Homeಅಂಕಣಗಳುನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

ನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

- Advertisement -
- Advertisement -

ಮೋದಿ ಸರ್ಕಾರ ಶಕ್ತಿಶಾಲಿಗಳಾದ ರಾಜಕಾರಣಿಗಳನ್ನು ಬಗ್ಗುಬಡಿದು ತಮ್ಮ ಅಧೀನರನ್ನಾಗಿ ಮಾಡಿಕೊಳ್ಳುತ್ತಿದೆ. ಮಿಥುನ್ ಚಕ್ರವರ್ತಿ ಮತ್ತು ಶತಾಬ್ದಿ ರೇ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇವರುಗಳ ಹೆಸರು ಪಶ್ಚಿಮ ಬಂಗಾಳದಲ್ಲಿ ಮನೆ ಮಾತಾಗಿತ್ತು. ಇವರು ನಡೆಸುತ್ತಿದ್ದ ಶಾರದಾ ಚಿಟ್ ಫಂಡ್ ಸ್ಕೀಮ್‌ನಲ್ಲಿ 17 ಲಕ್ಷ ಹೂಡಿಕೆದಾರರು 2461 ಕೋಟಿ ರೂಪಾಯಿಗಳನ್ನು ಹೂಡಿದ್ದರು. ಇವರು ಹುಟ್ಟು ಹಾಕಿದ 200 ಖಾಸಗಿ ಕಂಪೆನಿಗಳು ಭಾಗಿಯಾಗಿದ್ದವು. 16000 ನೌಕರರು ಈ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಚಾರಣೆ ನಡೆಯುತ್ತಿದ್ದಂತೆ ಮಿಥುನ್ ಚಕ್ರವರ್ತಿ ಭಾರತೀಯ ಜನತಾ ಪಕ್ಷ ಸೇರಿಕೊಂಡರು. ಶತಾಬ್ದಿ ರೇ ತೃಣಮೂಲ ಕಾಂಗ್ರೆಸ್ಸಿನಲ್ಲೇ ಸದಸ್ಯರಾಗಿ ಉಳಿದುಕೊಂಡರು. ಶತಾಬ್ದಿ ರೇ ಅವರ ಆಸ್ತಿಯನ್ನು ಇ.ಡಿ ವಶಪಡಿಸಿಕೊಂಡಿತು. ಯುಪಿಎ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದ ಮುಕುಲ್ ರಾಯ್ ಹಾಗೂ ಅಸ್ಸಾಂನ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಹಿಮಂತ ಬಿಸ್ವಾ ಶರ್ಮಾ ಅವರುಗಳಿಗೂ ಕೇಂದ್ರ ಬೇಹುಗಾರಿಕೆ ಸಂಸ್ಥೆಯ ತನಿಖಾಧಿಕಾರಿಗಳು ಬಿಸಿ ಮುಟ್ಟಿಸಿದರು. ಈ ಮಧ್ಯ ಅವರಿಬ್ಬರೂ ಬಿಜೆಪಿ ಸೇರಿಕೊಂಡರು. ಅದಾದ ನಂತರ ಅವರ ಮೇಲೆ ಏನೂ ಕ್ರಮ ಕೈಗೊಂಡ ಸುದ್ದಿ ಇಲ್ಲ.

ಈ ಪ್ರಕರಣಗಳು ಒಂದು ಅಂಶವನ್ನು ಹೊರಗೆಡುತ್ತದೆ. ನೀವು ಬಿಜೆಪಿಗೆ ಸೇರಿಬಿಟ್ಟರೆ, ಮೋದಿ ಷಾಗಳ ಪಾದ ಹಿಡಿದುಕೊಂಡುಬಿಟ್ಟರೆ, ನೀವು ಎಂತಹ ಘನಘೋರ ಕೃತ್ಯ ಎಸಗಿದ್ದರೂ ನಿಮಗೆ ರಕ್ಷಣೆ ಸಿಗುತ್ತದೆ. ನೀವು ಅವರಿಗೆ ಶರಣಾಗತರಾಗದಿದ್ದರೆ, ನಿಮ್ಮ ಭವಿಷ್ಯಕ್ಕೇ ಕುತ್ತು ಬರುತ್ತದೆ.

ಅಣ್ಣಾ ಹಜಾರೆ ತಮ್ಮ ನೈತಿಕ ಶಕ್ತಿಯ ಮೇಲೆ ಭರವಸೆ ಇಟ್ಟು ಹೋರಾಟ ಮಾಡುವವರು. ಲೋಕಾಯುಕ್ತ ಮಸೂದೆಯನ್ನು ಜಾರಿಗೆ ತರಲು ಒತ್ತಾಯಿಸಿ ಮನಮೋಹನ ಸಿಂಗ್ ಸರ್ಕಾರದ ವಿರುದ್ಧ, ಕ್ರಿಯಾಹೀನ ಪಾರ್ಲಿಮೆಂಟ್ ಸದಸ್ಯರ ವಿರುದ್ಧ ಸತ್ಯಾಗ್ರಹ ಹೂಡಿದರು. ಪಾರ್ಲಿಮೆಂಟಿನಲ್ಲಿ ಹತ್ತಾರು ವರ್ಷಗಳ ಹಿಂದೆ ಮಂಡಿಸಲಾದ ಲೋಕಾಯುಕ್ತ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳದೆ ಕಾಲಹರಣ ಮಾಡಿದ ಲೋಕಸಭಾ ಸದಸ್ಯರನ್ನು ಅಣ್ಣಾಹಜಾರೆ ತರಾಟೆಗೆ ತೆಗೆದುಕೊಂಡಿದ್ದರು. ’ಈ ಸದಸ್ಯರು ತಮ್ಮ ಪಾತ್ರವನ್ನೇ ಯೋಗ್ಯವಾಗಿ ನಿರ್ವಹಿಸಿದ್ದರೆ, ಪ್ರಜೆಯಾದ ನಾನು ಸರ್ಕಾರದ ಬಾಗಿಲು ತಟ್ಟುವ ಕೆಲಸ ಮಾಡುತ್ತಿರಲಿಲ್ಲ. ಆದರೆ ನನ್ನ ಪ್ರತಿನಿಧಿಗಳು ನಿಷ್ಕ್ರಿಯರಾದಾಗ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಯಾದ ನನಗಿದೆ’ ಎಂದು ಅಣ್ಣಾ ಹಜಾರೆ ವಾದ ಮಾಡಿದ ಮೇಲೆ ಪ್ರಧಾನಿಗಳು ಅವರಿಗೆ ಗೌರವಕೊಟ್ಟು ಲೋಕಾಯುಕ್ತ ಮಸೂದೆಯನ್ನು ಮಂಡಿಸಿ ಮಸೂದೆಗೆ ಪಾರ್ಲಿಮೆಂಟಿನ ಅನುಮೋದನೆ ಪಡೆದರು.

ಈ ಬಗೆಯ ನೈತಿಕ ಶಕ್ತಿಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಷಾಗಳಿಗೆ ನಂಬಿಕೆ ಇಲ್ಲ. ಅವರದೇನಿದ್ದರೂ ಕಿರುಕುಳ ಕೊಟ್ಟು ವಿರೋಧಿ ರಾಜಕಾರಣಿಗಳನ್ನು ಶರಣಾಗತರಾಗಿಸುವುದರಲ್ಲೇ ದೃಢವಾದ ನಂಬಿಕೆ. ಅಧಿಕಾರದ ದುರುಪಯೋಗ ಒಂದರಿಂದಲೇ ಸರ್ವಸ್ವವನ್ನೂ ಸಾಧಿಸಿಬಿಡುವೆವೆಂಬ ಅಹಂಕಾರ.
ಯಾರೇ ಮಾಡಬಾರದ್ದನ್ನೆಲ್ಲ ಮಾಡಿದ್ದರೂ, ಅವರು ಯಾವುದೇ ಪಾತಕ ಮಾಡಿದ್ದರೂ, ಅವರು ಬಿಜೆಪಿಗೆ ಶರಣಾಗತರಾದರೆ, ಅದು ಪಾತಕವೇ ಅಲ್ಲ. ಯಾರು ಮೋದಿಯವರನ್ನ ವಿರೋಧಿಸುತ್ತಾರೋ ಶರಣಾಗತರಾಗುವುದಿಲ್ಲವೋ ಅವರು ಮೋದಿ ಷಾಗಳ ದೃಷ್ಟಿಯಲ್ಲಿ ದೇಶದ್ರೋಹಿಗಳು.

ರಫೇಲ್ ಯುದ್ಧ ವಿಮಾನಗಳ ಖರೀದಿಯ ಸಂದರ್ಭದಲ್ಲಿ ಒಬ್ಬ ಖಾಸಗಿ ಭಾರತೀಯ ವ್ಯಕ್ತಿಗೆ ಕೋಟ್ಯಂತರ ರೂಗಳು ಹರಿದುಬರುವಂತೆ ಸರ್ಕಾರ ಮಸಲತ್ತು ಮಾಡಿದೆ ಎಂದು ಒಂದು ಫ್ರೆಂಚ್ ಮೂಲದ ಸುದ್ದಿವಾಹಿನಿ ವರದಿ ಮಾಡಿದೆ.

ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳುವ ಜವಾಬ್ದಾರಿಯನ್ನು ಮೊದಲು ಸರ್ಕಾರ ರಕ್ಷಣಾ ಸಚಿವಾಲಯಕ್ಕೆ ವಹಿಸಿತ್ತು. ರಕ್ಷಣಾ ಸಚಿವಾಲಯ ಉನ್ನತ ಸೈನ್ಯಾಧಿಕಾರಿಗಳ ಸಮಿತಿ ರಚಿಸಿ, ಅವರಿಗೆ ರಫೇಲ್ ಕೊಳ್ಳುವ ಬಗೆಗೆ ವ್ಯವಹರಿಸಲು ಅಧಿಕಾರ ನೀಡಿತು. ಅವರು ನಾಲ್ಕಾರು ಸಭೆಗಳನ್ನು ನಡೆಸಿ ವ್ಯವಹಾರ ಕುದುರಿಸುವ ಕೆಲಸ ಮಾಡುತ್ತಿರುವಾಗಲೇ ಮೋದಿಯವರ ಸರ್ಕಾರ ನೇರವಾಗಿ ತಾನೂ ಈ ಡೀಲ್‌ನಲ್ಲಿ ವ್ಯವಹರಿಸಲು ತೊಡಗುತ್ತದೆ. ಬೇಸರಗೊಂಡ ಸೈನ್ಯಾಧಿಕಾರಿಗಳ ಸಮಿತಿ ಬೇಸರಪಟ್ಟುಕೊಂಡು ಇನ್ನು ಮೇಲೆ ಸರ್ಕಾರವೇ ಈ ಸಂಬಂಧ ವ್ಯವಹಾರ ನಡೆಸಲಿ ಎಂದು ಹೇಳಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿತು. ಉನ್ನತಾಧಿಕಾರಿಗಳಿಗೆ ವಹಿಸಿದ್ದ ಕೆಲಸದಲ್ಲಿ ಮಧ್ಯೆ ತಲೆಹಾಕಿದ್ದು ತಪ್ಪು ಎಂದು ಮೋದಿಯವರಿಗೆ ಅನಿಸಲೇ ಇಲ್ಲ. ಯುದ್ಧ ವಿಮಾನದ ವಿಚಾರದಲ್ಲಿ ಏನೂ ತಿಳಿವಳಿಕೆ ಇಲ್ಲದ ಅಂಬಾನಿಯ ರಿಲಯನ್ಸ್ ಕಂಪನಿಯನ್ನು ಈ ವ್ಯವಹಾರದಲ್ಲಿ ಒಬ್ಬ ಪಾಲುದಾರರನ್ನಾಗಿಸುವಲ್ಲಿ ಯಶಸ್ವಿಯಾದರು. ವಿಮಾನ ನಿರ್ಮಾಣದಲ್ಲೇ ನಿರತವಾಗಿರುವ ರಕ್ಷಣಾ ಇಲಾಖೆಯ ಭಾಗವಾಗಿರುವ ಹಿಂದೂಸ್ತಾನ್ ಏರ್ ಕ್ರಾಫ್ಟ್‌ನವರು (ಹೆಚ್‌ಎಎಲ್) ತಮಗೆ ಈ ವಿಮಾನಗಳ ನಿರ್ಮಾಣದ ಕೆಲಸವನ್ನು ವಹಿಸುವುದಾದರೆ ಯುದ್ಧ ವಿಮಾನಗಳನ್ನು ತಯಾರಿಸಿಕೊಡುವುದಾಗಿ ನಿವೇದಿಸಿಕೊಂಡರೂ ಅದನ್ನು ಮೋದಿ ಸರ್ಕಾರ ತಳ್ಳಿಹಾಕಿತು.

ಈಗ ಈ ವ್ಯವಹಾರದಲ್ಲಿ ಭಾರತೀಯರೊಬ್ಬರಿಗೆ ಅಪಾರ ಹಣ ದೊರೆಯುವಂತೆ ಹುನ್ನಾರ ಮಾಡಿದೆಯೆಂದು ಆರೋಪಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.

ಈ ಪ್ರಮುಖ ಪ್ರಕರಣದ ತನಿಖೆಯನ್ನು ಏಪ್ರಿಲ್ 24ರಂದು ನಿವೃತ್ತರಾದ ಮುಖ್ಯನ್ಯಾಯಾಧೀಶರ ನೇತೃತ್ವದ ಪೀಠವೇ ವಿಚಾರಣೆಗೆ ತೆಗೆದುಕೊಂಡಿತ್ತು. ಈಗ ಬೊಬ್ಡೆ ಅವರು ನಿವೃತ್ತರಾಗಿದ್ದು ಮುಂದಿನ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರಣೆಯ ನೇತೃತ್ವ ವಹಿಸುತ್ತಾರೆಯೇ ಕಾದು ನೋಡಬೇಕಿದೆ.

(ಇದು ಎಚ್ ಎಸ್ ದೊರೆಸ್ವಾಮಿಯವರು ಮೇ 5ರ ನ್ಯಾಯಪಥ ಸಂಚಿಕೆಗೆ ಬರೆದಿದ್ದ ಅಂಕಣ ಬರಹ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...