Homeಮುಖಪುಟಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

ಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

- Advertisement -
- Advertisement -

ಭಾರತದ ಮಾನವ ಹಕ್ಕುಗಳ ಆತಂಕಕಾರಿ ಪರಿಸ್ಥಿತಿ ಈಗಾಗಲೇ ಜಗತ್ತಿನ ಮುಂದೆ ಬಯಲಾಗಿರುವಂಥದ್ದು. ಒಂದೆಡೆ ತೀವ್ರ ಬಲಪಂಥೀಯ ದುಷ್ಕರ್ಮಿಗಳಿಂದ ದಲಿತರು, ಅಲ್ಪಸಂಖ್ಯಾತರು ಮತ್ತು ಇನ್ನಿತರ ತಳಸಮುದಾಯಗಳ ಜನರು ಹಲ್ಲೆಗೀಡಾಗುತ್ತಿದ್ದರೆ ಮತ್ತೊಂದೆಡೆ ಪ್ರಭುತ್ವ ಮತ್ತು ನ್ಯಾಯಾಂಗಗಳೂ ಕೂಡಾ ಮಾನವ ಹಕ್ಕುಗಳ ಹರಣಕ್ಕೆ ಕಾರಣವಾಗುತ್ತಿರುವ ದುರಂತಮಯ ಸನ್ನಿವೇಶ ನಮ್ಮೆದುರಿಗಿದೆ. ಭೀಮಾ ಕೋರೆಗಾಂವ್ ಕಾರ್ಯಕ್ರಮ ನಡೆಸಿದ ಕಾರಣಕ್ಕೆ ಹಲವು ನ್ಯಾಯವಾದಿಗಳೂ ಸೇರಿದಂತೆ ಹಿರಿಯ ಸಾಮಾಜಿಕ ಕಾರ್ಯಕರ್ತರನ್ನು ಒಂದೆಡೆ ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿರಿಸಲಾಗಿದ್ದರೆ, ರಾಜದ್ರೋಹದ ಪ್ರಕರಣದಡಿ ಅನಗತ್ಯವಾದ ಆರೋಪಗಳನ್ನು ಹೊರಿಸಿ ಬಂಧಿಸಲಾಗಿರುವ ಸಾಹಿತಿಗಳು, ಬುದ್ಧಿಜೀವಿಗಳು, ಹೋರಾಟಗಾರರ ಪಟ್ಟಿಯಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕವಿ, ಹೋರಾಟಗಾರ ವರವರರಾವ್ ಅವರಿಂದ ಹಿಡಿದು (ಈಚೆಗಷ್ಟೇ ಅನಾರೋಗ್ಯದ ಕಾರಣಕ್ಕೆ ಇವರಿಗೆ 6 ತಿಂಗಳ ಜಾಮೀನನ್ನು ನೀಡಲಾಗಿದೆ) ಭಾರತದ ಅತ್ಯಂತ ಪ್ರಖರ ಚಿಂತಕ, ದಲಿತ ಲೇಖಕರಲ್ಲೊಬ್ಬರಾದ ಆನಂದ್ ತೇಲ್ತುಂಬ್ಡೆಯವರ ತನಕ ಎಲ್ಲರನ್ನೂ ಇಂದು ಸರಳುಗಳ ಹಿಂದಿರಿಸಲಾಗಿರುವುದು ಈ ದೇಶದ ಪ್ರಜಾತಂತ್ರದ ದುಸ್ಥಿತಿಗೆ ಸಾಕ್ಷಿಯಾಗಿದೆ.

ಮೊದಲಿಗೂ ಮತ್ತು ಈಗಲೂ ಈ ಪಟ್ಟಿಯಲ್ಲಿ ಹಲವು ಮಹಿಳೆಯರ ಹೆಸರುಗಳೂ ಸೇರಿವೆ. ಭೀಮಾ ಕೋರೆಗಾಂವ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ಶೋಮಾ ಸೆನ್, ನ್ಯಾಯವಾದಿ ಸುಧಾ ಭಾರದ್ವಾಜ್ ಮುಂತಾದವರ ಬಂಧನವಾಗಿ ವರ್ಷಗಳೇ ಕಳೆದವು. ನಾಗರಿಕತ್ವ ತಿದ್ದುಪಡಿ ಕಾಯ್ದೆಯ ಕರಾಳತೆಯ ವಿರುದ್ಧ ದನಿಯೆತ್ತಿದವರು ಕೇಂದ್ರ ಸರ್ಕಾರ ಮತ್ತು ಗೃಹ ಇಲಾಖೆಗಳ ತದನಂತರದ ಬಲಿಪಶುಗಳಾದರೆ, ಇದೀಗ ರೈತ ಹೋರಾಟಗಾರರು ಮತ್ತವರ ಬೆಂಬಲಿಗರ ಸರದಿ.

ಸುಪ್ರಿಯಾ ಶರ್ಮ

ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ವಾರ್ಷಿಕ ವರದಿಯ ಪ್ರಕಾರ, 2020-21ರ ನಡುವಿನ ಮಾನವ ಹಕ್ಕುಗಳ ಉಲ್ಲಂಘನೆಯು 2020ರ ವರ್ಷದ ಆರಂಭದಿಂದಲೇ ಶುರುವಾಯಿತು. ಸಿಎಎ ವಿರೋಧಿ ಹೋರಾಟವನ್ನು ಅಮಾನ್ಯಗೊಳಿಸಲು ದೆಹಲಿಯಲ್ಲಿ ಸಂಘಪರಿವಾರ ಪ್ರೇರಿತವಾದ ಗಲಭೆಗಳಲ್ಲಿ ಸುಮಾರು 53 ಜನರು ಸತ್ತು ಅಪಾರ ಆಸ್ತಿಪಾಸ್ತಿ ನಷ್ಟವಾಯಿತು. ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ ಆ ಗಲಭೆಯನ್ನು ಸೃಷ್ಟಿಸಿದ ಆರೋಪದಲ್ಲಿ ಹಲವು ತಿಂಗಳುಗಳ ಕಾಲ ಬಂಧನಗಳು ಮತ್ತು ಬಂಧನದ ಭಯಾತಂಕಗಳನ್ನು ಹುಟ್ಟಿಸುವ ಕೆಲಸಗಳು ರಾಜಧಾನಿಯಲ್ಲಿ ಮತ್ತು ಇತರ ಹಲವು ನಗರಗಳಲ್ಲಿ ನಡೆದವು. ಸುಪ್ರಿಯಾ ಶರ್ಮ, ಸಂಗೀತಾ ಬರೂಹಾ, ರಾಣಾ ಅಯೂಬ್ ಮುಂತಾದ ಪತ್ರಕರ್ತೆಯರನ್ನೂ ಒಳಗೊಂಡು ಹಲವರನ್ನು ಆರೋಪಿಸಲಾಯಿತು.

ಕೋವಿಡ್‌ನ ಸಂದರ್ಭದಲ್ಲೂ ಕೂಡಾ ಹಲವು ಬಗೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದವೆಂದು ಹ್ಯೂಮನ್ ರೈಟ್ಸ್ ವಾಚ್‌ನ ದಕ್ಷಿಣ ಏಷ್ಯಾದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಉಲ್ಲೇಖಿಸುತ್ತಾರೆ. ಹಾಗೆಯೇ ಜಮ್ಮು ಕಾಶ್ಮೀರದ ವಿಶೇಷಾಧಿಕಾರ ಕಾಯ್ದೆಯನ್ನು ತೆಗೆದುಹಾಕಲಾದ ಸಂದರ್ಭದಲ್ಲೂ ಸಾರ್ವಜನಿಕ ಭದ್ರತಾ ಕಾಯ್ದೆಯ ಅಡಿಯಲ್ಲಿ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ನಡೆದ ಕಾನೂನು ಉಲ್ಲಂಘನೆಗಳ ದೊಡ್ಡಪಟ್ಟಿಯನ್ನೇ ನೀಡುತ್ತಾರೆ. ರಾಜಕೀಯ ಪ್ರೇರಿತ ಹಲ್ಲೆಗಳು, ಗೃಹಬಂಧನಗಳಿಂದ ಹಿಡಿದು ಇಂಟರ್ನೆಟ್ ಕಡಿತದ ತನಕ ಇದು ವಿಸ್ತರಿಸುತ್ತದೆ.

ಸಂಗೀತಾ ಬರೂಹಾ

ಈಚೆಗಷ್ಟೇ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಂಗಳೂರಿನ 21 ವರ್ಷದ ಪ್ರಕೃತಿ ಪ್ರೇಮಿ, ಸಾಮಾಜಿಕ ಕಳಕಳಿಯ ಪರಿಸರ ಕಾರ್ಯಕರ್ತೆ, ವಿದ್ಯಾರ್ಥಿನಿ ದಿಶಾ ರವಿಯ ಪ್ರಕರಣ ಈ ಎಲ್ಲದಕ್ಕೆ ಒಂದು ಜ್ವಲಂತ ನಿದರ್ಶನವಾಗಿದ್ದರೆ ಹರ್ಯಾಣದ ದಲಿತ ಸಾಮಾಜಿಕ ಕಾರ್ಯಕರ್ತೆ ನೌದೀಪ್ ಕೌರ್ ಪ್ರಕರಣ ಈ ಬಂಧನದ ಸರಣಿಗಳು ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಗೊಳಿಸುತ್ತಿವೆ. ದಿಶಾ ರವಿ ಪ್ರಕರಣದಲ್ಲಿ ಆಕೆಯ ಜಾಮೀನು ಮತ್ತು ಸುರಕ್ಷತೆಯ ಮನವಿಗಳನ್ನೂ ಪುರಸ್ಕರಿಸದೆ, ಈ ಹಿಂದೆಂದೂ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಿಲ್ಲದ ಸರಳವಾದ ವಿದ್ಯಾರ್ಥಿನಿಯೊಬ್ಬಳನ್ನು ನ್ಯಾಯಾಂಗ ಬಂಧನಕ್ಕೂ ನೀಡದೆ ಪೊಲೀಸ್ ಕಸ್ಟಡಿಗೆ ನೀಡಿದ್ದು ಅತ್ಯಂತ ಆಘಾತಕಾರಿಯಾಗಿತ್ತು. ಆಕೆಯ ಮೇಲೆ ಹೊರಿಸಲಾದ ಆರೋಪಗಳನ್ನು ನೋಡಿದರೆ, ಯೋಗ, ಚಹಾ ಮತ್ತು ಸರ್ಕಾರದ ರೈತವಿರೋಧಿ ನೀತಿಗಳನ್ನು ವಿಡಂಬನಾತ್ಮಕವಾಗಿ ಬಳಸಿ ಜಾಲತಾಣಗಳಲ್ಲಿ ಆಕೆ ಮಾಡಿದ ಕಮೆಂಟ್‌ಗಳೇ ದೇಶದ ಭದ್ರತೆಗೆ ಈಗಿರುವ ಅತಿದೊಡ್ಡ ಅಪಾಯವೆಂಬಂತೆ ಸರ್ಕಾರ ಬಿಂಬಿಸಲು ನೋಡುತ್ತಿದೆ.

ನೌದೀಪ್ ಕೌರ್

ಇಡೀ ವಿಶ್ವಕ್ಕೆ ಗೊತ್ತಿರುವ ಗ್ರೇಟ್ ಥನ್‌ಬರ್ಗ್ ಅವರ ಟೂಲ್‌ಕಿಟ್ ಟ್ವೀಟನ್ನು ಸರ್ಕಾರದ ವಿರುದ್ಧದ ಷಡ್ಯಂತ್ರ ಎಂಬ ಮಟ್ಟಕ್ಕೆ ಮೋದಿ ಸರ್ಕಾರ ತೆಗೆದುಕೊಂಡು ಹೋಗುತ್ತದೆಂದರೆ ಯಾವ ಮಟ್ಟದ ಫ್ಯಾಸಿಸ್ಟ್ ಪ್ರವೃತ್ತಿ ಆಡಳಿತದಲ್ಲಿ ಬೆಳೆದಿದೆಯೆಂಬುದು ತಿಳಿಯುತ್ತದೆ. ಹಾಗೆಯೇ ನೌದೀಪ್ ಎಂಬ ಹರ್ಯಾಣದ ಕುಂಡಲಿಯ ಯುವತಿಯ ಬಂಧನದ ಪ್ರಕರಣವೂ ಕೂಡಾ. ಅಲ್ಲಿನ ದಲಿತ ಮತ್ತು ಕಾರ್ಮಿಕರ ಸಮುದಾಯವನ್ನು ಸಂಘಟಿಸುತ್ತಾ, ಅದರೊಂದಿಗೆ ರೈತ ಆಂದೋಲನವನ್ನು ಬೆಸೆಯಲೆಂದು ಕೆಲಸ ಮಾಡುತ್ತಿದ್ದ ಸಂಘಟನೆಯ ನೌದೀಪ್ ಕೌರ್‌ರನ್ನು ಜನವರಿ ತಿಂಗಳ 12ರಂದು ಬಿಜೆಪಿ ಆಡಳಿತದಲ್ಲಿರುವ ಹರ್ಯಾಣದ ಪೊಲೀಸರು ಬಂಧಿಸಿದ್ದರು. ಆಕೆಯ ಮೇಲೆ ರಾಜದ್ರೋಹ, ದೇಶದ ಭದ್ರತೆಗೆ ಧಕ್ಕೆಯಂತಹವನ್ನೂ ಒಳಗೊಂಡು ಹೊರಿಸಲಾಗಿರುವ ಹಲವು ಆರೋಪಗಳ ಗಹನತೆಗೂ ಆಕೆಯ ಸಾಮಾಜಿಕ ಕೆಲಸಗಳ ಹಿನ್ನೆಲೆಗೂ ಅರ್ಥಾತ್ ಸಂಬಂಧವಿಲ್ಲ. ಇದನ್ನೇ ಆಕೆಯ ತಾಯಿ ಮತ್ತು ಮಗಳ ಹೋರಾಟಕ್ಕೆ ಸದಾ ಬೆಂಗಾವಲಾಗಿ ನಿಂತಿರುವ ಸಬರ್‌ಜೀತ್ ಕೌರ್ ಅವರೂ ಕೂಡಾ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಷ್ಟಾಗಿಯೂ ಆಕೆಗೆ ಜಾಮೀನು ದೊರೆಯಲು ಹೆಚ್ಚೂ ಕಡಿಮೆ ಎರಡು ತಿಂಗಳ ಸಮಯ ಬೇಕಾಯಿತು. ರೈತ ಆಂದೋಲನದ ವಾಸ್ತವಗಳನ್ನು ಬಿಚ್ಚಿಟ್ಟ ಪತ್ರಕರ್ತರ ಬಂಧನಗಳನ್ನೂ ನಾವು ನೋಡುತ್ತಿದ್ದೇವೆ.

ರಾಣಾ ಅಯೂಬ್

ಇದೇ ಸಂದರ್ಭದಲ್ಲಿ, ಇವೆಲ್ಲ ಬಂಧನಗಳ ಕಥೆಗಳಾದರೆ, ಬಂಧನಕ್ಕೊಳಗಾಗದೆ ರಾಜಾರೋಶವಾಗಿ ತಿರುಗಾಡುತ್ತಿರುವವರ ಇನ್ನೊಂದು ಮಗ್ಗುಲಿನ ಹಲವು ಕಥೆಗಳಿವೆ. ನಿಜಕ್ಕೂ ಕಾನೂನು ಉಲ್ಲಂಘನೆಯ ಕೆಲಸ ಮಾಡಿದ, ರೈತ ಆಂದೊಲನದಲ್ಲಿರಲಿ, ಸಿಎಎ ಹೋರಾಟದ ಸಂದರ್ಭದ ಗಲಭೆಯಲ್ಲಿರಲಿ ವಿಡಿಯೋ ಸಾಕ್ಷಾಧಾರಗಳ ಸಮೇತ ಕಂಡಿರುವ ಸಂಘಪರಿವಾರದ ಗೂಂಡಾಗಳು, ಜನಪ್ರತಿನಿಧಿಗಳು, ಅವರ ಬೆಂಬಲಿಗರ ಮೇಲೆ ಬಂಧನವಿರಲಿ ಒಂದು ಪ್ರಕರಣ ಕೂಡಾ ದಾಖಲಾಗಿಲ್ಲ ಎಂಬುದು ಆತಂಕದ ವಿಚಾರವಲ್ಲವೇ?
ಒಟ್ಟಿನಲ್ಲಿ ಬಂಧನಗಳ ವರಸೆಯಲ್ಲಿ ಸಾಮಾಜಿಕ ಕಾರ್ಯಕರ್ತೆರು, ಪತ್ರಕರ್ತೆಯರನ್ನೂ ಮೊದಲುಗೊಂಡು ಅನೇಕ ಮಹಿಳೆಯರನ್ನೂ ಬಲಿಪಶುವಾಗಿಸಲು ನೋಡುತ್ತಿರುವ ಸರ್ಕಾರದ ಇಂತಹ ಪ್ರಯತ್ನಗಳಿಗೆ ಈ ಎಲ್ಲ ದಿಟ್ಟ ಮಹಿಳೆಯರು ಗಟ್ಟಿಯಾಗಿ ಎದುರು ನಿಂತಿರುವುದು ಮತ್ತು ದಿಶಾ ರವಿ ಪ್ರಕರಣದಲ್ಲಿ ಮತ್ತು ಪ್ರಿಯಾ ರಮಣಿಯವರ ಪ್ರಕರಣಗಳಲ್ಲಿ ನ್ಯಾಯಾಧೀಶರು ವ್ಯಕ್ತಪಡಿಸಿರುವ ಸ್ಪಷ್ಟವಾದ ಅನಿಸಿಕೆಗಳ ಹಾಗೆ ಅವರನ್ನು ಬೆಂಬಲಿಸುವ ದನಿಗಳೂ ಸಹಾ ಕೇಳಿಬರುತ್ತಿರುವುದು ಸಮಾಧಾನದ ಸಂಗತಿ.

ಮಲ್ಲಿಗೆ

ಮಲ್ಲಿಗೆ
ಸಾಮಾಜಿಕ ಕಾರ್ಯಕರ್ತೆ, ಕರ್ನಾಟಕ ಜನಶಕ್ತಿಯ ಸಕ್ರಿಯ ಸದಸ್ಯರು


ಇದನ್ನೂ ಓದಿ: ಪ್ರಧಾನಿಗಳೇ ಎಂಎಸ್‌ಪಿ ಎಲ್ಲಿದೆ ತೋರಿಸಿ?: ಇಂದಿನಿಂದ ರಾಜ್ಯದಲ್ಲಿ ಆಂದೋಲನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...

ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳ: ತರೀಕೆರೆಯಲ್ಲಿ ಶಾಸಕ G.H ಶ್ರೀನಿವಾಸ್ ಅಭಿಮತ

ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್ (SIR) ವಿರೋಧಿ ಜನಜಾಗೃತಿ ಜಾಥಾದ ನಾಲ್ಕನೇ ದಿನದ ಪಯಣ ಇಂದು ತರೀಕೆರೆಗೆ ತಲುಪಿತು. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಜಾಥಾವನ್ನು, ತರೀಕೆರೆಯ ಜಾಗೃತ...

ಬೆಳಗಾವಿಯ ವಿವಿದೆಡೆ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬೆಳಗಾವಿಯ ವಿವಿಧ ಭಾಗಗಳಲ್ಲಿ ಸೋಮವಾರ (ಜೂ.15) ಜನಜಾಗೃತಿ ಜಾಥಾ ನಡೆಯಿತು. ಬಾಗಲಕೋಟೆಯಿಂದ ಆಗಮಿಸಿದ ಜಾಥಾ ತಂಡವನ್ನು ಯರಗಟ್ಟಿ ಪಟ್ಟಣದಲ್ಲಿ...

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾದ ಎಸ್‌ಐಆರ್ ವಿರೋಧಿ ಜಾಥಾ; ಜನಪರ ಸಂಘಟನೆಗಳ ಬೆಂಬಲ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಥಾ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಜಾಥಾದ ಮೂರನೇ ದಿನವಾದ ಇಂದು ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಗ್ರಾಮದಿಂದ ಆರಂಭವಾದ...