Homeಕವನನನ್ನ ದೇಶದಲ್ಲಿ... ಚಾಂದ್ ಪಾಷ ಅವರ ಎರಡು ಕವಿತೆಗಳು

ನನ್ನ ದೇಶದಲ್ಲಿ… ಚಾಂದ್ ಪಾಷ ಅವರ ಎರಡು ಕವಿತೆಗಳು

- Advertisement -
- Advertisement -

ನನ್ನ ದೇಶದಲ್ಲಿ…

ನಿದ್ರೆಯ ನೆರಳಿಗೂ ಆಕಾಶದ ಬೆರಳಿಗೂ ಒಲವಾಗಿ
ನೆಲವೆಲ್ಲ ತೇವ ನುಂಗಿದ ಬಟ್ಟೆಯಾಗಿರಲು,
ತಿಳಿ ಗುಲಾಬಿ ಬಣ್ಣದ ತೇರು ಎಳೆಯುವಷ್ಟರಲ್ಲಿ
ನಮ್ಮೂರ ಕೊರ್ಮನ ಕೈ ತುಂಡಾಗುತ್ತದೆ.
ಕೆಂಡ ನುಂಗಿದ ಕಣ್ಣು, ಸೇಂದಿ ಹೀರಿದ ನಾಲಿಗೆ
ಜಪ ತಪಗಳ ಸ್ಖಲಿನಿಗಳ ಸೆರೆಯಾಳು!

ಗಾಳಿಯ ಜೊತೆ ಸೆಣಸಾಡಿ ಗಾಯಾಳು ತಾಯಿಯ ಎದೆಹಾಲಲ್ಲೂ ನೆತ್ತರದ ಬಣ್ಣ,
ಬೆಂಕಿ ಬಿದ್ದವರ ಮನೆಯ ಕಣ್ಣಲ್ಲೂ ನೀರು ಖಾಲಿಯಾಗಿದೆ!
ಸೊರಗಿದ ಸೊಬಗು ಸೋರುವ ಧರ್ಮತ್ವದ ಗಂಡಸುತನ
ಊರ ದೇವರ ಹೆಣ ಹೆರಲು ಅವ್ವ ಮತ್ತೆ ಬಸಿರಾಗುವಳು!

ಬೀದಿ ಗುಡಿಸುವ ಬಿಸಿಲು ನೆರಳಿನ ನೆತ್ತಿಗೆ ಮೊಳೆ ಜಡಿದು
ದವಾಖಾನೆಗೆ ದಾಖಲಾಗುವಷ್ಟರಲ್ಲಿ ಮುಟ್ಟಿಸಿಕೊಂಡವನು
ಮಡಿಯಾಗುವ ಮೊದಲೆ ಮುಟ್ಟಿದವನು ಹೆಣವಾಗುತ್ತಾನೆ!

ಹೂಳುವ ಜಾಗಕ್ಕೂ ಜಾತಿ ಬೇಲಿ, ಮನುಷ್ಯತ್ವ ಪೂರ್ತಿ ಖಾಲಿ!
ಎಲ್ಲರದೂ ಕೊಲ್ಲುವುದೇ ಕಾಯಕ ಆದರೂ ಇಲ್ಲಿ ಅಸಂಖ್ಯಾತರು ನಿರುದ್ಯೋಗಿಗಳೆ,
ಹಕ್ಕಿಗೆ ಗುಂಡಿಡುವ ಸಸ್ಯಹಾರತ್ವದ ಸರಕಿಗೆ ಈ ನೆಲ ತೀರಾ ಸಲೀಸಾದ ಸ್ವರ್ಗ!
ಅದೆಷ್ಟು ಬಾರಿ ಕೊಂದರೂ, ನೊಂದರೂ ಎದೆಸೀಳಿ ದೇಶಾಭಿಮಾನ ತೋರುತ್ತಲೇ ಒಂದು ವರ್ಗ!

ಅರೆನಗ್ನ ಪ್ರತಿಮೆ

ಉಸಿರು ಹಿಡಿದು ಎದೆಗೊದ್ದಾಗದೆಲ್ಲ ಬಿದ್ದದ್ದು
ರಾಮರಾಜ್ಯದ ಕನಸು.
ಚೂರುಗಳ ಆಯುತ್ತಾ ಹೋದಂತೆ ಸಿಕ್ಕಿದ್ದು ಹಸಿಗಾಯಗಳ ಹೆರಿಗೆ ನೋವು
ಹಸಿದ ಕಂಬನಿಗಳು ಅಳುತ್ತಲೇ ಇವೆ
ಕಣ್ಣರೆಪ್ಪೆ ಹೊಲಿದು ಬಿಡಿ,
ಬಟ್ಟೆ ಇಲ್ಲದವರ ಬೇನೆ ಕಂಡು ಚರಕವೂ ಸ್ತಬ್ಧವಾಗಿದೆ.

ರಕ್ತ ಮತ್ತು ಓಕುಳಿ ಒಂದೇ ಎನ್ನುವರ ಮನೆಯ ಹಬ್ಬದೂಟ ತಿನ್ನದೆ,
ಉಪವಾಸ ಕೂತವನ ಕಣ್ಣೊಳಗೂ ಹಸಿವಿತ್ತು.
ದಾರಿಗಳಿಗೆ ಹೆಜ್ಜೆ ಮೂಡುವ ಹೊತ್ತಲ್ಲಿ,
ಚಪ್ಪಲಿಗೆ ಚಲನೆ ಬರುತ್ತದೆ.
ಕಡಲ ಹನಿಗೆ ಉಪ್ಪು ಕರಗುವ ಹಾಗೆ.
ಕರದಲ್ಲೇ ಕರಗಿ ಹೋಗುತ್ತಾನೆ ನೀರಂತ ಮನುಷ್ಯ!

ಗರೀಬಿಯ ಗಾಯಕ್ಕೆ ಉಪ್ಪು ಸವರುವಾಗ
ಮರಿಯಾದ ಹತ್ಯೆಯಲಿ ಮಗಳು ಸತ್ತಾಗ,
ಬಡವನ ಬೆವರು, ಹಣವಂತನ ಹೆಣವ ತೊಳೆಯುವಾಗ,
ಅಲ್ಲೊಂದು ಪುತ್ಥಳಿಯ ಕೈಗೆ ಪೊರಕೆ ಬರುತ್ತದೆ.
ಕನ್ನಡಕ ಇನ್ನಷ್ಟು ಧೂಳಾಗುತ್ತದೆ!

ತಿಂಗಳೊಂದರ ಎರಡನೇ ತಾರೀಖಿಗೆ
ಹುಟ್ಟುವ ಈ ಪುತ್ಥಳಿ,
ಪ್ರತಿನಿತ್ಯವೂ ಸಾಯುತ್ತಿದೆ ಕಂಡವರ ಗುಂಡಿನ ಏಟಿಗೆ
ನೆತ್ತರ ಕಂಡವರು ರೋದಿಸಿದರೆ,
ಉಂಡವರು ಕೊಂದವನ ಕೊಂಡಾಡುತ್ತಾರೆ.

ಕೊಲ್ಲುವ ನಿಮ್ಮನ್ನು ಕೊಲ್ಲಲು ನಮಗೆ ಗುಂಡೆ ಬೇಕಾಗಿಲ್ಲ.
ಲೇಖನಿಯ ತುದಿಯ ಒಂದಿಷ್ಟು ಮಸಿಯು ಮನಸ್ಸು ಮಾಡಿದರೆ ಸಾಕು,
ಹೆಜ್ಜೆಗೊಂದು ಹೆಣ ಬೀಳುತ್ತದೆ.
ಆದರೆ, ನಾವು ಕೊಲ್ಲುವುದಿಲ್ಲ ಏಕೆಂದರೆ..
ನೀವೇ ಕೊಂದ ಗಾಂಧಿಯನ್ನು ನಂಬಿದವರು ನಾವು!

ಉರಿವ ನಕ್ಷತ್ರಗಳು ಉರಿದು ಬಿದ್ದು
ಬಿಸಿಲ ತಿನ್ನುವ ಬೀದಿ ಬಿಕ್ಕಳಿಸಿದರೂ
ಈ ಪುತ್ಥಳಿಗೆ ಮಾತ್ರ ಪುಢಾರಿತನದ ಇನಾಮು.
ಶಾಂತಿಯು ನಿತ್ಯ ಸಾಯುವಾಗ ಗುಂಡಿಗೇನು ಬರಗಾಲ
ಈಗೀಗ ಈ ಅರೆನಗ್ನ ಪ್ರತಿಮೆಗೂ ನಾಚಿಕೆಯಾಗಿರಬೇಕು
“ಮೇರಾ ಭಾರತ್ ಮಹಾನ್….” ಎನ್ನಲು!?

 

ಚಾಂದ್ ಪಾಷ ಎನ್ ಎಸ್

ಚಾಂದ್ ಪಾಷ ಎನ್ ಎಸ್

ಮೂಲತಃ ಕಲಬುರ್ಗಿಯವರಾದ ಚಾಂದ್ ಪಾಷ ಸೂಕ್ಷ್ಮ ಸಂವೇದನೆಯ ಕವಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ದಿ ಆಕ್ಸ್‌ಪsರ್ಡ್ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಮೌನದ ಮಳೆ’ 2015ರಲ್ಲಿ ಪ್ರಕಟವಾಯಿತು. ಚಿತ್ರ ಚಿಗುರುವ ಹೊತ್ತು ಇತ್ತೀಚಿನ ಕವನ ಸಂಕಲನ. ಚಾಂದ್ ಪಾಷ ಅವರ ಎರಡು ಕವಿತೆಗಳು ಇಲ್ಲಿವೆ


ಇದನ್ನೂ ಓದಿ: ಓದಲಿಕ್ಕಿದೆ ಕಾರಣ ಇಪ್ಪತ್ತೊಂದು! 2021ರಲ್ಲಿನ ನಿರೀಕ್ಷಿತ ಪುಸ್ತಕಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...