Homeಸಾಮಾಜಿಕಚಿಕ್ಕಮಗಳೂರಲ್ಲಿ ಮಧುಕರ ಶೆಟ್ಟಿ

ಚಿಕ್ಕಮಗಳೂರಲ್ಲಿ ಮಧುಕರ ಶೆಟ್ಟಿ

- Advertisement -
- Advertisement -

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು, ಯಾವ ಸರಕಾರಕ್ಕೂ ಸಹ್ಯವಾಗುವುದಿಲ್ಲ. ಕ್ರಮೇಣ ಅಂತಹವರನ್ನ ಅಧೈರ್ಯಗೊಳಿಸಿ ಮೆತ್ತಗಾಗಿಸುತ್ತವೆ. ಈಗ ತೀರಿಕೊಂಡ ಮಧುಕರ ಶೆಟ್ಟಿಯವರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದವರು. ಇಂತಹ ಅಧಿಕಾರಿ ನಮ್ಮ ಚಿಕ್ಕಮಗಳೂರಿಗೆ ಎಸ್ಪಿಯಾಗಿ ಬಂದಾಗ ಸಾರ್ವಜನಿಕರಿಗೆ ಸಂಭ್ರಮವಾದರೆ, ಜನಪೀಡಕ ರಾಜಕಾರಣಿಗಳಿಗೆ ತೊಳ್ಳೆ ನಡುಕವುಂಟಾಯ್ತು. ಈ ಪೈಕಿ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯ ಬಲಗೈಯಂತಿರುವ ಭೋಜೇಗೌಡ ಮತ್ತು ಸಿ.ಟಿ ರವಿ ಎಂಬ ಜಿಲ್ಲೆಯ ಸಮಸ್ಯೆಗಳು ಮಧುಕರ ಶೆಟ್ಟಿಯವರನ್ನ ಎದುರುಗೊಳ್ಳಲು ಹಿಂಜರಿಯತೊಡಗಿದವು. ಆದರೂ ಅವರನ್ನ ಎತ್ತಂಗಡಿ ಮಾಡಿಸಲು ಜೊತೆಯಾಗಿಯೇ ಶ್ರಮಿಸುತ್ತಿದ್ದವು. ಭೋಜೇಗೌಡ ಆಗಾಗ್ಗೆ ಕುಮಾರಸ್ವಾಮಿಗೆ ಎಸ್ಪಿ ವಿರುದ್ಧ ದೂರು ಹೇಳುವುದನ್ನೇ ಕಾಯಕ ಮಾಡಿಕೊಂಡರೆ ಸಿ.ಟಿ.ರವಿ ಎಸ್ಪಿಗೆ ಕೆಟ್ಟ ಹೆಸರು ತರಲು ಹವಣಿಸುತ್ತಿದ್ದರು. ಈ ಸವiಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಕಠಾರಿಯ ಧಕ್ಷ ಅಧಿಕಾರಿಯಾದ್ದರಿಂದ ರಾಜಕಾರಣಿಗಳ ಪುಂಗಿ ಬಂದಾಗಿತ್ತು. ಇಂತಹ ಉಸಿರುಗಟ್ಟುವ ಸನ್ನಿವೇಶದಲ್ಲಿ ಭೋಜೇಗೌಡ ಕುಮಾರಣ್ಣನ ಮೇಲೆ ವಿಪರೀತ ಒತ್ತಡ ತಂದಿದ್ದರಿಂದ ಮಧುಕರ ಶೆಟ್ಟರು ರಾಜ್ಯಪಾಲರ ಸೆಕ್ಯೂರಿಟಿ ಮುಖ್ಯಸ್ಥರಾಗಿ ವರ್ಗಾವಣೆಗೊಂಡರು! ಇದು ಒಬ್ಬ ದಕ್ಷ ಅಧಿಕಾರೊಗೆ ಸರಕಾರ ಮಾಡಿದ ತೀವ್ರ ತರದ ಅವಮಾನ. ಏಕೆಂದರೆ ಚಿಕ್ಕಮಗಳೂರ ಬಡವರು ಕೂಲಿ ಕಾರ್ಮಿಕರು ಮತ್ತು ಹಿಂದುಳಿದ ಜಾತಿಗಳು ನಮಗೆ ಯಾರಿಲ್ಲದಿದ್ದರೂ ಜಿಲ್ಲಾ ರಕ್ಷಣಾಧಿಕಾರಿಗಳಿಂದ ಪೂರ್ಣ ರಕ್ಷಣೆಯಿದೆ ಎಂದು ಭಾವಿಸಿದ್ದರು. ಕಾಡಲ್ಲಿನ ನಕ್ಷಲರೂ ಕೂಡ ಮಧುಕರ ಶೆಟ್ಟರು ಎಸ್ಪಿಯಾಗಿರುವುದರಿಂದ ನಮಗಾವ ತೊಂದರೆಯಿಲ್ಲವೆಂದು ಭಾವಿಸಿದ್ದರು. ಎಸ್ಪಿ ಕೂಡ ಆ ನಕ್ಸಲರನ್ನ ಅಕ್ಕ-ಪಕ್ಕದ ಜಿಲ್ಲೆಗೆ ಓಡಿಸಿ ಎಂದು ಹೇಳಿದ್ದರು. ತಮ್ಮ ಇರುವಿಕೆಯ ಕಾರಣಕ್ಕೆ ಹಲವು ಸಮಸ್ಯೆಗಳು ಕರಗಿ ಹೋಗುವಂತೆ ನೋಡಿಕೊಂಡಿದ್ದ ಮಧುಕರ ಶೆಟ್ಟರಿಂದ ರಾಜಕಾರಣಿಗಳು ನಿರುದ್ಯೋಗಿಗಳಂತಾಗಿದ್ದರು. ಇಂತಿರುವಾಗ ನಮಗೆ ಬೇಕೇ ಇಲ್ಲದ ರಾಜ್ಯಪಾಲರೆಂಬ ಮುದಿಯಾನೆಯ ರಕ್ಷಣೆಗೆ ಹೋಗಿ ಅದರ ಹಿಂದೆ ನಿಂತಾಗ ಜಿಲ್ಲೆಯ ಕಿಡಿಗೇಡಿ ರಾಜಕಾರಣಿಗಳು ಕುಹಕವಾಗಿ ನಕ್ಕು ಸಂತೋಷ ವ್ಯಕ್ತಪಡಿಸಿದ್ದರು.
ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಅವಮಾನವಾಗುತ್ತಿರುವುದು ಈ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಹೆಚ್.ಎಲ್.ನಾಗೇಗೌಡರು ಡಿ.ಸಿ.ಯಾಗಿದ್ದ ಕಾಲದಿಂದಲೂ ನಡೆದು ಬಂದಿದೆ. ಅದರಲ್ಲೂ ಬಿರೂರು ಶಾಸಕರಾಗಿದ್ದ ಲಕ್ಷ್ಮಯ್ಯ ಪಿಳ್ಳೆನಳ್ಳಿ ಊರ ಮುಂದೆ ನಿಂತು ಪ್ಯಾಂಟ್‍ಜಿಪ್ ತೆಗೆದು ತನ್ನ ವೈರಿಗಳ ಹೆಂಗಸರನ್ನು ಕರೆದು ತನ್ನ ತಾಕತ್ತು ತೋರುತ್ತೇನೆ ಎಂದಿದ್ದರು. ಇದನ್ನು ಕಂಡ ಬಿಪಿನ್ ಗೋಪಾಲಕೃಷ್ಣ ಎಂಬ ಎಸ್ಪಿ ಕೂಡಲೆ ಕ್ರಮ ಜರುಗಿಸಿದ್ದರಿಂದ ಅವರನ್ನು 24 ಗಂಟೆಯಲ್ಲಿ ವರ್ಗ ಮಾಡಿಸಿದ್ದರು. ಅದೇ ¯ಕ್ಷ್ಮಯ್ಯನವರ ಮಗ ಭೋಜೇಗೌಡ ಮಧುಕರ ಶೆಟ್ಟರನ್ನ ವರ್ಗ ಮಾಡಿಸಿದ್ದರು. ಕೆಟ್ಟ ಸರಕಾರಗಳು ಬಂದಾಗ ಒಳ್ಳೆ ಅಧಿಕಾರಿಗಳು ತೊಂದರೆ ಅವಮಾನಕ್ಕೊಳಗಾಗುವುದು ಸಾಮಾನ್ಯ. ಆದ್ದರಿಂದ ಮಧುಕರಶೆಟ್ಟರು ತಮ್ಮ ಸೇವಾವಧಿಯಲ್ಲಿ ನೋವನ್ನ ಅನುಭವಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ದಲಿತ ಜನಾಂಗದಿಂದ ಬಂದ ಬಿ.ಬಿ ನಿಂಗಯ್ಯ, ಮೋಟಮ್ಮ ಇಂತವರೆಲ್ಲಾ ಮಂತ್ರಿಗಳಾಗಿ ಮೆರೆದರು. ಆದರೂ ಭೂಮಾಲೀಕರ ನಿರಂತರ ಶೋಷಣೆಗೆ ತುತ್ತಾದ ದಲಿತರಿಗೆ ಹರ್ಷಗುಪ್ತ ಮತ್ತು ಮಧುಕರ ಶೆಟ್ಟರು ವಸತಿ ನಿರ್ಮಿಸಿಕೊಟ್ಟು ನಿರ್ಗತಿಕರ ಬಾಳಿಗೆ ಬೆಳಕಾದದ್ದು ವಿಶೇಷ ಇದರಿಂದ ಅರ್ಥವಾಗುವುದೇನೆಂದರೆ, ಈ ಪಂಚರಂಗಿ ರಾಜಕಾರಣಿಗಳಿಂದ ಏನೂ ಆಗುವುದಿಲ್ಲ. ಜನಪರ ಕಾಳಜಿಯ ಅಧಿಕಾರಿಗಳಿಂದ ಮಾತ್ರ ಜನ ನೆಮ್ಮದಿ ಕಾಣಬಲ್ಲರು ಎಂಬುದು ಸಾಬೀತಾಗಿದೆ. ಚಿಕ್ಕಮಗಳೂರಲ್ಲಿ ಎಷ್ಟೆಲ್ಲಾ ರಾಜಕಾರಣಿಗಳು ಆಗಿಹೋದರೂ ಜನಮಾನಸಲ್ಲುಳಿದವರು ದಕ್ಷ ಪ್ರಾಮಾಣಿಕ ಅಧಿಕಾರಿಗಳು ಮಾತ್ರ ಎಂಬುದು ವಿಶೇಷ!

ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...