Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? - ಎಚ್.ಎಸ್ ದೊರೆಸ್ವಾಮಿ

ಹೊಲಸು ಚುನಾವಣಾ ಆಯೋಗದ ನೀತಿಗೆ ಇತಿಶ್ರೀ ಹಾಡಬೇಡವೇ? – ಎಚ್.ಎಸ್ ದೊರೆಸ್ವಾಮಿ

ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

- Advertisement -
- Advertisement -

ಯಾಕೆ ನಮ್ಮ ಸಾಮಾಜಿಕ ಕಾರ್ಯಕರ್ತರು, ಆಯ್ದ ಕೆಲ ರಾಜಕೀಯ ನಾಯಕರು, ರಾಜಕೀಯ ಸಿದ್ಧಾಂತಿಗಳು, ಕಾರ್ಮಿಕ ಸಂಘಟನೆಗಳು ನಮ್ಮ ದುಷ್ಟ ಚುನಾವಣಾ ಪದ್ಧತಿಯನ್ನು ರದ್ದುಮಾಡಲು ಸರ್ಕಾರದ ಮೇಲೆ, ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಮನಸ್ಸು ಮಾಡಿಲ್ಲ? ಅವರಿಗೆಲ್ಲ ಈಗಿನ ಚುನಾವಣಾ ಪದ್ಧತಿ ವಾಕರಿಕೆ ಹುಟ್ಟುಸುತ್ತಿಲ್ಲವೇ? ಎಲ್ಲ ರಾಜಕೀಯ ಪಕ್ಷಗಳೂ ಮತದಾರರನ್ನು ಭ್ರಷ್ಟರನ್ನಾಗಿ ಪರಿವರ್ತಿಸಿರುವುದು ನಿಮಗೆ ತಿಳಿದಿಲ್ಲವೇ? ಪಾರ್ಲಿಮೆಂಟ್ ಸದಸ್ಯರು ಮತ್ತು ಕಾರ್ಪೊರೆಟ್‌ಗಳ ನಡುವೆ ಒಂದು ಅನೈತಿಕ ಸಂಬಂಧ ಇರುವುದು ನಿಮಗೆ ತಿಳಿಯದ ವಿಚಾರವೇ? ಸರ್ಕಾರಗಳಲ್ಲಿ ಪದೇಪದೇ ಹಗರಣಗಳು ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ಹಗರಣಗಳನ್ನು ಪದೇಪದೇ ಹೊರಹಾಕುವ ನೀವು ಅದನ್ನು ತಡೆಗಟ್ಟಲು ಚುನಾವಣಾ ಆಯೋಗದ ಮೇಲೆ ಏಕೆ ಒತ್ತಡ ತರುತ್ತಿಲ್ಲ? ಪ್ರತಿಯೊಬ್ಬ ಶಾಸಕ ಮತ್ತು ಪಾರ್ಲಿಮೆಂಟ್ ಸದಸ್ಯ ತಾನು ಚುನಾವಣೆ ವೇಳೆಗೆ ತನ್ನ ಸಂಪತ್ತು ಹಿಂದಿನದಕ್ಕಿಂತ ಶೇಕಡ ನೂರರಿಂದ ಶೇಕಡ ೫೦೦ಪಟ್ಟು ಹೆಚ್ಚಿರುವುದಾಗಿ ಘೋಷಿಸುತ್ತಾನೆ. ಅದು ಯಾವ ಯಾವ ಬಾಬಿತ್ತಿನಿಂದ ಬಂತು ಎಂದು ಚುನಾವಣಾ ಆಯೋಗ ಕೇಳುತ್ತಿಲ್ಲ. ಅದು ಅವರ ಕರ್ತವ್ಯವಲ್ಲವೇ?

ಅಮೀನ್‌ಮಟ್ಟು ಪ್ರಜಾವಾಣಿ ಪತ್ರಿಕೆಯಲ್ಲಿದ್ದಾಗ ಒಂದು ಚುನಾವಣೆಯ ಸಮೀಕ್ಷೆ ನಡೆಸುತ್ತಾರೆ. ಅವರು ಹೇಳುತ್ತಾರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಪಾಳೇಗಾರ ಶಾಸಕರ ಸುಪರ್ದಿನಲ್ಲಿದೆ ಎಂದು. ಹುಕ್ಕೇರಿ ಕತ್ತಿ ಸಹೋದರರು, ಗೋಕಾಕಿನ ಜಾರಕಿಹೊಳಿ ಸಹೋದರರು, ಪ್ರಭಾಕರ್ ಕೋರೆ, ಪ್ರಕಾಶ್ ಹುಕ್ಕೇರಿ ಈ ಸಿಂಡಿಕೇಟಿನ ಇತರ ಸದಸ್ಯರು ಎಂಬುದನ್ನು ವರದಿ ಮಾಡಿದ್ದಾರೆ. ಇವರೆಲ್ಲ ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯ ರಕ್ಷಣೆಗಾಗಿ ರಾಜಕೀಯ ’ಸಿಂಡಿಕೇಟ್ ಕಟ್ಟಿಕೊಂಡಿದ್ದಾರೆ. ಜಾತ್ಯತೀತವಾದ ಪಕ್ಷಾತೀತವಾದದ ಸಿಂಡಿಕೇಟ್ ಇದು. ಈ ಸಿಂಡಿಕೇಟ್ ಯಾವ ದಾಖಲೆಯಲ್ಲೂ ಇಲ್ಲ. ಯಾರ ಕಣ್ಣಿಗೂ ಬೀಳುವುದಿಲ್ಲ. ಗ್ರಾಮಪಂಚಾಯ್ತಿಯಿಂದ ಲೋಕಸಭೆವರೆಗೆ, ಸಹಕಾರಿ ಬ್ಯಾಂಕಿನಿಂದ ಹಾಲಿನ ಸೊಸೈಟಿವರೆಗೆ ನಡೆಯುವ ಎಲ್ಲ ಚುನಾವಣೆಯಲ್ಲೂ ಇವರ ಕೈವಾಡವಿದೆ. ಉಮೇಶ್ ಕತ್ತಿ ಸಹೋದರರು ಕಳೆದ ಐದು ಚುನಾವಣೆಗಳಲ್ಲಿ ಐದು ಬೇರೆ ಬೇರೆ ಪಾರ್ಟಿಗಳಿಂದ ಗೆದ್ದು ಬಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವರ ಹಿಕ್ಮತ್‌ನಿಂದ ಒಟ್ಟು 363 ಕ್ಷೇತ್ರಗಳಲ್ಲಿ 196 ಕ್ಷೇತ್ರಗಳು ಇವರ ಪಾಲಾಗಿದೆ. ಈ ಕ್ಷೇತ್ರಗಳಲ್ಲಿ ಬೇರೆ ಬೇರೆ ಪಕ್ಷಗಳ ಶಾಸಕರಿದ್ದಾರೆ. ತಮ್ಮ ಪಕ್ಷದ ಶಾಸಕರೇ ಇಲ್ಲ. ಈ ಕ್ಷೇತ್ರಗಳಲ್ಲಿ ಪಕ್ಷೇತರರೆಲ್ಲ ಕತ್ತಿಯವರ ಹಸ್ತಕರು.

ರಾಜಕೀಯ ವಿರೋಧಿಗಳನ್ನು ನಿರ್ನಾಮ ಮಾಡುವುದು, ಜನತೆಯ ಪಾಲುಗಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರೊಡನೆ ಹೊಂದಾಣಿಕೆ ಇದು ಇವರ ಹುನ್ನಾರದ ವೈಖರಿ. ಇವರ ಹುನ್ನಾರ ಎಲ್ಲರಿಗೂ ಗೊತ್ತಿದ್ದರೂ ಜನ ಅಸಹಾಯಕರಾಗಿದ್ದಾರೆ. ಈ ಗುಲಾಮಗಿರಿಯಿಂದ ಪಾರಾಗಲು ಜನ ಕುದುರೆ ಏರಿಬರುವ ನಾಯಕನೊಬ್ಬನಿಗಾಗಿ ಕಾಯುತ್ತಿದ್ದಾರೆ ಎನ್ನುತ್ತಾರೆ ಮಟ್ಟು. ರಿಪಬ್ಲಿಕ್ ಆಫ ಬಳ್ಳಾರಿ ಇದ್ದ ಹಾಗೆ ಇವರದೂ ಒಂದು ರಿಪಬ್ಲಿಕ್.

ಇವು ಒಂದು ವರ್ಷದ ಚುನಾವಣೆಯಲ್ಲಿ ಬೆಳಕಿಗೆ ಬಂದಿರುವ ಅಪರಾಧಗಳು. ಇವೆಲ್ಲ ಬೆಂಗಳೂರೊಂದರಲ್ಲಿ ನಡೆದಿರುವವು.
1) ವಾರೆಂಟನ್ನು 597 ಜನರ ಮೇಲೆ ಜಾರಿ ಮಾಡಲಾಯಿತು. ಇದರ ಪೈಕಿ 570 ಬೆಂಗಳೂರು ನಗರ ಜಿಲ್ಲೆಯಲ್ಲಿ.
2) ಎಲೆಕ್ಷನ್ ಕೋಡ್ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ 1010 ಜನರ ಮೇಲೆ ನಾನ್‌ಬೈಲಬಲ್ ವಾರಂಟ್.
3) 492 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಯಿತು.
5) 3221 ಚೀಲ ಅಕ್ಕಿ, 18 ಚೀಲ ಮೈದಾಹಿಟ್ಟು, 123 ಚೀಲ ತೊಗರಿಬೇಳೆ, 34 ಚೀಲ ಬೆಲ್ಲ, 100 ಪ್ಯಾಕೆಟ್ ಅಡಿಗೆ ಎಣ್ಣೆ: ಇದರ ಅಂದಾಜು ಬೆಲೆ 26.44 ಲಕ್ಷರೂ. ಮಹದೇವಪುರದ ಚುನಾವಣಾ ಕ್ಷೇತ್ರದ ಒಂದು ಗೋಡಾನ್‌ನಲ್ಲಿ ಇವೆಲ್ಲವನ್ನೂ ಇಡಲಾಗಿತ್ತು.
5) 500 ಚೀಲ ಅಕ್ಕಿಯ ಅಂದಾಜು ಬೆಲೆ 5 ಲಕ್ಷ; ಬ್ಯಾಟರಾಯನಪುರ ಚುನಾವಣಾ ಕ್ಷೇತ್ರದ ಒಂದು ತೋಟದಲ್ಲಿ ಇಡಲಾಗಿತ್ತು.

ಕಳೆದ ಚುನಾವಣೆಯ ಸಂದರ್ಭದಲ್ಲಿ 11 ಏಪ್ರಿಲ್ 2019 ರವರೆಗೆ 6.35 ಕೋಟಿ ರೂ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಎರಡು ದಿನನ ಕಾರ್ಯಾಚರಣೆಯಲ್ಲಿ ಟಿ.ನರಸಿಪುರದ ಬಳಿ 5 ಲಕ್ಷ ರೂ, ಬೆಳಗಾವಿಯಲ್ಲಿ 7 ಲಕ್ಷ ರೂ, ಚಿತ್ರದುರ್ಗದ ಬಳಿ 3.5 ಲಕ್ಷ ರೂ, ಅಥಣಿ ತಾಲೂಕಿನಲ್ಲಿ 20 ಲಕ್ಷ ರೂ, ನೇಸರ್ಗಿಯಲ್ಲಿ ಒಂದು ಕೋಟಿ ರೂ, ಬಾಗಲಕೋಟೆಯಲ್ಲಿ 21 ಲಕ್ಷ ರೂ ವಶಪಡಿಸಿಕೊಳ್ಳಲಾಯಿತು. ಬೆಳಗಾವಿಯಲ್ಲಿ ಖೊಟ್ಟಿ ನಂಬರ್ ಪ್ಲೇಟ್ ಹಾಕಿದ್ದ ಕಾರಿನಲ್ಲಿ 1 ಕೋಟಿ ರೂ ಪತ್ತೆಯಾಯಿತು. ಈ ಹಣಕ್ಕೆ ಸಂಬಂಧಪಟ್ಟ ಯಾವುದೇ ದಾಖಲೆ ಅವರಲ್ಲಿರಲಿಲ್ಲ.

ಇದು 2-3ಜಿಲ್ಲೆಗಳಲ್ಲಿ ನಡೆದಿರುವ ಪ್ರಕರಣಗಳು ಇಡೀ ಭಾರತದಲ್ಲಿ ಇಂಥದು ಎಷ್ಟು ಪ್ರಕರಣಗಳು ನಡೆದಿರಬಹುದು. ಈ ಅಪರಾಧಿಗಳಲ್ಲಿ ಯಾರಿಗೂ ಶಿಕ್ಷೆಯಾದ ಸುದ್ದಿ ಹೊರಬಂದೆ ಇಲ್ಲ. 60 ವರ್ಷಗಳಿಂದ ಚುನಾವಣಾ ಆಯೋಗ ಇದನ್ನು ಗಮನಿಸಿಯೇ ಇಲ್ಲ. ಚುನಾವಣೆಯಿಂದ ಚುನಾವಣೆಗೆ ಭ್ರಷ್ಟಾಚಾರ ಹೆಚ್ಚುತ್ತಲೇ ಹೋಗುತ್ತಿದೆ. ಚುನಾವಣಾ ಆಯೋಗ ನಿದ್ರ್ರಾವಸ್ಥೆಯಲ್ಲಿದೆಯೇ, ಮರಣಶಯ್ಯೆಯಲ್ಲಿದೆಯೋ ಗೊತ್ತಿಲ್ಲ. ಜನಪ್ರತಿನಿಧಿಗಳು ಆಡಿದ್ದೇ ಆಟ. ಕರ್ನಾಟಕದಲ್ಲಿ ಹತ್ತಾರು ಸಾವಿರ ಹೋರಾಟ ಸಂಸ್ಥೆಗಳಿದ್ದರೂ ಅವುಗಳಿಗೆ ಚುನಾವಣಾ ಭ್ರಷ್ಟಾಚಾರ ತಾರಕಕ್ಕೇರಿದೆ ಎಂಬ ಆತಂಕವಿಲ್ಲ. ಅಂದ ಮೇಲೆ ಈ ದುಷ್ಟಪದ್ಧತಿ ಮುಂದುವರಿದುಕೊಂಡು ಹೋಗಲಿ ಎಂದು ಹತಾಶರಾಗಿಬಿಟ್ಟಿದ್ದೀರಾ ಎಂದು ಕೇಳಬೇಕಿದೆ.

ಲೋಕಪಾಲ್ ಮಸೂದೆಯಲ್ಲೂ ಚುನಾವಣಾ ಪದ್ಧತಿಯನ್ನು ಶುದ್ಧಗೊಳಿಸುವ ಪ್ರಸ್ತಾಪ ಇಲ್ಲ.
ಅಡ್ವಾನಿ ಮತ್ತು ಇಂದ್ರಜಿತ್ ಗುಪ್ತಾ ಕೂಡಿ ಬರೆದ ಚುನಾವಣಾ ಸುಧಾರಣೆ ವರದಿ ಕಸದ ಬುಟ್ಟಿ ಸೇರಿದೆ. 6 ವರ್ಷ ರಾಜ್ಯಭಾರ ಮಾಡಿದ ಬಿಜೆಪಿಯಾಗಲಿ, ಗೃಹಮಂತ್ರಿಯಾಗಿದ್ದ ಅಡ್ವಾನಿಯಾಗಲಿ ಚುನಾವಣಾ ಸುಧಾರಣೆ ಬಗೆಗೆ ತುಟಿಕ್‌ಪಿಟಕ್ ಎನ್ನಲಿಲ್ಲ.

ಈ ಚುನಾವಣೆಗಳಲ್ಲಿ ಬಡವರು, ಮಧ್ಯಮವರ್ಗದವರು ಉಮೇದುದಾರರಾಗಲು ಸಾಧ್ಯವೇ ಇಲ್ಲ. ಸಂಸತ್‌ನಲ್ಲಿ 1996ರಲ್ಲಿ ಅಪರಾಧ ಮಾಡಿರುವವರ ಸಂಖ್ಯೆ ಶೇ.10 ಇದ್ದದ್ದು 2009ಕ್ಕೆ ಶೇ.30ರಷ್ಟಾಯಿತು. ಈಗ ಬಹುಶಃ ಅದು ಶೇ.50 ಆಗಿರಬಹುದು. ವಾಣಿಜ್ಯ ಸಂಸ್ಥೆಯವರು ಹಾಗೂ ಪಾರ್ಲಿಮೆಂಟ್ ಮತ್ತು ಶಾಸನ ಸಭೆಗಳ ಸದಸ್ಯರ ನಡುವಣ ಹೊಂದಾಣಿಕೆಯಿಂದಾಗಿ ಜನಪ್ರತಿನಿಧಿಗಳ ಆಸ್ತಿ ಚುನಾವಣೆಯಿಂದ ಚುನಾವಣೆಗೆ ನೂರುಪಟ್ಟು ಮತ್ತು ಸಾವಿರಪಟ್ಟು ಹೆಚ್ಚಿದೆ.

ಆದ್ದರಿಂದ ಈ ದುರವಸ್ಥೆಯಿಂದ ಪಾರಾಗಲು ಇರುವುದು ಒಂದೇ ದಾರಿ. ಜನತಾ ಆಂದೋಲನವೊಂದನ್ನು ದೀರ್ಘಾವಧಿ ಹೋರಾಟಕ್ಕೆ ಅಣಿಮಾಡಬೇಕು. ಇದಕ್ಕೆ ಎಲ್ಲ ಸಂಘಟನೆಯವರೂ ಕೈಜೋಡಿಸಬೇಕು.

ಚುನಾವಣಾ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸದೆ ಇದ್ದರೆ ಮುಂದೆ ಕೋಟ್ಯಾಧಿಪತಿಗಳು, ಭ್ರಷ್ಟರು, ಕ್ರಿಮಿನಲ್‌ಗಳು, ಕೊಲೆಗಡುಕರು ಇವರೇ ಆಳಲು ಬರುತ್ತಾರೆ ಎಂಬುದು ತಿಳಿದಿರಲಿ.


ಇದನ್ನೂ ಓದಿ: ಬಹುಜನ ಭಾರತ: ಇತಿಹಾಸದ ಕಟಕಟೆಯಲ್ಲಿ ಅರುಣ್ ಮಿಶ್ರ ಎಂಬ ನ್ಯಾಯಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...