2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಾಣವನ್ನು ತ್ವರಿತಗೊಳಿಸುವುದಾಗಿ ಮಾಯಾವತಿಯ ಬಹುಜನ ಸಮಾಜ ಪಕ್ಷ ಶುಕ್ರವಾರ ಭರವಸೆ ನೀಡಿದೆ. ದೇವಾಲಯ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸುವುದು ಮಾತ್ರ ಬಿಜೆಪಿಯ ಕೆಲಸವಾಗಿದೆ ಎಂದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದೆ.
ಉತ್ತರ ಪ್ರದೇಶದ ದಲಿತ ಮತಗಳ ಮೇಲೆಯೇ ಕೇಂದ್ರೀತವಾಗಿರುವ ರಾಜಕೀಯ ಪಕ್ಷ ಬಹುಜನ ಸಮಾಜ ಪಕ್ಷದ ಈ ಹೇಳಿಕೆ ಚುನಾವಣಾ ತಂತ್ರವಾಗಿ ನೋಡಲಾಗುತ್ತಿದೆ. ಬ್ರಾಹ್ಮಣರ ಒಲೈಕೆಗಾಗಿ ಇಂತಹ ಹೇಳಿಕೆಗಳು ಬ್ರಾಹ್ಮಣ ಸಮ್ಮೇಳನಗಳನ್ನು ಬಿಎಸ್ಪಿ ನಡೆಸುತ್ತಿದೆ.
“ಬಿಜೆಪಿಗರು ರಾಮ ಮಂದಿರದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಭವ್ಯವಾದ ರಾಮನ ದೇವಾಲಯವನ್ನು ನಿರ್ಮಿಸಲು ಅದನ್ನು ಬಳಸುತ್ತಿಲ್ಲ. ಬಿಜೆಪಿಗರು ದೇವಾಲಯವನ್ನು ನಿರ್ಮಿಸಲು ಬಯಸುವುದಿಲ್ಲ. ನಾವು ಅವರಿಂದ ಈ ಕೆಲಸ ಆಗುವಂತೆ ಮಾಡುತ್ತೇವೆ. ದೇವಾಲಯ ನಿರ್ಮಾಣ ಚುರುಕುಗೊಳಿಸುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಆಪ್ತ ಸತೀಶ್ ಚಂದ್ರ ಮಿಶ್ರಾ ಅಯೋಧ್ಯೆಯಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ: ಓವೈಸಿ ಜೊತೆ ಮೈತ್ರಿ ತಳ್ಳಿ ಹಾಕಿದ ಮಾಯಾವತಿ
ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಬಿಎಸ್ಪಿ ರಾಜ್ಯದಲ್ಲಿ ಬ್ರಾಹ್ಮಣ ಸಮ್ಮೇಳನಗಳನ್ನು ಆಯೋಜಿಸುತ್ತಿದ್ದು, ಇದು ಮೊದಲನೆಯ ಬ್ರಾಹ್ಮಣ ಸಮ್ಮೇಳನವಾಗಿದೆ. ಆದರೆ, ಅಯೋಧ್ಯೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಮಾಯಾವತಿ ಭಾಗವಹಿಸಸಿರಲಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಮಿಶ್ರಾ ಉಸ್ತುವಾರಿ ವಹಿಸಿದ್ದರು.
ಯುಪಿ ಜನಸಂಖ್ಯೆಯ ಅಂದಾಜು ಶೇಕಡಾ 11 ರಷ್ಟು ಬ್ರಾಹ್ಮಣರು ಇದ್ದು, ಸಾಂಪ್ರದಾಯಿಕವಾಗಿ ರಾಜ್ಯದಲ್ಲಿ ರಾಜಕೀಯ ಮತ್ತು ಅಧಿಕಾರ ಸಮೀಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಬ್ರಾಹ್ಮಣರು ಮತ್ತು ಪರಿಶಿಷ್ಟ ಜಾತಿಗಳ ಮತಗಳಿಂದ 2007 ರಲ್ಲಿ ಮಾಯಾವತಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಬಹುಮತ ಪಡೆದಿದ್ದ ಮಾಯಾವತಿ ಪಕ್ಷ ಐದು ವರ್ಷಗಳ ಕಾಲ ಆಳಿದ್ದರು. ಬಿಎಸ್ಪಿಯಿಂದ ಇಲ್ಲಿಯವರೆಗೆ 40 ಕ್ಕೂ ಹೆಚ್ಚು ಬ್ರಾಹ್ಮಣ ಶಾಸಕರು ಆಯ್ಕೆಯಾಗಿದ್ದಾರೆ.
ಜಾತಿಯ ಆಧಾರದಲ್ಲಿ ಠಾಕೂರ್ ಆಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಬ್ರಾಹ್ಮಣ ಸಮುದಾಯವು ಅಸಮಾಧಾನ ಹೊಂದಿದೆ. ಆದರೆ, ಈ ವಿಚಾರವನ್ನು ಬಿಜೆಪಿ ತಳ್ಳಿಹಾಕಿದೆ.
ಇತ್ತ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಮಾಯಾವತಿಯ ಬಿಎಸ್ಪಿ ಎರಡು ಪಕ್ಷಗಳು ಚುನಾವಣೆಗೆ ಮುನ್ನ ಬ್ರಾಹ್ಮಣ ಸಮುದಾಯವನ್ನು ಗೆಲ್ಲುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ರೈತ ಆಂದೋಲನದ ಹೆಸರಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯ: ಮಾಯಾವತಿ



ಇದು ಬಹಳ ನೋವಿನ ಸಂಗತಿ, ಚುನಾವಣೆಯಲ್ಲಿ ಗೆಲ್ಲಲು ಬಿ.ಎಸ್.ಪಿ. ಇಂತಹ ಹಾದಿಯನ್ನು ಹಿಡಿಯಬಾರದಿತ್ತು. ಅಂಬೇಡ್ಕರ್ ಮತ್ತು ಕಾನ್ಶೀರಾಂ ಅವರ ಕನಸುಗಳನ್ನು ಮಾಯಾವತಿಯವರು ನುಚ್ಚುನೂರು ಮಾಡಿದ್ದಾರೆ.
Super news