ತಮಿಳುನಾಡಿನಲ್ಲಿ ಕೋವಿಡ್ ಪರಿಹಾರಕ್ಕಾಗಿ ತನ್ನ ಚಿನ್ನದ ಸರವನ್ನು ದಾನ ಮಾಡಿದ್ದ 23 ವರ್ಷದ ಯುವತಿಗೆ ಉದ್ಯೋಗ ನೀಡಲಾಗಿದೆ. ಈ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಯೋಗ ನೀಡುವುದಾಗಿ ಹೇಳಿದ್ದ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ಪೊತ್ತನೇರಿ ಗ್ರಾಮದ ಎಂಜಿನಿಯರಿಂಗ್ ಪದವೀಧರರಾದ ಆರ್.ಸೌಮ್ಯಾ ಅವರು ಸೇಲಂ ಬಳಿಯ ಮೆಟ್ಟೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಂ.ಕೆ.ಸ್ಟಾಲಿನ್ ಅವರಿಗೆ ಚಿನ್ನದ ಸರವನ್ನು ದೇಣಿಗೆ ನೀಡುವ ಜೊತೆಗೆ ಉದ್ಯೋಗದ ಅರ್ಜಿಯನ್ನು ನೀಡಿದ್ದರು.
ಕಳೆದ ವರ್ಷ ನ್ಯುಮೋನಿಯಾದಿಂದಾಗಿ ತನ್ನ ತಾಯಿ ಸಾವನ್ನಪ್ಪಿದ್ದಾರೆ. ತಮ್ಮ ತಂದೆಗೆ ಬರುವ 7,000 ರೂಪಾಯಿ ಪಿಂಚಣಿ ಹಣದಿಂದ ಕುಟುಂಬವನ್ನು ಪೂರೈಸಲು ಹೆಣಗಾಡುತ್ತಿದ್ದೇವೆ. ಮದುವೆಯಾಗಿರುವ ಇಬ್ಬರು ಹಿರಿಯ ಸಹೋದರಿಯರು ಆರ್ಥಿಕವಾಗಿ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ, ನಾನು ಉದ್ಯೋಗ ಹುಡುಕುತ್ತಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ಎಐಡಿಎಂಕೆಯಲ್ಲಿ ಬಂಡಾಯದ ಬಿರುಗಾಳಿ
தங்கம் நிகர் எண்ணம் கொண்ட தங்கை சௌமியாவிற்கு வேலை வழங்கப்பட்டுள்ளது.
தொலைபேசி வாயிலாகத் தொடர்புகொண்டு பொன்மகளை வாழ்த்தினேன்.
சுமைகள் குறையட்டும்; மகிழ்ச்சி பொங்கட்டும்! https://t.co/irwCk54G3b pic.twitter.com/tOOGeM8BGG
— M.K.Stalin (@mkstalin) June 15, 2021
ಸೌಮ್ಯಾ ಅವರಿಗೆ ಕೆಲಸ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದರು. ಈಗ ಆಕೆಗೆ ಉದ್ಯೋಗ ನೀಡಿ, ಚಿನ್ನದ ಮನಸ್ಸಿನ ಹುಡುಗಿ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕರೆದಿದ್ದಾರೆ. ಸೌಮ್ಯಾ ಅವರನ್ನು ದೂರವಾಣಿ ಮೂಲಕ ಸ್ಟಾಲಿನ್ ಅಭಿನಂದಿಸಿದ್ದಾರೆ.
ಸಚಿವ ವಿ ಸೆಂಥಿಲ್ ಬಾಲಾಜಿ ಮೆಟ್ಟೂರಿನ ಸೌಮ್ಯಾ ಅವರ ಮನೆಗೆ ಭೇಟಿ ನೀಡಿ ಜೆಎಸ್ಡಬ್ಲ್ಯು ಸ್ಟೀಲ್ಸ್ ಲಿಮಿಟೆಡ್ನಿಂದ (JSW Steels Ltd) ನೇಮಕಾತಿಯ ಆದೇಶ ಪತ್ರವನ್ನು ಹಸ್ತಾಂತರಿಸಿದ್ದಾರೆ. ಆಕೆಗೆ ಮಾಸಿಕ ಒಟ್ಟು ವೇತನವಾಗಿ 17,500 ರೂಪಾಯಿ ನೀಡಲಾಗುತ್ತದೆ ಎನ್ನಲಾಗಿದೆ.
“ಮುಖ್ಯಮಂತ್ರಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅರ್ಜಿಯನ್ನು ಪ್ರಸ್ತಾಪಿಸಿದಾಗ ಮತ್ತು ಉದ್ಯೋಗದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಾಗ ನನಗೆ ಆತಂಕದಲ್ಲಿದ್ದೆ. ಅವರ ಕೆಲಸದ ಒತ್ತಡದ ನಡುವೆಯೂ, ಅವರು ನನ್ನ ಅರ್ಜಿಯನ್ನು ನೋಡಲು ಸಮಯ ನೀಡಿರುವುದನ್ನು ಆಶೀರ್ವಾದ ಎಂದುಕೊಳ್ಳುತ್ತೇನೆ. ’ನಾನು ನನ್ನ ಕೆಲಸವನ್ನು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ ಮತ್ತು ಮುಖ್ಯಮಂತ್ರಿಗಳಿಗೆ ಶಾಶ್ವತವಾಗಿ ಕೃತಜ್ಞಳಾಗಿರುತ್ತೇನೆ” ಎಂದು ಸೌಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: ತರಬೇತಿ ಪಡೆದ ಮಹಿಳೆಯರನ್ನು ಅರ್ಚಕರಾಗಿ ನೇಮಿಸಲಾಗುತ್ತದೆ: ತಮಿಳುನಾಡು ಸಚಿವ


