Homeಮುಖಪುಟನುಡಿ ನಮನ | ಮಾನವೀಯ ಕತೆಗಳನ್ನು ಕಟ್ಟಿಕೊಟ್ಟ ನಿರ್ದೇಶಕ 'ಕಿಮ್‌ ಕಿ ಡುಕ್‌'

ನುಡಿ ನಮನ | ಮಾನವೀಯ ಕತೆಗಳನ್ನು ಕಟ್ಟಿಕೊಟ್ಟ ನಿರ್ದೇಶಕ ‘ಕಿಮ್‌ ಕಿ ಡುಕ್‌’

ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿ ನನ್ನನ್ನು ಸದಾ ಕಾಡಿದೆ. ನನ್ನ ಸಿನಿಮಾಗಳಲ್ಲಿ ಶಬ್ದವಿರುತ್ತದೆ. ಅದೇ ಕಾರಣಕ್ಕೊ ಏನೊ, ಡುಕ್‌ ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿಯೇ ಒಂದು ದೊಡ್ಡ ಸಾಧನೆ.

- Advertisement -
- Advertisement -

ನಿನ್ನೆ ನಿಧನರಾದ ದಕ್ಷಿಣ ಕೋರಿಯಾದ ಪ್ರಸಿದ್ಧ ನಿರ್ದೇಶಕ ’ಕಿಮ್‌ ಕಿ ಡುಕ್’‌ ಅವರಿಂದ ಪ್ರಭಾವಿತರಾಗದ ನಿರ್ದೇಶಕರಿಲ್ಲ. ಕನ್ನಡದ ಹೊಸ ತಲೆಮಾರಿನ ನಿರ್ದೇಶಕ ಬಿ ಎಂ ಗಿರಿರಾಜ್‌, ಕಿಮ್‌ ಕಿ ಡುಕ್‌ ಅವರ ಸಿನಿಮಾ ಕಟ್ಟುವ ಬಗೆಯನ್ನು ಮತ್ತು ಅವರ ಮೇಲೆ ಆದ ಪ್ರಭಾವವನ್ನು ನೆನಪಿಸಿಕೊಂಡಿದ್ದಾರೆ.

ನಾನು ಕಿಮ್‌ ಕಿ ಡುಕ್‌ ಸಿನಿಮಾ ಮೊದಲು ನೋಡಿದ್ದು ಅಸೋಸಿಯೇಟ್‌ ಆಗಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ. ಸ್ನೇಹಿತರೊಬ್ಬರು ‘ಬ್ರೆತ್‌’ ಎಂಬ ಸಿನಿಮಾ ಬಗ್ಗೆ ಹೇಳಿದ್ದರು. ಅದನ್ನು ಹುಡುಕಿಕೊಂಡು ಬಂದು ನೋಡಿದೆ. ಅದೊಂದು ಫ್ಯಾಸಿನೇಟಿಂಗ್‌ ಸಿನಿಮಾ ಆಗಿತ್ತು. ಚಿತ್ರಕತೆ ತುಂಬಾ ವಿಚಿತ್ರವಾಗಿತ್ತು. ಮರಣದಂಡನೆಗೆ ಶಿಕ್ಷೆಯಾದ ವ್ಯಕ್ತಿಯ ಸುತ್ತ ಹೆಣೆದ ಕತೆ.

ಇದನ್ನೂ ಓದಿ: ಹಿಂದಿ ಹೇರಿಕೆಗೆ ವಿಭಿನ್ನ ವಿರೋಧ: ಪವನ್ ಕುಮಾರ್ ನಿರ್ದೇಶನದ ’ಏನ್ ಮಾಡೋದು..?’ ಕಿರುಚಿತ್ರ ವೈರಲ್!

ಕಿಮ್‌ ಕಿ ಡುಕ್‌ ಅವರ ಸಿನಿಮಾ, ಚಿತ್ರಕತೆ, ಪಾತ್ರಗಳು ಒಂದು ಭಾವ ಸತ್ಯದ ಹುಡುಕಾಟದಲ್ಲಿರುತ್ತವೆ. ನಾವು ಎಲ್ಲವನ್ನು ನೈತಿಕತೆಯ ಚೌಕಟ್ಟಿನಲ್ಲಿ ನೊಡುತ್ತೇವೆ. ಸಮಾಜದಲ್ಲಿ ಇದು ಹೀಗಾಗಬಾರದು, ಇದು ಸರಿಯಲ್ಲ, ತಪ್ಪು ಎಂದೆಲ್ಲಾ ಹೇಳುತ್ತೇವೆ. ಆದರೆ ಕಿಮ್‌ ಕಿ ಡುಕ್‌ ಇದೆಲ್ಲವನ್ನು ಮೀರಿದ ಮಾನವೀಯ ಬೌದ್ಧ ದೃಷ್ಟಿಕೋನದಲ್ಲಿ ಜೀವನ ನೋಡುವುದನ್ನು ಕಾಣುತ್ತೇವೆ.

ಡುಕ್‌ ನಿರ್ದೇಶಿಸಿದ ಮತ್ತೊಂದು ಚಿತ್ರ 3-ಐರನ್‌, ನಾನು ನೋಡಿದ ವಿಶಿಷ್ಟವಾದ ಪ್ರೇಮಕತೆ. ಒಬ್ಬ ವ್ಯಕ್ತಿ ತಾನೊಬ್ಬನೇ ಇರುವಾಗ ಹೇಗೊ ಬದುಕಿಕೊಳ್ತಾನೆ. ಆದರೆ ಹತ್ತು ಜನರ ನಡುವೆ ಬದುಕುವುದು ಸವಾಲು. ಅಲ್ಲಿ ತನ್ನತನ, ವ್ಯಕ್ತಿ ವಿಶೇಷ ಎಂಬುದೇನಿರುತ್ತದೆ, ಅದು ಕಳೆದು ಹೋಗಿ ಬಿಡುವ ಸಾಧ್ಯತೆ ಇರುತ್ತದೆ. ಕಿಮ್‌ ಕಿ ಡುಕ್‌ ಅವರ ಎಲ್ಲ ಸಿನಿಮಾಗಳಲ್ಲಿ ಈ ಎಳೆ ಕಂಡು ಬರುತ್ತದೆ. ಒಂಟಿಯಾಗಿರುವವ, ಸಮಾಜದ ಭಾವವಾಗಿ ಎದುರಿಸುವ ಸಂಕಟಗಳನ್ನು ಧ್ವನಿಸುತ್ತಲೇ ಬಂದಿದ್ದಾರೆ. ಇದು ಸ್ವತಃ ಕಿಮ್‌ ಕಿ ಡುಕ್‌ ಅವರ ಆತಂರಿಕ ಸಂಘರ್ಷವೆನಿಸುತ್ತದೆ.

ವೃತ್ತಿ ಜೀವನದ ಒಂದು ಘಟ್ಟದಲ್ಲಿ ಅವರದ್ದೇ ಒಂದು ಸಾಕ್ಷ್ಯಚಿತ್ರ ಬಂದು. ಅದರಲ್ಲಿ ಸಿನಿಮಾ ಜೀವನದಲ್ಲಿ ತಮ್ಮ ಸಾಧನೆ ಶೂನ್ಯ ಎಂದು ಹೇಳಿಕೊಳ್ಳುತ್ತಾರೆ. ಮಾನಸಿಕ ಒತ್ತಡದಲ್ಲಿದ್ದ ಸಂಧರ್ಭವನ್ನು ಬಿಚ್ಚಿಡುವ ಈ ಸಾಕ್ಷ್ಯಚಿತ್ರದಲ್ಲಿ ದೂರದ ಬೆಟ್ಟದಲ್ಲಿ ಗುಡಿಸಲೊಂದರಲ್ಲಿ ಬದುಕಿದ್ದನ್ನು ಅದರಲ್ಲಿ ವಿವರಿಸಿದ್ದರು. ತಾನೇನೇ ಮಾಡುತ್ತಿದ್ದರೂ, ಅದು ತನ್ನ ಆಡಂಬರವಷ್ಟೇ. ನನ್ನ ಲೆಗಸಿಯಾಗಿ, ಸಿನಿಮಾಕ್ಕಿಂತ ಹತ್ತು ಶಿಷ್ಯರನ್ನು ಬೆಳೆಸಿ ಹೋಗಬೇಕಿತ್ತು. ಅವರೆಲ್ಲರೂ ತಮ್ಮನ್ನು ಮಾರಿಕೊಂಡರು ಎಂಬ ಬೇಸರವನ್ನು ವ್ಯಕ್ತಪಡಿಸಿದ್ದರು.

ಭ್ರಷ್ಟತೆಯ ಬಗ್ಗೆ ಮಧ್ಯಮ ವರ್ಗದ ನಂಬಿಕೆಯನ್ನು ಜನಪ್ರಿಯ ಧಾಟಿಯಲ್ಲಿ ಹೇಳುವ ಆಕ್ಟ್ – 1978

ಈ ಸಾಕ್ಷ್ಯಚಿತ್ರ, ಸ್ವತಃ ಕಿಮ್‌ ಕಿ ಡುಕ್‌ ಕ್ಯಾಮೆರಾ ಎದುರು ಮಾತನಾಡುತ್ತಾ ಹೋಗಿದ್ದಷ್ಟೆ. ಅದನ್ನು ನೋಡಿದ ನನ್ನಂತಹ ಅನೇಕರಿಗೆ, ಆಯ್ತು ಇನ್ನು ಮೇಲೆ ಇವರು ಸಿನಿಮಾ ಮಾಡೋದಿಲ್ಲ ಅನ್ನಿಸಿತ್ತು. ಆದರೆ ಕಿಮ್‌ ಕಿ ಡುಕ್‌ ಮತ್ತೊಂದು ಹೊಸ ಸಿನಿಮಾದೊಂದಿಗೆ ಪ್ರತ್ಯಕ್ಷವಾಗಿದ್ದರು. ಸಿನಿಮಾ ಮಾಡುತ್ತಾ ಖಿನ್ನತೆ ಒಳಗಾಗಿದ್ದ ಡುಕ್‌, ಸಿನಿಮಾ ಮೂಲಕವೇ ಅದರಿಂದ ಹೊರಬರುವ ದಾರಿ ಕಂಡುಕೊಂಡರು. ಸಿನಿಮಾನೇ ಅವರಿಗೆ ಕಾಯಿಲೆ ಆಗಿತ್ತು, ಸಿನಿಮಾನೇ ಅವರಿಗೆ ಮದ್ದಾಯ್ತು. ಕ್ಯಾಪ್ರೊ ಹೇಳ್ತಾರಲ್ಲ, ‘ ಸಿನಿಮಾಕ್ಕೆ ಮದ್ದೆಂದರೆ, ಇನ್ನಷ್ಟು ಸಿನಿಮಾ ಮಾಡೋದು” ಹಾಗೆ.

Getty Images

ಇದನ್ನೂ ಓದಿ: ಬಾಲಿವುಡ್ ನಟಿ ರಿಚಾ ಚಾಡ್ಡಾಗೆ ಭಾರತರತ್ನ ಡಾ.ಅಂಬೇಡ್ಕರ್ ಪ್ರಶಸ್ತಿ

ಬುದ್ಧ ಸಮಾಜದ ಒಳಗೇ ಇದ್ದು, ಸಮಾಜದಲ್ಲಿ ಪರಿವರ್ತನೆಗೆ ಪ್ರಯತ್ನಿಸಿದ್ದು, ಕಿಮ್‌ ಕಿ ಡುಕ್‌ಗೂ ಮನವರಿಕೆ ಆಯ್ತು ಅನ್ನಿಸುತ್ತೆ. ಬುದ್ಧನ ಹಲವು ಚಿಂತನೆಗಳು ಅವರ ಸಿನಿಮಾಗಳಲ್ಲಿ ಕಾಣಿಸುತ್ತವೆ. ಸ್ಪ್ರಿಂಗ್‌, ಸಮ್ಮರ್‌, ಫಾಲ್‌, ವಿಂಟರ್‌ ಆಳ ಪದರಗಳ ಸಿನಿಮಾ ಅದು. ದೃಶ್ಯ ಸೌಂದರ್ಯದಲ್ಲೂ, ಭಾವ ಸೌಂದರ್ಯದಲ್ಲೂ ಹಲವು ವಿಚಾರಗಳನ್ನು ಹೇಳುತ್ತಾರೆ. ಮನುಷ್ಯನ ಕೆಲಸದಿಂದ ಏನೊ ಒಂದು ಕ್ರಿಯೆ ಘಟಿಸುತ್ತಲೇ ಇರುತ್ತದೆ. ಆದರೆ ಏನೂ ಆಗಲ್ಲ ಎಂದು ಭಾವಿಸಿಯೇ ಕೆಲಸ ಮಾಡುತ್ತಿರಬೇಕಾಗುತ್ತದೆ. ಈ ಬೌದ್ಧ ತತ್ವವನ್ನು ಡುಕ್‌ಗಿಂತ ಸೊಗಸಾಗಿ ಇನ್ನಾರು ಸೆರೆಹಿಡಿದಿಲ್ಲ.

ಅಚ್ಚರಿಯ ಸಂಗತಿಯೆಂದರೆ, ಇದು ಧಾರ್ಮಿಕವಲ್ಲದ ಚಿಂತನೆಯೂ ಹೌದು. ಬೌದ್ಧ ಅನುಯಾಯಿ ಆಗುವುದು ಸುಲಭ, ಬುದ್ಧನಾಗುವುದು ಕಷ್ಟ. ಈ ಚಿಂತನೆಗಳು ಡುಕ್‌ ಸಿನಿಮಾದಲ್ಲಿ ತುಂಬಾ ಸೊಗಸಾಗಿ, ಮಾನವೀಯವಾಗಿ ಪ್ರತಿಫಲಿಸುತ್ತವೆ. ಯಾವುದೇ ಸೃಜನಶೀಲ ಸೃಷ್ಟಿಯಲ್ಲಿ, ಸೃಷ್ಟಿ ಮಾಡುವವನು ತನ್ನ ನೈತಿಕತೆಯನ್ನು ಹೇರಿಬಿಡುತ್ತಾನೆ. ಆ ನೈತಿಕತೆ, ಆತನ ಅಹಂ. ಅದಕ್ಕೆ ಶ್ರೇಷ್ಠತೆಯ ಲೇಪ ಹಚ್ಚುತ್ತಿರುತ್ತೇವೆ. ಅದನ್ನು ಮೀರುವುದೇ ಸವಾಲು. ಡುಕ್‌ಗೆ ಮನುಷ್ಯನ ಮೇಲೆ ಅಪಾರವಾದ ಪ್ರೀತಿ ಇತ್ತು. ಆದರೆ ನಂಬಿಕೆ ಇರಲಿಲ್ಲ. ಈ ವೈರುಧ್ಯಗಳ ನಡುವೆ ಹೊಯ್ದಾಟ, ಖಿನ್ನತೆ ಅವರ ಸಿನಿಮಾಗಳಲ್ಲಿ ಕಾಣಿಸುತ್ತದೆ. ಆದರೆ ಅದರಲ್ಲೂ ಯಾವುದೊ ಸೌಂದರ್ಯ, ಸತ್ಯ ಹುಡುಕುವುದಕ್ಕೆ ಪ್ರಯತ್ನಿಸುತ್ತಾ ಇದ್ದರು.

ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿ ನನ್ನನ್ನು ಸದಾ ಕಾಡಿದೆ. ನನ್ನ ಸಿನಿಮಾಗಳಲ್ಲಿ ಶಬ್ದವಿರುತ್ತದೆ. ಅದೇ ಕಾರಣಕ್ಕೊ ಏನೊ, ಡುಕ್‌ ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿಯೇ ಒಂದು ದೊಡ್ಡ ಸಾಧನೆ. ಅಂತಹ ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ. ನಿಜಕ್ಕೂ ಕಿಮ್‌ ಕಿ ಡುಕ್‌ ಅವರನ್ನು ಮಿಸ್‌ ಮಾಡಿಕೊಳ್ಳುತ್ತೇನೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...