Homeಅಂಕಣಗಳುಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

- Advertisement -
- Advertisement -

ಜರ್ನಲಿಸಂನಲ್ಲಿ ಜಗತ್ತಿಗೆ ಮಾದರಿಯೆನ್ನಬಹುದಾದ ’ಘಟನೆಯೊಂದರ ತನಿಖಾ ವರದಿ’ ಕೆಲವು ದಿನಗಳ ಹಿಂದೆ ಪ್ರಕಟವಾಯಿತು. ಅದು ಆದದ್ದು ಅಮೆರಿಕದಲ್ಲಿ. ಆ ವರದಿ ತನ್ನದೇ ಪ್ರಭುತ್ವದ ವಿರುದ್ಧವಾಗಿತ್ತು. ಅದೇ ರೀತಿ ಪತ್ರಿಕೋದ್ಯಮಕ್ಕೆ ಕಪ್ಪುಚುಕ್ಕಿ ಎನ್ನುವಂತಹ ವಿದ್ಯಮಾನ ಭಾರತದಲ್ಲಿ ನಡೆಯಿತು. ಮೊದಲನೆಯದರಿಂದ, ತಾನು ನಡೆಸಿದ ಹೀನಾಯ ಅಪರಾಧವನ್ನು ಒಪ್ಪಿಕೊಳ್ಳುವ ಒತ್ತಡ ಪ್ರಭುತ್ವದ ಮೇಲೆ ಸೃಷ್ಟಿಯಾದರೆ, ಎರಡನೆಯ ಘಟನೆಯಲ್ಲಿ ಫೋಟೋಜರ್ನಲಿಸ್ಟ್ ಆಗಿ ತೆರಳಿದ್ದ ವ್ಯಕ್ತಿಯೊಬ್ಬನ ಹಿಂಸಾತ್ಮಕ ಮತ್ತು ಅಮಾನವೀಯ ನಡತೆಯ ಕಾರಣದಿಂದಾಗಿ ಪ್ರಭುತ್ವದ ಅಪರಾಧಗಳು ಹಿನ್ನೆಲೆಗೆ ನೂಕಲ್ಪಟ್ಟವು.

ಮೊದಲನೆಯದು; ರಕ್ತ ಮೆತ್ತಿಕೊಂಡ ಅಮೆರಿಕ ಸ್ಟೇಟ್‌ಗೆ ಮುಜುಗರ ಉಂಟುಮಾಡಿದ ಜರ್ನಲಿಸಂ

ಆಫ್ಘಾನಿಸ್ತಾನವನ್ನು ಆಗಸ್ಟ್ 15ರ ಹೊತ್ತಿಗೆ ತಾಲಿಬಾನ್ ಬಹುತೇಕ ಸಂಪೂರ್ಣವಾಗಿ ವಶಪಡಿಸಿಕೊಂಡ ಮೇಲೆ, ಅಮೆರಿಕನ್ ಮಿತ್ರ ಪಡೆಗಳು ಕಾಬೂಲ್‌ನಿಂದ ಹಿಂದಿರುಗಲು ಇನ್ನೂ ಹರಸಾಹಸ ಪಡುತ್ತಿದ್ದವು. ಆಗಸ್ಟ್ 26ರಂದು ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದ ಸ್ಫೋಟವೊಂದರಿಂದ ಸುಮಾರು 180ಕ್ಕೂ ಹೆಚ್ಚು ಜನ ಮೃತಪಟ್ಟರು ಮತ್ತು ಹಲವರು ಗಾಯಗೊಂಡಿದ್ದರು. ಇದರಲ್ಲಿ ಅಮೆರಿಕ, ಬ್ರಿಟನ್ ಮತ್ತು ಅಫ್ಘನ್ ಪ್ರಜೆಗಳೂ ಸೇರಿದ್ದರು. ಇಸ್ಲಾಮಿಕ್ ಸ್ಟೇಟ್ ಇದರ ಹೊಣೆ ಹೊತ್ತಿದೆ ಎಂದು ವರದಿಯಾಗಿತ್ತು.

ಅಮೆರಿಕಾ

ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದರು. ಇದರಿಂದ ತನ್ನ ಕಣ್ಗಾವಲನ್ನು ಹೆಚ್ಚಿಸಿಕೊಂಡಿದ್ದ ಅಮೆರಿಕನ್ ಸೇನೆ, ಆಫ್ಘಾನಿಸ್ತಾನದ ನೆಲದಲ್ಲಿ ಆಗಸ್ಟ್ 29ರಂದು ಹಲವು ಸಂಶಯಾತ್ಮಕ ಚಲನವಲನಗಳನ್ನು ಗುರುತಿಸಿರುವುದಾಗಿ ಮತ್ತು ಐಸಿಸ್ ’ಸುರಕ್ಷಿತ ಮನೆ’ಗೆ ಹೋಗಿಬರುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿರುವುದಾಗಿ ಹೇಳಿ, ಡ್ರೋನ್ ಕ್ಷಿಪಣಿ ದಾಳಿ ನಡೆಸಿ, ಮೂವರನ್ನು ಕೊಂದುಹಾಕಿದ್ದರ ಬಗ್ಗೆ ತಿಳಿಸಿತ್ತು.

ಅಮೆರಿಕದ ಪ್ರತಿಷ್ಟಿತ ಪತ್ರಿಕೆಯಾದ ’ದ ನ್ಯೂಯಾರ್ಕ್ ಟೈಮ್ಸ್’ ಸೆಪ್ಟಂಬರ್ ಎರಡನೇ ವಾರದಲ್ಲಿ ಮಾಡಿದ ತನಿಖಾ ಪತ್ರಿಕೋದ್ಯಮ ಅಮೆರಿಕ ಸೇನೆಯ ಮೇಲಿನ ಸುಳ್ಳುಗಳನ್ನು ಬಯಲು ಮಾಡಿತ್ತು. ಅಮೆರಿಕದ ಮಿಸೈಲ್ ದಾಳಿಯಿಂದ ಮೃತಪಟ್ಟಿದ್ದು ಐಸಿಸ್ ಉಗ್ರಗಾಮಿಗಳಲ್ಲ, ಬದಲಿಗೆ ಸಾಮಾನ್ಯ ಆಫ್ಘನ್ ನಾಗರಿಕರು ಎಂದು ಆ ವರದಿ ಬಹಿರಂಗಪಡಿಸಿತ್ತು. ಹಾಗೂ ಅಮೆರಿಕ ಸೇನೆ ತಿಳಿಸಿದಂತೆ ಮೃತಪಟ್ಟವರು ಕೇವಲ ಮೂರು ಜನರಲ್ಲ ಬದಲಿಗೆ ಏಳು ಮಕ್ಕಳನ್ನು ಸೇರಿಸಿ 10 ಸಾಮಾನ್ಯ ನಾಗರಿಕರು ಬಲಿಯಾಗಿರುವುದನ್ನು ವರದಿ ತಿಳಿಸಿತ್ತು. ಅಲ್ಲದೆ, ನೇರ ಕ್ಷಿಪಣಿ ದಾಳಿಯಿಂದಲ್ಲದೆ, ತಾನು ದಾಳಿ ಮಾಡಿದ ಕಾರಿನಲ್ಲಿ ಇದ್ದ ಸ್ಫೋಟಕ ವಸ್ಥುಗಳು ಸಿಡಿದ ಕಾರಣಕ್ಕೆ ಅಲ್ಲಿ ಮೃತರ ಸಂಖ್ಯೆ ಹೆಚ್ಚಿತ್ತು ಎಂಬ ಅಮೆರಿಕ ಸೇನೆಯ ಹೇಳಿಕೆ ಕೂಡ ಸುಳ್ಳಿನಿಂದ ಕೂಡಿದ್ದು ಎಂದು ಆ ಪತ್ರಿಕಾ ವರದಿ ಮತ್ತು ತನಿಖಾ ವಿಡಿಯೋ ಸಾಬೀತುಪಡಿಸಿತ್ತು.

ಹಲವು ದೇಶಗಳ ಮೇಲಿನ ತನ್ನ ಸುದೀರ್ಘ ಯುದ್ಧದಲ್ಲಿ ಎಷ್ಟೋ ಬಾರಿ ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡಿ ಕೊಂದಿರುವ ಆರೋಪಗಳಿಂದ ನುಣುಚಿಕೊಂಡಿದ್ದ ಅಮೆರಿಕ ಆಡಳಿತ ವ್ಯವಸ್ಥೆಗೆ ಈ ಬಾರಿ ಭಾರಿ ಮುಜುಗರ ತಂದೊಡ್ಡಿದ್ದು ’ದ ನ್ಯೂಯಾರ್ಕ್ ಟೈಮ್ಸ್’ನ ಪತ್ರಿಕೋದ್ಯಮ. ಕ್ಯಾಲಿಫೋರ್ನಿಯಾ ಮೂಲದ ’ನ್ಯೂಟ್ರಿಶನಲ್ ಅಂಡ್ ಎಜುಕೇಶನಲ್ ಇಂಟರ್‌ನ್ಯಾಷನಲ್’ ಎಂಬ ನೆರವು ನೀಡುವ ಸಂಸ್ಥೆಯೊಂದಿಗೆ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೆಮಾರಿ ಅಹ್ಮದಿಯ ಚಲನವಲನವನ್ನು ಐಎಸ್ ಉಗ್ರರ ಚಲನವಲನ ಎಂದು ಕರೆದು, ಅಮೆರಿಕ ಸೇನೆ ಆತನ ಕಾರಿನ ಮೇಲೆ ದ್ರೋಣ್ ಕ್ಷಿಪಣಿ ನಡೆಸಿದ್ದರ ಪರಿಣಾಮವಾಗಿ ಆತನ ಜೊತೆಗೆ ಏಳು ಪುಟ್ಟ ಮಕ್ಕಳು ಸೇರಿದಂತೆ 10 ಜನರನ್ನು ಆಹುತಿ ತೆಗೆದುಕೊಂಡಿತ್ತು. ಆದರೆ ಅಂದು ಜೆಮಾರಿ ಅಹ್ಮದಿಯ ಎಲ್ಲಾ ಚಲನವಲನಗಳು ಎಂದಿನ ದಿನದ ಸಾಮಾನ್ಯ ಕೆಲಸದ ಭಾಗವಾಗಿತ್ತು ಎಂದು ತನಿಖಾ ವರದಿ ಸಾಬೀತುಪಡಿಸಿತ್ತು.

ಚಿತ್ರ ಕೃಪೆ: ದ ನ್ಯೂಯಾರ್ಕ್ ಟೈಮ್ಸ್

ಭಯೋತ್ಪಾದನೆ ವಿರುದ್ಧದ ಯುದ್ಧ ಎಂದು ಹೇಳಿಕೊಂಡು ನಡೆಸುವ ಇಂತಹ ನಾಗರಿಕ ಹತ್ಯೆಗಳಿಗೆ ಪರಿಹಾರವೇನು? ಇದಕ್ಕೆ ಅಮೆರಿಕ ಪ್ರಭುತ್ವ ಬೆಲೆತೆತ್ತುವುದು ಯಾವಾಗ? ಈಗ ಇದೊಂದು “ದುರಂತಮಯ ತಪ್ಪು” ಎಂದು ಅಮೆರಿಕ ಪ್ರಭುತ್ವ ಒಪ್ಪಿಕೊಂಡಿದ್ದರೂ, ಹೋದ ಅಮಾಯಕ ಜೀವಗಳನ್ನು ಮರಳಿ ತರಬಲ್ಲದೇ ಅದು? ಕೊನೆ ಪಕ್ಷ ಈ ತಪ್ಪುಗಳನ್ನು ಜಗತ್ತಿನ ಮುಂದೆ ತೋರಿಸಲು, ಒಂದು ಪ್ರಭುತ್ವ ನಡೆಸಬಲ್ಲ ಹೀನಾಯ ಕೃತ್ಯಗಳನ್ನು ಬಯಲಿಗೆಳೆಯಲು ಅದೇ ದೇಶದ ಕೆಲವಾದರೂ ಪತ್ರಕರ್ತರು ಇನ್ನೂ ತಮ್ಮ ಸಿಟ್ಟನ್ನು, ತಾವೂ ನಿಭಾಯಿಸಬೇಕಿರುವ ಕರ್ತವ್ಯವನ್ನು ಜೀವಂತವಾಗಿರಿಸಿಕೊಂಡಿದ್ದಾರೆ ಎಂಬುದೇ ನಿಟ್ಟುಸಿರು!

ಎರಡನೆಯದು; ದೇಹ ತಣ್ಣಗಾಗುವ ಮುನ್ನವೇ ಅದರ ಮೇಲೆ ಕುಪ್ಪಳಿಸಿ ಗುದ್ದಿದ ಫೋಟೋಗ್ರಾಫರ್!

ಪ್ರವಾಸ ಕೈಗೊಂಡಿದ್ದ ಈ ದೇಶದ ಪ್ರಧಾನಿ ಅಮೆರಿಕ ನೆಲದಲ್ಲಿ, ಆಫ್ಘಾನಿಸ್ತಾನ ಭಯೋತ್ಪಾದನೆಯ ನೆಲವಾಗುವುದರ ಬಗ್ಗೆ ಒಂದು ಕಡೆ ಆತಂಕ ವ್ಯಕ್ತಪಡಿಸುತ್ತಿದ್ದರೆ, ತಮ್ಮದೇ ದೇಶದ ರಾಜ್ಯವಾದ ಅಸ್ಸಾಂನ ಪೊಲೀಸರು ಸಾಮಾನ್ಯ ನಾಗರಿಕರ ಮೇಲೆ ಗುಂಡುಹಾರಿಸಿ ಕನಿಷ್ಟ ಇಬ್ಬರನ್ನು ಹತ್ಯೆಗೈದಿದ್ದರು. ಅಷ್ಟು ಸಾಲದು ಎಂಬಂತೆ, ಪೊಲೀಸರ ಜೊತೆಗೆ ತೆರಳಿದ್ದ ಫೋಟೋಜರ್ನಲಿಸ್ಟ್ ಒಬ್ಬ ಆಗತಾನೆ ಗುಂಡುಬಿದ್ದು ನೆಲಕ್ಕುರುಳಿದ ವ್ಯಕ್ತಿಯ ಮೃತ ದೇಹ ತಣ್ಣಗಾಗುವ ಮುಂಚೆಯೇ, ಆ ದೇಹದ ಮೇಲೆ ಕುಪ್ಪಳಿಸುವ, ಆ ದೇಹಕ್ಕೆ ಗುದ್ದುವ ವಿಡಿಯೋ ಮತ್ತು ಫೋಟೋಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದವು. ತನ್ನ ಮುಂದೆ ಘಟಿಸಿದ ಒಂದು ಸಾವು ಕೊನೆಪಕ್ಷ ಮನುಷ್ಯನ ಕ್ರೌರ್ಯವನ್ನು ಅದುಮಿಟ್ಟುಕೊಳ್ಳುವಂತೆ ಮಾಡಿ, ಸಣ್ಣ ವೇದನೆಯನ್ನೂ ಸೃಷ್ಟಿಸಲು ಸಾಧ್ಯವಾಗದೆ ಹೋದರೆ, ಎಂತಹ ವಿಕೃತ ಸಮಾಜವನ್ನು ಸೃಷ್ಟಿಸುತ್ತಿದ್ದೇವೆ ಎಂಬುದಕ್ಕೆ ಅದು ದ್ಯೋತಕವಾಗಿತ್ತು.

ಅಸ್ಸಾಂನ ರಾಜಧಾನಿ ಗೌಹಾಟಿಯಿಂದ ಸುಮಾರು 70 ಕಿಲೋಮೀಟರ ದೂರದಲ್ಲಿರುವ ಧೋಲಾಪುರ್‌ನಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆ ಎಂದು ಆರೋಪಿಸಲಾಗಿರುವ ಪೂರ್ವ ಬಂಗಾಳ ಮೂಲದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 800 ಕುಟುಂಬಗಳನ್ನು ಅವರ ಟಿನ್ ಶೆಡ್‌ಗಳಿಂದ ತೆರವುಗೊಳಿಸುವ ಯೋಜನೆಯ ಭಾಗವಾಗಿ ಸೆಪ್ಟಂಬರ್ 20- 23ರ ನಡುವೆ ಪೊಲೀಸರು ಅಲ್ಲಿ ನೆರೆದಿದ್ದರು. ಸರಿಯಾದ ನೋಟಿಸ್ ಸಿಗದಿದ್ದಕ್ಕೆ ಕಂಗಾಲಾಗಿದ್ದ ಆ ಕುಟುಂಬಗಳ ಜನರು ಪ್ರತಿರೋಧ ತೋರಿದ್ದಾರೆ. ಒಬ್ಬ ವ್ಯಕ್ತಿ ಬೆತ್ತವೊಂದನ್ನು ಹಿಡಿದು ಪೊಲೀಸರತ್ತ ನುಗ್ಗಿ ಬರುವ ಒಂದು ದೃಶ್ಯವನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಆದರೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪೊಲೀಸರಿಗೆ ಆ ಗುಂಪನ್ನು ಚದುರಿಸುವುದು ಕಷ್ಟವೇನಿರಲಿಲ್ಲ. ಬದಲಿಗೆ ಏಕಾಏಕಿ ಗುಂಡಿನ ಸುರಿಮಳೆಗೈದು ಇಬ್ಬರ ಹತ್ಯೆಗೆ ಮತ್ತು ಹಲವರ ಗಾಯಗಳಿಗೆ ಕಾರಣವಾಗಿದ್ದಾರೆ. ಕೆಲವರು ಪೊಲೀಸರು ಕೂಡ ಗಾಯಗೊಂಡಿದ್ದಾರೆ.

ಜನಸಾಮಾನ್ಯರ ಮೇಲಿನ ದರ್ಪ ಮತ್ತು ಪೊಲೀಸರ ಹದ್ದುಮೀರಿದ ವರ್ತನೆ ಒಂದು ಕಡೆಯಾದರೆ, ಅವರ ಜೊತೆಗೆ ತೆರಳಿದ್ದ ಫೋಟೋಗ್ರಾಫರ್, (ಈಗ ಘಟನೆಯ ನಂತರ ಬಂಧಿತನಾಗಿದ್ದಾನೆ) ಬಿಜೋಯ್ ಬನಿಯಾನ ವರ್ತನೆ ಇಡೀ ಮನುಕುಲಕ್ಕೆ ನಾಚಿಕೆ ತರುವಂತಿತ್ತು! ಅದರ ನಂತರ ಅಸ್ಸಾಂನ ಪತ್ರಿಕೆಗಳು ಈ ಘಟನೆಯನ್ನು ವರದಿ ಮಾಡಿದ ರೀತಿ ಕೂಡ, ಆಡಳಿತ ವ್ಯವಸ್ಥೆಯ ಪರವಾದ ನಿಲುವನ್ನೇ ವಹಿಸಿದ್ದವು ಎಂದು ಮುಂದಿನ ದಿನದ ದಿನಪತ್ರಿಕೆಗಳ ಬರಹಗಳನ್ನು ವಿಶ್ಲೇಷಿಸಿರುವ ’ನ್ಯೂಸ್‌ಲಾಂಡ್ರಿ’ ಪತ್ರಿಕೆ ತಿಳಿಸಿದೆ.

ಜನರಲ್ ಡೈಯರ್ ಮತ್ತವನ ಸಂತತಿ ಸತ್ತರೂ ಜಲಿಯನ್‌ವಾಲಾ ಬಾಗ್ ದುರಂತ ಹಲವು ರೂಪಗಳಲ್ಲಿ ಮರುಕಳಿಸುತ್ತಿರುತ್ತದೆ ಎಂಬುದಕ್ಕೆ ಅಸ್ಸಾಂನ ಈ ಘಟನೆಯೇ ಸಾಕ್ಷಿ. ಆದರೆ ನಾಗರಿಕ ಸಮಾಜದ ಒಂದು ವರ್ಗ ಅಂತಹ ಡೈಯರ್‌ಗಳ ಇಂದಿನ ಅವತಾರಗಳ ಪರ ವಹಿಸಿ ನಿಲ್ಲುತ್ತಿರುವುದು ಈ ಯುಗದ ದುರಂತವಷ್ಟೇ!


ಇದನ್ನೂ ಓದಿ: ಅಸ್ಸಾಂ: ಕ್ಯಾಮರಾ ಮುಂದೆಯೆ ಪೊಲೀಸರಿಂದ ಕ್ರೂರವಾಗಿ ಹತ್ಯೆಯಾದ ವ್ಯಕ್ತಿ ಅಕ್ರಮ ನಿವಾಸಿಯಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...