Homeಅಂಕಣಗಳು`ಹಾರಲೆ ಅಂದ್ರ ಹಾರೋದ ಬಿಟ್ಟು ಬರೇ ಓಡತದ ನೋಡ್ರಿ ಈ ಬೈಕು?'

`ಹಾರಲೆ ಅಂದ್ರ ಹಾರೋದ ಬಿಟ್ಟು ಬರೇ ಓಡತದ ನೋಡ್ರಿ ಈ ಬೈಕು?’

ಪ್ರಶಾಂತ್ ಭೂಷಣ ಅವರ ತಪ್ಪು ಇಲ್ಲ. ಇದರಿಂದ ನ್ಯಾಯಾಂಗ ನಿಂದನೆ ಆಗತದ ಅಂತ ಹೇಳ್ಲಿಕ್ಕೆ ಬರೋದಿಲ್ಲ, ಅಂತ ಹೇಳಿ ಹಿರಿಯ ವಕೀಲರಾದ ಮೋಹನ್ ಕಾತರಕಿ ಅವರೂ ಸೇರಿದಂತೆ ಅನೇಕರು ಹೇಳಿಕೆ ಕೊಟ್ಟಾರ.

- Advertisement -
- Advertisement -

ಈ ಹಳೆ ಮೈಸೂರು ಕಡೆ ಕೆಲಸ ಇರಲಾರದೆ ರಿಕಾಮಿ ಅಡ್ಡಾಡೋ ಹುಡುಗರಿಗೆ ಪಡ್ಡೆ ಹೈಕಳು ಅಂತಾರ. ಅದನ್ನ ಅಖಂಡ ಕರುನಾಡಿಗೆ ಗೊತ್ತಾಗೋ ಹಂಗ ಮಾಡಿದವರು ಯಾರಪಾ ಅಂದ್ರ ಪುರಾಣದ ಕಟ್ಟಿಯ ವಾಟಿಸ್ಸೆ ಮತ್ತು ಜುಮ್ಮಿ.

ಇಂತಹ ಪಡ್ಡೆ ಹೈಕಳುಗಳು, ಸುಮಾರು 80 ರ ದಶಕದಾಗ ಪ್ರೇಮಲೋಕ ಅಂತ ಒಂದು ಪಿಚ್ಛರು ಫುಲ್ ಫೇಮಸ್ ಮಾಡಿದ್ರು. ಅದು ಫೇಮಸ್ ಚಲನ ಚಿತ್ರ ನಿರ್ಮಾಪಕ ಎನ್ ವೀರಸ್ವಾಮಿ ಅವರ ಮಗ ರವಿ ಚಂದ್ರನ್ನ ಭಾರಿ ಫೇಮಸ್ ಮಾಡಿತು. ಅದು ‘ಗ್ರೀಸ್ ಟೂ’ ಅನ್ನೋ ಇಂಗ್ಲಿಷ್ ಚಿತ್ರದ ಕಾಪಿ ಅಂತ ನಮ್ಮೂರಿಂದ ಹುಬ್ಬಳ್ಳಿಗೆ ಹೋಗಿ ಪಿಚ್ಛರು ನೋಡಿ ಬಂದ ದೊಡ್ಡ ಹುಡುಗರೂ ಹೇಳಾಕ ಹತ್ತಿದ್ದರು. ನಮಗ ಅದು ಗೊತ್ತಾಗದ ಹೋಗಿ ನಾವು ಅದು ಕ್ರಿಸ್ಟೋ ಅನ್ನೋ ಪಿಚ್ಛರು ಅಂತ ತಪ್ಪು ತಪ್ಪು ಹೇಳತಿದ್ದಿವಿ.

ರವಿ ಅಣ್ಣಾ ಅವರು ತಮ್ಮ ಚಿತ್ರದ ಒರಿಜಿನಾಲಿಟಿ ಹಾಳಾಗಬಾರ್ದು ಅಂತ ಹೇಳಿ ಪ್ರೇಮ ಲೋಕದ `ಯಾರಿವನು ಈ ಮನ್ಮಥನು’ ಅನ್ನೋ ಹಾಡನ್ನು ಗ್ರೀಸು ಟೂ ಚಿತ್ರದ `ಹೂ ಈಸ್ ದ್ಯಾಟ ಗಾಯ್’ ಅನ್ನೋ ಹಾಡಿನ ಹಂಗನ ಚಿತ್ರೀಕರಣ ಮಾಡಿದ್ದರು. ಯಾರಿಗೂ ಯಾವ ಸಂದೇಹ ಇರಬಾರದು ಅಂತ ಅವರ ಉದ್ದೇಶ ಆಗಿತ್ತು ಅನ್ನೋದು ಆಮ್ಯಾಲೆ ಗೊತ್ತ ಆತು. ಅದರಾಗ ಆ ಹೀರೋ ಮೈಕೆಲ್ ಒಂದು ಬೈಕು ಹತ್ತಿಕೊಂಡ ಬಂದ ಪುಂಡರಿಗೆ ಹೊಡೀತಾನ, ಇದರಾಗ ರವಿಚಂದ್ರನ ಅವರು ಹಂಗ ತಮ್ಮ ಮಾರಿ ಮುಚ್ಚಿಕೊಂಡರೂ ಗೊತ್ತಾಗೋ ಹಂಗ ಮೇಕ್ ಅಪ್ ಮಾಡಿಕೊತಾನ. ಹುಡುಗಿಯರ ಮುಂದ ಗೂಂಡಾಗಳಿಗೆ ಹೊಡೀತಾನ. ಅದರಾಗ ಒಂದು ಸಾಲು ಬರತೇತಿ.

“ನೀ ಯಾರ ಅಂತ ಗೊತ್ತಿರದಾಗ ನೀ ಎಲ್ಲರಿಗೂ ಬೇಕು
ನೀನು ರಹಸ್ಯ ಆಗಿ ಇದ್ದಷ್ಟೂ ಭಾಳ ದೂರ ಹೋಗ್ತಿ
ನಿನ್ನ ಸುತ್ತ ಇರೋರೆಲ್ಲಾ ನೀ ಭಾಳ ದೊಡ್ಡ ಸ್ಟಾರ್ ಅಂತ ತಿಳ್ಕೊಂತಾರೂ..” ಈ ಸಾಲು ಭಾಷಾಂತರ ಮಾಡೋದು ಹಂಸಲೇಖ ಅವರು ಮರ್ತು ಬಿಟ್ಟಿದ್ದರು ಅಂತ ಕಾಣತೇತಿ.

ಈ ಸಾಲು ಈಗ ಯಾಕ ನೆನಪು ಆಗಾಕ ಹತ್ತೇತಿ ಅಂದ್ರ ನಮ್ಮ ಬೋಬಡೆ ಸಾಹೇಬರು ನಾಗಪುರದಾಗ ಒಬ್ಬ ಮರಿ ಪುಢಾರಿ ಅವರ ಮೋಟರ್ ಸೈಕಲ್ಲು ಮ್ಯಾಲೆ ಹತ್ತಿ ಒಂದ್ ರೌಂಡ್ ಹೋಗಿ ಬಂದಾರ. ಅದರ ಫೋಟೋ ತಗದು ಯಾರೋ ಸಮಾಜ ವಿರೋಧಿ ಮಾಧ್ಯಮದಾಗ ಹಾಕ್ಯಾರ.

ಅದು ಹಾರಲೆ ಡೇವಿಡ್ ಸನ್ ಬೈಕು. ಹಂಗ ಅಂತ ಅದರ ಮ್ಯಾಲೆ ಯಾರ ಕೂತು ಹಾರಲೇ ಅಂತ ಅಂದ್ರ ಅದು ಹಾರೋದಿಲ್ಲ. ಅದು ಬರೇ ನೆಲೆದ ಮ್ಯಾಲೆ ಓಡೋ ಗಾಡಿ. ಗ್ರೀಸು ಟೂ ದಾಗ ಉಪಯೋಗಿಸಿದ ಗಾಡಿ ಹೆಸರು ಹೋಂಡಾ ಎಳದಾಟ (ಸ್ಕರಾಂಬಲರ್). ರವಿಚಂದ್ರನ ಅವರು ಓಡಿಸಿದ್ದು, ಸುಜೂಕಿ ಅಂತ ಸ್ಟಿಕ್ಕರು ಹಚ್ಚಿದ ಯಮಹ ಅಂತ ಒಂದು ಊಹೆ. ಇರಲಿ.

ಆದರ ಈ ನಾಗಪುರದ ಗಾಡಿ ಐತೆಲ್ಲ, ಅದು ಅಂತಾ- ಇಂಥಾ ಬೈಕು ಅಲ್ಲ. ಅದರ ಬೆಲೆ ಸುಮಾರು ಐದು ಲಕ್ಷ ದಿಂದ 50 ಲಕ್ಷದ ವರೆಗೂ. ಇದು ಬರೀ ಒಂದು ಬೈಕ್ನ ಬೆಲೆ. ನೀವು ಬೈಕು ಶೋ ರೂಮಿನ ಬೆಲೆ ಅಂತ ಅಂದುಕೋಂಡೀರಿ, ಮತ್ತ.

ಆ ಪಟ ನೋಡಿದ ನಮ್ಮ ಪ್ರಶಾಂತ್ ಭೂಷಣ ವಕೀಲ ಸಾಹೇಬರು “ನ್ಯಾಯಾಧೀಶರು ಅದವರು ಹಿಂಗೆಲ್ಲ ಯಾರದರ ಗಾಡಿ ಇಸಕೊಂಡು ಓಡಸಬಾರದು. ಅದರಾಗ ರಾಜಕೀಯ ವ್ಯಕ್ತಿಗಳ ಕಡೆ ಇಸಕೋಬಾರದು,” ಅಂತ ಟ್ವೀಟ್ ಮಾಡಿದರು.

ಅಲ್ಲಿಂದ ಶುರು ಆತು ಬೋಬಡೆ ಸಾಹೇಬರ ತಿರಸ್ಕಾರದ ಪ್ರಕರಣ. ಅವರು ಭೂಷಣ ಅವರ ಮ್ಯಾಲಿನ ಹಳೇ ನ್ಯಾಯನಿಂದನೆ ಪ್ರಕರಣ ಎಲ್ಲಾ ತೆಗಿಸಿದರು.

ಈ ನ್ಯಾಯಾಂಗನಿಂದನೆ ಅಂದ್ರ ಖರೆ ಏನು? ಅದಕ್ಕ ಕಂಟೆಮ್ಟ ಅಂತ ಅಂತಾರು.
ಇಂಗ್ಲಿಷ್ನ ಕಂಟೆಮ್ಟ ಅನ್ನೋ ಪದಕ್ಕ ತಿರಸ್ಕಾರ, ಅನಾದರ, ಅಗೌರವ, ನಿಂದನೆ ಅನ್ನೋ ಅರ್ಥ ಅದಾವು.

ಕಾನೂನುತಜ್ಞ ಹಾಲಸಬರಿ ಅವರ ಪ್ರಕಾರ, ನ್ಯಾಯನಿರ್ಣಯ ಪ್ರಕ್ರಿಯೆಗೆ ಅಡ್ಡಿ ಮಾಡೋ ಯಾವುದೇ ಲಿಖಿತ, ಅಥವಾ ಅಲಿಖಿತ ಶಬ್ದ, ನ್ಯಾಯಾಂಗನಿಂದನೆ ಅನ್ನಿಸಿಕೊಳ್ಳತದ.

ಇನ್ನೂ ಭಾರತೀಯ ವಕೀಲರ ಕಾಯಿದೆ ಪ್ರಕಾರ, “ಒಬ್ಬ ವ್ಯಕ್ತಿ – ಅವನು ಪ್ರಕರಣದ ಕಕ್ಷಿದಾರ ಇರಬಹುದು ಅಥವಾ ಹೊರಗಿನವ ಆಗಿರಬಹುದು, ಅವನು ನ್ಯಾಯಾಧೀಶನ ಅಧಿಕಾರ ಕುಗ್ಗಿಸುವಂತೆ ಅಥವಾ ಅವನು ಪ್ರಕರಣ ನಡೆಸೋ ರೀತಿಯ ಬಗ್ಗೆ ಅಪಹಾಸ್ಯ ಮಾಡಿದರೆ, ವಿನಾಕಾರಣ ಟೀಕೆ ಮಾಡಿದರೆ, ಸಾಕ್ಷಿಗಳು, ಇತರ ಕಕ್ಷಿದಾರರು ಹಾಗೂ ಇತರರು ಪ್ರಕರಣ ಮುಗಿಯುವ ಮುಂಚೆ ಅದರ ಬಗ್ಗೆ ತಪ್ಪು ತಿಳಿದುಕೊಳ್ಳುವ ಹಾಗೆ ಸಾರ್ವಜನಿಕರಲ್ಲಿ, ಮಾಧ್ಯಮದಲ್ಲಿ ದುರಭಿಪ್ರಾಯ ಮೂಡಿಸಿದರೆ, ನ್ಯಾಯದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೆ, ಸಬೂತುಗಳಿಲ್ಲದೇ ನ್ಯಾಯಾಲಯದಲ್ಲಿ ಹಗರಣ ಆಗಿದೆ ಎಂಬ ಸುಳ್ಳುಗಳನ್ನು ಹಬ್ಬಿಸಿದರೆ” ಅದು ನ್ಯಾಯಾಂಗ ನಿಂದನೆ.

ಆದರೆ, ರಾಜಕೀಯ ನಿರ್ಲಿಪ್ತತೆಯನ್ನು ಮೈಗೂಡಿಸಿಕೊಳ್ಳಬೇಕಾದ ನ್ಯಾಯಾಧೀಶರು ಪುಢಾರಿ ರಾಜಕಾರಣೀಯ ಬೈಕು ಇಸಿದುಕೊಂಡು ಒಂದು ರೌಂಡ್ ಹೊಡಿಯಬಾರದು ಅನ್ನೋ ಮಾತು ನ್ಯಾಯಾಂಗನಿಂದನೆ ಆಗತೇತಿ ಅಂತ ಎಲ್ಲೂ ಇಲ್ಲ. ಅಂತರರಾಷ್ಟ್ರೀಯ ಕಾನೂನುದಾಗೂ ಇಲ್ಲ, ಭಾರತದ ಕಾನೂನುದಾಗೂ ಇಲ್ಲ.

ಮಜಾ ಅಂದ್ರ ನ್ಯಾಯಾಧೀಶರು ಫೋಟೋ ತಗದವರಿಗೆ ಏನೂ ಅಂದಿಲ್ಲ. ಅದರ ಬಗ್ಗೆ ಟಿಪ್ಪಣಿ ಮಾಡಿದ ವಕೀಲರಿಗೆ ಮಾತ್ರ ಬರೋಬ್ಬರಿ ಬಿಗಿ ಹಚ್ಚಿದಾರು.

ಪ್ರಶಾಂತ್ ಭೂಷಣ ಅವರ ತಪ್ಪು ಇಲ್ಲ. ಇದರಿಂದ ನ್ಯಾಯಾಂಗ ನಿಂದನೆ ಆಗತದ ಅಂತ ಹೇಳ್ಲಿಕ್ಕೆ ಬರೋದಿಲ್ಲ, ಅಂತ ಹೇಳಿ ಹಿರಿಯ ವಕೀಲರಾದ ಮೋಹನ್ ಕಾತರಕಿ ಅವರೂ ಸೇರಿದಂತೆ ಅನೇಕರು ಹೇಳಿಕೆ ಕೊಟ್ಟಾರ.

ತಮ್ಮ ಕ್ರಿಯೆ- ಖಯಾಲಿಗಳನ್ನ ಜನರಿಗೆ ತೋರಿಸಿ ನಮ್ಮನ್ನ ನಗಿಪಾಟ್ಲಿಗೆ ಒಡ್ಡಿದರೂ ಅಂತ ನ್ಯಾಯಾಧೀಶರಿಗೆ ಅನ್ನಿಸಿರಬಹುದು. ಅವರಿಗೆ ಚೀನಾ ದೇಶದ ಒಂದು ಗಾದಿ ಮಾತು ನೆನಪು ಮಾಡಿಕೊಡೋಣ.

“ನೀವು ಮಾಡಿದ್ದು ಯಾರಿಗೂ ಗೊತ್ತು ಆಗಬಾರದು ಅಂತ ನಿಮಗ ಇದ್ದರ, ಅದನ್ನ ನೀವು ಮಾಡಾಕ ಹೋಗಬಾರದು”

ನಮ್ಮ ಘನ ಸರಕಾರ ಚೀನಾ ದೇಶದ ಮೊಬಾಯಿಲು ಯಾಪುಗಳ ಮ್ಯಾಲೆ ನಿರ್ಬಂಧ ಹೇರೇತಿ. ಅಲ್ಲಿನ ಗಾದಿ ಮಾತಿನ ಮ್ಯಾಲೆ ಏನು ನಿರ್ಬಂಧ ಇಲ್ಲಲ್ಲ!, ಅಲ್ಲವೇ, ಮನೋಲ್ಲಾಸಿನಿ?


ಇದನ್ನು ಓದಿ: ಸಿಡಿದೆದ್ದ ಆಶಾ ಕಾರ್ಯಕರ್ತೆಯರು: ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...