Homeಕರೋನಾ ತಲ್ಲಣಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? - ಡಾ.ವಾಸು ಎಚ್‌.ವಿ

ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್‌.ವಿ

ಸದ್ಯಕ್ಕಂತೂ ಒಮ್ಮೆಯೂ ಕೊರೊನಾ ಬಾರದವರಿಗಿಂತ, ಕೊರೊನಾ ಬಂದು ಹೋದವರು ಸಾಪೇಕ್ಷವಾಗಿ ಕಡಿಮೆ ರಿಸ್ಕ್ ಹೊಂದಿರುತ್ತಾರೆಂದು ಖಚಿತವಾಗಿ ಹೇಳಬಹುದು. ಅದರಲ್ಲೂ ರೋಗಲಕ್ಷಣಗಳುಳ್ಳ ಕೊರೊನಾ ರೋಗ ಬಂದವರಿಗೆ ಸ್ವಲ್ಪ ಹೆಚ್ಚು ಕಾಲವೇ ಈ ರೋಗನಿರೋಧಕತೆ ಉಳಿದುಕೊಂಡಿರುತ್ತದೆ.

- Advertisement -
- Advertisement -

ಕೊರೊನಾ ಸೋಂಕು ಬಂದು ಗುಣವಾಗಿರುವ ನನಗೆ ಈ ಪ್ರಶ್ನೆ ಏಕೆ ಮುಖ್ಯ? ಒಂದು, ನಾಳೆಯಿಂದ ನಾನು ಎಲ್ಲಿ ಬೇಕಾದರೂ ಮತ್ತೆ ಕೊರೊನಾ ಬರುವ ಭಯ ಇಲ್ಲದೇ ಓಡಾಡಬಹುದಾ? ಇಲ್ಲವಾ ಎಂಬ ಕಾರಣಕ್ಕೆ. ಎರಡು, ಒಂದು ವೇಳೆ ನನಗೆ ಕೊರೊನಾ ಬಾರದೇ ಇರಬಹುದಾದರೂ ಬೇರೆಯವರಿಗೆ ಹರಡುವ ಸಾಧ್ಯತೆ ಇದೆಯೇ? ಇವೆರಡೂ ಸರಿಯಾಗಿ ಗೊತ್ತಾಗದಿದ್ದರೆ ಮುಂದಿನ ದಿನಗಳಲ್ಲಿ ವಿಪರೀತ ಮುನ್ನೆಚ್ಚರಿಕೆ ತೆಗೆದುಕೊಂಡೇ ಓಡಾಡಬೇಕಾಗುವ ಆತಂಕ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕ್ವಾರಂಟೈನ್ ಓದಿನ ಮೊಟ್ಟ ಮೊದಲ ಅಂಶ ಇದಾಗಿತ್ತು. ವಿಜ್ಞಾನಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿರುವುದಕ್ಕೆ ಕಾರಣಗಳಿವೆ. ಈ ಸದ್ಯ ಸಂಶೋಧನೆಯ ಹಂತದಲ್ಲಿರುವ ವ್ಯಾಕ್ಸೀನ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿರಬಲ್ಲದು? ಒಂದು ವೇಳೆ ಅಂತಹ ವ್ಯಾಕ್ಸೀನ್ ಹೊರಬಂದರೂ ಒಂದೇ ಡೋಸ್ ಸಾಕಾಗುತ್ತಾ ಎಂಬ ಅಂಶಗಳನ್ನೂ, ಮಂದೆ ರೋಗನಿರೋಧಕತೆ (Herd immunity) ಸಾಧ್ಯವಾ? ಇವೆಲ್ಲಕ್ಕೆ ಉತ್ತರ ಸಿಗಬೇಕೆಂದರೆ ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಎಷ್ಟು ದಿನ ಬರುವುದಿಲ್ಲ? ಎಂಬುದರ ಬಗ್ಗೆ ತೀರ್ಮಾನಕ್ಕೆ ಬರಬೇಕು.

ಯಾವುದೇ ವ್ಯಕ್ತಿಗೆ ಸೋಂಕು ರೋಗವೊಂದರ ವಿರುದ್ಧ ರೋಗನಿರೋಧಕತೆ ಬರುವುದು ಎರಡು ರೀತಿಯಲ್ಲಿ. ಒಂದು, ಸಹಜವಾಗಿ ಸೋಂಕು ಬಂದಾಗ ದೇಹವು ಅದನ್ನು ಎದುರಿಸಲು ಆಂಟಿಬಾಡಿ (ಪ್ರತಿಕಾಯ)ಗಳನ್ನು ಉತ್ಪಾದಿಸಿ, ಸೋಂಕುಕಾರಕವನ್ನು ದೇಹದಿಂದ ಹೊರಹಾಕುತ್ತದೆ; ನಂತರ ನೇರವಾಗಿ ಟಿ ಜೀವಕೋಶಗಳ ಮುಖಾಂತರವೂ ಎದುರಿಸುತ್ತದೆ. ತಕ್ಷಣದಲ್ಲೇ ಎದುರಿಸುವ ಪ್ರತಿಕಾಯ ಮತ್ತು ಜೀವಕೋಶಗಳಲ್ಲದೇ ನೆನಪಿನ ಜೀವಕೋಶಗಳ (Memory cells) ಮುಖಾಂತರ ದೀರ್ಘಕಾಲಿಕ ರೋಗನಿರೋಧಕತೆಯನ್ನೂ ದೇಹವು ಬೆಳೆಸಿಕೊಳ್ಳುತ್ತದೆ. ಅಂದರೆ ಮುಂದೆಂದಾದರೂ ಆ ಸೋಂಕುಕಾರಕ ದೇಹವನ್ನು ಪ್ರವೇಶಿಸಿದರೆ ಅದನ್ನು ಕೂಡಲೇ ಎದುರಿಸಲು ದೇಹವು ಸನ್ನದ್ಧವಾಗಿರುತ್ತದೆ. ಆದರೆ, ಒಮ್ಮೆ ಸೋಂಕುಕಾರಕ ದೇಹದೊಳಗೆ ಬಂದರೆ ಜೀವನವಿಡೀ ಅದನ್ನು ಎದುರಿಸಲು ಬೇಕಾದ ಶಕ್ತಿ ಎಲ್ಲಾ ರೋಗಗಳಿಗೂ ಒದಗಿಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಎರಡನೆಯದಾಗಿ, ಲಸಿಕೆ (ವ್ಯಾಕ್ಸೀನ್) ತೆಗೆದುಕೊಳ್ಳುವುದರಿಂದಲೂ ರೋಗನಿರೋಧಕ ಶಕ್ತಿ ಬರುತ್ತದೆ. ಕೆಲವು ರೋಗಗಳು ಒಮ್ಮೆ ಬಂದರೆ ಹೇಗೆ ಜೀವನವಿಡೀ ಮತ್ತೆ ಬರುವುದಿಲ್ಲವೋ, ಹಾಗೆ ಕೆಲವು ವ್ಯಾಕ್ಸೀನ್‌ಗಳನ್ನು ಒಮ್ಮೆ ತೆಗೆದುಕೊಂಡರೆ ಸಾಕು. ಸಿಡುಬು ರೋಗವನ್ನು ಪ್ರಪಂಚದಿಂದಲೇ ನಿರ್ಮೂಲನ ಮಾಡಿದ್ದು ಹಾಗೆ. ಒಮ್ಮೆ ಮಾತ್ರ ಕೊಡುವ ವ್ಯಾಕ್ಸೀನ್‌ನಿಂದ. ಆದರೆ, ಕೆಲವಕ್ಕೆ ಒಂದಕ್ಕಿಂತ ಹೆಚ್ಚು ಸಾರಿ ವ್ಯಾಕ್ಸೀನ್ ಬೇಕಾಗುತ್ತದೆ. ದಡಾರ, ಟೆಟನಸ್ ಇತ್ಯಾದಿ ರೋಗಗಳನ್ನು ಎದುರಿಸುತ್ತಿರುವುದೂ ಹಾಗೆ.

ಇನ್ನು ಈಗಿನ ಕೋವಿಡ್-19 ರೋಗದ ವಿಚಾರಕ್ಕೆ ಬರೋಣ. ಈ ಕೊರೊನಾ ಸೋಂಕು ತಗುಲಿದ ನಂತರವೂ ಪ್ರತಿಕಾಯಗಳು (ಆಂಟಿಬಾಡಿಗಳು) ವೃದ್ಧಿಯಾಗುತ್ತವೆ ಎಂಬ ಬಗ್ಗೆ ಸಂದೇಹವೇ ಇಲ್ಲ. ಆದರೆ, ಅದು ಎಷ್ಟು ಕಾಲ ಇರುತ್ತದೆ, ಇದ್ದರೂ ಮತ್ತೆ ಸೋಂಕು ಬರದ ಹಾಗೆ ತಡೆಯುತ್ತದೆಯಾ, ಒಮ್ಮೆ ಕೊರೊನಾ ಸೋಂಕು ತಗುಲಿ ಗುಣವಾದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದು ಒಂದೇ ರೀತಿ ಇರುತ್ತದೆಯಾ ಎಂಬ ಬಗ್ಗೆ ಮಾತ್ರ ಇದುವರೆಗೆ ಆಗಿರುವ ಸಂಶೋಧನೆಗಳು ಭಿನ್ನ ಭಿನ್ನ ತೀರ್ಮಾನಗಳನ್ನು ಮುಂದಿಟ್ಟಿವೆ. 40 ದಿನಗಳಿಂದ 4 ತಿಂಗಳವರೆಗೆ ಈ ಪ್ರತಿಕಾಯಗಳು ಮತ್ತೆ ಕೊರೊನಾ ಸೋಂಕು ಬಾರದಂತೆ ತಡೆಯುತ್ತವೆ ಎಂದು ಬೇರೆ ಬೇರೆ ಸಂಶೋಧನೆಗಳು ತಿಳಿಸಿವೆ. ಕೋತಿಗಳ ಮೇಲೆ ಮತ್ತು ಪ್ರಯೋಗಾಲಯಗಳಲ್ಲಿ ನಡೆದ ಹಲವು ಸಂಶೋಧನೆಗಳೂ ಇದನ್ನು ಖಚಿತಪಡಿಸಿವೆ. ತೀವ್ರ ಗುಣಲಕ್ಷಣಗಳನ್ನು ಹೊಂದಿದ್ದವರಲ್ಲಿ ಹೆಚ್ಚಿನ ರೋಗನಿರೋಧಕತೆಯ ಅಂಶ ಕಂಡುಬಂದಿದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ. ಆದರೆ ಆಂಟಿಬಾಡಿಗಳು ಹೆಚ್ಚಿದ್ದರೆ ಹೆಚ್ಚು ರೋಗನಿರೋಧಕತೆಯೆಂದೂ, ಕಡಿಮೆ ಇದ್ದರೆ ಮತ್ತೆ ಸೋಂಕು ಬರುವ ಸಾಧ್ಯತೆ ಹೆಚ್ಚು ಎಂದೇನೂ ಅಲ್ಲ. ಜೊತೆಗೆ ರೋಗನಿರೋಧಕತೆ ಪ್ರತಿಕಾಯಗಳ ಮುಖಾಂತರ ಮಾತ್ರವಲ್ಲದೇ ಟಿ ಜೀವಕೋಶಗಳಿಂದಲೂ ಉಂಟಾಗುತ್ತದೆ ಎಂಬುದನ್ನು ಈಗಾಗಲೇ ಮೇಲೆ ಹೇಳಲಾಗಿದೆ. ಹಾಗೆಯೇ ಕೊರೊನಾ ವಿರುದ್ಧ ಉತ್ಪತ್ತಿಯಾಗುವ ಎಲ್ಲಾ ಪ್ರತಿಕಾಯಗಳೂ ಕೊರೊನಾ ವಿರುದ್ಧ ರೋಗನಿರೋಧಕತೆಯನ್ನು ಖಾತರಿಗೊಳಿಸುವುದಿಲ್ಲ. ನಿರ್ದಿಷ್ಟವಾಗಿ ಕೊರೊನಾ ವೈರಸ್‌ಅನ್ನು ಕೊಲ್ಲುವ neutralising antibodies ಇವೆಯಾ ಎನ್ನುವುದು ಮುಖ್ಯ.

ಈ neutralising antibodies ಸಾರ್ಸ್ ರೋಗ ಬಂದವರ ದೇಹಗಳಲ್ಲಿ (ಈ ಕೋವಿಡ್-19 ಎಂಬುದು ಸಾರ್ಸ್-2) ಸುಮಾರು 2ರಿಂದ 3 ವರ್ಷಗಳ ಕಾಲ ಇರುತ್ತಿತ್ತು. ಇನ್ನೊಂದು ಕೊರೊನಾ ವೈರಸ್ ಆದ ಮೆರ್ಸ್ (MERS-CoV, the virus that caused Middle East respiratory syndrome)ನಲ್ಲಿ ಸುಮಾರು ಮೂರು ವರ್ಷಗಳ ಕಾಲ ಇರುತ್ತಿತ್ತು. ಸಾರ್ಸ್ 2004ರ ನಂತರ ಮತ್ತೆ ಬಂದಿಲ್ಲ ಮತ್ತು ಮೆರ್ಸ್ ರೋಗವು ಎಲ್ಲೋ ಒಂದೊಂದು ಕಡೆ ಕಾಣುತ್ತಿದೆ ಎಂಬುದನ್ನು ಗಮನಿಸಬೇಕು.

ಒಮ್ಮೆ ಕೊರೊನಾ (ಕೊರೊನಾ ಎಂದು ಹೇಳಿದಾಗಲೆಲ್ಲಾ ಈಗ ಚರ್ಚೆಯಲ್ಲಿರುವ ಕೊರೊನಾ-2 ಎಂದು ಭಾವಿಸಬೇಕು, ಇನ್ನೂ ಬೇರೆ ಬೇರೆ ಕೊರೊನಾ ವೈರಸ್‌ಗಳೂ ಇವೆ) ಬಂದವರಲ್ಲಿ ಮತ್ತೆ ಇನ್ನೊಮ್ಮೆ ಸೋಂಕು ಕಾಣಿಸಿಕೊಂಡ ಎಷ್ಟು ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ? ಖಚಿತವಾಗಿ ಹೇಳಬಹುದಾದ ಒಂದೂ ಪ್ರಕರಣ ಇಲ್ಲ. ಅದರ ಅರ್ಥ ಕೊರೊನಾ ಪಾಸಿಟಿವ್ ಆಗಿದ್ದವರು ಗುಣವಾಗಿ ನೆಗೆಟಿವ್ ರಿಪೋರ್ಟ್ ಬಂದ ಮೇಲೆ ಮತ್ತೆ ಪಾಸಿಟಿವ್ ಬಂದಿಲ್ಲ ಎಂದಲ್ಲ. ಆದರೆ ಅಂತಹ ಪ್ರಕರಣಗಳಲ್ಲಿ ಪರೀಕ್ಷೆಗಳ ಕುರಿತೇ ಸಂದೇಹಗಳು ವ್ಯಕ್ತವಾಗಿವೆ ಮತ್ತು ಸುಪ್ತವಾದ ಅತೀ ಸಣ್ಣ ಪ್ರಮಾಣದ ಸೋಂಕು ಅವರಲ್ಲಿ ಇದ್ದೇ ಇದ್ದು, ಅದೇ ಮತ್ತೆ ಪಾಸಿಟಿವ್ ರಿಪೋರ್ಟ್‌ಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಮತ್ತೆ ಬಂತಂತೆ, ಇಲ್ಲಿ ಬಂತಂತೆ ಎಂಬ ಸುದ್ದಿಗಳ ಹೊರತಾಗಿ, ಖಚಿತವಾಗಿ ದಾಖಲಿಸಲಾದ ಕೊರೊನಾ ಮರುಸೋಂಕಿನ ಉದಾಹರಣೆಗಳು ಇಲ್ಲವೆಂದೇ ಸದ್ಯಕ್ಕೆ ಅಂದುಕೊಳ್ಳಬೇಕು. ನೆಗೆಟಿವ್ ಆದವರಲ್ಲಿ ನಂತರ ಪಾಸಿಟಿವ್ ಬಂತು ಎಂದಾಕ್ಷಣ ಅವರಿಗೆ ಕೊರೊನಾ ರೋಗ ಬಂದಿದೆ ಎಂದರ್ಥವಲ್ಲ. ಅವರ ದೇಹದಲ್ಲಿ ವೈರಸ್‌ನ ಕೆಲವು ಅಂಶ ಇನ್ನೂ ಉಳಿದುಕೊಂಡಿತ್ತು ಎಂದು ಮಾತ್ರ ಅರ್ಥ.

ಆದರೆ, ವಿಶ್ವ ಆರೋಗ್ಯ ಸಂಸ್ಥೆಯು ಒಮ್ಮೆ ಕೊರೊನಾ ಬಂದು ಹೋದವರ ದೇಹದಲ್ಲಿ ಪ್ರತಿಕಾಯಗಳು ಇದ್ದ ಮಾತ್ರಕ್ಕೆ ಅದನ್ನು ರೋಗನಿರೋಧಕತೆಯ ಸರ್ಟಿಫಿಕೇಟ್/ಪಾಸ್‌ಪೋರ್ಟ್ ಎಂದೇನೂ ತಿಳಿಯಬೇಕಿಲ್ಲ ಎಂದೇ (ಏಪ್ರಿಲ್ 24ರಂದು ಅಪ್‌ಲೋಡ್ ಮಾಡಲಾದ ಪೇಜ್) ಹೇಳುತ್ತಿದೆ. ಹಾಗಾದರೆ ಇದರ ಅರ್ಥವೇನು? ಇದುವರೆಗೆ ಪತ್ತೆಯಾದ ಮರುಸೋಂಕಿನ ಪ್ರಕರಣಗಳು ಸಂದೇಹಾಸ್ಪದ ಎಂದು ಹೇಳುತ್ತಿರುವ ವಿಜ್ಞಾನ ಲೋಕ ಹೀಗೇಕೆ ಹೇಳುತ್ತಿದೆ? ಇವೆರಡೂ ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆಂಟಿಬಾಡಿ ಇದ್ದ ಮಾತ್ರಕ್ಕೆ ರೋಗನಿರೋಧಕತೆ ಇದೆ, ಅವರು ಎಲ್ಲಿಗೆ ಬೇಕಾದರೂ ಹೇಗೆ ಬೇಕಾದರೂ ಓಡಾಡಬಹುದು ಎಂದು ಹೇಳಲಾಗದು ಎಂಬುದು ಬೇರೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಪಾಸಿಟಿವ್ ಆದವರಲ್ಲಿ ಮತ್ತೆ ಕೊರೊನಾ ಸೋಂಕು ಬಂದ ಖಚಿತ ಉದಾಹರಣೆ ಇಲ್ಲ ಎಂಬುದು ಬೇರೆ ಅಷ್ಟೇ.

ಈ ಕೊರೊನಾ-2 ವೈರಸ್‌ನ ಸೋಂಕಿನ ಕುರಿತು ಆದಷ್ಟು ಸಂಶೋಧನೆ ಇನ್ನಾವುದರ ಮೇಲೂ ಆಗಿಲ್ಲ ಎಂದು ಕೆಲವರು ಅಂದಾಜಿಸಿದ್ದಾರೆ. ಹಾಗಿದ್ದೂ, ಅಂತಿಮ ತೀರ್ಮಾನಗಳಿಗೆ ಇನ್ನೂ ಬರಲಾಗಿಲ್ಲ. ಬಹುಶಃ ಕೆಲವು ವಿಚಾರಗಳಲ್ಲಿ ಖಚಿತ ತೀರ್ಮಾನಕ್ಕೆ ಬರಲು ಒಂದು ವರ್ಷವೂ ಬೇಕಾಗಬಹುದೇನೋ.

ಆದರೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಗಾಬರಿಗೊಳಿಸುತ್ತವೆ. ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನಿಯತಕಾಲಿಕಗಳಲ್ಲೇ ಗೊಂದಲಕಾರಿ ಸಂಗತಿಗಳು ಪ್ರಕಟಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಸೆನ್ಸೇಷನಲಿಸಂಗಾಗಿ ಸುಳ್ಳನ್ನು ಬಿತ್ತರಿಸಲು ಹಿಂಜರಿಯದ ಮಾಧ್ಯಮಗಳನ್ನು ಕೇಳಬೇಕೇ? ಒಂದು ಉದಾಹರಣೆ ಕೊಡುವುದಾದರೆ ವಾಷಿಂಗ್ಟನ್ ಪೋಸ್ಟ್ Can you get coronavirus twice? Doctors are unsure, even as anecdotal reports mount ಎಂಬ ಶೀರ್ಷಿಕೆಯಡಿ ವರದಿಯೊಂದನ್ನು ಪ್ರಕಟಿಸಿತು. ಅದನ್ನೇ ಆಧರಿಸಿ ಭಾರತದ ಲೈವ್‌ಮಿಂಟ್ COVID-19 reinfection cases increase, doctors clueless ಎಂಬ ಶೀರ್ಷಿಕೆಯ ವರದಿ ಪ್ರಕಟಿಸಿತು. ಮರುಸೋಂಕಿನ ಕೇಸುಗಳ ಬಗ್ಗೆ ವೈದ್ಯರುಗಳಿಗೆ ಖಾತರಿಯಿಲ್ಲ ಎಂಬುದಕ್ಕೂ, ವೈದ್ಯರುಗಳಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂಬುದಕ್ಕೂ ದೊಡ್ಡ ವ್ಯತ್ಯಾಸವುಂಟಾಗುತ್ತದೆ. ವರದಿಯನ್ನು ತೆರೆದು ನೋಡಿದರೆ ಅದರಲ್ಲಿ ಈ ಮರುಸೋಂಕಿನ ಪ್ರಕರಣವು ದಾಖಲೀಕೃತ ಪ್ರಕರಣವಲ್ಲವೆಂದೂ, ವೈದ್ಯರುಗಳು ಅದನ್ನು ಒಪ್ಪಿಲ್ಲವೆಂದೂ ಬರೆಯಲಾಗಿದೆ. ಆದರೆ, ಎರಡನೆಯ ಬಾರಿ ಬರುವುದೇ ಇಲ್ಲ ಎಂದು ಅಂತಿಮ ಷರಾವನ್ನೇನೂ ತಜ್ಞರು ಇದುವರೆಗೆ ಬರೆದಿಲ್ಲ.

ಅಂತಿಮವಾಗಿ: ಒಮ್ಮೆ ಕೊರೊನಾ ಸೋಂಕು ತಗುಲಿದವರಲ್ಲಿ ರೋಗ ನಿರೋಧಕತೆ ಬೆಳೆಯುತ್ತದೆ. ಅದರ ಪ್ರಮಾಣ, ಅವಧಿಯ ಕುರಿತು ಇನ್ನೂ ಖಚಿತ ತೀರ್ಮಾನಗಳಿಗೆ ಬರುವುದು ಕಷ್ಟ. ಸಾಮಾನ್ಯ ಎಚ್ಚರಿಕೆಗಳನ್ನು ಮುಂದುವರೆಸುವುದೇ ಸೂಕ್ತ. ಆದರೆ ಸದ್ಯಕ್ಕಂತೂ ಒಮ್ಮೆಯೂ ಕೊರೊನಾ ಬಾರದವರಿಗಿಂತ, ಕೊರೊನಾ ಬಂದು ಹೋದವರು ಸಾಪೇಕ್ಷವಾಗಿ ಕಡಿಮೆ ರಿಸ್ಕ್ ಹೊಂದಿರುತ್ತಾರೆಂದು ಖಚಿತವಾಗಿ ಹೇಳಬಹುದು. ಅದರಲ್ಲೂ ರೋಗಲಕ್ಷಣಗಳುಳ್ಳ ಕೊರೊನಾ ರೋಗ ಬಂದವರಿಗೆ ಸ್ವಲ್ಪ ಹೆಚ್ಚು ಕಾಲವೇ ಈ ರೋಗನಿರೋಧಕತೆ ಉಳಿದುಕೊಂಡಿರುತ್ತದೆ. ಅಂತಹವರಿಗೆ ಈ ಸೀಸನ್ನಿನಲ್ಲಂತೂ ಇನ್ನೊಮ್ಮೆ ಕೊರೊನಾ ಬರುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಒಂದು ವೇಳೆ ವೈರಸ್‌ನಲ್ಲೇ ದೊಡ್ಡ ಬದಲಾವಣೆ (ಮ್ಯುಟೇಷನ್) ಆಗಿ, ಈಗ ಬಂದಿರುವ ರೋಗನಿರೋಧಕತೆಯೇ ಅಪ್ರಯೋಜಕವಾಗದ ಹೊರತು.

  • ಡಾ.ವಾಸು ಎಚ್. ವಿ, ವೈದ್ಯರು, ಸಂಪಾದಕರು ನ್ಯಾಯಪಥ ಪತ್ರಿಕೆ.

References:

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19

https://www.who.int/news-room/commentaries/detail/immunity-passports-in-the-context-of-covid-19


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ರಾಜಕಾರಣಿಗಳು: ಆರೋಗ್ಯ ವ್ಯವಸ್ಥೆಯ ರಾಷ್ಟ್ರೀಕರಣಕ್ಕೆ ಸೂಕ್ತ ಸಮಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...