Homeಅಂಕಣಗಳುಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್...

ಬಡ್ತಿ ಮೀಸಲಾತಿಗೆ ವಿರೋಧವಿಲ್ಲ. Consequential Seniority ಯ ತಾರತಮ್ಯಕ್ಕೆ ನಮ್ಮ ವಿರೋಧ: ಸಾಮಾನ್ಯ ವರ್ಗದ ಇಂಜಿನಿಯರ್ ವಾದ

ಬಡ್ತಿ ಮೀಸಲಾತಿ ಕುರಿತ ಪರ ಹಾಗೂ ವಿರೋಧದ ವಿವಾದ

- Advertisement -
- Advertisement -

| ಬಾಲು |
(ಸಾಮಾಜಿಕ ನ್ಯಾಯದ ಪರವಾಗಿರುವ, ಆದರೆ ಬಡ್ತಿ ಮೀಸಲಾತಿಯ ನೀತಿಯಲ್ಲಿ ಲೋಪವಾಗಿದೆ ಎಂದು ಭಾವಿಸುವ ಒಬ್ಬ ಸರ್ಕಾರೀ ಅಧಿಕಾರಿ. ಅವರ ಕೋರಿಕೆಯ ಮೇರೆಗೆ ಪೂರ್ಣ ಹೆಸರನ್ನು ಹಾಕಿಲ್ಲ)

ಸಂವಿಧಾನದ ಕಲಂ 16(4ಎ) ರಂತೆ ಯಾವುದೇ ಸರ್ಕಾರವು ತನ್ನ ಸೇವೆಯಲ್ಲಿನ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಕೆಲಸಗಾರರ ಕೊರತೆ ಕಂಡುಬಂದರೆ, ಸದರಿಯವರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸಬಹುದೆಂದು ಹೇಳುತ್ತದೆ.

ರಾಜ್ಯ ಸರ್ಕಾರದ ಬಡ್ತಿ ಹುದ್ದೆಗಳಲ್ಲಿ ಪ.ಜಾ ಮತ್ತು ಪ.ಪಂಗಡದ ಪ್ರಾತಿನಿಧ್ಯ ಅವರವರ ಸಂಖ್ಯೆ ಪ್ರಮಾಣವಾದ ಶೇ.15+ಶೇ.03= ಶೇ.18ಕ್ಕಿಂತ ಕಡಿಮೆ ಇದ್ದ ಕಾರಣ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸಲು 1978ರಿಂದ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲು ಆರಂಭಿಸಿತು. ಇದರಲ್ಲಿ ತಪ್ಪೇನಿಲ್ಲ. ಆದರೆ ಇದನ್ನು ಅನ್ವಯಿಸುವಲ್ಲಿ ಆದ ಲೋಪದ ಕಾರಣದಿಂದ, ಜನಸಂಖ್ಯೆಯ 4-5 ಪಟ್ಟಿನ ತನಕ ಪ್ರಾತಿನಿಧ್ಯ ಹೆಚ್ಚಾಗುವಂತೆ ಆಯಿತು. ಇದೇ ಸಮಸ್ಯೆ. ಉದಾಹರಣೆಗೆ, ಬಿ.ಕೆ.ಪವಿತ್ರ ಪ್ರಕರಣದ ತೀರ್ಪು ಬರುವ ವೇಳೆಗೆ ಕರ್ನಾಟಕ ಸರ್ಕಾರದ ಇಂಧನ/KEB ಇಲಾಖೆಯ ಒಟ್ಟು 35 ಅಇ ಹುದ್ದೆಗಳಲ್ಲಿ 33 ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಗುಂಪಿನವರು, BWSSB ಯ 15 CE ಹುದ್ದೆಗಳಲ್ಲಿ 13 ಹುದ್ದೆಗಳು, ಪಿಡಬ್ಲೂಡಿ ಇಲಾಖೆಯ EE ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳು ಶೇ.18ರ ವರ್ಗದವರ ಪಾಲಾಗಿದ್ದವು.

ಏಕೆಂದರೆ, ಕ್ಲಾಸ್-1 (ಲೋಯರ್ ಕೆಟಗರಿ)ವರೆಗಿನ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಕೊಡಲಾಯಿತು. ನಂತರದ ಮೇಲು ಹಂತದ ಹುದ್ದೆಗಳಿಗೆ ಮೀಸಲಾತಿ ಇರುವುದಿಲ್ಲ. ಇದರಿಂದ ಹೆಚ್ಚುವರಿಯಾಗಿ ಪ.ಜಾ ಮತ್ತು ಪ.ಪಂಗಡದವರು ಸುಮಾರು 3800ರಷ್ಟು ಹುದ್ದೆಗಳಿಗೆ ಬಡ್ತಿ ಪಡೆದುಕೊಂಡಿದ್ದರು. 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಬಂದ ತೀರ್ಪಿನಿಂದಾಗಿ ಅವರುಗಳನ್ನು ಹಿಂಬಡ್ತಿಗೊಳಿಸಲಾಯಿತು. ಏಕೆಂದರೆ ಇವು ಬಡ್ತಿ ಮೀಸಲಾತಿಯ ಮಿತಿಯಲ್ಲಿ ಬರದ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ಗುಂಪಿನವರಿಗೆ ಸಿಗಬೇಕಾದ ಹುದ್ದೆಗಳು. ಇದಕ್ಕೆಲ್ಲಾ ಎಡೆಯಾದದ್ದು ಬಡ್ತಿ ಮೀಸಲಾತಿ ನೀತಿಯಲ್ಲಿ ಅಡಕ ಮಾಡಿರುವ ತತ್ಪರಿಣಾಮ ಹಿರಿತನ (Consequential Seniority). ಇದು ಹೆಚ್ಚಿನ ಪಾಲಿನ ಮೀಡಿಯಾ, ಸಾರ್ವಜನಿಕರಿಗೆ ಇದುವರೆಗೆ ಕಗ್ಗಂಟಿನ ಪದವಾಗಿದೆ.

ಏನಿದು Consequential Seniority?
ಈ ಹೋರಾಟದ ಮುಂಚೂಣಿಯಲ್ಲಿರುವ ಪಿಡಬ್ಲೂಡಿ ಇಲಾಖೆಯವರು ತಿಳಿಸುವಂತೆ ಸದರಿ ಇಲಾಖೆಯಲ್ಲಿ AE, AEE, EE, SE, CE ಹುದ್ದೆಗಳಿವೆ. ಮೇಲಿನ AEಹುದ್ದೆಗಳಿಗೆ ಕೆಲಸಕ್ಕೆ ತೆಗೆದುಕೊಂಡನಂತರ AEE ಹುದ್ದೆಯವರೆಗೆ ಮಾತ್ರ ಬಡ್ತಿ ಮೀಸಲಾತಿ ಇದೆ. ಆದರೂ ಸಹ ಇಂಜಿನಿಯರಿಂಗ್ ಇಲಾಖೆಯಲ್ಲೇ ಬಡ್ತಿ ಮೀಸಲಾತಿ ಸಂಗತಿ ಹೆಚ್ಚು ಸದ್ದು ಮಾಡುತ್ತಿದೆ. 1978ರವರೆಗೆ AEE ಹುದ್ದೆಯಿಂದ AEE ಹುದ್ದೆಗೆ ಬಡ್ತಿ ಹೊಂದಲು 5 ವರ್ಷಗಳ ಸೇವೆ ಸಲ್ಲಿಸಿರಬೇಕಿತ್ತು. ಸುಮಾರು 15 ವರ್ಷಗಳ ಸೇವೆ ನಂತರ ಮೊದಲ ಬಡ್ತಿ AEE ಹುದ್ದೆಗೆ ಎಲ್ಲಾ ಗುಂಪಿನವರಿಗೂ ಸಿಗುತ್ತಿತ್ತು. ಆಗ ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುತ್ತಿದ್ದ ಎಸ್ಸಿ/ಎಸ್ಟಿ ಕೆಲಸಗಾರರು ಕೆಳಗಡೆ ಇರುತ್ತಿದ್ದ ಕಾರಣ ತಡವಾಗಿ ಬಡ್ತಿ ದೊರೆತು 1, 2, 3, 4ನೇ ಹಂತದ ಬಡ್ತಿ ಹುದ್ದೆ ತಲುಪುವ ಹೊತ್ತಿಗೆ ಕೆಳಗಿರುವವರು ನಿವೃತ್ತಿಯಾಗುತ್ತಿದ್ದ ಕಾರಣ ಮೇಲಿನ ಹುದ್ದೆಗಳಲ್ಲಿ ಎಸ್ಸಿ/ಎಸ್ಟಿ ಪ್ರಾತಿನಿಧ್ಯ ಕಡಿಮೆ ಇತ್ತು.

ತದನಂತರ 1978ರಲ್ಲಿ ಎಸ್ಸಿ/ಎಸ್ಟಿ ಗುಂಪಿನವರಿಗೆ ಬಡ್ತಿಯಲ್ಲಿ ಮೀಸಲಾತಿ ದೊರಕಿದ ಕಾರಣ 100 ಹುದ್ದೆಗಳಿಗೆ 18 ಹುದ್ದೆಗಳನ್ನು ಹಿರಿತನ ಪಟ್ಟಿಯಲ್ಲಿ ಕೆಳಗಡೆ ಇರುವವರನ್ನು ಆಯ್ಕೆ ಮಾಡಲಾಯಿತು. 1978ರ ನಂತರದ ಮೊದಲ ಹಂತದ ಬಡ್ತಿಗಳಲ್ಲಿ 5 ವರ್ಷ/ಇಲ್ಲವಾದಲ್ಲಿ 3 ವರ್ಷದ ಪ್ರಾರಂಭಿಕ ಸೇವೆ ಸಲ್ಲಿಸಿದವರು, ಕಡಿಮೆ ವಯಸ್ಸಿನವರು, ಬಡ್ತಿ ಪಡೆದರು. ತದನಂತರದ ವರ್ಷಗಳಲ್ಲಿ ಬಡ್ತಿ ಪಡೆಯದೇ ಕೆಳ ಹಂತಗಳಲ್ಲೇ ಸುದೀರ್ಘ ಸೇವೆ ಸಲ್ಲಿಸಿದ ಇತರರು ಮೊದಲು ವಯೋನಿವೃತ್ತಿ ಹಂತ ತಲುಪುವುದರಿಂದ, ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ ಎಸ್ಸಿ/ಎಸ್ಟಿ ಕೆಲಸಗಾರ ಸಂಖ್ಯೆ ಹೆಚ್ಚಾಯಿತು. ಯಾವ ಪ್ರಮಾಣಕ್ಕೆ ಹೆಚ್ಚಾಯಿತು ಎಂಬುದನ್ನು ಮೇಲೆ ಹೇಳಲಾಗಿದೆ. ಇದರ ಬೆನ್ನು ಹತ್ತಿ ನ್ಯಾಯಾಲಯದ ಕಟ್ಟೆಯಲ್ಲಿ ಇತರರು 2017ರಲ್ಲಿ ಪವಿತ್ರ ಪ್ರಕರಣದಲ್ಲಿ ಇದಕ್ಕೆ ತಡೆ ಪಡೆಯಲಾಯಿತು.

ಏಕೆಂದರೆ ತಮಗಿಂತ ಸೇವೆಯಲ್ಲಿ 10-15 ವರ್ಷ ಕಿರಿಯರ ಕೈಕೆಳಗೆ ಹಿರಿತನ ಹೊಂದಿರುವ ಇತರರು ಕೆಲಸ ಮಾಡುವ ಸ್ಥಿತಿ ಇತ್ತು. ಇದರಿಂದ ಸಹಜವಾಗಿ ಹಿರಿತನ ಹೊಂದಿರುವ ಕೆಲಸಗಾರರು ಮುಜುಗರದಲ್ಲಿ ಕೆಲಸ ಮಾಡುವಂತಾಯಿತು. ಕೆಲಸಗಳಲ್ಲಿ ಹುರುಪು ಕಡಿಮೆಯಾಗತೊಡಗಿತು. ಹಾಗೂ ಮೇಲು ಹಂತದ ಹುದ್ದೆಗಳಲ್ಲಿ ಕಡಿಮೆ ವಯಸ್ಸಿನ/ಸೇವಾಹಿರಿತನದವರು ಕುಳಿತಿದ್ದರಿಂದ ಇತರೆ ಗುಂಪಿನ ಕೆಲಸಗಾರರು ತಮ್ಮ ಸೇವೆಯ ಕೊನೆಯಲ್ಲಿ 1 ಬಡ್ತಿ/2 ಬಡ್ತಿ ಅಥವಾ ಕೆಲವರು ಬಡ್ತಿ ಇಲ್ಲದೆಯೂ ನಿವೃತ್ತರಾದರು. ಇದು ಎಲ್ಲಾ ಇಲಾಖೆಗಳಲ್ಲಿನ ಪರಿಸ್ಥಿತಿ.

ಇದಕ್ಕೆಲ್ಲಾ ಕಾರಣ 1978ರಲ್ಲಿನ ಬಡ್ತಿ ಮೀಸಲಾತಿ ನೀತಿಯಲ್ಲಿರುವ ಶೇ.18ರ ಪ್ರಾತಿನಿಧ್ಯವನ್ನು ಕ್ಲಾಸ್-1 (ಲೋಯರ್ ಕೆಟಗರಿ) ಹುದ್ದೆಯವರಿಗೆ ಮಾತ್ರ ಕೊಡುತ್ತಿದ್ದದ್ದು. ತದನಂತರ ಮೀಸಲಾತಿಯಿಂದ ಬಡ್ತಿ ಪಡೆದ ಎಸ್ಸಿ/ಎಸ್ಟಿ ವರ್ಗದವರಿಗೆ ನೀಡಿದ ತೀರ್ಪಿನಲ್ಲಿ ತತ್ಪರಿಣಾಮದ ಹಿರಿತನಕ್ಕೆ ತಡೆ ಕೊಟ್ಟಿದ್ದಾರೆ ಮತ್ತು 2019ರ ತೀರ್ಪಿನಲ್ಲಿ ತತ್ಪರಿಣಾಮ ಹಿರಿತನವನ್ನು ಮುಂದುವರೆಸಲು ಸಮ್ಮತಿ ನೀಡಿರುವುದು ಇಂದಿನ ಕೋಲಾಹಲಕ್ಕೆ ಕಾರಣವಾಗಿದೆ.

ಇದನ್ನು ಕೇವಲ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ನೋಡುವ ಪರಿಪಾಠ ಇದೆ. ಇದರಿಂದ ಆಡಳಿತಾಂಗದ ಕೆಲಸದ ಮೇಲೆ ಮತ್ತು ಅದರಿಂದ ಒಟ್ಟು ಸಮಾಜದ ಮೇಲೆ ಆಗುವ ಅಡ್ಡ ಪರಿಣಾಮದ ಅರಿವಿಲ್ಲದೇ ಈ ರೀತಿ ಮಾಡಲಾಗುತ್ತಿದೆ.

ಎಸ್ಸಿ/ಎಸ್ಟಿ ಗುಂಪಿನವರನ್ನು ಮೇಲೆ ತರಲು ಸರ್ಕಾರಿ ಕೆಲಸಗಳಿಂದ ಮಾತ್ರ ಸಾಧ್ಯ ಎಂಬುದನ್ನು ಸರ್ಕಾರ ಮುಂದೊಡ್ಡುತ್ತಿದೆ. ಸೀಮಿತ ಸರ್ಕಾರಿ ಯಂತ್ರಾಂಗವನ್ನು ತಕ್ಕ ಹುರಿಯಾಳುಗಳಿಂದ ಕಟ್ಟಿ ಅದರಿಂದ ಒಳ್ಳೆಯ ಪ್ರೊಡಕ್ಟ್ ಪಡೆದು ಇಡೀ ಸಮಾಜವನ್ನು ಮುಂದೆ ತರಲು ದುಡಿಮೆ ಮಾಡಬೇಕಾದ ಸರ್ಕಾರಗಳು ಎಡವುತ್ತಿರುವುದೆಲ್ಲಿ?

ಹಿಂದಿನ ತಲೆಮಾರಿನಲ್ಲಾದ ಶೋಷಣೆಯನ್ನು ವ್ಯಕ್ತಿಗತವಾಗಿ ಇತರ ಜಾತಿಗಳ ಸದಸ್ಯರ ಮೇಲೇರಿ ಅವರ ಬಡ್ತಿ ಹಕ್ಕನ್ನು ಕಿತ್ತು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಇನ್ನೊಬ್ಬರಿಗೆ ಕೊಟ್ಟು ‘ಊನಗೊಂಡಿರುವ ಆಳ್ವಿಕೆ ಕೆಲಸ ಪಡೆ’ ನಮ್ಮ ನಾಡಿನ ಏಳಿಗೆಗೆ ತೊಡಕು ಎಂಬುದು ಕಟ್ಟುಪಾಡು ಮಾಡುವ ವ್ಯವಸ್ಥೆಗೆ ಅರಿವಾಗಬೇಕು. ಇಂತಹ ನಿಯಮಗಳಿಂದ ಸಮಾಜದೊಳಗಿನ ಹಲಪಂಗಡಗಳ ನಡುವೆ ಅದರಲ್ಲೂ ಎಸ್ಸಿ/ಎಸ್ಟಿ ಮತ್ತು ಇತರರ ನಡುವಿನ ಬಿರುಕು ಮತ್ತಷ್ಟು ಹೆಚ್ಚಾಗಲಿದೆ.

ಹಾಗಾಗಿ ಈ Consequential Seniority ಯ ಅನಾಹುತವ್ನು ತಡೆಯಲು ಹಲವಾರು ಶತಮಾನಗಳಿಂದ ತುಳಿತಕ್ಕೊಳಗಾದ ಎಸ್ಸಿ/ಎಸ್ಟಿ ಗುಂಪಿನವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಬಡ್ತಿ ಹುದ್ದೆಗಳಲ್ಲಿಯೂ ಅವಕಾಶ ಕೊಡುವ ನಡೆಯ ಕಡೆ ಸರ್ಕಾರ ಹೆಜ್ಜೆ ಇಡಬೇಕಾಗಿದೆ. ಎಲ್ಲಾ ಪಂಗಡಗಳೂ ಒಗ್ಗಟ್ಟಿನಿಂದ ಇರಬೇಕಿದೆ. ಇದಕ್ಕೆ Vertical bifurcation of all cadre ಎಂದು ಕರೆಯಲಾಗುತ್ತಿದೆ. ಇದು ಈಗಿನ ಕಗ್ಗಂಟನ್ನು ಬಿಡಿಸಲು ಇರುವ ದಾರಿ. ಇನ್ನುಳಿದಂತೆ ಎಸ್ಸಿ/ಎಸ್ಟಿ ಪಂಗಡದವರನ್ನು ಮೇಲೆತ್ತಲು ಇರುವ ಇನ್ನುಳಿದ ದಾರಿಗಳನ್ನು ಕಂಡುಕೊಳ್ಳಬೇಕಿದೆ.

ಬಡ್ತಿ ಮೀಸಲಾತಿ ಪರ ಇರುವ ವಾದಕ್ಕೆ ಇದನ್ನೂ ಓದಿ: ಬಡ್ತಿ ಮೀಸಲು ಕುರಿತು ಸುಪ್ರೀಂ ತೀರ್ಪು ದೇಶಕ್ಕೆ ಮಾದರಿಯಾದುದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...