Homeಕರ್ನಾಟಕಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

- Advertisement -
- Advertisement -

ಕನ್ನಡದ ಮಹತ್ವದ ಸಾಹಿತಿ ರಾಷ್ಟ್ರಕವಿ ಕುವೆಂಪುರವರನ್ನು ಮತ್ತು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿರುವ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಬಗ್ಗೆ ಅವಹೇಳಕಾರಿಯಾಗಿ ಹೀಯಾಳಿಸಿರುವ ಘಟನೆ ಸೋಮವಾರದಂದು ನಡೆದಿದೆ.

ಸಾಮಾಜಿಕ ಜಾಲತಾಣವಾದ ಕ್ಲಬ್‌ ಹೌಸ್‌ನಲ್ಲಿ ‘ನಾಲೆಡ್ಜ್ ಹೌಸ್ ಕನ್ನಡ’ ಎಂಬ ಗ್ರೂಪಿನಲ್ಲಿ ನಡೆದ ಚರ್ಚೆಯೊಂದರಲ್ಲಿ ದಿವ್ಯ ನಾಯಕ್ ಎಂಬ ಬಿಜೆಪಿ ಬೆಂಬಲಿಗ ಯುವತಿಯೊಬ್ಬರು, “ಕುವೆಂಪು ಅವರಿಗೆ ಗೌರವ ಯಾಕೆ ಕೊಡಬೇಕು? ಯಾರಿಗಾದರೂ ಗೌರವ ಕೊಡುವುದು ಅಥವಾ ಕೊಡದೇ ಇರುವುದು ನನ್ನ ವೈಯಕ್ತಿಕ ಆಯ್ಕೆ. ಕುವೆಂಪು ರಾಮಾಯಣ is something fuck all shit” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

“ಅದನ್ನು ಫಾಲೋ ಮಾಡುವುದಾಗಲಿ, ರೆಫರ್‌ ಮಾಡುವುದಾಗಲಿ ಮಾಡಬೇಡಿ. ಮೂಲ ಕೃತಿಗಳನ್ನು ಓದಿ. ಕುವೆಂಪು ಆಗಲಿ, ಕುವೆಂಪು ಅಪ್ಪ ಆಗಲಿ, ಯಾರೇ ಆಗಲಿ, ಹಿಂದೂಗಳಾಗಿ ಮೂಲ ಕೃತಿಗಳನ್ನು ಓದಿ. ಪುರಸ್ಕಾರ ಬಂದರೆ ಅವರೇನು ದೊಡ್ಡವರಲ್ಲ, ಪುರಸ್ಕಾರ ಎಷ್ಟೋ ಜನರಿಗೆ ಬಂದಿದೆ. ಅವರ (ಬಿಜೆಪಿಯೇತರ) ಸರ್ಕಾರ ಇದ್ದಾಗ ದೇಶ ವಿರೋಧಿಗಳಿಗೆ ಕೂಡಾ ಪುರಸ್ಕಾರ ಬಂದಿದೆ” ಎಂದು ವಿವಾದ ಸೃಷ್ಟಿಸಿದ್ದಾರೆ.

ಅವರ ಹೇಳಿಕೆಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಯುವತಿಯು ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರ ಆಪ್ತೆ ಎಂದು ಆರೋಪಿಸಲಾಗಿದೆ. “ಕ್ಲಬ್-ಹೌಸಿನಲ್ಲಿರುವ ಚಕ್ರತೀರ್ಥನ ಸಂಬಂಧಿಗಳಿಗೇಕೆ ಕುವೆಂಪುರವರ ಮೇಲೆ ದ್ವೇಷ ?” ಎಂದು ಪ್ರಶ್ನಿಸಲಾಗಿದೆ.

 

ರಾಷ್ಟ್ರಕವಿ ಕುವೆಂಪು ಅವರನ್ನು ಬಲಪಂಥಿಯರು ನಿರಂತರವಾಗಿ ಗುರಿಯಾಗಿಸುತ್ತಲೇ ಬರುತ್ತಿದ್ದಾರೆ. ಸ್ವತಃ ರೋಹಿತ್‌ ಚಕ್ರತೀರ್ಥ ಅವರು ಕೂಡಾ ನಾಡಗೀತೆಯನ್ನು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕುವೆಂಪು ಮೇಲಿನ ದಾಳಿಗಳು ಕೂಡಾ ಹೆಚ್ಚಾಗುತ್ತಿದೆ ಎಂದು ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ‘#ಕನ್ನಡದಲ್ಲಿUPSC’ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನ ಬೆಂಬಲಿಸಲು ಕನ್ನಡಿಗರ ಕರೆ

ದಿವ್ಯ ನಾಯಕ್ ಅವರ ಹೇಳಿಕೆಯನ್ನು ಹಲವಾರು ಜನರು ಖಂಡಿಸಿದ್ದು, ಬಲಪಂಥೀಯರಿಗೆ ಕುವೆಂಪು ಮತ್ತು ಅವರು ಬರೆದಿರುವ ಕೃತಿಗಳ ಮೇಲೆ ಅಷ್ಟೊಂದು ದ್ವೇಷ ಯಾಕೆ? ಇದಕ್ಕೆ ಅವರ ಪುರೋಹಿತಶಾಹಿ ಮನಸ್ಥಿತಿ ಕಾರಣವಲ್ಲವೇ ಎಂಬ ವಿಷಯದಲ್ಲಿ ನಾನುಗೌರಿ.ಕಾಂ ಜೊತೆ ಮಾತನಾಡಿದ್ದಾರೆ.

ಜೆಎನ್‌ಯು ಕನ್ನಡ ಅಧ್ಯಯನಪೀಠದ ಮುಖ್ಯಸ್ಥರಾಗಿದ್ದ ಪ್ರೊ. ಪುರುಷೋತ್ತಮ್ ಬಿಳಿಮಲೆಯವರು ಮಾತನಾಡಿ, “ಬಲಪಂಥೀಯರ ಜೊತೆಗೆ ಚರ್ಚೆಯೆ ಸಾಧ್ಯವಿಲ್ಲ. ಎ.ಕೆ ರಾಮಾನುಜ ಅವರು ಸುಮಾರು ಮುನ್ನೂರು ರಾಮಾಯಣಗಳ ಬಗ್ಗೆ ಬರೆದಿದ್ದಾರೆ. ಈ ದೇಶದ ಸಾವಿರಾರು ರಾಮಾಯಣಗಳಲ್ಲಿ ವಾಲ್ಮಿಕಿ ರಾಮಾಯಣ ಕೂಡಾ ಒಂದು. ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಯಾವುದೆ ಸಂಶೋಧಕರು ಒಪ್ಪಿಕೊಂಡಿಲ್ಲ ಹಾಗೂ ಐತಿಹಾಸಿಕವಾಗಿಯು ಅದು ದೃಡಪಟ್ಟಿಲ್ಲ. ಇದು ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬಂತೆ” ಎಂದು ತಿಳಿಸಿದರು.

“ಬಲಪಂಥೀಯರು ಕುವೆಂಪು ಅವರನ್ನು ವಿರೋಧಿಸಲು ಬೇಕಾಗಿ ವಾಲ್ಮಿಕಿ ರಾಮಾಯಣವನ್ನು ತರುತ್ತಾರೆ. ರಾಮಾಯಣದ ಬಹುತ್ವದ ಬಗ್ಗೆ ಕುಮಾರವ್ಯಾಸನೇ ಆ ಕಾಲದಲ್ಲಿ ‘ತಿಣುಕಿದನು ಫಣಿರಾಯ ರಾಮಾಯಣದ ಕತೆಗಳ ಭಾರದಲಿ’ ಎಂದು ಬರೆದಿದ್ದಾನೆ. ಕುವೆಂಪು ಮತ್ತು ಅವರು ಬರೆದ ರಾಮಾಯಣದ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳು ಮತ್ತಾ ಆರೋಪಗಳು ರಾಜಕೀಯ ಪ್ರೇರೇಪಿತವಾಗಿದ್ದು, ಅವುಗಳನ್ನು ರಾಜಕೀಯವಾಗಿಯೇ ಎದುರಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ

ಪ್ರಾಧ್ಯಾಪಕ ಕೀಲಾರ ನಾಗೇಗೌಡ ಅವರು ಮಾತನಾಡಿ, “ಕುವೆಂಪು ಬದುಕಿದ್ದಾಗಲೂ ಅವರ ಮೇಲೆ ದಾಳಿ ನಡೆಸಲಾಗುತ್ತಿತ್ತು, ಈ ದಾಳಿ ಈಗಲೂ ಮುಂದುವರೆದಿದೆ. ಕುವೆಂಪು ಅವರು ವೈದಿಕ ಮೌಲ್ಯವನ್ನು ಮುರಿದು, ಸರ್ವೋದಯ ಕಾಣಬೇಕೆಂಬ ಪೂರ್ಣದೃಷ್ಟಿಯಲ್ಲಿ ರಾಮಾಯಣ ಬರೆದವರು. ಸರ್ವೋದಯ ಮತ್ತು ಪೂರ್ಣದೃಷ್ಟಿ ಇತರ ರಾಮಾಯಣದಲ್ಲಿ ಇರಲಿಲ್ಲ. ಅವರು ರಾಮಾಯಣಕ್ಕೆ ಹೊಸ ಮೌಲ್ಯ ಕಟ್ಟಿದರು. ಇದು ಕೆಲವು ಜನರಿಗೆ ಆಗಿಬರುವುದಿಲ್ಲ. ಆದ್ದರಿಂದ ಅವರಿಗೆ ಕುವೆಂಪು ಮೇಲೆ ದ್ವೇಷವಿದೆ. ಇವರಿಗೆ ವೈದಿಕತೆ ಮತ್ತು ಗಂಡಾಳ್ವಿಕೆ ಉಳಿಯಬೇಕು. ಹಾಗಾಗಿ ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಪ್ರತಿಪಾದಿಸುತ್ತಾರೆ” ಎಂದು ಹೇಳಿದ್ದರು.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರು, “ಕುವೆಂಪು ಅವರು ಮಾನವತಾವಾದವನ್ನು ಪ್ರತಿಪಾದಿಸಿದವರು. ಜಾತಿ ಮತದ ಸಂಕೋಲೆ ಕಳಚಿ ಪ್ರತಿಯೊಬ್ಬರೂ ವಿಶ್ವ ಮಾನವರಾಗಬೇಕು ಎಂದು ಆಶಿಸಿದವರು. ಕ್ಲಬ್‌ಹೌಸ್‌ನಲ್ಲಿ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿದ ದಿವ್ಯಾ ನಾಯಕ್‌ ನಡೆ ಖಂಡನೀಯ” ಎಂದು ಹೇಳಿದರು.

ಕನ್ನಡ ಪರ ಹೋರಾಟಗಾರ, ರಣಧೀರ ಪಡೆಯ ಮುಖಂಡ ಹರೀಶ್ ಬೈರಪ್ಪ ಅವರು ದಿವ್ಯಾ ಅವರ ಹೇಳಿಕೆಯನ್ನು ಖಂಡಿಸಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಕುವೆಂಪು ಅವರ ವಿರುದ್ದ ಹಿಂದಿನಿಂದಲೂ ದಾಳಿಯಾಗುತ್ತಲೆ ಬಂದಿದೆ. ಈ ದಾಳಿ ಹೆಚ್ಚಾದಷ್ಟೂ ಅವರ ವಿಚಾರಧಾರೆಗಳು ಗಟ್ಟಿಯಾಗುತ್ತಲೆ ಬರುತ್ತಿದೆ, ಜೊತೆಗೆ ಪ್ರಸ್ತುತಗೊಳ್ಳುತ್ತಲೆ ಹೋಗುತ್ತಿದೆ. ಕುವೆಂಪು ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ, ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕಿತ್ತು. ಆದರೆ ಈ ಯಾರಿಗೂ ಅವು ಬೇಕಿಲ್ಲ, ಕುವೆಂಪು ಬೈಯ್ಯುವುದಕ್ಕೋಸ್ಕರವೇ ಈ ಇಲಾಖೆ ಪ್ರಾಧಿಕಾರವನ್ನು ನೇಮಕ ಮಾಡಿದಂತಿದೆ” ಎಂದು ಹರೀಶ್ ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು: ಹಿಂದಿ ಬ್ಯಾನರ್‌ಗೆ ಮಸಿ ಬಳಿದ ರೂಪೇಶ್ ರಾಜಣ್ಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ವಿಷಯ ಜ್ಞಾನ, ಬೌದ್ಧಿಕ ಸೂಕ್ಷ್ಮತೆ ಮತ್ತು ಗ್ರಹಿಕೆಯ ವಿಸ್ತಾರಗಳಿದ್ದವರು, ಪ್ರಸ್ತುತವೆನಿಸುತ್ತಿದ್ದ ಪ್ರತಿಯೊಂದು ವಿಷಯವನ್ನೂ ತರ್ಕಬದ್ಧವಾಗಿ, ಸರಳವಾಗಿ ಮತ್ತು ನಿಷ್ಠುರವಾಗಿ ವಿಮರ್ಶಿಸುತ್ತಿದ್ದವರು, ಕನ್ನಡದಲ್ಲಿ ಕುವೆಂಪು ಮಾತ್ರ! ಕುವೆಂಪು ಅವರನ್ನು ನಾನು ನೋಡಿಲ್ಲ; ಆದರೆ, ಅವರ ಪ್ರತಿಯೊಂದು ಕೃತಿಯಲ್ಲೂ ಅವರ ವ್ಯಕ್ತಿತ್ವ ಪ್ರಕಟಗೊಳ್ಳುತ್ತದೆ. ಅವರ ದಿವ್ಯ ಚೇತನ ಪ್ರಭಾವಿತಗೊಂಡ ಬಗೆಯನ್ನು ಕುಪ್ಪಳ್ಳಿಯಲ್ಲಿ ನೋಡಬಹುದು.

    ಅವರನ್ನು ಮತ್ತು, ಅವರ ಕೃತಿಗಳ ಆಳ ಮತ್ತು ವಿಸ್ತಾರವನ್ನು, ಪೂರ್ಣವಾಗಿ ಅರಿಯುವಷ್ಟು ನಮ್ಮಲ್ಲಿ ಹೆಚ್ಚಿನವರು ಬೆಳೆದಿಲ್ಲ ಎಂಬುದು ನನ್ನ ನಮ್ರ ತಿಳಿವಳಿಕೆ.

    ಸಾರ್ವಜನಿಕ ವೇದಿಕೆಗಳಲ್ಲಿ ಹೆಸರು ಮಾಡಲು, ಈ ಮಟ್ಟದ ಕೀಳು ಮಟ್ಟದ ಟೀಕೆ ಮಾಡಿದ ಈ ದೀವ್ಯಾ ನಾಯಕ್ ಗೆ ಮನೋವೈದ್ಯಕೀಯ ಚಿಕಿತ್ಸೆ ಅವಶ್ಯಕ ಎನ್ನಿಸುತ್ತದೆ.

  2. ಕುರುಡನೊಬ್ಬ ಆನೆಯನ್ನು ಮುಟ್ಟಿ ವರ್ಣಿಸಿದಂತಿದೆ. ಕುವೆಂಪು ಅವರ ವಿಚಾರಗಳು ಅನೇಕರನ್ನು ಜಾಗೃತ ಗೊಳಿಸಿದ ಸತ್ಯ ಎಲ್ಲೆಡೆ ಕಾಣುತ್ತಿದ್ದೇವೆ. ಶೂದ್ರ ಯುವಕರಿಗೆ ಧರ್ಮದ ಅಫೀಮು ಬಣ್ಣದ ಮಾತುಗಳಲ್ಲಿ ಬಿತ್ತಿ ಬೆಳೆ ತೆಗೆಯುವ ಮಂದಿಯ ಹುನ್ನಾರ ಬಯಲಾಗಿದೆ.
    ಗುಡಿ ಚರ್ಚು, ಮಸೀದಿಗಳು ಮೌಢ್ಯ ಬಿತ್ತುವ ಕೇಂದ್ರ ಗಳೆಂದು ಹೇಳಿದ ಮಾತು ಮಹಾ ಪೋಷಕರಾದ ಇವರಿಗೆ ಅರಗಿಸಿ ಕೊಳ್ಳಲು ಆಗಲಿಲ್ಲ ಎನ್ನುವುದು ಸತ್ಯ.

  3. ಕುವೆಂಪು ಮತ್ತು ಅವರ ಕೃತಿಗಳ ಬಗ್ಗೆ ಅವಹೇಳನವಾಗಿ ಮಾತನಾಡಿರುವುದು ಕಂಡನಾರ್ಹ.

  4. ಕುವೆಂಪು ರವರ ಪುಸ್ತಕಗಳ ಬಗ್ಗೆ ಅವಹೇಳನ ಮಾಡಿರುವ ದಿವ್ಯ ನಾಯಕ್ ರವರ ನಡವಳಿಕೆಯನ್ನು ಖಂಡಿಸುತ್ತೇನೆ

  5. ಮಹಾಚೇತನ ಕುವೆಂಪು ಅವರ ಬಗ್ಗೆ ಟೀಕಿಸಿರುವ ಮಹಾತಾಯಿ ನಿಮಗೆ ದೊಡ್ಡ ನಮಸ್ಕಾರ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...