Homeಕರೋನಾ ತಲ್ಲಣಸತತ ಮನವಿಗೆ ಸ್ಪಂದಿಸದ ಮೋದಿ, ಯೋಗಿ!: ಮೋದಿ ಅನುಯಾಯಿ, RSS ಕಾರ್ಯಕರ್ತ ಕೊವಿಡ್‌ಗೆ ಬಲಿ

ಸತತ ಮನವಿಗೆ ಸ್ಪಂದಿಸದ ಮೋದಿ, ಯೋಗಿ!: ಮೋದಿ ಅನುಯಾಯಿ, RSS ಕಾರ್ಯಕರ್ತ ಕೊವಿಡ್‌ಗೆ ಬಲಿ

ಅಮಿತ್ ತಮ್ಮ ಇಡೀ ಜೀವನವನ್ನು ಪ್ರಧಾನಿ ಮೋದಿಗಾಗಿ ಹೋರಾಡಿದರು. ಮೋದಿಯವರು ಅವರಿಗೆ ಏನು ಮಾಡಿದರು? ಇಂತಹ ಪಿಎಂ ಸಾಹೇಬರು ನಮಗೆ ಬೇಕೆ? ಅಮಿತ್ ಕುಟುಂಬದ ಪ್ರಶ್ನೆ...

- Advertisement -
- Advertisement -

ಉತ್ತರಪ್ರದೇಶದ ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ತಮ್ಮನ್ನು ಮೋದಿ ಭಕ್ತ ಎಂದು ಕರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ. ಟ್ವೀಟರ್‌ನಲ್ಲಿ ನರೇಂದ್ರ ಮೋದಿಯವರು ಸಹ ಈ ವ್ಯಕ್ತಿಯನ್ನು ಫಾಲೋ ಮಾಡುತ್ತಿದ್ದು, ಮೃತನ ಕುಟುಂಬ ವ್ಯಕ್ತಿಯ ಹ್ಯಾಂಡ್‌ಲ್‌ನಿಂದ ಮತ್ತು ಇತರ ಮೂಲಗಳಿಂದ ನೆರವಿಗೆ 10 ದಿನಗಳಿಂದ ಸತತ ಮನವಿ ಮಾಡುತ್ತ ಬಂದರೂ ಪ್ರಧಾನಿ ಮತ್ತು ಯೋಗಿ ಆದಿತ್ಯನಾಥ್ ಸ್ಪಂದಿಸಲಿಲ್ಲ ಎಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿಯವರನ್ನು ಟ್ಯಾಗ್ ಮಾಡಿ, ಚಿಕಿತ್ಸೆಗೆ ಸಂಬಂಧಿಸಿದಂತೆ ಅವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೋವಿಡ್ ರೋಗಿ, ಆರ್‌ಎಸ್‌ಎಸ್ ಕಾರ್ಯಕರ್ತ ಅಮಿತ್ ಜೈಸ್ವಾಲ್ ಕುಟುಂಬ, ಅಮಿತ್ ಖಾತೆಯಿಂದ ಟ್ವೀಟ್ ಪೋಸ್ಟ್ ಮಾಡಿ ನೆರವಿಗಾಗಿ ಕಾದಿತ್ತು. ಆದರೆ, ಪಿಎಂ ಮತ್ತು ಸಿಎಂ ಸ್ಪಂದಿಸಲೇ ಇಲ್ಲ ಎಂದು ಕುಟುಂಬ ಕಿಡಿಕಾರಿದೆ.

ಆಗ್ರಾ ನಿವಾಸಿ ಅಮಿತ್ ಜೈಸ್ವಾಲ್ ಅವರ ಕಾರಿನ ಹಿಂಭಾಗವನ್ನು ಹಲವು ವರ್ಷಗಳಿಂದ ಅಲಂಕರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಪೋಸ್ಟರ್ ಅನ್ನು ಈಗ ಕಿತ್ತುಹಾಕಲಾಗಿದೆ. ಜೈಸ್ವಾಲ್ದ ಮಥುರಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ದಿನ ಅವರ ಸಹೋದರಿ ಮೋದಿ ಫೋಟೊವನ್ನು ಹರಿದು ಚಿಂದಿ ಮಾಡಿ ಎಸೆದಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಆಗ್ರಾದಲ್ಲಿ ಜೈಸ್ವಾಲ್ ಅವರಿಗೆ ಆಸ್ಪತ್ರೆಯ ಹಾಸಿಗೆ ಸಿಗಲಿಲ್ಲ. ಜೈಸ್ವಾಲ್ ಅವರ ಖಾತೆಯಿಂದ ಟ್ವೀಟ್ ಅನ್ನು ಪೋಸ್ಟ್ ಮಾಡಿ, ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ ಕುಟುಂಬವು, ರಿಮೆಡೆಸಿವಿರ್ ಚುಚ್ಚುಮದ್ದನ್ನು ಪಡೆಯಲು ಸಹಾಯವನ್ನು ಕೋರುತ್ತಲೇ ಬಂದಿತು. ಪ್ರಧಾನಿ ಮೋದಿ ಅವರು “ಮಧ್ಯಪ್ರವೇಶಿಸುತ್ತಾರೆ” ಎಂದು ಕುಟುಂಬ ಆಶಿಸಿತ್ತು. ಆದರೆ, ಅವರ ನಿರೀಕ್ಷೆಗಳೆಲ್ಲ ಹುಸಿಯಾದವು.

ಕೋವಿಡ್ ಕಾಣಿಸಿಕೊಂಡ 10 ದಿನಗಳ ನಂತರ ಸೂಕ್ತ ಚಿಕಿತ್ಸೆ, ಔಷಧಿ ಸಿಗದೇ 42 ವರ್ಷದ ಜೈಸ್ವಾಲ್ ಏಪ್ರಿಲ್ 29ರಂದು ಮೃತಪಟ್ಟರು. ಅವರ ನಿಧನದ ಕೆಲವು ದಿನಗಳ ನಂತರ ಅವರ ತಾಯಿಯೂ ಕೋವಿಡ್‌ಗೆ ಬಲಿಯಾದರು.

ಮೃತ ಅಮಿತ್ ಜೈಸ್ವಾಲ್

ಜೈಸ್ವಾಲ್ ಅವರ ಕುಟುಂಬದ ಸದಸ್ಯರು, ಅವರನ್ನು ಸ್ವಯಂ ಘೋಷಿತ “ಮೋದಿ ಭಕ್ತ” ಎಂದು ಹೇಳುತ್ತಾರೆ. ಅವರ ವಾಟ್ಸಾಪ್ ಡಿಸ್‌ಪ್ಲೇ ಫೋಟೋ ಪ್ರಧಾನ ಮಂತ್ರಿಯದ್ದೇ ಆಗಿದೆ. ಮೋದಿ ಮೃತ ಆರ್‌ಎಸ್‌ಎಸ್ ವ್ಯಕ್ತಿಯನ್ನು ಟ್ವೀಟರ್‌ನಲ್ಲಿ ಫಾಲೋ ಮಾಡುತ್ತಿದ್ದರು ಎಂಬ ಅಂಶವನ್ನು ಹೆಮ್ಮೆಯಿಂದ ತೋರಿಸಿದ ಕುಟುಂಬ ಸದಸ್ಯರಿಗೆ ಈಗ ಮೋದಿ ಮತ್ತು ಯೋಗಿ ಎಂದರೆ ಮೈ ಉರಿಯುತ್ತಿದೆ.

ಈ ಕುರಿತು ಪ್ರಿಂಟ್ ಜೊತೆ ಮಾತನಾಡಿರುವ ಮೃತನ ಸಹೋದರಿ, “ಮೋದಿ ಮತ್ತು ಯೋಗಿ ವಿರುದ್ಧ ನನ್ನ ಸಹೋದರ ಒಂದೂ ಮಾತು ಆಡಲಿಲ್ಲ. ಯಾರಾದರೂ ಅವರನ್ನು ದೂರದಿಂದಲೇ ಟೀಕಿಸಿದರೆ, ಅವರನ್ನು ಹೊಡೆಯುವುದಾಗಿ ಬೆದರಿಕೆ ಹಾಕುತ್ತಿದ್ದ” ಎಂದು ತಿಳಿಸಿದ್ದಾರೆ.

ಏಪ್ರಿಲ್ 29 ರ ಮುಂಜಾನೆ, ಅವರು ಮಥುರಾದ ನಿಯಾತಿ ಆಸ್ಪತ್ರೆಯಲ್ಲಿ ನಿಧನರಾದರು, ಅಲ್ಲಿ ಒಂಬತ್ತು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆ ದಿನವೇ ಸೋನು ಮತ್ತು ಅವರ ಪತಿ ರಾಜೇಂದ್ರ ಅವರು ಮೋದಿ ಪೋಸ್ಟರ್ ಅನ್ನು ಹರಿದು ಹಾಕಿದರು. ಕೋಪಗೊಂಡ ದಂಪತಿಗಳು ಪ್ರಧಾನಿ ಮೋದಿಯವರ “ಉದಾಸೀನತೆ”ಯನ್ನು “ಎಂದಿಗೂ ಕ್ಷಮಿಸುವುದಿಲ್ಲ” ಎಂದು ಹೇಳಿದರು.

“ಅಮಿತ್ ತಮ್ಮ ಇಡೀ ಜೀವನವನ್ನು ಪ್ರಧಾನಿ ಮೋದಿಗಾಗಿ ಹೋರಾಡಿದರು. ಮೋದಿಯವರು ಅವರಿಗೆ ಏನು ಮಾಡಿದರು? ಇಂತಹ ಪಿಎಂ ಸಾಹೇಬರು ನಮಗೆ ಬೇಕೆ? ನಾವು ಅವರ ಪೋಸ್ಟರ್ ಅನ್ನು ಹರಿದು ಹಾಕಿದ್ದೇವೆ” ಎಂದು ರಾಜೇಂದ್ರ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

ತನ್ನ ಸಹೋದರನನ್ನು ಕಳೆದುಕೊಂಡ ಕೇವಲ 10 ದಿನಗಳ ನಂತರ, ಸೋನು ತನ್ನ ತಾಯಿಯನ್ನು ಸಹ ಕಳೆದುಕೊಂಡರು.

‘ಯಾವುದೇ ಸಹಾಯ ಸಿಕ್ಕಿಲ್ಲ’

ಜೈಸ್ವಾಲ್ ಅವರು ಜಾಹೀರಾತು ಬೋರ್ಡ್‌ಗಳು ಮತ್ತು ಬ್ಯಾನರ್‌ಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು. ಆದರೆ ಅವರು ಆರೆಸ್‌ಎಸ್‌ಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು, ಅವರು ಬಾಲ್ಯದಿಂದಲೂ ಆಗ್ರಾ ಮತ್ತು ಸುತ್ತಮುತ್ತಲಿನ ಪ್ರತಿಯೊಂದು ಆರ್‌ಎಸ್‌ಎಸ್ ಶಾಖಾಗಳಿಗೆ ಹೋಗುತ್ತಿದ್ದರು ಎಂದು ಅವರ ಸಹೋದರಿ ಸೋನು ನೆನಪಿಸಿಕೊಂಡರು.

2020 ರ ಡಿಸೆಂಬರ್‌ನಲ್ಲಿ ಅವರು ನಿರ್ಮಾಣ ಹಂತದಲ್ಲಿದ್ದ ರಾಮ್ ಮಂದಿರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅಯೋಧ್ಯೆಗೆ ಪ್ರವಾಸ ಕೈಗೊಂಡರು ಮತ್ತು ನಗರದಾದ್ಯಂತ ರಾಮ್ ಮಂದಿರ ಕುರಿತು ಎಲ್‌ಇಡಿ ಬೋರ್ಡ್‌ಗಳನ್ನು ಹಾಕಿದರು, ಅದರಲ್ಲಿ ‘ರಾಮ್ ಜನ್ಮ್‌ಭೂಮಿ’ ಎಂದು ದೊಡ್ಡದಾಗಿ ಬರೆಯಲಾಗಿತ್ತು. ಅವರು ಅಯೋಧ್ಯೆಯಲ್ಲಿ ಈ ಬೋರ್ಡ್‌ಗಳನ್ನು ಉಚಿತವಾಗಿ ಹಾಕಲು ಬಯಸಿದ್ದರು. ಇದು ಅವರು ಬಲವಾಗಿ ನಂಬಿದ ಒಂದು ಕಾರಣವಾಗಿತ್ತು” ಎಂದು ಸಹೋದರಿ ಸೋನು ಹೇಳಿದ್ದಾರೆ.

ಅಮಿತ್ ಮತ್ತು ಅವರ ತಾಯಿ ರಾಜ್ ಕಮಲ್ ಜೈಸ್ವಾಲ್ ಇಬ್ಬರೂ ಏಪ್ರಿಲ್ 19 ರಂದು ಪಾಸಿಟಿವ್ ವರದಿ ಪಡೆದರು. ನಂತರ ಸೋನು ಮತ್ತು ರಾಜೇಂದ್ರ ಅವರನ್ನು ಆಗ್ರಾದ ಅನೇಕ ಆಸ್ಪತ್ರೆಗಳಿಗೆ ದಾಖಲಿಸಲು ಪ್ರಯತ್ನಿಸಿದರು. ಆದರೆ ಹಾಸಿಗೆಯನ್ನು ಹುಡುಕುವಲ್ಲಿ ವಿಫಲವಾದ ನಂತರ ಅವರನ್ನು ಹತ್ತಿರದ ಮಥುರಾಕ್ಕೆ ಕರೆದೊಯ್ದರು.

ಒಂದು ವಾರದ ನಂತರ, ಮಥುರಾ ಆಸ್ಪತ್ರೆಯು ತಾಯಿ-ಮಗ ಜೋಡಿಗೆ ತುರ್ತಾಗಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ವ್ಯವಸ್ಥೆ ಮಾಡುವಂತೆ ಕುಟುಂಬವನ್ನು ಕೇಳಿತು. ಸಹೋದರಿ ಸೋನು ಅಮಿತ್ ಜೈಸ್ವಾಲ್ ಅವರ ಟ್ವಿಟ್ಟರ್ ಹ್ಯಾಂಡಲ್‌ಗೆ ಲಾಗ್ ಇನ್ ಆಗಿ ಸಹಾಯಕ್ಕಾಗಿ ಮನವಿ ಮಾಡುವ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ, ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದಾರೆ.

“ಆದರೆ ನಮಗೆ ಯಾವುದೇ ಸಹಾಯ ಸಿಗಲಿಲ್ಲ” ಎಂದು ಸೋನು ಹೇಳಿದರು.
ನಂತರ ಕುಟುಂಬವು ಹೇಗೋ ಔಷಧಿ ಪಡೆಉಲು ಯಶಸ್ವಿಯಾಯಿತು, ಆದರೆ ಜೈಸ್ವಾಲ್ ಮತ್ತು ಆತನ ತಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

“ಅವರು ಆರ್‌ಎಸ್‌ಎಸ್‌ನ ಅತ್ಯಂತ ಶ್ರಮಶೀಲ ಸದಸ್ಯರಲ್ಲಿ ಒಬ್ಬರು. ಆರ್‌ಎಸ್‌ಎಸ್‌ನಲ್ಲಿನ ಕೆಲಸದ ಬಗ್ಗೆ ಅವರು ತುಂಬಾ ಆಸಕ್ತಿ ಹೊಂದಿದ್ದರು” ಎಂದು ಆಗ್ರಾದ ವಿಜಯ್ ನಗರ ಆರ್‌ಎಸ್‌ಎಸ್ ವಿಭಾಗದ ಮುಖ್ಯಸ್ಥ ರೊಜ್ಗರ್ ಭಾರತಿ ಅಮಿತ್ ಗುಪ್ತಾ ಹೇಳಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ, ಸಾಂಕ್ರಾಮಿಕ ರೋಗದ ಮಧ್ಯೆ ಇ-ಶಾಖಾ ಆಯೋಜಿಸಿದ್ದಕ್ಕಾಗಿ ಅವರಿಗೆ ಗೌರವ ಸಲ್ಲಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

‘ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ಪಿಎಂ ಮೋದಿ’

ಮಥುರಾದ ಖಾಸಗಿ ಆಸ್ಪತ್ರೆಯು “ಹೆಚ್ಚು ಶುಲ್ಕ ವಿಧಿಸಿದೆ” ಎಂದು ಕುಟುಂಬವು ಆರೋಪಿಸಿದೆ, ಇದು ಅವರ ಉದ್ವೇಗವನ್ನು ಇನ್ನಷ್ಟು ಹೆಚ್ಚಿಸಿದೆ. ಕುಟುಂಬಕ್ಕೆ ನೀಡಿದ ಬಿಲ್‌ಗಳ ಪ್ರಕಾರ, ಜೈಸ್ವಾಲ್ ಅವರ ಚಿಕಿತ್ಸೆಯ 10 ದಿನಗಳ ಒಟ್ಟು ವೆಚ್ಚವು 4.75 ಲಕ್ಷ ರೂ.ಗಳಷ್ಟಿತ್ತು, ಆದರೆ ಆಸ್ಪತ್ರೆಯಲ್ಲಿ 20 ದಿನಗಳನ್ನು ಕಳೆದ ಅವರ ತಾಯಿಗೆ ಸುಮಾರು 11 ಲಕ್ಷ ರೂ. ಬಿಲ್ ಮಾಡಲಾಗಿದೆ.

“ಹಲವು ಇತರ ಶುಲ್ಕಗಳು ಇವೆ. ಆದರೆ ಅವು ಯಾವುವು? ನಾವು ರೆಮ್ಡೆಸಿವಿರ್ ಅರೇಂಜ್ ಮಾಡಿಕೊಂಡೆವು. ಈ ಖಾಸಗಿ ಆಸ್ಪತ್ರೆಗಳು ನಮಗೆ ಯಾತಕ್ಕಾಗಿ ಈ ಪರಿ ದುಬಾರಿ ಬಿಲ್ ಹಾಕುತ್ತಿವೆ? ಎಂದು ಸೋನು ಕೇಳುತ್ತಿದ್ದಾರೆ.

ಈ ಪ್ರದೇಶದ ಇತರ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂಬ ಆರೋಪಗಳಿವೆ. ರೋಗಿಯೊಬ್ಬರಿಗೆ 9 ಲಕ್ಷ ರೂ.ಗಳ ಶುಲ್ಕ ವಿಧಿಸಲಾಗಿದೆ ಎಂಬ ಸುದ್ದಿ ಹೊರಬಿದ್ದ ನಂತರ ಆಗ್ರಾದ ರವಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಗಳ ಪಟ್ಟಿಯಿಂದ ಸೋಮವಾರ ನಿರ್ಬಂಧಿಸಲಾಗಿದೆ. “ನಾವು ಹೇಗೋ ಖರ್ಚನ್ನು ಭರಿಸಿದೆವು.. ಆದರೆ ಬಡ ಕುಟುಂಬಕ್ಕೆ ಇದು ಎಂದಿಗೂ ಸಾಧ್ಯವಾಗುವುದಿಲ್ಲ” ಎಂದು ರಾಜೇಂದ್ರ ಹೇಳಿದರು. ಪಿಎಂ ಮೋದಿ ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ್ದರೆ ದೇಶಾದ್ಯಂತ ಕೋವಿಡ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಕುಟುಂಬ ಹೇಳಿದೆ.

ಪಿಎಂ ಮೋದಿಯವರಿಗೆ ಮನವಿ ಮಾಡಲು ಭಾವನಾತ್ಮಕ ಮೂಡ್‌ನಲ್ಲಿ ಇದ್ದ ರಾಜೇಂದ್ರ ಅವರು ದಿ ಪ್ರಿಂಟ್ ಕ್ಯಾಮೆರಾವನ್ನು ನೋಡಿದರು.

“ನಾನು ನಿಮ್ಮನ್ನು ಅಂದರೆ ಪ್ರಧಾನಿ ಮೋದಿಯವರನ್ನು ಬೇಡಿಕೊಳ್ಳುತ್ತಿದ್ದೇನೆ. ದೇಶದಲ್ಲಿ ಬಿಕ್ಕಟ್ಟು ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ನೀವು ದೇಶದ ಪ್ರಮುಖ ವ್ಯಕ್ತಿ. ಪಿಎಂ ಮೋದಿ, ನಾನು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಏನಾದರೂ ಮಾಡಿ” ಎಂದು ರಾಜೇಂದ್ರ ಬೇಡಿಕೊಂಡರು.

ಮೃತರ ಸಹೋದರಿ ಸೋನು ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಲು ಯತ್ನಿಸಿತು. ಆದರೆ ಅವರು ಲಭ್ಯರಾಗಲಿಲ್ಲ.

ಕೃಪೆ: ದಿ ಪ್ರಿಂಟ್


ಇದನ್ನೂ ಓದಿ: ಕುಂಭಮೇಳದಿಂದ ಬಂದ ವ್ಯಕ್ತಿಯಿಂದ ಬೆಂಗಳೂರಿನ 33 ಜನರಿಗೆ ಕೊರೋನಾ: ಕುಂಭಯಾತ್ರಿಗಳೇ ಸುಪರ್-ಸ್ಪ್ರೆಡರ್ಸ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...