Homeಮುಖಪುಟ2014-2021ರವರೆಗೆ ಬಂಗಾಳದಲ್ಲಿ ಮೋದಿ ಭಾಷಣಗಳು: ಮಮತಾ ಪರವಿದ್ದ ಮೋದಿ ದಿಢೀರ್ ವಿರೋಧಿಯಾದ ಬಗೆ!

2014-2021ರವರೆಗೆ ಬಂಗಾಳದಲ್ಲಿ ಮೋದಿ ಭಾಷಣಗಳು: ಮಮತಾ ಪರವಿದ್ದ ಮೋದಿ ದಿಢೀರ್ ವಿರೋಧಿಯಾದ ಬಗೆ!

- Advertisement -
- Advertisement -

ರವಿವಾರ ಬಂಗಾಳದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರು ಮಮತಾ ಸರ್ಕಾರದ ವಿರುದ್ಧ ಪದಪುಂಜಗಳ ವಾಗ್ದಾಳಿ ನಡೆಸಿದರು. ಆದರೆ ಬಂಗಾಳ ನೆಲದಲ್ಲಿ 2014ರಿಂದ ಮೋದಿ ಮಾಡಿದ ಭಾಷಣಗಳ ಹೂರಣವೇನು? ಆಗ ದೀದಿ ಪರ ಧ್ವನಿ ಎತ್ತುತ್ತಿದ್ದ ಮೋದಿ ಈಗ ದೀದಿ ವಿರುದ್ಧ ನೆರ ದಾಳಿ ಮಾಡುತ್ತಿದ್ದಾರೆ…

‘ತೃಣಮೂಲ ಕಾಂಗ್ರೆಸ್ ಆಟ ಮುಗಿದಿದೆ (“ಖೇಲಾ ಶೇಷ್”)’ ಎಂದು ರವಿವಾರ ಭವಿಷ್ಯ ನುಡಿದ ಪ್ರಧಾನಿ, 2014ರಲ್ಲಿ ‘ದೆಹಲಿಯಲ್ಲಿ ನರೇಂದ್ರ ಮೋದಿ ಮತ್ತು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ’ಯವರನ್ನು ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದ್ದರು!

“ಆಪ್ಕೆ ದೋನೊ ಹಾಥ್ ಮೇ ಲಡ್ಡು”(ನಿಮ್ಮೆರಡೂ ಕೈಗಳಲ್ಲಿ ಲಡ್ಡು ಉಂಡೆ) ಎಂದು ಅವರು 2014 ರಲ್ಲಿ ಅದೇ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದಿದ್ದ ಚುನಾವಣಾ ರ‍್ಯಾಲಿಯಲ್ಲಿ ಹೇಳಿದ್ದರು.

ಎರಡು ವರ್ಷಗಳ ನಂತರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಬರುವ ಹೊತ್ತಿಗೆ, ಶಾರದಾ ಹಗರಣದ ಬಗ್ಗೆ ಮೋದಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ “ಸಿಂಡಿಕೇಟ್ ಸಂಸ್ಕೃತಿ” ತಲೆಯೆತ್ತಿದೆ ಎಂದು ಆಕ್ರಮಣ ಮಾಡಿದ್ದರು.

2019 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪುಲ್ವಾಮಾ-ಬಾಲಕೋಟ್ ಬಗ್ಗೆ ಪ್ರಸ್ತಾಪಿಸುತ್ತ, “ದೀದಿ ಮತ್ತು ಅವರ ಸ್ನೇಹಿತರು ರಾಷ್ಟ್ರದ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಮೋದಿ ಆರೋಪಿಸಿದರು.

ಅಭಿವೃದ್ಧಿಯ ಭರವಸೆ ಮತ್ತು “ಸೋನಾರ್ ಬಾಂಗ್ಲಾ” (ಚಿನ್ನದ ಬಂಗಾಳ) ಎಂಬುದು 2014 ರಿಂದ 2019 ರವರೆಗೆ ಮೋದಿಯವರ ಭಾಷಣಗಳಲ್ಲಿ ನಿರಂತರ ವಿಷಯವಾಗಿ ಉಳಿದಿದೆ. ಅವರು ಭಾನುವಾರ “ಅಸೋಲ್ ಪೊರಿಬೊರ್ತನ್” (ನೈಜ ಅಭಿವೃದ್ಧಿ) ಕುರಿತು ಮಾತನಾಡಿದರು.

ಈ ಹಿಂದೆ ಮೋದಿ ಇದೇ ಮೈದಾನದಲ್ಲಿ, “ನಾನು ಬಂಗಾಳದ ಜನರೊಂದಿಗೆ ನೇರವಾಗಿ ಮಾತನಾಡಲು ಬಯಸುತ್ತೇನೆ” ಎಂದು ಮೋದಿ ಫೆಬ್ರವರಿ 5, 2014 ರಂದು ಬ್ರಿಗೇಡ್‌ನಲ್ಲಿ ಜನಚೇತನ ಸಭೆಗೆ ತಿಳಿಸಿದರು. “ಈ ಬಾರಿ ಎಲ್ಲಾ [ಲೋಕಸಭಾ] ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡಿ. ನೀವು ಬಂಗಾಳದಲ್ಲಿ 34 ವರ್ಷಗಳ ಎಡ ಆಡಳಿತವನ್ನು ಕೊನೆಗೊಳಿಸಿದ್ದೀರಿ. ನೀವು ಇಲ್ಲಿ ಹೊಸ ಸರ್ಕಾರವನ್ನು ಹೊಂದಿದ್ದೀರಿ. ಮಮತಾ ಬ್ಯಾನರ್ಜಿ ನಿಮಗಾಗಿ ಇಲ್ಲಿ ಕೆಲಸ ಮಾಡಲಿ. ಫಲಿತಾಂಶಗಳ ಬಗ್ಗೆ ಅವರನ್ನು ಪ್ರಶ್ನಿಸಿ. ನನಗೆ ಬಂಗಾಳದಿಂದ ಎಲ್ಲಾ ಸ್ಥಾನಗಳನ್ನು ನೀಡಿ, ದೇಶದಲ್ಲಿ ಪೊರಿಬೋರ್ತನ್ ತರಲು. ನಾವು ದೆಹಲಿಯಲ್ಲಿ ಏನು ಮಾಡುತ್ತೇವೆ ಎಂಬ ಕುರಿತು ನನ್ನನ್ನು ಪ್ರಶ್ನಿಸಿ. ಆಪ್ಕೆ ದೋನೊ ಹಾಥ್ ಮೇ ಲಡ್ಡು……’ ಎಂದಿದ್ದರು.

“ಬಂಗಾಳದ ಭವಿಷ್ಯವನ್ನು ಬದಲಾಯಿಸಲು ರಾಜ್ಯ ಸರ್ಕಾರದ ಉತ್ತಮ ಕೆಲಸಗಳು ಮಾತ್ರ ಸಾಕಾಗುವುದಿಲ್ಲ” ಎಂದು ಮೋದಿ ಹೇಳಿದ್ದರು. “ದೆಹಲಿಯ ಸರ್ಕಾರವು ಬಂಗಾಳಕ್ಕೂ ಕೆಲಸ ಮಾಡಬೇಕು. ನೀವು ಬದಲಾವಣೆಯನ್ನು ತಂದರೆ (ದೆಹಲಿಯಲ್ಲಿ) ನಾವು ಸೋನಾರ್ ಬಾಂಗ್ಲಾವನ್ನು ಮರಳಿ ತರುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ”

2014 ರಲ್ಲಿ ಬಂಗಾಳದಿಂದ ಎರಡು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.
ಏಪ್ರಿಲ್ 17, 2016 ರಂದು ವಿಧಾನಸಭಾ ಚುನಾವಣೆಗೆ ಮುನ್ನ ಮೋದಿ ಕೋಲ್ಕತಾ ಮೈದಾನದ ಸಾಹಿದ್ ಮಿನಾರ್ ಮೈದಾನದಲ್ಲಿ ಮಾತನಾಡಿದರು. “ವಿವೇಕಾನಂದ ಸೇತುವೆ ಕುಸಿತದಲ್ಲಿ ಪ್ರಾಣ ಕಳೆದುಕೊಂಡ 27 ಮುಗ್ಧ ಜನರ ಅಪರಾಧವೇನು” ಎಂದು ಅವರು ಕೇಳಿದರು. “ಶಾರದ (ಹಗರಣ) ದಲ್ಲಿ ಕಂಡುಬರುವ ಅದೇ ಜನರನ್ನು ಶಾರದಾ (ಚಿಟ್ ಫಂಡ್ ಹಗರಣ) ಮತ್ತು ವಿವೇಕಾನಂದ ಸೇತುವೆ ದುರಂತದಲ್ಲೂ ಕಾಣಬಹುದು. ಈ ಜನರು ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಿಂಡಿಕೇಟ್ ಸಂಸ್ಕೃತಿಯನ್ನು ಮುಂದುವರಿಸಲು ಅನುಮತಿಸಬೇಕೇ? ಈ ಸಂಸ್ಕೃತಿ ಮುಂದುವರಿದರೆ ಬಂಗಾಳ ಉಳಿಯುತ್ತದೆಯೇ? ಎಡಪಂಥೀಯರು ಬಿಟ್ಟುಹೋದ ಎಲ್ಲಾ ತೊಂದರೆಗಳನ್ನು ದೀದಿ ಹೆಚ್ಚಿಸಿದ್ದಾರೆ… ”

“ಪೂರ್ವ ಭಾರತವನ್ನು ಅಭಿವೃದ್ಧಿಪಡಿಸುವುದು” ತನ್ನ ಕನಸು ಎಂದು ಮೋದಿ ಹೇಳಿದ್ದರು. “ನನ್ನ ಮೊದಲ ಕಾರ್ಯಸೂಚಿ ಅಭಿವೃದ್ಧಿ. ನನ್ನ ಎರಡನೇ ಕಾರ್ಯಸೂಚಿ ಅಭಿವೃದ್ಧಿಯ ವೇಗ… ನನ್ನ ಮೂರನೇ ಕಾರ್ಯಸೂಚಿ ಅಭಿವೃದ್ಧಿಯಲ್ಲಿಯೇ ಎಲ್ಲ” ಎಂದು ಹೇಳಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನಗಳನ್ನು ಗೆದ್ದಿತ್ತು; ಅದರ ಮಿತ್ರ ಜಿಜೆಎಂ ಡಾರ್ಜಿಲಿಂಗ್ ಹಿಲ್ಸ್‌ನಲ್ಲಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಏಪ್ರಿಲ್ 3, 2019 ರಂದು ಪ್ರಧಾನಿ ಮತ್ತೆ ಬ್ರಿಗೇಡ್‌ನಲ್ಲಿ ಮಾತನಾಡಿದರು. ಪುಲ್ವಾಮ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 46 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ ಬಾಲಕೋಟ್ ವಾಯುದಾಳಿಗಳನ್ನು ಪ್ರಶ್ನಿಸಿದ್ದಕ್ಕಾಗಿ ಅವರು, ಮಮತಾ ಮತ್ತು ಉಳಿದ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.

“ನಾವು ಸ್ವಾಮಿ ವಿವೇಕಾನಂದರು ಕಲ್ಪಿಸಿಕೊಂಡ ಭಾರತದತ್ತ ಸಾಗುತ್ತಿರುವ ಸಮಯದಲ್ಲಿ, ಮೋದಿಯನ್ನು ವಿರೋಧಿಸುವ ಸಲುವಾಗಿ ಮಾ ಭಾರತಿ ವಿರುದ್ಧ ಮಾತನಾಡುತ್ತಿರುವ ಕೆಲವರು ಇದ್ದಾರೆ… ದೀದಿ ಮತ್ತು ಅವರ ಸ್ನೇಹಿತರು ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾರಣ ರಾಷ್ಟ್ರದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದರು.

ಜನವರಿ 19, 2019 ರಂದು ಬ್ರಿಗೇಡ್‌ನಲ್ಲಿ ಮಮತಾ ಅವರು ಕರೆದಿದ್ದ ‘ಯುನೈಟೆಡ್ ಇಂಡಿಯಾ’ ರ‍್ಯಾಲಿಯನ್ನು ಉಲ್ಲೇಖಿಸಿ ಮೋದಿ ಹೀಗೆ ಹೇಳಿದ್ದರು: “ದೇಶದ ವಿವಿಧ ಭಾಗಗಳ ರಾಜಕೀಯ ಮುಖಂಡರು ಇಲ್ಲಿ ಜಮಾಯಿಸಿ ಕೈ ಎತ್ತಿ ‘ಮೋದಿ ಹಠಾವೊ, ಮೋದಿ ಹಠಾವೊ’ ಎಂದರು. ಏಕೆ? ಮೋದಿಯವರು ಯಾವ ಅಪರಾಧ ಮಾಡಿದ್ದಾರೆ? ಮನೆಗಳಿಗೆ ಶೌಚಾಲಯ ನೀಡುವುದು ಅಪರಾಧವೇ? ಬಡವರಿಗೆ ಮನೆ ಕೊಡುವುದು ಅಪರಾಧವೇ? ಮನೆಗಳಲ್ಲಿ ವಿದ್ಯುತ್ ನೀಡುವುದು ಅಪರಾಧವೇ? ”

2019 ರ ಲೋಕಸಭಾ ಚುನಾವಣೆಯಲ್ಲಿ 42 ರಲ್ಲಿ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.
ಆದರೆ, ಈ ಸಲವು ವಿಧಾನಸಭೆ ಚುನಾವಣೆಯಲ್ಲಿ ಮಮತಾ ಪಕ್ಷವೇ ಫೆವರಿಟ್ ಆಗಿದೆ. ಈಗ ಮತ್ತೆ ಮೋದಿ ಖೇಲ್ ಖತಂ ಅಂತಹ ಪದಪುಂಜ ಬಳಸುತ್ತಿದ್ದಾರೆ. ಮಮತಾ ಗ್ಯಾಸ್ ದರ ಏರಿಕೆ, ನಿರುದ್ಯೋಗ, ಆರ್ಥಿಕ ದಿವಾಳಿತನದಂತಹ ನೈಜ ಸಮಸ್ಯೆಗಳ ಬಗ್ಗೆ ಮಾತನಾಡುತ್ತಲೇ, ‘ದಂಗಾಬಾಜ್’ಗಳ ವಿರುದ್ಧ ‘ಖೇಲಾ ಹೋಬೆ’ ಎಂದು ಘರ್ಜಿಸುತ್ತಿದ್ದಾರೆ….ಸದ್ಯದಲ್ಲೇ ಅಲ್ಲಿ ಕೃಷಿ ಕಾಯ್ದೆ ವಿರೋಧಿಸುತ್ತಿರುವ ರೈತ ನಾಯಕರು ಬಿಜೆಪಿ ವಿರುದ್ಧ ಮಹಾ ಪಂಚಾಯತ್ ನಡೆಸಲಿದ್ದಾರೆ… ಖೇಲಾ ಹೋಬೆ…, ಆಟ ಶುರು…

-ಪಿ.ಕೆ ಮಲ್ಲನಗೌಡರ್
(ಮಾಹಿತಿ: ಇಂಡಿಯನ್ ಎಕ್ಸ್‌ಪ್ರೆಸ್)


ಇದನ್ನೂ ಓದಿ: ‘ಖೇಲಾ ಹೋಬೆ’ಗೆ ‘ಖೇಲ್ ಖತಂ’ ಎಂದ ಪ್ರಧಾನಿ: ‘ಉಜ್ವಲಾ-ಜುಮ್ಲಾ’ ಎಂದು ದಾಳಿ ಮಾಡಿದ ದೀದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...