Homeಕರ್ನಾಟಕಹಳತು-ವಿವೇಕ: ರೈತರ ಸಾಲ ರದ್ದು ಹೇಗಾಗಬೇಕು? – ಪ್ರೊ. ಎಂಡಿಎನ್

ಹಳತು-ವಿವೇಕ: ರೈತರ ಸಾಲ ರದ್ದು ಹೇಗಾಗಬೇಕು? – ಪ್ರೊ. ಎಂಡಿಎನ್

- Advertisement -
- Advertisement -

ಸಂಪನ್ಮೂಲಗಳನ್ನು ಮಾನವ ಶಕ್ತಿಯ ಮೂಲಕ ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವುದೇ ಬಂಡವಾಳದ ಉತ್ಪಾದನೆ. ಈ ದೃಷ್ಟಿಯಲ್ಲಿ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇಕಡ 75 ಭಾಗ ಇರುವ ರೈತರು ಮತ್ತು ರೈತ ಕೂಲಿಕಾರರೇ ನಮ್ಮ ದೇಶದ ಎಲ್ಲಾ ಬಂಡವಾಳವನ್ನು ಸೃಷ್ಟಿಸುತ್ತಿರುವವರು ಹಾಗೂ ಹೆಚ್ಚಿಸುತ್ತಿರುವವರು

ಹೀಗಿದ್ದರೂ ಇವರೆಲ್ಲಾ ನಿರಂತರ ಸಾಲಗಾರರಾಗಿದ್ದಾರೆ. ಇದಕ್ಕೆ ಕಾರಣ ಏನು? ಇಂತಹ ಸಾಲದಿಂದ ಇವರನ್ನು ಹೇಗೆ ಮುಕ್ತಿಗೊಳಿಸಬೇಕು? ಇವರಿಗೆಲ್ಲಾ ಸಮಾನ ಸ್ಥಾನಮಾನ, ಸಮಾನ ಗೌರವ ಮತ್ತು ಸಮಾಜ ಜೀವನ ವ್ಯವಸ್ಥೆಯನ್ನು ಹೇಗೆ ಸ್ಥಾಪಿಸಬೇಕು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೇ ರೈತ ಚಳವಳಿಯ ವಿಜಾರ ಮತ್ತು ಉದ್ದೇಶ.

ಇದನ್ನೂ ಓದಿ: ರೈತ ಹೋರಾಟ 80ನೇ ದಿನಕ್ಕೆ: ಪ್ರೊ ಎಂ.ಡಿ ನಂಜುಂಡಸ್ವಾಮಿಯವರನ್ನು ನೆನೆದ ರೈತ ಒಕ್ಕೂಟ

ಇವುಗಳಿಗೆ ಕರ್ನಾಟಕ ರೈತರು ಉತ್ತರ ಕಂಡುಕೊಂಡಿದ್ದಾರೆ. ತಮ್ಮ ಸಾಲಕ್ಕೆ ಬೆಲೆ ಮೋಸ ಕಾರಣ, ಬೆಲೆ ಸಮಾನತೆಯೇ ಇಂತ ಸಾಲಗಳಿಂದ ಮುಕ್ತಿ ಪಡೆಯಲು ಪರಿಹಾರ, ಬೆಲೆ ಸಮಾನತೆಯ ಕಾನೂನು ರಚನೆಗಾಗಿ ಹೋರಾಡಿ ಜಯಗಳಿಸಿದರೆ ಮಾತ್ರ ಸಮಾನ ಜೀವನ ವ್ಯವಸ್ಥೆಯ ಸ್ಥಾಪನೆ ಸಾಧ್ಯ. ಇದನ್ನೆಲ್ಲಾ ಅಹಿಂಸಾತ್ಮಕ ಸತ್ಯಾಗ್ರಹದಿಂದ ಸ್ಥಾಪಿಸಲು ಪ್ರಯತ್ನಿಸಬೇಕು. ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಮಣಿಯದ ಕಳ್ಳ ಸರ್ಕಾರಗಳು ಎದುರಾದರೆ ರೈತರೇ ರಾಜಕೀಯ ಶಕ್ತಿಯಾಗಿ ತಮ್ಮ ಓಟಿನ ಶಕ್ತಿಯಿಂದ ರೈತರದ್ದೇ ಆದ ಸರ್ಕಾರ ಸ್ಥಾಪಿಸಿಕೊಂಡು ರೈತರಿಗೆ ಸಮಾನ ಗೌರವ ಸ್ಥಾನವನ್ನು ದಕ್ಕಿಸಿಕೊಳ್ಳಬೇಕು. ಇದು ಕರ್ನಾಟಕದ ರೈತ ಚಳುವಳಿಯ ಸ್ವಾಭಿಮಾನದ ಹೋರಾಟದ ವಿಚಾರ ಮತ್ತು ಕಾರ್ಯಕ್ರಮ.

ಕರ್ನಾಟಕದ ರೈತರ ಚಳವಳಿ ಮತ್ತು ಕಾರ್ಯಕ್ರಮ ಈ ದಿಕ್ಕಿನಲ್ಲಿ ನಡೆದಿದ್ದರೆ ನೆರೆ ರಾಜ್ಯವಾದ ಮಹಾರಾಷ್ಟ್ರದ ರೈತರ ಚಳವಳಿ ದಿಕ್ಕೆಟ್ಟಿದೆ. ದೇಶದ ಸಂಪತ್ತನ್ನು ದಿನೇ ದಿನೇ ಹೆಚ್ಚಿಸುತ್ತಿರುವ ನಾವು ರೈತರು ಸಾಲಗಾರರೇ ಅಲ್ಲ ಎಂದು ಕರ್ನಾಟಕದ ರೈತರು ಘೋಷಿಸಿಕೊಂಡಿದ್ದರೆ ಮಹಾರಾಷ್ಟ್ರದ ರೈತರು ಈ ಮುಖ್ಯ ವಿಷಯವನ್ನೇ ಮರೆತು ನಾವು ಪಾಪರಾಗಿದ್ದೇವೆ, ದಿವಾಳಿಯಾಗಿದ್ದೇವೆ ಎಂದು ಘೋಷಿಸಬೇಕೆಂದು ಮಹಾರಾಷ್ಟ್ರದ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ – ದಿ. ಎಂ. ಡಿ. ನಂಜುಂಡಸ್ವಾಮಿ

ಮಹಾರಾಷ್ಟ್ರದ ನ್ಯಾಯಾಲಯಗಳೇನಾದರೂ ಅಲ್ಲಿನ ರೈತರ ವಾದವನ್ನು ಒಪ್ಪಿ ಅವರೆಲ್ಲ ದಿವಾಳಿಗಳೆಂದು ಘೋಷಿಸಿದರೆ ಆಗುವ ಪರಿಣಾಮಗಳನ್ನು ಅವರೆಲ್ಲ ಯೋಚಿಸಿಲ್ಲ ಎಂದು ಕಾಣುತ್ತದೆ. ಅವರೆಲ್ಲರೂ ದಿವಾಳಿಗಳೆಂದು ನ್ಯಾಯಾಲಯ ಘೋಷಿಸಿದರೆ ಅವರೆಲ್ಲ ಇನ್ನು ಮುಂದೆ ಯಾವುದೇ ಹಣಕಾಸಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವ ಹಾಗೂ ಮತದಾನದ ಹಕ್ಕುಗಳನ್ನೆಲ್ಲ ಕಳೆದುಕೊಳ್ಳುತ್ತಾರೆ. ಭಾರತದ ರೈತರಿಗಿರುವ ಏಕೈಕ ಅಮೂರ್ತ ಶಕ್ತಿಯಾದ ಮತ ಶಕ್ತಿಯನ್ನೂ ಕಳೆದುಕೊಂಡು ರೈತ ಶಾಶ್ವತ ಜೀತಗಾರನಾಗುತ್ತಾನೆ. ಈ ಮೂಲಕ ಸಾಲಗಳಿಂದ ವಿಮುಕ್ತನಾಗುವುದಿರಲಿ, ಸಾಲದ ಶಿಶುವಾಗಿಯೇ ಉಳಿದು ಬಿದಡುತ್ತಾನೆ.

ಮಹಾರಾಷ್ಟ್ರದ ರೈತರು ಇಷ್ಟು ದಡ್ಡರೇ ಎಂದು ಯಾರಾದರೂ ಹುಬ್ಬೇರಿಸಬಹುದು. ಆದರೆ ಅವರು ದಡ್ಡರಲ್ಲ ಎನ್ನುವುದು ನಿಜವಾದರೂ ಅವರ ಚಳವಳಿಯ ನಾಯಕತ್ವವನ್ನು ಕೆಲವು ಬೇಜವಾಬ್ದಾರಿ ಹುಂಬರು ವಹಿಸಿಕೊಂಡಿದ್ದಾರೆ ಎನ್ನುವುದನ್ನು ಇನ್ನೂ ಗುರುತಿಸಿಕೊಂಡಿಲ್ಲದ ದಡ್ಡರು ಎಂದೇ ಹೇಳಬೇಕಾಗುತ್ತದೆ. ಈ ಹುಂಬ ನಾಯಕರು ಇದೊಂದು ಚಳವಳಿಯ ತಂತ್ರ! ಸಾಲ ಪಾವತಿಯನ್ನು ಅನಿರ್ದಿಷ್ಟ ಕಾಲ ತಪ್ಪಿಸಿಕೊಳ್ಳುವ ತಂತ್ರ ಎನ್ನುವ ಜಾಣ ವಾದವನ್ನು ಮಹಾರಾಷ್ಟ್ರದ ರೈತರ ಮುಂದಿಡಬಹುದು. ಆದರೆ, ಇಂತಹ ತಂತ್ರಗಳ ತಳಹದಿಯ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಅಥವಾ ಸತ್ಯದ ಆಧಾರದ ಮೇಲೆ ಹಾಗೂ ಸತ್ಯಾಗ್ರಹದ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಎನ್ನುವುದು ಅತಿ ಮುಖ್ಯವಾದ ಅಂಶ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಪರ ಪ್ರಚಾರ: ಒಕ್ಕೂಟ ಸರ್ಕಾರ ಖರ್ಚು ಮಾಡಿರುವ ಹಣ ಎಷ್ಟು ಗೊತ್ತೇ?

ಏಕೆಂದರೆ, ಸಮಾನತೆಯನ್ನು ತಂತ್ರಗಳ ಮೂಲಕ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ, ಅಸಮಾನತೆಯನ್ನು ಮುಂದುವರಿಸಬೇಕೆನ್ನುವವರ ಬಳಿ ತಂತ್ರಗಳಿಗೇನೂ ಅಭಾವವಿರುವುದಿಲ್ಲ. ಹಾಗೆಯೇ ಸಮಾನತೆಯನ್ನು ಯಾರೂ ಚಿನ್ನದ ತಟ್ಟೆಯಲ್ಲಿ ಅರ್ಪಿಸುವುದಿಲ್ಲ. ಅದನ್ನು ಹೋರಾಟದ ಮೂಲಕವೇ ದಕ್ಕಿಸಿಕೊಳ್ಳಬೇಕು. ಇದಕ್ಕೆ ತಾರ್ಕಿಕ ಹೋರಾಟದ ಮಾರ್ಗವೊಂದೇ ಇರುವ ದಾರಿ. ಸತ್ಯಾಗ್ರಹವೇ ಈ ಹೋರಾಟದ ಮಾರ್ಗ. ಇದೂ ಸೋತರೆ ಇರುವ ಇತರ ಏಕೈಕ ಮಾರ್ಗ ಅಧಿಕಾರಗ್ರಹಣ ಒಂದೇ.

ಮಹಾರಾಷ್ಟ್ರದ ರೈತರ ದಿಕ್ಕೆಟ್ಟಿರುವ “ಸಾಲ ಮುಕ್ತಿ” ಕಾರ್ಯಕ್ರಮ ತಾತ್ಕಾಲಿಕ ಎಂದೇ ಭಾವಿಸಬಹುದೇನೋ, ಏಕೆಂದರೆ ಈಗಾಗಲೇ ನ್ಯಾಯಾಲಯಗಳು ಅಲ್ಲಿ ಕಾರ್ಯೋನ್ಮುಖವಾಗುವ ಮೊದಲೇ ಪಟ್ಟಭದ್ರರ ಪ್ರತಿನಿಧಿಯಾದ ಮಹಾರಾಷ್ಟ್ರ ಸರ್ಕಾರ ಸಾಲ ವಸೂಲಿ ಪ್ರಾರಂಭಿಸಿದೆ. ಈ ಸರ್ಕಾರದ ಬತ್ತಳಿಕೆಯಲ್ಲಿ ಹಾಗೂ ಈಗಿರುವ ಬಂಡವಾಳಶಾಹಿ ಕಾನೂನಿನ ಬತ್ತಳಿಕೆಯಲ್ಲಿ ಬಹಳಷ್ಟು ಬಾಣಗಳಿವೆ.

ಇದನ್ನೂ ಓದಿ: ರೈತರಿಗೆ ಬೆಂಬಲ: ಹರಿಯಾಣದ ಪ್ರತಿ ಹಳ್ಳಿಗೂ ಹರಡಿದ ಮಹಾಪಂಚಾಯತ್ – ಗ್ರೌಂಡ್ ರಿಪೋರ್ಟ್

ಈ ಕಾರಣ ಮಹಾರಾಷ್ಟ ರೈತರ “ದಿವಾಳಿ ಚಳವಳಿಯೇ ದಿವಾಳಿಯಾಗಿ ಅವರ ಹೋರಾಟ ಸರಿಯಾದ ವಿಚಾರಕ್ಕೆ ಹಾಗೂ ದಿಕ್ಕಿಗೆ ತಿರುಗಿಯೇ ತಿರುಗುತ್ತದೆ” ಹೋರಾಟದ ವಿಚಾರ ಪೂರ್ಣ ಬದಲಾದಾಗ ಹೋರಾಟದ ಹುಂಬ ನಾಯಕತ್ವ ಕೂಡ ಪೂರ್ಣವಾಗಿ ಮಾಯವಾಗುತ್ತದೆ. ಇಂತಹ ಬದಲಾವಣೆಗಾಗಿ ದೇಶದ ಎಲ್ಲಾ ರೈತರೂ ಆಶಿಸೋಣ, ಶ್ರಮಿಸೋಣ.

31 ಅಕ್ಟೋಬರ್ 1988 ರಂದು ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರು ಬರೆದ ಈ ಲೇಖನವನ್ನು ರವಿಕುಮಾರ್ ಬಾಗಿ ಅವರು ಸಂಪಾದಿಸಿರುವ “ಹಳ್ಳಿ ಕಣ್ಣಲ್ಲಿ ಇಂಡಿಯ- ಪ್ರೊ. ಎಂ ಡಿ ನಂಜುಂಡಸ್ವಾಮಿ ಬರಹಗಳು” ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

ಇದನ್ನೂ ಓದಿ: ಗಂಗೂಲಿಯ ಹೃದಯಾಘಾತಕ್ಕೆ ಮರುಗುವ ಮೋದಿಗೆ 60 ಹುತಾತ್ಮ ರೈತರು ಕಾಣುತ್ತಿಲ್ಲ: ಯೋಗೇಂದ್ರ ಯಾದವ್ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...