Homeಅಂಕಣಗಳುನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

ನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

- Advertisement -
- Advertisement -

ಮೋದಿ ಸರ್ಕಾರ ಶಕ್ತಿಶಾಲಿಗಳಾದ ರಾಜಕಾರಣಿಗಳನ್ನು ಬಗ್ಗುಬಡಿದು ತಮ್ಮ ಅಧೀನರನ್ನಾಗಿ ಮಾಡಿಕೊಳ್ಳುತ್ತಿದೆ. ಮಿಥುನ್ ಚಕ್ರವರ್ತಿ ಮತ್ತು ಶತಾಬ್ದಿ ರೇ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇವರುಗಳ ಹೆಸರು ಪಶ್ಚಿಮ ಬಂಗಾಳದಲ್ಲಿ ಮನೆ ಮಾತಾಗಿತ್ತು. ಇವರು ನಡೆಸುತ್ತಿದ್ದ ಶಾರದಾ ಚಿಟ್ ಫಂಡ್ ಸ್ಕೀಮ್‌ನಲ್ಲಿ 17 ಲಕ್ಷ ಹೂಡಿಕೆದಾರರು 2461 ಕೋಟಿ ರೂಪಾಯಿಗಳನ್ನು ಹೂಡಿದ್ದರು. ಇವರು ಹುಟ್ಟು ಹಾಕಿದ 200 ಖಾಸಗಿ ಕಂಪೆನಿಗಳು ಭಾಗಿಯಾಗಿದ್ದವು. 16000 ನೌಕರರು ಈ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಚಾರಣೆ ನಡೆಯುತ್ತಿದ್ದಂತೆ ಮಿಥುನ್ ಚಕ್ರವರ್ತಿ ಭಾರತೀಯ ಜನತಾ ಪಕ್ಷ ಸೇರಿಕೊಂಡರು. ಶತಾಬ್ದಿ ರೇ ತೃಣಮೂಲ ಕಾಂಗ್ರೆಸ್ಸಿನಲ್ಲೇ ಸದಸ್ಯರಾಗಿ ಉಳಿದುಕೊಂಡರು. ಶತಾಬ್ದಿ ರೇ ಅವರ ಆಸ್ತಿಯನ್ನು ಇ.ಡಿ ವಶಪಡಿಸಿಕೊಂಡಿತು. ಯುಪಿಎ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದ ಮುಕುಲ್ ರಾಯ್ ಹಾಗೂ ಅಸ್ಸಾಂನ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಹಿಮಂತ ಬಿಸ್ವಾ ಶರ್ಮಾ ಅವರುಗಳಿಗೂ ಕೇಂದ್ರ ಬೇಹುಗಾರಿಕೆ ಸಂಸ್ಥೆಯ ತನಿಖಾಧಿಕಾರಿಗಳು ಬಿಸಿ ಮುಟ್ಟಿಸಿದರು. ಈ ಮಧ್ಯ ಅವರಿಬ್ಬರೂ ಬಿಜೆಪಿ ಸೇರಿಕೊಂಡರು. ಅದಾದ ನಂತರ ಅವರ ಮೇಲೆ ಏನೂ ಕ್ರಮ ಕೈಗೊಂಡ ಸುದ್ದಿ ಇಲ್ಲ.

ಈ ಪ್ರಕರಣಗಳು ಒಂದು ಅಂಶವನ್ನು ಹೊರಗೆಡುತ್ತದೆ. ನೀವು ಬಿಜೆಪಿಗೆ ಸೇರಿಬಿಟ್ಟರೆ, ಮೋದಿ ಷಾಗಳ ಪಾದ ಹಿಡಿದುಕೊಂಡುಬಿಟ್ಟರೆ, ನೀವು ಎಂತಹ ಘನಘೋರ ಕೃತ್ಯ ಎಸಗಿದ್ದರೂ ನಿಮಗೆ ರಕ್ಷಣೆ ಸಿಗುತ್ತದೆ. ನೀವು ಅವರಿಗೆ ಶರಣಾಗತರಾಗದಿದ್ದರೆ, ನಿಮ್ಮ ಭವಿಷ್ಯಕ್ಕೇ ಕುತ್ತು ಬರುತ್ತದೆ.

ಅಣ್ಣಾ ಹಜಾರೆ ತಮ್ಮ ನೈತಿಕ ಶಕ್ತಿಯ ಮೇಲೆ ಭರವಸೆ ಇಟ್ಟು ಹೋರಾಟ ಮಾಡುವವರು. ಲೋಕಾಯುಕ್ತ ಮಸೂದೆಯನ್ನು ಜಾರಿಗೆ ತರಲು ಒತ್ತಾಯಿಸಿ ಮನಮೋಹನ ಸಿಂಗ್ ಸರ್ಕಾರದ ವಿರುದ್ಧ, ಕ್ರಿಯಾಹೀನ ಪಾರ್ಲಿಮೆಂಟ್ ಸದಸ್ಯರ ವಿರುದ್ಧ ಸತ್ಯಾಗ್ರಹ ಹೂಡಿದರು. ಪಾರ್ಲಿಮೆಂಟಿನಲ್ಲಿ ಹತ್ತಾರು ವರ್ಷಗಳ ಹಿಂದೆ ಮಂಡಿಸಲಾದ ಲೋಕಾಯುಕ್ತ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳದೆ ಕಾಲಹರಣ ಮಾಡಿದ ಲೋಕಸಭಾ ಸದಸ್ಯರನ್ನು ಅಣ್ಣಾಹಜಾರೆ ತರಾಟೆಗೆ ತೆಗೆದುಕೊಂಡಿದ್ದರು. ’ಈ ಸದಸ್ಯರು ತಮ್ಮ ಪಾತ್ರವನ್ನೇ ಯೋಗ್ಯವಾಗಿ ನಿರ್ವಹಿಸಿದ್ದರೆ, ಪ್ರಜೆಯಾದ ನಾನು ಸರ್ಕಾರದ ಬಾಗಿಲು ತಟ್ಟುವ ಕೆಲಸ ಮಾಡುತ್ತಿರಲಿಲ್ಲ. ಆದರೆ ನನ್ನ ಪ್ರತಿನಿಧಿಗಳು ನಿಷ್ಕ್ರಿಯರಾದಾಗ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಯಾದ ನನಗಿದೆ’ ಎಂದು ಅಣ್ಣಾ ಹಜಾರೆ ವಾದ ಮಾಡಿದ ಮೇಲೆ ಪ್ರಧಾನಿಗಳು ಅವರಿಗೆ ಗೌರವಕೊಟ್ಟು ಲೋಕಾಯುಕ್ತ ಮಸೂದೆಯನ್ನು ಮಂಡಿಸಿ ಮಸೂದೆಗೆ ಪಾರ್ಲಿಮೆಂಟಿನ ಅನುಮೋದನೆ ಪಡೆದರು.

ಈ ಬಗೆಯ ನೈತಿಕ ಶಕ್ತಿಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಷಾಗಳಿಗೆ ನಂಬಿಕೆ ಇಲ್ಲ. ಅವರದೇನಿದ್ದರೂ ಕಿರುಕುಳ ಕೊಟ್ಟು ವಿರೋಧಿ ರಾಜಕಾರಣಿಗಳನ್ನು ಶರಣಾಗತರಾಗಿಸುವುದರಲ್ಲೇ ದೃಢವಾದ ನಂಬಿಕೆ. ಅಧಿಕಾರದ ದುರುಪಯೋಗ ಒಂದರಿಂದಲೇ ಸರ್ವಸ್ವವನ್ನೂ ಸಾಧಿಸಿಬಿಡುವೆವೆಂಬ ಅಹಂಕಾರ.
ಯಾರೇ ಮಾಡಬಾರದ್ದನ್ನೆಲ್ಲ ಮಾಡಿದ್ದರೂ, ಅವರು ಯಾವುದೇ ಪಾತಕ ಮಾಡಿದ್ದರೂ, ಅವರು ಬಿಜೆಪಿಗೆ ಶರಣಾಗತರಾದರೆ, ಅದು ಪಾತಕವೇ ಅಲ್ಲ. ಯಾರು ಮೋದಿಯವರನ್ನ ವಿರೋಧಿಸುತ್ತಾರೋ ಶರಣಾಗತರಾಗುವುದಿಲ್ಲವೋ ಅವರು ಮೋದಿ ಷಾಗಳ ದೃಷ್ಟಿಯಲ್ಲಿ ದೇಶದ್ರೋಹಿಗಳು.

ರಫೇಲ್ ಯುದ್ಧ ವಿಮಾನಗಳ ಖರೀದಿಯ ಸಂದರ್ಭದಲ್ಲಿ ಒಬ್ಬ ಖಾಸಗಿ ಭಾರತೀಯ ವ್ಯಕ್ತಿಗೆ ಕೋಟ್ಯಂತರ ರೂಗಳು ಹರಿದುಬರುವಂತೆ ಸರ್ಕಾರ ಮಸಲತ್ತು ಮಾಡಿದೆ ಎಂದು ಒಂದು ಫ್ರೆಂಚ್ ಮೂಲದ ಸುದ್ದಿವಾಹಿನಿ ವರದಿ ಮಾಡಿದೆ.

ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳುವ ಜವಾಬ್ದಾರಿಯನ್ನು ಮೊದಲು ಸರ್ಕಾರ ರಕ್ಷಣಾ ಸಚಿವಾಲಯಕ್ಕೆ ವಹಿಸಿತ್ತು. ರಕ್ಷಣಾ ಸಚಿವಾಲಯ ಉನ್ನತ ಸೈನ್ಯಾಧಿಕಾರಿಗಳ ಸಮಿತಿ ರಚಿಸಿ, ಅವರಿಗೆ ರಫೇಲ್ ಕೊಳ್ಳುವ ಬಗೆಗೆ ವ್ಯವಹರಿಸಲು ಅಧಿಕಾರ ನೀಡಿತು. ಅವರು ನಾಲ್ಕಾರು ಸಭೆಗಳನ್ನು ನಡೆಸಿ ವ್ಯವಹಾರ ಕುದುರಿಸುವ ಕೆಲಸ ಮಾಡುತ್ತಿರುವಾಗಲೇ ಮೋದಿಯವರ ಸರ್ಕಾರ ನೇರವಾಗಿ ತಾನೂ ಈ ಡೀಲ್‌ನಲ್ಲಿ ವ್ಯವಹರಿಸಲು ತೊಡಗುತ್ತದೆ. ಬೇಸರಗೊಂಡ ಸೈನ್ಯಾಧಿಕಾರಿಗಳ ಸಮಿತಿ ಬೇಸರಪಟ್ಟುಕೊಂಡು ಇನ್ನು ಮೇಲೆ ಸರ್ಕಾರವೇ ಈ ಸಂಬಂಧ ವ್ಯವಹಾರ ನಡೆಸಲಿ ಎಂದು ಹೇಳಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿತು. ಉನ್ನತಾಧಿಕಾರಿಗಳಿಗೆ ವಹಿಸಿದ್ದ ಕೆಲಸದಲ್ಲಿ ಮಧ್ಯೆ ತಲೆಹಾಕಿದ್ದು ತಪ್ಪು ಎಂದು ಮೋದಿಯವರಿಗೆ ಅನಿಸಲೇ ಇಲ್ಲ. ಯುದ್ಧ ವಿಮಾನದ ವಿಚಾರದಲ್ಲಿ ಏನೂ ತಿಳಿವಳಿಕೆ ಇಲ್ಲದ ಅಂಬಾನಿಯ ರಿಲಯನ್ಸ್ ಕಂಪನಿಯನ್ನು ಈ ವ್ಯವಹಾರದಲ್ಲಿ ಒಬ್ಬ ಪಾಲುದಾರರನ್ನಾಗಿಸುವಲ್ಲಿ ಯಶಸ್ವಿಯಾದರು. ವಿಮಾನ ನಿರ್ಮಾಣದಲ್ಲೇ ನಿರತವಾಗಿರುವ ರಕ್ಷಣಾ ಇಲಾಖೆಯ ಭಾಗವಾಗಿರುವ ಹಿಂದೂಸ್ತಾನ್ ಏರ್ ಕ್ರಾಫ್ಟ್‌ನವರು (ಹೆಚ್‌ಎಎಲ್) ತಮಗೆ ಈ ವಿಮಾನಗಳ ನಿರ್ಮಾಣದ ಕೆಲಸವನ್ನು ವಹಿಸುವುದಾದರೆ ಯುದ್ಧ ವಿಮಾನಗಳನ್ನು ತಯಾರಿಸಿಕೊಡುವುದಾಗಿ ನಿವೇದಿಸಿಕೊಂಡರೂ ಅದನ್ನು ಮೋದಿ ಸರ್ಕಾರ ತಳ್ಳಿಹಾಕಿತು.

ಈಗ ಈ ವ್ಯವಹಾರದಲ್ಲಿ ಭಾರತೀಯರೊಬ್ಬರಿಗೆ ಅಪಾರ ಹಣ ದೊರೆಯುವಂತೆ ಹುನ್ನಾರ ಮಾಡಿದೆಯೆಂದು ಆರೋಪಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.

ಈ ಪ್ರಮುಖ ಪ್ರಕರಣದ ತನಿಖೆಯನ್ನು ಏಪ್ರಿಲ್ 24ರಂದು ನಿವೃತ್ತರಾದ ಮುಖ್ಯನ್ಯಾಯಾಧೀಶರ ನೇತೃತ್ವದ ಪೀಠವೇ ವಿಚಾರಣೆಗೆ ತೆಗೆದುಕೊಂಡಿತ್ತು. ಈಗ ಬೊಬ್ಡೆ ಅವರು ನಿವೃತ್ತರಾಗಿದ್ದು ಮುಂದಿನ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರಣೆಯ ನೇತೃತ್ವ ವಹಿಸುತ್ತಾರೆಯೇ ಕಾದು ನೋಡಬೇಕಿದೆ.

(ಇದು ಎಚ್ ಎಸ್ ದೊರೆಸ್ವಾಮಿಯವರು ಮೇ 5ರ ನ್ಯಾಯಪಥ ಸಂಚಿಕೆಗೆ ಬರೆದಿದ್ದ ಅಂಕಣ ಬರಹ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...