Homeಕವನಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

ಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

- Advertisement -
- Advertisement -

ಹಾ….
ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು
ಅನುಭವಿಸಿದ್ದೇನೊ ಕೆಲವು
ಕಂಡದ್ದು ಹಲವು
ಆದರೆ ಎಲ್ಲವೂ ಸ್ವಂತದ್ದು
ಆದರದೇಕೊ ನಕ್ಕೊಮ್ಮೆ ಸುಮ್ಮನಾಗುವೆ ನಾನು
ಹೇಳಲು ಬಹಳಷ್ಟಿದ್ದರು

ಚಿಮಣಿ ಮೇಲಿನ ದೀಪದುರಿಯ ಕಪ್ಪಿನಲಿ
ಹೂತ ಕನಸುಗಳ ಚಿತ್ರವ ಕಂಡು……
ನನ್ನಮ್ಮ ಅಪ್ಪನಿಗೆ ಭರವಸೆಯೊಂದೆ
ಹೊಟ್ಟೆ ತುಂಬಿಸಿದ
ಖಾಲಿ ನೀರವ ರಾತ್ರಿಗಳ ನೆನೆದು

ನೀವು ನಾನಾಗದೆ ನಾನೇ ನೀವಾಗಲೊರಟು
ವಿಳಾಸವಿರದ ಊರಿನಲಿ
ದಾರಿ ತಪ್ಪಿ
ಕೊಳವಾದ ಕಂಗಳಲಿ
ಮಾಡಿದೊಂಟಿ ಯುದ್ಧವ ನೆನೆದು…..
ಸುಮ್ಮನಾದೆ ನಾನು

ಇದ್ದ ಬದುಕಿಗಿಡಿದ ಕನ್ನಡಿಯೆದುರು
ಹೊಸಕಿ‌ – ಕೊಂದ ಕನಸುಗಳ ಬಿಂಬ ಕಂಡು
ಹೆದರಿ ಮುದುರಿ ಮೌನಿಯಾದ ಕ್ಷಣವ ನೆನೆದು
ಸುಮ್ಮನಾಗಿ ಬಿಟ್ಟೆ ನಾನು
ಮಾತು ಬರುವ ಮೂಕಿಯಂತೆ
ಹೇಳಲು ಎಷ್ಟೊ ಅದೆಷ್ಟೋ ಇದ್ದರು

ಶಾಶ್ವತವಲ್ಲದೀ ದುಡ್ಡು
ಮೂಡಿಸಿದ ಶಾಶ್ವತ ಗುರುತುಗಳ
ಲೆಕ್ಕ ಪಟ್ಟಿಯ ಲೆಕ್ಕಗಳಲಿ
ಒದ್ದೆಯಾದ ಕಂಗಳನು
ಹುದುಗಿಸಿಡುತ
ಸುಮ್ಮನಾಗುವೆ ನಾನು
ನಿಮ್ಮಗಳೆದುರು
ನಾಲಿಗೆಯ ತುದಿಯಲ್ಲಿ
ಜಾರಲು ಅವೆಷ್ಟೋ ಮಾತುಗಳು ತವಕಿಸುತ್ತಿದ್ದರು

ಚೆಂದದ ನೋಟ ನಮ್ಮನ್ನಳೆವ ಮಾನದಂಡ
ಬೆಂಗಳೂರಿನಲ್ಲಿಇದೇ ನಾ ಕಲಿತ ಮೊದಲ ಪಾಠ
ಕಲಿಕೆಗೇನು ಕೊನೆಮೊದಲಿಲ್ಲವಲ್ಲ
ಪ್ರದರ್ಶನಕ್ಕೆ ಅಡ್ಡಿ ಮಾಡಿತ್ತು
ಧೂಳು ಹಿಡಿದು ತೂತು ಬಿದ್ದ ಆ ಖಾಲಿ ಪರ್ಸ್‌
ಅದನ್ನೇ ನೆನೆವೆ………ಅದನ್ನೇ ನೆನೆದು
ಸುಮ್ಮನಾಗಿ ಬಿಡುವೆ ನಾನು
ನಿಮ್ಮೆಲ್ಲರ ಇಂದಿನ ಗೇಲಿಗಳಿಗೆ
ಭರ್ತಿ ಪರ್ಸ್‌ ಕಿಸೆಯೊಳಗಿದ್ದರು

ಬೊಗಸೆ ತುಂಬ ಸಂಬಳವೆಣಿಸುತ್ತ
ಖರ್ಚಿಗೊಂದು ಬಾರಿ ಸಂಕಲನ ವ್ಯವಕಲನಕ್ಕೆ
ಓರೇ ಹಚ್ಚುವ ನಾನು
ಕೊಂದ ಕನಸುಗಳ, ಮರೆತ ನೋವುಗಳ
ಪಟ್ಟಿ ಇಟ್ಟು ವಾದ ಮಾಡದ ನಾನು
ಜಿಪುಣತನಕ್ಕೊಂದು ಆದರ್ಶ ಉದಾಹರಣೆ
ನಿಮ್ಮಗಳ ಮುಂದೆ
ಆದರು ಅದೇಕೊ
ನಕ್ಕು ಸುಮ್ಮನಾಗುವೆ ನಾನು
ಇಂದಿನಂತಯೇ ……..ಮುಂದೆಯೂ ಕೂಡ

ಉತ್ತರಿಸಲಾರೆ ಎಂದಲ್ಲ
ನಾ ನಡೆದ ಬದುಕಿನ ದಾರಿಯಲಿ
ಹೆಜ್ಜೆ ಕೂಡ ಇಡದ ನಿಮಗೆ
ಪಯಣದ ವರದಿಯ ನೀಡಿ ಸಾಧಿಸುವುದಾದರು ಏನು ? ನಾನು.

ಹಾ….ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು.

ಅನುಷಾ ಚಂದ್ರು

(ಮೂಲತಾ ಚಿಕ್ಕಮಗಳೂರಿನ ಸಖರಾಯಪಟ್ಟಣದವರು. ಕನ್ನಡದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು, ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.)


ಇದನ್ನೂ ಓದಿ: ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...