Homeಅಂಕಣಗಳುಅಶ್ಫಾಕುಲ್ಲಾ ಖಾನ್ ಎಂಬ ಅಪ್ಪಟ ದೇಶಪ್ರೇಮಿಯ ನೆನೆಯುತ್ತಾ: ಡಿ.ಉಮಾಪತಿ

ಅಶ್ಫಾಕುಲ್ಲಾ ಖಾನ್ ಎಂಬ ಅಪ್ಪಟ ದೇಶಪ್ರೇಮಿಯ ನೆನೆಯುತ್ತಾ: ಡಿ.ಉಮಾಪತಿ

ಅಶ್ಫಾಕ್ ಒಂದೊಮ್ಮೆ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್‍ಗೆ ಪತ್ರ ಬರೆಯಬಯಸಿದ್ದ. ಆತ ಗಲ್ಲಿಗೇರುವ ಮುನ್ನ ಆತನ ಸಂದೇಶವನ್ನು ಸೆರೆಮನೆಯಿಂದ ಕದ್ದು ಹೊರ ಸಾಗಿಸಲಾಗಿತ್ತು.

- Advertisement -
- Advertisement -

ಅಶ್ಫಾಕುಲ್ಲಾ ಖಾನ್ ಬದುಕಿದ್ದಿದ್ದರೆ ಇದೇ ಅಕ್ಟೋಬರ್ 22ರಂದು ಅವರಿಗೆ 120 ವರ್ಷ ತುಂಬುತ್ತಿತ್ತು. ಉತ್ತರಪ್ರದೇಶದ ಶಹಜಹಾನಪುರ ಆತನ ಹುಟ್ಟೂರು. ಖಾನ್ ಬೆಳೆದದ್ದು ಗಾಂಧೀಜಿ ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ನೀಡದಂತೆ ಕರೆ ನೀಡಿ ಅಸಹಕಾರ ಚಳವಳಿ ಹೂಡಿದ್ದ ದಿನಗಳಲ್ಲಿ.

ಹಿಂದುಸ್ತಾನಿ ರಿಪಬ್ಲಿಕನ್ ಅಸೋಸಿಯೇಷನ್‍ನ (ಎಚ್.ಆರ್.ಎ) ಕ್ರಾಂತಿಕಾರಿ ತಲೆಯಾಳು ರಾಮಪ್ರಸಾದ್ ಬಿಸ್ಮಿಲ್ ಸಂಗಡ 1924ರಲ್ಲಿ ಕಾಕೋರಿ ರೈಲು ದರೋಡೆಯಲ್ಲಿ ಭಾಗವಹಿಸಿದ್ದ ಖಾನ್ ಕೇವಲ 27ನೆಯ ವಯಸ್ಸಿನಲ್ಲಿ ಬ್ರಿಟಿಷರ ನೇಣುಗಂಬಕ್ಕೆ ಕೊರಳೊಡ್ಡಿದ ಹುತಾತ್ಮ. ಬ್ರಿಟಿಷ್ ವಿರೋಧಿ ಬೆಂಕಿಯುಂಡೆ.
ಕಾಕೋರಿಯಿಂದ ಲಖ್ನೋಗೆ ರೈಲುಗಾಡಿಯಲ್ಲಿ ಸಾಗಿಸಲಾಗುತ್ತಿದ್ದ ಬ್ರಿಟಿಷ್ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿ, ಆ ಹಣದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾಗಿದ್ದ ಹತಾರುಗಳನ್ನು ಖರೀದಿಸುವುದು ಕಾಕೋರಿ ದರೋಡೆ ಹಿಂದಿನ ಕಾರ್ಯಸೂಚಿಯಾಗಿತ್ತು.

ಉರ್ದು ಕಾವ್ಯವೆಂದರೆ ಖಾನ್‍ಗೆ ಅಚ್ಚುಮೆಚ್ಚು. ವಾರಸಿ ಇಲ್ಲವೇ ಹಜರತ್ ಕಾವ್ಯನಾಮದೊಂದಿಗೆ ಬರೆಯುತ್ತಿದ್ದರು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ಕೂಡ ಸ್ವಾತಂತ್ರ್ಯ ಹೋರಾಟದ ಕೆಚ್ಚಿಗೆ ಮತ್ತು ಉರ್ದು ಕವಿತೆಗೆ ಹೆಸರಾಗಿದ್ದವರು. ಅವರ ಉರ್ದು ಕಾವ್ಯಪ್ರತಿಭೆ ಮತ್ತು ಕಲಿತನದ ಕತೆಗಳನ್ನು ಎಳೆಯ ಖಾನ್ ತನ್ನ ಅಣ್ಣನಿಂದ ಕೇಳಿ ಅರಿತಿದ್ದ. ಅವಕ್ಕೆ ಮಾರುಹೋಗಿ ಅಭಿಮಾನಿಯೇ ಆಗಿಬಿಟ್ಟಿದ್ದ. ಚೌರಿಚೌರಾ ಹಿಂಸಾತ್ಮಕ ಘಟನೆಯ ನಂತರ ಗಾಂಧೀಜಿ ತಮ್ಮ ಅಸಹಕಾರ ಚಳವಳಿಯನ್ನು ವಾಪಸು ತೆಗೆದುಕೊಂಡಿದ್ದರು. ಅವರ ಈ ಹೆಜ್ಜೆ ಸಾವಿರಾರು ಯುವ ಕ್ರಾಂತಿಕಾರಿಗಳಿಗೆ ತೀವ್ರ ನಿರಾಶೆ ಉಂಟು ಮಾಡಿತ್ತು. ಅಹಿಂಸಾತ್ಮಕ ಹಾದಿ ಕುರಿತು ಅವರಲ್ಲಿ ಭ್ರಮನಿರಸನ ಮೂಡಿಸಿತ್ತು. ಈ ಪೈಕಿ ಅಶ್ಫಾಕುಲ್ಲಾ ಖಾನ್ ಕೂಡ ಒಬ್ಬನಾಗಿದ್ದ. ರಾಮಪ್ರಸಾದ್ ಬಿಸ್ಮಿಲ್ ಸಂಘಟನೆಯನ್ನು (ಎಚ್.ಆರ್.ಎ) ಸೇರಲು ತವಕಿಸಿದ. ಆದರೆ ಸೇರಿಸಿಕೊಳ್ಳಲು ಆರಂಭದಲ್ಲಿ ಬಿಸ್ಮಿಲ್ ಉತ್ಸುಕತೆ ತೋರಲಿಲ್ಲ. ಶಹಜಹಾನಪುರದ ಇತರೆ ಪಠಾಣ ಕುಟುಂಬಗಳಂತೆ ಖಾನ್ ಕುಟುಂಬ ಕೂಡ ಸಿರಿವಂತಿಕೆ ಸೂಸಿತ್ತು. ತಂದೆ ಕೊತ್ವಾಲ ಹುದ್ದೆಯಲ್ಲಿದ್ದರು. ಅಂತಿಮವಾಗಿ ಇಬ್ಬರನ್ನೂ ಹತ್ತಿರ ತಂದದ್ದು ಉರ್ದು ಕವಿತೆಯೆಡೆಗಿನ ಕಡುಪ್ರೇಮ ಮತ್ತು ತಾಯ್ನೆಲವನ್ನು ದಾಸ್ಯದಿಂದ ಬಿಡಿಸುವ ಪಣ ತೊಟ್ಟ ನಿಗಿನಿಗಿ ದೇಶಭಕ್ತಿ. ಬ್ರಾಹ್ಮಣ ಮತ್ತು ಮುಸ್ಲಿಮ್ ತರುಣರಿಬ್ಬರು ಪ್ರಸಿದ್ಧ ಪ್ರಾಣಸ್ನೇಹಿತರಾಗಿ ಇತಿಹಾಸ ಸೇರಿದರು.

PC : Facebook

ಬಂದೂಕು, ಬಾಂಬುಗಳಂತಹ ಹತಾರುಗಳ ಖರೀದಿಗೆ ಹಣ ಹೊಂದಿಸಲು ಇಬ್ಬರೂ ಹೂಡಿದ ಹಂಚಿಕೆ ಕಾಕೋರಿ ರೈಲು ದರೋಡೆ. 1925ರ ಆಗಸ್ಟ್ ಒಂಬತ್ತರ ದರೋಡೆಯ ನಂತರ ಇವರಿಗೆ ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚುತ್ತದೆ ಬ್ರಿಟಿಷ್ ಸರ್ಕಾರ. ಬೇಟೆಯಾಡಿ ಸೆರೆಹಿಡಿದು ಗಲ್ಲಿಗೇರಿಸಿದ ನಾಲ್ವರು ಕ್ರಾಂತಿಕಾರಿಗಳ ಪೈಕಿ ಬಿಸ್ಮಿಲ್ ಮತ್ತು ಖಾನ್ ಪ್ರಮುಖರು. ಉಳಿದಿಬ್ಬರು ರಾಜೇಂದ್ರನಾಥ ಲಾಹಿರಿ ಮತ್ತು ರೋಶನ್ ಸಿಂಗ್.

ಯುವಕ ಅಶ್ಫಾಕ್ ಒಂದೊಮ್ಮೆ ರಷ್ಯಾದ ಕ್ರಾಂತಿಕಾರಿ ನಾಯಕ ವ್ಲಾದಿಮಿರ್ ಲೆನಿನ್‍ಗೆ ಪತ್ರ ಬರೆಯಬಯಸಿದ್ದ. 1927ರ ಡಿಸೆಂಬರ್ 19ರಂದು ಗಲ್ಲಿಗೇರುವ ಮುನ್ನ ಆತನ ಸಂದೇಶವನ್ನು ಸೆರೆಮನೆಯಿಂದ ಕದ್ದು ಹೊರ ಸಾಗಿಸಲಾಗಿತ್ತು. ಸ್ವಾತಂತ್ರ್ಯದ ಜೊತೆಗೆ ಸಮಾನತೆ ಸಾಧಿಸುವುದೂ ಅಶ್ಫಾಕ್ ಆಸೆಯಾಗಿತ್ತು.

“ಬಡವರು ಸಂತಸದಿಂದ ಸಲೀಸಾಗಿ ಬಾಳುವೆ ಮಾಡಲು ಸಾಧ್ಯವಿರುವಂತಹ ಸ್ವಾತಂತ್ರ್ಯ ಹಿಂದೂಸ್ತಾನಕ್ಕೆ ಬೇಕಿದೆ. ವರ್ಕ್‍ಶಾಪಿನಲ್ಲಿ ಕೆಲಸ ಮಾಡುವ ಮೆಕ್ಯಾನಿಕ್ ಅಬ್ದುಲ್ಲಾ, ಚಪ್ಪಲಿ ಹೊಲೆಯುವ ಧನಿಯಾ ಹಾಗೂ ಸಾಧಾರಣ ರೈತರು ಲಖ್ನೋದ ನವಾಬರ ಅರಮನೆಯಲ್ಲಿ ಗಣ್ಯರ ಮುಂದಿನ ಸಾಲುಗಳ ಕುರ್ಚಿಗಳಲ್ಲಿ ಇದಿರುಬದಿರಾಗಿ ಕುಳಿತುಕೊಳ್ಳುವ ದಿನಗಳು ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುವೆ. ಕಮ್ಯುನಿಸ್ಟರೊಂದಿಗೆ ನನ್ನ ಸಮಹಮತವಿದೆ. ಬಡರೈತರು ಮತ್ತು ಅಸಹಾಯಕ ಕಾರ್ಮಿಕರಿಗಾಗಿ ನನ್ನ ಹೃದಯ ಸದಾ ಅಳುತ್ತಿರುತ್ತದೆ. ಕಾಕೋರಿ ದರೋಡೆ ಪ್ರಕರಣದ ನಂತರ ತಲೆ ಮರೆಸಿಕೊಂಡು ತಿರುಗುತ್ತಿದ್ದಾಗ ಇಂತಹ ಕುಟುಂಬಗಳೊಂದಿಗೆ ವಾಸವಿದ್ದೆ. ಅವರ ಬವಣೆ ನನ್ನ ಕಣ್ಣುಗಳ ತೇವವಾಗಿಸಿತ್ತು. ನಮ್ಮ ಪೇಟೆ ಪಟ್ಟಣ ನಗರಗಳು ಥಳಗುಟ್ಟುವುದು ಇವರಿಂದಾಗಿಯೇ. ನಮ್ಮ ಗಿರಣಿಗಳು, ಕಾರ್ಖಾನೆಗಳು ನಡೆಯುವ ಹಿಂದಿನ ಶ್ರಮ ಇವರದೇ. ಪ್ರಪಂಚದ ಪ್ರತಿ ಕಾಮಗಾರಿಯ ಹಿಂದೆ ಇರುವುದು ಇವರದೇ ಬೆವರು. ಬೆಳೆಯುವ-ಉತ್ಪಾದಿಸುವ ಈ ಶ್ರಮಿಕರನ್ನು ದುಃಖ-ದುಸ್ಥಿತಿಗಳು ಬಿಡದೆ ಬೆಂಬತ್ತಿವೆ. ಅವರ ಈ ಕಷ್ಟ ಕಣ್ಣೀರಿನ ಮೂಲಕಾರಣ ಬಿಳಿತೊಗಲಿನ ಒಡೆಯರು ಮತ್ತು ಅವರ ಏಜೆಂಟರು. ಹಳ್ಳಿ ಹಳ್ಳಿಗೆ ಹೋಗಿ, ಗಿರಣಿ ಕಾರ್ಖಾನೆಗಳಿಗೆ ತೆರಳಿ ಅವರ ದುಸ್ಥಿತಿಯನ್ನು ಅಧ್ಯಯನ ಮಾಡಬೇಕು ಮತ್ತು ಅವರಲ್ಲಿ ರಾಜಕೀಯ ಎಚ್ಚರವನ್ನು ಮೂಡಿಸಬೇಕು” ಎಂಬುದು ಖಾನ್‍ನ ಅಂತಿಮ ಸಂದೇಶವಾಗಿತ್ತು. ಆರ್ಥಿಕ ಸ್ವಾತಂತ್ರ್ಯದ ಜೊತೆ ಜೊತೆಗೆ ಸಾಮಾಜಿಕ-ಸಾಂಸ್ಕೃತಿಕ ಸಮಾನತೆಯೂ ಈ ಸಂದೇಶದಲ್ಲಿ ಸೇರಿತ್ತು ಎಂಬುದನ್ನು ಗಮನಿಸಬೇಕಿದೆ.

ಎಲ್ಲ ಬಗೆಯ ಪರಕೀಯ ಆಳ್ವಿಕೆ ನ್ಯಾಯಬಾಹಿರ. ಅಂಚಿನಲ್ಲಿ ಜೋತುಬಿದ್ದು ಜೀವ ಹಿಡಿದ ದೀನ ದರಿದ್ರರ ಹಕ್ಕುಗಳನ್ನು ಮಾನ್ಯ ಮಾಡದಿರುವ, ಬಂಡವಾಳಶಾಹಿಗಳು ಮತ್ತು ಜಮೀನುದಾರರ ಹಿತವನ್ನು ಕಾಪಾಡುವ, ಕಾರ್ಮಿಕರು ಮತ್ತು ರೈತರ ಸಮಾನ ಭಾಗವಹಿಸುವಿಕೆ ಇಲ್ಲದಿರುವ ಹಾಗೂ ಯಥಾಸ್ಥಿತಿವಾದಿ ತಾರತಮ್ಯಗಳು ಮತ್ತು ವಿಶೇಷಾಧಿಕಾರಗಳನ್ನು ಕಾಪಾಡಲು ಕಾಯಿದೆ ಕಾನೂನು ಮಾಡುವ ಯಾವುದೇ ಸರ್ಕಾರ ಕೂಡ ನ್ಯಾಯಬಾಹಿರ. ಭಾರತ ಸ್ವತಂತ್ರ ದೇಶವಾಗಿ ನಮ್ಮದೇ ಜನರ ಸರ್ಕಾರ ಬಂದ ನಂತರವೂ ಬಡವರು-ಬಲ್ಲಿದರು, ಉಳುವವರು-ಜಮೀನುದಾರರ ನಡುವಣ ತಾರತಮ್ಯ ಎಂದಿನಂತೆ ಕೊನೆಸಾಗಿದರೆ ಅದಕ್ಕಿಂತ ಹೀನಾಯ ಮತ್ತೊಂದೇನಿದೆ. ಸಮಾನತೆ ಎಂಬುದು ನೆಲೆಸುವ ತನಕ ಸ್ವಾತಂತ್ರ್ಯವನ್ನು ನೀಡಬೇಡ ಎಂದು ದೇವರಲ್ಲಿ ಪ್ರಾರ್ಥಿಸುವೆ. ಇಂತಹ ನಂಬಿಕೆಗಾಗಿ ನನಗೆ ಕಮ್ಯುನಿಸ್ಟ್ ಎಂಬ ಹಣೆಪಟ್ಟಿ ಹಚ್ಚಿದರೂ ಪರವಾಗಿಲ್ಲ. ನಾನು ದೇವರಲ್ಲಿ ನಂಬಿಕೆ ಉಳ್ಳವನು. ದೇವರು ಎಲ್ಲರನ್ನೂ ಸಮಾನರನ್ನಾಗಿಯೇ ಸೃಷ್ಟಿಸುತ್ತಾನೆ ಎಂಬ ಅಶ್ಫಾಕ್ ಮಾತುಗಳಲ್ಲಿ ಆವರ ಮಾನವೀಯ ಚಿಂತನೆ ಹರಳುಗಟ್ಟಿದೆ. ಹಿಂದೂ-ಮುಸ್ಲಿಮರನ್ನು ಒಡೆವ ಪಿತೂರಿಯ ಕುರಿತೂ ಆತ ಮಾತಾಡಿದ್ದರು. ಅಂತಹವರೇ ದೇಶದ ನಿಜ ಶತ್ರುಗಳು ಎಂದು ಬಣ್ಣಿಸಿದ್ದರು.

ಅಶ್ಫಾಕ್ ಶಂಕೆ- ಸಂದೇಹಗಳು ಇಂದಿನ ಭಾರತದಲ್ಲಿ ನಿಜರೂಪ ಧರಿಸಿ ಅಬ್ಬರಿಸಿವೆ.


ಇದನ್ನೂ ಓದಿ: ಬಹುಜನ ಭಾರತ: ಕೋಮುವಾದದ ಇರುಳ ಸೀಳುವ ಬೆಳಕು ಭಗತ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...