HomeUncategorizedಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

ಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

- Advertisement -
- Advertisement -

ಚುನಾವಣಾ ನಿಮಿತ್ತ ನ್ಯೂಷ್ ನೇಷನ್ ಎಂಬ ಟಿವಿ ಚಾನೆಲ್ ಒಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ಸಂದರ್ಶನ ನಡೆಸಿತ್ತು. ಚೌರಾಸಿಯ ಎಂಬ ಸಂದರ್ಶಕ ಇಬ್ಬರನ್ನು ಸಂದರ್ಶಿಸಿದ್ದರೂ, ರಾಹುಲ್ ಗಾಂಧಿಗೆ ರಾಬರ್ಟ್ ವಾದ್ರರ ಭ್ರಷ್ಟಾಚಾರ ಪ್ರಕರಣ, 1984ರ ಸಿಖ್ ಹತ್ಯಾಕಾಂಡದಂತಹ ಕಠಿಣ ಪ್ರಶ್ನೆಗಳನ್ನು ಕೇಳಿದರು. ಇದು ಸರಿಯಾದುದ್ದೆ. ಆದರೆ ಮೋದಿಯವರಿಗೆ ಮಾತ್ರ ಯಾವ ತಿಂಡಿ ಇಷ್ಟ, ಯಾವ ಬಟ್ಟೆ ಹಾಕ್ತಿರಿ? ರೋಟಿ ಮಾಡೋಕೆ ಬರುತ್ತಾ, ಕವನ ಬರಿತೀರಾ ಎಂಬಂಥ ಸಿಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಡಿಯೋ ನೋಡಿ, ಅವರು ಕೇಳಿದ ಪ್ರಶ್ನೆಗಳನ್ನು ತಿಳಿಯಲು ಕೆಳಗೆ ಓದಿ.

ವಿಡಿಯೋ ನೊಡಿ

ಸಂದರ್ಶಕ – ಮೋದಿಗೆ: ತಾವು ಏನು ಊಟ-ತಿಂಡಿ ಇಷ್ಟಪಡುತ್ತೀರಿ ಹಾಗೂ ದಿನಕ್ಕೆ ಎಷ್ಟು ಸಲ ಊಟ ಮಾಡುತ್ತೀರಿ?

ರಾಹುಲ್‍ಗೆ: ‘ನ್ಯಾಯ್’ ಯೋಜನೆಯ ಕುರಿತು ನ್ಯೂಸ್ ನೇಶನ್ ಸಂದರ್ಶನದಲ್ಲಿ ಮೋದಿಯವರನ್ನು ಕೇಳಲಾಯಿತು – ‘ರಾಹುಲ್‍ಜೀ ‘ನ್ಯಾಯ್’ ಯೋಜನೆ ಮುಂದಿಟ್ಟಿದ್ದಾರೆ; ಅದರ ಪ್ರಕಾರ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ’ ಎಂದು ಕೇಳಿದ್ದಕ್ಕೆ ಮೋದಿಯವರು, “ನನ್ನ ಬಳಿ ಟ್ರಾಕ್ ರಿಕಾರ್ಡ್ ಇದೆ, ರಾಹುಲ್‍ಜೀ ಬಳಿ ಟೇಪ್ ರೆಕಾರ್ಡರ್ ಇದೆ” ಎಂದರು.

ಮೋದಿಗೆ: ತಾವು ಕ್ಯಾಲರಿ-ಕಾನ್ಶಸ್ ಆಗಿದೀರಾ – ದಿನಕ್ಕೆ ಇಷ್ಟು ಕ್ಯಾಲರಿ ತಿನ್ನಬೇಕು, ಈಗ ಇಷ್ಟು ಕ್ಯಾಲರಿ ತಿಂದುಬಿಟ್ಟಿದೀನಿ, ಸ್ವಲ್ಪ ತಿನ್ನಬೇಕು … ಇತ್ಯಾದಿ?

ರಾಹುಲ್‍ಗೆ: ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಅಥವಾ ಬಿಜೆಪಿಯ ಹೊರತಾಗಿ ಇನ್ಯಾವುದಾದರೂ ಪಕ್ಷ ಅಧಿಕಾರಕ್ಕೆ ಬಂದರೆ ರಫೇಲ್‍ನ ಕಂಟ್ರಾಕ್ಟನ್ನು ಮರು ಪರಿಶೀಲನೆ (ರೀ-ನೆಗೋಶಿಯೇಟ್) ನಡೆಸಲಾಗುವುದಾ?

ಮೋದಿಗೆ: ತಾವು ಏನೇನು ಅಡಿಗೆ ತಯಾರಿಸುತ್ತೀರಿ?
ಮೋದಿ: ಎಲ್ಲವನ್ನೂ ತಯಾರಿಸ್ತೀನಿ …
ಸಂ: ರೊಟ್ಟಿಯನ್ನು ಕೂಡಾ …?
ಮೋ: ಓಹೋ, ಎಲ್ಲವನ್ನೂ ತಯಾರಿಸ್ತೀನಿ.

ಸಂ – ರಾಹುಲ್‍ಗೆ: ಒಂದುವೇಳೆ ಅದರಲ್ಲಿ ರಫೇಲ್‍ನ ಕಂಟ್ರಾಕ್ಟ್‍ನಲ್ಲಿ ತಪ್ಪಾಗಿದೆ ಎಂದಾದಲ್ಲಿ ‘ಅದನ್ನು ರದ್ದುಪಡಿಸಲಾಗುವುದು’ ಅಥವಾ ‘ರೀ-ನೆಗೋಶಿಯೇಟ್ ಮಾಡಲಾಗುವುದು’ ಎಂದು ತಾವೇಕೆ ಓಪನ್ನಾಗಿ ಹೇಳುವುದಿಲ್ಲ? ಯಾಕೆಂದರೆ ಈ ಡೀಲ್‍ನಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ನೀವು ತಿಳಿಯುತ್ತೀರಲ್ಲ…

ಮೋದಿಗೆ: ಕಳೆದ ಐದು ವರ್ಷಗಳಲ್ಲಿ ಎಂದಾದರೂ ನೀವು ಅಡಿಗೆಮನೆಗೆ ಹೋಗಲು ಸಾಧ್ಯವಾಗಿದೆಯಾ?
ರಾಹುಲ್‍ಗೆ: ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿರುವಾಗ ತನಿಖೆ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದಲ್ಲವೆ?

ಮೋದಿಗೆ: ಪ್ರಧಾನ ಮಂತ್ರಿಗಳೆ, ಒಂದು ಬಹಳ ಮಹತ್ವಪೂರ್ಣ ವಿಚಾರ ಏನೆಂದರೆ, ನಿಮ್ಮ ವೇಷಭೂಷಣ ನಿಮಗೆ ಬಹಳ ಒಪ್ಪುತ್ತದೆ (ಸ್ಯೂಟ್ ಆಗುತ್ತದೆ).
ರಾಹುಲ್‍ಗೆ: ರಾಹುಲ್‍ಜೀ, ನಾವು ಪಂಜಾಬಿನಲ್ಲಿದೀವಿ. ಈಚೆಗಷ್ಟೇ ಒಂದು ವಿಚಾರ ಚರ್ಚೆಗೆ ಬಂದಿತ್ತು – 1984ರಲ್ಲಿ ನಡೆದಿದ್ದ ಸಿಖ್ ಗಲಭೆ(ರಯಟ್ಸ್)ಗಳಿಗೆ ಸಂಬಂಧಪಟ್ಟಂತೆ ಸ್ಯಾಮ್ ಪಿತ್ರೋದಾ ಅವರು “ಏನು ಆಗಿದೆಯೋ ಆಗಿದೆ” ಎಂದು ಹೇಳಿದ್ದರು …

ಮೋದಿಗೆ: ಅಂದರೆ ತಾವು ಫ್ಯಾಶನ್ ಬಗ್ಗೆ, ಬಟ್ಟೆಬರೆ ಬಗ್ಗೆಯೂ ಅಷ್ಟೊಂದು ಆಸಕ್ತಿ ಹೊಂದಿದೀರಾ? ಅದರ ಬಗ್ಗೆ ಏನಾದರೂ ಓದುತ್ತೀರಾ? ಯಾವ ಅಕೇಶನ್‍ಗೆ ಎಂತಹ ಉಡುಗೆ ತೊಡಬೇಕು ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ?
ರಾಹುಲ್‍ಗೆ: … ಅವು ಸಂಘಟಿತವಾದ ಗಲಭೆಗಳಾಗಿದ್ದವು, ಅವುಗಳಿಗೆ ಕಾಂಗ್ರೆಸ್ ಪಕ್ಷವೇ ಜವಾಬ್ದಾರ ಎಂದು ಬಿಜೆಪಿಯ ಆರೋಪ…

ಮೋದಿಗೆ: ತಾವು ಜೇಬಿನಲ್ಲಿ ಪರ್ಸ್ ಇಟ್ಕೊಳ್ತೀರಾ?
ರಾಹುಲ್‍ಗೆ: … ಅವರು ಹೇಳಿದರು – ಗುಜರಾತಿನಲ್ಲಿ ಕಾಂಗ್ರೆಸ್ಸು ಜಿಎಸ್‍ಟಿಯನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆ ಎದುರಿಸಿತು, ಸೂರತ್‍ನಲ್ಲಿ ಅದರ ಬಗ್ಗೆ ಬಹಳ ಪ್ರಚಾರ ಕೂಡ ನಡೆಯಿತು. ಆದರೆ ಸೂರತ್‍ನ ಎಲ್ಲ ಸೀಟುಗಳನ್ನೂ ನಾವೇ ಗೆದ್ದೆವು … ಈಗ ಐದು ವರ್ಷಗಳ ಕೆಲಸಕಾರ್ಯಗಳ ಮೇಲೆ ಚುನಾವಣೆ ನಡೆಯುತ್ತಿದೆ – ಎಂದು.

ಇದಕ್ಕೆ ರಾಹುಲ್ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೆಂದರೆ, ಪ್ರಧಾನ ಮಂತ್ರಿಯ ಈ ಉತ್ತರ ಇತ್ತಲ್ಲ, ಅದೂ ಸಹ ಅವರಿಗೆ ಕೊಡಲಾಗಿದ್ದ ನೋಟ್‍ಶೀಟ್‍ನಲ್ಲಿತ್ತಾ? ಅವರ ಮುಂದೊಂದು ಕಾಗದ ಇಟ್ಟಿದ್ದಿರಲ್ಲ, ಅದರಲ್ಲಿ ಈ ಉತ್ತರವನ್ನೂ ಬರೆಯಲಾಗಿತ್ತಾ ಅಥವಾ ಬರೆದಿರಲಿಲ್ಲವಾ? ಎಂದು ಹೇಳಿದ್ದಲ್ಲದೇ ನೀವು ಬೇಕಾದರೆ ಇದನ್ನು ಎಡಿಟ್ ಮಾಡಿಕೊಳ್ಳಿ ಎಂದು ಹೇಳಿ ನಗೆ ಹುಟ್ಟಿಸಿದ್ದರು.

ಈ ರೀತಿಯಾಗಿ ಇಂದು ಮೀಡಿಯಾಗಳು ಸಂಪೂರ್ಣ ಮೋದಿಮಯವಾಗಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಬಲು ಅಪಾಯಕಾರಿ. ಇದು ಮಾಧ್ಯಮಗಳ ದಿವಾಳಿತನ, ಮೋದಿಯವರಿಗೆ ಮಾಧ್ಯಮಗಳ ಮೇಲಿರುವ ಭಯವನ್ನು ಸಹ ತೋರಿಸುತ್ತದೆ. ಮೊದಲೇ ಇಂತಹದೇ ಪ್ರಶ್ನೆಗಳನ್ನು ಕೇಳಬೇಕು ಎಂದು ಸ್ಕ್ರಿಪ್ಟ್ ಪ್ರಶ್ನೆಗಳನ್ನು ಬರೆದುಕೊಟ್ಟು ಸಂದರ್ಶನ ನಡೆಸಬೇಕಾದ ದುರ್ಗತಿಗೆ ಇಂತಹ ಚಾನೆಲ್‍ಗಳು ಇಳಿದಿವೆ.
ಕೊನೆಯಲ್ಲಿ ಒಂದು ಮಾತು: ಮೋದಿಯ ಸಂದರ್ಶನಕ್ಕೆ ಜೊತೆಯಲ್ಲಿ ಒಬ್ಬ ‘ಮಾಡ್’ ಮಹಿಳೆಯನ್ನು ಕರೆದೊಯ್ದಿದ್ದ ಚೌರಾಸಿಯ, ರಾಹುಲ್ ಸಂದರ್ಶನಕ್ಕೆ ಜೊತೆಗೊಬ್ಬ ಪುರುಷನನ್ನು ಕರೆದುಕೊಂಡು ಹೋಗಿದ್ದರು. ಇಲ್ಲಿಯೂ ಅಸಮಾನತೆ ಮಾಡಿದ್ದಾರೆ ನೋಡಿ.

ಇದನ್ನು ಓದಿ: ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...