Homeಅಂತರಾಷ್ಟ್ರೀಯಸೋಮವಾರ ಟ್ರಂಪ್‌ ವಿರುದ್ಧ 2ನೇ ದೋಷಾರೋಪಣೆ?: ಭವಿಷ್ಯದಲ್ಲಿ ಸ್ಪರ್ಧೆಯಿಂದ ಅನರ್ಹಗೊಳಿಸುವ ಸಾಧ್ಯತೆ!

ಸೋಮವಾರ ಟ್ರಂಪ್‌ ವಿರುದ್ಧ 2ನೇ ದೋಷಾರೋಪಣೆ?: ಭವಿಷ್ಯದಲ್ಲಿ ಸ್ಪರ್ಧೆಯಿಂದ ಅನರ್ಹಗೊಳಿಸುವ ಸಾಧ್ಯತೆ!

ಸೋಮವಾರ ಟ್ರಂಪ್ ಎರಡನೇ ದೋಷಾರೋಪಣೆ (Impeachment) ಎದುರಿಸಬೇಕಾಗಬಹುದು ಎನ್ನಲಾಗಿದೆ. ಇದರ ಸ್ವರೂಪ ಹೇಗಿರಲಿದೆ?

- Advertisement -
- Advertisement -

ಕಾಂಗ್ರೆಸ್‌ನಲ್ಲಿನ ಡೆಮೋಕ್ರಾಟ್‌ಗಳು ಸೋಮವಾರ ಟ್ರಂಪ್ ಅವರ ದುರ್ನಡತೆ ಆರೋಪಗಳನ್ನು ಪ್ರಸ್ತಾಪಿಸಲು ಯೋಜಿಸಿದ್ದಾರೆ. ಇದು ಟ್ರಂಪ್ ಎರಡನೆ ಬಾರಿಗೆ ದೋಷಾರೋಪಣೆ ಎದುರಿಸುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಟ್ರಂಪ್ ಅವರ ಚುನಾವಣಾ ವಂಚನೆಯ ಸುಳ್ಳು ಹೇಳಿಕೆಗಳು ಮತ್ತು ಕಾಂಗ್ರೆಸ್ ಮೇಲೆ (ಕ್ಯಾಪಿಟಲ್ ಮೇಲೆ) ದಾಳಿ ನಡೆಸಲು ಬೆಂಬಲಿಗರಿಗೆ ಪ್ರಚೋದನೆ ನೀಡಿದರು ಎಂಬ ಅಂಶಗಳ ಆಧಾರದಲ್ಲಿ ಈ ದೋಷಾರೋಪಣೆ ನಡೆಯಬಹುದು ಎನ್ನಲಾಗಿದೆ.

ದೋಷಾರೋಪಣೆ (Impeachment) ಹೇಗಿರುತ್ತದೆ?

ಇಂಪೀಚ್‌ಮೆಂಟ್ ಬಗ್ಗೆ ಇರುವ ಒಂದು ತಪ್ಪು ತಿಳುವಳಿಕೆ ಎಂದರೆ, ಅದು ಅಧ್ಯಕ್ಷ ಪದವಿಯಿಂದ ಕಿತ್ತು ಹಾಕುತ್ತದೆ ಎಂಬುದು. ಆದರೆ ಇದು ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಅಂದರೆ ಕಾಂಗ್ರೆಸ್‌ನ ಕೆಳಮನೆಯು, ಗುರುತರ ಅಪರಾಧ ಅಥವಾ ದುಷ್ಕೃತ್ಯದ ಅಪಾದನೆಗಳನ್ನು ಮಾಡುವ ಪ್ರಕ್ರಿಯೆ. ಒಂಥರಾ ಕ್ರಿಮಿನಲ್ ಪ್ರಕರಣದಲ್ಲಿ ದೋಷಾರೋಪಣೆ ಮಾಡಿದಂತೆ.

435 ಸದಸ್ಯರ ಕೆಳಮನೆಯು ಸರಳ ಬಹುಮತದಲ್ಲಿ ಅಪಾದನೆಗಳನ್ನು ಪ್ರಸ್ತಾಪಿಸಲು ಯಶಸ್ವಿಯಾದರೆ, ಇದು ಸೆನೆಟ್ (ಮೇಲ್ಮನೆ)ಗೆ ವರ್ಗಾಯಿಸಲ್ಪಡುತ್ತದೆ. ಸೆನೆಟ್ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ.

ಅಮೆರಿಕದ ಸಂವಿಧಾನದ ಪ್ರಕಾರ, ಅಧ್ಯಕ್ಷನನ್ನು ಶಿಕ್ಷೆಗೆ ಒಳಪಡಿಸಲು ಮತ್ತು ಹುದ್ದೆಯಿಂದ ತೆಗೆಯಲು ಸೆನೆಟ್‌ನ 2/3 (ಮೂರನೇ ಎರಡು ಭಾಗ) ಬಹುಮತ ಅಗತ್ಯ.

ಆದರೆ ಹಳೆಯ ಎರಡು ಐತಿಹಾಸಿಕ ಪ್ರಕರಣಗಳನ್ನು ಗಮನಿಸಿದರೆ, ಟ್ರಂಪ್ ಪದಚ್ಯುತಿಗೆ ಸೆನೆಟ್‌ನಲ್ಲಿ ಸರಳ ಬಹುಮತವು ಸಾಕು ಎನಿಸುತ್ತದೆ, ಇದು ಭವಿಷ್ಯದಲ್ಲಿ ಟ್ರಂಪ್ ಆ ಹುದ್ದೆ ಏರುವುದನ್ನೂ ತಡೆಗಟ್ಟಬಹುದು.

ಈ ಜನವರಿಯಲ್ಲಿ ಸೆನೆಟ್ ಮೇಲೆ ನಿಯಂತ್ರಣ ಹೊಂದಲಿರುವ ಡೆಮಾಕ್ರಟ್ಸ್, 2024ರ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸಿದಂತೆ ನಿರ್ಣಯಿಸುವ ಅವಕಾಶವನ್ನೂ ಪಡೆಯಲಿದ್ದಾರೆ.

ಆದರೆ ಇಲ್ಲಿ ಒಂದು ತೊಡಕಿದೆ. ಚುನಾವಣೆಯ ಸ್ಪರ್ಧೆಯಿಂದ ಅನರ್ಹತೆಗೊಳಿಸುವ ಮತದಾನಕ್ಕೂ ಮೊದಲು, ಶಿಕ್ಷಿಸಬೇಕು ಮತ್ತು ಪದವಿಯಿಂದ ಪದಚ್ಯುತಿಗೊಳಿಸಬೇಕೇ ಎಂಬ ವಿಷಯದ ಮೇಲೆ ಮತದಾನ ನಡೆಯಲಿದೆ. ಮೊದಲನೆಯದು ಯಶಸ್ವಿಯಾದರಷ್ಟೇ ಎರಡನೆ ಪ್ರಕ್ರಿಯೆ ನಡೆಯಲಿದೆ.

ಯುನಿವರ್ಸಿಟಿ ಆಫ್ ಕ್ಯಾಲಿರೋಡಾದ ಕಾನೂನು ಪ್ರೊಫೆಸರ್ ಪೌಲ್ ಕ್ಯಾಂಪೋಸ್, ‘ಸೆನೆಟ್‌ಗೆ ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸಲಾರದಂತೆ ಅನರ್ಹಗೊಳಿಸುವ ವೋಟಿಂಗ್ ಅಧಿಕಾರ ಮಾತ್ರವಿದೆ. ಜನೆವರಿ 20ರಂದು ಟ್ರಂಪ್ ನಿರ್ಗಮಿಸಲಿರುವ ದಿನದವರೆಗೂ ಇಂಪೀಚ್‌ಮೆಂಟ್ ವಿಚಾರಣೆ ಚಾಲ್ತಿಯಲ್ಲಿದ್ದರೆ ಈ ವಿದ್ಯಮಾನ ಸಂಭವಿಸಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಿರ್ಗಮನದ ನಂತರ ಇಂಪ್ರೀಚ್‌ಮೆಂಟ್ ಸಾಧ್ಯವೇ?

ಈ ಕುರಿತು ಯಾವ ನ್ಯಾಯಾಲಯವೂ ಸ್ಪಷ್ಟವಾಗಿ ತಿಳಿಸಿಲ್ಲವಾದರೂ, ತಜ್ಞರ ಪ್ರಕಾರ, ಟ್ರಂಪ್ ನಿರ್ಗಮನದ ನಂತರವೂ ಭವಿಷ್ಯದಲ್ಲಿ ಈ ಹುದ್ದೆಗೇರದಂತೆ ಅನರ್ಹಗೊಳಿಸುವ ವಿಷಯ ಜೀವಂತವಿರುತ್ತದೆ.

ಎರಡು ಸಲ ದೋಷಾರೋಪಣೆ

ಈ ಹಿಂದಿನ ಯಾವುದಾದರೂ ಅಮೆರಿಕ ಅಧ್ಯಕ್ಷ ಎರಡು ಬಾರಿ ಇಂಪೀಚ್‌ಮೆಂಟ್ ಎದುರಿಸಿದ್ದಾರೆಯೇ? ಇಲ್ಲಿವರೆಗೆ ಇದು ಸಂಭವಿಸಿಲ್ಲ. ಈ ಕುರಿತು ಕಾಂಗ್ರೆಸ್ ಅಷ್ಟೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ.
2019ರಲ್ಲಿ ಟ್ರಂಪ್ ವಿರುದ್ಧ ಅಧಿಕಾರ ದುರ್ಬಳಕೆಯ ಕಾರಣದಲ್ಲಿ ಇಂಪೀಚ್‌ಮೆಂಟ್ ಮಾಡಲಾಗಿತ್ತು. ಆದರೆ ಮುಂದೆ ಫೆಬ್ರುವರಿ 2020ರಲ್ಲಿ ರಿಪಬ್ಲಿಕನ್‌ಗಳೇ ಹೆಚ್ಚಿದ್ದ ಸೆನೆಟ್ ಅವರನ್ನು ಆರೋಪಮುಕ್ತ ಮಾಡಿತ್ತು.
ಟ್ರಂಪ್ ಇಂಪೀಚ್‌ಮೆಂಟ್‌ಗೆ ಜೋ ಬೈಡೆನ್ ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಆದರೆ ಸೋಮವಾರ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌


ಇದನ್ನೂ ಓದಿ: ಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ‌ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...