Homeಅಂಕಣಗಳುಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

- Advertisement -
- Advertisement -

ಜರ್ನಲಿಸಂನಲ್ಲಿ ಜಗತ್ತಿಗೆ ಮಾದರಿಯೆನ್ನಬಹುದಾದ ’ಘಟನೆಯೊಂದರ ತನಿಖಾ ವರದಿ’ ಕೆಲವು ದಿನಗಳ ಹಿಂದೆ ಪ್ರಕಟವಾಯಿತು. ಅದು ಆದದ್ದು ಅಮೆರಿಕದಲ್ಲಿ. ಆ ವರದಿ ತನ್ನದೇ ಪ್ರಭುತ್ವದ ವಿರುದ್ಧವಾಗಿತ್ತು. ಅದೇ ರೀತಿ ಪತ್ರಿಕೋದ್ಯಮಕ್ಕೆ ಕಪ್ಪುಚುಕ್ಕಿ ಎನ್ನುವಂತಹ ವಿದ್ಯಮಾನ ಭಾರತದಲ್ಲಿ ನಡೆಯಿತು. ಮೊದಲನೆಯದರಿಂದ, ತಾನು ನಡೆಸಿದ ಹೀನಾಯ ಅಪರಾಧವನ್ನು ಒಪ್ಪಿಕೊಳ್ಳುವ ಒತ್ತಡ ಪ್ರಭುತ್ವದ ಮೇಲೆ ಸೃಷ್ಟಿಯಾದರೆ, ಎರಡನೆಯ ಘಟನೆಯಲ್ಲಿ ಫೋಟೋಜರ್ನಲಿಸ್ಟ್ ಆಗಿ ತೆರಳಿದ್ದ ವ್ಯಕ್ತಿಯೊಬ್ಬನ ಹಿಂಸಾತ್ಮಕ ಮತ್ತು ಅಮಾನವೀಯ ನಡತೆಯ ಕಾರಣದಿಂದಾಗಿ ಪ್ರಭುತ್ವದ ಅಪರಾಧಗಳು ಹಿನ್ನೆಲೆಗೆ ನೂಕಲ್ಪಟ್ಟವು.

ಮೊದಲನೆಯದು; ರಕ್ತ ಮೆತ್ತಿಕೊಂಡ ಅಮೆರಿಕ ಸ್ಟೇಟ್‌ಗೆ ಮುಜುಗರ ಉಂಟುಮಾಡಿದ ಜರ್ನಲಿಸಂ

ಆಫ್ಘಾನಿಸ್ತಾನವನ್ನು ಆಗಸ್ಟ್ 15ರ ಹೊತ್ತಿಗೆ ತಾಲಿಬಾನ್ ಬಹುತೇಕ ಸಂಪೂರ್ಣವಾಗಿ ವಶಪಡಿಸಿಕೊಂಡ ಮೇಲೆ, ಅಮೆರಿಕನ್ ಮಿತ್ರ ಪಡೆಗಳು ಕಾಬೂಲ್‌ನಿಂದ ಹಿಂದಿರುಗಲು ಇನ್ನೂ ಹರಸಾಹಸ ಪಡುತ್ತಿದ್ದವು. ಆಗಸ್ಟ್ 26ರಂದು ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದ ಸ್ಫೋಟವೊಂದರಿಂದ ಸುಮಾರು 180ಕ್ಕೂ ಹೆಚ್ಚು ಜನ ಮೃತಪಟ್ಟರು ಮತ್ತು ಹಲವರು ಗಾಯಗೊಂಡಿದ್ದರು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಅಫ್ಘನ್ ಪ್ರಜೆಗಳೂ ಸೇರಿದ್ದರು. ಇಸ್ಲಾಮಿಕ್ ಸ್ಟೇಟ್ ಇದರ ಹೊಣೆ ಹೊತ್ತಿದೆ ಎಂದು ವರದಿಯಾಗಿತ್ತು.

ಅಮೆರಿಕಾ

ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದರು. ಇದರಿಂದ ತನ್ನ ಕಣ್ಗಾವಲನ್ನು ಹೆಚ್ಚಿಸಿಕೊಂಡಿದ್ದ ಅಮೆರಿಕನ್ ಸೇನೆ, ಆಫ್ಘಾನಿಸ್ತಾನದ ನೆಲದಲ್ಲಿ ಆಗಸ್ಟ್ 29ರಂದು ಹಲವು ಸಂಶಯಾತ್ಮಕ ಚಲನವಲನಗಳನ್ನು ಗುರುತಿಸಿರುವುದಾಗಿ ಮತ್ತು ಐಸಿಸ್ ’ಸುರಕ್ಷಿತ ಮನೆ’ಗೆ ಹೋಗಿಬರುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿರುವುದಾಗಿ ಹೇಳಿ, ಡ್ರೋನ್ ಕ್ಷಿಪಣಿ ದಾಳಿ ನಡೆಸಿ, ಮೂವರನ್ನು ಕೊಂದುಹಾಕಿದ್ದರ ಬಗ್ಗೆ ತಿಳಿಸಿತ್ತು.

ಅಮೆರಿಕದ ಪ್ರತಿಷ್ಟಿತ ಪತ್ರಿಕೆಯಾದ ’ದ ನ್ಯೂಯಾರ್ಕ್ ಟೈಮ್ಸ್’ ಸೆಪ್ಟಂಬರ್ ಎರಡನೇ ವಾರದಲ್ಲಿ ಮಾಡಿದ ತನಿಖಾ ಪತ್ರಿಕೋದ್ಯಮ ಅಮೆರಿಕ ಸೇನೆಯ ಮೇಲಿನ ಸುಳ್ಳುಗಳನ್ನು ಬಯಲು ಮಾಡಿತ್ತು. ಅಮೆರಿಕದ ಮಿಸೈಲ್ ದಾಳಿಯಿಂದ ಮೃತಪಟ್ಟಿದ್ದು ಐಸಿಸ್ ಉಗ್ರಗಾಮಿಗಳಲ್ಲ, ಬದಲಿಗೆ ಸಾಮಾನ್ಯ ಆಫ್ಘನ್ ನಾಗರಿಕರು ಎಂದು ಆ ವರದಿ ಬಹಿರಂಗಪಡಿಸಿತ್ತು. ಹಾಗೂ ಅಮೆರಿಕ ಸೇನೆ ತಿಳಿಸಿದಂತೆ ಮೃತಪಟ್ಟವರು ಕೇವಲ ಮೂರು ಜನರಲ್ಲ ಬದಲಿಗೆ ಏಳು ಮಕ್ಕಳನ್ನು ಸೇರಿಸಿ 10 ಸಾಮಾನ್ಯ ನಾಗರಿಕರು ಬಲಿಯಾಗಿರುವುದನ್ನು ವರದಿ ತಿಳಿಸಿತ್ತು. ಅಲ್ಲದೆ, ನೇರ ಕ್ಷಿಪಣಿ ದಾಳಿಯಿಂದಲ್ಲದೆ, ತಾನು ದಾಳಿ ಮಾಡಿದ ಕಾರಿನಲ್ಲಿ ಇದ್ದ ಸ್ಫೋಟಕ ವಸ್ಥುಗಳು ಸಿಡಿದ ಕಾರಣಕ್ಕೆ ಅಲ್ಲಿ ಮೃತರ ಸಂಖ್ಯೆ ಹೆಚ್ಚಿತ್ತು ಎಂಬ ಅಮೆರಿಕ ಸೇನೆಯ ಹೇಳಿಕೆ ಕೂಡ ಸುಳ್ಳಿನಿಂದ ಕೂಡಿದ್ದು ಎಂದು ಆ ಪತ್ರಿಕಾ ವರದಿ ಮತ್ತು ತನಿಖಾ ವಿಡಿಯೋ ಸಾಬೀತುಪಡಿಸಿತ್ತು.

ಹಲವು ದೇಶಗಳ ಮೇಲಿನ ತನ್ನ ಸುದೀರ್ಘ ಯುದ್ಧದಲ್ಲಿ ಎಷ್ಟೋ ಬಾರಿ ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡಿ ಕೊಂದಿರುವ ಆರೋಪಗಳಿಂದ ನುಣುಚಿಕೊಂಡಿದ್ದ ಅಮೆರಿಕ ಆಡಳಿತ ವ್ಯವಸ್ಥೆಗೆ ಈ ಬಾರಿ ಭಾರಿ ಮುಜುಗರ ತಂದೊಡ್ಡಿದ್ದು ’ದ ನ್ಯೂಯಾರ್ಕ್ ಟೈಮ್ಸ್’ನ ಪತ್ರಿಕೋದ್ಯಮ. ಕ್ಯಾಲಿಫೋರ್ನಿಯಾ ಮೂಲದ ’ನ್ಯೂಟ್ರಿಶನಲ್ ಅಂಡ್ ಎಜುಕೇಶನಲ್ ಇಂಟರ್‌ನ್ಯಾಷನಲ್’ ಎಂಬ ನೆರವು ನೀಡುವ ಸಂಸ್ಥೆಯೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೆಮಾರಿ ಅಹ್ಮದಿಯ ಚಲನವಲನವನ್ನು ಐಎಸ್ ಉಗ್ರರ ಚಲನವಲನ ಎಂದು ಕರೆದು, ಅಮೆರಿಕ ಸೇನೆ ಆತನ ಕಾರಿನ ಮೇಲೆ ದ್ರೋಣ್ ಕ್ಷಿಪಣಿ ನಡೆಸಿದ್ದರ ಪರಿಣಾಮವಾಗಿ ಆತನ ಜೊತೆಗೆ ಏಳು ಪುಟ್ಟ ಮಕ್ಕಳು ಸೇರಿದಂತೆ 10 ಜನರನ್ನು ಆಹುತಿ ತೆಗೆದುಕೊಂಡಿತ್ತು. ಆದರೆ ಅಂದು ಜೆಮಾರಿ ಅಹ್ಮದಿಯ ಎಲ್ಲಾ ಚಲನವಲನಗಳು ಎಂದಿನ ದಿನದ ಸಾಮಾನ್ಯ ಕೆಲಸದ ಭಾಗವಾಗಿತ್ತು ಎಂದು ತನಿಖಾ ವರದಿ ಸಾಬೀತುಪಡಿಸಿತ್ತು.

ಚಿತ್ರ ಕೃಪೆ: ದ ನ್ಯೂಯಾರ್ಕ್ ಟೈಮ್ಸ್

ಭಯೋತ್ಪಾದನೆ ವಿರುದ್ಧದ ಯುದ್ಧ ಎಂದು ಹೇಳಿಕೊಂಡು ನಡೆಸುವ ಇಂತಹ ನಾಗರಿಕ ಹತ್ಯೆಗಳಿಗೆ ಪರಿಹಾರವೇನು? ಇದಕ್ಕೆ ಅಮೆರಿಕ ಪ್ರಭುತ್ವ ಬೆಲೆತೆತ್ತುವುದು ಯಾವಾಗ? ಈಗ ಇದೊಂದು “ದುರಂತಮಯ ತಪ್ಪು” ಎಂದು ಅಮೆರಿಕ ಪ್ರಭುತ್ವ ಒಪ್ಪಿಕೊಂಡಿದ್ದರೂ, ಹೋದ ಅಮಾಯಕ ಜೀವಗಳನ್ನು ಮರಳಿ ತರಬಲ್ಲದೇ ಅದು? ಕೊನೆ ಪಕ್ಷ ಈ ತಪ್ಪುಗಳನ್ನು ಜಗತ್ತಿನ ಮುಂದೆ ತೋರಿಸಲು, ಒಂದು ಪ್ರಭುತ್ವ ನಡೆಸಬಲ್ಲ ಹೀನಾಯ ಕೃತ್ಯಗಳನ್ನು ಬಯಲಿಗೆಳೆಯಲು ಅದೇ ದೇಶದ ಕೆಲವಾದರೂ ಪತ್ರಕರ್ತರು ಇನ್ನೂ ತಮ್ಮ ಸಿಟ್ಟನ್ನು, ತಾವೂ ನಿಭಾಯಿಸಬೇಕಿರುವ ಕರ್ತವ್ಯವನ್ನು ಜೀವಂತವಾಗಿರಿಸಿಕೊಂಡಿದ್ದಾರೆ ಎಂಬುದೇ ನಿಟ್ಟುಸಿರು!

ಎರಡನೆಯದು; ದೇಹ ತಣ್ಣಗಾಗುವ ಮುನ್ನವೇ ಅದರ ಮೇಲೆ ಕುಪ್ಪಳಿಸಿ ಗುದ್ದಿದ ಫೋಟೋಗ್ರಾಫರ್!

ಪ್ರವಾಸ ಕೈಗೊಂಡಿದ್ದ ಈ ದೇಶದ ಪ್ರಧಾನಿ ಅಮೆರಿಕ ನೆಲದಲ್ಲಿ, ಆಫ್ಘಾನಿಸ್ತಾನ ಭಯೋತ್ಪಾದನೆಯ ನೆಲವಾಗುವುದರ ಬಗ್ಗೆ ಒಂದು ಕಡೆ ಆತಂಕ ವ್ಯಕ್ತಪಡಿಸುತ್ತಿದ್ದರೆ, ತಮ್ಮದೇ ದೇಶದ ರಾಜ್ಯವಾದ ಅಸ್ಸಾಂನ ಪೊಲೀಸರು ಸಾಮಾನ್ಯ ನಾಗರಿಕರ ಮೇಲೆ ಗುಂಡುಹಾರಿಸಿ ಕನಿಷ್ಟ ಇಬ್ಬರನ್ನು ಹತ್ಯೆಗೈದಿದ್ದರು. ಅಷ್ಟು ಸಾಲದು ಎಂಬಂತೆ, ಪೊಲೀಸರ ಜೊತೆಗೆ ತೆರಳಿದ್ದ ಫೋಟೋಜರ್ನಲಿಸ್ಟ್ ಒಬ್ಬ ಆಗತಾನೆ ಗುಂಡುಬಿದ್ದು ನೆಲಕ್ಕುರುಳಿದ ವ್ಯಕ್ತಿಯ ಮೃತ ದೇಹ ತಣ್ಣಗಾಗುವ ಮುಂಚೆಯೇ, ಆ ದೇಹದ ಮೇಲೆ ಕುಪ್ಪಳಿಸುವ, ಆ ದೇಹಕ್ಕೆ ಗುದ್ದುವ ವಿಡಿಯೋ ಮತ್ತು ಫೋಟೋಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದವು. ತನ್ನ ಮುಂದೆ ಘಟಿಸಿದ ಒಂದು ಸಾವು ಕೊನೆಪಕ್ಷ ಮನುಷ್ಯನ ಕ್ರೌರ್ಯವನ್ನು ಅದುಮಿಟ್ಟುಕೊಳ್ಳುವಂತೆ ಮಾಡಿ, ಸಣ್ಣ ವೇದನೆಯನ್ನೂ ಸೃಷ್ಟಿಸಲು ಸಾಧ್ಯವಾಗದೆ ಹೋದರೆ, ಎಂತಹ ವಿಕೃತ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ ಎಂಬುದಕ್ಕೆ ಅದು ದ್ಯೋತಕವಾಗಿತ್ತು.

ಅಸ್ಸಾಂನ ರಾಜಧಾನಿ ಗೌಹಾಟಿಯಿಂದ ಸುಮಾರು 70 ಕಿಲೋಮೀಟರ ದೂರದಲ್ಲಿರುವ ಧೋಲಾಪುರ್‌ನಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ಆರೋಪಿಸಲಾಗಿರುವ ಪೂರ್ವ ಬಂಗಾಳ ಮೂಲದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 800 ಕುಟುಂಬಗಳನ್ನು ಅವರ ಟಿನ್ ಶೆಡ್‌ಗಳಿಂದ ತೆರವುಗೊಳಿಸುವ ಯೋಜನೆಯ ಭಾಗವಾಗಿ ಸೆಪ್ಟಂಬರ್ 20- 23ರ ನಡುವೆ ಪೊಲೀಸರು ಅಲ್ಲಿ ನೆರೆದಿದ್ದರು. ಸರಿಯಾದ ನೋಟಿಸ್ ಸಿಗದಿದ್ದಕ್ಕೆ ಕಂಗಾಲಾಗಿದ್ದ ಆ ಕುಟುಂಬಗಳ ಜನರು ಪ್ರತಿರೋಧ ತೋರಿದ್ದಾರೆ. ಒಬ್ಬ ವ್ಯಕ್ತಿ ಬೆತ್ತವೊಂದನ್ನು ಹಿಡಿದು ಪೊಲೀಸರತ್ತ ನುಗ್ಗಿ ಬರುವ ಒಂದು ದೃಶ್ಯವನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಆದರೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪೊಲೀಸರಿಗೆ ಆ ಗುಂಪನ್ನು ಚದುರಿಸುವುದು ಕಷ್ಟವೇನಿರಲಿಲ್ಲ. ಬದಲಿಗೆ ಏಕಾಏಕಿ ಗುಂಡಿನ ಸುರಿಮಳೆಗೈದು ಇಬ್ಬರ ಹತ್ಯೆಗೆ ಮತ್ತು ಹಲವರ ಗಾಯಗಳಿಗೆ ಕಾರಣವಾಗಿದ್ದಾರೆ. ಕೆಲವರು ಪೊಲೀಸರು ಕೂಡ ಗಾಯಗೊಂಡಿದ್ದಾರೆ.

ಜನಸಾಮಾನ್ಯರ ಮೇಲಿನ ದರ್ಪ ಮತ್ತು ಪೊಲೀಸರ ಹದ್ದುಮೀರಿದ ವರ್ತನೆ ಒಂದು ಕಡೆಯಾದರೆ, ಅವರ ಜೊತೆಗೆ ತೆರಳಿದ್ದ ಫೋಟೋಗ್ರಾಫರ್, (ಈಗ ಘಟನೆಯ ನಂತರ ಬಂಧಿತನಾಗಿದ್ದಾನೆ) ಬಿಜೋಯ್ ಬನಿಯಾನ ವರ್ತನೆ ಇಡೀ ಮನುಕುಲಕ್ಕೆ ನಾಚಿಕೆ ತರುವಂತಿತ್ತು! ಅದರ ನಂತರ ಅಸ್ಸಾಂನ ಪತ್ರಿಕೆಗಳು ಈ ಘಟನೆಯನ್ನು ವರದಿ ಮಾಡಿದ ರೀತಿ ಕೂಡ, ಆಡಳಿತ ವ್ಯವಸ್ಥೆಯ ಪರವಾದ ನಿಲುವನ್ನೇ ವಹಿಸಿದ್ದವು ಎಂದು ಮುಂದಿನ ದಿನದ ದಿನಪತ್ರಿಕೆಗಳ ಬರಹಗಳನ್ನು ವಿಶ್ಲೇಷಿಸಿರುವ ’ನ್ಯೂಸ್‌ಲಾಂಡ್ರಿ’ ಪತ್ರಿಕೆ ತಿಳಿಸಿದೆ.

ಜನರಲ್ ಡೈಯರ್ ಮತ್ತವನ ಸಂತತಿ ಸತ್ತರೂ ಜಲಿಯನ್‌ವಾಲಾ ಬಾಗ್ ದುರಂತ ಹಲವು ರೂಪಗಳಲ್ಲಿ ಮರುಕಳಿಸುತ್ತಿರುತ್ತದೆ ಎಂಬುದಕ್ಕೆ ಅಸ್ಸಾಂನ ಈ ಘಟನೆಯೇ ಸಾಕ್ಷಿ. ಆದರೆ ನಾಗರಿಕ ಸಮಾಜದ ಒಂದು ವರ್ಗ ಅಂತಹ ಡೈಯರ್‌ಗಳ ಇಂದಿನ ಅವತಾರಗಳ ಪರ ವಹಿಸಿ ನಿಲ್ಲುತ್ತಿರುವುದು ಈ ಯುಗದ ದುರಂತವಷ್ಟೇ!


ಇದನ್ನೂ ಓದಿ: ಅಸ್ಸಾಂ: ಕ್ಯಾಮರಾ ಮುಂದೆಯೆ ಪೊಲೀಸರಿಂದ ಕ್ರೂರವಾಗಿ ಹತ್ಯೆಯಾದ ವ್ಯಕ್ತಿ ಅಕ್ರಮ ನಿವಾಸಿಯಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...