ಕೊರೊನಾ ಸಾಂಕ್ರಾಮಿಕ ರೋಗ ರಾಜ್ಯದ ಬಹುತೇಕ ಜನರ ಜೀವನವನ್ನು ಅಧೋಗತಿಗೆ ನೂಕಿದೆ. ಸಾವಿರಾರು ಕಲಾವಿದರ ಬದುಕು ಅತಂತ್ರವಾಗಿದೆ. ಇಂತಹದ್ದೇ ಸ್ಥಿತಿಯಲ್ಲಿ ಕರ್ನಾಟಕದ ಮಾನವ ಕಂಪ್ಯೂಟರ್ ಎಂದೇ ಪ್ರಸಿದ್ದರಾಗಿರುವ ವಿಶೇಷ ಚೇತನ ಸಿದ್ದು ಎಸ್.ಲೌಟೆ ಅವರು ಕೊರೊನಾ ಬಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಿದ್ದು ಎಸ್.ಲೌಟೆಯವರನ್ನು ನಡೆದಾಡುವ ಜ್ಞಾನ ಭಂಡಾರ, ಕರ್ನಾಟಕದ ಮಾನವ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಿದ್ಧು ಕ್ವೀಜ್ ಎಂಬ ಕಾರ್ಯಕ್ರಮ ನಿರೂಪಣೆ ಮುಖಾಂತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ಈ ಮೂಲಕ ನೇರ ಪ್ರಸಾರದ ಟಿವಿ ಕಾರ್ಯಕ್ರಮ ನಡೆಸಿಕೊಟ್ಟ ವಿಶ್ವದ ಮೊದಲ ದೃಷ್ಟಿ ವಿಶೇಷ ಚೇತನ ಎಂಬ ಕೀರ್ತಿಯನ್ನೂ ಸಹ ಗಳಿಸಿದ್ದಾರೆ.
ದೃಷ್ಟಿಗಿಂತ ದೃಷ್ಟಿಕೋನ ಮುಖ್ಯ ಎಂಬುದು ಸಿದ್ದು ಅವರದ್ದೇ ಮಾತುಗಳು. ಆದರೆ, ಕೊರೊನಾ ಈಗ ಅವರನ್ನು ಸಂಕಷ್ಟಕ್ಕೆ ನೂಕಿದ್ದು, ಅದರ ವಿರುದ್ಧ ಹೋರಾಡಲು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
’ಅನಿರೀಕ್ಷಿತವಾಗಿ ನಾನು ಕೊರೊನಾಗೆ ತುತ್ತಾಗಿದ್ದು, ಕಳೆದೊಂದು ವಾರದಿಂದ ಖಾಸಗಿ ಪಿಜಿ ಸೌಕರ್ಯವೊಂದರಲ್ಲಿ ಕ್ವಾರಂಟೈನ್ ಆಗಿದ್ದೇನೆ. ಆದರೆ, ಚಿಕಿತ್ಸೆ, ಆಹಾರ ಮತ್ತು ಕೊಠಡಿ ಬಾಡಿಗೆ ಎಲ್ಲವನ್ನೂ ನಾನೇ ನಿರ್ವಹಿಸಬೇಕಾಗಿದ್ದು, ನನ್ನ ಆರ್ಥಿಕ ಸ್ಥಿತಿ ಬಹಳ ಕೆಟ್ಟದಾಗಿದೆ. ಆದ್ದರಿಂದ ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ಇದರಿಂದ ನಾನು ಸುರಕ್ಷಿತವಾಗಿ ಕೊರೊನಾ ಗೆದ್ದು ಬರಲು ಸಹಕಾರಿಯಾಗುತ್ತದೆ’ ಎಂದು ಮನವಿ ಮಾಡಿದ್ದಾರೆ.
ನೆರವು ನೀಡಲು ಬಯಸುವವರು ಕೆಳಗಿನ ಅವರ ಅಕೌಂಟ್ ಖಾತೆಯನ್ನು ಗಮನಿಸಿ.
Siddu S Loute, ಖಾತೆ ಸಂಖ್ಯೆ: 0411101068874 , IFSC ಕೋಡ್: CNRB 0000411 ಕೆನರಾ ಬ್ಯಾಂಕ್, ರಾಜಾಜಿ ನಗರ ಶಾಖೆ, ರಾಜಾಜಿ ನಗರ, ಬೆಂಗಳೂರು 560010
ಇದನ್ನೂ ಓದಿ: ಒಲಂಪಿಕ್ ಅಂಗಳಕ್ಕೆ ಟಿಕೆಟ್ ಕಲೆಕ್ಟರ್ : ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ