Homeಅಂಕಣಗಳು`ಹಾರಲೆ ಅಂದ್ರ ಹಾರೋದ ಬಿಟ್ಟು ಬರೇ ಓಡತದ ನೋಡ್ರಿ ಈ ಬೈಕು?'

`ಹಾರಲೆ ಅಂದ್ರ ಹಾರೋದ ಬಿಟ್ಟು ಬರೇ ಓಡತದ ನೋಡ್ರಿ ಈ ಬೈಕು?’

ಪ್ರಶಾಂತ್ ಭೂಷಣ ಅವರ ತಪ್ಪು ಇಲ್ಲ. ಇದರಿಂದ ನ್ಯಾಯಾಂಗ ನಿಂದನೆ ಆಗತದ ಅಂತ ಹೇಳ್ಲಿಕ್ಕೆ ಬರೋದಿಲ್ಲ, ಅಂತ ಹೇಳಿ ಹಿರಿಯ ವಕೀಲರಾದ ಮೋಹನ್ ಕಾತರಕಿ ಅವರೂ ಸೇರಿದಂತೆ ಅನೇಕರು ಹೇಳಿಕೆ ಕೊಟ್ಟಾರ.

- Advertisement -
- Advertisement -

ಈ ಹಳೆ ಮೈಸೂರು ಕಡೆ ಕೆಲಸ ಇರಲಾರದೆ ರಿಕಾಮಿ ಅಡ್ಡಾಡೋ ಹುಡುಗರಿಗೆ ಪಡ್ಡೆ ಹೈಕಳು ಅಂತಾರ. ಅದನ್ನ ಅಖಂಡ ಕರುನಾಡಿಗೆ ಗೊತ್ತಾಗೋ ಹಂಗ ಮಾಡಿದವರು ಯಾರಪಾ ಅಂದ್ರ ಪುರಾಣದ ಕಟ್ಟಿಯ ವಾಟಿಸ್ಸೆ ಮತ್ತು ಜುಮ್ಮಿ.

ಇಂತಹ ಪಡ್ಡೆ ಹೈಕಳುಗಳು, ಸುಮಾರು 80 ರ ದಶಕದಾಗ ಪ್ರೇಮಲೋಕ ಅಂತ ಒಂದು ಪಿಚ್ಛರು ಫುಲ್ ಫೇಮಸ್ ಮಾಡಿದ್ರು. ಅದು ಫೇಮಸ್ ಚಲನ ಚಿತ್ರ ನಿರ್ಮಾಪಕ ಎನ್ ವೀರಸ್ವಾಮಿ ಅವರ ಮಗ ರವಿ ಚಂದ್ರನ್ನ ಭಾರಿ ಫೇಮಸ್ ಮಾಡಿತು. ಅದು ‘ಗ್ರೀಸ್ ಟೂ’ ಅನ್ನೋ ಇಂಗ್ಲಿಷ್ ಚಿತ್ರದ ಕಾಪಿ ಅಂತ ನಮ್ಮೂರಿಂದ ಹುಬ್ಬಳ್ಳಿಗೆ ಹೋಗಿ ಪಿಚ್ಛರು ನೋಡಿ ಬಂದ ದೊಡ್ಡ ಹುಡುಗರೂ ಹೇಳಾಕ ಹತ್ತಿದ್ದರು. ನಮಗ ಅದು ಗೊತ್ತಾಗದ ಹೋಗಿ ನಾವು ಅದು ಕ್ರಿಸ್ಟೋ ಅನ್ನೋ ಪಿಚ್ಛರು ಅಂತ ತಪ್ಪು ತಪ್ಪು ಹೇಳತಿದ್ದಿವಿ.

ರವಿ ಅಣ್ಣಾ ಅವರು ತಮ್ಮ ಚಿತ್ರದ ಒರಿಜಿನಾಲಿಟಿ ಹಾಳಾಗಬಾರ್ದು ಅಂತ ಹೇಳಿ ಪ್ರೇಮ ಲೋಕದ `ಯಾರಿವನು ಈ ಮನ್ಮಥನು’ ಅನ್ನೋ ಹಾಡನ್ನು ಗ್ರೀಸು ಟೂ ಚಿತ್ರದ `ಹೂ ಈಸ್ ದ್ಯಾಟ ಗಾಯ್’ ಅನ್ನೋ ಹಾಡಿನ ಹಂಗನ ಚಿತ್ರೀಕರಣ ಮಾಡಿದ್ದರು. ಯಾರಿಗೂ ಯಾವ ಸಂದೇಹ ಇರಬಾರದು ಅಂತ ಅವರ ಉದ್ದೇಶ ಆಗಿತ್ತು ಅನ್ನೋದು ಆಮ್ಯಾಲೆ ಗೊತ್ತ ಆತು. ಅದರಾಗ ಆ ಹೀರೋ ಮೈಕೆಲ್ ಒಂದು ಬೈಕು ಹತ್ತಿಕೊಂಡ ಬಂದ ಪುಂಡರಿಗೆ ಹೊಡೀತಾನ, ಇದರಾಗ ರವಿಚಂದ್ರನ ಅವರು ಹಂಗ ತಮ್ಮ ಮಾರಿ ಮುಚ್ಚಿಕೊಂಡರೂ ಗೊತ್ತಾಗೋ ಹಂಗ ಮೇಕ್ ಅಪ್ ಮಾಡಿಕೊತಾನ. ಹುಡುಗಿಯರ ಮುಂದ ಗೂಂಡಾಗಳಿಗೆ ಹೊಡೀತಾನ. ಅದರಾಗ ಒಂದು ಸಾಲು ಬರತೇತಿ.

“ನೀ ಯಾರ ಅಂತ ಗೊತ್ತಿರದಾಗ ನೀ ಎಲ್ಲರಿಗೂ ಬೇಕು
ನೀನು ರಹಸ್ಯ ಆಗಿ ಇದ್ದಷ್ಟೂ ಭಾಳ ದೂರ ಹೋಗ್ತಿ
ನಿನ್ನ ಸುತ್ತ ಇರೋರೆಲ್ಲಾ ನೀ ಭಾಳ ದೊಡ್ಡ ಸ್ಟಾರ್ ಅಂತ ತಿಳ್ಕೊಂತಾರೂ..” ಈ ಸಾಲು ಭಾಷಾಂತರ ಮಾಡೋದು ಹಂಸಲೇಖ ಅವರು ಮರ್ತು ಬಿಟ್ಟಿದ್ದರು ಅಂತ ಕಾಣತೇತಿ.

ಈ ಸಾಲು ಈಗ ಯಾಕ ನೆನಪು ಆಗಾಕ ಹತ್ತೇತಿ ಅಂದ್ರ ನಮ್ಮ ಬೋಬಡೆ ಸಾಹೇಬರು ನಾಗಪುರದಾಗ ಒಬ್ಬ ಮರಿ ಪುಢಾರಿ ಅವರ ಮೋಟರ್ ಸೈಕಲ್ಲು ಮ್ಯಾಲೆ ಹತ್ತಿ ಒಂದ್ ರೌಂಡ್ ಹೋಗಿ ಬಂದಾರ. ಅದರ ಫೋಟೋ ತಗದು ಯಾರೋ ಸಮಾಜ ವಿರೋಧಿ ಮಾಧ್ಯಮದಾಗ ಹಾಕ್ಯಾರ.

ಅದು ಹಾರಲೆ ಡೇವಿಡ್ ಸನ್ ಬೈಕು. ಹಂಗ ಅಂತ ಅದರ ಮ್ಯಾಲೆ ಯಾರ ಕೂತು ಹಾರಲೇ ಅಂತ ಅಂದ್ರ ಅದು ಹಾರೋದಿಲ್ಲ. ಅದು ಬರೇ ನೆಲೆದ ಮ್ಯಾಲೆ ಓಡೋ ಗಾಡಿ. ಗ್ರೀಸು ಟೂ ದಾಗ ಉಪಯೋಗಿಸಿದ ಗಾಡಿ ಹೆಸರು ಹೋಂಡಾ ಎಳದಾಟ (ಸ್ಕರಾಂಬಲರ್). ರವಿಚಂದ್ರನ ಅವರು ಓಡಿಸಿದ್ದು, ಸುಜೂಕಿ ಅಂತ ಸ್ಟಿಕ್ಕರು ಹಚ್ಚಿದ ಯಮಹ ಅಂತ ಒಂದು ಊಹೆ. ಇರಲಿ.

ಆದರ ಈ ನಾಗಪುರದ ಗಾಡಿ ಐತೆಲ್ಲ, ಅದು ಅಂತಾ- ಇಂಥಾ ಬೈಕು ಅಲ್ಲ. ಅದರ ಬೆಲೆ ಸುಮಾರು ಐದು ಲಕ್ಷ ದಿಂದ 50 ಲಕ್ಷದ ವರೆಗೂ. ಇದು ಬರೀ ಒಂದು ಬೈಕ್ನ ಬೆಲೆ. ನೀವು ಬೈಕು ಶೋ ರೂಮಿನ ಬೆಲೆ ಅಂತ ಅಂದುಕೋಂಡೀರಿ, ಮತ್ತ.

ಆ ಪಟ ನೋಡಿದ ನಮ್ಮ ಪ್ರಶಾಂತ್ ಭೂಷಣ ವಕೀಲ ಸಾಹೇಬರು “ನ್ಯಾಯಾಧೀಶರು ಅದವರು ಹಿಂಗೆಲ್ಲ ಯಾರದರ ಗಾಡಿ ಇಸಕೊಂಡು ಓಡಸಬಾರದು. ಅದರಾಗ ರಾಜಕೀಯ ವ್ಯಕ್ತಿಗಳ ಕಡೆ ಇಸಕೋಬಾರದು,” ಅಂತ ಟ್ವೀಟ್ ಮಾಡಿದರು.

ಅಲ್ಲಿಂದ ಶುರು ಆತು ಬೋಬಡೆ ಸಾಹೇಬರ ತಿರಸ್ಕಾರದ ಪ್ರಕರಣ. ಅವರು ಭೂಷಣ ಅವರ ಮ್ಯಾಲಿನ ಹಳೇ ನ್ಯಾಯನಿಂದನೆ ಪ್ರಕರಣ ಎಲ್ಲಾ ತೆಗಿಸಿದರು.

ಈ ನ್ಯಾಯಾಂಗನಿಂದನೆ ಅಂದ್ರ ಖರೆ ಏನು? ಅದಕ್ಕ ಕಂಟೆಮ್ಟ ಅಂತ ಅಂತಾರು.
ಇಂಗ್ಲಿಷ್ನ ಕಂಟೆಮ್ಟ ಅನ್ನೋ ಪದಕ್ಕ ತಿರಸ್ಕಾರ, ಅನಾದರ, ಅಗೌರವ, ನಿಂದನೆ ಅನ್ನೋ ಅರ್ಥ ಅದಾವು.

ಕಾನೂನುತಜ್ಞ ಹಾಲಸಬರಿ ಅವರ ಪ್ರಕಾರ, ನ್ಯಾಯನಿರ್ಣಯ ಪ್ರಕ್ರಿಯೆಗೆ ಅಡ್ಡಿ ಮಾಡೋ ಯಾವುದೇ ಲಿಖಿತ, ಅಥವಾ ಅಲಿಖಿತ ಶಬ್ದ, ನ್ಯಾಯಾಂಗನಿಂದನೆ ಅನ್ನಿಸಿಕೊಳ್ಳತದ.

ಇನ್ನೂ ಭಾರತೀಯ ವಕೀಲರ ಕಾಯಿದೆ ಪ್ರಕಾರ, “ಒಬ್ಬ ವ್ಯಕ್ತಿ – ಅವನು ಪ್ರಕರಣದ ಕಕ್ಷಿದಾರ ಇರಬಹುದು ಅಥವಾ ಹೊರಗಿನವ ಆಗಿರಬಹುದು, ಅವನು ನ್ಯಾಯಾಧೀಶನ ಅಧಿಕಾರ ಕುಗ್ಗಿಸುವಂತೆ ಅಥವಾ ಅವನು ಪ್ರಕರಣ ನಡೆಸೋ ರೀತಿಯ ಬಗ್ಗೆ ಅಪಹಾಸ್ಯ ಮಾಡಿದರೆ, ವಿನಾಕಾರಣ ಟೀಕೆ ಮಾಡಿದರೆ, ಸಾಕ್ಷಿಗಳು, ಇತರ ಕಕ್ಷಿದಾರರು ಹಾಗೂ ಇತರರು ಪ್ರಕರಣ ಮುಗಿಯುವ ಮುಂಚೆ ಅದರ ಬಗ್ಗೆ ತಪ್ಪು ತಿಳಿದುಕೊಳ್ಳುವ ಹಾಗೆ ಸಾರ್ವಜನಿಕರಲ್ಲಿ, ಮಾಧ್ಯಮದಲ್ಲಿ ದುರಭಿಪ್ರಾಯ ಮೂಡಿಸಿದರೆ, ನ್ಯಾಯದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೆ, ಸಬೂತುಗಳಿಲ್ಲದೇ ನ್ಯಾಯಾಲಯದಲ್ಲಿ ಹಗರಣ ಆಗಿದೆ ಎಂಬ ಸುಳ್ಳುಗಳನ್ನು ಹಬ್ಬಿಸಿದರೆ” ಅದು ನ್ಯಾಯಾಂಗ ನಿಂದನೆ.

ಆದರೆ, ರಾಜಕೀಯ ನಿರ್ಲಿಪ್ತತೆಯನ್ನು ಮೈಗೂಡಿಸಿಕೊಳ್ಳಬೇಕಾದ ನ್ಯಾಯಾಧೀಶರು ಪುಢಾರಿ ರಾಜಕಾರಣೀಯ ಬೈಕು ಇಸಿದುಕೊಂಡು ಒಂದು ರೌಂಡ್ ಹೊಡಿಯಬಾರದು ಅನ್ನೋ ಮಾತು ನ್ಯಾಯಾಂಗನಿಂದನೆ ಆಗತೇತಿ ಅಂತ ಎಲ್ಲೂ ಇಲ್ಲ. ಅಂತರರಾಷ್ಟ್ರೀಯ ಕಾನೂನುದಾಗೂ ಇಲ್ಲ, ಭಾರತದ ಕಾನೂನುದಾಗೂ ಇಲ್ಲ.

ಮಜಾ ಅಂದ್ರ ನ್ಯಾಯಾಧೀಶರು ಫೋಟೋ ತಗದವರಿಗೆ ಏನೂ ಅಂದಿಲ್ಲ. ಅದರ ಬಗ್ಗೆ ಟಿಪ್ಪಣಿ ಮಾಡಿದ ವಕೀಲರಿಗೆ ಮಾತ್ರ ಬರೋಬ್ಬರಿ ಬಿಗಿ ಹಚ್ಚಿದಾರು.

ಪ್ರಶಾಂತ್ ಭೂಷಣ ಅವರ ತಪ್ಪು ಇಲ್ಲ. ಇದರಿಂದ ನ್ಯಾಯಾಂಗ ನಿಂದನೆ ಆಗತದ ಅಂತ ಹೇಳ್ಲಿಕ್ಕೆ ಬರೋದಿಲ್ಲ, ಅಂತ ಹೇಳಿ ಹಿರಿಯ ವಕೀಲರಾದ ಮೋಹನ್ ಕಾತರಕಿ ಅವರೂ ಸೇರಿದಂತೆ ಅನೇಕರು ಹೇಳಿಕೆ ಕೊಟ್ಟಾರ.

ತಮ್ಮ ಕ್ರಿಯೆ- ಖಯಾಲಿಗಳನ್ನ ಜನರಿಗೆ ತೋರಿಸಿ ನಮ್ಮನ್ನ ನಗಿಪಾಟ್ಲಿಗೆ ಒಡ್ಡಿದರೂ ಅಂತ ನ್ಯಾಯಾಧೀಶರಿಗೆ ಅನ್ನಿಸಿರಬಹುದು. ಅವರಿಗೆ ಚೀನಾ ದೇಶದ ಒಂದು ಗಾದಿ ಮಾತು ನೆನಪು ಮಾಡಿಕೊಡೋಣ.

“ನೀವು ಮಾಡಿದ್ದು ಯಾರಿಗೂ ಗೊತ್ತು ಆಗಬಾರದು ಅಂತ ನಿಮಗ ಇದ್ದರ, ಅದನ್ನ ನೀವು ಮಾಡಾಕ ಹೋಗಬಾರದು”

ನಮ್ಮ ಘನ ಸರಕಾರ ಚೀನಾ ದೇಶದ ಮೊಬಾಯಿಲು ಯಾಪುಗಳ ಮ್ಯಾಲೆ ನಿರ್ಬಂಧ ಹೇರೇತಿ. ಅಲ್ಲಿನ ಗಾದಿ ಮಾತಿನ ಮ್ಯಾಲೆ ಏನು ನಿರ್ಬಂಧ ಇಲ್ಲಲ್ಲ!, ಅಲ್ಲವೇ, ಮನೋಲ್ಲಾಸಿನಿ?


ಇದನ್ನು ಓದಿ: ಸಿಡಿದೆದ್ದ ಆಶಾ ಕಾರ್ಯಕರ್ತೆಯರು: ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...