ಮೊನ್ನೆ ತಾನೇ 3 ಷರತ್ತುಗಳೊಂದಿಗೆ ರಾಜಸ್ಥಾನ ವಿಧಾನಸಭಾ ಅಧಿವೇಶನ ನಡೆಸಲು ಅನುಮತಿ ನೀಡಿದ್ದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಇಂದು ಉಲ್ಟಾ ಹೊಡೆದಿದ್ದು ಮೂರನೇ ಬಾರಿಗೆ ಅಧಿವೇಶನ ನಡೆಸಲು ನಿರಾಕರಿಸಿದ್ದಾರೆ.
ಇಂದು ಸಿಎಂ ಅಶೋಕ್ ಗೆಹ್ಲೋಟ್ ರಾಜ್ಯಪಾಲರನ್ನು ಅವರ ನಿವಾಸದಲ್ಲಿ ಭೇಟಿಯಾದಾಗ ಮೂರನೇ ಬಾರಿಗೆ ಅಧಿವೇಶನ ನಡೆಸುವಂತೆ ಅವರು ಸಲ್ಲಿಸಿದ್ದ ಮನವಿಯನ್ನು ವಾಪಸ್ ಕಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
Rajasthan Governor Kalraj Mishra returns the proposal to convene the Assembly Session, to CM Ashok Gehlot. The Governor has not given the approval for the Session yet.
— ANI (@ANI) July 29, 2020
ವಿಧಾನಸಭಾ ಅಧಿವೇಶನ ಕರೆಯಲು ಶಾಸಕರಿಗೆ 21 ದಿನಗಳ ಮುಂಚೆಯೇ ನೋಟಿಸ್ ನೀಡಬೇಕು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣದಿಂದ ಸದನ ನಡೆಸುವುದು ಸರಿಯಲ್ಲ ಎಂಬುದು ರಾಜ್ಯಪಾಲರು ವಾದವಾಗಿದೆ.
ರಾಜ್ಯಪಾಲರು ಮನವಿ ತಿರಸ್ಕರಿಸಿದ ಕೂಡಲೇ ಪ್ರತಿಕ್ರಿಯಿಸಿರುವ ಗೆಹ್ಲೋಟ್ “ಅವರನ್ನು ಇಂದು ಭೇಟಿಯಾಗುತ್ತೇನೆ. ಅವರಿಗೆ ಏನು ಬೇಕೆಂದು ಕೇಳುತ್ತೇನೆ. 21 ದಿನಗಳ ಅಥವಾ 31 ದಿನಗಳ ನೋಟಿಸ್ ಬೇಕೆ ಎಂದು ವಿಚಾರಿಸುತ್ತೇನೆ” ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ತಾನೇ ರಾಜ್ಯಪಾಲರು ಅಧಿವೇಶನ ನಡೆಸಲು ಅನುಮತಿ ನೀಡಿದ್ದರು. ವಿಶ್ವಾಸಮತ ಯಾಚನೆ ಮಾಡುತ್ತೀರಾ? ಸಾಮಾಜಿಕ ಅಂತರ ಹೇಗೆ ಕಾಯ್ದುಕೊಳ್ಳುತ್ತೀರಿ ಎಂಬ ಮೂರು ಷರತ್ತುಗಳನ್ನು ವಿಧಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ದೂರು ನೀಡಿದ ಗೆಹ್ಲೋಟ್: ಅಧಿವೇಶನ ಕರೆದ ರಾಜ್ಯಪಾಲರು