Homeಮುಖಪುಟಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ

ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ

ಮನೆಯೊಳಗಿನ ಅನುಮಾನ, ಅಪನಂಬಿಗಳು ಬಗೆಹರಿದರೆ - ಇದು ನಮ್ಮ ಮನೆ, ನಾವೆಲ್ಲ ಒಂದಾಗಿ ಹೊರಗಿನ ಶತ್ರುಗಳಿಂದ ಮನೆಯನ್ನು ರಕ್ಷಿಸಿಕೊಳ್ಳಬೇಕೆಂಬ ಜವಬ್ದಾರಿ ಮತ್ತೆ ಹುಟ್ಟುತ್ತದೆ. ಅದಕ್ಕೆ ಮೊದಲು ಒಳಮೀಸಲಾತಿ ಜಾರಿಯಾಗಬೇಕು.

- Advertisement -
- Advertisement -

ಸುಮಾರು ಹದಿನೈದು ವರ್ಷಗಳದ ಹಿಂದೆ, ನಾವು ತುಮಕೂರಿನ ಎಮ್.ಜಿ ರೋಡ್ ಸೈನ್ಸ್ ಹಾಸ್ಟೆಲ್‍ನಲ್ಲಿ ಪಿಯುಸಿ ಓದುತ್ತಿದ್ದೆವು. ರಾತ್ರಿಯಾದರೆ ಸಾಕು ಒಂದಿಲ್ಲೊಂದು ಸಂಘಟನೆಯವರು ಬಂದು ವಿದ್ಯಾರ್ಥಿಗಳಿಗೆ ಸಿದ್ಧಾಂತಗಳನ್ನು ಹೇಳಿ ಸಂಘಟಿಸಿ ಹೋಗುತ್ತಿದ್ದರು. ಅದರಲ್ಲಿ ಕೆಲವೇ ಸಂಖ್ಯೆಯಲ್ಲಿ ಬರುತ್ತಿದ್ದ ಮಾದಿಗ ದಂಡೋರದವರು ಸ್ಪೃಶ್ಯ ಅಸ್ಪೃಶ್ಯ ವಿಷಯಗಳ ಜೊತೆಗೆ ಬಲಗೈನವರಿಂದ ಹೇಗೆ ಅನ್ಯಾಯವಾಗುತ್ತಿದೆ, ಒಳಮೀಸಲು, ಆಂಧ್ರ ಮಾದರಿ ಎಂದೆಲ್ಲ ಹೇಳಿ ಹೋಗುತ್ತಿದ್ದರು. ಹಿಂದೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಡಿಎಸ್‍ಎಸ್‍ನವರು ಮಾದಿಗ ದಂಡೋರದವರನ್ನ ಬೈದು, “ಅವ್ರ ಮಾತ್ನ ಕೇಳ್ಬೇಡಿ, ಅವರು ಮನೆ ಮುರುಕರು, ಅವರಿಗೊಂದು ತತ್ವ ಸಿದ್ಧಾಂತ ಇಲ್ಲ” ಎಂದು ಹೇಳುತ್ತಿದ್ದರು. ಆಶ್ಚರ್ಯ ಎಂದರೆ ಡಿಎಸ್‍ಎಸ್ ಹೆಸರಿನಲ್ಲಿ ಬರುತ್ತಿದ್ದವರೂ ಮಾದಿಗರೇ ಆಗಿರುತ್ತಿದ್ದರು. ನಮಗೆ ಕೆಲವೊಮ್ಮೆ ಗೊಂದಲವಾಗುತ್ತಿತ್ತು – ಇನ್ನು ಕೆಲವೊಮ್ಮೆ ಎರೆಡೂ ಸರಿ ಎನಿಸುತ್ತಿತ್ತು.

ಆಶ್ಚರ್ಯವೆಂದರೆ ಯಾವ ಡಿಎಸ್‍ಎಸ್‍ನವರು ಅಂದು ಮಾದಿಗ ದಂಡೋರದವರನ್ನ ಕಂಡರೆ ಉರಿದುಬೀಳುತ್ತಿದ್ದರೋ, ಅದೇ ಹೋರಾಟಗಾರರು ಇಂದು ಸದಾಶಿವ ಆಯೋಗದ ವರದಿಯ ಜಾರಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಗಂಟೆಗಟ್ಟಲೆ ಸಮರ್ಥಿಸುತ್ತಿದ್ದಾರೆ. ವ್ಯತ್ಯಾಸವೆಂದರೆ ಇವರೀಗ ಎಪ್ಪತ್ತು ಎಂಭತ್ತರ ಆಸುಪಾಸಿನಲ್ಲಿದ್ದಾರೆ.

ಒಳಮೀಸಲಾತಿ ಹೋರಾಟ ಕೇವಲ ಮಾದಿಗರ ಕಣ್ಣನ್ನಷ್ಟೆ ತೆರೆಸಲಿಲ್ಲ. ಸಾಮಾಜಿಕ ಏರುಪೇರುಗಳನ್ನ ನೋಡುವ, ಸರಿಪಡಿಸುವ ಹೊಸಬಗೆಯ ನೋಟವನ್ನೆ ಕಲಿಸಿಕೊಟ್ಟಿತು ಎಂಬುದು ನಿಧಾನಕ್ಕೆ ತಿಳಿಯುತ್ತಾ ಬಂದಿದೆ.

ಇಂದು ಮಾದಿಗರಿಗೆ ಆಗಿರುವ ಅನ್ಯಾಯವನ್ನ ಒಕ್ಕೊರಲಿನಿಂದ ಎಲ್ಲ ಜಾತಿಯವರು ಮಾತಾಡುವಂತಾಗಿದೆ. ಹೌದು ಇಲ್ಲಿನ ಅನ್ಯಾಯವನ್ನ ಸರಿಪಡಿಸಬೇಕು, ತಿಂದವರೇ ತಿನ್ನುವುದಲ್ಲ ಎಂದು ಎಲ್ಲರೂ ಇಂದು ಮಾತಾಡುವಂತಾಗಿದೆ. ಸಮಾಜದ ಅಸಮಾನತೆಯನ್ನು ನೋಡುವ ಹೊಸ ಕ್ರಮ ಹಾಕಿಕೊಟ್ಟ ಮಾದಿಗ ಮೀಸಲಾತಿ ಹೋರಾಟವನ್ನು ಸ್ಮರಿಸಲೇಬೇಕಿದೆ.

photo courtesy : Udayavani

ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಮೂರ್ತಿಗಳ ಪೀಠ ಒಳಮೀಸಲಾತಿಗೆ ಒಲವು ತೋರಿರುವ ಐತಿಹಾಸಿಕ ತೀರ್ಪಿನ ಈ ಹೊತ್ತಿನಲ್ಲಿ ಎಂದಿನಂತೆಯೇ ಹಲವು ಊಹಾಪೋಹಗಳು ಎದ್ದಿವೆ. ಅದರಲ್ಲಿ ಪ್ರಮುಖವಾದುದು ಮೀಸಲಾತಿಯ ಮೇಲೆ ಕಣ್ಣಿಟ್ಟಿರುವ ಆರ್‌ಎಸ್‍ಎಸ್ ಈ ವಿಷಯಕ್ಕೆ ಮುತುವರ್ಜಿ ವಹಿಸುತ್ತಿರುವುದೇಕೆ ಎಂಬುದು ಒಂದಾದರೆ ದಲಿತರ ಐಕ್ಯತೆಯ ಒಡಕಿನ ಪ್ರಶ್ನೆ, ಸದಾಶಿವ ವರದಿಯ ಮೇಲೆ ಮೊದಲು ಚರ್ಚೆ ನಡೆಯಲಿ ಇತ್ಯಾದಿ..

ಹಿಂದಿನಿಂದಲೂ ಒಳಮೀಸಲಾತಿಯನ್ನ ವಿರೋಧಿಸಿಕೊಂಡು ಬಂದವರು ಇಂದು ಆರ್‌ಎಸ್‍ಎಸ್ ಮೂಗು ತೂರಿಸುತ್ತಿರುವುದರತ್ತ ಬೊಟ್ಟುಮಾಡಿ ಮಾದಿಗ ಮೀಸಲಾತಿ ಹೋರಾಟಗಾರರನ್ನು ಅನುಮಾನಿಸಲು ಪ್ರಚೋದಿಸುತ್ತಿದ್ದಾರೆ.

ಆದರೆ ಅವರು ತಿಳಿಯಬೇಕಾಗಿರುವುದು ಏನೆಂದರೆ ಒಳಮೀಸಲಾತಿ ಹೋರಾಟ ಪ್ರಾರಂಭವಾಗಿ ಇಪ್ಪತ್ತೈದು ವರ್ಷಗಳೇ ಸಂದಿವೆ. ಆಗ ಇದು ಮಾದಿಗರ ಹಸಿವಿನ ಪ್ರಶ್ನೆಯಾಗಿ ಮಾತ್ರವೇ ಹುಟ್ಟಿತ್ತು ಬಿಟ್ಟರೆ ಇನ್ನಾವುದೇ ಪ್ರಚೋದನೆಗಳಿಂದಲ್ಲ.

ಈ ನಿರಂತರ ಹೋರಾಟದಲ್ಲಿ ರಾಜಕೀಯ ಏಳುಬೀಳುಗಳು ಬೆರೆತುಹೋಗಿವೆ. ಅಷ್ಟಕ್ಕೂ ಇದು ರಾಜಕಾರಣದಿಂದಲೇ ಬಗೆಹರಿಯಬೇಕಾದ್ದರಿಂದ ಅದನ್ನು ಹೊರಗಿಟ್ಟು ನೋಡುವಂತದ್ದೆ ಅಲ್ಲ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೇ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಆರ್‌ಎಸ್‍ಎಸ್‍ನವರನ್ನು ಕಟುವಾಗಿ ಟೀಕಿಸುವ ಸಿದ್ದರಾಮಯ್ಯನವರು “ನಾನು ಇದರ ಪರವಾಗಿದ್ದೇನೆ” ಎಂದು ಬಹಿರಂಗವಾಗಿ ಹಲವು (ಹುಬ್ಬಳ್ಳಿ ಸೇರಿಸಿ) ಸಭೆಗಳಲ್ಲಿ ಹೇಳಿದ್ದರು. ಕ್ಯಾಬಿನೆಟ್‍ನಲ್ಲಿ ಚರ್ಚೆಗೂ ತಂದಿದ್ದರು. ಎಡಬಲದ ಒಕ್ಕೊರಲ ಅಭಿಮತ ಬರದೆ ಕೈಚೆಲ್ಲಿದ್ದರು. ಅವರು ತಮ್ಮ ಸೋಲಿನ ಪರಾಮರ್ಶೆಯ ಸಂದರ್ಭದಲ್ಲಿ (ದೆಹಲಿಯಲ್ಲಿ) ಒಳಮೀಸಲಾತಿ ಹಂಚದಿರುವುದೂ ಕಾರಣವಾಯಿತು ಎಂದಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ನೀಡುವುದನ್ನು ಒಳಗೊಂಡಿತ್ತು. ಸುಪ್ರೀಂ ಕೋರ್ಟ್ ಪಂಚ ನ್ಯಾಯಮೂರ್ತಿಗಳ ಪೀಠ ತೀರ್ಪುಕೊಟ್ಟು, ಒಳಮೀಸಲಾತಿ ಪರವಾಗಿ ಅಭಿಪ್ರಾಯಪಟ್ಟ ಸಮಯದಲ್ಲಿ ಹೆಚ್.ಡಿ ಕುಮಾರಸ್ವಾಮಿಯವರು ಸಾಮಾಜಿಕ ನ್ಯಾಯದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ಸರ್ವೋದಯ ಪಕ್ಷದ ರೈತ ಮುಖಂಡ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರು ಅವರದೇ ಆದ ಬಗೆಯಲ್ಲಿ (ಬೆಳೆ ಎಲ್ಲಿ ಕುಲ್ಟು ಬಿದ್ದಿರುತ್ತೊ ಅಲ್ಲಿ ಹೆಚ್ಚು ಗೊಬ್ಬರ ಹಾಕಬೇಕು) ಒಳಮೀಸಲಾತಿಯನ್ನ ಸಮರ್ಥಿಸಿದ್ದರು.

ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನದಾಸ್, ಖ್ಯಾತ ವಕೀಲರಾದ ಸಿ.ಎಸ್ ದ್ವಾರಕನಾಥ್, ಸ್ವಾಮೀಜಿಗಳಾದ ಗದುಗಿನ ತೋಂಟರಾಧ್ಯರು ಹಾಗೂ ಪ್ರಗತಿಪರ ಸಾಹಿತಿಗಳ ದೊಡ್ಡ ದಂಡೇ ಒಳಮೀಸಲಾತಿ ಪರವಾಗಿ ಮಾತನಾಡಿದ್ದಾರೆ. ಕೆ.ಎಸ್ ಭಗವಾನ್ ಮುಂತಾದವರು ಬಹಿರಂಗ ಹೋರಾಟಗಳಲ್ಲು ಪಾಲ್ಗೊಂಡಿದ್ದಿದೆ.

ಇಲ್ಲಿ ನಾನು ಹೇಳ ಬಯಸುತ್ತಿರುವುದು ಇವರ್ಯಾರು ಆರ್‌ಎಸ್‍ಎಸ್‍ನವರಲ್ಲ ಎಂಬುದರ ಜೊತೆಗೆ ಆರ್‌ಎಸ್‍ಎಸ್ ನವರ ನಡೆಯನ್ನ ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಲೇ ಬಂದವರು. ಈಗ ಅಧಿಕಾರದ ಚುಕ್ಕಾಣಿ ಇರುವುದು ಬಿಜೆಪಿ ಕೈಯಲ್ಲಿ ಅದರ ರಿಮೋಟ್ ಇರುವುದು ಆರ್‍ಎಸ್‍ಎಸ್ ಕೈಯಲ್ಲಿ. ಆರ್‌ಎಸ್‍ಎಸ್‍ನವರಿಗೆ ಮೀಸಲಾತಿಯೊಳಗೆ ಆಗಿಂದಾಗ್ಗೆ ಕೈಯಾಡಿಸುವುದರಲ್ಲಿ ಎಲ್ಲಿಲ್ಲದ ಉತ್ಸಾಹ. ಈಗ ಅದು ಒಳಮೀಸಲಾತಿಯ ಮೂಲಕವಿರಬಹುದು. ಆದರೆ ಮಾದಿಗರು ನಾವು ಒಳಮೀಸಲಿಗಷ್ಟೆ ಸೀಮಿತ, ಒಟ್ಟಾರೆ ಮೀಸಲಾತಿ ರಕ್ಷಣೆಯ ವಿಷಯ ಬಂದಾಗ ಕೈಕಟ್ಟಿ ಕೂರುತ್ತೇವೆ ಎಂದು ಎಲ್ಲಾದರೂ ಹೇಳಿದ್ದಾರ? ಹಾಗೆ ಇರುವ ಜಾಯಮಾನ ಇವರದಲ್ಲ. ಹಿಂದಿನಿಂದಲೂ ಹೋರಾಟವನ್ನೆ ಉಸಿರಾಗಿಸಿಕೊಂಡಿರುವ ಈ ಸಮುದಾಯ ಬೇರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಂತೆ ಸಂವಿಧಾನ ರಕ್ಷಣೆಗಿಳಿಯುತ್ತದೆ. ಅದು ಯಾರಿಗೂ ತಿಳಿಯದ ವಿಷಯವೇನಲ್ಲ. ಆದರೆ ಸುಖಾ ಸುಮ್ಮನೆ ಒಳಮೀಸಲಾತಿ ವಿರೋಧಿಗಳು ಇಂಥದೊಂದು ಅಸಂಭದ್ದವನ್ನು ಕ್ರಿಯೇಟ್ ಮಾಡಿಬಿಟ್ಟಿದ್ದಾರೆ.

ಇನ್ನು ದಲಿತರ ಐಕ್ಯತೆಯ ವಿಷಯಕ್ಕೆ ಬಂದರೆ, ಎಡ – ಬಲ ಈಗ ಐಕ್ಯವಾಗಿದೆ ಎಂದು ಭಾವಿಸಿದರೆ ಅದು ಮೂರ್ಖತನದ್ದಾಗುತ್ತೆ. ಇಲ್ಲವೆ ಪ್ರಜ್ಞಾಪೂರ್ವಕವಾಗಿ ಸುಳ್ಳೇ ಹೇಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಇವರ ಐಕ್ಯತೆ ಮುರಿದು ಬಿದ್ದು ದಶಕಗಳೆ ಸಂದಿವೆ. ಹೊಸ ತಲಮಾರಿನ ಹೊಲೆ – ಮಾದಿಗ ಯುವಕರು ಒಟ್ಟಿಗೆ ಕೂತು ಗುಂಡಾಕುವುದಿರಲಿ ಒಂದು ಟೀ ಕುಡಿಯುವುದೂ ಸಹ ನಡೆಯುತ್ತಿಲ್ಲ. ಅವರು ಅವರೇ ಇರುತ್ತಾರೆ. ಇವರು ಇವರೇ ಸೇರುತ್ತಾರೆ. ಈರ್ವರ ನಡುವಿನ ಮೀಸಲಾತಿ ಕುರಿತಾದ ಅನುಮಾನ ಅಪನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಈ ಅಸ್ಪೃಶ್ಯ ಜಾತಿಗಳ ಐಕ್ಯತೆ ಮತ್ತೆ ಸಾಧ್ಯವಿದೆ. ಒಬ್ಬರು ಹೆಚ್ಚು ಕಬಳಿಸಿದರೆಂಬ ಅನುಮಾನ ಅಪನಂಬಿಕೆ ದೂರಾಗಬೇಕು. ಅದು ಅವರವರ ಪಾಲನ್ನು ಅವರವರಿಗೆ ಕೊಟ್ಟಾಗ ಮಾತ್ರ ಸಾಧ್ಯ. ಇದಕ್ಕೆ ಮೀಸಲಾತಿಯಲ್ಲಿನ ಒಳ ವರ್ಗೀಕರಣ ಜಾರಿಯಾಗಬೇಕು.

ಇದು ಮನೆಯೊಳಗಿನ ಸಮಸ್ಯೆಯಾಗಿದ್ದಾಗ ಇದನ್ನು ಬಗೆಹರಿಸಿಕೊಳ್ಳುವುದು ಮನೆಯ ಹಿರಿಯ ಸದಸ್ಯರ ಕೈಯಲ್ಲಿತ್ತು. ಯಾವಾಗ ಹಿರಿಯರೆನಿಸಿದವರು ಕೈಚೆಲ್ಲಿ ಸ್ವಾರ್ಥಪರರೆನಿಸಿದರೋ, ವಂಚನೆಗೊಳಗಾದವರು ಅನಿವಾರ್ಯವಾಗಿ ನ್ಯಾಯಕ್ಕಾಗಿ ಇನ್ನೊಬ್ಬರ ಮನೆ ಕದಬಡಿಯಬೇಕಾಯಿತು.

ಈಗಲೂ ಏನೂ ಆಗಿಲ್ಲ. ಮನೆಯೊಳಗಿನ ಅನುಮಾನ, ಅಪನಂಬಿಗಳು ಬಗೆಹರಿದರೆ – ಇದು ನಮ್ಮ ಮನೆ, ನಾವೆಲ್ಲ ಒಂದಾಗಿ ಹೊರಗಿನ ಶತ್ರುಗಳಿಂದ ಮನೆಯನ್ನು ರಕ್ಷಿಸಿಕೊಳ್ಳಬೇಕೆಂಬ ಜವಬ್ದಾರಿ ಮತ್ತೆ ಹುಟ್ಟುತ್ತದೆ. ಅದಕ್ಕೆ ಮೊದಲು ಒಳಮೀಸಲಾತಿ ಜಾರಿಯಾಗಬೇಕು.

  • ಗುರುಪ್ರಸಾದ್ ಕಂಟಲಗೆರೆ

ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಗುರುಪ್ರಸಾದ್ ಹೊಸತಲೆಮಾರಿನ ಶಕ್ತ ಬರಹಗಾರ. ಹಲವು ದಿನಪತ್ರಿಕೆಗಳ ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ಛಾಪು ಮೂಡಿಸಿದ ಗುರುಪ್ರಸಾದ್ ಅವರ ಚೊಚ್ಚಲ ಕಥಾಸಂಕಲನ ‘ಗೋವಿನ ಜಾಡು’ ಗಮನ ಸೆಳೆದ ಪುಸ್ತಕ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಎಂಬ ಪುಸ್ತಕವನ್ನೂ ರಚಿಸಿದ್ದಾರೆ.


ಇದನ್ನೂ ಓದಿ: ಮೀಸಲಾತಿ ಮತ್ತು ಒಳಮೀಸಲಾತಿ ಎರಡೂ ಒಂದೆ..: ಬೆಟ್ಟಯ್ಯ ಕೋಟೆ ಸಂದರ್ಶನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...