Homeಕರ್ನಾಟಕಹಳತು-ವಿವೇಕ: ರೈತರ ಸಾಲ ರದ್ದು ಹೇಗಾಗಬೇಕು? – ಪ್ರೊ. ಎಂಡಿಎನ್

ಹಳತು-ವಿವೇಕ: ರೈತರ ಸಾಲ ರದ್ದು ಹೇಗಾಗಬೇಕು? – ಪ್ರೊ. ಎಂಡಿಎನ್

- Advertisement -
- Advertisement -

ಸಂಪನ್ಮೂಲಗಳನ್ನು ಮಾನವ ಶಕ್ತಿಯ ಮೂಲಕ ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವುದೇ ಬಂಡವಾಳದ ಉತ್ಪಾದನೆ. ಈ ದೃಷ್ಟಿಯಲ್ಲಿ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇಕಡ 75 ಭಾಗ ಇರುವ ರೈತರು ಮತ್ತು ರೈತ ಕೂಲಿಕಾರರೇ ನಮ್ಮ ದೇಶದ ಎಲ್ಲಾ ಬಂಡವಾಳವನ್ನು ಸೃಷ್ಟಿಸುತ್ತಿರುವವರು ಹಾಗೂ ಹೆಚ್ಚಿಸುತ್ತಿರುವವರು

ಹೀಗಿದ್ದರೂ ಇವರೆಲ್ಲಾ ನಿರಂತರ ಸಾಲಗಾರರಾಗಿದ್ದಾರೆ. ಇದಕ್ಕೆ ಕಾರಣ ಏನು? ಇಂತಹ ಸಾಲದಿಂದ ಇವರನ್ನು ಹೇಗೆ ಮುಕ್ತಿಗೊಳಿಸಬೇಕು? ಇವರಿಗೆಲ್ಲಾ ಸಮಾನ ಸ್ಥಾನಮಾನ, ಸಮಾನ ಗೌರವ ಮತ್ತು ಸಮಾಜ ಜೀವನ ವ್ಯವಸ್ಥೆಯನ್ನು ಹೇಗೆ ಸ್ಥಾಪಿಸಬೇಕು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೇ ರೈತ ಚಳವಳಿಯ ವಿಜಾರ ಮತ್ತು ಉದ್ದೇಶ.

ಇದನ್ನೂ ಓದಿ: ರೈತ ಹೋರಾಟ 80ನೇ ದಿನಕ್ಕೆ: ಪ್ರೊ ಎಂ.ಡಿ ನಂಜುಂಡಸ್ವಾಮಿಯವರನ್ನು ನೆನೆದ ರೈತ ಒಕ್ಕೂಟ

ಇವುಗಳಿಗೆ ಕರ್ನಾಟಕ ರೈತರು ಉತ್ತರ ಕಂಡುಕೊಂಡಿದ್ದಾರೆ. ತಮ್ಮ ಸಾಲಕ್ಕೆ ಬೆಲೆ ಮೋಸ ಕಾರಣ, ಬೆಲೆ ಸಮಾನತೆಯೇ ಇಂತ ಸಾಲಗಳಿಂದ ಮುಕ್ತಿ ಪಡೆಯಲು ಪರಿಹಾರ, ಬೆಲೆ ಸಮಾನತೆಯ ಕಾನೂನು ರಚನೆಗಾಗಿ ಹೋರಾಡಿ ಜಯಗಳಿಸಿದರೆ ಮಾತ್ರ ಸಮಾನ ಜೀವನ ವ್ಯವಸ್ಥೆಯ ಸ್ಥಾಪನೆ ಸಾಧ್ಯ. ಇದನ್ನೆಲ್ಲಾ ಅಹಿಂಸಾತ್ಮಕ ಸತ್ಯಾಗ್ರಹದಿಂದ ಸ್ಥಾಪಿಸಲು ಪ್ರಯತ್ನಿಸಬೇಕು. ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಮಣಿಯದ ಕಳ್ಳ ಸರ್ಕಾರಗಳು ಎದುರಾದರೆ ರೈತರೇ ರಾಜಕೀಯ ಶಕ್ತಿಯಾಗಿ ತಮ್ಮ ಓಟಿನ ಶಕ್ತಿಯಿಂದ ರೈತರದ್ದೇ ಆದ ಸರ್ಕಾರ ಸ್ಥಾಪಿಸಿಕೊಂಡು ರೈತರಿಗೆ ಸಮಾನ ಗೌರವ ಸ್ಥಾನವನ್ನು ದಕ್ಕಿಸಿಕೊಳ್ಳಬೇಕು. ಇದು ಕರ್ನಾಟಕದ ರೈತ ಚಳುವಳಿಯ ಸ್ವಾಭಿಮಾನದ ಹೋರಾಟದ ವಿಚಾರ ಮತ್ತು ಕಾರ್ಯಕ್ರಮ.

ಕರ್ನಾಟಕದ ರೈತರ ಚಳವಳಿ ಮತ್ತು ಕಾರ್ಯಕ್ರಮ ಈ ದಿಕ್ಕಿನಲ್ಲಿ ನಡೆದಿದ್ದರೆ ನೆರೆ ರಾಜ್ಯವಾದ ಮಹಾರಾಷ್ಟ್ರದ ರೈತರ ಚಳವಳಿ ದಿಕ್ಕೆಟ್ಟಿದೆ. ದೇಶದ ಸಂಪತ್ತನ್ನು ದಿನೇ ದಿನೇ ಹೆಚ್ಚಿಸುತ್ತಿರುವ ನಾವು ರೈತರು ಸಾಲಗಾರರೇ ಅಲ್ಲ ಎಂದು ಕರ್ನಾಟಕದ ರೈತರು ಘೋಷಿಸಿಕೊಂಡಿದ್ದರೆ ಮಹಾರಾಷ್ಟ್ರದ ರೈತರು ಈ ಮುಖ್ಯ ವಿಷಯವನ್ನೇ ಮರೆತು ನಾವು ಪಾಪರಾಗಿದ್ದೇವೆ, ದಿವಾಳಿಯಾಗಿದ್ದೇವೆ ಎಂದು ಘೋಷಿಸಬೇಕೆಂದು ಮಹಾರಾಷ್ಟ್ರದ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ – ದಿ. ಎಂ. ಡಿ. ನಂಜುಂಡಸ್ವಾಮಿ

ಮಹಾರಾಷ್ಟ್ರದ ನ್ಯಾಯಾಲಯಗಳೇನಾದರೂ ಅಲ್ಲಿನ ರೈತರ ವಾದವನ್ನು ಒಪ್ಪಿ ಅವರೆಲ್ಲ ದಿವಾಳಿಗಳೆಂದು ಘೋಷಿಸಿದರೆ ಆಗುವ ಪರಿಣಾಮಗಳನ್ನು ಅವರೆಲ್ಲ ಯೋಚಿಸಿಲ್ಲ ಎಂದು ಕಾಣುತ್ತದೆ. ಅವರೆಲ್ಲರೂ ದಿವಾಳಿಗಳೆಂದು ನ್ಯಾಯಾಲಯ ಘೋಷಿಸಿದರೆ ಅವರೆಲ್ಲ ಇನ್ನು ಮುಂದೆ ಯಾವುದೇ ಹಣಕಾಸಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವ ಹಾಗೂ ಮತದಾನದ ಹಕ್ಕುಗಳನ್ನೆಲ್ಲ ಕಳೆದುಕೊಳ್ಳುತ್ತಾರೆ. ಭಾರತದ ರೈತರಿಗಿರುವ ಏಕೈಕ ಅಮೂರ್ತ ಶಕ್ತಿಯಾದ ಮತ ಶಕ್ತಿಯನ್ನೂ ಕಳೆದುಕೊಂಡು ರೈತ ಶಾಶ್ವತ ಜೀತಗಾರನಾಗುತ್ತಾನೆ. ಈ ಮೂಲಕ ಸಾಲಗಳಿಂದ ವಿಮುಕ್ತನಾಗುವುದಿರಲಿ, ಸಾಲದ ಶಿಶುವಾಗಿಯೇ ಉಳಿದು ಬಿದಡುತ್ತಾನೆ.

ಮಹಾರಾಷ್ಟ್ರದ ರೈತರು ಇಷ್ಟು ದಡ್ಡರೇ ಎಂದು ಯಾರಾದರೂ ಹುಬ್ಬೇರಿಸಬಹುದು. ಆದರೆ ಅವರು ದಡ್ಡರಲ್ಲ ಎನ್ನುವುದು ನಿಜವಾದರೂ ಅವರ ಚಳವಳಿಯ ನಾಯಕತ್ವವನ್ನು ಕೆಲವು ಬೇಜವಾಬ್ದಾರಿ ಹುಂಬರು ವಹಿಸಿಕೊಂಡಿದ್ದಾರೆ ಎನ್ನುವುದನ್ನು ಇನ್ನೂ ಗುರುತಿಸಿಕೊಂಡಿಲ್ಲದ ದಡ್ಡರು ಎಂದೇ ಹೇಳಬೇಕಾಗುತ್ತದೆ. ಈ ಹುಂಬ ನಾಯಕರು ಇದೊಂದು ಚಳವಳಿಯ ತಂತ್ರ! ಸಾಲ ಪಾವತಿಯನ್ನು ಅನಿರ್ದಿಷ್ಟ ಕಾಲ ತಪ್ಪಿಸಿಕೊಳ್ಳುವ ತಂತ್ರ ಎನ್ನುವ ಜಾಣ ವಾದವನ್ನು ಮಹಾರಾಷ್ಟ್ರದ ರೈತರ ಮುಂದಿಡಬಹುದು. ಆದರೆ, ಇಂತಹ ತಂತ್ರಗಳ ತಳಹದಿಯ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಅಥವಾ ಸತ್ಯದ ಆಧಾರದ ಮೇಲೆ ಹಾಗೂ ಸತ್ಯಾಗ್ರಹದ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಎನ್ನುವುದು ಅತಿ ಮುಖ್ಯವಾದ ಅಂಶ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಪರ ಪ್ರಚಾರ: ಒಕ್ಕೂಟ ಸರ್ಕಾರ ಖರ್ಚು ಮಾಡಿರುವ ಹಣ ಎಷ್ಟು ಗೊತ್ತೇ?

ಏಕೆಂದರೆ, ಸಮಾನತೆಯನ್ನು ತಂತ್ರಗಳ ಮೂಲಕ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ, ಅಸಮಾನತೆಯನ್ನು ಮುಂದುವರಿಸಬೇಕೆನ್ನುವವರ ಬಳಿ ತಂತ್ರಗಳಿಗೇನೂ ಅಭಾವವಿರುವುದಿಲ್ಲ. ಹಾಗೆಯೇ ಸಮಾನತೆಯನ್ನು ಯಾರೂ ಚಿನ್ನದ ತಟ್ಟೆಯಲ್ಲಿ ಅರ್ಪಿಸುವುದಿಲ್ಲ. ಅದನ್ನು ಹೋರಾಟದ ಮೂಲಕವೇ ದಕ್ಕಿಸಿಕೊಳ್ಳಬೇಕು. ಇದಕ್ಕೆ ತಾರ್ಕಿಕ ಹೋರಾಟದ ಮಾರ್ಗವೊಂದೇ ಇರುವ ದಾರಿ. ಸತ್ಯಾಗ್ರಹವೇ ಈ ಹೋರಾಟದ ಮಾರ್ಗ. ಇದೂ ಸೋತರೆ ಇರುವ ಇತರ ಏಕೈಕ ಮಾರ್ಗ ಅಧಿಕಾರಗ್ರಹಣ ಒಂದೇ.

ಮಹಾರಾಷ್ಟ್ರದ ರೈತರ ದಿಕ್ಕೆಟ್ಟಿರುವ “ಸಾಲ ಮುಕ್ತಿ” ಕಾರ್ಯಕ್ರಮ ತಾತ್ಕಾಲಿಕ ಎಂದೇ ಭಾವಿಸಬಹುದೇನೋ, ಏಕೆಂದರೆ ಈಗಾಗಲೇ ನ್ಯಾಯಾಲಯಗಳು ಅಲ್ಲಿ ಕಾರ್ಯೋನ್ಮುಖವಾಗುವ ಮೊದಲೇ ಪಟ್ಟಭದ್ರರ ಪ್ರತಿನಿಧಿಯಾದ ಮಹಾರಾಷ್ಟ್ರ ಸರ್ಕಾರ ಸಾಲ ವಸೂಲಿ ಪ್ರಾರಂಭಿಸಿದೆ. ಈ ಸರ್ಕಾರದ ಬತ್ತಳಿಕೆಯಲ್ಲಿ ಹಾಗೂ ಈಗಿರುವ ಬಂಡವಾಳಶಾಹಿ ಕಾನೂನಿನ ಬತ್ತಳಿಕೆಯಲ್ಲಿ ಬಹಳಷ್ಟು ಬಾಣಗಳಿವೆ.

ಇದನ್ನೂ ಓದಿ: ರೈತರಿಗೆ ಬೆಂಬಲ: ಹರಿಯಾಣದ ಪ್ರತಿ ಹಳ್ಳಿಗೂ ಹರಡಿದ ಮಹಾಪಂಚಾಯತ್ – ಗ್ರೌಂಡ್ ರಿಪೋರ್ಟ್

ಈ ಕಾರಣ ಮಹಾರಾಷ್ಟ ರೈತರ “ದಿವಾಳಿ ಚಳವಳಿಯೇ ದಿವಾಳಿಯಾಗಿ ಅವರ ಹೋರಾಟ ಸರಿಯಾದ ವಿಚಾರಕ್ಕೆ ಹಾಗೂ ದಿಕ್ಕಿಗೆ ತಿರುಗಿಯೇ ತಿರುಗುತ್ತದೆ” ಹೋರಾಟದ ವಿಚಾರ ಪೂರ್ಣ ಬದಲಾದಾಗ ಹೋರಾಟದ ಹುಂಬ ನಾಯಕತ್ವ ಕೂಡ ಪೂರ್ಣವಾಗಿ ಮಾಯವಾಗುತ್ತದೆ. ಇಂತಹ ಬದಲಾವಣೆಗಾಗಿ ದೇಶದ ಎಲ್ಲಾ ರೈತರೂ ಆಶಿಸೋಣ, ಶ್ರಮಿಸೋಣ.

31 ಅಕ್ಟೋಬರ್ 1988 ರಂದು ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರು ಬರೆದ ಈ ಲೇಖನವನ್ನು ರವಿಕುಮಾರ್ ಬಾಗಿ ಅವರು ಸಂಪಾದಿಸಿರುವ “ಹಳ್ಳಿ ಕಣ್ಣಲ್ಲಿ ಇಂಡಿಯ- ಪ್ರೊ. ಎಂ ಡಿ ನಂಜುಂಡಸ್ವಾಮಿ ಬರಹಗಳು” ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

ಇದನ್ನೂ ಓದಿ: ಗಂಗೂಲಿಯ ಹೃದಯಾಘಾತಕ್ಕೆ ಮರುಗುವ ಮೋದಿಗೆ 60 ಹುತಾತ್ಮ ರೈತರು ಕಾಣುತ್ತಿಲ್ಲ: ಯೋಗೇಂದ್ರ ಯಾದವ್ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...