Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? - ಎಚ್.ಎಸ್ ದೊರೆಸ್ವಾಮಿ

ಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? – ಎಚ್.ಎಸ್ ದೊರೆಸ್ವಾಮಿ

ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

- Advertisement -
- Advertisement -

ಯಾಕೆ ನಮ್ಮ ಸಾಮಾಜಿಕ ಕಾರ್ಯಕರ್ತರು, ಆಯ್ದ ಕೆಲ ರಾಜಕೀಯ ನಾಯಕರು, ರಾಜಕೀಯ ಸಿದ್ಧಾಂತಿಗಳು, ಕಾರ್ಮಿಕ ಸಂಘಟನೆಗಳು ನಮ್ಮ ದುಷ್ಟ ಚುನಾವಣಾ ಪದ್ಧತಿಯನ್ನು ರದ್ದುಮಾಡಲು ಸರ್ಕಾರದ ಮೇಲೆ, ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಮನಸ್ಸು ಮಾಡಿಲ್ಲ? ಅವರಿಗೆಲ್ಲ ಈಗಿನ ಚುನಾವಣಾ ಪದ್ಧತಿ ವಾಕರಿಕೆ ಹುಟ್ಟುಸುತ್ತಿಲ್ಲವೇ? ಎಲ್ಲ ರಾಜಕೀಯ ಪಕ್ಷಗಳೂ ಮತದಾರರನ್ನು ಭ್ರಷ್ಟರನ್ನಾಗಿ ಪರಿವರ್ತಿಸಿರುವುದು ನಿಮಗೆ ತಿಳಿದಿಲ್ಲವೇ? ಪಾರ್ಲಿಮೆಂಟ್ ಸದಸ್ಯರು ಮತ್ತು ಕಾರ್ಪೊರೆಟ್‌ಗಳ ನಡುವೆ ಒಂದು ಅನೈತಿಕ ಸಂಬಂಧ ಇರುವುದು ನಿಮಗೆ ತಿಳಿಯದ ವಿಚಾರವೇ? ಸರ್ಕಾರಗಳಲ್ಲಿ ಪದೇಪದೇ ಹಗರಣಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ಹಗರಣಗಳನ್ನು ಪದೇಪದೇ ಹೊರಹಾಕುವ ನೀವು ಅದನ್ನು ತಡೆಗಟ್ಟಲು ಚುನಾವಣಾ ಆಯೋಗದ ಮೇಲೆ ಏಕೆ ಒತ್ತಡ ತರುತ್ತಿಲ್ಲ? ಪ್ರತಿಯೊಬ್ಬ ಶಾಸಕ ಮತ್ತು ಪಾರ್ಲಿಮೆಂಟ್ ಸದಸ್ಯ ತಾನು ಚುನಾವಣೆ ವೇಳೆಗೆ ತನ್ನ ಸಂಪತ್ತು ಹಿಂದಿನದಕ್ಕಿಂತ ಶೇಕಡ ನೂರರಿಂದ ಶೇಕಡ ೫೦೦ಪಟ್ಟು ಹೆಚ್ಚಿರುವುದಾಗಿ ಘೋಷಿಸುತ್ತಾನೆ. ಅದು ಯಾವ ಯಾವ ಬಾಬಿತ್ತಿನಿಂದ ಬಂತು ಎಂದು ಚುನಾವಣಾ ಆಯೋಗ ಕೇಳುತ್ತಿಲ್ಲ. ಅದು ಅವರ ಕರ್ತವ್ಯವಲ್ಲವೇ?

ಅಮೀನ್‌ಮಟ್ಟು ಪ್ರಜಾವಾಣಿ ಪತ್ರಿಕೆಯಲ್ಲಿದ್ದಾಗ ಒಂದು ಚುನಾವಣೆಯ ಸಮೀಕ್ಷೆ ನಡೆಸುತ್ತಾರೆ. ಅವರು ಹೇಳುತ್ತಾರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಪಾಳೇಗಾರ ಶಾಸಕರ ಸುಪರ್ದಿನಲ್ಲಿದೆ ಎಂದು. ಹುಕ್ಕೇರಿ ಕತ್ತಿ ಸಹೋದರರು, ಗೋಕಾಕಿನ ಜಾರಕಿಹೊಳಿ ಸಹೋದರರು, ಪ್ರಭಾಕರ್ ಕೋರೆ, ಪ್ರಕಾಶ್ ಹುಕ್ಕೇರಿ ಈ ಸಿಂಡಿಕೇಟಿನ ಇತರ ಸದಸ್ಯರು ಎಂಬುದನ್ನು ವರದಿ ಮಾಡಿದ್ದಾರೆ. ಇವರೆಲ್ಲ ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯ ರಕ್ಷಣೆಗಾಗಿ ರಾಜಕೀಯ ’ಸಿಂಡಿಕೇಟ್ ಕಟ್ಟಿಕೊಂಡಿದ್ದಾರೆ. ಜಾತ್ಯತೀತವಾದ ಪಕ್ಷಾತೀತವಾದದ ಸಿಂಡಿಕೇಟ್ ಇದು. ಈ ಸಿಂಡಿಕೇಟ್ ಯಾವ ದಾಖಲೆಯಲ್ಲೂ ಇಲ್ಲ. ಯಾರ ಕಣ್ಣಿಗೂ ಬೀಳುವುದಿಲ್ಲ. ಗ್ರಾಮಪಂಚಾಯ್ತಿಯಿಂದ ಲೋಕಸಭೆವರೆಗೆ, ಸಹಕಾರಿ ಬ್ಯಾಂಕಿನಿಂದ ಹಾಲಿನ ಸೊಸೈಟಿವರೆಗೆ ನಡೆಯುವ ಎಲ್ಲ ಚುನಾವಣೆಯಲ್ಲೂ ಇವರ ಕೈವಾಡವಿದೆ. ಉಮೇಶ್ ಕತ್ತಿ ಸಹೋದರರು ಕಳೆದ ಐದು ಚುನಾವಣೆಗಳಲ್ಲಿ ಐದು ಬೇರೆ ಬೇರೆ ಪಾರ್ಟಿಗಳಿಂದ ಗೆದ್ದು ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವರ ಹಿಕ್ಮತ್‌ನಿಂದ ಒಟ್ಟು 363 ಕ್ಷೇತ್ರಗಳಲ್ಲಿ 196 ಕ್ಷೇತ್ರಗಳು ಇವರ ಪಾಲಾಗಿದೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಪಕ್ಷಗಳ ಶಾಸಕರಿದ್ದಾರೆ. ತಮ್ಮ ಪಕ್ಷದ ಶಾಸಕರೇ ಇಲ್ಲ. ಈ ಕ್ಷೇತ್ರಗಳಲ್ಲಿ ಪಕ್ಷೇತರರೆಲ್ಲ ಕತ್ತಿಯವರ ಹಸ್ತಕರು.

ರಾಜಕೀಯ ವಿರೋಧಿಗಳನ್ನು ನಿರ್ನಾಮ ಮಾಡುವುದು, ಜನತೆಯ ಪಾಲುಗಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರೊಡನೆ ಹೊಂದಾಣಿಕೆ ಇದು ಇವರ ಹುನ್ನಾರದ ವೈಖರಿ. ಇವರ ಹುನ್ನಾರ ಎಲ್ಲರಿಗೂ ಗೊತ್ತಿದ್ದರೂ ಜನ ಅಸಹಾಯಕರಾಗಿದ್ದಾರೆ. ಈ ಗುಲಾಮಗಿರಿಯಿಂದ ಪಾರಾಗಲು ಜನ ಕುದುರೆ ಏರಿಬರುವ ನಾಯಕನೊಬ್ಬನಿಗಾಗಿ ಕಾಯುತ್ತಿದ್ದಾರೆ ಎನ್ನುತ್ತಾರೆ ಮಟ್ಟು. ರಿಪಬ್ಲಿಕ್ ಆಫ ಬಳ್ಳಾರಿ ಇದ್ದ ಹಾಗೆ ಇವರದೂ ಒಂದು ರಿಪಬ್ಲಿಕ್.

ಇವು ಒಂದು ವರ್ಷದ ಚುನಾವಣೆಯಲ್ಲಿ ಬೆಳಕಿಗೆ ಬಂದಿರುವ ಅಪರಾಧಗಳು. ಇವೆಲ್ಲ ಬೆಂಗಳೂರೊಂದರಲ್ಲಿ ನಡೆದಿರುವವು.
1) ವಾರೆಂಟನ್ನು 597 ಜನರ ಮೇಲೆ ಜಾರಿ ಮಾಡಲಾಯಿತು. ಇದರ ಪೈಕಿ 570 ಬೆಂಗಳೂರು ನಗರ ಜಿಲ್ಲೆಯಲ್ಲಿ.
2) ಎಲೆಕ್ಷನ್ ಕೋಡ್ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ 1010 ಜನರ ಮೇಲೆ ನಾನ್‌ಬೈಲಬಲ್ ವಾರಂಟ್.
3) 492 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು.
5) 3221 ಚೀಲ ಅಕ್ಕಿ, 18 ಚೀಲ ಮೈದಾಹಿಟ್ಟು, 123 ಚೀಲ ತೊಗರಿಬೇಳೆ, 34 ಚೀಲ ಬೆಲ್ಲ, 100 ಪ್ಯಾಕೆಟ್ ಅಡಿಗೆ ಎಣ್ಣೆ: ಇದರ ಅಂದಾಜು ಬೆಲೆ 26.44 ಲಕ್ಷರೂ. ಮಹದೇವಪುರದ ಚುನಾವಣಾ ಕ್ಷೇತ್ರದ ಒಂದು ಗೋಡಾನ್‌ನಲ್ಲಿ ಇವೆಲ್ಲವನ್ನೂ ಇಡಲಾಗಿತ್ತು.
5) 500 ಚೀಲ ಅಕ್ಕಿಯ ಅಂದಾಜು ಬೆಲೆ 5 ಲಕ್ಷ; ಬ್ಯಾಟರಾಯನಪುರ ಚುನಾವಣಾ ಕ್ಷೇತ್ರದ ಒಂದು ತೋಟದಲ್ಲಿ ಇಡಲಾಗಿತ್ತು.

ಕಳೆದ ಚುನಾವಣೆಯ ಸಂದರ್ಭದಲ್ಲಿ 11 ಏಪ್ರಿಲ್ 2019 ರವರೆಗೆ 6.35 ಕೋಟಿ ರೂ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಎರಡು ದಿನನ ಕಾರ್ಯಾಚರಣೆಯಲ್ಲಿ ಟಿ.ನರಸಿಪುರದ ಬಳಿ 5 ಲಕ್ಷ ರೂ, ಬೆಳಗಾವಿಯಲ್ಲಿ 7 ಲಕ್ಷ ರೂ, ಚಿತ್ರದುರ್ಗದ ಬಳಿ 3.5 ಲಕ್ಷ ರೂ, ಅಥಣಿ ತಾಲೂಕಿನಲ್ಲಿ 20 ಲಕ್ಷ ರೂ, ನೇಸರ್ಗಿಯಲ್ಲಿ ಒಂದು ಕೋಟಿ ರೂ, ಬಾಗಲಕೋಟೆಯಲ್ಲಿ 21 ಲಕ್ಷ ರೂ ವಶಪಡಿಸಿಕೊಳ್ಳಲಾಯಿತು. ಬೆಳಗಾವಿಯಲ್ಲಿ ಖೊಟ್ಟಿ ನಂಬರ್ ಪ್ಲೇಟ್ ಹಾಕಿದ್ದ ಕಾರಿನಲ್ಲಿ 1 ಕೋಟಿ ರೂ ಪತ್ತೆಯಾಯಿತು. ಈ ಹಣಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆ ಅವರಲ್ಲಿರಲಿಲ್ಲ.

ಇದು 2-3ಜಿಲ್ಲೆಗಳಲ್ಲಿ ನಡೆದಿರುವ ಪ್ರಕರಣಗಳು ಇಡೀ ಭಾರತದಲ್ಲಿ ಇಂಥದು ಎಷ್ಟು ಪ್ರಕರಣಗಳು ನಡೆದಿರಬಹುದು. ಈ ಅಪರಾಧಿಗಳಲ್ಲಿ ಯಾರಿಗೂ ಶಿಕ್ಷೆಯಾದ ಸುದ್ದಿ ಹೊರಬಂದೆ ಇಲ್ಲ. 60 ವರ್ಷಗಳಿಂದ ಚುನಾವಣಾ ಆಯೋಗ ಇದನ್ನು ಗಮನಿಸಿಯೇ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಭ್ರಷ್ಟಾಚಾರ ಹೆಚ್ಚುತ್ತಲೇ ಹೋಗುತ್ತಿದೆ. ಚುನಾವಣಾ ಆಯೋಗ ನಿದ್ರ್ರಾವಸ್ಥೆಯಲ್ಲಿದೆಯೇ, ಮರಣಶಯ್ಯೆಯಲ್ಲಿದೆಯೋ ಗೊತ್ತಿಲ್ಲ. ಜನಪ್ರತಿನಿಧಿಗಳು ಆಡಿದ್ದೇ ಆಟ. ಕರ್ನಾಟಕದಲ್ಲಿ ಹತ್ತಾರು ಸಾವಿರ ಹೋರಾಟ ಸಂಸ್ಥೆಗಳಿದ್ದರೂ ಅವುಗಳಿಗೆ ಚುನಾವಣಾ ಭ್ರಷ್ಟಾಚಾರ ತಾರಕಕ್ಕೇರಿದೆ ಎಂಬ ಆತಂಕವಿಲ್ಲ. ಅಂದ ಮೇಲೆ ಈ ದುಷ್ಟಪದ್ಧತಿ ಮುಂದುವರಿದುಕೊಂಡು ಹೋಗಲಿ ಎಂದು ಹತಾಶರಾಗಿಬಿಟ್ಟಿದ್ದೀರಾ ಎಂದು ಕೇಳಬೇಕಿದೆ.

ಲೋಕಪಾಲ್ ಮಸೂದೆಯಲ್ಲೂ ಚುನಾವಣಾ ಪದ್ಧತಿಯನ್ನು ಶುದ್ಧಗೊಳಿಸುವ ಪ್ರಸ್ತಾಪ ಇಲ್ಲ.
ಅಡ್ವಾನಿ ಮತ್ತು ಇಂದ್ರಜಿತ್ ಗುಪ್ತಾ ಕೂಡಿ ಬರೆದ ಚುನಾವಣಾ ಸುಧಾರಣೆ ವರದಿ ಕಸದ ಬುಟ್ಟಿ ಸೇರಿದೆ. 6 ವರ್ಷ ರಾಜ್ಯಭಾರ ಮಾಡಿದ ಬಿಜೆಪಿಯಾಗಲಿ, ಗೃಹಮಂತ್ರಿಯಾಗಿದ್ದ ಅಡ್ವಾನಿಯಾಗಲಿ ಚುನಾವಣಾ ಸುಧಾರಣೆ ಬಗೆಗೆ ತುಟಿಕ್‌ಪಿಟಕ್ ಎನ್ನಲಿಲ್ಲ.

ಈ ಚುನಾವಣೆಗಳಲ್ಲಿ ಬಡವರು, ಮಧ್ಯಮವರ್ಗದವರು ಉಮೇದುದಾರರಾಗಲು ಸಾಧ್ಯವೇ ಇಲ್ಲ. ಸಂಸತ್‌ನಲ್ಲಿ 1996ರಲ್ಲಿ ಅಪರಾಧ ಮಾಡಿರುವವರ ಸಂಖ್ಯೆ ಶೇ.10 ಇದ್ದದ್ದು 2009ಕ್ಕೆ ಶೇ.30ರಷ್ಟಾಯಿತು. ಈಗ ಬಹುಶಃ ಅದು ಶೇ.50 ಆಗಿರಬಹುದು. ವಾಣಿಜ್ಯ ಸಂಸ್ಥೆಯವರು ಹಾಗೂ ಪಾರ್ಲಿಮೆಂಟ್ ಮತ್ತು ಶಾಸನ ಸಭೆಗಳ ಸದಸ್ಯರ ನಡುವಣ ಹೊಂದಾಣಿಕೆಯಿಂದಾಗಿ ಜನಪ್ರತಿನಿಧಿಗಳ ಆಸ್ತಿ ಚುನಾವಣೆಯಿಂದ ಚುನಾವಣೆಗೆ ನೂರುಪಟ್ಟು ಮತ್ತು ಸಾವಿರಪಟ್ಟು ಹೆಚ್ಚಿದೆ.

ಆದ್ದರಿಂದ ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

ಚುನಾವಣಾ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸದೆ ಇದ್ದರೆ ಮುಂದೆ ಕೋಟ್ಯಾಧಿಪತಿಗಳು, ಭ್ರಷ್ಟರು, ಕ್ರಿಮಿನಲ್‌ಗಳು, ಕೊಲೆಗಡುಕರು ಇವರೇ ಆಳಲು ಬರುತ್ತಾರೆ ಎಂಬುದು ತಿಳಿದಿರಲಿ.


ಇದನ್ನೂ ಓದಿ: ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...