶೆ, ಪರಿಶೀಲನೆ- ಇವು ಕೂಡಿಬಂದಿರುವ ಕೃತಿ ಮೂರ್ತಿಶಿಲ್ಪ ಎಂದು ಎಚ್ ನರಸಿಂಹಯ್ಯ ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವುದು ವಿಶೇಷ.

  • ಯೋಗೇಶ್ ಮಾಸ್ಟರ್, ರಂಗಭೂಮಿ ಕಲಾವಿದರು, ಬರಹಗಾರರು.

ಇದನ್ನೂ ಓದಿ: ಶಾಸ್ತ್ರೀಯ – 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...