ಉತ್ತರ ಪ್ರದೇಶ ಸರ್ಕಾರ ಕೊರೊನಾ ಸೋಂಕಿತರ ಬಗ್ಗೆ ಮತ್ತು ಕೊರೊನಾದಿಂದ ಮೃತಪಟ್ಟವರ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆ. ಕೊರೊನಾ ಪ್ರಕರಣಗಳ ಬಗ್ಗೆ ಸತ್ಯ ಮರೆಮಾಚುತ್ತಿದೆ ಎನ್ನಲಾಗಿದೆ. ಈ ನಡುವೆ ಲಕ್ನೋ ಸ್ಮಶಾನದಲ್ಲಿ ಒಟ್ಟಾಗಿ ಅಂತ್ಯಸಂಸ್ಕಾರ ನಡೆಸಿದ ದೃಶ್ಯಗಳು ವೈರಲ್ ಆಗಿದ್ದವು. ಇದರಿಂದ ಎಚ್ಚೆತ್ತುಕೊಂಡಿರುವ ಯುಪಿ ಸರ್ಕಾರ ವಿಡಿಯೋ ಮಾಡದಂತೆ ಸ್ಮಶಾನದ ಸುತ್ತ ಮೆಟಲ್ ಶೀಟ್ಗಳನ್ನು ಹಾಕಿಸಿದೆ.
ಕೊರೊನಾದಿಂದ ಮೃತಪಟ್ಟವರ ಬಗ್ಗೆ ಸರ್ಕಾರ ನೀಡುತ್ತಿರುವ ಮಾಹಿತಿಯನ್ನು ಪ್ರಶ್ನಿಸಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಕಾರ್ಮಿಕರು ಸ್ಮಶಾನದ ಸುತ್ತ ನೀಲಿ ಮೆಟಲ್ ಶೀಟ್ಗಳನ್ನು ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿ, ಕೊರೊನಾ ತಡೆಗಟ್ಟಲು ಉತ್ತಮ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಭಾಗವಹಿಸಿದ್ದ 1,701 ಜನರಿಗೆ ಕೊರೊನಾ ದೃಢ, ಆದರೂ ಮೇಳಕ್ಕೆ ಇಲ್ಲ ತೆರೆ!
उप्र की सरकार से एक निवेदन है:
अपना समय, संसाधन और ऊर्जा इस त्रासदी को छुपाने, दबाने में लगाना व्यर्थ है। महामारी को रोकने, लोगों की जान बचाने, संक्रमण को फैलने से रोकने के लिए ठोस कदम उठाइए। यही वक्त की पुकार है। pic.twitter.com/xwKrfyav4o
— Priyanka Gandhi Vadra (@priyankagandhi) April 15, 2021
“ಉತ್ತರ ಪ್ರದೇಶ ಸರ್ಕಾರಕ್ಕೆ ಒಂದು ಮನವಿ ಇದೆ. ನಿಮ್ಮ ಸಮಯ, ಸಂಪನ್ಮೂಲಗಳು ಮತ್ತು ಶಕ್ತಿಯನ್ನು ಈ ದುರಂತವನ್ನು ಮರೆಮಾಚುವುದು ಬಳಸುವುದು ವ್ಯರ್ಥ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು, ಜೀವಗಳನ್ನು ಉಳಿಸಲು ಮತ್ತು ಸೋಂಕಿನ ಹರಡುವಿಕೆಯನ್ನು ತಡೆಯಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಿ. ಇದು ಎಚ್ಚರಿಕೆಯ ಗಂಟೆಯಾಗಿದೆ” ಎಂದು ವಿಡಿಯೋ ಜೊತೆಗೆ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
Hi @AdminLKO @AjayDwivediIAS , please explain why these tin sheets are being erected outside the boundaries of the lucknow crematorium where videos of burning pyres of covid victims have gone viral ? What purpose does this serve ? …. pic.twitter.com/V5lFPL2qFp
— Alok Pandey (@alok_pandey) April 15, 2021
ಮೆಟಲ್ ಶೀಟ್ಗಳ ಜೊತೆಗೆ, ಸ್ಮಶಾನದ ಹೊರಗೆ ಹೊಸ ಸೂಚನಾ ಫಲಕ ಹಾಕಲಾಗಿದೆ. “ಕೊರೊನಾ ಪೀಡಿತ ಪ್ರದೇಶ” ವಾಗಿರುವುದರಿಂದ ಇನ್ನು ಮುಂದೆ ಅನಧಿಕೃತ ಜನರು ಸ್ಮಶಾನವನ್ನು ಪ್ರವೇಶಿಸಲು ಅನುಮತಿಸುವುದಿಲ್ಲ. ಅತಿಕ್ರಮಣದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಕೊರೊನಾ ವೈರಸ್ ಪ್ರಕರಣಗಳಲ್ಲಿ ಆತಂಕಕಾರಿಯಾದ ಏರಿಕೆ ಕಂಡ ದೇಶದ ನಗರಗಳಲ್ಲಿ ಲಕ್ನೋ ಕೂಡ ಸೇರಿದೆ. ಉತ್ತರ ಪ್ರದೇಶ ಸರ್ಕಾರವು ರಾತ್ರಿ ಕರ್ಫ್ಯೂ ಘೋಷಿಸಿದೆ. ಲಕ್ನೋದಲ್ಲಿ ಈಗ 31,000 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಎರಡು ವಾರಗಳ ಹಿಂದೆ ಇದ್ದ ಪ್ರಕರಣಗಳು 10 ಪಟ್ಟು ಹೆಚ್ಚಾಗಿವೆ.
ರಾಜ್ಯವು 68 ಕೊರೊನಾ ಸಾವುಗಳು ಉಂಟಾಗಿವೆ ಎಂದು ವರದಿ ನೀಡಿದೆ. ಆದರೆ 7 ವಾರಗಳ ಅವಧಿಯಲ್ಲಿ 276 ಕ್ಕೂ ಹೆಚ್ಚು ಸಾವುಗಳು ಸಂಭವಿಸಿರುವುದನ್ನು ಸ್ಮಶಾನದ ದಾಖಲೆಗಳು ತಿಳಿಸಿವೆ. ಈ ಬಗ್ಗೆ ಅನೇಕರು ಪ್ರಶ್ನಿಸಿದ್ದರು.
ಇದನ್ನೂ ಓದಿ: ಲಸಿಕೆಯಿಲ್ಲದೆ ಕೇವಲ ಹಬ್ಬದ ಸೋಗು; ಪಿಎಂ ಕೇರ್ಸ್ ಎಲ್ಲಿ ಹೋಯಿತು: ರಾಹುಲ್ ಗಾಂಧಿ ಆಕ್ರೋಶ