Homeಅಂಕಣಗಳುಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ

ಗೌರಿ ಕಾರ್ನರ್: ಕೋಮುವಾದಿಗಳ ನಡುವೆ ಇಂಥವರೂ ಉಂಟು; ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉದಾಹರಣೆಗಳು ಅಸಂಖ್ಯಾತ

- Advertisement -
- Advertisement -

ಸಂಘಟಿತ ಸಂಸ್ಕೃತಿಯು ಹೇಗೆ ಜನರನ್ನು ಒಂದುಗೂಡಿಸುತ್ತದೆ; ಆದರೆ ಅದರ ವಿರುದ್ಧವಾಗಿ ಪರಿಶುದ್ಧತೆಯ ವಾದ ಹೇಗೆ ಜನಾಂಗವನ್ನು ಪ್ರತ್ಯೇಕಿಸುತ್ತದೆ ಎಂಬುದರ ಬಗ್ಗೆ ಇತ್ತೀಚೆಗೆ ಆಸ್ಕರ್ ಆಲಿ ಇಂಜಿನಿಯರ್‌ರವರ ಲೇಖನವೊಂದನ್ನು ಓದಿದೆ. ಅದರಲ್ಲಿ ಇಂಜಿನಿಯರ್‌ರವರು ಎಷ್ಟೊಂದು ಉತ್ತಮ ಉದಾಹರಣೆಗಳನ್ನು ಕೊಟ್ಟಿದ್ದಾರೆಂದರೆ, ಅವುಗಳು ಜಾಣ-ಜಾಣೆಯರನ್ನು ತಲುಪಲೇಬೇಕು ಎಂದು ಇಲ್ಲಿ ಹಲವನ್ನು ನೀಡುತ್ತಿದ್ದೇನೆ.

ಎಲ್ಲಾ ಧರ್ಮಗಳ ಪರಿಶುದ್ಧತೆಯನ್ನು ಕಾಪಾಡಬೇಕು ಎನ್ನುವವರು ಸಂಘಟಿತ ಸಂಸ್ಕೃತಿಯನ್ನು ಒಪ್ಪುವುದೇ ಇಲ್ಲ. ಅವರಿಗೆ ’ಶುದ್ಧ ಹಿಂದೂ’ ಅಥವಾ ’ಶುದ್ಧ ಇಸ್ಲಾಂ’ ಧರ್ಮ ಮಾತ್ರ ಮುಖ್ಯವಾಗಿರುತ್ತದೆ. ಆದರೆ ಇಂತಹ ’ಶುದ್ಧ’ತೆ ಜನಸಾಮಾನ್ಯರಿಂದ ದೂರವಾಗಿಯೇ ಉಳಿಯುತ್ತದೆ. ಉದಾಹರಣೆಗೆ ‘ಶುದ್ಧ ಧರ್ಮ’ದ ಪ್ರತಿಪಾದಕರಾದ ಬ್ರಾಹ್ಮಣರು ಸಂಸ್ಕೃತದಲ್ಲಿ ಮತ್ತು ಉಲೆಮಾಗಳು ಅರಬ್ಬೀ ಭಾಷೆಯಲ್ಲಿ ಬರೆಯುತ್ತಿದ್ದರು. ಜನರ ಆಡುಭಾಷೆಗೂ ಇವರ ಕೃತಿಗಳ ಭಾಷೆಗೂ ಯಾವುದೇ ಸಂಬಂಧವಿರದಿದ್ದ ಕಾರಣ ಅವು ಜನಪ್ರಿಯವಾಗಲೇ ಇಲ್ಲ. ಆದರೆ ಅದೇ ಹಿಂದೂ ಸಂತರು, ಮುಸ್ಲಿಂ ಸೂಫಿಗಳು ಜನರ ಭಾಷೆಯಲ್ಲಿ ಕೃತಿಗಳನ್ನು ರಚಿಸಿದರು. ಹಾಗೆ ಮಾಡಿದ್ದರಿಂದಲೇ ಅವರು ಜನಪ್ರಿಯರಾದರಲ್ಲದೇ, ಭಾರತದಲ್ಲಿ ಧರ್ಮಗಳ ನಡುವಿನ ಭೇದಭಾವಗಳನ್ನು ಸಡಿಲಗೊಳಿಸುವುದರಲ್ಲೂ ಯಶಸ್ವಿಯಾದರು.

ಹದಿನಾಲ್ಕನೇ ಶತಮಾನದಲ್ಲಿದ್ದ ಖುಸ್ರೋ ಎಂಬ ಪರ್ಶಿಯನ್ ಕವಿ, ತನ್ನ ಪ್ರಾಂತಭಾಷೆಯಲ್ಲೂ ಪದ್ಯಗಳನ್ನು ರಚಿಸಿದ್ದಕ್ಕೆ ಇವತ್ತಿಗೂ ಆತನ ಪದ್ಯಗಳು ಜನರ ನಾಲಗೆಗಳಲ್ಲಿ ಜೀವಂತವಾಗಿದೆ; ಭಾಷೆಗೂ ಧರ್ಮಕ್ಕೂ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ರಸ್ ಖಾನ್ ಮತ್ತು ರಹೀಂ ಎಂಬ ಅವಧ್ ಕವಿಗಳು ಕೃಷ್ಣನ ಭಕ್ತರಾಗಿದ್ದರು. ಹಸ್‌ರತ್ ಮೊಹನಿ ಎಂಬ ಇನ್ನೋರ್ವ ಕವಿಗೆ ಕೃಷ್ಣನ ಬಗ್ಗೆ ಎಂತಹ ಪ್ರೇಮ ಎಂದರೆ ಪ್ರತಿ ಕೃಷ್ಣ ಜನ್ಮಾಷ್ಟಮಿಯಂದು ತಪ್ಪದೇ ಬೃಂದಾವನಕ್ಕೆ ಭೇಟಿ ನೀಡುತ್ತಿದ್ದ.

ಇಂತಹವರು ಬೀರಿದ ಪ್ರಭಾವದಿಂದಲೇ ಶತಶತಮಾನಗಳ ಕಾಲ ಮೊಹರಂನಲ್ಲಿ ಹಿಂದೂಗಳು ಭಾಗವಹಿಸುತ್ತಿದ್ದರು; ರಾಮಲೀಲೆ ನಾಟಕಗಳಲ್ಲಿ ಮುಸ್ಲಿಂ ಯುವಕರು ರಾಮ, ಹನುಮಂತನ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.

ಬರೋಡಾದಲ್ಲಿ ಅಬ್ದುಲ್ ರಶೀದ್ ಇಸ್ಮಾಯಿಲ್ ಎಂಬ ವೃದ್ಧರೊಬ್ಬರಿದ್ದಾರೆ. ಈತ ಜನಿಸಿದ್ದು ಇಸ್ಲಾಂ ಧರ್ಮದಲ್ಲಾದರೂ ಪ್ರವೃತ್ತಿಯಲ್ಲಿ ಈತ ಹಿಂದೂ. ಈತ ಎಂತಹ ಗಣೇಶನ ಭಕ್ತಾದಿ ಎಂದರೆ, ಬರೋಡಾ ವಿಶ್ವವಿದ್ಯಾಲಯದಲ್ಲಿರುವ ಗಣೇಶನ ಗುಡಿಗೆ ಈತನೇ ಅಧಿಕೃತ ಪೂಜಾರಿ. ಸಂಸ್ಕೃತ ಪಂಡಿತರೂ ಆದ ಇಸ್ಮಾಯಿಲ್‌ರವರು ಶ್ಲೋಕಗಳನ್ನು ಪಠಿಸುತ್ತಾರೆ; ಬೆಳಗ್ಗೆ ಮತ್ತು ಸಂಜೆ ಗಣೇಶನಿಗೆ ಪೂಜೆ ಸಲ್ಲಿಸುತ್ತಾರೆ. ’ಇಲ್ಲಿಯ ಮುಸ್ಲಿಂ ಬ್ರಾಹ್ಮಣ ನಾನು’ ಎಂದು ನಗುತ್ತಾರೆ ಎಲ್ಲರಿಗೆ ‘ಚಾಚಾ’ ಆಗಿರುವ ಇಸ್ಮಾಯಿಲ್.

ಮುಂಬೈಯಲ್ಲಿ ಗುಲಾಂ ದಸ್ತಗಿರ್ ಎಂಬುವವರು ಮುಸ್ಲಿಂ ವೇದಗಳ ಪಂಡಿತ. ಈತನ ಬಳಿ ಇರುವ ಹಲವಾರು ಪುಸ್ತಕಗಳಲ್ಲಿ ಕುರಾನಿನ ಸಂಸ್ಕೃತ ಅನುವಾದವೂ ಒಂದು. ದಸ್ತಗಿರ್‌ರವರು ಎಂತಹ ಪ್ರಚಂಡ ಹಿಂದೂ ಪಂಡಿತರೆಂದರೆ ಇವರ ಪ್ರವಚನಗಳನ್ನು ಕೇಳಲು ದೇಶದ ವಿವಿಧ ಭಾಗಗಳಿಂದ ಆಹ್ವಾನಗಳು ಬರುತ್ತಿರುತ್ತವೆ.

ದೆಹಲಿ ನಿವಾಸಿಯಾಗಿರುವ ಜ್ಯೋತಿ ಪಾಂಡೆ ಎಂಬುವವರು ಹಿಂದೂ ಧರ್ಮಕ್ಕೆ ಸೇರಿದ್ದರೂ ಅವರ ಮೇಲೆ ಇಸ್ಲಾಮಿನ ಶಿಯಾ ಪಂಕ್ತಿ ಎಂತಹ ಪ್ರಭಾವ ಬೀರಿದೆ ಎಂದರೆ ಆತ ಮಹಮದ್ ಪೈಗಂಬರ್‌ರವರ ಮೊಮ್ಮಗ ಇಮ್ಮಾಮ್ ಹುಸೇನ್‌ರ ಭಕ್ತ. ಇಮ್ಮಾಮ್ ಹುಸೇನ್ ಕುರಿತಂತೆ ಇವರು ಶುದ್ಧ ಉರ್ದುವಿನಲ್ಲಿ ಚರಮಗೀತೆಗಳನ್ನು ಹಾಡುತ್ತಾರೆ.

ಗುರು ನಾನಕ್ ಸ್ಥಾಪಿಸಿದ ಸಿಖ್ ಧರ್ಮವೂ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಅಂಶಗಳನ್ನು ಹೊಂದಿದೆ. ಮುಸ್ಲಿಂರ ಪವಿತ್ರ ಸ್ಥಳವಾದ ಮೆಕ್ಕಾಗೂ ಭೇಟಿ ನೀಡಿದ್ದ ಗುರುನಾನಕ್ ತಮ್ಮ ಗುರುದ್ವಾರವನ್ನು ನಿರ್ಮಿಸಲು ಹೊರಟಾಗ ಅದರ ಅಡಿಗಲ್ಲನ್ನು ಹಾಕಲು ಮುಸ್ಲಿಂ ಸೂಫಿ ಮಿಯಾನ್ ಮಿರ್ ಅವರನ್ನು ಆಹ್ವಾನಿಸಿದ್ದರು.
ಅಷ್ಟೇ ಏಕೆ ದೇಶ ವಿಭಜನೆಯಾಗುವವರೆಗೂ ಹಲವಾರು ಗುರುದ್ವಾರಗಳಲ್ಲಿ ಗುರುಗ್ರಂಥ್ ಸಾಹೀಬ್ ಅನ್ನು ಹಾಡುತ್ತಿದ್ದದ್ದು ಈಗ ಪಾಕಿಸ್ತಾನದಲ್ಲಿರುವ ಪಂಜಾಬಿನ ಮುಸ್ಲಿಂ ’ರಾಗಿ’ಗಳೇ.

ಕರ್ನಾಟಕದ ಬಾಬಾಬುಡನ್‌ಗಿರಿಯಲ್ಲಿನ ಧಾರ್ಮಿಕ ಭಾವೈಕ್ಯತೆ ಎಲ್ಲರಿಗೂ ಗೊತ್ತಿದೆ. ಇದರಂತೆ ಮಹಾರಾಷ್ಟ್ರದ ಕಲ್ಯಾಣ್ ಎಂಬ ಜಾಗದಲ್ಲಿ ಹಾಜಿ ಮಾಲಂಗ್ ದರ್ಗ ಎಂಬುದೊಂದಿದೆ. ಎಷ್ಟೋ ತಲೆಮಾರುಗಳಿಂದ ಈ ದರ್ಗದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವುದು ಓರ್ವ ಬ್ರಾಹ್ಮಣ ಸಂಸಾರ.

ಹಲವಾರು ದಶಕಗಳಿಂದ ಈ ದರ್ಗಾಕ್ಕೆ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಪಾರ್ಸಿಗಳೂ ಬರುತ್ತಿದ್ದರು. ಎಲ್ಲರೂ ಹಾಜಿ ಮಾಲಂಗ್‌ರವರ ಉರ್ಸ್‌ಅನ್ನು ಆಚರಿಸುತ್ತಿದ್ದರು. ಆದರೆ ಈಗ ಮಹಾರಾಷ್ಟ್ರದ ಶಿವಸೇನೆಗಳು ಈ ದರ್ಗದಲ್ಲಿರುವುದು ಹಾಜಿ ಮಾಲಂಗ್‌ರವರ ಸಮಾಧಿಯಲ್ಲ; ಬದಲಾಗಿ ಅಲ್ಲಿರುವುದು ಶ್ರೀ ಮಚ್ಚೀಂದ್ರನಾಥರ ಸಮಾಧಿ ಎಂದು ವಾದಿಸಿ ತಕರಾರು ಶುರು ಮಾಡಿದ್ದಾರೆ. ಪರಿಣಾಮವಾಗಿ ಅಲ್ಲಿ ಇಂದು ಪ್ರತಿ ಉರ್ಸ್ ದಿನದಂದು ಕೋಮು ಗಲಭೆಗಳು ಉದ್ಭವಿಸಿ ಪೊಲೀಸರು ಬಂದೋಬಸ್ತ್ ಮಾಡುವಂತಾಗಿದೆ.

ಹೋದ ವರ್ಷ ಕೋಮುದಳ್ಳುರಿಯನ್ನೇ ಕಂಡ ಗುಜರಾತ್ ರಾಜ್ಯದ ಕಛ್ ಪ್ರದೇಶದಲ್ಲಿ ಥಿಕಾರಿಯಾ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಮುಸ್ಲಿಂ ಸಂತ ಅಸ್ಲಾಂ ಪೀರ್‌ನ ದರ್ಗವಿದ್ದರೂ, ಹಳ್ಳಿಯಲ್ಲಿ ವಾಸಿಸುತ್ತಿರುವ 2200 ಜನರೆಲ್ಲಾ ಹಿಂದೂಗಳೇ. ಆದರೂ ಪ್ರತಿ ವರ್ಷ ಆಷಾಢದ ತಿಂಗಳಲ್ಲಿ ಈ ಹಿಂದೂಗಳೇ ಸೇರಿ ಆಸ್ಲಾಂ ಪೀರ್‌ನ ಉರ್ಸ್ ಅನ್ನು ಆಚರಿಸುತ್ತಾರೆ. ದರ್ಗಕ್ಕೆ ಬಟ್ಟೆಗಳನ್ನು, ಧ್ವಜಗಳನ್ನು ದಾನ ಮಾಡುತ್ತಾರೆ. ಪ್ರತಿ ಸಂಸಾರದ ಪ್ರತಿಯೊಬ್ಬರೂ ಎರಡು ರೂಪಾಯಿಗಳನ್ನು ಮತ್ತು 250 ಗ್ರಾಂ ಅಕ್ಕಿ, ಬೇಳೆಯನ್ನು ನೀಡಿ, ಸಿಹಿ ಗಂಜಿಯನ್ನು ತಯಾರಿಸಿ, ಜಾತಿ, ಧರ್ಮ, ಕುಲ ಯಾವ ಭೇದವೂ ಇಲ್ಲದೆ ಜೊತೆಯಾಗಿ ಕೂತು ಊಟ ಮಾಡುತ್ತಾರೆ.

ಮಹಾರಾಷ್ಟ್ರದ ಮರಾಠ್‌ವಾಡಾದಲ್ಲಿರುವ ಎರಡು ಹಳ್ಳಿಗಳ ಕತೆಯಂತೂ ಅದ್ಭುತವಾಗಿದೆ. ಆಸುಪಾಸಿನಲ್ಲೇ ಈ ಹಳ್ಳಿಗಳು ಇವೆ. ಮುಸ್ಲಿಮರೇ ಇರುವ ಹಳ್ಳಿಯಲ್ಲಿ ಹನುಮಂತನ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಮುಸ್ಲಿಮರೇ ಚೊಕ್ಕವಾಗಿ ಇಡುತ್ತಾರಲ್ಲದೇ ಪ್ರತಿ ವರ್ಷ ಅವರೇ ಹಣ ಸಂಗ್ರಹಿಸಿ, ವಾರ್ಷಿಕ ಜಾತ್ರೆಯನ್ನು ನಡೆಸುತ್ತಾರೆ. ಪಕ್ಕದ ಹಳ್ಳಿಗಳಿಂದ ಜಾತ್ರೆಗೆ ಬರುವ ಹಿಂದೂಗಳಿಗೆ ಹಳ್ಳಿಯ ಮುಸ್ಲಿಮರೇ ಅಡುಗೆ ತಯಾರಿಸಿ ಬಡಿಸಿ ಅತಿಥಿ ಸತ್ಕಾರ ಮಾಡುತ್ತಾರೆ.

ಹಾಗೆಯೇ ಹತ್ತಿರದಲ್ಲೇ ಇರುವ ಹಿಂದೂಗಳೇ ವಾಸಿಸುತ್ತಿರುವ ಹಳ್ಳಿಯಲ್ಲಿ ದರ್ಗ ಒಂದಿದೆ. ಇದರ ಉಸ್ತುವಾರಿಯನ್ನು ಹಿಂದೂಗಳು ನೋಡಿಕೊಳ್ಳುತ್ತಾರಲ್ಲದೇ ಪ್ರತಿ ವರ್ಷ ದರ್ಗದ ಉರ್ಸ್‌ಅನ್ನು ಅವರೇ ಏರ್ಪಡಿಸುತ್ತಾರೆ.

ಇಂತಹ ಉದಾಹರಣೆಗಳು ಕರ್ನಾಟಕದಲ್ಲೂ ಹೇರಳವಾಗಿವೆ. ಇಂತಹ ಸಂಘಟಿತ, ಸೌಹಾರ್ದದ ಸಂಸ್ಕೃತಿಯ ಬದಲಾಗಿ ದುಷ್ಟ ಮನಸ್ಸುಗಳ ’ಶುದ್ಧ’ ಧರ್ಮ ಯಾರಿಗೆ ಬೇಕಿದೆ?!

(ಇದು ಗೌರಿಯವರ ಕಂಡಹಾಗೆ ಅಂಕಣದ ಮರುಪ್ರಕಟಣೆ)


ಇದನ್ನೂ ಓದಿ: ಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...